ಸಿಂಪಲ್ ಸುನಿ ಹಾಗೂ ವಿನಯ್ ರಾಜ್ ಕುಮಾರ್ ಸಂಗಮದ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಫೆಬ್ರವರಿ 8ಕ್ಕೆ ಈ ಚಿತ್ರ ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಈಗಾಗಲೇ ಒಂದು ಸರಳ ಪ್ರೇಮಕಥೆ ಬಳಗ ಪ್ರಚಾರದ ಪಡಸಾಲೆಗೆ ಧುಮುಕಿದೆ. ಅದರ ಭಾಗವಾಗಿ ಇಂದು ನಾಯಕಿ ಸ್ವಾತಿಷ್ಠ ಕೃಷ್ಣನ್ ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಲಾಗಿದೆ. ದಕ್ಷಿಣ ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಕ್ಯಾರೆಕ್ಟರ್ ಟೀಸರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಸ್ವಾತಿಷ್ಠ ಕೃಷ್ಣನ್ ಅನುರಾಗ ಎಂಬ ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರಿಗೂ ಯಾವುದಕ್ಕೂ ಜಗ್ಗದೇ ಧೈರ್ಯವಾಗಿ ಮುನ್ನುಗ್ಗುವಾಗ ಜರ್ನಲಿಸ್ಟ್ ಆಗಿ ಪ್ರತ್ಯಕ್ಷರಾಗಿದ್ದಾರೆ. ಕಮಲ್ ಹಾಸನ್ ನಟನೆಯ ವಿಕ್ರಮ್ ಸೇರಿದಂತೆ ಒಂದಷ್ಟು ತಮಿಳು ಸಿನಿಮಾದಲ್ಲಿ ನಟಿಸಿರುವ ಸ್ವಾತಿಷ್ಠಗೆ ಒಂದು ಸರಳ ಪ್ರೇಮಕಥೆ ಚೊಚ್ಚಲ ಕನ್ನಡ ಸಿನಿಮಾವಾಗಿದೆ. ಇದೇ ಮೊದಲ ಬಾರಿಗೆ ದೊಡ್ಮನೆಯ ಹೀರೋ ವಿನಯ್ ರಾಜ್ ಕುಮಾರ್ ಗೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ವಿನಯ್ ನಾಯಕನಾಗಿ ನಟಿಸಿರುವ…
Author: AIN Author
ಬೆಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದಾರೆ. ಈ ಸಂಬಂಧ ಸಿಎಂ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರೇ ನೀವು ನಿಜವಾದ ರಾಮಭಕ್ತರೇ ಅಗಿದ್ದರೆ ಚುನಾವಣೆಯ ವೇಳೆ ನಿಮ್ಮ ಪ್ರಣಾಳಿಕೆಯ ಮೂಲಕ ಈ ದೇಶದ ಜನತೆಗೆ ನೀಡಿದ್ದ ವಾಗ್ದಾನದಲ್ಲಿ ಎಷ್ಟು ವಾಗ್ದಾನಗಳನ್ನು ಈಡೇರಿಸಿದ್ದೀರಿ? ಎಷ್ಟನ್ನು ಈಡೇರಿಸಬೇಕಿದೆ ಎನ್ನುವುದನ್ನು ಅಯೋಧ್ಯೆಯಲ್ಲಿ ತಾವು ಇಂದು ಉದ್ಘಾಟಿಸುತ್ತಿರುವ ರಾಮಮಂದಿರದಲ್ಲಿ ನಿಂತು ಪ್ರಮಾಣ ಮಾಡಿ ಹೇಳಿ ಎಂದು ಸವಾಲು ಹಾಕಿದ್ದಾರೆ. ಎಕ್ಸ್ನಲ್ಲೇನಿದೆ..?: ನನಗೆ ತಿಳಿದಿರುವ ರಾಮ, ನಾನು ಪೂಜಿಸುವ ರಾಮ ವಚನ ಪರಿಪಾಲನೆಯನ್ನೇ ತನ್ನ ಉಸಿರಾಗಿಸಿಕೊಂಡವನು. ನನಗೆ ತಿಳಿದಿರುವ ಹನುಮ, ನಾನು ಪೂಜಿಸುವ ಹನುಮ ರಾಮನಾಮಕ್ಕಿಂತ ಮಿಗಿಲಿಲ್ಲ, ರಾಮನೇ ಜಗವೆಲ್ಲಾ ಎಂದು ತಿಳಿದು ರಾಮಭಕ್ತಿಯನ್ನೇ ಎದೆಯೊಳಗೆ ಇಳಿಸಿಕೊಂಡವನು. ಹನುಮನ ನಾಡಿನವರಾದ ನಮಗೆ ರಾಮನ ಬಗ್ಗೆ, ರಾಮಭಕ್ತಿಯ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ. ಅದೊಂದು ತೋರ್ಪಡಿಕೆಯ ವಿದ್ಯಮಾನವೂ ಅಲ್ಲ. ರಾಮಭಕ್ತಿ ನಿರಂತರ. ವೈಯಕ್ತಿಕವಾಗಿ ನಾನು,…
ಕಲಬುರಗಿ: ಅಯೋಧ್ಯೆಯಲ್ಲಿ ಮತ್ತೆ ಪ್ರಭು ಶ್ರೀರಾಮ ಚಂದ್ರನ ಆಗಮನವಾದ ಕಾರಣ ಸಂಜೆ ಎಲ್ಲರೂ ದೀಪ ಬೆಳಗಿಸುವಂತೆ ಪ್ರಧಾನಿ ಮೋದಿ ಕರೆಕೊಟ್ಟ ಹಿನ್ನಲೆ ಕಲಬುರಗಿಯಲ್ಲಿ ದೀಪೋತ್ಸವ ಜೋರಾಗಿತ್ತು. ಇಡೀ ನಗರದ ಎಲ್ಲೆಡೆ ದೀಪಗಳು ಜಗಮಗಿಸುತಿದ್ದವು. ಇದೇವೇಳೆ ಮಹಾದಾಸೋಹಿ ಶರಣನ ಗುಡಿ ಅಂಗಳದಲ್ಲಿ ಬೆಳಕಿನ ಬಾಣ ಬಿರುಸುಗಳು ಆಕಾಶಕ್ಕೆ ಮುತ್ತಿಕ್ಕುತ್ತಿದ್ದವು. ಪ್ರಭು ಶ್ರೀರಾಮನ ಭವ್ಯ ಮೂರ್ತಿಯು ನೋಡುಗರ ಕಣ್ಮನ ಸೆಳೆಯುತಿತ್ತು.. ಮಾತ್ರವಲ್ಲ ರಾಮ ಸೀತೆ ಲಕ್ಷ್ಮಣ ಈ ಮೂವರ ವೇಷಾಧಾರಿಗಳು ರಾಮೋತ್ಸವಕ್ಕೆ ಮೆರಗು ತಂದಿದ್ದು ಎದ್ದು ಕಾಣುತಿತ್ತು..
ಹುಬ್ಬಳ್ಳಿ: ಅಯೋಧ್ಯೆಯ ಭವ್ಯವಾದ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ನಗರದ ಘೋಡಕೆ ಓಣಿ ಹಳೇ ಹುಬ್ಬಳ್ಳಿಯಲ್ಲಿ ಢೋರ ಕಕ್ಕಯ್ಯಾ ಸಮಾಜದ ವತಿಯಿಂದ ಏಳು ಮಕ್ಕಳ ತಾಯಿ ದೇವಸ್ಥಾನ ಆವರಣದಲ್ಲಿ ಶ್ರೀ ರಾಮ ಭಾವ ಚಿತ್ರಕ್ಕೆ ಪುಪ್ಪಾರ್ಚನೆ ಯೊಂದಿಗೆ ಶ್ರದ್ಧೆಯಿಂದ ಪೂಜೆ ನರೆವೇರಿಸಲಾಯಿತು. ಈ ಅವಧಿಯಲ್ಲಿ ಘೋಡಕೆ ಓಣಿಯ ಪಂಚಾಯತ್ ಅಧ್ಯಕ್ಷ ಗುರುನಾಥ ಘೋಡಕೆ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ ಘೋಡಕೆ, ಅರುಣೋದಯ ಯುವಕ್ ಮಾಡಳದ ಅಧ್ಯಕ್ಷ ವಿನೋದ್ ಹುಟಗಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಹೋಟಕರ, ಮಧುಕರ ಘೋಡಕೆ, ಅನಿಲ ನಾರಾಯಣಕರ, ಬಾಳು ಪೋಳ್, ಮಾಣಿಕರಾವ್ ಘೋಡಕೆ, ರವಿಕುಮಾರ್ ಹುಟಗಿ, ಶ್ರೀನಿವಾಸ್ ಘೋಡಕೆ ಕಿರಣ ಘೋಡಕೆ, ಸಿದ್ದಪ್ಪ ಘೋಡಕೆ, ಮಹಿಳೆಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಓಣಿಯ ನಾಗರಿಕರು ಭಾಗವಹಿದ್ದರು.
ಕಲಘಟಗಿ: ಇಂದು ಅಯೋಧ್ಯದಲ್ಲಿ ಶ್ರೀರಾಮಚಂದ್ರ ಪ್ರಭುವಿನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಸಂತು ಸೈದು ಗೌಳಿ ದಡ್ಡಿಯ ಧನಗರ ಗೌಳಿ ಗೌಳಿ ಜನಾಂಗದವರು ಬಹು ವಿಜೃಂಭಣೆಯಿಂದ ಆಚರಿಸಿದರು ಅದೇ ರೀತಿಯಾಗಿ ಕಲಘಟಗಿ ಪ್ರಮುಖ ರಸ್ತೆಗಳಲ್ಲಿ ಕೇಸರಿಮಯವಾದ ವಾತಾವರಣ ನಿರ್ಮಾಣವಾಗಿತ್ತು ಚಿಕ್ಕ ಮಕ್ಕಳನ್ನು ರಾಮ ಲಕ್ಷ್ಮಣ ವೇಷಧಾರಿಗಳನ್ನು ಮಾಡಿ ಬೈಕ ಮೇಲೆ ಸಂಚಾರ ಮಾಡಿರುವುದು ವಿಶೇಷವಾಗಿತ್ತು.
ಅಯೋದ್ಯಯಲ್ಲಿ ಇಂದು ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮ ಸಡಗರ ಜೋರಾಗಿದೆ. ಪ್ರತಿ ರಾಜ್ಯ, ಜಿಲ್ಲೆ ತಾಲೂಕಿನ ಸೇರಿದಂತೆ ಹಳ್ಳಿ ಹಳ್ಳಿ ಗಲ್ಲಿ ಗಲ್ಲಿ ಯಲ್ಲಿ ರಾಮನ ಸ್ಮರಣೆ ಜೋರಾಗಿದ್ದು ರಾಷ್ತ್ರೀಯ ಹಬ್ಬಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಕುಂದಾನಗರಿ ಬೆಳಗಾವಿಯಲ್ಲಿ ಪ್ರಭುರಾಮಚಂದ್ರನ ಆರಾಧನೆ ಜೋರಾಗಿದ್ದು ಎಲ್ಲವೂ ರಾಮಮಯವಾಗಿದೆ ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಹೌದು. ಎಲ್ಲೆಲ್ಲಿಯೂ ರಾರಾಜಿಸುತ್ತಿರುವ ಕೇಸರಿ ಬಾವುಟ, ಶ್ರೀರಾಮ ಭಾವಚಿತ್ರ. ಇನ್ನೊಂದು ಕಡೆ ದೇವಸ್ಥಾನಕ್ಕೆ ಹಿರಿದು ಬಂದ ಭಕ್ತರಿಂದ ವಿಶೇಷ ಪೂಜೆ, ಪಟಾಕಿ ಸಿಡಿಸಿ ಮೆರವಣಿಗೆ ಸಂಭ್ರಮ ಸಡಗರ ಇಂತಹ ಮನಮೋಹಕ ದೃಶ್ಯ ಕಂಡು ಬಂದಿದ್ದು ಕುಂದಾನಗರಿ ಬೆಳಗಾವಿಯಲ್ಲಿ. ಇಂದು ಅಯೋಧ್ಯೆಯಲ್ಲಿ ಮರ್ಯಾದಾಪುರಷೊತ್ತಮ ಪ್ರಭು ಶ್ರೀರಾಮ ಚಂದ್ರನ ಮೂರ್ತಿ ಪ್ರಾಣ ಪ್ರತಿಷ್ಠಾನ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಗಲ್ಲಿ ಗಲ್ಲಿ ಯಲ್ಲಿ ರಾಮನ ಜಪ ಜೋರಾಗಿದ್ದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಹಿಮು ಕಲಾನಿ ಚೌಕನಲ್ಲಿ ರಾಮನ ಭಕ್ತರು ಅನ್ನ ಸಂತರ್ಪಣೆ ಮಾಡಿದ್ರೆ ಬೆಳಗಾವಿ ಖಡಕ್ ಗಲ್ಲಿ, ರಾಮಖಿಂಡಗಲ್ಲಿ…
ಹುಬ್ಬಳ್ಳಿ: ನಾಟ್ಯಾಂಜಲಿ ಕಲಾಮಂದಿರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಸವಾಯಿ ಗಂಧರ್ವ ಹಾಲ್ ಹುಬ್ಬಳ್ಳಿಯಲ್ಲಿ ಜರುಗಿತು. ಸುಮಾರು 21 ನೃತ್ಯಗಳು 200 ವಿದ್ಯಾರ್ಥಿಗಳಿಂದ ನೃತ್ಯಕಾರ್ಯಕ್ರಮವು ನೆರವೇರಿಸಲ್ಪಟ್ಟಿತು. ಕಿಕ್ಕಿರಿದ ಸಭಾಂಗಣದಲ್ಲಿ ಪ್ರಮುಖವಾಗಿ ಸೀತಾರಾಮ ಕಲ್ಯಾಣ ಹಾಗೂ ಮಹಿಷಾಸುರ ನೃತ್ಯರೂಪಕಗಳು ಪ್ರೇಕ್ಷಕರನ್ನು ಮನರಂಜಿಸಿ ಮಂತ್ರ ಮುಗ್ದರನ್ನಾಗಿಸಿತು. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ವಿದುಷಿ ಸುನೀತಾ ಪೂಜಾರಿ, ಮುಖ್ಯ ಅತಿಥಿಗಳಾಗಿ ಜಿ. ಎಸ್. ಗದಗ, ಅಧ್ಯಕ್ಷತೆಯನ್ನು ವಿನೋದ ಮುಕ್ತೆದಾರ ವಹಿಸಿದ್ದರು.ಈ ಸಂದರ್ಭದಲ್ಲಿ ನಾಟ್ಯ ವಿದೂಷಿ ರೋಹಿಣಿ ಭಟ್ಟಕೂರ್ಸೆ ಹಾಗೂ ವಿದೂಷಿ ಅಲ್ಕಾ ಪ್ರಭು ಇವರಿಗೆ ನಾಟ್ಯರಮಣಿ ಎಂಬ ಬಿರುದಿನಿಂದ ಸನ್ಮಾನಿಸಲಾಯಿತು. ಹಾಗೇ ನಾಟ್ಯಾಂಜಲಿ ಕಲಾಮಂದಿರದ ಅಧ್ಯಕ್ಷೆ ವಿದೂಷಿ ಸೌಭಾಗ್ಯ (ವನಿತಾ) ಮಹಾಲೆ ಇವರಿಗೆ ಗುರು ವಂದನೆಯನ್ನು ಮಾಡಲಾಯಿತು. ವಿಶೇಷವಾಗಿ ಕೊನೆಯಲ್ಲಿ 200 ವಿದ್ಯಾರ್ಥಿಗಳಿಂದ ಒಂದೇ ವೇದಿಕೆಯಲ್ಲಿದ್ದರು ರಾಮಮಂದಿರದ ಪ್ರಾಣಪ್ರತಿಷ್ಠಾಪನೆಉದ್ಘಾಟನೆಯ ಅಂಗವಾಗಿ ಮಕ್ಕಳಿಂದ ರಾಮ ಭಜನೆ ನೃತ್ಯವನ್ನು ಮಾಡಲಾಯಿತೆಂದು ಸಂಘದ ಅಧ್ಯಕ್ಷೆ ವಿದೂಷಿ ಸೌಭಾಗ್ಯ ಮಹಾಲೆ ತಿಳಿಸಿದರು.
ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಲಾಡು ವಿತರಣೆಯನ್ನು ವಿಕ್ಟೊರಿಯಾ ರಸ್ತೆಯ ದೊಂಗಡಿ ಕುಟುಂಬದಿಂದ ಮಾಡಿದರು. ರಾಮೋತ್ಸವ ಆಚರಿಸುತ್ತಿರೋ ದೊಂಗಡಿ ಕುಟುಂಬ 8 ಸಾವಿರ ಲಾಡು ಸಿದ್ದಪಡಿಸಿದ್ದು, ಲಾಡು ಜೊತೆಗೆ ಮಿರ್ಚಿ ಇತ್ಯಾದಿ ವಿತರಿಸಿದರು
ಹುಬ್ಬಳ್ಳಿ,: ಸಾಕಷ್ಟು ವಿವಾದ ಸೃಷ್ಟಿಸಿದ್ದ ನಗರದ ಎಂಟಿಎಸ್ ಕಾಲೋನಿಯ 13 ಎಕರೆ ಜಮೀನಿನ ಟೆಂಡರ್ ಪ್ರಕ್ರಿಯೆಯನ್ನು ರೈಲ್ವೆ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ ಬೋರ್ಡ್ ರದ್ದುಗೊಳಿಸಿ ಆದೇಶಿಸಿದೆ. ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಎಂಡಿಎಸ್ ಕಾಲೋನಿಯ 13 ಎಕರೆ ಜಮೀನನ್ನು 99 ವರ್ಷಗಳಿಗೆ ಲೀಸ್ಗೆ ನೀಡಲು ಟೆಂಡರ್ ಕರೆಯಲಾಗಿತ್ತು. ಈ ಬಗ್ಗೆ ರೈಲ್ವೇ ಭೂಮಿ ಅಭಿವೃದ್ಧಿ ಪ್ರಾಧಿಕಾರವು 13 ಎಕರೇ ಜಮೀನು ಲೀಸ್ಗೆ ಇದೆ ಎಂದು ಬೋರ್ಡ್ ಹಾಕಿತ್ತು. ಈ ವಿಚಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೆಸರು ತಳಕು ಹಾಕಿತ್ತು. ಜೋಶಿ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಗಂಭೀರ ಆರೋಪ ಮಾಡಿದ್ದರು. 1300 ಕೋಟಿ ಭ್ರಷ್ಟಾಚಾರದಲ್ಲಿ ಪ್ರಲ್ಹಾದ್ ಜೋಶಿ ಭಾಗಿಯಾಗಿದ್ದಾರೆ. ಸರ್ಕಾರಿ ಜಮೀನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ, ಸ್ಥಳೀಯ ಮಟ್ಟದಲ್ಲಿ ಕೈ ನಾಯಕರು ಹೋರಾಟ ಮಾಡಿದ್ದರು. ಇದೀಗ ರೇಲ್ವೆ ಅಥಾರಿಟಿ ಡೆವೆಲಪ್ಮೆಂಟ್ ಬೋರ್ಡ್, ಜಮೀನನ್ನು ಲೀಸ್ಗೆ ನೀಡುವ ಟೆಂಡರ್ ಪ್ರಕ್ರಿಯೆಯನ್ನೇ ರದ್ದು…
ಹುಬ್ಬಳ್ಳಿ: ಹಿಂದೂ ಮತ್ತು ಪರಂಪರೆಯ ವಿಚಾರವಾಗಿ ಕಾಂಗ್ರೆಸ್ ಯಾವತ್ತೂ ವಿರೋಧ ವ್ಯಕ್ತಪಡಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದು ವಿರೋಧಿ. ಹೀಗಾಗಿ ಐತಿಹಾಸಿಕ ದಿನದಂದು ರಜೆ ಘೋಷಣೆ ಮಾಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. ನಗರದ ಗೊಲ್ಲರ ಓಣಿಯಲ್ಲಿ ಅಳವಡಿಸಿದ್ದ ಬೃಹತ್ ಪರದೆಯ ಮೇಲೆ ಅಯೋಧ್ಯೆ ಶ್ರೀರಾಮ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ವೀಕ್ಷಿಸಿ ಅವರು ಮಾತನಾಡಿದರು. ನಮ್ಮ ಮನೆಗೆ ಶ್ರೀರಾಮ ಬಂದಿದ್ದಾನೆ ಎಂಬ ಸಂಭ್ರಮದಲ್ಲಿ ಇಡೀ ನಾಡಿನ ಜನರಿದ್ದಾರೆ. ಇದೇ ಶ್ರೀರಾಮ ಪ್ರತಿಷ್ಠಾಪನೆಗೆ ೫೦೦ ವರ್ಷಗಳ ಹೋರಾಟ ನಡೆದಿದೆ. ಈ ಇಡೀ ಹೋರಾಟವನ್ನು ಕಾಂಗ್ರೆಸ್ ತುಷ್ಠೀಕರಣದ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಅಯೋಧ್ಯೆಗೆ ಹೋಗುವ ವಿಚಾರದಲ್ಲಿ ಸಿದ್ದರಾಮಯ್ಯನವರಿಗೆ ಗೊಂದಲವಿದೆ. ಮೊದಲು ಅಯೋಧ್ಯೆಗೆ ಹೋಗುವುದಿಲ್ಲ ಎಂದಿದ್ದ ಸಿದ್ದರಾಮಯ್ಯ, ಈಗ ಹೋಗುತ್ತೇನೆ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ರಜೆಯ ವಿಚಾರವಾಗಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನು ಕೇಳಿರಬೇಕು. ಅವರು ಬೇಡವೆಂದಿರಬೇಕು. ಹೀಗಾಗಿ ರಜೆ ನೀಡಿರಲಿಕ್ಕಿಲ್ಲ. ಇದೇ ರೀತಿ ಹಿಂದೂ ವಿರೋಧಿ ನೀತಿ ಮುಂದುವರೆಸಿದರೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.…