Author: AIN Author

ಬಿಗ್ ಬಾಸ್ ಮನೆಯ ಮನೆಯ ಸದಸ್ಯರು ಇದೀಗ ಐದನೇ ವಾರಕ್ಕೆ ಕಾಲಿಟ್ಟಿದ್ದಾರೆ. ಈ ನಡುವೆ ಎರಡು ತಂಡಗಳಾಗಿ ಆಟ ಆಡುತ್ತಿರುವ ಸ್ಪರ್ಧಿಗಳಲ್ಲಿ ಕೊಂಚ ವ್ಯತ್ಯಾಸಗಳು ಕಂಡುಬಂದಿರುವುದು ಇದೀಗ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಈ ಹಿಂದೆ ವಿನಯ್​ ಹಾಗೂ ಸಂಗೀತಾ ನೇತೃತ್ವದಲ್ಲಿ ಮನೆಯ ಸದಸ್ಯರು ಆಟವಾಡಿದ್ದರು. ಆದ್ರೆ, ಈ ಬಾರಿ ಅದೇ ತಂಡಗಳಿಗೆ ನಾಯಕರು ಬದಲಾಗಿದ್ದು, ವಿನಯ್​ ಜಾಗಕ್ಕೆ ಸಿರಿ ಅವರು ಕ್ಯಾಪ್ಟನ್​ ಆಗಿದ್ದಾರೆ. ತಮ್ಮ ತಂಡಕ್ಕೆ ‘ವಜ್ರಕಾಯ’ ಎಂದು ಹೆಸರಿಟ್ಟಿದ್ದಾರೆ. ಅವರ ನಂತರ ಸಂಗೀತಾ ಬದಲಿಗೆ ಪ್ರತಾಪ್​ ತಮ್ಮ ತಂಡ ‘ಗಂಧದಗುಡಿ’ಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಎರಡು ಟೀಮ್​ನ ಸದಸ್ಯರು ಇದೀಗ ಮುಂದಿನ ಸ್ಪರ್ಧೆಗಳಲ್ಲಿ ಜಿದ್ದಾಜಿದ್ದಿ ನಡೆಸಲು ಮುಂದಾಗಿದ್ದಾರೆ. ಎರಡು ತಂಡಗಳು ಹೊಸ ಹೆಸರು ಪಡೆದುಕೊಳ್ಳುವುದರ ಜತೆಗೆ ಹೊಸ ನಾಯಕರನ್ನು ಪಡೆದುಕೊಂಡಿದೆ. ಈ ಮಧ್ಯೆ ಸದಾ ಮನೆಯಲ್ಲಿ ಪ್ರೀತಿಯಿಂದ ಮಾತನಾಡುತ್ತ, ಆತ್ಮೀಯತೆಯಿಂದ ಇದ್ದ ಕಾರ್ತಿಕ್​ ಹಾಗೂ ಸಂಗೀತಾ ಜೋಡಿ ಸದ್ಯ ಪರಸ್ಪರ ಕೋಪದಿಂದ ಮಾತನಾಡಿಕೊಳ್ಳುತ್ತಿದ್ದಾರೆ. ಇಬ್ಬರ ನಡುವೆ ಕೊಂಚ ಬಿರುಕು ಮೂಡಿದ್ದು,…

Read More

ಹೈದರಾಬಾದ್‌: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ABVP) ಇದೇ ಮೊದಲ ಬಾರಿಗೆ ಹೈದರಾಬಾದ್‌ ವಿಶ್ವವಿದ್ಯಾಲಯದ (Hyderabad University) ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ವಿದ್ಯಾರ್ಥಿನಿಯನ್ನು(Muslim Student) ಕಣಕ್ಕೆ ಇಳಿಸಿದೆ. ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ಶೇಖ್‌ ಆಯೇಷಾ (Shaik Aayesha) ಅವರು ಕಣಕ್ಕೆ ಇಳಿದಿದ್ದಾರೆ. ಇವರು ಎಸ್‌ಎಫ್‌ಐ-ಎಸ್‌ಎಸ್‌-ಟಿಎಸ್‌ಎ ಮೈತ್ರಿಯ ಭಾಗವಾಗಿ ಅಧ್ಯಕ್ಷ ಸ್ಥಾನಕ್ಕೆ ನಿಂತಿರುವ ಮೊಹಮಮ್ಮದ್‌ ಅತಿಕ್‌ ವಿರುದ್ಧ ಸ್ಪರ್ಧಿಸಲಿದ್ದಾರೆ. ವಿಶಾಖಪಟ್ಟಣ ಮೂಲದ 24 ವರ್ಷದ ಶೇಖ್‌ ಅಯೇಷಾ 2019ರಿಂದ ಎಬಿವಿಪಿ ಜೊತೆ ಸಂಪರ್ಕದಲ್ಲಿದ್ದಾರೆ. ಹೈದರಾಬಾದ್‌ ವಿವಿಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಮಧ್ಯೆ ನೇರ ಸ್ಪರ್ಧೆ ನಡೆಯುತ್ತಿದೆ. ನವೆಂಬರ್‌ 9 ರಂದು ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯಲಿದೆ. https://twitter.com/ABVPTelangana/status/1721544582008340643?ref_src=twsrc%5Etfw%7Ctwcamp%5Etweetembed%7Ctwterm%5E1721544582008340643%7Ctwgr%5E0b690f19b68e1e88c817f1064f17cb90bbf0cb4a%7Ctwcon%5Es1_&ref_url=https%3A%2F%2Fpublictv.in%2Fin-a-1st-abvp-puts-up-muslim-girl-shaik-aayesha-hyderabad-university-polls%2F ಮಾಧ್ಯಮದ ಜೊತೆ ಮಾತನಾಡಿದ ಶೇಖ್‌ ಅಯೇಷಾ, ರಾಷ್ಟ್ರೀಯತೆಯನ್ನು ಬೆಂಬಲಿಸುವ ಎಲ್ಲಾ ಅಲ್ಪಸಂಖ್ಯಾತರನ್ನು ಎಬಿಬಿಪಿ ಬೆಂಬಲಿಸುತ್ತದೆ. ನಾನು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿ ಓದುತ್ತಿದ್ದಾಗ ಎಬಿವಿಪಿಯ ಭಾಗವಾಗಿ ರಾಜ್ಯ ಕಾರ್ಯಕಾರಿ ಸದಸ್ಯೆಯಾಗಿ ಕೆಲಸ ಮಾಡಿದ್ದೇನೆ. ಮುಸ್ಲಿಂ ಮಹಿಳೆಯರು ನಾಯಕತ್ವ ಬೆಳೆಸಿಕೊಳ್ಳಲು…

Read More

ಬೆಂಗಳೂರು;- ಕೆಲವು ಗ್ಯಾರಂಟಿಗಳ ಹಣ ಫಲಾನುಭವಿಗಳಿಗೆ ತಲುಪದೇ ಇರುವ ಆರೋಪಗಳ ಮಧ್ಯೆ ಸರ್ಕಾರವು ಅಕ್ಟೋಬರ್​ವರೆಗೆ ನಾಲ್ಕು ಗ್ಯಾರಂಟಿಗಳಿಗೆ ಮಾಡಿದ ವೆಚ್ಚ, ಅನುದಾನ ಬಿಡುಗಡೆ ವಿವರದ ಸಮಗ್ರ ವರದಿ ಇಲ್ಲಿದೆ. 2023-24ನೇ ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ರಾಜ್ಯ ಸರ್ಕಾರ ಸುಮಾರು 40,000 ಕೋಟಿ ರೂ.‌ ಅನುದಾನ ಹಂಚಿಕೆ ಮಾಡಿದೆ. ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ ಹಾಗೂ ಗೃಹ ಲಕ್ಷ್ಮಿ ಯೋಜನೆಗಳನ್ನು ಈಗಾಗಲೇ ಜಾರಿ ಮಾಡಲಾಗಿದೆ. ಅನ್ನಭಾಗ್ಯ ಹಾಗೂ ಗೃಹ ಲಕ್ಷ್ಮಿ ಯೋಜನೆಯ ಹಣ ಪಾವತಿಯಲ್ಲಿ ವಿಳಂಬವಾಗುತ್ತಿದೆ.‌ ತಾಂತ್ರಿಕ ಕಾರಣದಿಂದ ಹಣ ಪಾವತಿ ವ್ಯತ್ಯಯವಾಗುತ್ತಿದೆ. ಇತ್ತ ಪ್ರತಿಪಕ್ಷಗಳು ಪಂಚ ಗ್ಯಾರಂಟಿ ಪಂಚರ್ ಆಗಿದ್ದು, ಫಲಾನುಭವಿಗಳಿಗೆ ಹಣವೇ ತಲುಪುತ್ತಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ. ಇದಕ್ಕಾಗಿಯೇ ಆರ್ಥಿಕ ಇಲಾಖೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳ 20ರೊಳಗೆ ಯಾವುದೇ ಗೊಂದಲ, ವಿಳಂಬವಿಲ್ಲದೆ ಫಲಾನುಭವಿಗಳ ಖಾತೆಗೆ ಜಮೆ ಆಗುವಂತೆ ದಿನಾಂಕ ನಿಗದಿ ಮಾಡಿದೆ. ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ ಹಾಗೂ ಗೃಹ ಲಕ್ಷ್ಮಿ ಎಂಬ…

Read More

ಹಬ್ಬದ ಸೀಸನ್ ಶುರುವಾಗಿದೆ. ಈಗಾಗಲೇ ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಸೇಲ್​ಗಳು ನಡೆಯುತ್ತಿದೆ. ಬಿಗ್ ದಿವಾಳಿ ಸೇಲ್ ಲೈವ್  ಆಗಿದೆ. ಇದರ ನಡುವೆ ಪ್ರಸಿದ್ಧ ಒನ್​ಪ್ಲಸ್ ಕಂಪನಿ ತನ್ನ ಅಭಿಮಾನಿಗಳಿಗೆ ದೀಪಾವಳಿ ಆಫರ್ ಅನ್ನು ಘೋಷಣೆ ಮಾಡಿದೆ. ಇದರಲ್ಲಿ ಸ್ಮಾರ್ಟ್​ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಟಿವಿಗಳು ಸೇರಿದಂತೆ ತನ್ನ ಹಲವು ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡಲಾಗಿದೆ. ಒನ್​ಪ್ಲಸ್ ಮಾರಾಟವು ನವೆಂಬರ್ 2 ರಂದು ಲೈವ್ ಆಗಿದೆ ಮತ್ತು ನವೆಂಬರ್ 10 ರವರೆಗೆ ನಡೆಯಲಿದೆ. ನೀವು ಹೊಸ ಒನ್​ಪ್ಲಸ್ ಉತ್ಪನ್ನವನ್ನು ಖರೀದಿಸುವ ಪ್ಲಾನ್​ನಲ್ಲಿದ್ದರೆಇದೇ ಉತ್ತಮ ಸಮಯ ಎನ್ನಬಹುದು. ಒನ್​ಪ್ಲಸ್ ಈ ವರ್ಷ ಒನ್​ಪ್ಲಸ್ ನಾರ್ಡ್ 3 5G ಮತ್ತು ಒನ್​ಪ್ಲಸ್ ನಾರ್ಡ್ CE 3 5G ಸೇರಿದಂತೆ ವಿವಿಧ ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದೀಗ ಈ ಎರಡೂ ಫೋನ್‌ಗಳು ಆಕರ್ಷಕ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಅತ್ಯುತ್ತಮ ವೈಶಿಷ್ಟ್ಯಗಳು ಕೂಡ ಇದೆ. ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿರುವುದರಿಂದ, ಹೆಚ್ಚಿನ ಜನರು ಈ ಫೋನ್‌ಗಳ ಮೇಲೆ ಕಣ್ಣು…

Read More

ಟಾಲಿವುಡ್‌ನಲ್ಲಿ ಮಾತ್ರವಲ್ಲದೇ ಬಾಲಿವುಡ್‌ನಲ್ಲಿಯೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಸಖತ್ತಾಗಿ ಮಿಂಚುತ್ತಿದ್ದು ಅವರಿಗೆ ಸಂಬಂಧಿಸಿದ ಯಾವುದೇ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಡೀಪ್‌ನೆಕ್ ಬ್ಲಾಕ್ ಡ್ರೆಸ್‌ನಲ್ಲಿದ್ದ ಯುವತಿಯೊಬ್ಬರ ವಿಡಿಯೋವನ್ನು ಥೇಟ್ ರಶ್ಮಿಕಾ ಮಂದಣ್ಣ ಅವರಂತೆ ಮಾರ್ಫ್ ವಿಡಿಯೋ ಸೃಷ್ಟಿಸಿದ್ದಾರೆ. ವಿಡಿಯೋದಲ್ಲಿರುವುದು ರಶ್ಮಿಕಾ ಅಲ್ಲ, ಜರಾ ಪಟೇಲ್ ಎನ್ನುವುದು ಗೊತ್ತಾಗಿದೆ. ಡೀಪ್‌ಫೇಕ್ ತಂತ್ರಜ್ಞಾನ (Deepfake Technology) ಬಳಸಿ ರಶ್ಮಿಕಾ ಹೆಸರಿಗೆ ಮಸಿ ಬಳಿಯಲು ಕಿಡಿಗೇಡಿಗಳು ಯತ್ನಿಸಿದ್ದಕ್ಕೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸೂಪರ್ ಸ್ಟಾರ್, ನಟ ಅಮಿತಾಬ್ ಕೂಡ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದೊಂದು ಅತ್ಯಂತ ಅಪಾಯಕಾರಿ ಕೃತ್ಯ. ಇಂತಹ ಮಾರ್ಫಿಂಗ್ ವಿಡಿಯೋಗಳ ನಿಯಂತ್ರಣ ಸಾಮಾಜಿಕ ಜಾಲತಾಣಗಳ (Social Media) ಹೊಣೆ. ಅಪ್‌ಲೋಡ್ ಆದ 36 ಗಂಟೆಗಳಲ್ಲಿ ಇವುಗಳನ್ನು ತೊಲಗಿಸದಿದ್ದರೆ ಅಂತಹ ಸಾಮಾಜಿಕ ಜಾಲತಾಣವನ್ನು ಕೋರ್ಟ್‌ಗೆ ಎಳೆಯಬಹುದು ಎಂದು ಸ್ಪಷ್ಟಪಡಿಸಿದೆ. ಏನಿದು ಡೀಪ್‌ಫೇಕ್? ಯಾರದ್ದೋ ದೇಹಕ್ಕೆ…

Read More

ಪುಣೆ: ವಿಶ್ವಕಪ್‌ ಕ್ರಿಕೆಟ್‌ನಿಂದ (World Cup Cricket) ಬಾಂಗ್ಲಾದೇಶದ (Bangladesh) ನಾಯಕ ಶಕೀಬ್‌ ಉಲ್‌ ಹಸನ್‌ (Shakib Al Hasan) ಔಟಾಗಿದ್ದಾರೆ. ಸೋಮವಾರ ದೆಹಲಿಯಲ್ಲಿ ಶ್ರೀಲಂಕಾ (Sri Lanka) ವಿರುದ್ಧ ನಡೆದ ಪಂದ್ಯದಲ್ಲಿ ಶಕೀಬ್‌ ಅವರ ಎಡಗೈ ತೋರುಬೆರಳಿಗೆ ಗಾಯವಾಗಿತ್ತು. ಪಂದ್ಯದ ನಂತರ ಎಕ್ಸ್‌ರೇ ತೆಗೆದಾಗ ಮೂಳೆ ಮುರಿತವಾಗಿದ್ದು ದೃಢಪಟ್ಟಿತ್ತು. ಗಂಭೀರ ಸ್ವರೂಪದ ಗಾಯವಾದ ಹಿನ್ನೆಲೆಯಲ್ಲಿ ನವೆಂಬರ್‌ 11 ರಂದು ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪಂದ್ಯದಿಂದ ಹೊರಗುಳಿಯಲಿದ್ದಾರೆ ಈ ಪಂದ್ಯದಲ್ಲಿ ಶಕೀಬ್‌ 2 ವಿಕೆಟ್‌ ಪಡೆಯುವುದರ ಜೊತೆ 82 ರನ್‌ (65 ಎಸೆತ, 12 ಬೌಂಡರಿ, 2 ಸಿಕ್ಸರ್‌) ಸಿಡಿಸಿದ್ದರು. ಶಕೀಬ್‌ ಮತ್ತು ನಜ್ಮುಲ್‌ ಮೂರನೇ ವಿಕೆಟಿಗೆ 149 ಎಸೆತಗಳಲ್ಲಿ 169 ರನ್ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಗೆಲುವಿನ ಕಡೆಗೆ ತಿರುಗಿಸಿದ್ದರು. ಅತ್ಯುತ್ತಮ ಆಟದ ಪ್ರದರ್ಶನಕ್ಕೆ ಶಕೀಬ್‌ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರವಾಗಿದ್ದರು.

Read More

ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ (Priya Varrier) ಅವರು ಇದೀಗ ಹೊಸ ಫೋಟೋಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ. ಎದೆಯ ಗೀಟು ಕಾಣುವಂತೆ ಸಖತ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಮಲೆಯಾಳಿ ಕುಟ್ಟಿಯ ನಯಾ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಓವರ್ ನೈಟ್‌ನಲ್ಲಿ ಪಡ್ಡೆಹುಡುಗರ ಕ್ರಶ್ ಕ್ವೀನ್ ಆಗಿ ಕ್ರೇಜ್ ಹುಟ್ಟು ಹಾಕಿದ ಪ್ರಿಯಾ ವಾರಿಯರ್ ಈಗ ಮತ್ತೆ ನ್ಯೂಸ್‌ನಲ್ಲಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿ ನಟಿ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಎದೆಯ ಭಾಗ ಕಾಣುವಂತೆ ಬೋಲ್ಡ್ ಆಗಿ ನಟಿ ಪೋಸ್ ನೀಡಿದ್ದಾರೆ. ಪ್ರಿಯಾ ಲುಕ್‌ಗೆ ಪಡ್ಡೆಹೈಕ್ಳು ಫಿದಾ ಆಗಿದ್ದಾರೆ.‌ ಮಲಯಾಳಂ, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಿಯಾ ಸಿನಿಮಾ ಮಾಡ್ತಿದ್ದಾರೆ. ಸೂಪರ್ ಹಿಟ್ ಅನಿಸುವಂತಹ ಸಿನಿಮಾ ನಿಡದೇ ಇದ್ರೂ ಪ್ರಿಯಾಗೆ ನಟಿಸಲು ಡಿಮ್ಯಾಂಡ್ ಇದೆ.

Read More

ಬೆಂಗಳೂರು;- ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಸುರಿದ ಜೋರು ಮಳೆಗೆ ನಗರದ ಅಂಡರ್ ಪಾಸ್ ನಲ್ಲಿ ಜಲಾವೃತವಾಗುದೆ. ಶಾಂಗ್ರಿಲ ಹೋಟೆಲ್ ಹಿಂದೆ ಇರುವ ಸಿಎಂ ನಿವಾಸ ಕೃಷ್ಣಾ ನಿವಾಸದ ಹತ್ತಿರ ಇರುವ ಅಂಡರ್ ಪಾಸ್ ಜಲಾವೃತವಾಗಿದೆ. ಇನ್ನೂ ಮಳೆ ಬಂದು ಅಂಡರ್ ಪಾಸ್ ಗೆ ನೀರು ನಿಂತರು ಸಹ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ನೀರು ತೆರವಿಗೆ ಮುಂದಾಗಿಲ್ಲ. ಅಲ್ಲದೇ ಅಂಡರ್ ಪಾಸ್ ಬ್ಯಾರಿಕೆಡ್ ಕೂಡ ಹಾಕಿಲ್ಲ. ಬ್ಯಾರಿಕೆಡ್ ಇದ್ರು ಸಹ ಹೆಸರಿಗೆ ಮಾತ್ರ ಇಡಲಾಗಿದೆ. ಆದ್ರೆ ಜನರು ನೀರು ಇಲ್ಲಾ ಅಂತ ತಿಳಿದುಕೊಂಡು ಹಾಗೆ ಅಂಡರ್ ಪಾಸ್ ಗೆ ವಾಹನ ಸವಾರರು ಬರುತ್ತಿದ್ದಾರೆ. ಅಂಡರ್ ಪಾಸ್ ಒಳಗೆ ವಾಹನಗಳು ಪರದಾಟ ನಡೆಸಿದ್ದು, 4 ಚಕ್ರದ ವಾಹನಗಳು ಪರದಾಟ ನಡೆಸಿವೆ. ಆದ್ರೆ 2 ಚೆಕ್ರ ವಾಹನಗಳು ಮಾತ್ರ ಒಳಗಡೆ ಬರ್ತಾನೆ ಇಲ್ಲ. ಇಲ್ಲಿ ಸರಿಯಾದ ನಿರ್ವಹಣೆ ಸಹ ಇಲ್ಲಾ. ಕರೆಂಟ್ ಆಗ್ಲಿ ಸಿಸಿ ಕ್ಯಾಮೆರ ಆಗ್ಲಿ ಯಾವುದು ಇಲ್ಲಿ ವರ್ಕ್ ಆಗಲ್ಲ. ಇದು…

Read More

ರಾಯಚೂರು: ರಾಷ್ಟ್ರೀಯ ಫಸಲ್ ಬಿಮಾ ಯೋಜನೆಯಡಿ ಬೇರೆಯವರ ಖಾತೆಗೆ ಜಮಾ ಆಗಿರುವ ಪ್ರಕರಣ ಈಗಾಗಲೇ ಸಿಐಡಿಗೆ ವಹಿಸಲಾಗಿದೆ. ತಪ್ಪಾಗಿ ರೈತರ ಖಾತೆ ಜಮಾ ಮಾಡಿರುವದು ವಿಮಾ ಕಂಪನಿಗಳೇ ಹೊಣೆಯಾಗಬೇಕಾಗುತ್ತದೆ. ಆದರೆ ಯಾವುದೇ ತೊಂದರೆಯಾಗಲು ಸರಕಾರ ಬಿಡುವುದಿಲ್ಲ ಎಂದು ಕೃಷಿ ಸಚಿವ ಎಸ್.ಚಲುವನಾರಯಣ ಸ್ವಾಮಿ ಅವರು ಭರವಸೆ ನೀಡಿದ್ದಾರೆ. ನಗರದ ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ವರ್ಷದಿಂದ ರಾಷ್ಟ್ರೀಯ ಫಸಲ್ ಭೀಮಾ ಯೋಜನೆಯನ್ನು ಒಂದು ವರ್ಷಕ್ಕೆ ಸೀಮಿತವಾಗಿ ವಿಮಾ ಯೋಜನೆ ರೂಪಿಸಲು ಬದಲಾವಣೆ ತರಲಾಗುತ್ತದೆ. ಮುಂದಿನ ವರ್ಷದಿಂದ ಫಸಲ್ ಭೀಮಾ ಯೋಜನೆ ಪರಿಣಾಮಕಾರಿ ಜಾರಿಗೆ ಕ್ರಮ ವಹಿಸಲಾಗುತ್ತದೆ ಎಂದರು. https://ainlivenews.com/supreme-ray-healing-centre-reiki-treatment/ ಮುಂಗಾರು ಮತ್ತು ಹಿಂಗಾರಿಗೆ ಪ್ರತ್ಯೇಕ ಪರಿಹಾರ ನೀಡುವ ಕುರಿತಂತೆ ನ 9ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಕೇಂದ್ರ ಅಧ್ಯಯನ ತಂಡ ಬಂದು ಹೋದರೂ ಕೇಂದ್ರ ಸರಕಾರ ಬರ ಪರಿಹಾರ ಅನುದಾನ ಬಿಡುಗಡೆ ಮಾಡಿಲ್ಲ. ಕೇಂದ್ರದಿಂದ ನೆರವಿನ ಹಣ ಬಿಡುಗಡೆ ಮಾಡಿದಲ್ಲಿ ರಾಜ್ಯ ಸರಕಾರವು ಸೇರಿ ಪರಿಹಾರ…

Read More

ಬಾಯಿ ದುರ್ವಾಸನೆಯು ಅನೇಕ ಜನರ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಸಮಸ್ಯೆ ಇದ್ದರೆ  ಜನರಲ್ಲಿ ಕೂರಲು ಆಗಲ್ಲ, ಮಾತನಾಡಲೂ ಆಗಲ್ಲ. ಇದರಿಂದ ಅನೇಕರು ಆತ್ಮ ವಿಶ್ವಾಸ ಕಳೆದುಕೊಳ್ಳುತ್ತಾರೆ. ಕೆಟ್ಟ ಉಸಿರಾಟದ ಸಮಸ್ಯೆಯನ್ನು ಹಾಲಿಟೋಸಿಸ್​ ಎಂದು ಕರೆಯಲಾಗುತ್ತದೆ. ಆದರೂ, ಬಾಯಿ ದುರ್ವಾಸನೆ ಸಮಸ್ಯೆಗೆ ಪರಿಹಾರವಿದೆ. ನಿತ್ಯ ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜಿರಿ. ಪ್ರತಿನಿತ್ಯ ಬೆಳಗ್ಗೆ ಎದ್ದಕೂಡಲೇ  ಹಲ್ಲುಜ್ಜುವುದು ಸಾಮಾನ್ಯ. ಅಂತಯೇ ಮಧ್ಯಾಹ್ನ ಊಟಕ್ಕೆ ಮೊದಲು ಅಥವಾ ರಾತ್ರಿ ಊಟದ ನಂತರ ಹಲ್ಲುಜುವುದು ಒಳ್ಳೆಯ ಅಭ್ಯಾಸ. ಜೊತೆಗೆ, ಹೆಚ್ಚು ನೀರು ಕುಡಿಯಬೇಕು. ನೀರು ಕುಡಿಯುವುದರಿಂದ ದೇಹದ ಆರೋಗ್ಯಕ್ಕೂ ಒಳ್ಳೆಯದು. ಲವಂಗವನ್ನು ನಿಧಾನವಾಗಿ ಜಗಿಯಿರಿ ಲವಂಗ ಬಾಯಿಯ ದುರ್ವಾಸನೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಆಗಾಗ್ಗೆ 3 ರಿಂದ 4 ಲವಂಗವನ್ನು ನಿಧಾನವಾಗಿ ಜಗಿಯಿರಿ. ನಿಮ್ಮ ಬಾಯಿಯ ದುರ್ವಾಸನೆ, ಹಲ್ಲು ನೋವು ಹಾಗೂ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಊಟದ ಬಳಿಕ ಒಂದು ಚಮಚ ಜೀರಿಗೆ ಸೇವನೆ ಮಾಡಿದರೆ ಅದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ. ಸಿಗರೇಟ್​, ತಂಬಾಕು ಸೇವನೆ ಬಿಡಿ ಸಿಗರೇಟ್​,…

Read More