ಕಪ್ಪು ಒಣದ್ರಾಕ್ಷಿ ಕಪ್ಪು ದ್ರಾಕ್ಷಿಯ ಒಣಗಿದ ರೂಪವಾಗಿದೆ. ಅದರಲ್ಲಿಯೂ ಬೇರೆಲ್ಲಾ ದ್ರಾಕ್ಷಿಯ ವಿಧಗಳಿಗಿಂತಲೂ ಇದು ಅತೀ ಹೆಚ್ಚು ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ. ಕಪ್ಪು ಒಣದ್ರಾಕ್ಷಿಗಳನ್ನು ತಿನ್ನುವುದರಿಂದ ಹಲವು ಪ್ರಯೋಜನಗಳನ್ನು ಹೊಂದಿದೆ. ಆದರೆ ಈ ಕಪ್ಪು ದ್ರಾಕ್ಷಿಯನ್ನು ಹಾಗೆಯೇ ತಿನ್ನುವ ಬದಲು ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ತಿಂದರೆ ದುಪ್ಪಟ್ಟು ಲಾಭವನ್ನು ಪಡೆಯಬಹುದು. ಇದು ದೇಹವನ್ನು ಮಾತ್ರವಲ್ಲದೆ ಚರ್ಮ ಮತ್ತು ಕೂದಲಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತು ನೀರಿನಲ್ಲಿ ನೆನೆಸಿದ 10 ಕಪ್ಪು ಒಣ ದ್ರಾಕ್ಷಿಯನ್ನು ನೀವು ಪ್ರತಿದಿನ ಸೇವಿಸಿದರೆ, ಆರೋಗ್ಯದಲ್ಲಿ ಬದಲಾವಣೆಯನ್ನು ಕಾಣಬಹುದು. 1. ರಕ್ತವನ್ನು ಶುದ್ಧೀಕರಿಸುತ್ತದೆ ಕಪ್ಪು ಒಣದ್ರಾಕ್ಷಿ ಶುದ್ಧೀಕರಣ ಗುಣಗಳನ್ನು ಹೊಂದಿದೆ. ಇದು ರಕ್ತನಾಳಗಳಿಂದ ಹಾನಿಕಾರಕ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮತ್ತು ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಸೇವಿಸಿದಾಗ ಅವುಗಳಲ್ಲಿರುವ ಅಗತ್ಯ ಉತ್ಕರ್ಷಣ ನಿರೋಧಕಗಳು ದೇಹವು ಸುಲಭವಾಗಿ ಹೀರಲ್ಪಡುತ್ತದೆ. ಪರಿಣಾಮವಾಗಿ ರಕ್ತ ಪರಿಚಲನೆ ಸುಧಾರಿಸುತ್ತದೆ, ಯಕೃತ್ತು ಶುದ್ಧವಾಗಿರುತ್ತದೆ ಮತ್ತು ಚರ್ಮವು…
Author: AIN Author
ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕನ್ಸಲ್ಟೆಂಟ್- COO ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಜನವರಿ 20, 2024 ಅಂದರೆ ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಹಾಕಬೇಕು. ವಿದ್ಯಾರ್ಹತೆ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಬ್ಲಿಕ್ ಪಾಲಿಸಿ & ಮ್ಯಾನೇಜ್ಮೆಂಟ್/ ಎಕನಾಮಿಕ್ಸ್/ ಅಡ್ಮಿನಿಸ್ಟ್ರೇಶನ್ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 55 ವರ್ಷ ಮೀರಿರಬಾರದು. ವೇತನ: ವಾರ್ಷಿಕ ಪ್ಯಾಕೇಜ್ 25 ಲಕ್ಷ ಉದ್ಯೋಗದ ಸ್ಥಳ: ಬೆಂಗಳೂರು ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ಆಯ್ಕೆ ಪ್ರಕ್ರಿಯೆ:…
ಗದಗ: ಪ್ರದೇಶದ ಪರಿಚಿತತೆಗಾಗಿ ಭದ್ರಾವತಿಯ 97 RAF ಬಟಾಲಿಯನ್ ಗದಗ ಜಿಲ್ಲೆಗೆ ಆಗಮಿಸಿದೆ. ಒಟ್ಟು 80 ಜನ RAF ಯೋಧರನ್ನ ಒಳಗೊಂಡ ತಂಡವು ಜನೆವರಿ 19 ರಿಂದ 25 ರ ವರೆಗೆ ಗದಗ ನಗರ ಸೇರಿದಂತೆ ಗದಗ ಜಿಲ್ಲೆಯ ವಿವಿಧ ತಾಲೂಕಾ ಕೇಂದ್ರ ಹಾಗೂ ಕೆಲವು ಪಟ್ಟಣಗಳಲ್ಲಿ ಏರಿಯಾ ಫ್ಯಾಮಿಲಿಯರೈಜೇಶನ್ ನಡೆಸಲಿದೆ. ಜಿಲ್ಲೆಯ ಮಾಹಿತಿ ಪಡೆಯುವಿಕೆ, ಪ್ರದೇಶದ ಪರಿಚಿತತೆಗಾಗಿ, ಸ್ಥಳ ಹಾಗೂ ಇಲ್ಲಿನ ವಾತಾವರಣ, ಸಂಸ್ಕೃತಿಯ ಬಗ್ಗೆ ಮಾಹಿತಿ ಪಡೆಯಲು ಈ ತಂಡವು ಆಗಮಿಸಿದೆ. ಜಿಲ್ಲೆಯ ಪ್ರಮುಖ ನಗರ ಹಾಗೂ ಶಹರ ವ್ಯಾಪ್ತಿಯಲ್ಲಿ ಪಥ ಸಂಚಲನ ಜರುಗಿಸಲಾಗುತ್ತಿದೆ. ಆರ್.ಎ.ಎಫ್ ತಂಡಕ್ಕೆ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಾವು ನಿರ್ವಹಿಸುವ ಸ್ಥಳ ಅಪರಿಚಿತ ಆಗಬಾರದು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಎರ್ಪಡಿಸಲಾಗಿದೆ ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ ಸುದ್ದಿಗೋಷ್ಠಿ ನಡೆಸಿ ಮಾಹಿತಿಯನ್ನ ನೀಡಿದ್ರು. ಅದೇ ನಿಮಿತ್ಯವಾಗಿ ಗದಗ ನಗರದ ಪ್ರಮುಖ ರಸ್ತೆಗಳಲ್ಲಿ RAF ತಂಡದಿಂದ ರೂಟ್ ಮಾರ್ಚ ಮಾಡಲಾಯಿತು. ಈ ಸಂದರ್ಭದಲ್ಲಿ…
ಮಧುಮೇಹವನ್ನು ನಿಯಂತ್ರಣದಲ್ಲಿಡುವ ಅನೇಕ ಆಹಾರ ಪದಾರ್ಥಗಳಿವೆ. ಟೈಪ್-2 ಡಯಾಬಿಟಿಸ್ ರೋಗಿಗಳಿಗೆ ಪ್ರಯೋಜನಕಾರಿಯಾದ ನಿರ್ದಿಷ್ಟ ರೀತಿಯ ಆಹಾರವನ್ನು ಹೊಸ ಅಧ್ಯಯನ ಬಹಿರಂಗಪಡಿಸಿದೆ. ‘ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್’ ನಡೆಸಿದ ಅಧ್ಯಯನದ ಪ್ರಕಾರ, ಪ್ರತಿದಿನ ಆಹಾರದಲ್ಲಿ ರಾಗಿಯನ್ನು ಸೇರಿಸುವ ಜನರ ರಕ್ತದಲ್ಲಿನ ಗ್ಲೂಕೋಸ್ ಮಟ್ಟ 12 ರಿಂದ 15 ಪ್ರತಿಶತದಷ್ಟು ಕಡಿಮೆಯಾಗುತ್ತದೆ ಎನ್ನಲಾಗುತ್ತದೆ. ಇದು ಮಧುಮೇಹ ಮತ್ತು ಮಧುಮೇಹ ಪೂರ್ವ ಎರಡರಲ್ಲೂ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಅಧ್ಯಯನಗಳ ಪ್ರಕಾರ, ಮಧುಮೇಹ ಮತ್ತು ಮಧುಮೇಹ ಪೂರ್ವದಲ್ಲಿ ರಾಗಿ ಸೇವನೆಯು ತುಂಬಾ ಉಪಯುಕ್ತವಾಗಿದೆ ಎಂದು ಸಾಬೀತಾಗಿದೆ. ರಾಗಿ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಪೌಷ್ಟಿಕತಜ್ಞರ ಪ್ರಕಾರ, ಮಧುಮೇಹ ರೋಗಿಗಳು ಪ್ರತಿನಿತ್ಯ ತಮ್ಮ ಆಹಾರದಲ್ಲಿ ರಾಗಿಯನ್ನು ಸಾಧ್ಯವಾದಷ್ಟು ಸೇರಿಸಿಕೊಳ್ಳಬೇಕು. ಗ್ಲೈಸೆಮಿಕ್ ಸೂಚ್ಯಂಕದ ಪ್ರಕಾರ, ಇತರ ಕೆಲವು ಆಹಾರಗಳು ರಕ್ತದಲ್ಲಿನ ಸಕ್ಕರೆಯನ್ನು ತ್ವರಿತವಾಗಿ ಅಥವಾ ನಿಧಾನವಾಗಿ ಹೆಚ್ಚಿಸುತ್ತವೆ. ಆದರೆ ರಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಜೊತೆ ಸಕ್ಕರೆ ಮಟ್ಟವನ್ನು…
ಕಲಬುರ್ಗಿ:- ಇದೀಗ ಎಲ್ಲಿ ನೋಡಿದರಲ್ಲಿ ಶ್ರೀರಾಮಚಂದ್ರನ ಮಾತು. ಹಾಗೇನೆ ಕಲಬುರಗಿಯಲ್ಲಿ ಸಹ ಶ್ರೀರಾಮನ ಜಪ ಜೋರಾಗಿದೆ ಈ ವೇಳೆ ಲಕ್ಷ್ಮೀ ನಗರ ಬಡಾವಣೆಯ ನಿವಾಸಿ ಅಭಿಷೇಕ್ ಹಾಗು ಅಂಜಲಿಯ ಮಗಳು ಚಂದ್ರಲಾ ಥೇಟ್ ರಾಮನ ಅವತಾರ ತಾಳಿದ್ದಾಳೆ.. ಜನೆವರಿ 22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ. ಅಯೋಧ್ ಗೆ ಹೋಗಲು ಸದ್ಯ ಆಗದ ಕಾರಣ ಮನೆಯಲ್ಲಿ ರಾಮನನ್ನ ನೋಡ್ತಿದ್ದಾರೆ. ಹೌದು ಮಕ್ಕಳನ್ನ ಶ್ರೀ ರಾಮನಂತೆ ಸಿಂಗರಿಸಿ ಮಹಾಪ್ರಭುವನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾಮನ ಜಪ ಜೋರಾಗಿದೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಸಿಲಿಕಾನ್ ಸಿಟಿಯ ಮನೆ-ಮನೆಗಳ ಗೋಡೆ ಮೇಲೆ ಶ್ರೀರಾಮನ ಹೆಸರು ರಾರಾಜಿಸುತ್ತಿದೆ. ನಗರದ ವೈಯಾಲಿ ಕಾವಲ್ ನಲ್ಲಿ ಶ್ರೀರಾಮನ ಹೆಸರು, ಪಕ್ಕದಲ್ಲಿಯೇ ರಾರಾಜಿಸುತ್ತಿರುವ ಹನುಮಂತನ ಚಿತ್ರ, ಪ್ರತಿ ಮನೆಗಳಿಗೂ ತೆರಳಿ ಪೆಂಟಿಂಗ್ ಮಾಡುತ್ತಿರುವ ಶ್ರೀರಾಮನ ಭಕ್ತರು, ಇದೆಲ್ಲವೂ ಕಂಡುಬಂದಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ರಾಮೋತ್ಸವದ ಸಂಭ್ರಮ ಮನೆ ಮಾಡಿದೆ. ಸಿಟಿಯ ಹಲವು ಭಾಗಗಳಲ್ಲಿ ರಾಮನ ಅನಾವರಣ ಮಾಡುತ್ತಿದ್ದು, ಮನೆಗಳ ಮುಂದೆ ಶ್ರೀರಾಮನ ಹೆಸರು ರಾರಾಜಿಸುತ್ತಿವೆ. ರಾಮನ ಭಕ್ತೆಯಾದಂತಹ ಸುನಿತ ರಾಮಮಂದಿರ ಉದ್ಘಾಟನೆಯ ಸಲುವಾಗಿ ನಮ್ಮದೊಂದು ಅಳಿಲು ಸೇವೆ ಇರಬೇಕು ಎನ್ನುವ ಕಾರಣಕ್ಕೆ ನಗರದ ವೈಯ್ಯಾಲಿಕಾವಾಲ್, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಧ್ಯ ರಾಮನ ಹೆಸರುಗಳನ್ನ ಮನೆಯ ಗೋಡೆಗಳ ಮೇಲೆ ಬರೆಯುತ್ತಿದ್ದು, ವಿಶೇಷ ಸೇವೆಯನ್ನು ಮಾಡಲು ಹೊರಟಿದ್ದಾರೆ. ಪ್ರತಿಯೊಂದು ಮನೆಗಳಿಗೆ ತೆರಳಿ ಒಪ್ಪಿಗೆ ಪಡೆದು ಕೇಳಿದವರ ಮನೆಯ ಹೊರಗಿನ ಗೋಡೆಗೆ ಜೈ ಶ್ರೀರಾಮ ಜೊತೆಗೆ ಆಂಜನೇಯ…
ದಾವಣಗೆರೆ:-ಟೆಂಟ್ ನಲ್ಲಿ ಗೊಂಬೆ ಇಟ್ಟಿದ್ದರು ಎಂಬ ಸಚಿವ ಕೆ ಎನ್ ರಾಜಣ್ಣ ಹೇಳಿಕೆಗೆ ಮಾಜಿ ಸಚಿವ ರೇಣುಕಾಚಾರ್ಯ ಗರಂ ಆಗಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಒಬ್ಬ ಸಚಿವರಾಗಿ ಇಂತಹ ಹೇಳಿಕೆ ಸರಿಯಲ್ಲ. ಖಂಡಿತವಾಗಿ ಶ್ರೀರಾಮನ ಶಾಪ ತಟ್ಟತ್ತೆ. ಅಲ್ಲಿ ಶ್ರೀರಾಮನ ದೇವಸ್ಥಾನವಿತ್ತು ಅಂತ ಪುರಾತತ್ವ ಇಲಾಖೆಯೇ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ಆಮೇಲೆಯೇ ಸುಪ್ರೀಂ ಕೋರ್ಟ್ ನಿರ್ಣಯ ಮಾಡಿದೆ. ಆದ್ರೂ ನೀವು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಯಾರನ್ನೋ ಒಲೈಸಲು ಇಂತಹ ಹೇಳಿಕೆಗಳು ಸರಿಯಲ್ಲ ಎಂದರು. ಶ್ರೀರಾಮನ ಬಗ್ಗೆ ಹಗುರವಾಗಿ ಮಾತಾಡುವ ಸಚಿವರನ್ನ ವಜಾ ಮಾಡಿ. ಕೆ ಎನ್ ರಾಜಣ್ಣ ಇರಲಿ ಬೇರೆ ನ ಯಾರೇ ಇರಲಿ ವಜಾ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ರೇಣುಕಾಚಾರ್ಯ ಒತ್ತಾಯ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ರಾಮನ ಫ್ಲೆಕ್ಸ್ ಹಾಕಲು ಅನುಮತಿ ನಿರಾಕರಣೆ ವಿಚಾರವಾಗಿ ಮಾತನಾಡಿ, ಫ್ಲಕ್ಸ್ ಹಾಕೋಕೆ ಯಾರ ಅನುಮತಿ ಬೇಕಾಗಿದೆ. ಇದು ಯಾರ ಅಪ್ಪಂದು ಅಲ್ಲ, ಭಾರತ ದೇಶ. ಹಿಂದೆ ಬಾಬರ್…
ರಣ್ಬೀರ್ ಕಪೂರ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ (Animal) ಸಿನಿಮಾ 800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿದೆ. ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಅವರ ಸಿನಿಮಾ ಮೇಲಿನ ಪ್ರೀತಿಗೆ ರಶ್ಮಿಕಾ ಹಾಡಿಹೊಗಳಿದ್ದಾರೆ ಬಾಲಿವುಡ್ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳಲು ಕಾರಣವಾದ ‘ಅನಿಮಲ್’ ಸಿನಿಮಾ ಮತ್ತು ಡೈರೆಕ್ಟರ್ ಕುರಿತು ರಶ್ಮಿಕಾ ರಿಯಾಕ್ಟ್ ಮಾಡಿದ್ದಾರೆ. ಸಂದೀಪ್ ಅವರು (Sandeep Reddy Vanga) ಸಿನಿಮಾ ಮಾಡುವಾಗ ಭಿನ್ನವಾಗಿ ಯೋಚಿಸುತ್ತಾರೆ. ಆದರೆ ‘ಅನಿಮಲ್’ ಚಿತ್ರ ನೋಡಿದಾಗ ಈ ರೀತಿಯ ಸಿನಿಮಾ ಬೇಕು ಎನ್ನುವಂತೆ ಮಾಡಿದ್ದರು. ಈ ವೇಳೆ, ಅನಿಮಲ್ ಪಾರ್ಟ್ 2 ಬಗ್ಗೆ ನಟಿ ಮಾತನಾಡಿದ್ದರು. ‘ಅನಿಮಲ್ ಪಾರ್ಕ್’ ಚಿತ್ರದ ಕಥೆ ಹೇಗೆ ಬೇಕಾದರೂ ಇರಬಹುದು. ಈಗಾಗಲೇ ಚಿತ್ರದ ಸಣ್ಣ ಎಳೆಯನ್ನು ಸಂದೀಪ್ ಹೇಳಿದ್ದಾರೆ ಎಂದು ರಶ್ಮಿಕಾ ಮಾತನಾಡಿದ್ದಾರೆ. ‘ಅನಿಮಲ್’ ಪಾರ್ಟ್ 2 ಸಕ್ಸಸ್ ಕಾಣುವ ಭರವಸೆಯಲ್ಲಿದ್ದಾರೆ.
ರಾಯಚೂರು : ದರೋಡೆ, ಮನೆ, ವಾಹನಗಳು, ಚಿನ್ನಾಭರಣ ಕಳ್ಳತನ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳನ್ನು ಬೇಧಿಸಿದ ರಾಯಚೂರು ಪೊಲೀಸರು 1 ಕೋಟಿ 79 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ, ವಾರಸುದಾರರಿಗೆ ಹಿಂದಿರುಗಿಸಿದ್ದಾರೆ. ಜಿಲ್ಲೆಯಾದ್ಯಂತ ಜನವರಿ 1 ರಿಂದ ಡಿಸೆಂಬರ್ 31 2023 ಅವಧಿಯಲ್ಲಿ ಗಾಂಜಾ ಬೆಳೆಯುವ, ಅಕ್ರಮ ಸಾಗಾಣಿಕೆ ಮಾಡುವ ಅಡ್ಡೆಗಳ ಮೇಲೆ ದಾಳಿ ಮಾಡಿದೆ 14 ಪ್ರಕರಣಗಳು, ಗಾಂಜಾ ಮಿಶ್ರಿತ ಚಾಕಲೇಟ್ ಮಾರಾಟದ ಮೂರು ಪ್ರಕರಣಗಳು. ಮೊಬೈಲ್ಗಳ ಕಳ್ಳತನ ಪ್ರಕರಣಗಳಿಗೆ ಸಿಇಐಆರ್ ಪೋರ್ಟ್ನಲ್ಲಿ ನೊಂದಾಯಿಸಿದ ಒಟ್ಟು 772 ಪ್ರಕರಣಗಳು. ಮಹಿಳೆ ಮತ್ತು ಮಕ್ಕಳ ಕಾಣೆ ಸೇರಿದಂತೆ ಒಟ್ಟು 223 ಪ್ರಕರಣಗಳು, 2023 ನೇ ಸಾಲಿನಲ್ಲಿ 267 ರಸ್ತೆ ಅಪಘಾತ ಪ್ರಕರಣಗಳು ದಾಖಲಾದ ಪ್ರಕರಣಗಳು ಸೇರಿ ವಿವಿಧ ಪ್ರಕರಣಗಳನ್ನು ಭೇದಿಸಿಲಾಗಿದೆ. ಲಾರಿ, ಕಾರು, ದ್ವಿಚಕ್ರ ವಾಹನ, ಬಂಗಾರ ಸೇರಿ ಹಲವು ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದ್ದು. ಈ ವೇಳೆ ಆರೋಪಿತರಿಂದ ವಶಪಡಿಸಿಕೊಂಡ ಎಲ್ಲಾ ವಸ್ತುಗಳನ್ನ ಮಾಲೀಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್…
ರಾಯಚೂರು:- ರಾಮ ಮಂದಿರ ಉದ್ಘಾಟನೆ ಅಂಗವಾಗಿ ರಾಷ್ಟ್ರದ ಎಲ್ಲಾ ದೇವಾಲಯಗಳನ್ನು ಸ್ವಚ್ಚತೆ ಮಾಡುವಂತೆ ಆದೇಶ ಹೊರಡಿಸಿದ ಹಿನ್ನೆಲೆ, ರಾಯಚೂರು ನಗರದ ರಾಘವೇಂದ್ರ ಸ್ವಾಮಿ ಮಠದ ಆವರಣ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಈ ಬಗ್ಗೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಮಾತನಾಡಿ, ಇಂದಿನಿಂದ ಮೂರು ದಿನಗಳ ಕಾಲ ನಗರದ ಎಲ್ಲಾ ದೇವಸ್ಥಾನಗಳು ಸ್ವಚ್ಚತೆ ಮಾಡಲಾಗುವುದು. ನಗರದ ಸಾರ್ವಜನಿಕರೊಂದಿಗೆ ಈ ಒಂದು ಸ್ವಚ್ಚತಾ ಕಾರ್ಯ ಮಾಡಲಾಗುವುದು. ಜನವರಿ 22ರಂದು ಎಲ್ಲಾ ಸಾರ್ವಜನಿಕರು ಮನೆಗಳಲ್ಲಿ 5 ಪ್ರಣತಿ ಹಚ್ಚುವ ಮೂಲಕ ರಾಮನಿಗ ಸಮರ್ಪಣೆ ಮಾಡಬೇಕು ಎಂದರು.