Author: AIN Author

ರುಚಿಕರವಾದ ಗ್ರೇವಿ ಮಾಡುವ ಯೋಚನೆಯಲ್ಲಿ ಇದ್ದರೆ ಇಲ್ಲೊಂದು ಟೇಸ್ಟಿಯಾಗಿರುವ ರೆಸಿಪಿ ಇದೆ ಅದುವೇ “ಕಾಜು ಮಸಾಲ. ಗೋಡಂಬಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ,ಈ ಕಾಜುಯಿಂದ ಮಾಡುವ ಯಾವುದೇ ಆಹಾರ ಪದಾರ್ಥವನ್ನು ತಯಾರಿಸಿದರೂ ಅದರ ರುಚಿಯೇ ಬೇರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ ಅಷ್ಟೇ ಅಲ್ಲ ಆರೋಗ್ಯಕ್ಕೂ ಇದು ಒಳ್ಳೆಯ ರೆಸಿಪಿ. ಹಾಗಾದ್ರೆ ಇಂದು ನಾವು ನಿಮಗೆ ಕಾಜು ಮಸಾಲವನ್ನು ಹೇಗೆ ಮಾಡುವುದು ಎಂಬುವುದರ ಬಗ್ಗೆ ಹೇಳಿಕೊಡುತ್ತೇವೆ ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಬಹುದು. ಕಾಜು ಮಸಾಲ ಬೇಕಾಗುವ ಸಾಮಗ್ರಿಗಳು ಗೋಡಂಬಿ -1ಕಪ್‌, ಸಣ್ಣಗೆ ಹೆಚ್ಚಿದ ಈರುಳ್ಳಿ-3,ಟೊಮೆಟೋ-2,ಎಣ್ಣೆ, ತುಪ್ಪ/ಬೆಣ್ಣೆ-3ಚಮಚ, ಗರಂ ಮಸಾಲ -1ಚಮಚ, ಕಸೂರಿ ಮೇಥಿ-1ಟೀಸ್ಪೂನ್‌, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು-ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌-2 ಚಮಚ, ಚಕ್ಕೆ, ಲವಂಗ-ಎರಡೆರಡು, ಜೀರಿಗೆ-ಅರ್ಧ ಚಮಚ, ಧನಿಯಾ ಪುಡಿ (ಕೊತ್ತಂಬರಿ ಪುಡಿ)-1ಚಮಚ, ಅರಿಶಿನ ಪುಡಿ-ಅರ್ಧ ಟೀಸ್ಪೂನ್‌, ಮೆಣಸಿನ ಪುಡಿ-3ಚಮಚ, ಉಪ್ಪು-ರುಚಿಗೆ ತಕ್ಕಷ್ಟು. ತಯಾರಿಸುವ ವಿಧಾನ -ಮೊದಲಿಗೆ ಒಂದು ಬಾಣಲೆಗೆ ತುಪ್ಪ…

Read More

ಕಲಬುರಗಿ:- ಕಲ್ಲರಳಿ ಹಣ್ಣಾಗಿ.. ರೈತನೊಬ್ಬ ಮನಸ್ಸು ಮಾಡಿದ್ರೆ ಎಂಥಹ ಕಲ್ಲು ಬಂಡೆಗಳಿರುವ ನೆಲವನ್ನ ಹಸಿರಾಗಿ ಮಾಡಬಹುದು ಅನ್ನೋದರ ಕುರಿತ ಪುಸ್ತಕವೊಂದು ಇವತ್ತು ಕಲಬುರಗಿಯಲ್ಲಿ ಬಿಡುಗಡೆಯಾಯಿತು. ಕಡಗಂಚಿ ಗ್ರಾಮದ ರೈತ ಹಣಮಂತ ಭೂಸನೂರ್ ಶ್ರಮವೇ ಈ ಪುಸ್ತಕದ ಮೂಲಕ ಹೊರಬಂದಿದೆ.. ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹಾಗು ಕಲ್ಯಾಣ ಕರ್ನಾಟಕ ಮಂಡಳಿಯ ಅಧ್ಯಕ್ಷ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಪುಸ್ತಕ ಬಿಡುಗಡೆ ಮಾಡಿದ್ರು.. ಬರೋಬ್ಬರಿ 50 ಎಕರೆ ಕಲ್ಲು ಬಂಡೆಗಳಿಂದ ತುಂಬಿದ್ದ ನೆಲ ಇವತ್ತು ಹಸಿರಾಗಿ ಮಿಂಚುವಂತೆ ಮಾಡಿ ಸಾಧನೆ ಮಾಡಿದೆ ರೈತ ಭೂಸನೂರು ಹಣಮಂತ ಕುಟುಂಬ ಅನ್ನೋದು ವಿಶೇಷ…

Read More

ಬೆಂಗಳೂರು:- ಬೆಂಗಳೂರು ಕಂಬಳ ಆಯೋಜಕರಿಗೆ ಬಿಬಿಎಂಪಿ ಶಾಕ್ ನೀಡಿದ್ದು, ಬ್ಯಾನರ್, ಫ್ಲೆಕ್ಸ್ ಹಾಕಿದ್ದಕ್ಕೆ ದಂಡ ವಿಧಿಸಿದೆ. ಅರಮನೆ ಮೈದಾನದ ಸುತ್ತಮುತ್ತ ಹಾಕಿದ್ದ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲಾಗಿದೆ. ಈ ಸಂಬಂಧಸದಾಶಿವನಗರ ಠಾಣೆಗೆ ದೂರು ಹಿನ್ನಲೆ ತೆರವುಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ ಸಿಲಿಕಾನ್​ ಸಿಟಿಯಲ್ಲಿ ಕಾರವಳಿ ಭಾಗದ ಪ್ರಮುಖ ಕ್ರೀಡೆಯಾದ ಕಂಬಳವನ್ನು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಹಿನ್ನಲೆ ಕಂಬಳಕ್ಕೆ ಶುಭಾಶಯ ಕೋರಿ ಫ್ಲೆಕ್ಸ್, ಬ್ಯಾನರ್ ಹಾಕಿದ್ದರು. ಆದರೆ, ಇದು ಕಾನೂನುಬಾಹಿರ ಆದ್ದರಿಂದ ಬಿಬಿಎಂಪಿ ತೆರವುಗೊಳಿಸಿ, ದಂಡ ವಿಧಿಸಿದೆ.

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ದರ ದುಪ್ಪಟ್ಟಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ದರಗಳು ದುಪ್ಪಟ್ಟಾಗಿದೆ. ಹಿಂದೊಮ್ಮೆ ಉಪನಗರಗಳೆಂದು ಕರೆಯಲ್ಪಡುತ್ತಿದ್ದ ಪ್ರದೇಶಗಳಲ್ಲೂ ಕೂಡ ಮನೆ ಬಾಡಿಗೆ ದರಗಳು ಗಗನಮುಖಿಯಾಗಿವೆ ಎಂದು ವರದಿ ತಿಳಿಸಿದೆ. ಒಂದು ಕಾಲದಲ್ಲಿ ಬೆಂಗಳೂರಿನ ಉತ್ತರದ ಸ್ಲೀಪಿ ಹಳ್ಳಿಯಾಗಿದ್ದು, ನಂತರ ಅದನ್ನು ಮಹಾನಗರಕ್ಕೆ ಸೇರಿಸಲಾಯಿತು. ಬಳಿಕ ತಿಂಗಳಿಗೆ 11,000 ರೂ ಬಾಡಿಗೆ ನೀಡುವಂತಾಯಿತು ಎಂದು ವರದಿ ತಿಳಿಸಿದೆ. ಬಾಡಿಗೆಯನ್ನು ಮಾರ್ಚ್‌ನಲ್ಲಿ ರೂ 13,000 ಕ್ಕೆ ಮತ್ತು ನಂತರ ಅಕ್ಟೋಬರ್ 2022 ರಲ್ಲಿ ರೂ 16,000 ಕ್ಕೆ ಬಾಡಿಗೆಯನ್ನು ಹೆಚ್ಚಿಸಲಾಯಿತು. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲೇ ಶೇಕಡಾ 45ರಷ್ಟು ಹೆಚ್ಚಳವಾಗಿದೆ. ನಾನು ಬಾಡಿಗೆ ಹೆಚ್ಚಳದ ಬಗ್ಗೆ ಮಾಲೀಕರನ್ನು ಪ್ರಶ್ನಿಸಿದಾಗ, ನಾನು ಅಪಾರ್ಟ್ಮೆಂಟ್ ಬಾಡಿಗೆಗೆ ನಿಮಗೆ ಹೆಚ್ಚು ಎನಿಸಿದರೆ ಖಾಲಿ ಮಾಡಬಹುದು ಎಂದು ಅವರು ನನಗೆ ಹೇಳಿದರು. ನನಗೆ ಯಾವುದೇ ಆಯ್ಕೆ ಇರಲಿಲ್ಲ, ಹಿಂತಿರುಗಲು ಮತ್ತು ಹೆಚ್ಚಿನ ಬಾಡಿಗೆಯನ್ನು ಪಾವತಿಸಲು ನಿರ್ಧರಿಸಿದೆ ಎಂದು ಅನ್ವೇಶಾ ರೇ ತಿಳಿಸಿದರು. ಆರು…

Read More

ಆರನೇ ವಾರದ ಕೊನೆಯಲ್ಲಿ ನಡೆದ ಡಬಲ್​ ಎಲಿಮಿನೇಷನ್​​ನಡಿ ಭಾಗ್ಯಶ್ರೀ ಮತ್ತು ಇಶಾನಿ ಮನೆಯಿಂದ ಹೊರಬಂದರು. ಬಿಗ್​ ಮನೆಯಿಂದ ಔಟ್​ ಆಗಿ ಬಂದ ಇಶಾನಿ ಕೆಲವು ಕುತೂಹಲಕಾರಿ ಸಂಗತಿಗಳನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಮೊದಲಿಗೆ ಬಿಗ್​ ಬಾಸ್​ ಮನೆಯಲ್ಲಿ ಉಳಿಯಲು ನನಗೊಂದು ಚಾನ್ಸ್​ ಕೊಡಬೇಕಿತ್ತು ಎಂದ ಇಶಾನಿ, ‘ಹೊರಬಂದ ಮೇಲೆ ಜನರು ಖುದ್ದಾಗಿ ನನಗೆ ಹೇಳುತ್ತಿದ್ದಾರೆ, ನಾನು ಇನ್ನೂ ಹೆಚ್ಚಿನ ಸಮಯ ಅಲ್ಲಿ ಇರಬೇಕಿತ್ತು, ಹಠ ತೋರಿಸಬೇಕಿತ್ತು. ಟಾಸ್ಕ್​ ಮೇಲೆ ಹೆಚ್ಚು ಫೋಕಸ್​ ಮಾಡಬೇಕಿತ್ತು, ರ್ಯಾಪ್​ ಹಾಡುಗಳನ್ನು ಹಾಡಬೇಕಿತ್ತು ಎಂದು ಅಭಿಪ್ರಾಯಿಸಿದ್ದಾರೆ’ ಎಂದು ಹೇಳಿದರು. ಇನ್ನು ಬಿಗ್​ ಬಾಸ್​ ಮನೆಯಲ್ಲಿ ನಿಮಗೆ ಕೊಟ್ಟ ಸಂಭಾವನೆ ಎಷ್ಟು ಎಂದು ಕೇಳಿದ್ದಕ್ಕೆ ಉತ್ತರಿಸಿದ ಇಶಾನಿ, ‘ಅದರ ಬಗ್ಗೆ ನಾನು ಏನೂ ಹೇಳಲ್ಲಪ್ಪ! ಅದಕ್ಕೆ ಎಲ್ಲೋ ಗೋಚಪ್ಪ ನಿನ್ನ ಅರಮನೆ ಅಷ್ಟೇ’ ಎಂದು ಹೇಳಿದರು. ಒಟ್ಟಾರೆ ಉತ್ತಮ ಪೇಮೆಂಟ್​ ಬಂದಿರುವುದು ನಿಜ ಎಂಬುದನ್ನು ಖಚಿತಪಡಿಸಿದರು.

Read More

ಕಲಬುರ್ಗಿ:- ಬಿಜೆಪಿಯಲ್ಲಿ ಮಾಜಿ ಸಚಿವ ಬಿ ಸೋಮಣ್ಣ ಅಸಮಾಧಾನ ವಿಚಾರವಾಗಿ ಮಾಜಿ DCM ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ವಿ ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು. ನಮ್ಮ ಪಕ್ಷದಲ್ಲಿ ಅವರಿಗೆ ಸಂಪೂರ್ಣ ಗೌರವ ಇದೆ, ಅವರನ್ನು ವಿಶ್ವಾಸದಿಂದ ಕರೆದುಕೊಂಡು ಹೋಗುವ ಕೆಲಸ ಬಿಜೆಪಿ ಮಾಡ್ತದೆ. ಚುನಾವಣೆ ಅಂದ ಮೇಲೆ ಸೋಲು ಗೆಲುವು ಸಹಜ. ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಸೋಮಣ್ಣನವರೇ ಪದೇ ಪದೇ ಈ ಮಾತು ಹೇಳ್ತಿದ್ದಾರೆ. ಸೋಮಣ್ಣ ಇಂದು, ಮುಂದು ಎಂದೆಂದೂ ನಮ್ಮ ಜೊತೆಯೇ ಇರ್ತಾರೆ. ಅವರ ನೋವು ಅಳಲು ದೂರ ಮಾಡುವ ಕೆಲಸ ಬಿಜೆಪಿಯಿಂದ ಆಗುತ್ತದೆ ಎಂದು ಕಲಬುರಗಿಯಲ್ಲಿ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ.

Read More

ಮಹದೇವಪುರ:- ದೇಶಿಯ ಕ್ರೀಡೆಯಾದ ಖೋ ಖೋ ಆಟವನ್ನ ಮದರ್ ಆಫ್  ಆಲ್ ಗೇಮ್ಸ್  ಎನ್ನುತ್ತಾರೆ‌. ಖೋ ಖೋ ಕ್ರೀಡೆಯನ್ನ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯ ಅಧ್ಯಕ್ಷ  ಲೋಕೇಶ್ವರ್ ತಿಳಿಸಿದರು. ಕ್ಷೇತ್ರದ ವರ್ತೂರು ವಾರ್ಡ್ ನ  ಗುಂಜೂರು ಗ್ರಾಮದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಅತಿ ಕಿರಿಯ ಬಾಲಕ ಬಾಲಕಿಯರ  ಹೊನಲು ಬೆಳಕಿನ ಅಂತರಾಷ್ಟ್ರೀಯ ಖೋ ಖೋ ಸ್ಪರ್ಧೆ 2023ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದೇಶಿಯ ಕ್ರೀಡೆಯಾದ ಖೋ ಖೋ ಅಟವನ್ನು ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ.  ಎಂದು ಹೇಳಿದರು. ರಾಜ್ಯದ ಎಲ್ಲಾ ಭಾಗಗಳಿಂದ 120ಕ್ಕು ಹೆಚ್ಚು ತಂಡಗಳು 1200 ಕ್ಕು ಹೆಚ್ಚು ಮಕ್ಕಳು ಖೋ ಖೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಅತಿ ಕಿರಿಯ ಬಾಲಕ,ಬಾಲಕಿಯರ ಆಟವನ್ನು ನೋಡಲು ಚಂದ ಮತ್ತು ಕಿರಿಯ ವಯಸ್ಸಿನಲ್ಲಿ ಏನು  ಸಾಧನೆ ಮಾಡುತ್ತಾರೋ ಅದು ಅವರ ಜೀವನದಲ್ಲಿ ಮುಂದುವರೆಯುತ್ತದೆ ಅದ್ದರಿಂದ ಹೆಚ್ಚಿನ ಅವಕಾಶಗಳನ್ನು…

Read More

ಬಳ್ಳಾರಿ:- ಡಿಕೆ ಶಿವಕುಮಾರ್ ಅವರು ಸರ್ಕಾರವನ್ನು ಬುಗುರಿಯಂತೆ ಆಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಶ್ರೀ ರಾಮುಲು ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಇಡೀ ಸರ್ಕಾರವನ್ನೇ ಡಿಕೆ ಶಿವಕುಮಾರ ಕೈಗೊಂಬೆ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ತೋರಿಸುವ ರೀತಿಯಲ್ಲಿ ಸರ್ಕಾರವನ್ನು ಬುಗುರಿಯಂತೆ ಆಡಿಸುತ್ತಿದ್ದಾರೆ. ಗೊಂಬೆ ಆಡುತ್ತೈತೆ ಎನ್ನುವ ಹಾಗೆ ಡಿಕೆಶಿಗಾಗಿ‌ ಮತ್ತೊಮ್ಮೆ ಹೊಸ ಹಾಡು ಬರೆಯಬೇಕು ಎಂದರು. ಸರ್ಕಾರ ಮತ್ತು ಕಾನೂನಿನ‌ ಮಧ್ಯೆ ತಿಕ್ಕಾಟ, ಭಿನ್ನಾಪ್ರಾಯ ಪ್ರಾರಂಭವಾಗಿದೆ. ಸರ್ಕಾರ ಮತ್ತು ಕಾನೂನು ಮಧ್ಯೆ ದೊಡ್ಡ ಆತಂಕ ನಿರ್ಮಾಣವಾಗಿದೆ. ಡಿಕೆ ಶಿವಕುಮಾರ್ ಮುಂದೆ ಸರ್ಕಾರ ನೇ ತಲೆ ಬಾಗುತ್ತಿದೆಯೇ ಅಥವಾ ಸರ್ಕಾರದ ಮುಂದೆ ಇವರು ತಲೆ ಬಾಗ್ತಿದ್ದಾರಾ ಗೊತ್ತಾಗ್ತಿಲ್ಲ. ಸಿಬಿಐ ತನಿಖೆ ಪ್ರಕರಣದಲ್ಲಿ ಡಿಕೆಶಿ ತಪ್ಪು ಮಾಡಿಲ್ಲ ಅಂದ್ರೆ ಹೊರಬರುವ ವಿಶ್ವಾಸ ಇರಬೇಕಿತ್ತು. ಆದರೆ ಸರ್ಕಾರವನ್ನು ದುರುಪಯೋಗಪಡಿಸಿಕೊಂಡು ಸಿಬಿಐ ಕೇಸ್ ಹಿಂಪಡೆಯುವಂತೆ ನೋಡಿಕೊಂಡಿದ್ದಾರೆ. ಒಂದು ರೀತಿ ಸರ್ಕಾರವನ್ನೇ ಡಿಕೆಶಿ ಕೆಳಗಡೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಇಷ್ಟೊಂದು ದೊಡ್ಡ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.

Read More

ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ 2023ರ ಫೈನಲ್ ಹಣಾಹಣಿಯಲ್ಲಿ ಕಾಂಗರೂ ಪಡೆ ಟೀಂ ಇಂಡಿಯಾ ವಿರುದ್ಧ ಗೆದ್ದು ಸಂಭ್ರಮಿಸಿತು. ಈ ವೇಳೆ ಟೂರ್ನಿಯ ಪೂರ ನಡೆದ ಪಂದ್ಯಗಳಲ್ಲಿ ಸತತ ಗೆಲುವಿನ ಮುಖೇನ ಅತ್ಯುತ್ತಮ ಪ್ರದರ್ಶನ ಕೊಟ್ಟು ಅಂತಿಮ ಪಂದ್ಯಕ್ಕೆ ಲಗ್ಗೆಯಿಡುವ ಮುನ್ನವೇ ಕ್ರಿಕೆಟ್ ಅಭಿಮಾನಿಗಳ ಮನವನ್ನು ಗೆದ್ದಿದ್ದ ಟೀಮ್ ಇಂಡಿಯಾ ಆಟಗಾರರು, ಸೋಲಿನ ಬಳಿಕ ಭಾರೀ ಬೇಸರವನ್ನು ಹೊರಹಾಕಿದರು. ಇದೀಗ ಈ ಕುರಿತಂತೆ ಟಿ-20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ತಮ್ಮ ಅನಿಸಿಕೆಯೊಂದನ್ನು ಹಂಚಿಕೊಂಡಿದ್ದಾರೆ. https://twitter.com/PTI_News/status/1728336979870224579?ref_src=twsrc%5Etfw%7Ctwcamp%5Etweetembed%7Ctwterm%5E1728336979870224579%7Ctwgr%5Ebfd3af760dd90cdc82b193f366ea982584e0a4df%7Ctwcon%5Es1_c10&ref_url=http%3A%2F%2Fapi-news.dailyhunt.in%2F ‘ವಿಶ್ವಕಪ್ ಮುಗಿದು ಇಂದಿಗೆ 4-5 ದಿನಗಳೇ ಕಳೆದಿವೆ. ನಮಗೆಲ್ಲರಿಗೂ ಭಾರೀ ನಿರಾಸೆಯಾಗಿದೆ. ನಮ್ಮ ಅಭಿಮಾನಿಗಳಿಂದ ನಮಗೆ ಅದ್ಭುತವಾದ ಬೆಂಬಲ ಸಿಕ್ಕಿದೆ ಮತ್ತು ಇದು ಒಂದು ಕ್ರೀಡೆಯಾಗಿದೆ’ ಎಂದು ಹೇಳಿದರು. ಇದು ನಮಗೆ ಹೆಚ್ಚು ಕಲಿಸುತ್ತದೆ ಎಂದ ಸೂರ್ಯ, ‘ಆಸ್ಟ್ರೇಲಿಯಾ ವಿರುದ್ಧ ಫೈನಲ್‌ ಪಂದ್ಯದ ನಂತರ ಪ್ರಧಾನಿ ಮೋದಿಯವರು ಡ್ರೆಸ್ಸಿಂಗ್ ರೂಮ್‌ಗೆ ಆಗಮಿಸಿ ನಮ್ಮನ್ನು ಭೇಟಿ ಮಾಡಿ, ಇದೊಂದು ಕ್ರೀಡೆ, ಈ ರೀತಿ ಆಗುವುದು ಸಾಮಾನ್ಯ ಬೇಸರವಾಗದಿರಿ…

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಮರೋಹಳ್ಳಿ, ತೊಣಚಿನಕುಪ್ಪೆ, ಭುವನೇಶ್ವರಿ ನಗರ, ಬೂದಿಹಾಳ್, ಬೊಮ್ಮನಹಳ್ಳಿ, ವೀರನಂಜಿಪುರ, ಕಾಚನಹಳ್ಳಿ, ಬೀಚನಹಳ್ಳಿ, ಪಾಪಭೋವಿಪಾಳ್ಯ, ಎರಮಂಚನಹಳ್ಳಿ, ಬೈರನಹಳ್ಳಿ, ಹೊಸೂರು, ಮಿಂಡಾಪುರ, ಎಸ್‌ಜೆಎಂ ನಗರ, ಎಸ್‌ಎಂಕೆ ನಗರ, ಬಾಬು ಜಗಜೀವನ ನಗರ, ರಾಜನಗರ, ವಿಜಯನಗರ, ದೇವರಾಜನಗರ ಮತ್ತು ಇತರ ಪ್ರದೇಶಗಳು. , ಎಸ್ಪಿ ಕಚೇರಿ, ಆರ್‌ಟಿಒ ಕಚೇರಿ, ಕೊಣನೂರು, ಚಿಕ್ಕೇನಹಳ್ಳಿ, ಬಿ ಜಿ ಹಳ್ಳಿ, ತೊಡ್ರನಾಳ್, ಟಿ ನುಲೇನೂರು, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆ.ಟಿ.ಎನ್.ಹಳ್ಳಿ, ಪಿಲಾಲಿ ಮತ್ತು ರಂಗನಾಥಪುರ. ರಾಮರಾಯನ ಪಾಳ್ಯ, ಬಿಟಿಎಸ್ ಮಿಲ್, ಕನ್ನಮಂಗಲ, ಕನ್ನಮಂಗಲ ಗೇಟ್, ನಾಗೇನಹಳ್ಳಿ, ಕೆಂಜಿಗಾನಹಳ್ಳಿ, ಕಮ್ಮಸಂದ್ರ, ಎಲ್ಲದಹಳ್ಳಿ, ತಿಮ್ಮಸಂದ್ರ, ವೊಡ್ಡಿಗೆರೆ, ಆಲೇನಹಳ್ಳಿ, ಬಿಲಂಕೋಟೆ ಏರಿಯಾ, ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಲಕ್ಕೇನಹಳ್ಳಿ, ಜಿರಾಮಪ್ಪನನಹಳ್ಳಿ, ಜಿರಾಮಪ್ಪನಹಳ್ಳಿ ದೊಡ್ಡೇರಿ d ಇಂಡಸ್ಟ್ರಿ, Sk ಸ್ಟೀಲ್ ಕೈಗಾರಿಕೆ, ಯಡೇಹಳ್ಳಿ, ಭಾರತೀಪುರ, ಕೆ ಜಿ ಶ್ರೀನಿವಾಸಪುರ, ಕೆಂಗಲ್ಕೆಂಪೋಹಳ್ಳಿ, ಬಿಲ್ಲನಕೋಟೆ, ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಲಕ್ಕೇನಹಳ್ಳಿ, ದೊಡ್ಡೇರಿ,…

Read More