ಧಾರವಾಡ: ವಿದ್ಯುತ್ ಕಾಯ್ದೆ 2023 ನ್ನು ರದ್ದುಗೊಳಿಸಲು ಅಗ್ರಹಿಸಿ ಹಾಗೂ ರೈತರ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಒತ್ತಾಯಿಸಿ, ಧಾರವಾಡ ತಾಲೂಕಿನ ಮಾವಿನಕೊಪ್ಪ ಗ್ರಾಮಸ್ತರು ಗ್ರಾಮದಲ್ಲಿ ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಗ್ರಾಮದ ಮುಖ್ಯ ರಸ್ತೆಯಲ್ಲಿ ರೈತರು ಸೇರಿದಂತೆ ಮಹಿಳೆಯರು ಸಂಯುಕ್ತ ಹೋರಾಟ ಕರ್ನಾಟಕಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಬರಗಾಲದಿಂದಾಗಿ ರೈತ ಸಮುದಾಯ ಸಂಕಷ್ಟದಲ್ಲಿದೆ. ಸರ್ಕಾರಗಳು ರೈತರ ನೇರವಿಗೆ ಸಕಾಲಕ್ಕೆ ಬರುತ್ತಿಲ್ಲ. ಈ ಕಡೆ ಬೆಳೆಯು ಇಲ್ಲ, ಆ ಕಡೆ ಸರ್ಕಾರಗಳ ಸಹಕಾರವು ಇಲ್ಲ, ಇದರಿಂದಾಗಿ ರೈತ ಬೀದುಗೆ ಬರುತ್ತಿದ್ದಾರೆ. ಈಗ ವಿದ್ಯುತ್ ಅನ್ನು ಖಾಸಗೀಕರಣ ಮಾಡುವ ವಿದ್ಯುತ್ ಕಾಯ್ದೆ 2023ರನ್ನು ಜಾರಿಗೆ ತರುತ್ತಿದ್ದಾರೆ, ಇದೂ ಕೂಡಾ ಭವಿಷ್ಯದಲ್ಲಿ ರೈತರಿಗೆ ಸಾರ್ವಜನಿಕರಿಗೆ ಮಾರಕವಾಗಿಲಿದೆ. ಹಾಗಾಗಿ ಈ ಕೂಡಲೇ ಈ ಕಾಯ್ದೆ ಸೇರಿದಂತೆ ರೈತರ ಎಲ್ಲ ಬೆಳೆಗಳುಗೆ ಬೆಂಬಲ ಬೆಲೆ ನೀಡಬೇಕು ಎಂದು ಅಗ್ರಹಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳುವುದಾಗಿ…
Author: AIN Author
ಬೆಂಗಳೂರು:- ಕೋಮು ಸಾಮರಸ್ಯವನ್ನು ಕಾಪಾಡುವುದು ನಮ್ಮ ಬಲವಾದ ನಂಬಿಕೆ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾವು ಬರೀ ಮಾತುಗಾರರು ಅಲ್ಲ. ಕೆಲಸ ಮಾಡಿ ತೋರಿಸುವವರು. ಚುನಾವಣೆ ಮುನ್ನ ನೀಡಿದ ಭರವಸೆಯಂತೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಜನರ ಹಿತಕ್ಕಾಗಿ ನಮ್ಮ ಕೆಲಸ. ಕೋಮು ಸಾಮರಸ್ಯವನ್ನು ಕಾಪಾಡುವುದು ನಮ್ಮ ಬಲವಾದ ನಂಬಿಕೆ. ಅದನ್ನು ಎಂತಹ ಕಷ್ಟ ಬಂದರೂ ಮಾಡುತ್ತೇವೆ. ಜನ ವಿಶ್ವಾಸವನ್ನು ಕಳೆದುಕೊಳ್ಳದೇ ನಮ್ಮ ಜತೆಗೆ ಇರಬೇಕಷ್ಟೇ. ಇದು ಸಿಎಂ ಸಿದ್ದರಾಮಯ್ಯ ಅವರ ನುಡಿ ಎಂದರು. ವಚನ ಭಂಗಕ್ಕಿಂತ ದೊಡ್ಡ ದೇಶದ್ರೋಹ ಮತ್ತೊಂದಿಲ್ಲ ಎಂದು ನಾನು ಬಲವಾಗಿ ನಂಬಿದವನು. ಇದು ನಮ್ಮ ಪಕ್ಷದ ಬದ್ಧತೆ ಕೂಡಾ ಆಗಿದೆ. ಭರವಸೆಗಳನ್ನು ನೀಡಿ ಚುನಾವಣೆಯಲ್ಲಿ ಗೆದ್ದು ಬಂದಿರುವ ನಮಗೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಇದೆ. ಇದನ್ನು ನಾವು ಮರೆತಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿ ಯೋಜನೆಗಳ ಭರವಸೆಯ ಈಡೇರಿಕೆಗೆ ಮೊದಲ ಸಚಿವ ಸಂಪುಟದಲ್ಲಿಯೇ ತಾತ್ವಿಕ ಅಂಗಿಕಾರ ಪಡೆದು ಜಾರಿ ಪ್ರಕ್ರಿಯೆಗೆ ಚಾಲನೆ…
ಚಾಮರಾಜನಗರ: ಜಗದೀಶ್ ಶೆಟ್ಟರ್ ಬಿಜೆಪಿಗೆ ಸೇರ್ಪಡೆ ಕುರಿತು ಸಚಿವ ಕೆ. ವೆಂಕಟೇಶ್ ಅವರು ಮಾತನಾಡಿ ದ್ದಾರೆ. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಾಗಿ ಕೆಲಸ ಮಾಡಿ ಸಾರ್ವಜನಿಕ ಜೀವನದಲ್ಲಿ ಅವರದೇ ಆದ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಒಂದಿನ ಈ ಪಾರ್ಟಿ ಒಂದಿನ ಆ ಪಾರ್ಟಿ ಎಂದರೆ ಏನು ಹೇಳಬೇಕು ಅವರಿಗೆ..?. ಅವರಿಗೆ ಗೌರವ ಕೊಡಲು ಎಂಎಲ್ಸಿಯನ್ನಾಗಿ ಪಕ್ಷ ಮಾಡಿತ್ತು. ಆಪರೇಷನ್ ಮಾಡುವವರು ಮಾಡುತ್ತಿರುತ್ತಾರೆ. ಆದರೆ ನಮ್ಮ ಪಕ್ಷದವರು ಯಾರೂ ಅಲ್ಲಿಗೆ ಹೋಗಲ್ಲ. 5 ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳಾದ ನಾವು ಪ್ರತಿಯೊಂದು ಸಾವಿಗೂ ಹೋಗುತ್ತೇವೆ, ಮದುವೆಗೂ ಹೋಗುತ್ತೇವೆ, ನಾಮಕರಣಕ್ಕೂ ಹೋಗುತ್ತೇವೆ. ಇವೆಲ್ಲಾ ವರ್ಕೌಟ್ ಆಗಲ್ಲ. ಪಬ್ಲಿಕ್ ಮೆಮೊರಿ ವೆರಿ ಶಾರ್ಟ್. ಬೇಗ ಮರೆಯುತ್ತಾರೆ. ಶ್ರೀರಾಮ ಮಂದಿರ ಉದ್ಘಾಟನೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಚಿವರು ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.
ಬಳ್ಳಾರಿ: ಕಂಪ್ಲಿ ತಾಲೂಕಿನಲ್ಲಿ ಸಡಗರ ಸಂಭ್ರಮದಿಂದ 75 ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಕ್ರೀಡಾಂಗಣದಲ್ಲಿ ಕಂಪ್ಲಿ ಶಾಸಕ ಜೆ ಎನ್ ಗಣೇಶ್ ಧ್ವಜಾರೋಹಣ ನೇರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಅದ್ಬುತ ನರ್ತನ ಮಾಡಿದರು. ಭಾರತೀಯತೆಯನ್ನು ಸಾರುವ ಸಿನಿಮಾ ಗೀತೆಗಳಿಗೆ ಸ್ಟೆಪ್ ಹಾಕಿದ ವಿದ್ಯಾರ್ಥಿಗಳು. ಇನ್ನೂ ಶಾಸಕಜೆ ಎನ್ ಗಣೇಶ್, ಕಂಪ್ಲಿ ತಹಸೀಲ್ದಾರ್ ಎಸ್ ಶಿವರಾಜ್ ಕಂಪ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.
ರಾಯಚೂರು: ಬಿಜೆಪಿಯವರಿಗೆ ಜನರತ್ರ ಹೋಗ್ಲಿಕ್ಕೆ ಮಕ್ಕ ಇಲ್ಲ ಹಾಗಾಗಿ ಒಬ್ಬರೊಬ್ಬರು ನಾಯಕನ ಪಕ್ಷಕ್ಕೆ ಸೇರಿಸಿಕೊಂಡು ಪಕ್ಷ ಕಟ್ಟಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರುವ ವಿಚಾರ, ರಾಯಚೂರಿನಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಶರಣು ಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ನಮ್ಮಲ್ಲಿ ಅವರನ್ನು ಎಂಎಲ್ಸಿ ಮಾಡಿದ್ದೇವೆ, ಕಾಂಗ್ರೆಸ್ ನಲ್ಲಿ ಸೋತವರಿಗೆ ಎಂಎಲ್ಸಿ ಮಾಡಿರುವ ಉದಾಹರಣೆಗಳು ಇಲ್ಲ. ಅವರು ನಮ್ಮ ಪಕ್ಷಕ್ಕೆ ಬಂದಿದ್ದರು ಗೌರವ ಕೊಟ್ಟಿದ್ದಿವಿ,ಪಕ್ಷ ಬಿಟ್ಟು ಹೋಗ್ತಿದ್ದಾರೆ ಅವರ ವೈಯಕ್ತಿಕ ನಿರ್ಧಾರ ಎಂದು ಹೇಳಿದರು. ಪ್ರಜಾಪ್ರಭುತ್ವವಾಗಿದೆ ಯಾರು ಯಾವ ಪಕ್ಷದಲ್ಲಿ ಆದರೂ ಹೋಗುವುದು,ವ್ಯಕ್ತಿಗಳಿಂದ ಪಕ್ಷ ಬೆಳೆಯುವುದಿಲ್ಲ, ಪಕ್ಷದಿಂದ ವ್ಯಕ್ತಿಗಳು ಬೆಳೆಯುತ್ತಾರೆ. ಬಿಜೆಪಿ ಅವರಿಗೆ ರಾಜ್ಯದ ಜನ ಮೂಲೆಗುಂಪು ಮಾಡಿದ್ದಾರೆ, ಸಾಮಾನ್ಯ ಜನರು ವೋಟ್ ಹಾಕಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ಕೊಟ್ಟಿದ್ದಾರೆ. ಹಿಂದಿನ ಸರಕಾರದ ಭ್ರಷ್ಟಾಚಾರ, ಹಗರಣಗಳುಗೆ, ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ನೀಡಿದ್ದಾರೆ. ಬಿಜೆಪಿಯವರಿಗೆ ಜನರತ್ರ ಹೋಗ್ಲಿಕ್ಕೆ ಮಕ್ಕ ಇಲ್ಲ ಹಾಗಾಗಿ ಒಬ್ಬರೊಬ್ಬರು ನಾಯಕನ ಪಕ್ಷಕ್ಕೆ…
ಬೆಂಗಳೂರು:- ಮುಂದಿನ ಆರು ತಿಂಗಳು ಸೈಬರ್ ಕ್ರೈಂ ತನಿಖೆ ಭೇದಿಸುವುದು ನಮ್ಮ ಗುರಿ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಳೆದ ನಾಲ್ಕು ವರ್ಷಗಳಲ್ಲಿ ಸೈಬರ್ ಕ್ರೈಂ ಪ್ರಮಾಣವು ಮಿತಿ ಮೀರುತ್ತಿದೆ. ಮುಂದಿನ ಆರು ತಿಂಗಳಲ್ಲಿ ರಾಜ್ಯದ ಎಲ್ಲ ಪೊಲೀಸ್ ಸಿಬ್ಬಂದಿಯೂ ಸೈಬರ್ ಕ್ರೈಂ ತನಿಖೆ ನಡೆಸಿ ಪ್ರಕರಣ ಭೇದಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು ನಗರದ ಪ್ರತಿ ಪೊಲೀಸ್ ಠಾಣೆಗಳಲ್ಲೂ ಸೈಬರ್ಗೆ ಸಂಬಂಧಿಸಿದ ವಾರ್ಷಿಕವಾಗಿ 4 ರಿಂದ 5 ಸಾವಿರ ಕೇಸ್ಗಳು ದಾಖಲಾಗುತ್ತಿವೆ. ಒಂದು ಠಾಣೆಯ ಸಿಬ್ಬಂದಿಯಿಂದ 5 ಸಾವಿರ ಕೇಸ್ ಬೇಧಿಸುವುದು ಅಸಾಧ್ಯ. ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು. ಸೈಬರ್ ಕ್ರೈಂ ನಿಯಂತ್ರಿಸಲು ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿದೆ. ಇನ್ನಷ್ಟು ದಕ್ಷತೆ ಹೆಚ್ಚಿಸುವ ಅಗತ್ಯವಿದೆ. ಪ್ರತಿ ಸೈಬರ್ ಠಾಣೆಗಳಲ್ಲಿ ಇದುವರೆಗೆ ಠಾಣಾಧಿ ಕಾರಿಯೇ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇನ್ನು ಮುಂದೆ ಸೈಬರ್ ಠಾಣೆಗಳಲ್ಲಿ ಡಿವೈಎಸ್ಪಿಗಳನ್ನು ನೇಮಿಸಲು ಚಿಂತಿಸಲಾಗಿದೆ. ಹೆಚ್ಚಿನ ಪ್ರಮಾಣದ ಸೈಬರ್ ಕ್ರೈಂ…
ಬೆಂಗಳೂರು:- ಶೆಟ್ಟರ್ ನಂಬಿಕೆ ದ್ರೋಹ ಮಾಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅವರ ಆಡಿದ ಮಾತುಗಳು ನಂಬಿ ಮತ್ತು ಹಿರಿತನಕ್ಕೆ ಗೌರವ ನೀಡಿ, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮೂಲ ಅಭ್ಯರ್ಥಿ ಸುಲಭವಾಗಿ ಗೆಲ್ಲುವ ಅವಕಾಶವಿದ್ದರೂ ಅದನ್ನು ಶೆಟ್ಟರ್ ಅವರಿಗೆ ಬಿಟ್ಟುಕೊಡಲಾಯಿತು. ಅದರೆ ಶೆಟ್ಟರ್ 35,000 ಮತಗಳ ಅಂತರದಿಂದ ಸೋತರು. ಆಗಲೂ ಕಾಂಗ್ರೆಸ್ ಅವರನ್ನು ಬಿಟ್ಟುಕೊಡದೆ, ಅವರ ವಯಸ್ಸಿಗೆ ಮನ್ನಣೆ ನೀಡಿ ವಿಧಾನ ಪರಿಷತ್ ಸದಸ್ಯನಾಗಿ ನೇಮಕ ಮಾಡಿತು ಎಂದು ಶಿವಕುಮಾರ್ ಹೇಳಿದರು. ಕಳೆದ 2-3 ತಿಂಗಳಿಂದ ಅವರು ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದ ವಿಷಯ ತನ್ನ ಗಮನಕ್ಕೆ ಬಂದಿತ್ತು ಎಂದ ಅವರು, ನಿನ್ನೆ ಬೆಳಗ್ಗೆಯೂ ಅವರೊಂದಿಗೆ ಮಾತಾಡಿದ್ದೆ ಎಂದರು.
ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಯಂಡ್ ನ್ಯೂರೋ ಸೈನ್ಸಸ್ ಅರ್ಜಿ ಆಹ್ವಾನಿಸಿದೆ. ನ್ಯೂರಾಲಜಿಸ್ಟ್, ಫಿಸಿಯೋಥೆರಪಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್, ಡೇಟಾ ಎಂಟ್ರಿ ಆಪರೇಟರ್ ಮತ್ತು ಖಾತೆ ಸಹಾಯಕ ಸೇರಿ ಸುಮಾರು 162 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದ್ದು, ಆಸಕ್ತರು ಜನವರಿ 25ರಿಂದ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹುದ್ದೆ ವಿವರ ನರವಿಜ್ಞಾನಿ: ಎಂಬಿಬಿಎಸ್, ಡಿಎಂ, ಎಂಡಿ-33 ಹುದ್ದೆ ನ್ಯೂರೋ ನರ್ಸ್: ಎಂ.ಎಸ್ಸಿ-1 ಹುದ್ದೆ ನರ್ಸ್: ಬಿ.ಎಸ್ಸಿ-30 ಹುದ್ದೆ ಕ್ಲಿನಿಕಲ್ ಸೈಕಾಲಜಿಸ್ಟ್: ಎಂ.ಫಿಲ್, ಎಂಎ, ಎಂ.ಎಸ್ಸಿ-32 ಹುದ್ದೆ ವೈದ್ಯಕೀಯ ಸಮಾಜ ಸೇವಕ: ಸ್ನಾತಕೋತ್ತರ ಪದವಿ-1 ಹುದ್ದೆ ಡೇಟಾ ಎಂಟ್ರಿ ಆಪರೇಟರ್ ಮತ್ತು ಖಾತೆ ಸಹಾಯಕ: ಪದವಿ-1 ಹುದ್ದೆ ಫಿಸಿಯೋಥೆರಪಿಸ್ಟ್: ಪದವಿ-32 ಹುದ್ದೆ ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಮತ್ತು ಆಡಿಯಾಲಜಿಸ್ಟ್/ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್: ಪದವಿ-32 ಹುದ್ದೆ ಸಂದರ್ಶನದ ದಿನಾಂಕ ನರವಿಜ್ಞಾನಿ: ಜನವರಿ 29 ನ್ಯೂರೋ ನರ್ಸ್: ಜನವರಿ…
ಚಾಮರಾಜನಗರ: ಗಣರಾಜ್ಯೋತ್ಸವದಿನದಂದು ಆಕ್ಸಿಜನ್ ದುರಂತದಲ್ಲಿ ಮಡಿದ ಕುಟುಂಬಸ್ಥರಿಗೆ ಗುಡ್ ನ್ಯೂಸ್ ನೀಡಿದೆ. ಹೌದು ಕೋವಿಡ್ ಆಸ್ಪತ್ರೆಯಲ್ಲಿ 2021ರ ಮೇ 2ರಂದು ಆಮ್ಲಜನಕ ಸಕಾಲದಲ್ಲಿ ಪೂರೈಕೆಯಾಗದೆ ಮೃತಪಟ್ಟ 32 ಮಂದಿಯ ಕುಟುಂಬದ ಸದಸ್ಯರಿಗೆ ಫೆ.1ರಿಂದ ಸರ್ಕಾರಿ ಕೆಲಸ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಘೋಷಿಸಿದರು. ಗಣರಾಜ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಫೆ.1ರಿಂದ ಅವರು ಜಿಲ್ಲೆಯಲ್ಲಿ ಕೆಲಸ ಮಾಡಬಹುದು. ಸಂತ್ರಸ್ತರ ಕುಟುಂಬದವರು ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಬೇಕು. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚು ಅವಕಾಶ ನೀಡಲಾಗುವುದು’ ಎಂದರು. ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ಕುರಿತು ಪ್ರಸ್ಥಾಪಿಸಿದ್ರು.ಸ್ವತಃ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ವೇಳೆ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಭರವಸೆ ನೀಡಿದ್ರು.ಇಂದು ಧ್ವಜಾರೋಹಣ ಬಳಿಕ ಭಾಷಣದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತ ಪಟ್ಟ 32 ಕುಟುಂಬದ ಸದಸ್ಯರಿಗೆ ಕೆಲಸ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಗದಗ: ಕಾಂಗ್ರೆಸ್ ಸಮುದ್ರ ಇದ್ದಂತೆ ಜಗದೀಶ್ ಶೆಟ್ಟರ್ ಬಂದ್ರು ಅಂತ ಉಕ್ಕಲಿಲ್ಲ ಅವರು ಹೋದರು ಅಂತ ಹೆಚ್ಚು ಕಡಿಮೆಯಾಗಿಲ್ಲ ಎಂದು ಗದಗದಲ್ಲಿ ಕಾನೂನು ಸಚಿವ ಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತತ್ವ, ಸಿದ್ಧಾಂತ, ಜನಪರ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಸಂಘಟನೆಗೆ ಶಕ್ತಿ ನೀಡಿದೆ. ಕ್ರಾಂತಿಕಾರಕ ಬದಲಾವಣೆಯನ್ನು ರಾಜ್ಯದಲ್ಲಿ ಕಾಂಗ್ರೆಸ್ ತಂದಿದೆ. ನಮ್ಮನ್ನು ನೋಡಿ ಮೋದಿ ಅವರೂ ಗ್ಯಾರಂಟಿ ಅನ್ನೋದಕ್ಕೆ ಪ್ರಾರಂಭಿಸಿದ್ರು. ಯಾರೋ ಒಬ್ಬರು ಹೋದರು ಹಂತ ಕಾಂಗ್ರೆಸ್ ಮೇಲೆ ಪರಿಣಾಮ ಬೀರಲ್ಲ, ಶೆಟ್ಟರ್ ಅವರು ಜೆಂಟಲ್ ಮ್ಯಾನ್ ಅಂತ ತಿಳಿದುಕೊಂಡು ಸ್ವಾಗತಿಸಿದ್ವಿ, ಅವರು ಸಿಎಂ ಆದವರು ಅವರಿಗೆ ಎಂಎಲ್ಎ ಟಿಕೆಟ್ ಕೊಟ್ಟಿದ್ದೇವೆ. ಸೋಲಾದಾಗ ಗೌರವಕ್ಕೆ ಚ್ಯುತಿ ಬರಬಾರದು ಅಂತ ಎಂಎಲ್ಸಿ ಮಾಡಿದ್ವಿ. ಅವರ ಜೊತೆಗೆ ನಡೆದುಕೊಂಡ ರೀತಿ ಅವರು ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ಗೆ ಚಿಂತೆ ಮಾಡುವ ವಿಷಯ ಏನಿಲ್ಲ ಎಂದು ಹೇಳಿದರು. ಇನ್ನು ಶೆಟ್ಟರ್ ಶೆಟ್ಟರ್ ಘರ್ ವಾಪ್ಸಿಯಿಂದ ಲಿಂಗಾಯತ ಮತಗಳು ಮತ್ತೆ ಬಿಜೆಪಿ ಕಡೆಗೆ…