ಬೆಂಗಳೂರು : 2040ರ ಹೊತ್ತಿಗೆ ಚಂದ್ರನ ಅಂಗಳಕ್ಕೆ ಮೊದಲ ಗಗನಯಾನಿಯನ್ನು ಕಳುಹಿಸುವ ಯೋಜನೆ ಹೊಂದಿರುವುದಾಗಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ. ಮನೋರಮಾ ಇಯರ್ಬುಕ್ 2024ಕ್ಕೆ ಬರೆದ ವಿಶೇಷ ಲೇಖನದಲ್ಲಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ. ‘ಗಗನಯಾನ’ ಎಂಬ ಯೋಜನೆಯಡಿ ಸದ್ಯ ಭೂಮಿಯ ಕೆಳ ಕಕ್ಷೆಗೆ ಗಗನಯಾನಿಗಳನ್ನು ಕಳುಹಿಸಿ, ಮೂರು ದಿನಗಳ ನಂತರ ಅವರನ್ನು ಸುರಕ್ಷಿತವಾಗಿ ಮರಳಿ ಭೂಮಿಗೆ ಕರೆತರುವ ಚೊಚ್ಚಲ ಯೋಜನೆಯ ಸಿದ್ಧತೆಯಲ್ಲಿದ್ದೇವೆ. ಇದಕ್ಕಾಗಿ ಭಾರತೀಯ ವಾಯುಪಡೆಯ ನಾಲ್ವರು ಪೈಲೆಟ್ಗಳೂ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಯಲ್ಲಿ ಸದ್ಯ ಇವರು ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾನವಸಹಿತ ಗಗನಯಾನಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದೆ. ಇದರಲ್ಲಿ ಗಗನಯಾನಿಗಳನ್ನು ಸುರಕ್ಷಿತವಾಗಿ ಕರೆದೊಯ್ಯುವ ವಾಹನ, ಅವರು ಬಾಹ್ಯಾಕಾಶದಲ್ಲಿ ಇರಲು ಅನುಕೂಲಕರವಾದ ನೌಕೆ, ಅದರಲ್ಲಿ ಅವರ ಸುರಕ್ಷತೆಗೆ ಅಗತ್ಯವಿರುವ ಸಾಧನಗಳನ್ನು ಅಳವಡಿಸುವ ಕಾರ್ಯದಲ್ಲಿ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Author: AIN Author
ಸಿನಿಮಾ, ಸೋಷಿಯಲ್ ಮೀಡಿಯಾ ಏಲ್ಲೆಲ್ಲೂ ಸದ್ದು ಮಾಡ್ತಿರೋ ಏಕೈಕ ಹೆಸರು ಅಂದರೆ ‘ಅನಿಮಲ್’ ಬೆಡಗಿ ತೃಪ್ತಿ ದಿಮ್ರಿ. ಅಷ್ಟರ ಮಟ್ಟಿಗೆ ‘ಅನಿಮಲ್’ (Animal) ಚಿತ್ರದ ನಟಿ ತೃಪ್ತಿ ಮೇಲಿನ ಕ್ರೇಜ್ ಫ್ಯಾನ್ಸ್ಗೆ ಹೆಚ್ಚಾಗಿದೆ. ತೆಲುಗಿನ ಸ್ಟಾರ್ ಹೀರೋ ಜ್ಯೂ.ಎನ್ಟಿಆರ್ ಜೊತೆ ತೃಪ್ತಿ ತೆರೆಹಂಚಿಕೊಳ್ತಾರಂತೆ. ಈ ಕುರಿತ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ರಣ್ಬೀರ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ ಸಿನಿಮಾ ಬಾಕ್ಸಾಫೀಸ್ನಲ್ಲಿ ಲೂಟಿ ಮಾಡ್ತಿದೆ. ರಶ್ಮಿಕಾರನ್ನ ನೋಡಲು ಹೋಗಿದ್ದ ಫ್ಯಾನ್ಸ್ ಇದೀಗ ತೃಪ್ತಿ ದಿಮ್ರಿ (Tripti Dimri) ನಶೆಯಲ್ಲಿದ್ದಾರೆ. ಅಷ್ಟರ ಮಟ್ಟಿಗೆ ತೃಪ್ತಿ ಪಡ್ಡೆಹುಡುಗರ ಎದೆಯಲ್ಲಿ ಆವರಿಸಿಕೊಂಡಿದ್ದಾರೆ. ಅನಿಮಲ್’ ಚಿತ್ರದಲ್ಲಿ ತೃಪ್ತಿ, ಸಿಕ್ಕಾಪಟ್ಟೆ ಬೋಲ್ಡ್ ಆಗಿ ರಣ್ಬೀರ್ (Ranbir Kapoor) ಜೊತೆ ನಟಿಸಿದ್ದರು. ಬ್ಯೂಟಿ ಅಷ್ಟೇ ಅಲ್ಲ, ಆ್ಯಕ್ಟಿಂಗ್ ಮೂಲಕನೂ ತೃಪ್ತಿ ಸೈ ಎನಿಸಿಕೊಂಡರು. ಇದೀಗ ಬಾಲಿವುಡ್, ಟಾಲಿವುಡ್ನಿಂದ ನಟಿಗೆ ಅಪಾರ ಅವಕಾಶಗಳು ಅರಸಿ ಬರುತ್ತಿವೆ. ಇದೀಗ ಸಂದರ್ಶನವೊಂದರಲ್ಲಿ ನಟಿ ತಮ್ಮ ಆಸೆಯನ್ನ ಬಿಚ್ಚಿಟ್ಟಿದ್ದಾರೆ.
ಲಂಡನ್: ಬ್ರಿಟನ್ ದೇಶದ ಬಾರ್ಕ್ಲೇಸ್ ಬ್ಯಾಂಕ್ (Barclays Bank) ಹಣಕಾಸು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಿಕೊಳ್ಳಲು ಹೆಣಗಾಡುತ್ತಿದೆ. ಅದಕ್ಕಾಗಿ ವೆಚ್ಚ ಕಡಿತಕ್ಕೆ ಮುಂದಾಗಿದೆ. ರಾಯ್ಟರ್ಸ್ ವರದಿ ಪ್ರಕಾರ 1 ಬಿಲಿಯನ್ ಪೌಂಡ್ಗಳಷ್ಟು (10,400 ಕೋಟಿ ರೂ) ವೆಚ್ಚಕಡಿತಕ್ಕೆ ಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ಸುಮಾರು 2,000 ಉದ್ಯೋಗಿಗಳನ್ನು ಲೇ ಆಫ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿರೀಕ್ಷಿಸಿದ ರೀತಿಯಲ್ಲಿ ವೆಚ್ಚ ಕಡಿತದ (cost cutting) ಯೋಜನೆ ಪೂರ್ಣವಾಗಿ ಜಾರಿಗೆ ತಂದರೆ 1,500ರಿಂದ 2,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಇದೆ. https://ainlivenews.com/do-you-know-why-you-should-not-cut-your-nails-at-night-heres-why/ ಬಾರ್ಕ್ಲೇಸ್ ಬ್ಯಾಂಕ್ನ ಬ್ಯಾಕ್ ಅಫೀಸ್ ಕೆಲಸಗಳಲ್ಲಿ ಹೆಚ್ಚು ಕತ್ತರಿ ಬೀಳಬಹುದು ಎಂದು ತನ್ನ ಸುದ್ದಿಮೂಲವನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಬಿಎಕ್ಸ್ ಎಂದು ಕರೆಯಲಾಗುವ ಬಾರ್ಕ್ಲೇಸ್ ಎಕ್ಸಿಕ್ಯೂಶನ್ ಸರ್ವಿಸಸ್ ವಿಭಾಗದಲ್ಲಿ ಉದ್ಯೋಗನಷ್ಟ ಕೇಂದ್ರೀಕೃತವಾಗಿರಲಿದೆ. ಬ್ಯಾಂಕ್ನ ಕಾಸ್ಟ್ ಕಟ್ಟಿಂಗ್ ಯೋಜನೆಯಲ್ಲಿ ಇದೂ ಒಂದು ಪ್ರಮುಖ ಭಾಗವಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ, ಕಾಸ್ಟ್ ಕಟ್ಟಿಂಗ್ ಆಗಲೀ ಅಥವಾ ಲೇ ಆಫ್ ಆಗಲೀ ಒಮ್ಮೆಗೇ ಜಾರಿಯಾಗುವುದಿಲ್ಲ. ಹಲವು ವರ್ಷಗಳ…
ರಿಚ್ಚಿ (ಹೇಮಂತ್ ಕುಮಾರ್) ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ ರಿಚ್ಚಿ (Ritchie) ಚಿತ್ರದಲ್ಲಿ ಟಗರು ಖ್ಯಾತಿಯ ಮಾನ್ವಿತ ಕಾಮತ್ (Manvita Kamat) ನಟಿಸುತ್ತಿದ್ದಾರೆ. ಖ್ಯಾತ ಗಾಯಕ ಸೋನು ನಿಗಮ್ ಹಾಡಿರುವ (Song), ಅಗಸ್ತ್ಯ ಸಂಗೀತ ಸಂಯೋಜಿಸಿರುವ ‘ಸನಿಹ ನೀ ಇರುವಾಗ’ ಎಂಬ ಹಾಡಿಗೆ ಮಾನ್ವಿತ ಹೆಜ್ಜೆ ಹಾಕಲಿದ್ದಾರೆ. ಜೊತೆಗೆ ಕೆಲವು ಮಾತಿನ ಭಾಗದ ಸನ್ನಿವೇಶಗಳಲ್ಲೂ ಅವರು ಅಭಿನಯಿಸಲಿದ್ದಾರೆ ಎಂದು ರಿಚ್ಚಿ ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಮಾನ್ವಿತಾ ಕಾಮತ್ ಕೇವಲ ಹಾಡಿಗೆ ಮಾತ್ರ ಹೆಜ್ಜೆ ಹಾಕುತ್ತಿಲ್ಲ, ಜೊತೆಗೆ ಕೆಲವು ದೃಶ್ಯಗಳಲ್ಲೂ ಅವರು ನಟಿಸಲಿದ್ದಾರೆ. ಹಾಗಾಗಿ ಈ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರಂತೆ. ವಿಶೇಷ ಸನ್ನಿವೇಶಗಳು ಅವು ಆಗಿರಲಿವೆ ಎನ್ನುವುದು ಚಿತ್ರತಂಡದ ಮಾತು. ಅಗಸ್ತ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ವೆಂಕಟಾಚಲಯ್ಯ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ರಾಕೇಶ್ ರಾವ್ ಅವರ ಸಹ ನಿರ್ಮಾಣವಿದೆ. ರಿಚ್ಚಿ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡು ಹಾಗೂ ಕೆಲವು ಮಾತಿನ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ. ಅಜಿತ್ ಕುಮಾರ್ ಅವರ…
ಮುಂಬಯಿ: ತನ್ನ ಉತ್ಪನ್ನಗಳು ಮತ್ತು ಸೇವೆಯನ್ನು ಉನ್ನತ ಮಟ್ಟದಲ್ಲಿ ಡಿಜಿಟಲೀಕರಿಸಲು ವಿಶೇಷ ‘ಡೈವ್’ ಯೋಜನೆಯನ್ನು(DIVE: Digital Innovation And Value Enhancement) ಸರಕಾರಿ ಸ್ವಾಮ್ಯದ ವಿಮಾ ಕಂಪನಿಯಾದ ಎಲ್ಐಸಿ ಜಾರಿಗೊಳಿಸಿದೆ. ಕಂಪನಿಯಲ್ಲಿ ಡಿಜಿಟಲ್ ರೂಪಾಂತರವನ್ನು ತರುವುದು ಈ ‘ಡೈವ್’ನ ಉದ್ದೇಶ. ಮುಂಬರುವ ದಿನಗಳಲ್ಲಿ ಹೊಸ ಪ್ರೀಮಿಯಂಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಕಂಪನಿಯು ಮುಂಬರುವ ತಿಂಗಳುಗಳಲ್ಲಿ 3 ರಿಂದ 4 ಹೊಸ ಪ್ರಾಡಕ್ಟ್ಗಳನ್ನು ಪ್ರಾರಂಭಿಸಲಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ತನ್ನದೇ ಆದ ಫಿನ್ಟೆಕ್ ಕಂಪನಿ ಪ್ರಾರಂಭಿಸುವ ಯೋಜನೆಯೂ ಇದೆ ಎಂದು ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಅಧ್ಯಕ್ಷ ಸಿದ್ಧಾರ್ಥ ಮೊಹಂತಿ ಹೇಳಿದ್ದಾರೆ. ‘ಇತ್ತೀಚೆಗೆ ಕೆಲವು ಫಿನ್ಟೆಕ್ ಕಂಪನಿಗಳೊಂದಿಗೆ ಭಾರತೀಯ ಜೀವ ವಿಮಾ ನಿಗಮ ಕೈಜೋಡಿಸಿದೆ. ನಮ್ಮ ಉತ್ಪನ್ನ ವಿತರಣೆಗಾಗಿ ಫಿನ್ಟೆಕ್ ಕಂಪನಿಗಳನ್ನು ಕಾರ್ಪೊರೇಟ್ ಏಜೆಂಟ್ಗಳನ್ನಾಗಿ ಮಾಡಲಾಗಿದೆ. ಈಗ ಎಲ್ಐಸಿ ತನ್ನದೇ ಆದ ಫಿನ್ಟೆಕ್ ಕಂಪನಿಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ,” ಎಂದು ಸಿದ್ಧಾರ್ಥ ಮೊಹಂತಿ ತಿಳಿಸಿದ್ದಾರೆ. ಭಾರತೀಯ ಜೀವ ವಿಮಾ…
ಎಲೆ ಚುಕ್ಕೆ ರೋಗ, ಬರಗಾಲ ಸೇರಿದಂತೆ ಇನ್ನಿತರ ಕಾರಣಗಳಿಂದ ಅಡಿಕೆ ಬೆಳೆಗಾರರು ಸೂಕ್ತ ಫಸಲು ಸಿಗದೇ ಹಾಗೂ ಸಿಕ್ಕ ಫಸಲಿಗೆ ಉತ್ತಮ ಬೆಲೆ ದೊರೆಯದೇ ಕಂಗಾಲಾಗಿದ್ದಾರೆ. ಆದರೆ ಈ ನಡುವೆ ಅಡಿಕೆ ಬೆಲೆ ತೀರ ಕೆಳ ಮಟ್ಟಕ್ಕೆ ಇಳಿದಿಲ್ಲ ಎಂಬುದು ಅಡಿಕೆ ಬೆಳೆಗಾರರಿಗೆ ತಾತ್ಕಾಲಿಕ ಸಮಾಧಾನದ ವಿಷಯ. ಇನ್ನು ರಾಜ್ಯದ ಕೆಲವು ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ 25 ಸಾವಿರದಿಂದ 56 ಸಾವಿರ ವರೆಗೂ ವಹಿವಾಟು ನಡೆಸಿದೆ. ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ Bantwala ಕೋಕಾ 15000 27500 23500 Channagiri ರಾಶಿ 41229 47585 47055 Davangere ರಾಶಿ 44510 46369 45440 Kumta ಚಿಪ್ಪು 26089 34509 33269 ಕೋಕಾ 19069 30799 29729 Pavagada ಕೆಂಪು ಗೋಟು 40000 42000 40260 Puttur New Variety 27000 36500 31750 Sagar ಬಿಳಿ ಗೋಟು 30699 33209 32799 ಚಾಲಿ…
ಮೊನ್ನೆಯಷ್ಟೇ ತಮ್ಮ ಹೊಸ ಚಿತ್ರಕ್ಕೆ ಟಾಕ್ಸಿಕ್ ಎಂದು ಹೆಸರಿಟ್ಟು ಸಾಕಷ್ಟು ಕುತೂಹಲ ಮೂಡಿಸಿರುವ ಯಶ್, ತಮ್ಮ ಹೊಸ ಸಿನಿಮಾದ ಶೂಟಿಂಗ್ (Shooting) ಅನ್ನು ಜನವರಿಯಿಂದ ಶುರು ಮಾಡಲಿದ್ದಾರಂತೆ. ಚಿತ್ರೀಕರಣಕ್ಕೆ ಆಗಲೇ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದು, ಜನವರಿ (January) ಎರಡನೇ ವಾರದಿಂದ ಚಿತ್ರೀಕರಣಕ್ಕೆ ಹೋಗಲಿದ್ದಾರೆ ಎನ್ನುತ್ತಿವೆ ಮೂಲಗಳು. ಯಶ್ (Yash) ಈ ಬಾರಿ ಪ್ಯಾನ್ ಇಂಡಿಯಾವನ್ನೂ ದಾಟಿಕೊಂಡು ಯೋಚನೆ ಮಾಡಿದ್ದಾರೆ. ಸಿನಿಮಾದ ಟೈಟಲ್ ಮತ್ತು ಆಯ್ಕೆ ಮಾಡಿಕೊಂಡಿರುವ ಕಥೆ ನೋಡಿದರೆ, ಇದೊಂದು ಹಾಲಿವುಡ್ ರೇಂಜ್ ನಲ್ಲಿ ತಯಾರಾಗುತ್ತಿರುವ ಕನ್ನಡದ ಸಿನಿಮಾ ಎಂದೇ ಹೇಳಬಹುದು. ಯಾವುದೇ ಭಾಷೆಯಲ್ಲಿ ಈ ಸಿನಿಮಾ ಬಂದರೂ, ಅದಕ್ಕೆ ತೊಂದರೆ ಆಗದಿರುವಂತೆ ‘ಟಾಕ್ಸಿಕ್’ (Toxic) ಎಂದು ಹೆಸರಿಟ್ಟಿದ್ದಾರೆ. ಇದು ಎಲ್ಲ ಭಾಷೆಗೂ ಸಲ್ಲುವಂತೆ ಟೈಟಲ್ ಆಗಿದೆ. ಇದರ ಜೊತೆಗೆ ಮತ್ತೊಂದು ವಿಷಯವೂ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಅದಕ್ಕೆ ಪುಷ್ಠಿ ಎನ್ನುವಂತೆ ಇಂದು ರಿಲೀಸ್ ಆಗಿರುವ ಟೈಟಲ್ ಟೀಸರ್ ನಲ್ಲಿ ಅದರ ಛಾಯೆ ಕೂಡ ಇದೆ. ಟಾಕ್ಸಿಕ್ ಸಿನಿಮಾದಲ್ಲಿ ಇಂಟರ್ ನ್ಯಾಷನಲ್ ಡ್ರಗ್ಸ್…
ಲಕ್ನೋ: ತಾಯಿಯೇ ತನ್ನ ಮಗಳನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ ಪ್ರಕರಣ ಉತ್ತರಪ್ರದೇಶದ (Uttar Pradesh) ಗೋರಖ್ಪುರದ ಮಹೇಸ್ರಾ ಎಂಬಲ್ಲಿ ನಡೆದಿದೆ. ಹಣ ಕೊಟ್ಟು ಯುವತಿಯನ್ನು ಮದುವೆಯಾದ (Marriage) ಹರಿಯಾಣ (Haryana) ಮೂಲದ ವ್ಯಕ್ತಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವಂತೆ ಬಲವಂತಪಡಿಸಿ ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಯುವತಿ ಈಗ ನ್ಯಾಯಕ್ಕಾಗಿ ಪೊಲೀಸ್ (Police) ಠಾಣೆಯ ಮೆಟ್ಟಿಲೇರಿದ್ದಾಳೆ. ಚಿಲುತಾಲ್ ಠಾಣೆಯಲ್ಲಿ ಆಕೆ ದೂರು ದಾಖಲಿಸಿದ್ದು, ದೂರಿನಲ್ಲಿ ಹರಿಯಾಣ ಮೂಲದ ವ್ಯಕ್ತಿಯಿಂದ ತನ್ನ ತಾಯಿ ಹಣ ಪಡೆದು ನ.23 ರಂದು ಬಲವಂತದಿಂದ ಮದುವೆ ಮಾಡಿದ್ದಾರೆ. ಈಗ ಅಕ್ರಮ ಚಟುವಟಿಕೆಯಲ್ಲಿ ತೊಡಗುವಂತೆ ನಿರಂತರವಾಗಿ ಆತ ಹಲ್ಲೆ ನಡೆಸುತ್ತಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ. https://ainlivenews.com/do-you-know-why-you-should-not-cut-your-nails-at-night-heres-why/ ಯುವತಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತದೆ. ಈಗಾಗಲೇ ಪೊಲೀಸರು ಆಕೆಯ ಕುಟುಂಬಸ್ಥರ ಬಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಅಧೀಕ್ಷಕ ಮನೋಜ್ ಅವಸ್ತಿ ತಿಳಿಸಿದ್ದಾರೆ. ಮಹಿಳೆಯ ಇಬ್ಬರು ಹಿರಿಯ ಸಹೋದರಿಯರು…
ಮೊಸರು ಮತ್ತು ಯೋಗರ್ಟ್ ನೋಡಲು ಒಂದೇ ರೀತಿ ಕಂಡರೂ ಇವುಗಳನ್ನು ತಯಾರಿಸುವ ರೀತಿ, ಅವುಗಳ ರುಚಿ (Taste), ವಿನ್ಯಾಸದಲ್ಲಿ ವ್ಯತ್ಯಾಸವಿದೆ. ಅದರಲ್ಲೂ ಮುಖ್ಯವಾಗಿ ತಯಾರಿಕೆಯ ರೀತಿಯಿಂದ ಎರಡರ ಮಧ್ಯೆಯಿರುವ ವ್ಯತ್ಯಾಸ ಸ್ಪಷ್ಟವಾಗುತ್ತದೆ. ಬೆಚ್ಚಗಿನ ಹಾಲಿಗೆ ಹಳೆಯ ಮೊಸರು ಅಥವಾ ನಿಂಬೆ (Lemon) ರಸವನ್ನು ಸೇರಿಸಿ ಮೊಸರನ್ನು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಮೊಸರನ್ನು ಮನೆಯಲ್ಲಿ ತಯಾರಿಸಬಹುದಾಗಿದೆ. ಆದರೆ, ಯೋಗರ್ಟ್ನ್ನು ಕೃತಕ ಆಮ್ಲಗಳೊಂದಿಗೆ ಹಾಲನ್ನು ಹುದುಗಿಸುವ ಮೂಲಕ ತಯಾರಿಸಲಾಗುತ್ತದೆ, ಇದನ್ನು ಸಾಮಾನ್ಯವಾಗಿ ವಾಣಿಜ್ಯಿಕವಾಗಿ ತಯಾರಿಸಲಾಗುತ್ತದೆ. ಯೋಗರ್ಟ್ ಪರಿಪೂರ್ಣ ರುಚಿ ಮತ್ತು ಮೃದುವಾದ ವಿನ್ಯಾಸವನ್ನು ಪಡೆಯಲು ಸೂಕ್ತವಾದ ತಾಪಮಾನದ ಅಗತ್ಯವಿರುತ್ತದೆ. ಮೊಸರು ಮತ್ತು ಯೋಗರ್ಟ್ ಎರಡೂ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ (Bacteria)ಗಳನ್ನು ಹೊಂದಿವೆ. ಆದರೆ, ಮೊಸರಿಗೆ ಹೋಲಿಸಿದರೆ ಯೋಗರ್ಟ್ನಲ್ಲಿರುವ ಬ್ಯಾಕ್ಟೀರಿಯಾದ ಪ್ರಮಾಣವು ಹೆಚ್ಚು. ಮೊಸರು ತುಲನಾತ್ಮಕವಾಗಿ ಕಡಿಮೆ ಪ್ರಮಾಣದ ಬ್ಯಾಕ್ಟೀರಿಯಾವನ್ನು ಹೊಂದಿದೆ. ಮೊಸರು ಮತ್ತು ಯೋಗರ್ಟ್ ನಡುವಿನ ವ್ಯತ್ಯಾಸವೇನು ? ಮೊಸರನ್ನು ನಿಂಬೆ ಅಥವಾ ಮೊಸರಿನೊಂದಿಗೆ ಹಾಲನ್ನು ಬೆರೆಸಿ ತಯಾರಿಸಲಾಗುತ್ತದೆ, ಇದು ಲ್ಯಾಕ್ಟೋಬಾಸಿಲಸ್ ಎಂದೂ ಕರೆಯಲ್ಪಡುವ ಹಲವಾರು ರೀತಿಯ…
ವಿಯೆಟ್ನಂ ವರ್ಷದ ಯಾವುದೇ ಸಮಯದಲ್ಲಿ ಆಗ್ನೇಯ ಏಷ್ಯಾದ ಮ್ಯಾಜಿಕ್ನ ಉದಾರ ಪ್ರಮಾಣವನ್ನು ಒದಗಿಸುತ್ತದೆ, ಆದರೆ ಕೆಲವು ಋತುಗಳು ಇತರರಿಗಿಂತ ಪ್ರಯಾಣಿಕರಿಗೆ ಸುಲಭವಾಗಿರುತ್ತದೆ. ನಿಮ್ಮ ಪ್ರವಾಸದಿಂದ ನೀವು ಏನನ್ನು ಹುಡುಕುತ್ತಿದ್ದೀರಿ ಎಂಬುದರ ಮೇಲೆ ಬಹಳಷ್ಟು ಅವಲಂಬಿತವಾಗಿದೆ – ಇದು ಕೇಂದ್ರ ಕರಾವಳಿಯ ಕಡಲತೀರದ ಸಮಯವಾಗಿದ್ದರೆ, ಬೇಸಿಗೆಯ ಜನಸಂದಣಿಯು ಬರುವ ಮೊದಲು ನೀವು ಬಹುಶಃ ಫೆಬ್ರವರಿಯಿಂದ ಜೂನ್ ವರೆಗೆ ಶುಷ್ಕ ತಿಂಗಳುಗಳಿಗೆ ಅಂಟಿಕೊಳ್ಳಲು ಬಯಸುತ್ತೀರಿ; ನೀವು ಎತ್ತರದ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ಮಾಡಲು ಇಲ್ಲಿದ್ದರೆ, ಅಕ್ಟೋಬರ್ನಿಂದ ಮಾರ್ಚ್ವರೆಗಿನ ಅವಧಿಯು ಅತ್ಯುತ್ತಮವಾದ ಋತುವಾಗಿದೆ. ವಿಯೆಟ್ನಾಂನಲ್ಲಿ ಭೇಟಿ ನೀಡುವ ಸ್ಥಳಗಳು ಹ್ಯಾಲೊಂಗ್ ಬೇ, ಮೈ ಸನ್ ಅಭಯಾರಣ್ಯ, ಕು ಚಿ ಸುರಂಗಗಳು, ಫಾಂಗ್ ನ್ಹಾ ಕೆ ಬ್ಯಾಂಗ್ ರಾಷ್ಟ್ರೀಯ ಉದ್ಯಾನವನ, ಮೆಕಾಂಗ್ ಡೆಲ್ಟಾ, ಲಾನ್ ಹಾ ಬೇ, ಕ್ಯಾಟ್ ಬಾ ಐಲ್ಯಾಂಡ್, ಡೌ ಬಿ ಐಲ್ಯಾಂಡ್, ಟಿ ಟಾಪ್ ಐಲ್ಯಾಂಡ್, ಹೋಂಗ್ ಲಿಯೆನ್ ರಾಷ್ಟ್ರೀಯ ಉದ್ಯಾನವನ, ಬಾ ಬೆ ರಾಷ್ಟ್ರೀಯ ಉದ್ಯಾನವನ, ಬಾನ್ ಜಿಯೋಕ್ ಜಲಪಾತ, ಸಾಪಾ ಕಂಟ್ರಿಸೈಡ್,…