ಬೆಂಗಳೂರು;- ಅಮೆರಿಕದ ಕರೆನ್ಸಿ ಚಿಂದಿ ಆಯುವ ವ್ಯಕ್ತಿಯೊಬ್ಬರಿಗೆ ಸಿಕ್ಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ₹30 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್ ಸಿಕ್ಕಿದೆ ಎಂದು ಪೊಲೀಸರಿಗೆ bಕರೆ ಮಾಡಿ ಮಾಹಿತಿ ತಿಳಿಸಲಾಗಿತ್ತು. ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಆದರೂ ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ಗೆ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ಪಶ್ಚಿಮ ಬಂಗಾಳದ ಸುಲೇಮಾನ್ ಶೇಕ್(39) ಅವರು ಹೆಬ್ಬಾಳ, ನಾಗವಾರ ಸುತ್ತಮುತ್ತ ತ್ಯಾಜ್ಯ ಆಯ್ದು ಜೀವನ ನಡೆಸುತ್ತಿದ್ದಾರೆ. ನ.3ರಂದು ವೀರಣ್ಯಾಪಾಳ್ಯದ ರೈಲ್ವೆ ಗೇಟ್ ಬಳಿ ಕಪ್ಪು ಬಣ್ಣದ ಚೀಲವೊಂದು ಅವರಿಗೆ ಸಿಕ್ಕಿದೆ. ಆ ಚೀಲದಲ್ಲಿ ಈ ಕರೆನ್ಸಿಗಳು ಪತ್ತೆಯಾಗಿವೆ. ಅದರ ಬಗ್ಗೆ ತಿಳಿಯದ ಸುಲೇಮಾನ್ ಶೇಕ್, ತನಗೆ ಆಶ್ರಯ ನೀಡಿದ್ದ ಟೇಕೆದಾಸ್ ಎಂಬುವರಿಗೆ ಮಾಹಿತಿ ನೀಡಿದ್ದರು. ಬಳಿಕ ಟೇಕೆದಾಸ್ ಆ ಚೀಲ ಪರಿಶೀಲಿಸಿದರು. ಸ್ಥಳೀಯರಾದ ಆರ್.ಕಲೀಂ ಉಲ್ಲಾಗೂ ಮಾಹಿತಿ ನೀಡಿದ್ದರು. ಕರೀಂ ಅವರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದರು. ಕೂಡಲೇ ನೋಟುಗಳ ಬಗ್ಗೆ ಪರಿಶೀಲಿಸುವಂತೆ ಹೆಬ್ಬಾಳ ಪೊಲೀಸರಿಗೆ…
Author: AIN Author
ಬೀದರ್:- ರಾಜ್ಯದ ಪೌರಾಡಳಿತ ಸಚಿವರಿಗೆ ಎಷ್ಟು ಸಂಸದರಿದ್ದಾರೆ ಅನ್ನುವ ಬೇಸಿಕ್ ನಾಲೆಡ್ಜ್ ಇಲ್ಲದಿರುವುದು ಆಶ್ಚರ್ಯ ಸಂಗತಿ. ಹೌದು, ರಾಜ್ಯದ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಭಾಷಣದ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಭಾಷಣದ ವೇಳೆ ರಾಜ್ಯದಲ್ಲಿ 25 ಸಂಸದ ಸ್ಥಾನಗಳಿವೆ ಎಂದು ಹೇಳಿ ಪೇಚಿಗೆ ಸಿಲುಕಿದ್ದಾರೆ. ಸಂಪುಟದ ಉನ್ನತ ಖಾತೆ ಪೌರಾಡಳಿತ ಸಚವರಿಂದ ಮಹಾ ಎಡವಟ್ಟು ಉಂಟಾಗಿದೆ. ಸಾಮಾನ್ಯ ಮಾಹಿತಿಯೇ ಇಲ್ಲದ ಸಚಿವರು, ರಾಜ್ಯವನ್ನೇಗೆ ನಿಭಾಯಿಸ್ತಾರೆ..? ಎನ್ನುವ ಪ್ರಶ್ನೆಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಶಾಲಾ ಮಕ್ಕಳಿಗೆ ಇರುವ ಜ್ಞಾನವು ಸಚಿವರಿಗಿಲ್ವಾ..?ಎರಡು ಬಾರಿ ಸಚಿವ, ನಾಲ್ಕು ಬಾರೊ ಶಾಸಕರಾಗಿ ಆಯ್ಕೆ ಆಗಿರೋ ರಹೀಂ ಖಾನ್ ಗೆ ಸಾಮಾನ್ಯ ಜ್ಞಾನವೇ ಇಲ್ಲದಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಎಡವಟ್ಟು ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷದ ಸಭೆಯಲ್ಲಿ 25 ಕ್ಕೆ 25 ಸ್ಥಾನ ಗೆಲ್ತೇವೆ ಎಂದು ಹೇಳಿದ್ದಾರೆ. ಸಚಿವ ಈಶ್ವರ ಖಂಡ್ರೆ, ಸಚಿವ ಸಂತೋಷ್ ಲಾಡ್ ಎದುರಲ್ಲೆ ಸಚಿವ ರಹೀಂ…
ಹುಬ್ಬಳ್ಳಿ:- ಅನೈತಿಕ ಸಂಬಂಧದ ಹಿನ್ನೆಲೆ, ಮಹಿಳೆಯನ್ನು ಅಟ್ಟಾಡಿಸಿ ಇಟ್ಟಂಗಿಯಿಂದ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಕಿಮ್ಸ್ ಹಿಂಭಾಗ ಜರುಗಿದೆ. ಗಂಡನ ಜೊತೆ ಈ ಮಹಿಳೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತ ವ್ಯಕ್ತಿಯ ಹೆಂಡತಿ ಮತ್ತು ಮಕ್ಕಳು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಮಹಿಳೆ ತನ್ನ ಪತಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಮಹಿಳೆ ಸುಮಾರು 10 ವರ್ಷಗಳಿಂದ ಕಿಮ್ಸ್ ನಲ್ಲಿ ಆಯಾ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಕೆಲಸ ಮುಗಿಸಿ ಮಹಿಳೆ ಮನೆಗೆ ಹೋಗುತ್ತಿದ್ದಾಗ ವ್ಯಕ್ತಿಯ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಮಹಿಳೆ ಮೇಲೆ ಕುಟುಂಬಸ್ಥರೊಂದಿಗೆ ವ್ಯಕ್ತಿ ಸಹ ಹಲ್ಲೆ ಮಾಡಿದ್ದಾನೆ. ಕಳೆದ ಹತ್ತು ವರ್ಷಗಳಿಂದ ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಗೊಳಗಾದ ತಂಗಿಯನ್ನು ಬಿಡಿಸಲು ಬಂದ ಅಕ್ಕನನ್ನೂ ಥಳಿಸಿದ್ದಾರೆ. ಇಬ್ಬರನ್ನೂ ಸಾರ್ವಜನಿಕ ಸ್ಥಳದಲ್ಲೇ ಹಿಗ್ಗಾಮುಗ್ಗ ಥಳಿಸಿದ್ದಾರೆ. ಚಪ್ಪಲಿ ಹಾಗೂ ಇಟ್ಟಂಗಿಯಿಂದ…
ಕೋಲ್ಕತ್ತಾ: ಇತ್ತೀಚಿನ ದಿನಗಳಲ್ಲಿ ಮೆಟ್ರೋ ರೈಲುಗಳು, ರೈಲ್ವೆ ಪ್ಲಾಟ್ಫಾರ್ಮ್ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಜನರು ರೀಲ್ಸ್ ಮಾಡುವ ಪ್ರವೃತ್ತಿ ವೇಗವಾಗಿ ಹೆಚ್ಚಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಿಕ್ಕಿರಿದ ಮತ್ತು ಚಲಿಸುವ ರೈಲು ಕಂಪಾರ್ಟ್ಮೆಂಟ್ನಲ್ಲಿ ಹುಡುಗಿಯೊಬ್ಬಳು ಭೋಜ್ಪುರಿ ಹಾಡಿಗೆ ನೃತ್ಯ ಮಾಡುತ್ತಿರುವ ಇಂತಹ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಯುವತಿಯನ್ನು ಸಹೇಲಿ ರುದ್ರ ಎಂದು ಗುರುತಿಸಲಾಗಿದೆ. ವೀಡಿಯೊದಲ್ಲಿ, ಆಕೆ ಶರ್ಟ್ ಮತ್ತು ರಿಪ್ಡ್ ಜೀನ್ಸ್ ಧರಿಸಿದ್ದಾರೆ. ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದ ಆಸನಗಳ ನಡುವೆ ಖೇಸರಿ ಲಾಲ್ ಯಾದವ್ ಅವರ ‘ಸಾಜ್ ಕೆ ಸವಾರ್ ಕೆ’ ಹಾಡಿಗೆ ಯುವತಿ ನೃತ್ಯ ಮಾಡಿದ್ದಾಳೆ. ಅಲ್ಲಿ ಅನೇಕರು ಅವನನ್ನು ಕುತೂಹಲದಿಂದ ನೋಡುತ್ತಿದ್ದರು. ಇನ್ನು ಕೆಲವರು ತಮ್ಮ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ.ವಿಡಿಯೋ ವೈರಲ್ ಬಳಿಕ 2.5 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಮತ್ತು 11 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಖುಷಿ…
ನೆಲಮಂಗಲ;- ಕಳೆದ ೩೦ ವರ್ಷಗಳಿಂದ ಬೈರನಾಯ್ಕನಹಳ್ಳಿ ಗ್ರಾಮದಲ್ಲಿದ್ದ ನ್ಯಾಯಬೆಲೆ ಅಂಗಡಿಯನ್ನು ಯಾವುದೇ ನೋಟೀಸ್ ನೀಡದೇ ಏಕಾಏಕಿ ಆಡಳಿತ ಸರಕಾರದ ಪ್ರಭಾವದಿಂದ ಹಸಿರುವಳ್ಳಿಗೆ ಹೊಸದಾಗಿ ನೀಡಿದ್ದು, ಅನುಮಾನಕ್ಕೆ ಕಾರಣವಾಗಿದೆ ಹಾಗೂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸುನೀಲ್ ಆರೋಪಿಸಿದರು. ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿ ಬಳಿಯ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ಯುವರಕ್ಷಣಾ ವೇದಿಕೆ ಹಾಗೂ ಬೈರನಾಯ್ಕನಹಳ್ಳಿ ಗ್ರಾಮಸ್ಥರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕಚೇರಿಯ ಆಹಾರ ಸರಬರಾಜು ಇಲಾಖೆಯ ವಿರುದ್ಧ ಆರೋಪಿಸಿದರು ಈ ಕುರಿತು ಒಂದು ವರದಿ ಇಲ್ಲಿದೆ. ಬೈರನಾಯ್ಕನಹಳ್ಳಿ ಸೇರಿದಂತೆ ಹಸಿರುವಳ್ಳಿ, ಲಕ್ಕಪ್ಪನಹಳ್ಳಿ, ಚಿಕ್ಕನಹಳ್ಳಿ, ಚಿಕ್ಕನಹಳ್ಳಿ ಬಂಡೆ, ದೊಡ್ಡ ಹುಚ್ಚಯ್ಯನಪಾಳ್ಯ ಗ್ರಾಮದ ೭೦೦ಕ್ಕೂ ಹೆಚ್ಚು ಪಡಿತರ ಚೀಟಿ ಹೊಂದಿದ್ದು, ಕಳೆದ ೩೦ ವರ್ಷದಿಂದ ಭೈರನಾಯಕನಹಳ್ಳಿ ಗ್ರಾಮದಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿತ್ತು, ಆದರೆ ಕಳೆದ ಕೆಲ ತಿಂಗಳ ಹಿಂದೆ ಏಕಾಏಕಿ ಯಾವುದೇ ಸೂಚನೆ, ಆದೇಶ ನೀಡದೆ ನ್ಯಾಯ ಬೆಲೆ ಅಂಗಡಿಯನ್ನು ಹಸಿರುವಳ್ಳಿ ಗ್ರಾಮದಲ್ಲಿ ತೆರೆಯಲು ಅರ್ಜಿ…
ಧಾರವಾಡ;- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಅಲೆಮಾರಿ, ಆರೆ ಅಲೆವಾರಿ ಜನಾಂಗಗಳನ್ನು ವಾಲ್ಮೀಕಿ, ನಿಗಮದಿಂದ ಬೇರ್ಪಡಿಸಿ ಅಲೆಮಾರಿ ನಿಗಮ ಅಂತಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಲೀನಗೊಳಿಸಿರುತ್ತಾರೆ, ಆದ್ದರಿಂದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯವರು ವಿವಿಧ ಸಾಲ ಮಂಜೂರಾತಿ ಮಾಡಲು ಆಯ್ಕೆ ಪಟ್ಟಿ ತಯಾರಿಸುವುದಾಗಿ ಕೇವಲ ‘ಭಜಂತ್ರಿ’ ಜನಾಂಗದವರನ್ನು ಮಾತ್ರ ಆಯ್ಕೆ ಮಾಡಿದ್ದು ಇದರಲ್ಲಿ ‘ಹರಣಶಿಕಾರಿ’ ಜನಾಂಗದವರು ಧಾರವಾಡ ಜಿಲ್ಲೆಯಲ್ಲಿ ಸುಮಾರು 20.ಜನ ಫಲಾನುಭವಿಗಳು ಅರ್ಜಿ ನೀಡಿದ್ದರೂ ಒಬ್ಬರನ್ನೂ ಆಯ್ಕೆ ಮಾಡದೇ ಈ ಸಮಾಜವನ್ನು ಕಡೆಗಣಿಸಿ ಅನ್ಯಾಯ ಮಾಡಿರುತ್ತಾರೆ. ಹಾಗೂ ಕಲಘಟಗಿ ತಾಲೂಕಿನ ಆರೇಬಸನಕೋಪ್ಪ ಗ್ರಾಮದ ಜಮೀನಿನಲ್ಲಿ 60 ವರ್ಷಗಳಿಂದ ತಮ್ಮ ತಮ್ಮ ಸ್ವಂತ ಸ್ವಾಧೀನ ಅನುಭೋಗ ಇದ್ದ ರೈತರಿಗೆ ನ್ಯಾಯಾ ನೀಡಲು ಮನವಿ ಮಾಡಿದ್ದಾರೆ.
ನವದೆಹಲಿ: ಪ್ರಶ್ನೆಗಾಗಿ ಕಾಸು (Cash for Query) ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (TMC MP Mahua Moitra) ಅವರ ವಿರುದ್ಧ ಸಿಬಿಐ (CBI) ತನಿಖೆ ನಡೆಯುವ ಸಾಧ್ಯತೆಯಿದೆ. ಭ್ರಷ್ಟಾಚಾರ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಲೋಕಪಾಲ್(Lokpal) ಕೇಂದ್ರ ತನಿಖಾ ದಳಕ್ಕೆ (CBI) ಸೂಚಿಸಿರುವ ಮಾಹಿತಿಯನ್ನು ಬಿಜೆಪಿ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಂಬಂಧ ಪೋಸ್ಟ್ ಮಾಡಿರುವ ನಿಶಿಕಾಂತ್ ದುಬೆ, ನಾನು ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಲೋಕಪಾಲ್ ಸಂಸ್ಥೆಯು, ರಾಷ್ಟ್ರೀಯ ಭದ್ರತೆಗೆ ಸವಾಲೊಡ್ಡಿದ ಮಹುವಾ ಮಯಿತ್ರಾ ಅವರ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಕೈಗೊಳ್ಳುವಂತೆ ಸಿಬಿಐಗೆ ಸೂಚಿಸಿದೆ ಎಂದು ಹೇಳಿದ್ದಾರೆ. https://ainlivenews.com/knee-pain-treatment-joint-pain-treatment/ ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಗ್ರೂಪ್ ವಿರುದ್ಧ ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪಿಸಿದ್ದರು. ಈ ಆರೋಪಕ್ಕೆ ಪೂರಕ…
ಬೆಂಗಳೂರು” ದುಬಾರಿ ದುನಿಯಾದ ನಡುವೆ ಜೀವನ ಮಾಡೋದೆ ಕಷ್ಟ ಆಗಿದೆ. ಜನಸಾಮಾನ್ಯರು ಅಂತೂ ಬದುಕೋಕೆ ಆಗ್ತಿಲ್ಲ.ಏಪ್ರಿಲ್ ಮೇ ತಿಂಗಳು ಬಂದ್ರೆ ಸಾಕು ಟಣ್ ಅಂತ ಕರೆಂಟ್ ಬಿಲ್ ಏರಿಕೆ ಆಗೇ ಬಿಡುತ್ತೆ. ಇದೀಗ ಇಷ್ಟು ಸಲದು ಅಂತ ಸಾರಿಗೆ ಇಲಾಖೆನೂ ವರ್ಷಕ್ಕೊಮ್ಮೆ ಬಸ್ ದರ ಪರಿಷ್ಕರಣೆ ಮಾಡಿ ಅಂತ ಸರ್ಕಾರದ ಕದ ತಟ್ಟಿದೆ.ಬೆಲೆ ಏರಿಕೆಯಿಂದ ಬೆಂದುಹೋಗ್ತಿರೋ ಜನರಿಗೆ ಇದು ಟೆನ್ಷನ್ ಹೆಚ್ಚಿಸಿದೆ. ರಾಜ್ಯದ ಜನರಿಗೆ ಶಾಕ್ ಮೇಲೆ ಶಾಕ್ ಕಾಡ್ತನೇ ಇದೆ. ಸಾಮಾನ್ಯ . ಮಧ್ಯಮ ವರ್ಗದ ಜನರಂತೂ ಈ ದುಬಾರಿ ದುನಿಯಾದಲ್ಲಿ ಜೀವನ ಮಾಡೋಕೆ ಆಗ್ತಾ ಇಲ್ಲ. ಎಲ್ಲಾವೂ ತುಂಬಾನೇ ಕಾಸ್ಟ್ಲಿಸರ್ಕಾರಿ ಇಲಾಖೆಗಳು ಅಂತೂ ನಷ್ಟದ ನೆಪವೊಡ್ಡಿ ವಿದ್ಯುತ್ ದರ, ಹಾಲಿನ ದರ ಏರಿಸ್ತಾ ಬಂದಿದ್ದಾರೆ.ಇದೀಗ ಸಾರಿಗೆ ನಿಗಮಗಳು ನಮಗೆ ನಷ್ಟ ಕೆಇಆರ್ಸಿ ಮಾದರಿ ನಮಗೂ ವರ್ಷಕ್ಕೊಮ್ಮೆ ಬಸ್ ಪ್ರಯಾಣ ದರ ಹೆಚ್ಚಿಸಿದ ಅಂತ ಪ್ರಸ್ತಾಪ ಇಟ್ಟಿವೆ. ಹೌದು.. ರಾಜ್ಯದ ಜನರ ನಾಡಿ ಮಿಡಿತವಾಗಿರೋದು ನಮ್ಮ ರಾಜ್ಯ ಸರ್ಕಾರದ ಸಾರಿಗೆ…
ಕಲಬುರಗಿ: ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿದ ಹಿನ್ನಲೆ ಕಲಬುರಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ್ ಸುಂಬಡ್ ರನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿದೆ. ಜೇಷ್ಠತೆ ಇಲ್ಲದ ಅರ್ಜಿಗಳ ಪರಿಗಣನೆ ಹೆಚ್ಚುವರಿ ಮೊತ್ತ ಸಹಾಯಧನ ಪಾವತಿ ಮಾಡಿದ ಆರೋಪ ರಮೇಶ್ ಮೇಲಿದೆ. https://ainlivenews.com/knee-pain-treatment-joint-pain-treatment/ ಕಾರ್ಮಿಕ ಆಯುಕ್ತರ ಕಚೇರಿ ನೀಡಿದ ವರದಿ ಅನ್ವಯ ಸರ್ಕಾರ ಅಮಾನತು ಮಾಡಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಯೊಬ್ಬರಿಗೆ 9 ಸಾವಿರ ಬದಲು 90 ಸಾವಿರ ಜಮೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕೆಲ ಸಂಘಟನೆಯವರು ಸಚಿವ ಸಂತೋಷ್ ಲಾಡ್ ಗೆ ಮನವಿ ಸಹ ಸಲ್ಲಿಸಿದ್ದಾರೆ.
ಕಲಬುರಗಿ: ಕಲಬುರಗಿಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ ಶನಿವಾರ ನವೆಂಬರ್ 11 ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾದ ಎಂ.ಸಂಕೀರನ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವುದು ವಿಶೇಷ ಅಂತ HKE ಅಧ್ಯಕ್ಷರಾದ ಭೀಮಾಶಂಕರ ಬಿಲಗುಂದಿ ತಿಳಿಸಿದ್ದಾರೆ.. ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭೀಮಾಶಂಕರ್ 2022 ರಲ್ಲಿ ಪದವಿ ಮುಗಿಸಿದ 947 ವಿದ್ಯಾರ್ಥಿಗಳು 26 viದ್ಯಾರ್ಥಿಗಳು ಸ್ವರ್ಣಪದಕಕ್ಕೆ ಭಾಜನರಾಗಿದ್ದಾರೆ.. ಇದರಲ್ಲಿ 12 ಪದಕ ಕುಮಾರಿ ಮಾಯಾವತಿ ಪಡೆದಿದ್ದು ಕಾಲೇಜಿಗೆ ಹೆಗ್ಗಳಿಕೆ ಅಂತ ಹೇಳಿದ್ರು.