ತಾಯಿಯಾಗುವುದು ಮಹಿಳೆಯ ಬಹಳ ದೊಡ್ಡ ಕನಸಾಗಿರುತ್ತದೆ. ಪ್ರತಿಯೊಂದು ಹೆಣ್ಣು ಮಗು ಹುಟ್ಟಿದಾಗಿನಿಂದ ಜೀವನದ ಕ್ಷಣಗಳನ್ನೂ ಕನಸು ಕಾಣುವುದರಲ್ಲಿ ಕಳೆಯುತ್ತಾಳೆ. ಒಂದು ಹೆಣ್ಣು ಮಗುವು ಮದುವೆಯ ಸಮಯಕ್ಕೆ ಬಂದಾಗ ಆಕೆಯ ಮುಂದಿನ ಕನಸು ಮಗುವಿನದ್ದೇ ಆಗಿರುತ್ತದೆ. ಎಲ್ಲಾ ಮಹಿಳೆಯರಿಗೂ ತಾಯಿಯಾಗುವ ಭಾಗ್ಯ ದೊರೆಯುವುದಿಲ್ಲ, ಕೆಲವೊಂದು ಅನಾರೋಗ್ಯ ಸ್ಥಿತಿಗಳಿಂದ, ಕೆಲವೊಂದು ತಪ್ಪುಗಳಿಂದ ಮಹಿಳೆಯು ತಾಯಿಯಾಗುವ ಅವಕಾಶದಿಂದ ವಂಚಿತರಾಗುತ್ತಾರೆ. ಆದರೆ, ಇದೊಂದು ದೊಡ್ಡ ಆಘಾತವೇ ಸರಿ. https://ainlivenews.com/santana-bhagya-for-this-pile-of-couples-the-future-of-saturday/ ಮಹಿಳೆಯರು ಗರ್ಭಿಣಿಯಾಗಲು ಉತ್ತಮ ಸಮಯ ಸುಮಾರು 28 ವರ್ಷ. ಆದರೆ ಇತ್ತೀಚಿನ ದಿನಗಳಲ್ಲಿ 30ರಿಂದ 35 ವರ್ಷಗಳ ನಡುವಿನ ಸಮಯವನ್ನು ಪ್ರಾಯೋಗಿಕವಾಗಿ ಪರಿಗಣಿಸಲಾಗುತ್ತದೆ. ಗರ್ಭಧಾರಣೆಗಾಗಿ ಮಹಿಳೆಯರಿಗೆ ವಯಸ್ಸು ಬಹಳ ಮುಖ್ಯ. ಸುಮಾರು 28ನೇ ವಯಸ್ಸಿನ ನಂತರ ಮೊಟ್ಟೆಗಳ ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. 35ರ ನಂತರ ಗರ್ಭಿಣಿಯಾಗಲು ಸಾಧ್ಯವಿದೆ. ಆದ್ರೆ, ಗರ್ಭಧಾರಣೆ ಪ್ರಕ್ರಿಯೆಗೆ ಹೆಚ್ಚು ಕಷ್ಟಕರವಾಗುತ್ತದೆ. ತಾಯ್ತನಕ್ಕೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸಿದ್ಧವಾಗಿರುವಾಗಲೇ ಮಹಿಳೆ ಗರ್ಭಿಣಿಯಾಗಲು ಉತ್ತಮ ಸಮಯವಾಗಿದೆ ಎಂದು ಹಲವು ಅಧ್ಯಯನಗಳು…
Author: AIN Author
ಸೂರ್ಯೋದಯ – 6:42 AM ಸೂರ್ಯಾಸ್ತ – 6:16 PM ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಶಿಶಿರ ಋತು, ಮಾಘ ಮಾಸ, ತಿಥಿ – ನವಮಿ ನಕ್ಷತ್ರ – ಜ್ಯೇಷ್ಠ ಯೋಗ – ಹರ್ಷಣ ಕರಣ – ಗರಜೆ ರಾಹು ಕಾಲ – 09:00 ದಿಂದ 10:30 ವರೆಗೆ ಯಮಗಂಡ – 01:30 ದಿಂದ 03:00 ವರೆಗೆ ಗುಳಿಕ ಕಾಲ – 06:00 ದಿಂದ 07:30 ವರೆಗೆ ಬ್ರಹ್ಮ ಮುಹೂರ್ತ – 5:06 ಬೆ.ದಿಂದ 5:54 ಬೆ.ವರೆಗೆ ಅಮೃತ ಕಾಲ – 8:12 ಬೆ.ದಿಂದ 9:56 ಬೆ.ವರೆಗೆ ಅಭಿಜಿತ್ ಮುಹುರ್ತ – 12:06 ಮ. ದಿಂದ 12:52 ಮ.ವರೆಗೆ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ:…
ಟೋಲ್ ಗೇಟ್ ತಪ್ಪಿಸಲು ಹೋಗಿ ಎಡವಟ್ಟು ಆಗಿದ್ದು, ಸಿಬ್ಬಂದಿಗೆ ಗುದ್ದಿಸಿ ಚಾಲಕ ಎಸ್ಕೇಪ್ ಆಗಿದ್ದಾನೆ. https://ainlivenews.com/protests-across-the-state-condemning-the-attack-on-the-conductor-bn-jagadish/ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಟೋಲ್ ಬಳಿ ಘಟನೆ ನಡೆದಿದೆ. ಟೋಲ್ ತಪ್ಪಿಸಲು ರಾಂಗ್ ಸೈಡ್ನಲ್ಲಿ ಪಿಕಪ್ ಚಾಲಕ ಬಂದಿದ್ದಾನೆ. ಇದನ್ನು ತಡೆಯಲು ಹೋದ ಸಿಬ್ಬಂದಿಗೆ ಗುದ್ದಿಸಿ ಪಿಕಪ್ ಚಾಲಕ ಎಸ್ಕೇಪ್ ಆಗಿದ್ದಾನೆ. ಇದೇ ವೇಳೆ ಪಕ್ಕದಲ್ಲೇ ಹೋಗುತ್ತಿದ್ದ ಪಾದಚಾರಿಗೂ ಗುದ್ದಿಸಿದ್ದಾನೆ ಇದರಿಂದ ಸಿಟ್ಟಿಗೆದ್ದ ಪಾದಚಾರಿ, ಪಿಕಪ್ ಡ್ರೈವರ್ಗೆ ಕಪಾಳಮೋಕ್ಷ ಮಾಡಿದ್ದಾರೆ. ಟೋಲ್ ಕೊಡದೇ ರಾಂಗ್ ಸೈಡ್ನಲ್ಲಿ ಚಾಲಕ ಎಸ್ಕೇಪ್ ಆಗಿದ್ದಾನೆ. ಬಿ.ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ಕೆಎ 19 ಎಎ 7484 ನೋಂದಣಿಯ ಪಿಕಪ್ ವಾಹನ ಹೋಗಿದೆ.
ಪೀಣ್ಯ ದಾಸರಹಳ್ಳಿ: ಕನ್ನಡ ಮಾತನಾಡು ಅಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಲಾಗಿದ್ದು ಬೆಳಗಾವಿಯಲ್ಲಿ ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಯುವಕರು ಹಲ್ಲೆ ಮಾಡಿ, ಗೂಂಡಾಗಿರಿ ಮಾಡಿರುವಂತಹ ಘಟನೆ ನಡೆದಿದೆ. https://ainlivenews.com/chhava-earned-%e2%82%b9270-crore-at-the-box-office/ ಯುವತಿಯೊಬ್ಬಳು ಮರಾಠಿಯಲ್ಲಿ ಟಿಕೆಟ್ ಕೇಳಿದಾಗ ಕನ್ನಡದಲ್ಲಿ ಮಾತನಾಡುವಂತೆ ಕಂಡಕ್ಟರ್ ಕೇಳಿದ್ದಕ್ಕೆ ಹಲ್ಲೆ ಮಾಡಲಾಗಿದೆ ಇದನ್ನು ಕನ್ನಡಿಗರಾಗಿ ನಾವು ಖಂಡಿಸುತ್ತೇವೆ ಎಂದು ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್ ಜಗಧೀಶ್ ತಿಳಿಸಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆಯಲ್ಲಿರುವ ಜಯಕರ್ನಾಟಕ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಂಡಕ್ಟರ್ ಮಹದೇವಗೆ ಟಿಕೆಟ್ ಕೊಡುವಂತೆ ಯುವತಿ ಮರಾಠಿಯಲ್ಲಿ ಕೇಳಿದ್ದಾಳೆ. ಯುವತಿ ಜೊತೆ ಯುವಕ ಪ್ರಯಾಣ ಮಾಡುತ್ತಿದ್ದರಿಂದ 2 ಟಿಕೆಟ್ ಕೇಳಿದ್ದಳು. ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡಿ ಎಂದು ಕಂಡಕ್ಟರ್ ಮಹದೇವ ಹೇಳಿದ್ದಾರೆ.ಈ ವಿಚಾರಕ್ಕೆ ಬಸ್ ನಲ್ಲಿ ಗಲಾಟೆ ಹಾಗಿದೆ ಇದರಿಂದ ಕಂಟಕ್ಟರ್ ಗೆ ಅವಮಾನವಾಗಿದೆ ಇದನ್ನ ನಾವು ರಾಜ್ಯವಾಪ್ತಿ ಖಂಡಿಸುತ್ತೆವೆ ಇದರ ವಿರುದ್ದ ನಮ್ಮ ಸಂಘಟನೆಯಿಂದ ರಾಜ್ಯಾದಾಂದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದರು ನಾವು ಕರ್ನಾಟಕದಲ್ಲಿ ಇದ್ದಿವೊ…
“ಛಾವಾ” ಮರಿ ಸಿಂಹದ ಘರ್ಜನೆ ಇದೀಗ ಬಾಲಿವುಡ್ ಗಲ್ಲಾಪೆಟ್ಟಿಗೆ ಶೇಖ್ ಆಗ್ತಿದೆ.. ಹೌದು, ಬರೋಬ್ಬರಿ ರಿಲೀಸ್ ಆದ ಏಳನೇ ದಿನಕ್ಕೆ 270 ಕೋಟಿ ಗಳಿಕೆ ಕಂಡಿದೆ.. ಎಸ್.. ವಿಕ್ಕಿ ಕೌಶಲ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಬ್ಸಾಕ್ಸಾಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದ್ದು, ಅಜಯ್ ದೇವಗನ್ ಆಭಿನಯದ ಸಿಂಗ್ಮ್ ಅಗೈನ್ ಚಿತ್ರದ ದಾಖಲೆಯನ್ನು ಬ್ರೇಕ್ ಮಾಡಿದೆ. https://ainlivenews.com/wpl-2025-rcb-sets-mumbai-a-target-of-168-runs/ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ರಾವ್ ಜೀವನಾಧರಿತ ಚಿತ್ರ ಛಾವಾ ರಿಲೀಸ್ ಆದ ಏಳೇ ದಿನಗಳಲ್ಲಿ 270 ಕೋಟಿ ಗಳಿಕೆ ಕಂಡಿದ್ದು, 2025ರ ಬಾಲಿವುಡ್ನ ಮೊದಲ ಹಿಟ್ ಚಿತ್ರವಾಗಿ ದಾಖಲೆ ಬರೆದಿದೆ. ಪ್ರತಿಯೊಂದು ಸಿನಿಮಾವು ಸಹ ಬಿಡುಗಡೆಯಾದ ಮೊದಲ ವಾರದಲ್ಲಿ ಓಳ್ಳೆ ಕಲೆಕ್ಷನ್ ಮಾಡಿದ್ರೆ, ಛಾವಾ ನಂತರದ ವಾರದಲ್ಲಿ ಸಖತ್ ಸೌಂಡ್ ಮಾಡ್ತಿದ್ದು, ಪ್ರೇಕ್ಷಕರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳನೇ ನೀಡ್ತಿದ್ದಾರೆ.. ಜೊತೆಗೆ ಗೋವಾ ಸರ್ಕಾರ ಛಾವಾ ಚಿತ್ರಕ್ಕೆ ತೆರಿಗೆ ವಿನಾಯ್ತಿಯನ್ನು ಸಹ ನೀಡಿದೆ. ಫೆಬ್ರವರಿ…
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಆರ್ ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ ನಡೆಯುತ್ತಿದೆ. ಪಂದ್ಯದಲ್ಲಿ ಆರ್ಸಿಬಿ 20 ಓವರ್ಗಳಿಗೆ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದೆ. ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ದುಕೊಂಡಿತ್ತು. https://ainlivenews.com/an-unforgettable-birthday-gift-darshan-remembers-the-social-service-done-by-his-fans/ ಟಾಸ್ ಸೋತು ಆರ್ ಸಿಬಿ ಇಂದು ಮೊದಲು ಬ್ಯಾಟಿಂಗ್ ಗಿಳಿಯಬೇಕಾಯಿತು. ಹೌಸ್ ಫುಲ್ ಸ್ಟೇಡಿಯಂ, ಎಲ್ಲೆಡೆ ಆರ್ ಸಿಬಿ ಕೂಗು ಮುಗಿಲು ಮುಟ್ಟಿತು. ಇದರ ನಡುವೆ ಬಹುಶಃ ಆರ್ ಸಿಬಿ ಬ್ಯಾಟಿಗರೂ ಮೈಮರೆತರೇನೋ ಹೀಗಾಗಿ ಬಿರುಸಿನ ಆಟವಾಡಿ ಪ್ರೇಕ್ಷಕರನ್ನು ರಂಜಿಸಲು ಹೋಗಿ ಆರ್ ಸಿಬಿ ಬ್ಯಾಟಿಗರನ್ನು ಬೇಗನೇ ವಿಕೆಟ್ ಕಳೆದುಕೊಂಡರು. ಹಾಗಿದ್ದರೂ ಸ್ಮೃತಿ ಮಂಧನಾ ಸ್ಪೋಟಕ ಆರಂಭ ನೀಡಿದರು. ಕೇವಲ 13 ಎಸೆತಗಳಿಂದ 26 ರನ್ ಸಿಡಿಸಿ ಔಟಾದರು. ಆದರೆ ಇನ್ನೊಬ್ಬ ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್ ಇಂದು ಕೇವಲ 9 ರನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕನಿಕಾ ಅಹುಜಾ, ರಘ್ವಿ ಬಿಸ್ತ್ ಕೂಡಾ ಒಂದಂಕಿಗೆ ವಿಕೆಟ್ ಒಪ್ಪಿಸಿದಾಗ ತಂಡ ಸಂಕಷ್ಟಕ್ಕೀಡಾಯಿತು.…
ದಾಸ ಪ್ರತಿ ಹುಟ್ಟುಹಬ್ಬದಲ್ಲೂ ಸಹ ತಮ್ಮ ಅಭಿಮಾನಿಗಳಿಗೆ ಕೇಕ್ ಹಾರ ಗಳ ಬದಲಾಗಿ, ಅಕ್ಕಿ, ಬೇಳೆ ಎಣ್ಣೆ ರೇಷನ್ ತಂದುಕೊಡುವಂತೆ ಹೇಳ್ತಿದ್ರು.. ಅದರಂತೆ ಅಭಿಮಾನಿಗಳು ಕೇಕ್ ಬದಲಾಗಿ ಅಕ್ಕಿ ಬೇಳೆ ಎಣ್ಣೆ ಹೀಗೆ ಆಹಾರ ಪದಾರ್ಥಗಳನ್ನು ತಂದು ದರ್ಶನ್ಗೆ ವಿಶ್ ಮಾಡ್ತಿದ್ರು.. ಆದ್ರೆ ಈ ವರ್ಷ ದರ್ಶನ್ ತಮ್ಮ ಅಭಿಮಾನಿಗಳೊಂದಿಗೆ ಬರ್ತ್ಡ್ ಡೇ ಅಚರಿಸಿಕೊಂಡಿಲ್ಲ. ಆದರೆ ಆದರೂ ಕೂಡ ಅಭಿಮಾನಿಗಳು ತಮ್ಮ ಒಳ್ಳೆ ಕೆಲಸವನನ್ನು ಮಾತ್ರ ತಪ್ಪಿಸಿಲ್ಲ.. https://ainlivenews.com/parents-who-give-a-bike-to-a-minor-beware-you-will-face-a-heavy-fine/ ಎಸ್.. ದರ್ಶನ್ಗೆ ನಿರೀಕ್ಷೆಗೂ ಮೀರಿದ ಪ್ರೀತಿ ಸಿಕ್ಕಿದೆ.. ಡೀ ಬಾಸ್ ಹೆಳೋದನ್ನು ಅವರ ಸೆಲಬ್ರಿಟೀಸ್ ಚಾಚು ತಪ್ಪದೇ ಮಾಡ್ತಾರೆ ಅನ್ನೋದಕ್ಕೆ ಅವರ ಈ ವರ್ಷದ ಹುಟ್ಟುಹಬ್ಬವೇ ಸಾಕ್ಷಿ.. ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದ ದರ್ಶನ್ಗೆ ಅಭಿಮಾನಿಗಳು ಭರ್ಜರಿ ಗಿಫ್ಟ್ನ್ನೇ ನೀಡಿದ್ದಾರೆ. ಪುಣ್ಯ ಕಾರ್ಯ ಮಾಡೋ ಮೂಲಕ ಪುಣ್ಯವೆಲ್ಲ ದರ್ಶನ್ಗೆ ಹೋಗುವಂತೆ ಮಾಡಿದ್ದಾರೆ ಫ್ಯಾನ್ಸ್. ತಮ್ಮ ಸೆಲಬ್ರಿಟೀಸ್ಗಳ ಈ ಕೆಲಸಕ್ಕೆ ಅಭಿಮಾನಿದಿಂದ ಧನ್ಯತೆಯಲ್ಲಿ ತೇಲಾಡಿದ್ದಾರೆ ಸುಯೋಧನ ಈ ವರ್ಷ ನಟ ದರ್ಶನ್ ಹುಟ್ಟುಹಬ್ಬಕ್ಕೆ…
ದಾವಣಗೆರೆ:- ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡುವ ಪೋಷಕರೇ ಹುಷಾರ್! ನಿಮ್ಮ ಅಪ್ರಾಪ್ತ ಪುತ್ರರು ಅಪಘಾತ ಎಸಗಿದರೆ ನೀವು ಕೋರ್ಟ್ ಕಟಕಟೆಯಲ್ಲಿ ನಿಂತು ವಿಚಾರಣೆ ಎದುರಿಸಬೇಕು. ಜತೆಗೆ ದಂಡವನ್ನೂ ಪಾವತಿಸಿ ಶಿಕ್ಷೆ ಅನುಭವಿಸುವುದು ಕಟ್ಟಿಟ್ಟ ಬುತ್ತಿ. https://ainlivenews.com/how-much-do-you-know-about-yogurt-its-a-panacea-for-cancer/ ಎಸ್, ಇಲ್ಲಿನ ಚನ್ನಗಿರಿ ಪೊಲೀಸರು ಕಾರ್ಯಾಚರಣೆ ನಡೆಸಿ, ಅಪ್ರಾಪ್ತ ಬಾಲಕ ಬೈಕ್ ಚಾಲನೆ ಮಾಡಿದ ಹಿನ್ನೆಲೆ ಪೋಷಕರಿಗೆ 25 ಸಾವಿರ ದಂಡ ವಿಧಿಸಿದ್ದಾರೆ. ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದಾಗ ಬಾಲಕನೊಬ್ಬ ಬೈಕ್ ಚಲಾಯಿಸುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಬೈಕ್ ವಶಕ್ಕೆ ಪಡೆದ ಪೊಲೀಸರು ಪರಿಶೀಲನೆ ನಡೆಸಿದರು. ಆತ ಅಪ್ರಾಪ್ತ ಎಂದು ತಿಳಿದುಬಂದಿದ್ದು, ಕೂಡಲೇ ಕ್ರಮ ಕೈಗೊಂಡ ಪೊಲೀಸರು ಪಾಲಕರಿಗೆ 25,000 ರೂ. ದಂಡ ವಿಧಿಸಿದ್ದಾರೆ.
ಮೊಸರು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಮೊಸರು ಯಾವಾಗ ಯಾವ ಸಮಯದಲ್ಲಿ ತಿನ್ನಬೇಕೆಂದು ಅನೇಕರಿಗೆ ತಿಳಿದಿಲ್ಲ. ಕೆಲವರು ಬೆಳಿಗ್ಗೆ ತಿನ್ನುತ್ತಾರೆ. ಇನ್ನು ಕೆಲವರು ಮಧ್ಯಾಹ್ನ ಊಟದಲ್ಲಿ ತಿನ್ನುತ್ತಾರೆ. ಇನ್ನು ಕೆಲವರು ರಾತ್ರಿ ತಿನ್ನುತ್ತಾರೆ. ಪ್ರತಿಯೊಬ್ಬರೂ ಒಂದೊಂದು ಸಮಯಕ್ಕೆ ತಿನ್ನುತ್ತಾರೆ. https://ainlivenews.com/we-will-not-allow-the-university-that-shapes-the-future-of-the-poor-to-close-by-vijayendra/ ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು ಪ್ರೋಬಯಾಟಿಕ್ಗಳು ಎಂದು ಕರೆಯಲಾಗುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮೊಸರು ಸೇವಿಸುವುದರಿಂದ ಕೊಲೊರೆಕ್ಟಲ್ ಕ್ಯಾನ್ಸರ್ ಬರುವ ಅಪಾಯ ಕಡಿಮೆಯಾಗುತ್ತದೆ ಎಂದು ಹೊಸ ಅಧ್ಯಯನವೊಂದು ಕಂಡುಹಿಡಿದಿದೆ. ವಾರಕ್ಕೆ ಕನಿಷ್ಠ ಎರಡು ಬಾರಿ ಮೊಸರು ಸೇವಿಸುವ ಜನರಲ್ಲಿ ಬೈಫಿಡೋಬ್ಯಾಕ್ಟೀರಿಯಂ-ಪಾಸಿಟಿವ್ ಗೆಡ್ಡೆಗಳು ಬೆಳೆಯುವ ಸಾಧ್ಯತೆ ಕೇವಲ 20 ಪ್ರತಿಶತ ಕಡಿಮೆ ಎಂದು ಕಂಡುಹಿಡಿದಿದೆ.ಈ ಅಧ್ಯಯನವು 100,000 ಕ್ಕೂ ಹೆಚ್ಚು ಮಹಿಳೆಯರು ಮತ್ತು 51,000 ಪುರುಷರ ಆಹಾರ ಪದ್ಧತಿಯನ್ನು ನಿರ್ದಿಷ್ಟವಾಗಿ ಅಧ್ಯಯನ ಮಾಡಿದೆ.ಈ ಪೈಕಿ 3079 ಜನರಿಗೆ ಕೊಲೊರೆಕ್ಟಲ್ ಕ್ಯಾನ್ಸರ್ ಕಾಣಿಸಿಕೊಂಡಿದೆ. ದೀರ್ಘಕಾಲದವರೆಗೆ ಮೊಸರು ಸೇವಿಸುವ ಜನರಿಗೆ ಕ್ಯಾನ್ಸರ್ ಬರುವ ಅಪಾಯವು ಶೇಕಡಾ 20 ರಷ್ಟು…
ಬೆಂಗಳೂರು:- ಬಡವರ ಭವಿಷ್ಯ ರೂಪಿಸುವ ವಿಶ್ವವಿದ್ಯಾಲಯಗಳನ್ನು ಮುಚ್ಚಲು ನಾವು ಬಿಡುವುದಿಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. https://ainlivenews.com/coconut-water-if-you-have-this-problem-stay-away-from-coconut-water/ ಈ ಸಂಬಂಧ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಬಡವರ ಭವಿಷ್ಯ ರೂಪಿಸುವ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದುಂಡುಮೇಜಿನ ಸಭೆಯನ್ನು ಆಯೋಜಿಸಲಾಗಿತ್ತು. ಶಿಕ್ಷಣ ತಜ್ಞರು, ಹಿರಿಯರು, ಜನಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಮುಂದಿನ 5 ವರ್ಷಗಳಲ್ಲಿ 350 ಕೋಟಿ ರೂ. ಹಣಕಾಸು ಕೊಡಲು ಸಾಧ್ಯವಿಲ್ಲದ ಕಾರಣ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರದ ಕ್ಯಾಬಿನೆಟ್ ಉಪ ಸಮಿತಿ ಕೊಟ್ಟ ವರದಿಯು ವಿವಿಗಳನ್ನು ಮುಚ್ಚುವ ಸರ್ಕಾರದ ತೀರ್ಮಾನ ಅವೈಜ್ಞಾನಿಕ. ಇದು ಅವಿವೇಕತನದ ನಿರ್ಧಾರ ಎಂದು ವಾಗ್ದಾಳಿ ನಡೆಸಿದರು ಇದರ ವಿರುದ್ಧ ರಾಜಕೀಯೇತರ ನೆಲೆಯಿಂದ ಹೋರಾಟ ಮಾಡಬೇಕಿದೆ. ವಿದ್ಯಾರ್ಥಿ ಪರಿಷತ್ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಬಿಜೆಪಿ ಕೂಡ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಡಲಿದೆ. ದೊಡ್ಡ ಮಟ್ಟದ ಹೋರಾಟ ಮಾಡಲಿದ್ದೇವೆ. ಒಂದು ಜಿಲ್ಲೆ ಒಂದು ವಿವಿ…