Author: AIN Author

ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಚ್ಚನೆ ಏನಾದ್ರೂ ತಿನ್ನೋಣ ಅನ್ಸತ್ತೆ. ಹೀಗಾಗಿ ಚಳಿಗಾಲದಲ್ಲಿ ರಸ್ತೆ ಬದಿ ಮಾರುವ ಚುರುಮುರಿ ಅಥವಾ ಮಸಾಲೆ ಮಂಡಕ್ಕಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಇದನ್ನ ಮನೆಯಲ್ಲೇ ಹೇಗೆ ಮಾಡೋದು ಎಂದು ತಿಳಿಯೋಣ.. ಚುರುಮುರಿ ಮಾಡಲು ಬೇಕಾಗುವ ಪದಾರ್ಥಗಳು ಮಂಡಕ್ಕಿ ಈರುಳ್ಳಿ ಕ್ಯಾರೆಟ್​ ಟೊಮೆಟೊ ಮಿಕ್ಸ್ಚರ್ ಶೇಂಗಾ ಅರಿಶಿನ ಪುಡಿ ಖಾರದ ಪುಡಿ ಹಸಿ ಮೆಣಸು ಗರಂ ಮಸಾಲ ಕೊಬ್ಬರಿಎಣ್ಣೆ ಕೊತ್ತುಂಬರಿ ಸೊಪ್ಪು ಉಪ್ಪು ನಿಂಬೆ ಹಣ್ಣು ಚುರುಮುರಿ ಮಾಡುವ ವಿಧಾನ ಒಂದು ಪಾತ್ರೆಗೆ ಒಂದು ಚಮಚ ಕೊಬ್ಬರಿ ಎಣ್ಣೆ, ಸಣ್ಣಗೆ ಕತ್ತರಿಸಿದ ಈರುಳ್ಳಿ, ತುರಿದ ಕ್ಯಾರೆಟ್​, ಸಣ್ಣಗೆ ಕತ್ತರಿಸಿದ ಟೊಮೆಟೊ, ಮಿಕ್ಸ್ಚರ್ (ಸಣ್ಣ ಖಾರದ ಕಡ್ಡಿ), ಶೇಂಗಾ, ಅರಿಶಿನ ಪುಡಿ, ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನ ಕಾಯಿ, ಗರಂ ಮಸಾಲ ಪುಡಿ, ಸಣ್ಣಗೆ ಕತ್ತರಿಸಿದ ಕೊತ್ತುಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ನಿಂಬೆ ಹಣ್ಣಿನ ರಸ ಹಾಕಿ. ಎಲ್ಲವನ್ನೂ ದೊಡ್ಡ ಚಮಚದಲ್ಲಿ ಚೆನ್ನಾಗಿ ಕಲಸಿ. (ಇಲ್ಲಿ…

Read More

ಗಂಡ ಹೆಂಡತಿಯ ಜಗಳ ಉಂಡು ಮಲಗುವವರೆಗೆ ಎಂದಷ್ಟೇ ಇದ್ದರೆ ಚಂದ. ಅದರ ಬದಲು ರೂಮ್ ನಿಂದ ಆಚೆಗೆ ಫೈಟಿಂಗ್ ಶುರುವಾದರೆ ಅದು ನೇರವಾಗಿ ಪರಿಣಾಮ ಬೀರುವುದು ನಿಮ್ಮ ಎದುರಿಗೆ ಇರುವ ಪುಟ್ಟ ಕಂದಮ್ಮನ ಮೇಲೆ. ಎಷ್ಟೋ ಬಾರಿ ಕೆಲವು ಪತಿ-ಪತ್ನಿ ಕೈ ಕೈ ಮಿಲಾಯಿಸಿ ಹೊಡೆದಾಟ ಮಾಡಿಕೊಳ್ಳುವ ಮಟ್ಟಕ್ಕೆ ಜಗಳವಾಡುತ್ತಾರೆ. ಕೇವಲ ಬಾಯಿ ಮಾತಲ್ಲಿ ಅಲ್ಲದೆ ಒಬ್ಬರನ್ನ ಒಬ್ಬರು ತಿಳಿಸುವಷ್ಟು ಕೋಪ ಕ್ರೋಧ ಬೆಳೆಸಿಕೊಂಡಿರುತ್ತಾರೆ. ಇವುಗಳನ್ನು ಮಗು ನೇರವಾಗಿ ನೋಡಿದಾಗ ಅದರ ಮನಸ್ಸಿನ ಮೇಲೆ ಬಹಳ ಕೆಟ್ಟ ಪರಿಣಾಮ ಉಂಟಾಗುತ್ತದೆ. ಒಂದು ಅಧ್ಯಯನದ ಪ್ರಕಾರ ಕೆಲವು ಹಳ್ಳಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ಮೇಲೆ ನಡೆಸಿರುವ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದೆ. ತಂದೆ ತಾಯಿ ಸದಾ ಸಂಘರ್ಷಕ್ಕೆ ಒಳಗಾಗಿರುವ ಮನೆಯಲ್ಲಿ ಬದುಕುವ ಮಗುವಿನಲ್ಲಿ ಒತ್ತಡದ ಹಾರ್ಮೋನು ಕಾರ್ಟಿಸೋಲ್ ಅಧಿಕವಾಗಿರುತ್ತದೆ ಶಾಂತವಾಗಿರುವ ಕುಟುಂಬದಲ್ಲಿ ಇರುವ ಮಗುವಿನಲ್ಲಿ ಒತ್ತಡದ ಹಾರ್ಮೋನ್ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಇದರಿಂದಾಗಿ ಯಾವ ಮಗುವಿನಲ್ಲಿ ಕಾರ್ಟಿಸೋಲ್ ಹೆಚ್ಚಾಗಿರುತ್ತದೆಯೋ ಅಂತಹ ಮಗು ಅನಾರೋಗ್ಯಕ್ಕೆ…

Read More

ಕೋಲ್ಕತ್ಕಾ:- 2024 ರಲ್ಲಿ ಮತ್ತೆ ಮೋದಿ ಪಿಎಂ ಆಗಲಿದ್ದಾರೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ, 2024 ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು 2ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ, 2026 ರಲ್ಲಿ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತುಷ್ಟೀಕರಣ, ಭ್ರಷ್ಟಾಚಾರ ಮತ್ತು ರಾಜಕೀಯ ಹಿಂಸಾಚಾರವನ್ನು 2026 ರಲ್ಲಿ ಕೊನೆಗಾಣಿಸಲಾಗುವುದು ಎಂದು ಹೇಳಿದರು. ಮಮತಾ ಬ್ಯಾನರ್ಜಿ ಅವರು ಸಿಎಎ ಜಾರಿಯನ್ನು ವಿರೋಧಿಸುತ್ತಿದ್ದಾರೆ. ಆದರೆ, ಅದರ ಅನುಷ್ಠಾನವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದು ಪ್ರತಿಪಕ್ಷಗಳ ಕಾನೂನಿಗೆ ವಿರುದ್ಧದ ಬಲವಾದ ನಿಲುವನ್ನು ತೋರಿಸುತ್ತದೆ. ಅಕ್ರಮ ವಲಸಿಗರು ದೇಶದಲ್ಲಿ ಹೆಚ್ಚುತ್ತಿದ್ದಾರೆ. ಇದರ ತಡೆಗೆ ಸಿಎಎ ಜಾರಿಯೊಂದೇ ಕಠಿಣ ಕ್ರಮವಾಗಿದೆ. ವಿರೋಧಿಸುವ ಮಮತಾ ಅವರು ಅಕ್ರಮ ವಲಸಿಗರಿಗೆ…

Read More

ಬೆಂಗಳೂರು:- ಚೈನಾ ನ್ಯುಮೋನಿಯಾ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಚೈನಾ ನ್ಯುಮೋನಿಯಾ ಬಗ್ಗೆ ಕಟ್ಟೆಚ್ಚರ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಚೈನಾ ನ್ಯುಮೋನಿಯಾ ಹರಡುತ್ತಿದೆ ಎಂಬ ವರದಿಗಳ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಟಿಸಿದೆ. ಇದೇ ರೀತಿ ಕೇಂದ್ರ ಸರ್ಕಾರವೂ ಈ ಸಂಬಂಧ ಮಾರ್ಗಸೂಚಿ ಪ್ರಕಟಿಸಿದೆ ಎಂದು ಹೇಳಿದರು. ರಾಜ್ಯದಲ್ಲಿ ಇದುವರೆಗೆ ಚೈನಾ ನ್ಯುಮೋನಿಯಾಗೆ ಸಂಬಂಧಿಸಿದ ವೈರಸ್ ಪತ್ತೆಯಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಆಸ್ಪತ್ರೆಗಳಲ್ಲೂ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಸಂಬಂಧ ಅಣಕು ಪ್ರದರ್ಶನ ನಡೆಸಿ ಎಚ್ಚರಿಕೆ ಮೂಡಿಸಬೇಕು ಎಂಬುದೂ ಸೇರಿದಂತೆ ಹಲವು ಬಗೆಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಬಳಕೆ ಮಾಡಲು ಆದ್ಯತೆ ನೀಡುವಂತೆ ಹೇಳಲಾಗಿದೆ ಎಂದರು. ಜ್ವರ ಬಂದ ತಕ್ಷಣ ಜನ ಆಸ್ಪತ್ರೆಗಳಿಗೆ ತೆರಳಿ ವಿವಿಧ ಪರೀಕ್ಷೆಗಳಿಗೆ ಒಳಪಡಬೇಕು ಎಂದ ಅವರು, ಈ ಶೀತಜ್ವರ ಸಾಮಾನ್ಯವಾಗಿ…

Read More

ಕಲಬುರಗಿ:-  2023ರ ವಾರ್ಷಿಕ ಪೋಲಿಸ್ ಕ್ರೀಡಾಕೂಟದ ಅಂಗವಾಗಿ ಇಂದು ನಡೆದ ಕ್ರಿಕೆಟ್ ಪಂದ್ಯದಲ್ಲಿ ಪೋಲಿಸ್ ತಂಡದ ವಿರುದ್ಧ ಮೀಡಿಯಾ ತಂಡ ಭರ್ಜರಿ ಜಯ ಸಾಧಿಸಿತು. ಟಾಸ್ ಗೆದ್ದ ಪೋಲಿಸ್ ಆಯುಕ್ತ ಆರ್. ಚೇತನ್ ನೇತೃತ್ವದ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 10 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 97 ರನ್ ಮಾಡಿತು.ನಂತರ ಬ್ಯಾಟ ಮಾಡಿದ ಮೀಡಿಯಾ ತಂಡ ಕೇವಲ 5.4 ಓವರ್‌ಗಳಲ್ಲಿ ಜಸ್ಟ್ ಒಂದು ವಿಕಟ್ ಕಳೆದುಕೊಂಡು 98 ರನ್ ಬಾರಿಸಿ ಜಯ ಸಾಧಿಸಿತು. ಒಟ್ಟಾರೆ ಅಂತಿಮವಾಗಿ ಪೋಲಿಸ್ ತಂಡವನ್ನು 9 ವಿಕಟ್‌ಗಳಿಂದ ಸೋಲಿಸಿ, ಗೆಲುವಿನ ಕಿರೀಟ ಮುಡಿಗೆರಿಸಿಕೊಂಡಿತು. ಪ್ರೆಸ್ ತಂಡದ ಪರವಾಗಿ ಸಂಜು ರಾಠೋಡ 22 ಎಸೆತಗಳಲ್ಲಿ 6 ಸಿಕ್ಸ್ರ್ ಮತ್ತು 10 ಬೌಂಡರಿ ಸೇರಿ 78 ರನ್ ಬಾರಿಸಿದ್ರೆ ಅಮ್ಜದ್ 17 ರನ್ ಮಾಡಿ ಔಟಾಗದೇ ಉಳಿದರು. ಮೀಡಿಯಾ ತಂಡದ ಕ್ಯಾಪ್ಟನ್ ಪ್ರವೀಣ ರೆಡ್ಡಿ ವೈಸ್ ಕ್ಯಾಪ್ಟನ್ ಅರುಣ್ ಕದಂ ಸೇರಿದಂತೆ ಇಡೀ ಟೀಂ ಗೆಲುವಿನ ಖುಷಿಯೊಂದಿಗೆ…

Read More

ಧಾರವಾಡ:- ಅಭಿವೃದ್ಧಿ ಬಗ್ಗೆ ಬಿ ಆರ್ ಪಾಟೀಲ್ ಮತ್ತೆ ಸಿಎಂ ಗೆ ಪತ್ರ ಬರೆದ ವಿಚಾರವಾಗಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ ಈ ಸಂಬಂಧ ಧಾರವಾಡದಲ್ಲಿ ಮಾತನಾಡಿದ ಅವರು, ಈಗ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಕಲಾಪದ ವೇಳೆ ಅದರ ಬಗ್ಗೆ ಮಾತನಾಡಿದರೆ ಅವಕಾಶ ಕೊಡುತ್ತೇನೆ. ಚರ್ಚೆ ಮಾಡಲು ಅವಕಾಶ ನೀಡುತ್ತೇನೆ. ಅಧಿವೇಶನದ ವೇಳೆ ಯಾವುದಕ್ಕೂ ಸ್ಪಂದಿಸಿಲ್ಲ ಅಂತಾರೆ. ಅದಕ್ಕಾಗಿ ಮಂತ್ರಿಗಳು ಹೆಚ್ಚಿನ ಸಮಯ ಅಧಿವೇಶನದಲ್ಲಿ ಕುಳಿತುಕೊಳ್ಳಬೇಕು ಜಿಲ್ಲಾ ಪ್ರವಾಸ ಮಾಡಬೇಕು, ಜನರ ಕಷ್ಟಕ್ಕೆ ಸ್ಪಂದಿಸಿ. ಶಾಸಕರು ಕೇಳುವ ಪ್ರಶ್ನೆಗೆ ಸರಿಯಾದ ಉತ್ತರ ನೀಡುವ ತಯಾರಿ ಮಾಡಿಕೊಂಡು ಬರಬೇಕು. ಕಾರ್ಯಕ್ರಮ ಜಾರಿಗೆ ತರುವಂತೆ ಕೆಲಸ ಮಾಡಬೇಕು. ದುರ್ದೈವ ದಿಂದ ಈ ಕೆಲಸ ಬಹಳ ಕಡಿಮೆಯಾಗಿದೆ. ಇದು ಸುಧಾರಣೆ ಆಗಬೇಕು ಎಂದರು. ಇನ್ನೂ ಉತ್ತರ ಕರ್ನಾಟಕ ಬಗ್ಗೆ ಅಧಿವೇಶನದಲ್ಲಿ ಹೆಚ್ಚು ಚರ್ಚೆ ಮಾಡುವ ವಿಚಾರವಾಗಿ ಮಾತನಾಡಿ, ಡಿಸೆಂಬರ್ 5, 6 ರಂದು ಪ್ರಶ್ನೋತ್ತರ ಬಳಿಕ ಉತ್ತರ ಕರ್ನಾಟಕ ಚರ್ಚೆ ಬಗ್ಗೆ ಸಮಯ ನೀಡುತ್ತೇನೆ.…

Read More

ಕೆಆರ್‌ಪುರ:- ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಒತ್ತಡದಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತವಾಗಿ ತಪಾಸಣೆಗೆ ಒಳಗಾಗಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಬಾಬು ಅವರು ತಿಳಿಸಿದರು. ಕೆಆರ್‌ಪುರ ಕ್ಷೇತ್ರದ ಹೊರಮಾವಿನ ಕಲ್ಕೆರೆ ಬಳಿ ಕನ್ನಡ ರಾಜ್ಯೋತ್ಸವ ಹಾಗೂ ಡಾ.ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಲಯನ್ಸ್ ಕ್ಲಬ್ ಮತ್ತು ಸಿವಿರಾಮನ್ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಕಿವಿ, ಮೂಗು, ಮತ್ತು ನೇತ್ರ ತಪಾಸಣೆ ಶಿಬಿರ ಮತ್ತು ವೈದ್ಯರ ಸಲಹೆ ಮೇರೆಗೆ ಉಚಿತ ಔಷಧಿ ಮತ್ತು ಕನ್ನಡಕಗಳನ್ನು ನೀಡುತ್ತಿದ್ದು ಬಡವರು ಇದರ ಸೇವೆ ಪಡೆದುಕೊಳ್ಳಬೇಕು ಎಂದು ಹೇಳಿದರು. ಪುನೀತ್ ರಾಜ್‌ಕುಮಾರ್ ಅವರ ಸವಿ ನೆನಪಿನಲ್ಲಿ ಕಳೆದ ಎರಡು ವರ್ಷದಿಂದ ಈ ಶಿಬಿರ ಆಯೋಜನೆ ಮಾಡುತ್ತಿದ್ದು, ಕ್ಷೇತ್ರದ 11 ವಾರ್ಡ್ನಲ್ಲಿ 11 ಜಾಗದಲ್ಲಿ ಪ್ರತೀ ವಾರ ಈ ಶಿಬಿರ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು. ಆರೋಗ್ಯ ಚೆನ್ನಾಗಿದ್ದರೆ…

Read More

ಕೋಲಾರ:- ಮುಳಬಾಗಿಲು, ನಕಲಿ ಬಿತ್ತನೆ ಬೀಜ ಹಾಗೂ ಹವಾಮಾನ ವೈಪರಿತ್ಯ ದಿಂದ ನಷ್ಟವಾಗಿರುವ ಟೆಮೋಟೋ, ಆಲೂಗಡ್ಡೆ ಪ್ರತಿ ಎಕರೆಗೆ 50 ಸಾವಿರ ಪರಿಹಾರ ಬಿಡುಗಡೆ ಮಾಡಿ ಹದಗೆಟ್ಟಿರುವ ತಾಲ್ಲೂಕು ಆಡಳಿತವನ್ನು ಸರಿಪಡಿಸಿ ಸರ್ಕಾರಿ ಆಸ್ಪತ್ರೆಗೆ ಮೂಲಭೂತ ಸೌಕರ್ಯಗಳು ಒದಗಿಸಿ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ, ಗೋಮಾಳ ತೆರವುಗೊಳಿಸಲು ವಿಶೇಷ ತಂಡ ರಚಿಸಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರಿಗೆ ಮನವಿಯನ್ನು ಸಲ್ಲಿಸಿದ್ರು. ಮುಳಬಾಗಿಲು ನಗರದಲ್ಲಿ ನಡೆದ ಜನತಾ ದರ್ಶನದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಬರದ ನಡುವೆಯು ರೈತರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಂತಹ ಟೆಮೋಟೋ ಬೆಳೆಗೆ ಬಿಂಗಿ ರೋಗ ಆಲೂಗಡ್ಡೆ ಮೂರು ತಿಂಗಳಾದರೂ ಗಡ್ಡೆ ಬಿಡದೆ ಹಾಕಿದ ಬಂಡವಾಳ ಕೈಗೆ ಸಿಗದೆ ಖಾಸಗಿ ಸಾಲಕ್ಕೆ ಸಿಲುಕಿ ಸರ್ಕಾರ ತೋಟಗಾರಿಕೆ ಮತ್ತು ಜಿಲ್ಲಾಡಳಿತದ ವರದಿಯಿಂದ ಪರಿಹಾರ ಸಿಗುವ ನಿರೀಕ್ಷೆಯಲ್ಲಿ ರೈತರು ಜಾತಕ ಪಕ್ಷಗಳಂತೆ ಎದುರು ನೋಡುತ್ತಿದ್ದಾರೆ. ರೈತರ ಹಣೆ ಬರಹವನ್ನು ಬರೆಯುವ…

Read More

ಬೆಂಗಳೂರು:- ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ವಿಚಾರದ ಕುರಿತು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೊದಲ ಪಟ್ಟಿಯಲ್ಲಿ ಫಸ್ಟ್​ ಟೈಂ ಶಾಸಕರಾದವರಿಗೆ ಅವಕಾಶ ನೀಡಿಲ್ಲ. ಮುಂದಿನ ಪಟ್ಟಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಲು ತೀರ್ಮಾನವಾಗಿದೆ. ನಿಗಮ ಮಂಡಳಿ ನೇಮಕಾತಿ, ಕಾರ್ಯಕರ್ತರಿಗೂ ಅವಕಾಶ ನೀಡುವ ಸಂಬಂಧ ನಾನು ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಮಾತನಾಡಿದ್ದೇವೆ. ನಾವು ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ನೀಡಿದ್ದು, ಅವರು ಅದನ್ನು ದೆಹಲಿಗೆ ತೆಗದುಕೊಂಡು ಹೋಗಿದ್ದಾರೆ. ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದ ನಂತರ ಹೈಕಮಾಂಡ್ ನಾಯಕರು ನಮ್ಮ ಪಟ್ಟಿ ಪರಿಶೀಲಿಸಿ ಎರಡ್ಮೂರು ದಿನಗಳಲ್ಲಿ ಅಂತಿಮ ಪಟ್ಟಿ ರವಾನಿಸುತ್ತಾರೆ. ನಾವು ನೀಡಿದ ಪಟ್ಟಿಯನ್ನು ಪಕ್ಷದ ಹೈಕಮಾಂಡ್ ಪರಿಶೀಲಿಸಬೇಕು. ಏಕೆಂದರೆ ಚುನಾವಣೆ ಹೊತ್ತಿನಲ್ಲಿ ಒಂದಿಷ್ಟು ಮಾತುಗಳನ್ನು ಕೊಟ್ಟಿರುತ್ತಾರೆ. ಹೈಕಮಾಂಡ್ ಯಾರಿಗೆ ಏನು ಸೂಚನೆ ನೀಡಿತ್ತೋ ಅದರ ಪ್ರಕಾರ ಅಂತಿಮ ಪಟ್ಟಿ ಸಿದ್ಧವಾಗಲಿದೆ ಎಂದು ತಿಳಿಸಿದರು. ಬಿ.ಆರ್.…

Read More

ಪೀಣ್ಯ ದಾಸರಹಳ್ಳಿ:’ ಈ ಕ್ಷೇತ್ರದಲ್ಲಿ ಈ ಹಿಂದೆ (ಎಲೆಕ್ಷನ್ ಗೆ ಮೊದಲು) ಕಾಮಗಾರಿ ಕೆಲಸದ ಪೂರ್ವ ಆದೇಶ ಇಲ್ಲದೆ ಪೂಜೆ ಸಲ್ಲಿಸಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಶಾಸಕ ಎಸ್. ಮುನಿರಾಜು ಅಧಿಕಾರಿಗಳಿಗೆ ಸೂಚಿಸಿದರು. ಸೋಮಶೆಟ್ಟಿಹಳ್ಳಿ ರಸ್ತೆ, ಚಿಕ್ಕಬಾಣಾವರದಲ್ಲಿ 30 ಲಕ್ಷ ವೆಚ್ಚದ ರಸ್ತೆ ಕಾಮಗಾರಿ, ಸಾರ್ವಜನಿಕ ಗ್ರಂಥಾಲಯ ಅನಾವರಣ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶದ ಮೈದಾನದಲ್ಲಿ 80 ಲಕ್ಷ ವೆಚ್ಚದ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಎಲೆಕ್ಷನ್ ಗೆ ಮೊದಲು ಆಸ್ಪತ್ರೆ ಕಟ್ಟಡಕ್ಕೆ ಇಲ್ಲಿ ಪೂಜೆ ಸಲ್ಲಿಸಲಾಗಿದೆ. ಆದರೆ ಗುತ್ತಿಗೆದಾರ ಕಟ್ಟಡ ನಿರ್ಮಿಸಿಲ್ಲ, ಕೆಲಸದ ಆದೇಶ ಇಲ್ಲದೆ ಪೂಜೆ ಮಾಡಿದ್ದಾರೆ. ಇತ್ತೀಚಿಗೆ ಅದರ ಕಾಮಗಾರಿ ಆದೇಶ ಬಂದಿದೆ ಕೆಲವೊಬ್ಬ ಗುತ್ತಿಗೆದಾರರು ಆಟ ಆಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದರು. ಈ ಭಾಗದಲ್ಲಿ ಬಡವರು, ಮಧ್ಯಮ ವರ್ಗದವರು ಹೆಚ್ಚಾಗಿ ನೆಲೆಸಿದ್ದಾರೆ. ಅವರ ಅನುಕೂಲಕ್ಕೆ ಇನ್ನು 9 ತಿಂಗಳಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ…

Read More