ಬೆಂಗಳೂರು: 500 ವರ್ಷಗಳ ಬಳಿಕ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ಹಿಂದೂಗಳ ಅರಾಧ್ಯ ದೈವ ರಾಮನ ದರ್ಶನಕ್ಕೆಂದು ಹೋಗುವ ಭಕ್ತರ ಅನುಕೂಲಕ್ಕೆ ಜನವರಿ 31ರಿಂದ ಐದು ವಿಶೇಷ ರೈಲುಗಳು ಸಂಚರಿಸಲಿವೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗ್ತಿದ್ದಂತೆ, ಕರ್ನಾಟಕದಿಂದ ಅಯೋಧ್ಯೆಗೆ ತೆರಳಲು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮುಂದಾಗುತ್ತಿದ್ದಾರೆ. ಈ ನಡುವೆ ಭಾರತೀಯ ರೈಲ್ವೇ ಇಲಾಖೆಯು ಕರ್ನಾಟಕದಿಂದ ಆಯೋಧ್ಯೆಗೆ ಇದೇ 31ರಿಂದ 11 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಿದೆ. https://ainlivenews.com/what-is-shriram-bjp-familys-sleeve-dk-sivakumar-sparks-against-bjp-leaders-2/ ನೈರುತ್ಯ ರೈಲ್ವೆಯು ಬೆಂಗಳೂರು, ಮೈಸೂರು, ತುಮಕೂರು, ಚಿತ್ರದುರ್ಗ, ಬೆಳಗಾವಿಯಿಂದ ಒಂದು ತಿಂಗಳ ಕಾಲ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಅಯೋಧ್ಯೆ ವಿಶೇಷ ರೈಲು ಜನವರಿ 31, ಫೆಬ್ರುವರಿ 14 ಮತ್ತು 28 ರಂದು ಸಂಚರಿಸಲಿವೆ. ಅರಸೀಕೆರೆ, ಗದಗ, ವಿಜಯಪುರ ಮಾರ್ಗವಾಗಿ ಸಂಚರಿಸಿ ಅಯೋಧ್ಯೆ ಧಾಮ ಕಡೆಗೆ ತೆರಳಲಿದೆ. ಅಯೋಧ್ಯೆ ಧಾಮದಿಂದ ವಿಶ್ವೇಶ್ವರಯ್ಯ ಟರ್ಮಿನಲ್ಗೆ ಫೆಬ್ರುವರಿ 3, 17 ಮತ್ತು ಮಾರ್ಚ್ 2ರಂದು ರೈಲು ವಾಪಸ್ ಹೊರಡಲಿದೆ. ಮೈಸೂರು-ಅಯೋಧ್ಯೆ ವಿಶೇಷ…
Author: AIN Author
ಹುಬ್ಬಳ್ಳಿ : ಬಿಸಿಯೂಟ ನೌಕರರ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ಅಕ್ಷೃರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ನಗರದ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. https://ainlivenews.com/do-you-sleep-less-than-6-hours-beware-of-this-deadly-disease/ ಬಿಸಿಯೂಟ ನೌಕರರು ಸೇರಿದಂತೆ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಕನಿಷ್ಠ ವೇತನ ನೀಡಲಾಗುತ್ತಿದೆ. ಸರ್ಕಾರ ಮತ್ತು ಏಜೆಂಟರ ನಡುವೆ ಹೊರಗುತ್ತಿಗೆ ನೌಕರರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಆಹಾರ, ಆರೋಗ್ಯ ಮತ್ತು ಶಿಕ್ಷಣ, ಪ್ರಜಾಪ್ರಭುತ್ವದ ಬೆಳವಣಿಗೆಗೆ ಬೇಕಾಗಿರುವ ಮೂಲಭೂತ ಹಕ್ಕುಗಳಾಗಿದ್ದು, ಇವುಗಳನ್ನು ಪ್ರತಿಯೊಬ್ಬರಿಗೂ ಸಮಾನವಾಗಿ ಹಂಚಿಕೆ ಮಾಡಬೇಕು’ ಎಂದು ಒತ್ತಾಯಿಸಿದರು. ಸಿಐಟಿಯುನ ಮುಖಂಡ ಮಹೇಶ ಪತ್ತಾರ ಮಾತನಾಡಿ, ೨೦೨೩ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎಐಟಿಯುಸಿ ನಾಯಕರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ರವರು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಚರ್ಚಿಸಿ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರ…
ಬೆಂಗಳೂರು: ಅವರೆಲ್ಲಾ ವಿದ್ಯುತ್ ಬಿಲ್ ಕಲೆಕ್ಟ್ ಮಾಡೋ ಸಿಬ್ಬಂದಿ. ದುಬಾರಿ ದುನಿಯಾದಲ್ಲಿ ಕಡಿಮೆ ವೇತನ ಪಡೆದು ಜೀವನ ಮಾಡೋ ಗುತ್ತಿಗೆ ನೌಕರರು. ಆದ್ರೆ ಸರ್ಕಾರದ ಆ ಮಹತ್ವಾಕಾಂಕ್ಷೆ ಯೋಜನೆ ಅವರ ಸಂಬಳಕ್ಕೆ ಕತ್ತರಿ ಹಾಕಿದೆ. ಆ ಯೋಜನೆ ಜಾರಿಯಾದ ಬಳಿಕ ಆ ಸಿಬ್ಬಂದಿಗೆ ಸಮರ್ಪವಾಗಿ ವೇತನವೇ ಸಿಗದ ಪರದಾಡ್ತಿದ್ದಾರೆ.ವೇತನ ನೀಡಿ ಅಂತ ಸರ್ಕಾರದ ಕದ ತಟ್ಟಿದ್ರೂ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಸರ್ಕಾರದ ವಿರುದ್ದ ಸಮರ ಸಾರಲು ಸಿಬ್ಬಂದಿ ಮುಂದಾಗಿದ್ದಾರೆ. ಸರ್ಕಾರ ಪಂಚ ಗ್ಯಾರಂಟಿಗಳನ್ನ ಜಾರಿ ಮಾಡಿದೆ. ಆದ್ರೆ ಗ್ಯಾರಂಟಿಗಳು ಜಾರಿ ಬಳಿಕ ಕೆಲ ಇಲಾಖೆಗಳಲ್ಲಿ ಸಿಬ್ಬಂದಿಗೆ ಸಂಕಟ ಎದುರಾಗಿದೆ. ಹೌದು ಗೃಹಜ್ಯೋತಿ.. ಸರ್ಕಾರದ ಮಹತ್ವಕಾಂಕ್ಷೆ ಯೋಜನೆ.. ಪ್ರತಿ ಮನೆಗೆ 200 ಯೂನಿಟ್ ವರಿಗೂ ಫ್ರೀ ವಿದ್ಯುತ್ ಕಲ್ಪಿಸಲಾಗ್ತಿದೆ. ಆದ್ರೆ ಗೃಹಜ್ಯೋತಿ ಜಾರಿ ಬಳಿಕ ಬೆಸ್ಕಾಂ ವ್ಯಾಪ್ತಿಯಲ್ಲಿ ಕೆಲಸ ಮಾಡ್ತಿರೋ ಮೀಟರ್ ರೀಟರ್ಗಳಿಗೆ ಬಾರಿ ಸಂಕಟ ಎದುರಾಗಿದೆ, ಗೃಹಜ್ಯೋತಿ ಜಾರಿ ಬಳಿಕ ಸಿಬ್ಬಂದಿಗೆ ಸಮರ್ಪಕವಾಗಿ ವೇತನ ಆಗ್ತಿಲ್ವಾಂತೆ. ಜೊತೆಗೆ ನೀಡ್ತಿರೋ ವೇತನದಲ್ಲಿ ಕಡಿತ…
ನಟಿ ತಪಸ್ವಿನಿ ಪೂಣಚ್ಚ (Thapaswini Poonacha) ಅವರು ಸೀತಾ ಮಾತೆಯ ಥೀಮ್ನಲ್ಲಿ ಸಖತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸೀತೆಯ ಗೆಟಪ್ನಲ್ಲಿ ನಟಿ ಗಮನ ಸೆಳೆದಿದ್ದಾರೆ. ಈ ಕುರಿತ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ‘ಹರಿಕಥೆ ಅಲ್ಲ ಗಿರಿಕಥೆ’ (Harikathe Alla Girikathe) ಚಿತ್ರದ ನಟಿ ತಪಸ್ವಿನಿ ಪೂಣಚ್ಚ ಅವರು ಕೆಂಪು ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ. ಸೀತಾ ಮಾತೆಯಂತೆ ಕಾಣಿಸಿಕೊಳ್ಳುವ ಮೂಲಕ ತಪಸ್ವಿನಿ ನೋಡುಗರ ಮನಗೆದ್ದಿದ್ದಾರೆ. ನಟಿಯ ಲುಕ್ಗೆ ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಹರಿದು ಬರುತ್ತಿವೆ. ರಿಷಬ್ ಶೆಟ್ಟಿಗೆ (Rishab Shetty) ನಾಯಕಿಯಾಗಿ ತಪಸ್ವಿನಿ ಸ್ಯಾಂಡಲ್ವುಡ್ಗೆ ಪರಿಚಿತರಾದರು. ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದಲ್ಲಿ ಕೊಡಗಿನ ಕುವರಿ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು. ಪ್ರಸ್ತುತ ‘ಗಜರಾಮ’ (Gajarama) ಸಿನಿಮಾದಲ್ಲಿ ತಪಸ್ವಿನಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರ ರಿಲೀಸ್ ಆಗಲಿದೆ.
ಬೆಂಗಳೂರು: ಟ್ರಾಫಿಕ್ ಜಾಮ್, ವಾಯುಮಾಲಿನ್ಯ, ಮಿತಿಮೀರಿದ ಜನಸಂಖ್ಯೆಯ ನಡುವೆ ಸಿಲಿಕಾನ್ ಸಿಟಿ ಬೆಂಗಳೂರು ಹೊಸ ದಾಖಲೆಯೊಂದನ್ನ ಮಾಡಿದೆ. ಆದರೆ ದೆಹಲಿಯನ್ನೇ ಹಿಂದಿಕ್ಕೆ ಮಾಡಿರುವ ಈ ಸಾಧನೆ ಖುಷಿಯ ಬದಲು ಆತಂಕಕ್ಕೆ ಕಾಣವಾಗಿದೆ. ರಾಜ್ಯ ಸರ್ಕಾರದ ವಿಫಲತೆಯು ಎದ್ದು ಕಾಣ್ತಿದೆ. ಹಾಗಾದ್ರೆ ಆ ರೆಕಾರ್ಡ ಏನೂ ಅಂತೀರಾ ಈ ಸ್ಟೋರಿ ನೋಡಿ. ಐಟಿ-ಸಿಟಿ, ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಇಡೀ ವಾರ್ಡ್ ಗೆ ಫೇವಸ್..ಕಿಲೋ ಮೀಟರ್ ಗಟ್ಟಲೇ ಜಾಮ್..ಗಟ್ಟೆಗಟ್ಟಲೇ ಟ್ರಾಫಿಕ್ ಗೆ ರಾಜಧಾನಿಯ ಜನ ಹೈರಾಣಗಿದ್ದಾರೆ. ಕಾರು-ಬೈಕ್ ಬಸ್ ಗಳು ಮಾತ್ರವಲ್ಲದೇ ಆ್ಯಂಬುಲೆನ್ಸ್ ಗಳು ಜಾಮ್ ನಲ್ಲಿ ಸಿಲುಕಿ ರೋಗಿಗಳು ಪರದಾಡ್ತಿದ್ದಾರೆ. ಈ ಗೋಳಾಟದ ನಡುವೆ ರಾಜ್ಯ ರಾಜಧಾನಿ ಅನಗತ್ಯವಾಗಿ ಹೊಸದಾಖಲೆ ಸೇರಿಸಿಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿರುವ ವಾಹನಗಳ ಸಂಖ್ಯೆ ಆತಂಕ ಮೂಡಿಸಿದೆ. ಕಾರುಗಳ ಸಂಖ್ಯೆಯಲ್ಲಿ ದೆಹಲಿಯನ್ನೂ ಸರಿಗಟ್ಟಿ ಮುನ್ನುಗ್ತಿದೆ. ಹೌದು.. ಬೆಂಗಳೂರು ಟ್ರಾಫಿನಲ್ಲಿಯೂ ವಿಶ್ವದ ಎರಡನೇ ನಗರ ಎಂಬ ಪಟ್ಟ ಅಲಂಕರಿಸಿಕೊಂಡಿದೆ. ಜೊತೆಗೆ ಕಾರುಗಳ ಸಂಖ್ಯೆಯಲ್ಲಿ ರಾಷ್ಟ್ರ ರಾಜಧಾನಿಯನ್ನ…
ಬೆಳಗಾವಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಟಾಪನೆ ಹಿನ್ನಲೆ ಬೆಳಗಾವಿಯ ನಗರದಲ್ಲಿ ರಾಮನ ಸ್ಮರಿಸುವ ಮೂಲಕ ವಿಶೇಷ ಪೂಜೆ ಮಾಡಲಾಯಿತು. ಮಹಿಳೆಯರು ರಾಮನ ಜಪ ಮಾಡುವುದರ ಮೂಲಕ ಪ್ರಾರ್ಥನೆ ಸಲ್ಲಿಕೆ ಮಾಡಿದರು. ಮಂದಿರದಲ್ಲಿ ಈ ಬಾರಿ ರಾಮನಿಗೆ ವಿಶೇಷ ಪೂಜೆ ಸಲ್ಲುವಂತೆ ಬೆಳಗಾವಿಯಲ್ಲಿ ಎಲ್ಲಿ ನೋಡಿದ್ದರು ಭಗವಮಯ ರಾಮನ ಪ್ರತಿಮೆ ಧ್ವಜಗಳು ಕಟೌಟ್ ಬ್ಯಾನರ್ ಸ್ವಾಗತದ ಫಲಕಗಳು ಕೆಂಗಳಿಸುತ್ತಿವೆ. ಇದು ದೇಶದಲ್ಲಿ ಅತ್ಯಂತ ದೊಡ್ಡ ಹಬ್ಬವಾಗಿ ಮಾಡುತ್ತಿರುವುದರ ಮೂಲಕ ಉಂಡಿ ಜಿಲೇಬಿ ಸಿಹಿ ಹಂಚುವುದು ಹತ್ತು ಹಲವಾರು ಕಡೆ ಮಹಾಪ್ರಸಾದ ಆಯೋಜಿಸಲಾಗಿದೆ ರಾಮಭಕ್ತರು ಇತರ ಲಾಭ ಪಡೆಯುತ್ತಿದ್ದಾರೆ. ಎಲ್ಲಿ ನೋಡಿದರೂ ಬೆಳಗಾವಿಯಲ್ಲಿ ಮೂಲಿ ಮೂಲಿ ಗಲ್ಲಿ ಗಲ್ಲಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಇದೊಂದು ವಿಶೇಷವಾಗಿದೆ.
ದಿ ಡಾರ್ಕ್ ವೆಬ್, ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಗೆ ರೆಡಿಯಾಗಿರುವ ಮತ್ತೊಂದು ಹೊಸ ಸಿನಿಮಾ. ವಿಶೇಷ ಅಂದರೆ ಪತ್ರಕರ್ತರೇ ಸೇರಿ ಮಾಡಿರುವ ಸಿನಿಮಾವಿದು. ಪತ್ರಕರ್ತ ಮಂಜು ಬನವಾಸೆ ಹಾಗೂ ಹೆತ್ತೂರು ನಾಗರಾಜ್ ತಮ್ಮ ಎಂಎನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸೈಬರ್ ಕ್ರೈಂ ಆಧಾರಿತ ‘ದಿ ಡಾರ್ಕ್ ವೆಬ್’ ಸಿನಿಮಾ ಮಾಡಿದ್ದು ಇದೀಗ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸೈಬರ್ ಕ್ರೈಂ ಕಥಾ ಹಂದರ ಆಧಾರಿತ ‘ದಿ ಡಾರ್ಕ್ ವೆಬ್’ ಟೀಸರ್ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ನಾಯಕನಾಗಿ ಯುವ ಪ್ರತಿಭೆ ಚೇತನ್ ಕಾಣಿಸಿಕೊಂಡಿದ್ದಾರೆ. ನಾಯಕಿ ಪಾತ್ರದಲ್ಲಿ ಮೇಘನಾ ಮಿಂಚಿದ್ದಾರೆ. ಚಿತ್ರದಲ್ಲಿ ಬಹುತೇಕ ಪತ್ರಕರ್ತರೇ ಅಭಿನಯ ಮಾಡಿರೋದು ಈ ಸಿನಿಮಾದ ವಿಶೇಷ. ಮಂಜು ಬನವಾಸೆ ಅವರು ನಿರ್ಮಾಣದ ಜೊತೆಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕಿರಣ್ ಸ್ವಾಮಿ ಅವರ ಚೊಚ್ಚಲ ನಿರ್ದೇಶನವಿದೆ. ಚಂದ್ರಮೌಳಿ ಕ್ಯಾಮೆರಾ ವರ್ಕ್ ಮಾಡಿದ್ದು ವಿಶಾಕ್ ನಾಗಲಾಪುರ ಸಂಗೀತ ನೀಡಿದ್ದಾರೆ. ಟೀಸರ್ ರಿಲೀಸ್ ಮಾಡುವ ಕಾರಣಕ್ಕೆ ಮಾಧ್ಯಮದ…
ಚಿತ್ರದುರ್ಗ: ಹಲ್ಲೆ ತೊಂದರೆ ಮಾಡುವುದು ಹೊಸದೇನಲ್ಲ ಕಿತಾಪತಿ ಮಾಡುವುದರಲ್ಲಿ ನಂಬರ್ 1 ಬಿಜೆಪಿಯವರು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಹಲ್ಲೆ ತೊಂದರೆ ಮಾಡುವುದು ಹೊಸದೇನಲ್ಲ ಕಿತಾಪತಿ ಮಾಡುವುದರಲ್ಲಿ ನಂಬರ್ 1 ಬಿಜೆಪಿಯವರು, ನಾವು ರಾಮನ ಭಕ್ತರೆ ಅಲ್ಲ ಎನ್ನುವಂತೆ ಬಿಂಬಿಸುತ್ತಾರೆ. ಯಾವ ಹಿಂದು ಬೇರೆ ಧರ್ಮ ಜಾತಿ ಗೌರವವನ್ನು ಕೊಡ್ತಾರೆ ಅವರೇ ನಿಜವಾದ ಹಿಂದುಗಳು, ದೇವರ ಹೆಸರಲ್ಲಿ ರಾಜಕಾರಣ ಮಾಡುವುದು ಒಳ್ಳೆ ಪದ್ದತಿಯಲ್ಲ. ಸಂವಿಧಾನವೇ ನಮ್ಮ ದೇಶದ ದೇವರು, ಅದನ್ನು ಮನೆಗೆ ಅಡವಿಡಬಾರದು, ಒಂದೊಂದು ದೇವರನ್ನು ಒಂದೊಂದು ಪಕ್ಷಕ್ಕೆ ಅಡವಿಡಬಾರದು, ನೀವು ರಾಮಭಕ್ತರಾದರೆ ಇನ್ನೊಬ್ಬರು ರಾಮನ ವಿರೋಧಿಗಳ? ನಾವು ಎಲ್ಲ ಧರ್ಮ ದೇವರ ಭಕ್ತರು. ಅಧಿಕಾರದಲ್ಲಿದ್ದಾಗ ನಾವು ಬಹಳ ಜವಾಬ್ದಾರಿಯಿಂದಿರಬೇಕು. ಅವರು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ ಇದನ್ನು ನಾವು ಖಂಡಿಸುತ್ತೇವೆ. ಕರ್ನಾಟಕ ಸರ್ಕಾರ ಭಾಗ್ಯಗಳನ್ನು ನೀಡಿ ಹರಾಜಾಗಿದೆ ಎನ್ನುತ್ತಾರೆ. ಆದರೆ 92 % ರಷ್ಟು ಯಶಸ್ಸನ್ನು ನಾವು ಖಂಡಿದ್ದೇವೆ. ಭಾಗ್ಯಗಳ ಸೌಲಭ್ಯವನ್ನು ಬಿಜೆಪಿಯವರು ಪಡೆಯುತ್ತಿದ್ದಾರೆ.ನಾವು…
ಕಲಬುರಗಿ: ಶ್ರೀರಾಮನಿಗೆ ಪ್ರಧಾನಿ ಮೋದಿ ಪೂಜೆ ಸಲ್ಲಿಸುವ ಟೈಮಲ್ಲೇ ನಮಗೂ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಅಂತ VHP ಉತ್ತರ ಪ್ರಾಂತ್ಯದ ಕಾರ್ಯದರ್ಶಿ ಕಲಬುರಗಿ ಮೂಲದ ಲಿಂಗರಾಜಪ್ಪ ಅಪ್ಪ ಹೇಳಿದ್ದಾರೆ. ವಿಶೇಷ ಆಹ್ವಾನಿತರಾಗಿ ದಂಪತಿ ಸಮೇತ ಅಯೋಧ್ಯೆಗೆ ತೆರಳಿರುವ ಅಪ್ಪಾ ನಾಳೆ ಊರಿಗೆ ವಾಪಾಸ್ ಬರಲಿದ್ದಾರೆ..ಕಲ್ಯಾಣ ಕರ್ನಾಟಕದಿಂದ ತೆರಳಿರುವ ಏಕೈಕ ದಂಪತಿ ಜೋಡಿ ನಿನ್ನೆ ಪ್ರಾಣ ಪ್ರತಿಷ್ಠಾಪನೆ ವೇಳೆ ಗರ್ಭಗುಡಿ ಮುಂಭಾಗದ ಪ್ರಾಂಗಣ ಹತ್ತಿರದಲ್ಲೇ ಕುಳಿತಿದ್ದುದು ವಿಶೇಷವಾಗಿತ್ತು.
ಬೆಂಗಳೂರು : ಶ್ರೀರಾಮ ಏನು ಬಿಜೆಪಿಯವರ ಅಪ್ಪನ ಮನೆ ಆಸ್ತಿನಾ..? ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ಕೆರಳಿ ಕೆಂಡವಾದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನಲ್ಲಿ ರಾಮ ಇದ್ದಾನೆ. ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ನನ್ನ ಹೆಸರಲ್ಲಿ ಶಿವನ ಮಗ ಕುಮಾರನೂ ಇದ್ದಾನೆ ವಾಗ್ದಾಳಿ ನಡೆಸಿದರು. https://ainlivenews.com/siddaramaiah-himself-lord-rama-can-forgive-you-not-rama-devotees-bjp-spark/ ಬಿಜೆಪಿಯವರಿಗೆ ಹೊಟ್ಟೆ ಉರಿ. ಏನಾದ್ರೂ ಮಾಡಿ ನಮ್ಮನ್ನ ಹಿಂದೂ ವಿರೋಧಿಗಳು ಅಂತಾ ಬಿಂಬಿಸಲು ಮಾಡ್ತಿದ್ದಾರೆ. ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪೂಜೆಗೆ ಆದೇಶ ಮಾಡಿಲ್ವಾ? ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ಮಾಡಿ, ಪೂಜೆ ಮಾಡಲು ನಮ್ಮ ಸರ್ಕಾರ ಹೇಳಿದೆ ಎಂದು ಕಿಡಿಕಾರಿದರು. ಮಹಾತ್ಮ ಗಾಂಧೀಜಿ ಹೇಳಿಲ್ವಾ..? ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್ ಅಂತಾ.. ನಾವು ರಾಮನನ್ನೂ ಪೂಜಿಸ್ತೀವಿ.. ಸೀತೆಯನ್ನೂ ಪೂಜಿಸ್ತೀವಿ ಎಂದು ಬಿಜೆಪಿಗರ ವಿರುದ್ಧ ಡಿಕೆಶಿ ಆಕ್ರೋಶ ಹೊರಹಾಕಿದ್ದಾರೆ.