ಧಾರವಾಡ: ಪಂಚಾಯತಿ ನೌಕರರು ಪ್ರತಿಭಟನೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ನಗರದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿ ಪಂಚಾಯತಿ ನೌಕರರು ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ದಿನ ಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ನಮ್ಮಗೆ ಈಗ ನೀಡುತ್ತಿರುವ ವೇತನ ಸರಿ ಹೋಗುತ್ತಿಲ್ಲ. ಗ್ರಾಮ ಪಂಚಾಯತಿ ನೌಕರರು ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗಾಗಿ ಸರ್ಕಾರ ಈ ಕೂಡಲೇ ಕನಿಷ್ಠ 31 ಸಾವಿರ ರೂಪಾಯಿ ವೇತನ, ಅನಾರೋಗ್ಯ ಪೀಡಿತರಿಗೆ ಕನಿಷ್ಠ 6 ಸಾವಿರ ಪಿಂಚಣಿ ಸೇರಿ ವಿವಿಧ ಇಲಾಖೆಯ ಖಾಸಗೀಕರಣದ ಕೈ ಬೀಡಬೇಕು ಎಂದು ಅಗ್ರಹಿಸಿ. ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಒಂದನೆ ಮಾಡದಿದ್ದಲ್ಲಿ ರಾಜ್ಯ ವ್ಯಾಪಿ ಉಗ್ರ ಹೋರಾಟ ಮಾಡುವುದಾಗಿ ಇದೇವೇಳೆ ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದರು.
Author: AIN Author
ಧಾರವಾಡ:- ರಾಮ ಮಂದಿರದ ಮೇಲೆ ಹಸಿರು ಧ್ವಜ ಹಾಕಿ ಪೋಟೋ ಎಡಿಟ್ ಮಾಡಿಲ್ಲದೆ, ಇಸ್ಲಾಮಿಕ ಪವರ್ ಎಂದು ಬರೆದುಕೊಂಡು ತನ್ನ ಮೊಬೈಲ್ ನಂಬರಗೆ ಸ್ಟೇಟ್ಸ್ ಹಾಕಿಕೊಂಡ ಯುವಕನನ್ನು ಬಂಧಿಸುವಲ್ಲಿ ಗರಗ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ತಾಲೂಕಿನ ತಡಕೋಡ್ ಗ್ರಾಮದ ಸದ್ದಾಂಹುಸೇನ ಇಸ್ಮಾಯಿಲ್ ಸಾಬ್ ನದಾಫ್ ಬಂಧಿತ ಕಿಡೆಗೇಡಿಯಾಗಿದ್ದಾನೆ. ಧಾರವಾಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಲ್ಲಿ ಸಾಮಾಜಿಕ ಜಾಲತಾಣದ ಮೇಲೆ ಧಾರವಾಡ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದರು. ಸದ್ದಾಂಹುಸೇನ ಇಸ್ಮಾಯಿಲ್ ಸಾಬ್ ನದಾಫ್ ಯುವಕನ ಕೃತ್ಯ ಬಯಲಿಗೆ ಬರುತ್ತಿದಂತೆ ಸ್ವಯೋ ಪ್ರೇರಿತ ದೂರು ದಾಖಲು ಮಾಡಿಕೊಂಡ, ಅಲರ್ಟ್ ಆದ ಗರಗ ಠಾಣೆಯ ಪೊಲೀಸರು ಈಗ ಯುವಕನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ಇನ್ನೂ ಈ ಕುರಿತು ಶ್ರೀರಾಮ ಸೇನೆ ಆಕ್ರೋಶ ಹೊರಹಾಕಿದ್ದು, ಜನೆವರಿ 30 ರಂದು ಯುವಕನ ಮನೆಗೆ ಹೋಗಿ ಆಮಂತ್ರಣ ನೀಡುತ್ತೇವೆ. ಯುವಕನಿಗೆ ಅಷ್ಟೊಂದು ಪೌರುಷವಿದ್ದರೆ ರಾಮಮಂದಿರ ಖರ್ಚು ವೆಚ್ಚ ನೋಡಿಕೊಳ್ಳುತ್ತೇವೆ, ಅಲ್ಲಿಗೆ ಬದು ಮಂದಿರದ ಮೇಲೆ ಹಸಿರು…
ಯಾವಾಗಲೂ ಬೆಳಗಿನ ಉಪಾಹಾರಕ್ಕೆ ದೋಸೆ ಜನಪ್ರಿಯ ಆಯ್ಕೆ ಆಗಿದೆ. ಇದು ಅತ್ಯಂತ ತ್ವರಿತ, ಮತ್ತು ಸುಲಭ ಪಾಕವಿಧಾನ ಆಗಿದೆ. ರವೆ ಅಥವಾ ಅಕ್ಕಿ ಹಿಟ್ಟಿನ ದೋಸೆ ನೀವು ಪ್ರತೀ ವಾರ ಮಾಡಿ ತಿಂದಿರಬಹುದು. ಇದರಿಂದ ನಿಮಗೆ ಬೇಸರವಾಗಿದ್ರೆ ಮತ್ತು ನೀವು ಬೇರೆ ಯಾವುದಾದ್ರೂ ದೋಸಾ ಪಾಕವಿಧಾನ ಹುಡುಕುತ್ತಿದ್ದರೆ ಶಾವಿಗೆ ದೋಸೆ ಉತ್ತಮ ಆಯ್ಕೆ ಆಗಿದೆ. ಸುಲಭ ಮತ್ತು ಸರಳ ತ್ವರಿತ ದೋಸೆ ರೆಸಿಪಿ ಶಾವಿಗೆ ದೋಸೆ ರೆಸಿಪಿ ಆಗಿದೆ. ಗರಿಗರಿ ಹಾಗೂ ಟೇಸ್ಟಿ ದೋಸೆ ಮಾಡುವುದು ಹೇಗೆ ಅಂತಾ ಇಲ್ಲಿ ನೋಡೋಣ. ಗರಿಗರಿಯಾದ ಮತ್ತು ಕುರುಕುಲು ದೋಸೆ ಮಕ್ಕಳಿಂದ ಹಿಡಿದು ದೊಡ್ಡವರತನಕ ಇಷ್ಟಪಟ್ಟು ಸೇವನೆ ಮಾಡ್ತಾರೆ. ಸರಳ ತ್ವರಿತ ಶಾವಿಗೆ ದೋಸೆ ರೆಸಿಪಿ ಮಾಡುವುದು ಹೇಗೆ? ಒಂದು ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ರವಾ, ಒಂದು ಟೀಸ್ಪೂನ್ ಜೀರಿಗೆ, ಒಂದು ಟೀಸ್ಪೂನ್ ಉಪ್ಪು, ಐದು ಕಪ್ ನೀರು, ಸಣ್ಣದಾಗಿ ಕೊಚ್ಚಿದ ಅರ್ಧ ಕಪ್ ಈರುಳ್ಳಿ, ಅರ್ಧ ಕಪ್ ತುರಿದ ಕ್ಯಾರೆಟ್,…
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕಂಡಕ್ಟರ್, ಅಸಿಸ್ಟೆಂಟ್ ಅಕೌಂಟೆಂಟ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. KKRTC ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಹುದ್ದೆಗಳ ಸಂಖ್ಯೆ: 1752 ಉದ್ಯೋಗ ಸ್ಥಳ: ಕರ್ನಾಟಕ ಹುದ್ದೆಯ ಹೆಸರು: ಕಂಡಕ್ಟರ್, ಅಸಿಸ್ಟೆಂಟ್ ಅಕೌಂಟೆಂಟ್ ಸಂಬಳ: KKRTC ನಿಯಮಗಳ ಪ್ರಕಾರ KKRTC ಹುದ್ದೆಯ ವಿವರಗಳು ಸಹಾಯಕ ಲೆಕ್ಕಾಧಿಕಾರಿ: 15 ಕಂಡಕ್ಟರ್: 1737 KKRTC ನೇಮಕಾತಿ 2024 ಅರ್ಹತಾ ವಿವರಗಳು ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ: KKRTC ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿಯಮಗಳ ಪ್ರಕಾರ ಅರ್ಜಿ ಶುಲ್ಕ: ಅರ್ಜಿ ಶುಲ್ಕವಿಲ್ಲ ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ KKRTC ನೇಮಕಾತಿ 2024 ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮೊದಲನೆಯದಾಗಿ KKRTC ನೇಮಕಾತಿ ಅಧಿಸೂಚನೆ 2024…
ಸೂರ್ಯೋದಯ: 06:53, ಸೂರ್ಯಾಸ್ತ : 06:03 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯ ಮಾಸ,ಶುಕ್ಲ ಪಕ್ಷ, ಉತ್ತರಾಯಣಂ, ಹೇಮಂತ ಋತು, ತಿಥಿ: ಹುಣ್ಣಿಮೆ, ನಕ್ಷತ್ರ: ಆರಿದ್ರ ರಾಹು ಕಾಲ: 01:30 ನಿಂದ 03:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ 10:30 ತನಕ ಅಮೃತಕಾಲ: ರಾ.3:29 ನಿಂದ ಬೆ.5:14 ತನಕ ಅಭಿಜಿತ್ ಮುಹುರ್ತ: ಮ.12:05 ನಿಂದ ಮ.12:50 ತನಕ ಮೇಷ ರಾಶಿ ಇವರು ದಾರಳ ಮನಸ್ಸುಳ್ಳವರು, ನ್ಯಾಯ ನೀತಿ ಧರ್ಮಕ್ಕೆ ತಲೆಬಾಗುವವರು, ಇವರು ಯಾರಿಗೂ ಭಯ ಪಡುವುದಿಲ್ಲ, ಇವರು ಸಂಗಾತಿಗೆ ತುಂಬಾ ಪ್ರೀತಿಸುವರು, ಇವರದು ತುಂಬಾ ಲೆಕ್ಕಾಚಾರದ ಬದುಕು, ಗುತ್ತಿಗೆದಾರರಿಗೆ ಹೊಸ ಟೆಂಡರ್ ಭಾಗ್ಯ, ರಿಯಲ್ ಎಸ್ಟೇಟ್ ಮತ್ತು ಡೆವಲಪರ್ಸ್ ನವರಿಗೆ ಉದ್ಯಮದಲ್ಲಿ ಚೇತರಿಕೆ,ತಮಗೆ ಬರಬೇಕಾದ ಬಾಕಿ ಸಾಲದ ಮೊತ್ತ ಕೈಸೇರುವುದು. ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ವ್ಯಾಪಾರ- ವ್ಯವಹಾರ ಮಾಡುವವರಿಗೆ ಹೊಸ ಆದಾಯ…
ಸಿದ್ದಾಪುರ:- ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರಟಗಿ ತಾಲೂಕು ವತಿಯಿಂದ ಸಿದ್ದಾಪುರ ಗ್ರಾಮದ ಗೌರ್ಮೆಂಟ್ ಪಿಯುಸಿ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳ ದೂರು ಮೇರೆಗೆ ಕಾಲೇಜಲ್ಲಿ ವಿಚಾರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಲೇಜಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತಿ,ಸ್ವಾಮಿ ವಿವೇಕಾನಂದರ ಜಯಂತಿ, ಸುಭಾಷ್ ಚಂದ್ರ ಬೋಸ್ ಅವರ ಜಯಂತಿ, ಇದುವರೆಗೂ ಅಗಸ್ಟ್ 15 ಜನವರಿ 26ರಂದು ಹೊರತುಪಡಿಸಿ ಯಾವ ಜಯಂತಿಯನ್ನು ಕೂಡ ಕಾಲೇಜಲ್ಲಿ ಆಚರಣೆ ಮಾಡದಿರುವುದು ಅತ್ಯಂತ ಆಶ್ಚರ್ಯಕರ ಸಂಗತಿಯೂ ಆಗಿದೆ. ಪ್ರಾಂಶುಪಾಲರು ನಮಗೆ ಸರ್ಕಾರದ ವತಿಯಿಂದ ಯಾವುದೇ ಆಚರಣೆ ಮಾಡಿ ಅಂತ ಹೇಳಿ ಆದೇಶ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು, ಇದಕ್ಕೆ ವಿರುದ್ಧವಾಗಿ ಅಖಿಲವರ್ತ ವಿದ್ಯಾರ್ಥಿ ಪರಿಷತ್ ಕಾರಟಗಿ ತಾಲೂಕು ವತಿಯಿಂದ ಪ್ರಾಂಶುಪಾಲರಿಗೆ ಮನವಿಯನ್ನು ಕೊಪ್ಪಳ ಜಿಲ್ಲಾ ಸಹ ಸಂಚಾಲಕರಾದ ಅಭಿಷೇಕ್ ಹಿರೇಮಠ್, ಕಾರ್ತಿಕ್, ಮನೋಜ್, ಶರಣ್, ಭರತ್ ಅವರು ಮನವಿಯನ್ನು ಮಾಡಲಾಗಿದೆ ಆಚರಣೆಗಳು ಜಯಂತಿಗಳು ನಡೆಸಬೇಕೆಂದು, ಇಲ್ಲದಿದ್ದ ಪಕ್ಷದಲ್ಲಿ ರಾಷ್ಟ್ರದಲ್ಲಿ ರಾಷ್ಟ್ರೀಯತೆ, ದೇಶಪ್ರೇಮ ಉಳಿಯುವುದು, ಬಹಳ…
ಬಳ್ಳಾರಿ:- ಇಲ್ಲೋರ್ವ ಅಂಕಲ್ಗೆ ರೊಟ್ಟಿ ತರಲು ಹೋಗಿದ್ದಾಗ ರೊಟ್ಟಿ ಮಾರುತ್ತಿದ್ದ ಆಂಟಿ ಮೇಲೆಯೇ ಲವ್ ಆಗಿದೆ. ಮಹಿಳೆ ಹೆಸರು ಸುಜಾತಾ ಎಂದು ಹೇಳಲಾಗಿದೆ. ಇದು ವಿಚಿತ್ರ ಪ್ರೇಮ ಕಥೆಯಾಗಿದೆ. ಮಹಾರಾಷ್ಟ್ರದಲ್ಲಿ ಹುಟ್ಟಿದ ಲವ್ ಸ್ಟೋರಿ ಬಳ್ಳಾರಿಯಲ್ಲಿ ಅಂತ್ಯಗೊಂಡಿದೆ. ರೊಟ್ಟಿ ತರಲು ಹೋದ ಎರಡು ಮಕ್ಕಳ ಅಂಕಲ್ಗೆ ಒಂದು ಮಗುವಿರುವ ಆಂಟಿ ಮೇಲೆ ಲವ್ ಆಗಿದೆ. ಈಕೆಯ ಹೆಸರು ಸುಜಾತಾ ಆಗಿದ್ದು, ಮಹಾರಾಷ್ಟ್ರದಲ್ಲಿ ರೊಟ್ಟಿ ಮಾರುತ್ತಿದ್ದಳು. ಈತ ಮಹಾರಾಷ್ಟ್ರದ ಸಾಂಗ್ಲಿಯ ಜತ್ತ ತಾಲೂಕಿನ ಮುಚ್ಚಂಡಿ ಗ್ರಾಮದ ಸಿದ್ದಗೊಂಡ ಸೌದತ್ತಿ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಇಬ್ಬರಿಗೂ ಪ್ರತ್ಯೇಕ ಸಂಸಾರವಿದ್ದು, ತಮ್ಮ ಜೀವನವನ್ನು ಸುಖವಾಗಿಯೇ ನಿರ್ವಹಣೆ ಮಾಡುತ್ತಿದ್ದರು. ಆದರೆ, ಹಾಳಾದ ಈ ಅನೈತಿಕ ಪ್ರೇಮದಿಂದ ಈಗ ಇಬ್ಬರೂ ಸಂಸಾರವನ್ನು ಹಾಳು ಮಾಡಿಕೊಂಡಿದ್ದರು. ರೊಟ್ಟಿ ಊಟಕ್ಕೆ ಹೋದ ಸಿದ್ದಗೊಂಡ ಸೌದತ್ತಿ ರೊಟ್ಟಿ ಮಾರೋ ಆಂಟಿ ಸುಜಾತಾಳನ್ನು ಅಲ್ಲಿಂದ ಓಡಿಸಿಕೊಂಡು ಬಳ್ಳಾರಿಗೆ ಬಂದಿದ್ದಾನೆ. ಇಬ್ಬರೂ ಊರು ಬಿಟ್ಟು ಬಂದು ಬಳ್ಳಾರಿಯಲ್ಲಿ ತಾವು ಗಂಡ-ಹೆಂಡತಿ ಎಂದು ಹೇಳಿಕೊಂಡು…
ಬೆಂಗಳೂರು:- ಶೀಘ್ರದಲ್ಲೇ 660 ಪಿಎಸ್ಐ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು 545 ಪಿಎಸ್ಐ ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯನ್ನು 54 ಸಾವಿರ ಅಭ್ಯರ್ಥಿಗಳು ಬರೆಯಬೇಕಿತ್ತು. ಕೆಲವರು ಗೈರಾಗಿದ್ದು, ಶೇ.65ರಿಂದ 70ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ. ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಇದರ ಬಳಿಕ 403 ಪಿಎಸ್ಐ ಹುದ್ದೆಗಳಿಗೆ ಪರೀಕ್ಷೆ ಮಾಡಬೇಕು. ಇದಕ್ಕೆ ಈಗಾಗಲೇ ದೈಹಿಕ ಪರೀಕ್ಷೆ ನಡೆದಿದೆ. ತದನಂತರ 660 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಪಿಎಸ್ಐ ಮರುಪರೀಕ್ಷೆಯನ್ನು ಸುಗಮವಾಗಿ ನಡೆಸಿರುವುದಕ್ಕೆ ಕೆಇಎಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ನೇಮಕಾತಿ ಪರೀಕ್ಷೆ ಜವಾಬ್ದಾರಿಯನ್ನು ಕೂಡ ಕೆಇಎ ಅವರಿಗೇ ವಹಿಸಬೇಕು ಎಂದುಕೊಂಡಿದ್ದೇವೆ. 660 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ. ಸದ್ಯ ಎರಡೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡರೆ 948 ಸಬ್ ಇನ್ಸ್ಪೆಕ್ಟರ್ಗಳು ಲಭ್ಯವಾಗುತ್ತಾರೆ.…
ಮಂಗಳೂರು:- ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ಹೌತಿ ಬಂಡುಕೋರರ ದಾಳಿ ನಡೆದಿದ್ದು, ಮಂಗಳೂರಿನ ಗೋಡಂಬಿ ಉದ್ಯಮಕ್ಕೆ ಪೆಟ್ಟು ಬಿದ್ದಿದೆ. ಇಸ್ರೇಲ್ ಪರವಾಗಿ ನಿಂತ ದೇಶದ ಸರಕು ಸಾಗಾಣೆ ಹಡಗುಗಳು ಸಾಗುವಾಗ ದಾಳಿ ಮಾಡ್ತಿದ್ದಾರೆ. ಇದರಿಂದ ಆಮದು ಮತ್ತು ರಫ್ತನ್ನು ನಂಬಿಕೊಂಡ ಮಂಗಳೂರಿನ ಗೋಡಂಬಿ ಉದ್ಯಮಕ್ಕೆ ದೊಡ್ಡ ಮಟ್ಟಿನ ಹೊಡೆತ ಬೀಳುತ್ತಿದೆ. ರಾಜ್ಯದಲ್ಲಿ ಸುಮಾರು 400ಕ್ಕೂ ಹೆಚ್ಚು ಗೇರುಬೀಜ ಸಂಸ್ಕರಣಾ ಘಟಕಗಳಿವೆ. ಅದರಲ್ಲಿ 320ಕ್ಕೂ ಹೆಚ್ಚು ಫ್ಯಾಕ್ಟರಿಗಳು ಕರಾವಳಿಯಲ್ಲಿದೆ. ಈ ಫಾಕ್ಟರಿಗಳಿಗೆ ಹೆಚ್ಚಾಗಿ ಕಚ್ಚಾ ಗೇರುಬೀಜ ಬರುವುದು ಆಫ್ರಿಕಾ ಖಂಡದಿಂದ. ಆದರೆ ಇದೀಗ ಹೌತಿ ಬಂಡುಕೋರರ ದಾಳಿಯಿಂದ ಹಡಗಿನ ಸಂಚಾರದಲ್ಲಿ ವ್ಯತ್ಯಯ ಆಗಿ ಆಫ್ರಿಕಾದಿಂದ ಕಚ್ಚಾ ಗೋಡಂಬಿ ಬಾರದೆ ತೊಂದರೆಯಾಗುತ್ತಿದೆ. ಸುತ್ತು ಬಳಸಿ ಹೆಚ್ಚುವರಿ 6,300 ನಾಟಿಕಲ್ ಮೈಲುಗಳ ಸಂಚಾರ ಮಾಡಿ ಬಂದರೆ 15 ಹೆಚ್ಚುವರಿ ದಿನಗಳ ಪ್ರಯಾಣ ಮಾಡಬೇಕಾಗಿದೆ. ಇದರ ಜೊತೆ ಪ್ರತಿ ಕಂಟೇನರ್ ಸಾಗಾಟ ದರ 2,000 ಡಾಲರ್ಗಿಂತ ಹೆಚ್ಚಾಗಿದ್ದು, ಈ ಏರಿಕೆ ಗೇರು ಉದ್ಯಮಕ್ಕೆ ತಲೆನೋವಾಗಿದೆ. ಆಮದು ಮಾಡಿದ…
ಬೆಂಗಳೂರು:- ಚುನಾವಣೆ ದಿನ ಬಜೆಟ್ ಮಂಡನೆ ಸರಿಯಲ್ಲ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಚುನಾವಣೆ ದಿನದಂದು ರಾಜ್ಯ ಬಜೆಟ್ ಮಂಡಿಸುವುದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ತಿಳಿಸಿದೆ. ರಾಜಭವನದಲ್ಲಿ ಬುಧವಾರ ಈ ಕುರಿತು ರಾಜ್ಯಪಾಲರಿಗೆ ಬಿಜೆಪಿ ನಿಯೋಗವು ಮನವಿ ಸಲ್ಲಿಸಿತು. ಬಳಿಕ ಮಾತನಾಡಿದ ಅಶ್ವಥ್ ನಾರಾಯಣ್, ಚುನಾವಣಾ ಆಯೋಗವು ಬೆಂಗಳೂರಿನ ವಿಧಾನಪರಿಷತ್ತಿನ ಶಿಕ್ಷಕರ ಕ್ಷೇತ್ರಕ್ಕೆ ಜನವರಿ 23ರಂದು ಚುನಾವಣಾ ದಿನವನ್ನು ನಿಗದಿಪಡಿಸಿದೆ. ಫೆಬ್ರವರಿ 16ರಂದು ದಿನಾಂಕ ನಿಗದಿಯಾಗಿದೆ ಎಂದರು. ಮತದಾನದ ದಿನವೇ ರಾಜ್ಯ ಸರ್ಕಾರದ ಬಜೆಟ್ ಮಂಡನೆ ಆಗಲಿದೆ. ಮಾದರಿ ನೀತಿಸಂಹಿತೆ ಮತ್ತು ಜನಪ್ರತಿನಿಧಿ ಕಾಯ್ದೆ ಪ್ರಕಾರ ಇದು ನ್ಯಾಯಬದ್ಧವಲ್ಲ. ಬಜೆಟ್ ದಿನವೇ ಚುನಾವಣೆ ಮಾಡುವ ಬದಲು ಬಜೆಟ್ ಮಂಡನೆ ದಿನಾಂಕವನ್ನು ಮುಂದಕ್ಕೆ ಹಾಕಲು ಕೋರಲಾಗಿದೆ. ಬಿಜೆಪಿ ಈ ಸಂಬಂಧ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸೂಚನೆ ಕೊಡಲು ಕೋರಿದ್ದೇವೆ ಎಂದು ತಿಳಿಸಿದರು ಬಜೆಟ್ ಮಂಡನೆ ದಿನವನ್ನು ಮುಂದೂಡಬೇಕು. ಚುನಾವಣೆ ದಿನವೇ ಬಜೆಟ್ ಮಂಡಿಸದಂತೆ ಸೂಚಿಸಲು…