ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಹುದೇ? ಎಂಬ ಗೊಂದಲ ಹಲವರಿಗಿದೆ. ಹಾಗಾದ್ರೆ ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ಕೆಲವರು ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸುತ್ತಾರೆ. ಯಾಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾಗಳಿದ್ದು ಅದು ನಾಶವಾಗುತ್ತದೆ ಎಂದು ತಿಳಿದಿರುತ್ತಾರೆ. ಆದರೆ ತಜ್ಞರು ತಿಳಿಸಿದ ಪ್ರಕಾರ ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಯಾಕೆಂದರೆ ಜೇನುತುಪ್ಪವನ್ನು ಬಿಸಿ ಮಾಡಿದಾಗ ಅದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತದೆ. ಮತ್ತು ಅದು ವಿಷವಾಗಿ ಪರಿಣಮಿಸುತ್ತದೆ. ಇದರಿಂದ ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆಯಂತೆ.
Author: AIN Author
ಬೆಂಗಳೂರು:- ಅಶೋಕ್ಗೆ ವಿಪಕ್ಷ ನಾಯಕನ ಸ್ಥಾನ ನೀಡಿ ಉರಿಯೋ ಬೆಂಕಿಗೆ ತುಪ್ಪ ಹಾಕಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಆರ್.ಅಶೋಕ್ ಹಾಗೂ ವಿಜಯೇಂದ್ರಗೆ ಅಭಿನಂದನೆ ಸಲ್ಲಿಸುತ್ತೇನೆ. 6 ತಿಂಗಳ ನಂತರ ಪ್ರಜಾಪ್ರಭುತ್ವಕ್ಕೆ ಗೌರವ ತಂದಿದ್ದೀರಿ. ನಾವು ಯಾವ ವಿಚಾರದಲ್ಲೂ ಜಾರಿಕೊಳ್ತಿಲ್ಲ, ವಿರೋಧ ಪಕ್ಷದ ನಾಯಕರಾಗಿ ಬನ್ನಿ. ಬರ ಸೇರಿದಂತೆ ಎಲ್ಲಾ ವಿಚಾರ ಚರ್ಚೆ ಮಾಡೋಣ. ನಮಗೆ ವಿಪಕ್ಷ ನಾಯಕನ ಆಯ್ಕೆ ಮಾಡಿದರು ಎಂಬ ಖುಷಿ ಇದೆ. ಆದರೆ ಬಿಜೆಪಿಯವರಿಗೆ ಇದು ಸಂತೋಷವಾಗಿಲ್ವಲ್ಲಾ. ಈ ಹಿಂದೆ ಚುನಾವಣೆ ವೇಳೆ ಬಿ.ಎಲ್.ಸಂತೋಷ್ ಮಾಡಿದ್ದು ಚಾಪ್ಟರ್ 1. ಈಗ ಇದು ಚಾಪ್ಟರ್ 2″ ಎಂದು ಕುಟುಕಿದರು. ಗೋ ಬ್ಯಾಕ್ ಅಶೋಕ್ ಅಂತಾ ಪೋಸ್ಟರ್ ಹಾಕಿದ್ರು ಆಶ್ಚರ್ಯವಿಲ್ಲ. ಚೇಲಾ ಮಾತು ಕೇಳಿ ನಾಮಿನೇಟ್ ಮಾಡಿದ್ದಾರೆ ಅಂತಾ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬಿಜೆಪಿ ಒಂದು ಕುಟುಂಬದ ಪಕ್ಷ ಆಗುವುದಕ್ಕೆ ಒಪ್ಪಲ್ಲ ಅಂತ ಯಾರು ಹೇಳಿದ್ದು. ಯಾರ ಬಣ್ಣ ಬಯಲು ಮಾಡಿರೋದು ಅವರು.…
ಸಾಮಾನ್ಯವಾಗಿ ಪ್ರತಿಯೊಬ್ಬರು ಹೆಚ್ಚು ಚಹಾ ಸೇವಿಸಲು ಲೈಕ್ ಮಾಡ್ತಾರೆ. ಒಂದು ಕಪ್ ಚಹಾ ಸೇವಿಸಿಯೇ ಬಹುತೇಕ ಜನರು ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ಚಹಾ ತಲೆನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ಜನರು ತುಂಬಾ ಉತ್ಸಾಹದಿಂದ ಟೀ ಸೇವಿಸುತ್ತಾ ಪಕೋಡಗಳನ್ನು ಸವಿಯುತ್ತಾರೆ. ಅದೇ ರೀತಿ ಶೀತ ಋತುವಿನಲ್ಲಿ ಚಹಾ ಸೇವನೆ ಹೆಚ್ಚಾಗುತ್ತದೆ. ಶೀತವನ್ನು ತಪ್ಪಿಸಲು ಜನರು ಪ್ರತಿದಿನ ಶುಂಠಿ ಚಹಾವನ್ನು ಸೇವಿಸುತ್ತಾರೆ. ಕೆಲವರು ಚಹಾವನ್ನು ತಪ್ಪಾದ ರೀತಿಯಲ್ಲಿ ಸೇವಿಸುತ್ತಾರೆ. ಕೆಲವೊಮ್ಮೆ ನಾವು ಹೆಚ್ಚು ಚಹಾ ಕುಡಿಯುತ್ತೇವೆ. ಕೆಲವೊಮ್ಮೆ ನಾವು ಖಾಲಿ ಹೊಟ್ಟೆಯಲ್ಲಿಯೇ ಚಹಾವನ್ನು ಕುಡಿಯುತ್ತೇವೆ. ಕೆಲವರು ಆಹಾರವನ್ನು ಸೇವಿಸಿದ ನಂತರ ರಾತ್ರಿ ವೇಳೆ ಚಹಾವನ್ನು ಕುಡಿಯುತ್ತೇವೆ. ಚಹಾವು ಅನೇಕ ಸಣ್ಣ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಆದರೆ ತಪ್ಪಾದ ರೀತಿಯಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ಅಪಾಯಕಾರಿ. ನೀವೂ ಕೂಡ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುತ್ತಿದ್ದರೆ ತಪ್ಪದೇ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಅಧಿಕ ಬಿಪಿ ಮತ್ತು ಹೃದಯಾಘಾತ ರೋಗಿಗಳು ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬಹುದೇ…
ಹಾರ್ದಿಕ್ ಪಾಂಡ್ಯ ತಮ್ಮ ಸಹ ಆಟಗಾರರಿಗಾಗಿ ವಿಶೇಷ ಸಂದೇಶವನ್ನು ಪೋಸ್ಟ್ ಮಾಡಿ ಶತಕೋಟಿ ಅಭಿಮಾನಿಗಳಿಗಾಗಿ ಕಪ್ ಗೆಲ್ಲುವಂತೆ ಟೀಮ್ ಇಂಡಿಯಾವನ್ನು ಹುರಿದುಂಬಿಸಿದ್ದಾರೆ. ಹುಡುಗರೇ, ಈ ತಂಡದ ಬಗ್ಗೆ ನನಗೆ ಹೆಚ್ಚು ಹೆಮ್ಮೆ ನಾವು ಇಲ್ಲಿಯವರೆಗೆ ಬಂದಿದ್ದೇವೆ. https://twitter.com/hardikpandya7/status/1725820002367156597?ref_src=twsrc%5Etfw%7Ctwcamp%5Etweetembed%7Ctwterm%5E1725820002367156597%7Ctwgr%5E01532ae319658ec21b57f8d7c2ebb5ab867e47a3%7Ctwcon%5Es1_c10&ref_url=http%3A%2F%2Fapi-news.dailyhunt.in%2F ನಾವು ಎಷ್ಟು ದೂರ ಸಾಗಿ ಬಂದಿದ್ದೇವೆ ಎಂಬುದು ನಮ್ಮ ಹಿಂದಿನ ವರ್ಷಗಳ ಪರಿಶ್ರಮಕ್ಕೆ ಕ್ರೆಡಿಟ್ ಆಗಿದೆ. ನಾವು ಈಗ ವೈಭವದಿಂದ ಒಂದು ಹೆಜ್ಜೆ ಮಾತ್ರ ದೂರದಲ್ಲಿದ್ದೇವೆ. ನಾವು ವಿಶೇಷವಾದದ್ದನ್ನು ಮಾಡುವ ಕನಸು ಚಿಕ್ಕಂದಿನಿಂದಲೂ ಕಂಡಿದ್ದೇವೆ. ನಮಗಾಗಿ ಮಾತ್ರವಲ್ಲದೆ ನಮ್ಮ ಹಿಂದೆ ಇರುವ ಶತಕೋಟಿ ಜನರಿಗಾಗಿ ಕಪ್ ಎತ್ತಬೇಕು. ಯಾವಾಗಲೂ ನಿಮ್ಮೊಂದಿಗೆ ನನ್ನ ಪೂರ್ಣ ಹೃದಯದ ಪ್ರೀತಿ ಇದೆ. ಕಪ್ ಅನ್ನು ಮನೆಗೆ ತರೋಣ. ಜೈ ಹಿಂದ್’ ಎಂದು ಪಾಂಡ್ಯ ಎಕ್ಸ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು 2023 ರ ಕ್ರಿಕೆಟ್ ವಿಶ್ವಕಪ್ನ ಮಧ್ಯದಲ್ಲಿ ಗಾಯದ ಕಾರಣ ಹೊರಗುಳಿದಿದ್ದರಿಂದ ದೊಡ್ಡ ಮಟ್ಟದ ನೋವಿಗೆ ಗುರಿಯಾಗಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಲೀಗ್…
ಅಹಮದಾಬಾದ್: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ನಿರ್ಣಾಯಕ ಹಂತಕ್ಕೆ ತಲುಪಿದೆ. ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಲಿವೆ. ಫೈನಲ್ನಲ್ಲಿ ಸೆಣಸುತ್ತಿವೆ. 2003ರಲ್ಲಿ ದಕ್ಷಿಣ ಆಫ್ರಿಕಾದ ಜೋಹನ್ಸ್ಬರ್ಗ್ನಲ್ಲಿ ಕೊನೆಯ ಬಾರಿ ಭಾರತ ಹಾಗೂ ಆಸೀಸ್ ಫೈನಲ್ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿ ರನ್ನರ್ ಅಪ್ಗೆ ತೃಪ್ತಿಪಟ್ಟುಕೊಂಡಿತ್ತು. ಐಸಿಸಿ ಟೂರ್ನಿಯ ಫೈನಲ್ನಲ್ಲಿ ಉಭಯ ತಂಡಗಳು ಇದೀಗ ಮೂರನೇ ಬಾರಿ ಮುಖಾಮುಖಿಯಾಗುತ್ತಿವೆ. 2023ರ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಗೆಲುವು ಪಡೆದಿತ್ತು. ಇನ್ನೂ ಟೀಮ್ ಇಂಡಿಯಾ ಐಸಿಸಿ ಟೂರ್ನಿಯ ಫೈನಲ್ನಲ್ಲಿ ಆಸೀಸ್ ವಿರುದ್ದ ಗೆದ್ದೇ ಇಲ್ಲ. ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಇಲ್ಲಿಯವರೆಗೂ ಆಡಿದ ಎಲ್ಲಾ 10 ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಅಜೇಯ…
ಕ್ರೀಡಾಭಿಮಾನಿಗಳು ಹಾಗೂ ಇಡೀ ಭಾರತವೇ ಕಾತುರದಿಂದ ಕಾಯುತ್ತಿರುವ ಇಂಡಿಯಾ V/s ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಭಾರತ ತಂಡ ಗೆಲ್ಲಲಿ ಎಂದು ನಾನಾ ರೀತಿ ಪ್ರಾರ್ಥನೆ ಪೂಜೆಗಳನ್ನು ಮಾಡಲಾಗುತ್ತಿದೆ. ಈ ನಡುವೆ ಬಿಜೆಪಿ ನಾಯಕ ಭಾರತ ತಂಡ ಗೆದ್ದಲ್ಲಿ ಪ್ರತಿ ಆಟಗಾರನಿಗೆ ಒಂದೊಂದು ನಿವೇಶನ ನೀಡುವುದಾಗಿ ಹೇಳಿದ್ದಾರೆ. ನಡೆಯುತ್ತಿರುವ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದೆ. ಲೀಗ್ ಹಂತದಲ್ಲಿ 9 ಪಂದ್ಯಗಳನ್ನು ಗೆದ್ದಿದ್ದು, ಸೆಮೀಸ್ನಲ್ಲೂ ಜಯದ ಓಟ ಮುಂದುವರೆಸಿ ಫೈನಲ್ಗೆ ಪ್ರವೇಶಿಸಿದೆ. ತಂಡ ಎಲ್ಲ ವಿಭಾಗದಲ್ಲೂ ಅದ್ಭುತವಾಗಿದ್ದು, ಗೆಲ್ಲುವ ಫೇವರಿಟ್ ಆಗಿದೆ. ಭಾರತ ತಂಡ ಗೆದ್ದಲ್ಲಿ ಪ್ರತಿ ಆಟಗಾರರಿಗೆ ನಿವೇಶನ ಒಂದನ್ನು ನೀಡುವುದಾಗಿ ರಾಜ್ಕೋಟ್ ಜಿಲ್ಲಾ ಬಿಜೆಪಿ ನಾಯಕ ಕೆಯೂರ್ ಧೋಲಾರಿಯಾ ಘೋಷಿಸಿದ್ದಾರೆ. “ಭಾರತ ತಂಡ ವಿಶ್ವಕಪ್ ಗೆದ್ದರೆ 15 ಆಟಗಾರರು, ಕೋಚ್ ಸೇರಿದಂತೆ 16 ಮಂದಿಗೆ ನಿವೇಶನ ನೀಡಲಾಗುವುದು. ಈ ನಿವೇಶನಗಳು ಭಯಸರ್ – ಕತ್ರೋಟ್ ಶಿವಂ ಜೆಮಿನ್…
ಬೆಂಗಳೂರು:- ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ ಹಾಗೂ ಒಕ್ಕಲಿಗ ನಾಯಕರಾದ ಆರ್ ಅಶೋಕ್ ಅವರನ್ನ ವಿರೋಧ ಪಕ್ಷದ ನಾಯಕನನ್ನಾಗಿ ಬಿಜೆಪಿ ಆಯ್ಕೆ ಮಾಡಿದ್ದು, ಉತ್ತರ ಕರ್ನಾಟಕ ಭಾಗ ಬಿಜೆಪಿ ನಾಯಕರು ಅಸಮಾಧಾನವನ್ನ ವ್ಯಕ್ಯಪಡಿಸಿದ್ದಾರೆ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಕಮಲ ಪಾಳಯದ ಹಲವು ನಾಯಕರು ಅಸಮಾಧಾನಗೊಂಡಿದ್ರು, ಇದೀಗ ವಿಪಕ್ಷ ಸ್ಥಾನಕ್ಕಾಗಿ ಉತ್ತರ ಕರ್ನಾಟಕದ ಹಲವು ನಾಯಕರು ಬೇಡಿಕೆ ಇಟ್ಟಿದ್ದು, ಆರ್ ಅಶೋಕ್ ಅವರಿಗೆ ವಿಪಕ್ಷ ಸ್ಥಾನವನ್ನ ನೀಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ರಾತ್ರಿ ಪ್ರತಿಪಕ್ಷ ನಾಯಕನ ಆಯ್ಕೆ ಕುರಿತು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೆ ಮುನಿಸಿಕೊಂಡು ತೆರಳಿದ್ದ ಶಾಸಕ ರಮೇಶ್ ಜಾರಕಿಹೊಳಿ ಇದೀಗ ಪಕ್ಷದ ರಾಜ್ಯ ಘಟದ ಅಧ್ಯಕ್ಷರ ನೇಮಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕಾಂಗ ಸಭೆಗೂ ಮುನ್ನ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಸವನಗೌಡ…
ಟಿವಿ, ಮೊಬೈಲ್ ಎಂದರೆ ಮಕ್ಕಳಿಗೆ ಬಹಳ ಇಷ್ಟ. ಆದರೆ, ಇವುಗಳನ್ನು ನೋಡುವುದರಿಂದ ಮಕ್ಕಳ ಕಣ್ಣಿಗೆ ಮಾತ್ರವಲ್ಲ ಮೆದುಳಿನ ಆರೋಗ್ಯಕ್ಕೂ ಅಪಾಯಕಾರಿ ಎಂದು ನಿಮಗೆ ಗೊತ್ತಾ? ಮೊಬೈಲ್, ಟಿವಿ ಸ್ಕ್ರೀನ್ ನೋಡುವ ಮಕ್ಕಳಯೋಚನಾ ಶಕ್ತಿ ಕಡಿಮೆಯಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ವಿಜ್ಞಾನಿಗಳು ಮತ್ತು ಸಂಶೋಧಕರ ಗುಂಪು ಫೋನ್ಗಳು ಮತ್ತು ಟಿವಿಗಳಂತಹ ಸ್ಕ್ರೀನ್ಗಳನ್ನು ನೋಡುವ ಮಕ್ಕಳ ಕುರಿತು ಅನೇಕ ಅಧ್ಯಯನಗಳನ್ನು ನಡೆಸಿದೆ. ಅದರಿಂದ ವಿಭಿನ್ನ ಫಲಿತಾಂಶಗಳನ್ನು ಕಂಡುಕೊಂಡಿದೆ. ಸ್ಕ್ರೀನಿಂಗ್ ಸಮಯವು ಮಕ್ಕಳ ಆರೋಗ್ಯ ಮತ್ತು ಸಂತೋಷದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ನೋಡಲು ಅವರು ಈ ಅಧ್ಯಯನ ನಡೆಸಿದ್ದರು. ಈ ಅಧ್ಯಯನದ ಫಲಿತಾಂಶವನ್ನು ನೋಡಿದಾಗ, ಮಕ್ಕಳ ಮೇಲೆ ಮೊಬೈಲ್, ಟಿವಿ ಪ್ರಭಾವವು ಮಿಶ್ರಣವಾಗಿದೆ ಎಂದು ಕಂಡುಬಂದಿದೆ. ಉದಾಹರಣೆಗೆ, ವಯಸ್ಕರು ಟಿವಿ, ಮೊಬೈಲ್ ನೋಡದಿದ್ದರೆ ಮಕ್ಕಳು ಕೂಡ ನೋಡುವ ಸಾಧ್ಯತೆ ಕಡಿಮೆ. ಹಾಗೇ, ಟಿವಿ, ವಿಡಿಯೋ ಗೇಮ್, ಮೊಬೈಲ್ನಲ್ಲಿ ಹೆಚ್ಚು ಸಮಯ ಕಳೆಯುವ ಮಕ್ಕಳ ಶಾಲೆಯಲ್ಲಿ ಅವರು ಹೆಚ್ಚು ಆಯಕ್ಟಿವ್ ಆಗಿರುವುದಿಲ್ಲ ಎಂದು ಕೂಡ ಕಂಡುಬಂದಿದೆ.…
ಕೃಷಿಕರ ಬೇಸಾಯಕ್ಕೆ ಧನಸಹಾಯವಾಗಿ ಸರ್ಕಾರ ಆರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) 15ನೇ ಕಂತಿನ ಹಣ ನವೆಂಬರ್ 15ರಂದು ಬಿಡುಗಡೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಝಾರ್ಖಂಡ್ನ ಖೂಂಟಿಯಲ್ಲಿ (Khunti, Jharkhand) ಹೊಸ ಕಂತಿನ ಹಣ ಬಿಡುಗಡೆಯಾಗಿರುವುದನ್ನು ಪ್ರಕಟಿಸಿದರು. ಎಂಟು ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 2,000 ರೂ ಹಣ ವರ್ಗಾವಣೆ ಆಗಿದೆ. ಬಹುತೇಕ ಮಂದಿಯ ಖಾತೆಗೆ ಹಣ ಬಂದಿದೆ. ಸರ್ಕಾರ 15ನೇ ಕಂತಿಗೆ ಒಟ್ಟು 18,000 ಕೋಟಿ ರೂ ಹಣ ವೆಚ್ಚ ಮಾಡಿದೆ. ಇಲ್ಲಿಯವರೆಗೆ ಎಲ್ಲಾ 15 ಕಂತುಗಳಿಂದ ಒಟ್ಟು ಹಣ 2.75 ಲಕ್ಷ ಕೋಟಿ ರೂ ಆಗಿದೆ. ಪಿಎಂ ಕಿಸಾನ್ ಸ್ಕೀಮ್ನಲ್ಲಿ 15ನೇ ಕಂತಿನ ಹಣ ಬಂದಿಲ್ಲದಿದ್ದರೆ ಅದಕ್ಕೆ ಕಾರಣಗಳಿವು… ಯೋಜನೆಗೆ ಇನ್ನೂ ನೊಂದಾವಣಿ ಆಗಿಲ್ಲದೇ ಇರಬಹುದು. ಇಕೆವೈಸಿ ಆಗಿಲ್ಲದೇ ಇರಬಹುದು, ಅಥವಾ ಸರಿಯಾಗಿ ಮಾಡಿಲ್ಲದೇ ಇರಬಹುದು. ಯೋಜನೆಯ ಅರ್ಹತಾ ಮಾನದಂಡ ಒದಗಿಸಲು ವಿಫಲವಾಗಿರಬಹುದು ನೀವು ಪಿಎಂ ಕಿಸಾನ್…
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ( ಬಿಇಎಂಎಲ್ ), ಬೆಂಗಳೂರು ಕಚೇರಿಯು ವಿವಿಧ 101 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಹುದ್ದೆಗಳ ವಿವರ ಎಕ್ಸಿಕ್ಯೂಟಿವ್ ಡೈರೆಕ್ಟರ್ (ಆಪರೇಷನ್ಸ್ ಎಕ್ಸಲೆನ್ಸ್): 01 ಎಕ್ಸಿಕ್ಯೂಟಿವ್ ಡೈರೆಕ್ಟರ್ (ಸ್ಟ್ರಾಟೆಜಿ / ಅಲಾಯನ್ಸ್ ಮ್ಯಾನೇಜ್ಮೆಂಟ್) : 01 ಎಕ್ಸಿಕ್ಯೂಟಿವ್ ಡೈರೆಕ್ಟರ್ (ಎಂಜಿನ್ಸ್) : 01 ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ ಆರ್ ಅಂಡ್ ಡಿ: 02 ಅಸಿಸ್ಟಂಟ್ ಮ್ಯಾನೇಜರ್ – ಆರ್ ಅಂಡ್ ಡಿ : 31 ಡೆಪ್ಯೂಟಿ ಜೆನೆರಲ್ ಮ್ಯಾನೇಜರ್- ಮಾರ್ಕೆಟಿಂಗ್ : 03 ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್- ಪ್ಲಾನಿಂಗ್ : 01 ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್ – ಕ್ವಾಲಿಟಿ ಇಂಜಿನಿಯರಿಂಗ್ : 01 ಸೀನಿಯರ್ ಮ್ಯಾನೇಜರ್ – ಪ್ರೊಡಕ್ಷನ್ ಕಂಟ್ರೋಲ್ : 01 ವಿದ್ಯಾರ್ಹತೆ : ವಿವಿಧ ವಿಭಾಗಗಳಲ್ಲಿ ಇಂಜಿನಿಯರಿಂಗ್ ಪದವಿ ಪಾಸ್ ಮಾಡಿರಬೇಕು. ವಯಸ್ಸಿನ ಅರ್ಹತೆಗಳು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ 45 ವರ್ಷ ಗರಿಷ್ಠ ಮಿತಿ. ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ ಹುದ್ದೆಗೆ 45 ವರ್ಷ ಗರಿಷ್ಠ ಮಿತಿ.…