ಕಲಬುರಗಿ: ನೌಕರರ ಕಾರ್ಯವೈಖರಿ ತಿಳಿಯಲು ಮುಂದಾಗಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಇವತ್ತು ಕಲಬುರಗಿಯ ತಹಸೀಲ್ ಕಚೇರಿಗೆ ದಿಢೀರ್ ಭೇಟಿ ಕೊಟ್ಟರು.. ಏಕಾಏಕಿ ಆಫೀಸಿಗೆ ಎಂಟ್ರಿಕೊಟ್ಟ ಸಚಿವರನ್ನ ನೋಡಿ ಕಚೇರಿ ಸಿಬ್ಬಂದಿ ಒಮ್ಮೆಲೇ ಶಾಕ್ ಆದ್ರು.. ಅಷ್ಟೇಅಲ್ಲ ಕಡತಗಳನ್ನ ಪರಿಶೀಲಿಸಿ ಕಾರ್ಯವೈಖರಿ ವಿರುದ್ಧ ಸಚಿವರು ಗರಂ ಆದ್ರು..ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದ ವೇಳೆ ಸಿಬ್ಬಂದಿಗಳು ತಬ್ಬಿಬ್ಬಾದ್ರು.ನಂತ್ರ ಹೊರಬಂದ ಸಚಿವರು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದ್ರು..
Author: AIN Author
ಬೆಂಗಳೂರು : ಟಿಪ್ಪು ಗೋವಿಂದ.. ಇವಾಗ ಗಟ್ಟಿ ಉಳಿಯುವುದು ರಾಮನೇ ಅಂತ ಸಿಎಂ ಸಿದ್ದರಾಮಯ್ಯರಿಗೆ ಅರ್ಥವಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕುಟುಕಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಷ್ಟು ದಿನ ಜೈ ಟಿಪ್ಪು ಸುಲ್ತಾನ್ ಎಂದವರ ಬಾಯಲ್ಲಿ ಜೈ ಶ್ರೀರಾಮ್ ಅಂತ ಘೋಷಣೆ ಬಂದಿದೆ. ಇದು ಆಶ್ಚರ್ಯ ಹಾಗೂ ಅದ್ಭುತ ಎಂದು ಚಾಟಿ ಬೀಸಿದರು. ಲೋಕಸಭೆಯಲ್ಲಿ ಒಂದು ಸೀಟು ಉಳಿಸಲು ರಾಮನಿಗೆ ಜೈ ಅನ್ತಿದ್ದಾರೆ. ಟಿಪ್ಪುವನ್ನು ಎಲ್ಲಿ ಬಿಟ್ಟಿರಿ, ಟಿಪ್ಪು ಕಥೆ ಏನಾಗಬೇಕು. ಟಿಪ್ಪು ಗೋವಿಂದ ಇವಾಗ ಗಟ್ಟಿ ಉಳಿಯುವುದು ರಾಮನೇಎಂದು ಸಿದ್ದರಾಮಯ್ಯಗೆ ಅರ್ಥವಾಗಿದೆ. ಇವಾಗ ಅಯೋಧ್ಯೆ ರಾಮಮಂದಿರಕ್ಕೆ ಹೋಗ್ತೀನಿ ಅಂತಿದ್ದಾರೆ ಎಂದು ಛೇಡಿಸಿದರು. ಹಿಂದೆ ಇದೊಂದು ವಿವಾದಿತ ಸ್ಥಳ, ಅಲ್ಲಿಗೆ ಹೋಗಲ್ಲ ಎಂದಿದ್ದರು. ನ್ಯಾಯಾಲಯದ ಆದೇಶ ಆಗಿದ್ದರೂ ಅದು ವಿವಾದಿತ ಸ್ಥಳ ಎಂದಿದ್ದರು. ಇವಾಗ ದೇಶದಲ್ಲಿ ರಾಮ ರಾಮ ಎಂದು ಜನ ಪರಿವರ್ತನೆ ಆದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಕೂಡಾ ಪರಿವರ್ತನೆ ಆಗಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯ ಒತ್ತಡದಿಂದ ಅವರು…
ರಷ್ಯಾ: 65 ಮಂದಿ ಯುದ್ಧ ಕೈದಿಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಲ್-76 ಮಿಲಿಟರಿ ವಿಮಾನವು ರಷ್ಯಾದ ಬೆಲ್ಗೊರೊಡ್ ಪ್ರಾಂತ್ಯದಲ್ಲಿ ಉಕ್ರೇನ್ ಗಡಿ ಸಮೀಪ ಪತನಗೊಂಡಿದೆ. ಹೌದು ರಷ್ಯಾದ ಮಿಲಿಟರಿ ವಿಮಾನ ಉಕ್ರೇನ್ನಲ್ಲಿ ಪತನಗೊಂಡಿದೆ. ರಷ್ಯಾದ ಇಲ್ಯುಶಿನ್ -76 ಮಿಲಿಟರಿ ವಿಮಾನವು ಉಕ್ರೇನ್ನ ಗಡಿಯ ದಕ್ಷಿಣ ಬೆಲ್ಗೊರೊಡ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಹೇಳಲಾಗಿದೆ. ಇನ್ನು ಈ ಘಟನೆಯಲ್ಲಿ 65 ಜನ ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ರಿಯಾ ನೊವೊಸ್ಟಿ ಸುದ್ದಿ ಸಂಸ್ಥೆ ವರದಿ ಮಾಡಿರುವ ಪ್ರಕಾರ ವಿಮಾನ ದೊಳಗಿದ್ದ ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ಉಕ್ರೇನ್ ವಶಪಡಿಸಿಕೊಂಡಿದೆ ಎಂದು ಹೇಳಲಾಗಿದೆ. ಇನ್ನು ಈ ಅಪಘಾತದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾರೆ. https://ainlivenews.com/peanut-is-good-for-health-but-if-people-with-this-problem-eat-it-there-is-no-danger/ ಇದನ್ನು ತನಿಖೆ ಮಾಡಲಾಗುವುದು ವಿಶೇಷ ಮಿಲಿಟರಿ ಆಯೋಗವನ್ನು ರಚನೆ ಮಾಡಲಾಗಿದೆ. ಬೆಲ್ಗೊರೊಡ್ ಪ್ರಾದೇಶಿಕ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೋವ್ ಅವರು ಈ ಬಗ್ಗೆ ವರದಿಯನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ. ವಿಮಾನ ಪತನಗೊಂಡಿರುವ ಬಗ್ಗೆ…
ಬೆಂಗಳೂರು : ಸಿದ್ದರಾಮಯ್ಯ ಹೆಸರಲ್ಲಿ ರಾಮ, ತಮ್ಮ ಹೆಸರಲ್ಲಿ ಶಿವ ಇದ್ದಾನೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಟಕ್ಕರ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನೀವು ರಾಮಭಕ್ತರಾಗಿದ್ರೆ ಆಂಜನೇಯ ರೀತಿ ಎದೆಯನ್ನು ಸೀಳಿ ತೋರಿಸಿ. ಎದೆ ಬಗೆದು ತೋರಿಸಲಿ ನೋಡೋಣ ಎಂದು ಕುಟುಕಿದ್ದಾರೆ. ಹಾಗಿದ್ರೆ ಯಾಕೆ ಭಯ, ಆತಂಕ ಯಾಕೆ ಪಡ್ತಿದ್ದಾರೆ. ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ನೋಡಿಕೊಳ್ಳೋದ್ಯಾಕೆ? ದುರಹಂಕಾರದ ಮಾತಿನಿಂದ ಎಲ್ಲರ ಭಾವನಗೆಗಳಿಗೆ ಧಕ್ಕೆ ತರುತ್ತಿದ್ದೀರಿ. ಸಚಿವರ ಬಾಯಿ ಮುಚ್ಚಿಸಲು ನಿಮ್ಮ ಕೈಲಿ ಆಗುತ್ತಿಲ್ಲ. ನಿಮ್ಮ ಬಾಯಿಗಳೇ ಹೊಲಸಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ದೊಣ್ಣೆ ಹಿಡಿಯೋ ಸಂಸ್ಕೃತಿ ಕಾಂಗ್ರೆಸ್ಸಿಗರದ್ದು ರಾಮಭಕ್ತ ಅಂತ ಹೇಳಿಕೊಳ್ಳೋಕೆ ಹೇಗೆ ಬಾಯಿ ಬರುತ್ತೆ? ನೀವು ರಾಮ ಭಕ್ತರಾದ್ರೆ ನಮಗೆ ಬಹಳ ಸಂತೋಷ. ಸಚಿವ ಕೆ.ಎನ್. ರಾಜಣ್ಣ ದಿನಕ್ಕೊಂದು ಹೇಳಿಕೆ ಕೊಡ್ತಾರೆ, ಅವರ ಬಗ್ಗೆ ಏನ್ ಹೇಳೋಣ. ದೊಣ್ಣೆ ಹಿಡಿಯೋ ಸಂಸ್ಕೃತಿ ಕಾಂಗ್ರೆಸ್ ನವರದ್ದು ಎಂದು ಅಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ.
ಬೆಂಗಳೂರು: ಟ್ರಾಫಿಕ್ ಜಾಮ್, ವಾಯುಮಾಲಿನ್ಯ, ಮಿತಿಮೀರಿದ ಜನಸಂಖ್ಯೆಯ ನಡುವೆ ಸಿಲಿಕಾನ್ ಸಿಟಿ ಬೆಂಗಳೂರು ಹೊಸ ದಾಖಲೆಯೊಂದನ್ನ ಮಾಡಿದೆ. ಆದರೆ ದೆಹಲಿಯನ್ನೇ ಹಿಂದಿಕ್ಕೆ ಮಾಡಿರುವ ಈ ಸಾಧನೆ ಖುಷಿಯ ಬದಲು ಆತಂಕಕ್ಕೆ ಕಾಣವಾಗಿದೆ. ರಾಜ್ಯ ಸರ್ಕಾರದ ವಿಫಲತೆಯು ಎದ್ದು ಕಾಣ್ತಿದೆ. ಹಾಗಾದ್ರೆ ಆ ರೆಕಾರ್ಡ ಏನೂ ಅಂತೀರಾ ಈ ಸ್ಟೋರಿ ನೋಡಿ. ಐಟಿ-ಸಿಟಿ, ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಇಡೀ ವಾರ್ಡ್ ಗೆ ಫೇವಸ್..ಕಿಲೋ ಮೀಟರ್ ಗಟ್ಟಲೇ ಜಾಮ್..ಗಟ್ಟೆಗಟ್ಟಲೇ ಟ್ರಾಫಿಕ್ ಗೆ ರಾಜಧಾನಿಯ ಜನ ಹೈರಾಣಗಿದ್ದಾರೆ. ಕಾರು-ಬೈಕ್ ಬಸ್ ಗಳು ಮಾತ್ರವಲ್ಲದೇ ಆ್ಯಂಬುಲೆನ್ಸ್ ಗಳು ಜಾಮ್ ನಲ್ಲಿ ಸಿಲುಕಿ ರೋಗಿಗಳು ಪರದಾಡ್ತಿದ್ದಾರೆ. ಈ ಗೋಳಾಟದ ನಡುವೆ ರಾಜ್ಯ ರಾಜಧಾನಿ ಅನಗತ್ಯವಾಗಿ ಹೊಸದಾಖಲೆ ಸೇರಿಸಿಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿರುವ ವಾಹನಗಳ ಸಂಖ್ಯೆ ಆತಂಕ ಮೂಡಿಸಿದೆ. ಕಾರುಗಳ ಸಂಖ್ಯೆಯಲ್ಲಿ ದೆಹಲಿಯನ್ನೂ ಸರಿಗಟ್ಟಿ ಮುನ್ನುಗ್ತಿದೆ. ಹೌದು.. ಬೆಂಗಳೂರು ಟ್ರಾಫಿನಲ್ಲಿಯೂ ವಿಶ್ವದ ಎರಡನೇ ನಗರ ಎಂಬ ಪಟ್ಟ ಅಲಂಕರಿಸಿಕೊಂಡಿದೆ. ಜೊತೆಗೆ ಕಾರುಗಳ ಸಂಖ್ಯೆಯಲ್ಲಿ ರಾಷ್ಟ್ರ ರಾಜಧಾನಿಯನ್ನ…
ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಕಾರಣ ರಾಜಕೀಯ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ನರೇಂದ್ರ ಮೋದಿ ಅವರು ಹ್ಯಾಟ್ರಿಕ್ ಸಾಧನೆ ಮೇಲೆ ಕಣ್ಣಿಟ್ಟಿದ್ದಾರೆ. ಪ್ರತಿಪಕ್ಷಗಳು ಕೂಡ ಗೆಲುವಿಗಾಗಿ ಇಂಡಿಯಾ ಒಕ್ಕೂಟ ರಚಿಸಿವೆ. ಇದರ ಬೆನ್ನಲ್ಲೇ, “ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗುವುದು ನಿಶ್ಚಿತ” ಎಂದು ಸಮೀಕ್ಷೆ ತಿಳಿಸಿದೆ. ತಮ್ಮ ಸರ್ಕಾರವನ್ನು ಹೆಚ್ಚು ನಂಬುವ ವಿಶ್ವದ ಅಂತಹ ದೇಶಗಳ ಜನರ ಬಗ್ಗೆ ಸಮೀಕ್ಷೆಯೊಂದು ಬಂದಿದೆ. ಎಡೆಲ್ಮನ್ ಟ್ರಸ್ಟ್ ಬಾರೋಮೀಟರ್ 28 ದೇಶಗಳ ಸಮೀಕ್ಷೆಯ ವರದಿಯ ಪ್ರಕಾರ. ಸಮೀಕ್ಷೆಯಲ್ಲಿ ತಮ್ಮದೇ ದೇಶದ ನಾಗರಿಕರು ಸರ್ಕಾರವನ್ನು ಎಲ್ಲಿ ಎಷ್ಟು ಹೆಚ್ಚು ನಂಬುತ್ತಾರೆ, ಕಡಿಮೆ ನಂಬುತ್ತಾರೆ ಎಂಬುದನ್ನು ಇದರಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಜನರು ಎಲ್ಲಿ ಹೆಚ್ಚು ನಂಬುತ್ತಾರೆ? ಪ್ರತಿ ದೇಶದ ವಯಸ್ಕ ನಿವಾಸಿಗಳ ಅಭಿಪ್ರಾಯಗಳನ್ನು ಆಧರಿಸಿ ರೇಟಿಂಗ್ ಪಡೆಯಲಾಗಿದೆ., ಎಡೆಲ್ಮನ್ ಟ್ರಸ್ಟ್ ಬಾರೋಮೀಟರ್ 28 ದೇಶಗಳನ್ನು ಸಮೀಕ್ಷೆ ಮಾಡುವ ವರದಿಯನ್ನು ಪ್ರಕಟಿಸಿದೆ. ಇದರ ಪ್ರಕಾರ, ಸೌದಿ ಅರೇಬಿಯಾ ಮತ್ತು ಚೀನಾದ ಜನರು ತಮ್ಮ…
ಬೆಂಗಳೂರು: ರಾಮಭಕ್ತರ 500 ವರ್ಷಗಳ ತಪಸ್ಸಿಗೆ ವರ ಸಿಕ್ಕಿದೆ. ಅಯೋಧ್ಯೆಯಲ್ಲಿ ಸೋಮವಾರ ಅಕ್ಷರಸಹ ರಘುರಾಮನ ಭಕ್ತಿಯಲ್ಲಿ ಮಿಂದೆದ್ದಿತು. ಅಯೋಧ್ಯೆ ರಾಮಮಂದಿರದಲ್ಲಿ ಶಾಸ್ತ್ರೋಕ್ತವಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಿರ್ವಿಘ್ನವಾಗಿ ನೆರೆದಿದೆ. ಹೌದು ಅದಾದ ನಂತರ ವಿಪಕ್ಷ ನಾಯಕರು ಮೋದಿ ಬಗ್ಗೆ ಹಲವು ಟೀಕೆಗಳನ್ನು ಸಹ ಮಾಡಿದ್ದಾರೆ ಹಾಗೆ ನಿನ್ನೆಯಷ್ಟೇ ವೀರಪ್ಪ ಮೊಯ್ಲಿ ಕೂಡ ಮೋದಿಯ 11 ದಿನದ ವ್ರತದ ಬಗ್ಗೆಯೂ ಟೀಕೆ ಅಪಹಾಸ್ಯ ಮಾಡಿದ್ದರು. ಆದರೂ ಮೋದಿ ಯಾವುದನ್ನೂ ತೆಲೆಕೆಡಿಸಿಕೊಳ್ಳತಮ್ಮ ಪಾಡಿಗೆ ತಮ್ಮ ಕೆಲಸ ಎನ್ನುತ್ತ ರಾಮ ಭಜನೆಯಲ್ಲಿ ಮಗ್ನರಾಗಿದ್ದರು. https://x.com/MadhukumarVP1/status/1749762598026055965?s=20 ಆದರೆ ಇತ್ತ ಪ್ರಧಾನಿ ಮೋದಿ ಟೀಕಾಕಾರರಿಗೆ ವಿನಯ್ ಗುರೂಜಿ ಟಾಂಗ್ ಕೊಟ್ಟಿದ್ದಾರೆ .ಭಗವಾನ್ ಶ್ರೀರಾಮನ ಟೀಕಾಕಾರರಿಗೆ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಟಾಂಗ್ ಕೊಟ್ಟಿದ್ದು, ಅವರ ಹೇಳಿಕೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿದೆ. ರಾಮನಿಗೂ ಕಾಮೆಂಟ್ ಹೊಡೆದರು,, ಮೋದಿಗೂ ಕಾಮೆಂಟ್ ಹೊಡೆದರು. ಕಾಮೆಂಟ್ ಹೊಡೆದವರು ಕಳೆದುಹೋದರು ,,ರಾಮ & ಮೋದಿ ಇಬ್ಬರೂ ಉಳಿದರು ,,ಮುಂದೆಯೂ ಉಳಿಯಲಿದ್ದಾರೆ…
ಬೆಂಗಳೂರು: ಈ ದುಬಾರಿ ದುನಿಯಾ ದಲ್ಲಿ ಜನಸಾಮಾನ್ಯರು ಜೀವನ ಮಾಡೋಕೆ ಕಷ್ಟ ಎನ್ನಿಸಿದೆ.ಅಡುಗೆ ಎಣ್ಣೆ, ತೈಲ ನಿರಂತರವಾಗಿ ಹೆಚ್ಚಳ ದಿಂದ ಗ್ರಾಹಕರ ಕೈ ಸುಡುತ್ತಿದೆ.ಇದೀಗ ವಿದ್ಯುತ್ ಗ್ರಾಹಕರಿಗೆ ಮತ್ತೊಂದು ಶಾಕ್ ನ್ನ ಕೆಇಆರ್ಸಿ ನೀಡ್ತಿವೆ.ಹೌದು ಇಂಧನ ನಿರ್ವಹಣೆ ಸೇರಿದಂತೆ ಹಲವು ಕಾರಣಗಳನ್ನ ಮುಂದಿಟ್ಟುಕೊಂಡು ವಿದ್ಯುತ್ ದರ ಪರಿಷ್ಕರಣೆಗೆ ಸಕಲ ಸಿದ್ದತೆ ನಡೆಸಿದೆ.. ರಾಜ್ಯದಲ್ಲಿ ಈಗ ತಾನೇ ಬೇಸಿಗೆ ಆರಂಭವಾಗಿದೆ. ಆದ್ರೂ ಬೇಸಿಗೆ ಆರಂಭದಲ್ಲಿ ವಿದ್ಯುತ್ ಗ್ರಾಹಕರಿಗೆ ಬರೆ ಹಾಕಲು ಕೆಇಆರ್ಸಿ ಮುಂದಾಗಿವೆ. ಅಗತ್ಯ ವಸ್ತುಗಳ ದರ ಹೆಚ್ಚಳದಿಂದ ಕಂಗಾಲಾಗಿರುವ ಮಂದಿಗೆ ಮತ್ತೆ ವಿದ್ಯುತ್ ಸರಬರಾಜು ಕಂಪನಿಗಳು ಶಾಕ್ ನೀಡಿಲು ಮುಂದಾಗಿವೆ. ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಮೆಕ್ಕಾಂ, ಚೆಕ್ಕಾಂ ಸೇರಿದಂತೆ ಇತರೆ ಕಂಪನಿಗಳು ಪ್ರತಿ ಬಾರಿಯಂತೆ ಈ ವರ್ಷವೂ ದರ ಹೆಚ್ಚಳಕ್ಕೆ ಸಿದ್ದತೆ ನಡೆಡಿವೆ.ಈಗಾಗಲೇ KERC ಮುಂದೆ ದರ ಪರಿಷ್ಕರಣೆ ಪಟ್ಟಿ ಇಟ್ಟಿವೆ. ಈ ಸಂಬಂಧ ಸಾರ್ವಜನಿಕ ಅಭಿಪ್ರಾಯ ಹಾಗೂ ಎಸ್ಕಾಂಗಳ ಅಭಿಪ್ರಾಯ ಸಂಗ್ರಹ ಮಾಡಲು ಕೆಇಆರ್ಸಿ ಮುಂದಾಗಿದೆ. ರಾಜ್ಯದ…
ಮುಂಬೈ: ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಭಗವಾಧ್ವಜ ಮತ್ತು ರಾಮಧ್ವಜದೊಂದಿಗೆ ತೆರೆಳುತ್ತಿದ್ದವರ ಮೇಲೆ ದಾಳಿ, ಕಲ್ಲುತೂರಾಟ ನಡೆದ ಘಟನೆ ದೇಶದ ವಾಣಿಜ್ಯ ನಗರಿ ಮುಂಬಯಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ನಗರದ ಮೀರಾ ರಸ್ತೆಯಲ್ಲಿ ದುರ್ಘಟನೆ ನಡೆದಿದ್ದು ಸ್ಥಳದಲ್ಲಿ ಕೆಲಕಾಲ ಉದ್ವಿಘ್ನತೆ ಸೃಷ್ಟಿಯಾಗಿತ್ತು. ಒಂದು ಗುಂಪು ಮಹಿಳೆಯೊಬ್ಬರನ್ನು ಗುರಿಯಾಗಿರಿಸಿ ಹಲ್ಲೆ ನಡೆಸಿತ್ತು ಎಂದು ಹೇಳಲಾಗಿದೆ https://x.com/RupaniGarcon/status/1749766037950898248?s=20 ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯುವ ಹಿನ್ನೆಲೆಯಲ್ಲಿ ಜನವರಿ 21 ರ ರಾತ್ರಿ ಮೀರಾ ರೋಡ್ನಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮುಸಲ್ಮಾನ ಬಹು ಸಂಖ್ಯಾತ ನಯಾನಗರ ಪ್ರದೇಶದಲ್ಲಿ ನಡೆದಿರುವ ಶೋಭಾಯತ್ರಿಯ ಮೇಲೆ ಕಲ್ಲೆಸೆಯಲಾಗಿತ್ತು. ಈ ದಾಳಿಯ ಅನೇಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಗರದಲ್ಲಿ ರಾಮ ಭಕ್ತರು ಭಗವಾದ್ವಜ, ರಾಮಧ್ವಜಗಳನ್ನು ತಮ್ಮ ತಮ್ಮ ವಾಹನಗಳಿಗೆ ಅಳವಡಿಸಿಕೊಂಡು ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಬೈಕ್ ಗಳಲ್ಲಿ ಬಂದ ಕೆಲ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸ್ಥಳದಲ್ಲಿದ್ದ ಗುಂಪು ಭಗವಾದ್ವಜಗಳನ್ನು ಕಿತ್ತು…
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banarjee) ಅವರು ಕೋಲ್ಕತ್ತಾಗೆ ತೆರಳುತ್ತಿದ್ದ ವೇಳೆ (Car accident) ಕಾರು ಅಪಘಾತಕ್ಕೀಡಾಗಿದ್ದು, ಅವರ ತಲೆಗೆ ಗಂಭೀರ ಗಾಯವಾಗಿದೆ. ಹೌದು ಬುರ್ದ್ವಾನ್ನಿಂದ ಕೋಲ್ಕತ್ತಾಗೆ ರಸ್ತೆ ಮಾರ್ಗವಾಗಿ ಹಿಂತಿರುಗುತ್ತಿದ್ದ ವೇಳೆ ಮುಖ್ಯಮಂತ್ರಿ ಬೆಂಗಾವಲು ಪಡೆಯ ಮುಂದೆ ಮತ್ತೊಂದು ಕಾರು ಬಂದಿದ್ದರಿಂದ ತಕ್ಷಣವೇ ಬ್ರೇಕ್ ಹಾಕಿದ್ದರಿಂದ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.. https://ainlivenews.com/peanut-is-good-for-health-but-if-people-with-this-problem-eat-it-there-is-no-danger/ ಮೂಲಗಳ ಪ್ರಕಾರ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ʼನಲ್ಲಿ ತೆರಳಲು ಆಗಲಿಲ್ಲ. ಆದ್ದರಿಂದ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಮಂಜು ಕವಿದ ವಾತಾವರಣದಲ್ಲಿ ಕಡಿಮೆ ಗೋಚರತೆಯಿಂದಾಗಿ ಚಾಲಕನು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಮಮತಾ ಬ್ಯಾನರ್ಜಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರ ತಲೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಕೋಲ್ಕತ್ತಾಗೆ ಕರೆತರಲಾಗುತ್ತಿದೆ ಎಂದು ಮೂಲಕಗಳು ತಿಳಿಸಿವೆ.