ಕ್ಯಾನ್ಬೆರಾ: ಆಸ್ಟ್ರೇಲಿಯಾಕ್ಕೆ (Australia) ಬರೋಬ್ಬರಿ 7 ವಿಶ್ವಕಪ್ (World Cup) ಟ್ರೋಫಿಗಳನ್ನು ಗೆದ್ದುಕೊಟ್ಟ ಮಹಿಳೆಯರ ಕ್ರಿಕೆಟ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ (Meg Lanning) ಅಂತಾರಾಷ್ಟ್ರೀಯ ಕ್ರಿಕೆಟ್ಗೆ (International Cricket) ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಕ್ರಿಕೆಟ್ ಜೀವನದಲ್ಲಿ ದಾಖಲೆಯ 241 ಪಂದ್ಯಗಳನ್ನಾಡಿರುವ ಅವರು, ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ಒಟ್ಟು ಆರು ಟೆಸ್ಟ್ ಪಂದ್ಯಗಳು, 103 ಏಕದಿನ ಪಂದ್ಯಗಳು ಮತ್ತು 132 ಟಿ20 ಪಂದ್ಯಗಳನ್ನು ಆಡಿರುವ ಲ್ಯಾನಿಂಗ್, ಸದ್ಯ ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳಿದ್ದಾರೆ. ದೇಶದ ಒಳಗೆ ಕ್ರಿಕೆಟ್ ಆಡುವುದನ್ನು ಮುಂದುವರಿಸಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮಾತ್ರವಲ್ಲದೆ ಭಾರತದಲ್ಲಿ ನಡೆಯಲಿರುವ ಡಬ್ಲ್ಯೂಪಿಎಲ್ ಟೂರ್ನಿಯಲ್ಲೂ ಬಹುತೇಕ ಆಡಲಿದ್ದಾರೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಗೆ ಹೋಗುವ ನಿರ್ಧಾರ ಕೈಗೊಳ್ಳುವಾಗ ಕಷ್ಟಕರವಾಗಿತ್ತು. 13 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಆನಂದಿಸಿರುವ ನಾನು ನಿಜಕ್ಕೂ ಅದೃಷ್ಟಶಾಲಿಯಾಗಿದ್ದೇನೆ. ನಿವೃತ್ತಿಗೆ ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಒಟ್ಟು ಎರಡು ಏಕದಿನ ವಿಶ್ವಕಪ್ ಮತ್ತು ಐದು ಟಿ20 ವಿಶ್ವಕಪ್ಗಳನ್ನು ಗೆದ್ದಿರುವ…
Author: AIN Author
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯಾವುದೇ ಭಯ ಭೀತಿ ಇಲ್ಲದೆ ನಡುಬೀದಿಯಲ್ಲಿ ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡೋದು ಕಾಮನ್ ಆಗ್ತಿದೆ.. ಸಣ್ಣ ಪುಟ್ಟ ಕಾರಣಕ್ಕೂ ಜೀವ ತೆಗೆಯುವಂತಹ ಕೃತ್ಯಗಳು ನಡೆಯುತ್ತಿದೆ. ಇಂಥದ್ದೇ ಕಾರಣಕ್ಕೆ ನಡೆದ ಎರಡು ಭೀಕರ ಹತ್ಯೆ ಕುರಿತ ಡಿಟೇಲ್ಸ್ ಇಲ್ಲಿದೆ.. ಹೆಲ್ಮೆಟ್ ಜೀವರಕ್ಷಕ.. ಅದೇ ಹೆಲ್ಮೇಟ್ ನಿಂದಲೇ ಜೀವವನ್ನು ತೆಗೆಯಬಹುದು.. ಈ ದೃಶ್ಯ ನೀವು ನೋಡಿದ್ರೆ ಖಂಡಿತಾ ನಡುಕವನ್ನ ಹುಟ್ಟಿಸುತ್ತೆ.. ಅಂದಹಾಗೆ ಈ ಘಟನೆ ನಡೆದಿರೋದು ಲಿಂಗರಾಜಪುರದಲ್ಲಿ. ಏರಿಯಾದಲ್ಲಿ ಡಿಜೆ ಸಾಂಗ್ ವಿಚಾರದಲ್ಲಿ ಪ್ರವೀಣ್ ಎಂಬಾತನನ್ನು ಹೆಲ್ಮೆಟ್ ನಿಂದ ಹೊಡೆದು ಹೊಡೆದು ಕೊಲ್ಲಲಾಗಿದೆ.. ಪ್ರವೀಣ್ ಸ್ನೇಹಿತನೇ ಅಗಿದ್ದ ಸುಂದರ್ ಎಂಬಾತನ ಗ್ಯಾಂಗ್ ಈ ಕೃತ್ಯ ಎಸಗಿದೆ. ಹೆಲ್ಮೇಟ್ ನಿಂದ ಹಲ್ಲೆ ನಡೆಸಿ ಕೊಲ್ಲುವ ದೃಶ್ಯವನ್ನು ಸ್ಥಳಿಯರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.. ಈ ವೇಳೆ ಎಷ್ಟೇ ಚೀರಿದ್ರು ಆರೋಪಿಗಳು ಕೊಂದೇ ಎಸ್ಕೇಪ್ ಆಗಿದ್ದಾರೆ. ಸದ್ಯ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಣನಕುಂಟೆ ರೌಡಿಶೀಟರ್ ಆಗಿರುವ ಸಹಾದೇವ ಮೇಲೆ ಕೊಲೆ…
ಹುಬ್ಬಳ್ಳಿ: ಕೋರಿಯರ್ ಕಳಿಸುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಗರದ ಉಣಕಲ್ನ ಟೀಚರ್ಸ್ ಕಾಲೊನಿ ನಿವಾಸಿ ಲಿಂಗರಾಜ ಎನ್.ಮುಂದಿನಮನಿ ಅವರಿಗೆ ₹1.99 ಲಕ್ಷ ವಂಚಿಸಿದ್ದಾನೆ. ಲಿಂಗರಾಜ ಅವರು ತಮಗೆ ಬರಬೇಕಾಗಿದ್ದ ಕೋರಿಯರ್ ಬಾರದಿದ್ಧಾಗ ಗೂಗಲ್ನಲ್ಲಿ ಹುಡುಕಿ, ಅದರಲ್ಲಿ ಸಿಕ್ಕ ಸಂಖ್ಯೆಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, ‘ನಿಮ್ಮ ವಿಳಾಸ ತಪ್ಪಾಗಿದೆ. ನಾನು ಕಳಿಸುವ ಲಿಂಕ್ ತೆರೆದು ₹5 ಪಾವತಿಸಿದರೆ ಸರಿಪಡಿಸಲಾಗುವುದು’ ಎಂದು ಹೇಳಿದ್ದಾನೆ.ಲಿಂಗರಾಜ ಅವರು ಹಣ ಪಾವತಿಸಿದ ನಂತರ ಆರೋಪಿ ಅವರ ಕೆನರಾ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ; ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅಂದಾಜು 484 ಕೋಟಿ ವೆಚ್ಚದ 167 ನೀರಾವರಿ ಯೋಜನೆಗಳನ್ನು ಕರ್ನಾಟಕದಲ್ಲಿ ಜಾರಿಗೆ ತರುವ ಹಿನ್ನಲೆಯಲ್ಲಿ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿಯವರು ಕೇಂದ್ರ ಜಲ ಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಸಲ್ಲಿಸಿರುವ ಈ ಮನವಿಯಲ್ಲಿ ಪ್ರಸ್ತಾಪಿಸಿದ ಎಲ್ಲಾ ಯೋಜನೆಗಳು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಬರಲಿವೆ. ಈ ಯೋಜನೆಯ ಉದ್ದೇಶ ಕೃಷಿ ಭೂಮಿಯ ಮಟ್ಟದಲ್ಲಿ ನೀರಾವರಿಗಾಗಿ ತಗಲುವ ವೆಚ್ಚವನ್ನು ಸರಳೀಕರಿಸುವುದು ಕನಿಷ್ಠಗೊ ಳಿಸುವುದಾಗಿದೆ. ಅಷ್ಟೇ ಅಲ್ಲ, ಹೆಚ್ಚಿನ ಕೃಷಿ ಭೂಮಿಯನ್ನು ನೀರಾವರಿ ವಿಧಾನಗಳಿಗೆ ಒಳಪಡುವಂತೆ ಮಾಡುವುದು. ನೀರಾವರಿ ಜಮೀನಿನಲ್ಲಿ ಬಳಸುವ ನೀರು ಸಮರ್ಥವಾಗಿ ಜಮೀನಿಗೆ ಮಾತ್ರ ಬಳೆಕೆಯಾಗಬೇಕು. ಈ ನಿಟ್ಟಿನಲ್ಲಿ ನೀರಾವರಿ ಮಾದರಿಯ ದಕ್ಷತೆಯ ಬಗ್ಗೆ ಕಾಳಜಿ ವಹಿಸುವಂತಹ ಯೋಜನೆಗಳು ಎಂಬುರು ಈ ಯೋಜನೆಗಳ ವಿಶೇಷ. ಇವುಗಳನ್ನು ಜಾರಿ ಮಾಡುವ ಮೂಲಕ ಕರ್ನಾಟಕದ ರೈತರಿಗೆ ಅನುಕೂಲ…
ಬೆಂಗಳೂರು: ಪಿಎಸ್ಐ ಪರೀಕ್ಷಾ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಕುರಿತಂತೆ ಕುಲಂಕೂಶವಾಗಿ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವ ಏಕಸದಸ್ಯ ಆಯೋಗ ರಚಿಸಿತ್ತು. ಕಳೆದ ಜುಲೈ 21 ರಂದು ಅಕ್ರಮ ನಡೆದಿರುವ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನ್ಯಾಯಾಂಗ ತನಿಖೆಗೆ ಒಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾ.ವೀರಪ್ಪ ನೇತೃತ್ವದ ತಂಡ ಇಂದು ಸಿಐಡಿ ಪ್ರಧಾನ ಕಚೇರಿಯ ಸ್ಟ್ರಾಂಗ್ ರೂಮ್ ಗೆ ಭೇಟಿ ನೀಡಿ ಪರಿಶೀಲಿಸಿದ್ರು. ಸಿಐಡಿ ಡಿಜಿ ಎಂ.ಎಂ.ಸಲೀಂ ಹಾಗೂ ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್ ಹಗರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನ್ಯಾ.ಬಿ.ವೀರಪ್ಪ ಪಿಎಸ್ಐ ಪರೀಕ್ಷಾ ನೇಮಕಾತಿ ಅಕ್ರಮ ಸಂಬಂಧ ರಾಜ್ಯ ಸರ್ಕಾರ ಹಗರಣವನ್ನ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಆರೋಪಗಳು ಕೇಳಿ ಬಂದಿತ್ತು. ಈ ಹಿನ್ನಲೆ ನಮ್ಮಆಯೋಗ ಇಂದು ಸಿಐಡಿ ಸ್ಟ್ರಾಂಗ್ ರೂಮ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಈಗಾಗಲೇ 28 ಜನರ ಸಾಕ್ಷಿಗಳ…
ಶಂಕರ್ ನಾಗ್ ಎಂದರೆ ಇಂದಿಗೂ ಯುವಕರ ಪಾಲಿಗೆ ಸ್ಫೂರ್ತಿಯ ಚಿಲುಮೆ. ಕಡಿಮೆ ಸಮಯ ಕನ್ನಡ ಚಿತ್ರರಂಗದಲ್ಲಿ ಇದ್ದರೂ ಕೂಡ ಶಂಕರ್ ನಾಗ್ ಮಾಡಿದ ಸಾಧನೆ ಅಪಾರ. ಸಣ್ಣ ವಯಸ್ಸಿಗೆ ಚಿತ್ರರಂಗದ ಜೊತೆ ನಂಟು ಬೆಳೆಸಿಕೊಂಡ ಶಂಕರ್ ನಾಗ್, ಬದುಕಿದ್ದ ಕೆಲವೇ ವರ್ಷಗಳಲ್ಲಿ ಹಲವು ಸಿನಿಮಾಗಳನ್ನು ನೀಡಿದರು. ನಿರ್ದೇಶನ, ನಟನೆಯ ಜೊತೆ ನಮ್ಮ ರಾಜ್ಯದ ಅಭಿವೃದ್ಧಿ ಬಗ್ಗೆ ಅವರು ಕನಸು ಕಂಡಿದ್ದರು. ಅವರನ್ನು ಇಂದು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಶಂಕರ್ ನಾಗ್ ಅವರು 09 ನವೆಂಬರ್ 1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದರು. ಶಂಕರ್ ನಾಗ್ ಅವರ ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಬಾಲ್ಯದ ನಂತರ ವಿದ್ಯಾಬ್ಯಾಸಕ್ಕಾಗಿ ಮುಂಬೈಗೆ ತೆರಳಿದ ಶಂಕರ್ ನಾಗ್, ಅಲ್ಲಿನ ಮರಾಠಿ ಚಿತ್ರಮಂದಿರದ ಕಡೆಗೆ ಆಕಷಿ೯ತರಾಗಿ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತ ಅದರಲ್ಲಿಯೇ ತೀವ್ರವಾಗಿ ತೊಡಗಿಕೊಂಡರು. ‘ಒಂದಾನೊಂದು ಕಾಲ‘ದಲ್ಲಿ…
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಶೋಪಿಯಾನ್ನ ಕಥೋಹಾಲನ್ನಲ್ಲಿ ಭಾರತೀಯ ಸೇನೆ ಹಾಗೂ ಪೊಲೀಸರು (Police) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ನ (TRF) ಉಗ್ರನನ್ನು ಹೊಡೆದುರುಳಿಸಿವೆ. ಹತ್ಯೆಗೀಡಾದ ಭಯೋತ್ಪಾದಕನನ್ನು ಮೈಸರ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ಎನ್ಕೌಂಟರ್ ನಡೆದ ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಹೆಚ್ಚಿನ ಉಗ್ರರು ಅಡಗಿರುವ ಶಂಕೆ ಮೇಲೆ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರೆಸಿವೆ. https://ainlivenews.com/knee-pain-treatment-joint-pain-treatment/ ಅಲ್ಲದೇ ಈ ಪ್ರದೇಶದಲ್ಲಿ ಇತ್ತೀಚೆಗೆ ಉಗ್ರರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಗಾಯಗೊಂಡಿದ್ದರು. ಇದಾದ ಬಳಿಕ ಉಗ್ರರ ವಿರುದ್ಧ ಸೇನೆ ಕಠಿಣ ಕ್ರಮಕ್ಕೆ ಮುಂದಾಗಿತ್ತು. ಅಲ್ಲದೇ ಭಯೋತ್ಪಾದಕರ ದಾಳಿಗಳ ಬಗ್ಗೆ ಖಚಿತ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಬೆಂಗಳೂರು: ಅವರದ್ದು ಬಡತನದಲ್ಲೂ ಸುಂದರ ಸಂಸಾರ ಸಾಗಿಸಿತ್ತಿದ್ದ ಕುಟುಂಬ.. ಬಾಳ ಬಂಡಿ ಸಾಗಿಸಲು ಪತ್ನಿಯ ಕೆಲಸಕ್ಕೆ ಸೇರಿ ದುಡಿಯುತ್ತಿದ್ದಳು. ಆದರೆ ಆಕೆ ಜೀವಕ್ಕೆ ತನ್ನ ಸುಂದರ ಕೇಶರಾಶಿಯೇ ಕುತ್ತು ತಂದಿದೆ.. ಅರೇ ಕೇಶರಾಶಿಯ ಪ್ರಾಣ ಕಂಟಕವಾಗಿದ್ದೇಗೆ ಅನ್ನೋದನ್ನ ಹೇಳ್ತೀವಿ ಈ ಸ್ಟೋರಿ ನೋಡಿ. ಹೆಣ್ಣಿನ ಸೌಂದರ್ಯಕ್ಕೆ ಕೇಶ ಮೆರುಗನ್ನು ನೀಡುತ್ತೆ.. ಆದರೆ ಇಲ್ಲೊಬ್ಬಳ ಬಾಳಿಗೆ ಕೇಶವೆ ಸಾವು ತಂದಿದೆ.. ಅಂದಹಾಗೆ ಈಕೆ ಹೆಸರು ಶ್ವೇತಾ.. ವಯಸ್ಸು 33 ವರ್ಷ.. ಮೂಲತಃ ಕನಕಪುರದ ಕೆಂಗುಂಟೆಯವಳು. ಮದುವೆಯಾದ ಬಳಿಕ ಸಿಲಿಕಾನ್ ಸಿಟಿಯ ಮಲ್ಲತ್ತಹಳ್ಳಿಗೆ ಬಂದು ನೆಲೆಸಿದ್ದಳು.. ಬಾಳ ಬಂಡಿ ಸಾಗಿಸಲು ನೆಲಗದರನಹಳ್ಳಿಯ ಶ್ರೀ ಪೇಂಟ್ಸ್ ಅಂಡ್ ಕೆಮಿಕಲ್ಸ್ ಕಂಪನಿಗೆ ಸೇರಿದ್ದಳು. ಈಕೆ ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದಳು.. ಪೆಯಿಂಟ್ ಮಿಕ್ಸ್ ಮಾಡುವ ಯಂತ್ರ ಬಳಸಿ ಕೆಲಸ ಮಾಡುತ್ತಿದ್ದಳು ಅಷ್ಟೇ ತನ್ನ ಕೂದಲನ್ನು ಮೇಲತ್ತಿ ಕಟ್ಟದೇ ಪೇಯಿಂಟ್ ಮಿಕ್ಸ್ ಪರಿಶೀಲಿಸಲು ಮುಂದೆ ಬಗ್ಗಿದ್ದಾಳೆ ಆಕೆಯ ಕೂದಲನ್ನು ಯಂತ್ರ ಸೆಳೆದುಕೊಂಡು ಕುತ್ತಿಗೆಯನ್ನೇ ತಿರುಗಿಸಿದೆ.. ಇದ್ರಿಂದ ತೀವ್ರ ಸ್ವರೂಪದ ಗಾಯಗೊಂಡ…
ಚಿಕ್ಕಬಳ್ಳಾಪುರ: ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಮಹಿಳೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸರು ರಕ್ಷಿಸಿ ಮಾನವಿಯತೆ ಮೇರೆದಿದ್ದಾರೆ. ಹೌದು ಇಂತಹ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ, ತಾಲೂಕಿನ ಎಲ್ಲೋಡು ಗ್ರಾಮದ ಮಹಿಳೆ ಕಳೆದ ಹಲವು ದಿನಗಳ ಹಿಂದೆ ಅದೇ ಗ್ರಾಮದ ವ್ಯಕ್ತಿಯನ್ನು ಪ್ರೀತಿಸಿ ಮದುವೆ ಆಗಿ, ಬಾಗೇಪಲ್ಲಿ ಪಟ್ಟಣದಲ್ಲಿ ವಾಸವಿದ್ದು, ಇತ್ತಿಚಿಗೆ ತನ್ನ ಗಂಡನಿಗೆ ಅಪಘಾತವಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೋಷಕರ ವಿರೋಧದ ನಡುವೆಯಲ್ಲೂ ವಿವಾಹವಾದ ದಂಪತಿ ಕಷ್ಟಗಳನ್ನೆ ಎದುರಿಸಿಕೊಂಡು ಬರುತ್ತಿದ್ದೆನೆ, ಜತೆಗೆ ತನ್ನ ಅಕ್ಕ ಸಹ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು ಅ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅ ವಿಡಿಯೋವನ್ನು ನೋಡಿದ ಗುಡಿಬಂಡೆ ಪೊಲೀಸರಾದ ದಕ್ಷಿಣ ಮೂರ್ತಿ ಮತ್ತು ಮುರಳಿ ರವರು ಮಹಿಳೆ ಬಳಸುತ್ತಿದ್ದ ಮೊಬೈಲ್ ಲೊಕೇಷನ್ ಬಳಸಿಕೊಂಡು ಮಹಿಳೆಯನ್ನು ಗುಡಿಬಂಡೆ ಕೆರೆಯ ಬಳಿ ಪತ್ತೆ ಅಚ್ಚಿದ್ದಾರೆ, https://ainlivenews.com/knee-pain-treatment-joint-pain-treatment/ ಇನ್ನು ಮಹಿಳೆ ಸ್ಲೀಪಿಂಗ್ ಮಾತ್ರೆ ಸೇವಿಸಿದ್ದು, ಗುಡಿಬಂಡೆ ಪೊಲೀಸರು…
ಧಾರವಾಡ : ಪ್ರಾಯೋಗಿಕವಾಗಿ ಉರ್ದು ಭಾಷೆಯನ್ನು ಅಧ್ಯಯನ ಮಾಡುವ ಮೂಲಕ, ಪ್ರತಿಯೊಬ್ಬರೂ ಉರ್ದು ಭಾಷೆಯ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ರಫೀಕ್ ಅಹ್ಮದ್ ಎಂ ಭಂಡಾರಿ ತಿಳಿಸಿದರು. ಧಾರವಾಡ ನಗರದ ಅಂಜುಮನ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕವಿ ಅಲ್ಲಾಮ ಇಕ್ಬಾಲ್ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಚಾರಕ್ಕಾಗಿ ಪೊಳ್ಳು ಹಕ್ಕುಗಳ ಬದಲಿಗೆ, ಪ್ರಾಯೋಗಿಕ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿ. ಉರ್ದುವಿನಿಂದ ಸಾಕಷ್ಟು ಜನ ಸಂಪಾದಿಸುತ್ತಿದ್ದಾರೆ. ಅವರು ಉರ್ದು ಭಾಷೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಉರ್ದು ಭಾಷೆಯ ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಷಯವನ್ನು ಅತಿಹೆಚ್ಚು ತೆಗೆದುಕೊಂಡು ಅಧ್ಯಯನ ಮಾಡಬೇಕು ಎಂದರು. ಅಲ್ಲಮ ಇಕ್ಬಾಲ್ ಒಬ್ಬ ಶ್ರೇಷ್ಠ ಉರ್ದು ಕವಿ ಮತ್ತು ಚಿಂತಕ. ಅವರು ತಮ್ಮ ಸ್ವಯಂ ಪರಿಕಲ್ಪನೆಯ ಮೂಲಕ ಯುವಜನತೆಗೆ ಹೊಸ ಜೀವನವನ್ನು ನೀಡಿದರು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ, ನಿವೃತ್ತ ಉರ್ದು ವಿಭಾಗದ ಮುಖ್ಯಸ್ಥ ಡಾ.ಖಾದೀರ್ ಸರಗಿರೋ ಮಾತನಾಡಿ, ಈ ಭಾಷೆ…