Author: AIN Author

ಆರನೇ ವಾರದ ವಾರಾಂತ್ಯಕ್ಕೆ ಬಿಗ್ ಬಾಸ್ ಸ್ಪರ್ಧಿಗಳು ಲಗ್ಗೆಯಿಟ್ಟಿದ್ದು, ನಟ ಸುದೀಪ್​ ಅವರ ಆಗಮನಕ್ಕಾಗಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಅರ್ಥವಾಗದ, ಅರ್ಥೈಸಲಾಗದ ಒಂದಷ್ಟು ವಿಚಾರಗಳನ್ನು ಸುದೀಪ್​ ಹೇಗೆ ಆಯಾ ಸ್ಪರ್ಧಿಗಳಿಗೆ ತಲುಪಿಸುವುದರ ಜತೆಗೆ ಮನೆಯಿಂದ ಹೊರಹೋಗುವವರ ಹೆಸರನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ವಾರ ದೀಪಾವಳಿ ಹಬ್ಬವಾದ ಹಿನ್ನಲೆ ಟಾಸ್ಕ್​ಗಳು ಅಷ್ಟು ಕಠಿಣವಾಗಿರಲಿಲ್ಲ ಹಾಗೂ ಮನೆಯವರಿಂದ ಬಂದ ವಿಶೇಷ ಪತ್ರಗಳನ್ನು ಪಡೆಯುವಲ್ಲಿ ಸ್ಪರ್ಧಿಗಳು ಹೆಚ್ಚು ಸಕ್ರಿಯರಾಗಿ ಪಾಲ್ಗೊಂಡರು. ಕೆಲವರಿಗೆ ತಮ್ಮ ಪ್ರೀತಿ ಪಾತ್ರರಿಂದ ಪತ್ರ ದೊರಕಿತು. ಆದ್ರೆ, ಇನ್ನೂ ಕೆಲವರಿಗೆ ಪತ್ರ ಸಿಗದೆ ಬೇಸರದಿಂದಲೇ ದಿನ ಕಳೆಯುವಂತಾಯಿತು. ಇದರೊಟ್ಟಿಗೆ ವಾರದ ಕ್ಯಾಪ್ಟನ್​ ಆಗಿ ಕಾರ್ತಿಕ್​ ಆಯ್ಕೆಯಾದರೆ, ಉತ್ತಮ ಪಟ್ಟವನ್ನು ತುಕಾಲಿ ಸಂತೋಷ್​ ಪಡೆದುಕೊಂಡರು. ಕಳಪೆ ಪಟ್ಟವನ್ನು ತನಿಷಾ ತೆಗೆದುಕೊಂಡರು. ಮನೆಯವರೆಲ್ಲಾ ತನಗೆ ಕಳಪೆ ಕೊಟ್ಟು ಜೈಲಿಗೆ ಕಳುಹಿಸಿದ ಹಿನ್ನಲೆ ತನಿಷಾ ಕೆಲ ಸಮಯ ಕಣ್ಣೀರಾಕಿದರು. ಆರನೇ ವಾರಂತ್ಯಕ್ಕೆ ಬಂದಿರುವ ಸ್ಪರ್ಧಿಗಳ ಪೈಕಿ ವಿನಯ್​, ತನಿಷಾ, ಕಾರ್ತಿಕ್​, ಭಾಗ್ಯಶ್ರೀ, ಇಶಾನಿ, ತುಕಾಲಿ…

Read More

ದಾವಣಗೆರೆ: ನಾಳೆ ನಡೆಯುವ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆಯುವ ಫೈನಲ್ ಹೋರಾಟದಲ್ಲಿ ಭಾರತ ಜಯಶಾಲಿಯಾಗಲಿ ಎಂದು ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದಿಂದ ಶುಭಾಶಯಗಳನ್ನ ಕೋರಲಾಯಿತು. ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಹಾಗೂ ಕ್ರೀಡಾಪಟುಗಳು ಜೀತೇ ಗಾ ಜೀತೇ ಗಾ ಇಂಡಿಯಾ ಜೀತೇಗಾ ಎಂಬ ಘೋಷಣೆ ಕೂಗಿ ಭಾರತ ತಂಡಕ್ಕೆ ಶುಭ ಕೋರಿದರು. ಮಹಾನಗರ ಪಾಲಿಕೆ ಸದಸ್ಯರಾದ ಎ ನಾಗರಾಜ್ ಜಯಪ್ರಕಾಶ್ ಗೌಡ ರೂಪಿತ್ ನಾಗರಾಜ್ ಯುವರಾಜ್ ಮತ್ತು ಕ್ರಿಕೆಟ್ ಆಟಗಾರರು ಭಾಗವಹಿಸಿದ್ದರು.

Read More

ಮೈಸೂರು: ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್​ ವಿಚಾರ ಸಂಬಂಧ ಯತೀಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ. ವಿವೇಕಾನಂದ ಯಾರು? ಅದು ನನಗೆ ಈಗಲೂ ಗೊತ್ತಿಲ್ಲ. ವಿವೇಕಾನಂದರ ವರ್ಗಾವಣೆ ಎಲ್ಲಿಗೆ ಆಗಿದೆ? ಆ ಕ್ಷೇತ್ರದ ವ್ಯಾಪ್ತಿ ಯಾವುದು? ಅದರ ಬಗ್ಗೆ ಕ್ಷೇತ್ರದ ಶಾಸಕರನ್ನ ಕೇಳಿಕೊಳ್ಳಿ. ಅದಕ್ಕೂ ನನಗೂ ಏನೂ ಸಂಬಂಧ ಎಂದು ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ (Mysuru) ಮೊದಲ ಬಾರಿಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಗಳನ್ನು ಮಾಡುವಾಗ ದಾಖಲೆ ಇಟ್ಟು ಆರೋಪ ಮಾಡಲಿ. ದಾಖಲೆ ಇಲ್ಲದೇ ಸುಖಾಸುಮ್ಮನೆ ಆರೋಪ ಮಾಡಬೇಡಿ. ನಾನು ನನ್ನ ಪಾಡಿಗೆ ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ. ಅನಗತ್ಯವಾಗಿ ಎಲ್ಲಾ ವಿಚಾರದಲ್ಲಿ ನನ್ನ ಹೆಸರನ್ನ ಡ್ರ‍್ಯಾಗ್ ಮಾಡಬೇಡಿ ಎಂದರು. https://ainlivenews.com/how-to-make-hotel-style-palak-paneer-antira-here-it-is/ ನಾನು ಆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವೇ ಇಲ್ಲ. ನಾನು ಹತ್ತಾರು ವಿಚಾರಗಳ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ. ಈಗ ನಾನು ದುಡ್ಡಿನ ಮಾತನಾಡಿದ್ದರೆ ಸ್ಪಷ್ಟನೆ ಕೊಡಬಹುದಿತ್ತು. ಆದರೂ ಈಗ ಅದರ…

Read More

ಬೆಂಗಳೂರು : ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕನಾಗಿ ನೇಮಕಗೊಂಡ ಆರ್.ಅಶೋಕ್ ಅವರಿಗೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಅಭಿನಂದನೆ ಸಲ್ಲಿಸಿದ್ದಾರೆ.  ಪಕ್ಷದ ವರಿಷ್ಠರು ರಾಜ್ಯ ವಿಧಾನಸಭೆಯ ವಿರೋಧಪಕ್ಷ ನಾಯಕನ ಸ್ಥಾನಕ್ಕೆ ಸಮರ್ಥ ವ್ಯಕ್ತಿಯನ್ನು ನೇಮಕ ಮಾಡಿದ್ದಾರೆ. ರಾಜ್ಯದ ಉಪ ಮುಖ್ಯಮಂತ್ರಿಯಾಗಿ, ವಿವಿಧ ಇಲಾಖೆಗಳ ಸಚಿವರಾಗಿ ಸಾಕಷ್ಟು ಮಹತ್ವದ ಯೋಜನೆ ಜಾರಿಗೆ ತಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಆರ್.ಅಶೋಕ ಅವರನ್ನು ವಿರೋಧ ಪಕ್ಷದ ನಾಯಕನ ಜವಾಬ್ದಾರಿ‌‌‌ ವಹಿಸಿರುವುದಕ್ಕೆ ಪಕ್ಷಕ್ಕೆ ಹೊಸ‌‌ ಶಕ್ತಿ ಸಿಕ್ಕಂತಾಗಿದೆ ಎಂದಿದ್ದಾರೆ.  ಜವಾಬ್ದಾರಿಯನ್ನು ಸಮರ್ಥವಾಗಿ ಎದುರಿಸುವ ಜಾಣ್ಮೆ, ಸಂಘಟನಾ ಚತುರತೆ ಮತ್ತು ಸಾಕಷ್ಟು ಅನುಭವ  ಹೊಂದಿರುವ ಆರ್.ಅಶೋಕ್ ಅವರು ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ.  ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರ‌ಕ್ಕೆ‌ ಬಂದಾಗಿನಿಂದಲೂ ಒಂದಿಲ್ಲೊಂದು ವಿವಾದಗಳಿಗೆ ಸಿಲುಕುತ್ತಿದೆ. ಚುನಾವಣೆ ಭರವಸೆಗಳನ್ನು ಈಡೇರಿಸಲು ಒದ್ದಾಡುತ್ತಾ, ಜನ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸರ್ಕಾರ ಮಾಡುತ್ತಿರುವ ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡೋಣ. ಜನಸಾಮಾನ್ಯರ ಧ್ವನಿಯನ್ನು ವಿಧಾನಸಭೆಯಲ್ಲಿ ಪ್ರತಿದ್ವನಿಸುವ ಕೆಲಸವನ್ನು…

Read More

ಮಂಡ್ಯ: ವಿಪಕ್ಷದವರ ಟೀಕೆ ಜನರ ಅಭಿವೃದ್ಧಿಗೆ ಪೂರಕವಾಗಿ ಇರಬೇಕು ಎಂದು ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ಯತೀಂದ್ರ ವರುಣ ಕ್ಷೇತ್ರದ ಮಾಜಿ ಶಾಸಕ, ಅವರ ತಂದೆ ಸಿಎಂ. ಹೀಗಿರುವಾಗ ಆ ಕ್ಷೇತ್ರದ ಕೆಲಸವನ್ನು ನೋಡಿಕೊಂಡರೆ ತಪ್ಪೇನು? ನಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಹಾಕಿ ಅನ್ನೋದರಲ್ಲಿ ತಪ್ಪೇನು? ಸಾರ್ವಜನಿಕರೇ ನಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಬೇಕು ಅಂತಾರೆ. https://ainlivenews.com/how-to-make-hotel-style-palak-paneer-antira-here-it-is/  ಕುಮಾರಸ್ವಾಮಿ ಕುಟುಂಬದವರು ಅಧಿಕಾರದಲ್ಲಿದ್ದಾಗ ಏನು ಮಾಡಿಲ್ವೇ? ಮಾಜಿ ಸಿಎಂ ಕುಮಾರಸ್ವಾಮಿಗೆ ಅಧಿಕಾರ ಬಿಟ್ಟು ಇರೋಕೆ ಆಗಲ್ಲ. ಹೆಚ್​.ಡಿ.ಕುಮಾರಸ್ವಾಮಿಗೆ ಅಧಿಕಾರ ಕೊಟ್ಟರೆ ನಿಭಾಯಿಸಲು ಆಗಲ್ಲ. ಕುಮಾರಸ್ವಾಮಿ ನೆಮ್ಮದಿಯಿಂದ ಇರಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಕೊಪ್ಪ ಗ್ರಾಮದಲ್ಲಿ ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಕಿಡಿ ಕಾರಿದ್ದಾರೆ.

Read More

ಬೆಂಗಳೂರು: ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷದ ತೀರ್ಮಾನ, ಶಾಸಕರ ಅಭಿಪ್ರಾಯವನ್ನು ನಾವು ಒಪ್ಪಬೇಕು. ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂದ್ರೆ ಪಕ್ಷದ ಘನತೆಗೆ ಧಕ್ಕೆ ಬರುತ್ತೆ. ನಾವೆಲ್ಲರೂ ಅಶೋಕ್​ಗೆ ಸಹಕಾರ ಕೊಡುತ್ತೇವೆ. ಯತ್ನಾಳ್ ಸೇರಿದಂತೆ ಒಂದಿಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹಿರಂಗವಾಗಿ ಯತ್ನಾಳ್​ ಆ ರೀತಿ ಮಾತನಾಡುವುದು ಸರಿಯಲ್ಲ. ಯಡಿಯೂರಪ್ಪ ಸಿಎಂ ಆಗಿದ್ರೆ ನಮಗೆ ಈ ದುಸ್ಥಿತಿ ಬರುತ್ತಿರಲಿಲ್ಲ. ರಾಜ್ಯಾಧ್ಯಕ್ಷರ ವಿರುದ್ಧ ಮಾತನಾಡಿದಷ್ಟು ಡ್ಯಾಮೇಜ್ ಆಗುತ್ತದೆ ಎಂದರು.

Read More

ಹುಬ್ಬಳ್ಳಿ: ಕರ್ನಾಟಕದಲ್ಲಿ ಈ ಹಿಂದೆ ಇದೆ ಬಿಜೆಪಿ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ಭರವಸೆ ಕೊಟ್ಟು ಮೋಸ ಮಾಡಿದ್ದು ಜಗಜ್ಜಾಹಿರ ಅಲ್ಲದೆ ಈ ಹಿಂದೆ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳನ್ನು ಮಾಡುವಾಗ ಪಂಚಮಸಾಲಿ ನಾಯಕರನ್ನು ಪರಿಗಣಿಸಲಿಲ್ಲ ಈಗ ರಾಜ್ಯ ಬಿಜೆಪಿ ಘಟಕಕ್ಕೆ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಪಂಚಮಸಾಲಿಗಳನ್ನು ಪರಿಗಣಿಸಲಿಲ್ಲ ಲಿಂಗಾಯತ ಸಮಾಜದಲ್ಲಿ ಅತ್ಯಂತ ದೊಡ್ಡ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ನಾಯಕರನ್ನು ಬಿಜೆಪಿಯಲ್ಲಿ ಮೂಲೆ ಗುಂಪು ಮಾಡಲಾಗುತ್ತಿದೆ. ಪಂಚಮಸಾಲಿಗಳನ್ನು ಅಧಿಕಾರ ಹಿಡಿಯಲು ಉಪಯೋಗಿಸಿಕೊಳ್ಳುತ್ತಿದ್ದು ಆಯಕಟ್ಟಿನ ಮಹತ್ವದ ಸ್ಥಾನಗಳಿಂದ ಅವರನ್ನು ದೂರ ಇಡಲಾಗುತ್ತದೆ ಎಂದು ಗಂಗಾಧರ ದೊಡ್ಡವಾಡ ಕಿಡಿ ಕಾರಿದ್ದಾರೆ ಇದರ ಪರಿಣಾಮ ಮುಂಬರುವ ಚುನಾವಣೆಗಳಲ್ಲಿ ಪಂಚಮಸಾಲಿಗಳು ತೋರಿಸಲಿದ್ದಾರೆ ಎಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಗಂಗಾಧರ ದೊಡವಾಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ಧಾರವಾಡ: ವಿಶ್ವ ಕಪ್ ಆರಂಭದಿಂದಲ್ಲೂ ಗೆಲ್ಲುತ್ತಾಲೇ ಬಂದಿರುವ ಭಾರತ ತಂಡ ಈ ಬಾರಿ ವಿಶ್ವ ಕಪನಲ್ಲಿ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ‌ ತಂಡವಾಗಿದ್ದು, ನಮ್ಮೆಲ್ಲರಿಗೂ ಹೆಮ್ಮೆ. ನಾಳೆ ಫೈನಲ್ ಪಂದ್ಯ ನಡೆಯುತ್ತಿದ್ದು, ಅಲ್ಲಿಯು ವಿಜಯದ ಹಾರ ನಮ್ಮ ತಂಡಕ್ಕೆ ಸಿಗಲಿ. ಗೆದ್ದು ಬಾ ಭಾರತ ಎಂದು ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಮಾಜಿ ಮೇಯರ್ ವೀರೇಶ ಅಂಚಟಗೇರಿಯವರು ಶುಭ ಹಾರೈಸಿದ್ದಾರೆ.‌ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಹ್ಮದಾಬಾದ್‌ನಲ್ಲಿ ನಾಳೆ ವಿಶ್ವ ಕಪ್ ಫೈನಲ್ ಪಂದ್ಯ ನಡೆಯಿತ್ತಿದ್ದು, ಅಲ್ಲಿಯು ಕೂಡಾ ಭಾರತ ತಂಡ ಗೆದ್ದು ಬರಲಿ. ಹುಬ್ಬಳ್ಳಿ ಧಾರವಾಡ ಅವಳಿ ನಗರದ ಕ್ರಿಕೆಟ್ ಪ್ರೇಮಿಗಳ ಪರವಾಗಿ ಹಾಗೂ ಜನತೆಯ ಪರವಾಗಿ ಶುಭವಾಗಲಿ. ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲುವು ನಮ್ಮ ದೇಶದ ತಂಡದಾಗಲಿ. ರೋಹಿತ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಈಗಾಗಲೇ ಎಲ್ಲ ಪಂದ್ಯಗಳಲ್ಲಿಯು ಉತ್ತಮವಾಗಿ ತಂಡ ಆಡುತ್ತಿದೆ.‌ ಟೀಂ ಇಂಡಿಯಾದ ತಂಡದಲ್ಲಿರುವ ಪ್ರತಿಯೊಬ್ಬರು ಉತ್ತಮವಾಗಿ ಆಡುತ್ತಿದ್ದಾರೆ. ಅಚ್ಚುಕಟ್ಟಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಅದೇ ರೀತಿ ಪೈನ್ಲ್ ಪಂದ್ಯದಲ್ಲೂ…

Read More

ಹುಬ್ಬಳ್ಳಿ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ತುಳಜಾಭವಾನಿ ದೇವಸ್ಥಾನ ಹಾಗೂ ಹು-ಧಾ ಕೇಂದ್ರ ಪಂಚ ಸಮಿತಿ ವತಿಯಿಂದ ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವದ ಮೆರವಣಿಗೆಯ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭವನ್ನು ನವೆಂಬರ್‌ 19ರಂದು ಬೆಳಿಗ್ಗೆ 9 ಗಂಟೆಗೆ ನಗರದ ದಾಜೀಬಾನಪೇಟೆಯ ತುಳಜಾಭವಾನಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹು-ಧಾ ಎಸ್. ಎಸ್.ಕೆ ಸಮಾಜದ ಅಧ್ಯಕ್ಷ ಸತೀಶ ಮೆಹರವಾಡೆ ಹೇಳಿದರು. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಸಹಸ್ರಾರ್ಜುನ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ನಿಮಿತ್ತವಾಗಿ ಶ್ರೀ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಯ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಹಾಗೂ ಧ್ವಜಾರೋಹಣವನ್ನು ಹು-ಧಾ ಮಹಾಪೌರರಾದ ವೀಣಾ ಬರದ್ವಾಡ ಅವರು ನೆರವೇರಿಸಲಿದ್ದಾರೆ. https://ainlivenews.com/how-to-make-hotel-style-palak-paneer-antira-here-it-is/ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹು-ಧಾ ಎಸ್. ಎಸ್.ಕೆ. ಸಮಾಜದ ಅಧ್ಯಕ್ಷರಾದ ಸತೀಶ್ ಮೆಹರವಾಡೆ ವಹಿಸಲಿದ್ದು, ಉದ್ಘಾಟನೆಯನ್ನು ಮಾಜಿ ಸಿಎಂ ಹಾಗೂ ವಿಧಾನ ಪರಿಷತ್ ಸದಸ್ಯರಾದ ಜಗದೀಶ್ ಶೆಟ್ಟರ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ…

Read More

ಧಾರವಾಡ: ನಾಳೆ ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ 2023ರ ವಿಶ್ವಕಪ್ ಫೈನಲ್ ಪಂದ್ಯಾವಳಿ ನಡೆಯಲಿದ್ದು, ಉಭಯ ತಂಡಗಳಿಗೆ ಶುಭಾಶಯಗಳ ಮಾಹಾ ಪೂರವೆ ಹರಿದು ಬರುತ್ತಿದೆ. ಹಾಗೇ ಧಾರವಾಡದಲ್ಲೊಬ್ಬರು ಕಲಾವಿದ ಮಣ್ಣಿನಲ್ಲಿ 23 ಸೆ.ಮೀ. ಎತ್ತರದ ವಿಶ್ವಕಪ್ ಮಾಡುವ ಮೂಲಕ‌ ವಿಶೇಷವಾಗಿ ಟೀಂ ಇಡೊಯಾಗೆ ಶುಭ ಹಾರೈಸಿದ್ದಾರೆ. ಧಾರವಾಡ ಪರಿಸರ ಸ್ನೇಹಿ ಕಲಾವಿದರಾದ ಮಂಜುನಾಥ ಹಿರೇಮಠ ಅವರು, 2023ರ ವಿಶ್ವಕಪ್ ಕದನದ ಹಿನ್ನೆಲೆ 23 ಸೆಂಟಿ ಮೀಟರ್ ಎತ್ತರದ ವಿಶ್ವಕಪ್‌ನ್ನು ಮಣ್ಣಿನಲ್ಲಿ ಸಿದ್ಧಪಡಿಸಿ ಗಮನ ಸೆಳೆಯುವುದಿದ್ದಾರೆ.‌ ಇನ್ನೂ ಮಣ್ಣಿನನಲ್ಲಿ ಸಿದ್ಧವಾದ 23 ಸೆ.ಮಿ ಎತ್ತರದ ವಿಶ್ವಕಪ್ ಥೇಟ್ ವಿಶ್ವಕಪ್‌ನಂತೆಯೇ ಕಾಣಿತ್ತಿದ್ದು, ಗೆದ್ದು ಬಾ ಟೀಂ ಭಾರತ ಎಂದು ಹೇಳುವ ಮೂಲಕ ಭಾರತ ತಂಡವನ್ನು ಹಾರೈಸಿದ್ದಾರೆ. ಇನ್ನೂ ಮಂಜುನಾಥ ಹಿರೇಮಠ ಅವರು ವಿಶೇಷ ವ್ಯಕ್ತಿಗಳು ಹುಟ್ಟು ಹಬ್ಬ ಹಾಗೂ ದೇಶದ ವಿಶೇಷ ಸಾಧನೆಗಳು ನಡೆದಾಗ ತಮ್ಮ ಕೈ ಚಳಕದಿಂದಲೇ ವಿಶೇಷವಾಗಿ ಏನಾದರೂ ಒಂದು ಮಾಡಿ ಶುಭ ಹಾರೈಸಿತ್ತಲೇ ಬದಿದ್ದು, ಈಗ ವಿಶ್ವಕ್‌ನ್ನು…

Read More