Author: AIN Author

ಹುಬ್ಬಳ್ಳಿ: ಸುಧೀರ್ಘ ಅವಧಿಯಲ್ಲಿನ ನಿವೃತ್ತರ ಕರ್ತವ್ಯ ತತ್ಪರತೆ ಹಾಗೂ ಸಹೋದ್ಯೋಗಿಗಳೊಂದಿಗೆ ಸೌಹಾರ್ದ ನಡವಳಿಕೆ ಕಿರಿಯ ನೌಕರರಿಗೆ ಅನುಕರಣೀಯ ವಾಗಿದೆ ಎಂದು ವ್ಯಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗಿಯ ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀಮತಿ ಯಮುನಾ ನಾಗರಾಜ್ ನಾಯಕ್ ರವರ ವಯೋ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡು ತ್ತಿದ್ದರು. 1987 ರಲ್ಲಿ ಸಂಸ್ಥೆಯ ಉತ್ತರ ಕನ್ನಡ ವಿಭಾಗದಲ್ಲಿ ಸೇವೆಗೆ ನೇಮಕಗೊಂಡ ಶ್ರೀಮತಿ ಯಮುನಾ ನಾಗರಾಜ ನಾಯಕ್ ರವರು ಕೋವಿಡ್ ಸಂಕಷ್ಟದ ಅವಧಿಯೂ ಸೇರಿದಂತೆ ಕಳೆದ 36 ವರ್ಷಗಳ ಸುಧೀರ್ಘ ಸೇವಾ ವಧಿಯಲ್ಲಿ ಒಂದು ದಿನವೂ ಗೈರು ಹಾಜರಾಗದೆ ಕೆಲಸ ಮಾಡಿದ್ದಾರೆ. ನಿವೃತ್ತಿ ದಿನವೂ ಸಹ ಕೊನೆಯ ಕ್ಷಣದವರೆಗೆ ಕಡತಗಳ ನಿರ್ವಹಣೆ ಕಾರ್ಯ ನಿರ್ವಹಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಯಾವುದೇ ದೂರು ಗಳಿಗೆ ಅವಕಾಶ ನೀಡದ, ಸಹೊದ್ಯೋಗಿಗಳೊಂದಿಗೆ ಅವರ ಸೌಹಾರ್ದ ಒಡನಾಟ ಇಂದಿನ ಪೀಳಿಗೆಯ ನೌಕರರಿಗೆ ಮಾದರಿಯಾಗಿದೆ ಎಂದು…

Read More

ಚಾಮರಾಜನಗರ: 2023ರನ್ನು ಕಳಿಸಿ 2024ಕ್ಕೆ ಸ್ವಾಗತ ಮಾಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಮುನ್ನೆಚ್ಚರಿಕಾಕ್ರಮವಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಹೊಸ ವರ್ಷ ಆಚರಣೆಗೆ ಅರಣ್ಯ ಇಲಾಖೆ ಬ್ರೇಕ್​ ಹಾಕಿದೆ. ಅರಣ್ಯ ಇಲಾಖೆ ವಸತಿಗೃಹ, ಕಾಟೇಜ್‌ಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಹೇರಿದೆ. ಇಂದು, ನಾಳೆ ಬಂಡೀಪುರದಲ್ಲಿ ಎಂದಿನಂತೆ ಸಫಾರಿ ನಡೆಯಲಿದೆ. ಆದರೆ ಅರಣ್ಯ ಇಲಾಖೆ ವಸತಿಗೃಹ ಹಾಗೂ ಬಂಡೀಪುರದ ಖಾಸಗಿ ರೆಸಾರ್ಟ್​​ಗಳಲ್ಲಿ ಮೋಜು ಮಸ್ತಿಗೆ ಬ್ರೇಕ್ ಹಾಕಿದೆ. ಡಿಜೆ ಡ್ಯಾನ್ಸ್​, ಮೋಜು ಮಸ್ತಿ ಹಾಗೂ ಕಲರ್ ಲೈಟಿಂಗ್ಸ್‌ಗೆ ನಿರ್ಬಂಧ ಹೇರಲಾಗಿದೆ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ‌ಮಾಹಿತಿ ನೀಡಿದ್ದಾರೆ.

Read More

ಬೆಂಗಳೂರು: ಬಿಜೆಪಿಯ ಆಪರೇಷನ್ ಕಮಲದ ವಾಸನೆಗೆ ಕೈನಾಯಕರು ಥಂಡಾ ಹೊಡೆದಂತೆ ಕಾಣ್ತಿದೆ..ನಮ್ಮ ಅಸಮಾಧಾನಿತ ಶಾಸಕರನ್ನ ಎಲ್ಲಿ ಸೆಳೆದುಬಿಡ್ತಾರೋ ಎಂಬ ಭಯದಲ್ಲಿ ಅವರನ್ನ ಮನವೊಲಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ..ಮೂರು ಹೊಸ ಹುದ್ದೆಗಳನ್ನ ಕ್ರಿಯೇಟ್ ಮಾಡುವ ಮೂಲಕ ಅಸಮಾಧಾನಿತರ ಶಮನಕ್ಕೆ ಬ್ರೇಕ್ ಹಾಕಿದ್ದಾರೆ. ಬಿಜೆಪಿ ಸಭೆಯಲ್ಲಿ ನಡೆದ ಒಂದೇ ಒಂದು ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರು ಥಂಡಾ ಹೊಡೆದಿದ್ದಾರೆ.. https://ainlivenews.com/lemon-juice-is-also-poisonous-if-consumed-excessively/ ಅಸಮಾಧಾನಿತ ಕಾಂಗ್ರೆಸ್ ಶಾಸಕರನ್ನ ಕರೆತನ್ನಿ ಅನ್ನೋ ಒಂದೇ ಒಂದು ಸೂಚನೆ ಕೈ ನಾಯಕರ‌ನ್ನ ಅಲರ್ಟ್ ಮಾಡಿದೆ..ಎಲ್ಲಿ ತಮ್ಮಲ್ಲಿರುವ ಅಸಮಾಧಾನಿತ ಶಾಸಕರನ್ನ ಸೆಳೆದು ಸರ್ಕಾರಕ್ಕೆ ಥ್ರೆಟ್ ಕೊಡ್ತಾರೋ ಅನ್ನೋ ಭಯದಿಂದ ತಮ್ಮ ಅಸಮಾಧಾನಿತ ಶಾಸಕರನ್ನ ಮನವೊಲಿಕೆ ಮಾಡೋಕೆ ಪ್ರಯತ್ನ ನಡೆಸಿದ್ದಾರೆ..ಯಾರು ಪಕ್ಷ ಹಾಗೂ ಸರ್ಕಾರದ ವಿರುದ್ಧ ಸಿಡಿದು ನಿಲ್ತಿದ್ರೋ ಅಂತವರನ್ನ ಹಿಡಿದು ನಿಲ್ಲಿಸೋಕೆ ಪ್ಲಾನ್ ರೂಪಿಸಿದ್ದಾರೆ..ಅದ್ರಂತೆ ಸರ್ಕಾರದಲ್ಲಿ ಮೂರು ಹೊಸ ಹುದ್ದೆಗಳನ್ನ ರಾತ್ರೋರಾತ್ರಿ ಸೃಷ್ಟಿ ಮಾಡಿ ಮೂವರಿಗೆ ಹಂಚಿದ್ದಾರೆ..ಅಧಿಕೃತವಾಗಿ ಅದೇಶವನ್ನೂ ಹೊರಡಿಸಿದ್ದಾರೆ.. ಸರ್ಕಾರ ಬಂದಾಗಿನಿಂದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತಿರುಗಿಬಿದ್ದಿದ್ರು..ಸರ್ಕಾರದ ನಡೆಗೆ ತೀರ್ವ ಆಕ್ಷೇಪ ಹೊರಹಾಕ್ತಿದ್ರು..ಇನ್ನು…

Read More

ಬೆಂಗಳೂರು: ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಹೆಚ್ ಡಿ ಕುಮಾರಸ್ವಾಮಿ ಕೌಂಟರ್ ಕೊಟ್ಟಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪರ ಬ್ಯಾಟ್ ಬೀಸಿರುವ ಹೆಚ್ಡಿಕೆ, ದಲಿತ ಅಸ್ತ್ರ ಪ್ರಯೋಗ ಮಾಡುವ ಮೂಲಕ ಸಿಎಂ ಸಿದ್ದುಗೆ ದಳಪತಿಗಳು ಕುಟುಕಿದ್ದಾರೆ. ಯೆಸ್,ಇಂಡಿಯಾ ಮೈತ್ರಿಕೂಟದ ನಾಯಕರು ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ಹೇಳಿದ ಬೆನ್ನಲ್ಲೇ,ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.ಇದು ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು.ಇದೀಗ ಖರ್ಗೆ ಪರವಾಗಿ ನೇರವಾಗಿ ಅಖಾಡಕ್ಕೆ ಇಳಿದಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ,ಸಿಎಂ ಸಿದ್ದರಾಮಯ್ಯ ವಿರುದ್ಧ ದಲಿತ ಹಾಗೂ ಕನ್ನಡಿಗ ಅಸ್ತ್ರ ಪ್ರಯೋಗ ಮಾಡಿದ್ದಾರೆ. https://ainlivenews.com/lemon-juice-is-also-poisonous-if-consumed-excessively/ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ಡಿಕೆ, ಉತ್ತರ ಭಾರತದ ನಾಯಕರು ಖರ್ಗೆ ಹೆಸ್ರನ್ನ ಪ್ರಧಾನಿ ಅಭ್ಯರ್ಥಿಗೆ ಸೂಚಿಸುತ್ತಾರೆ. ಖರ್ಗೆ ಅವರು ಪ್ರಧಾನಿ ಆಗುತ್ತಾರೋ ಬಿಡುತ್ತಾರೋ ಬೇರೆ ಮಾತು.ಆದ್ರೆ,ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಹೇಳ್ತಿದ್ದಾರೆ. ರಾಜ್ಯದಿಂದ ಖರ್ಗೆಯವರನ್ನ ಸಿದ್ದರಾಮಯ್ಯ ಓಡಿಸಿದ್ರು.ನಾನು ಎನ್ ಡಿ ಎ…

Read More

ಬೆಂಗಳೂರು: ಹೊಸ ವರ್ಷಚಾರಣೆ ಪಾರ್ಟಿಯಲ್ಲಿ ಅಮಲೇರಿಸಿಕೊಂಡು ಅಸ್ವಸ್ಥರಾಗುವ ಗ್ರಾಹಕರನ್ನು ಮನೆಗೆ ತಲುಪಿಸಲು ಬೆಂಗಳೂರಿನ ಕ್ಲಬ್, ಪಬ್, ರೆಸ್ಟೋರೆಂಟ್​​​​ಗಳು ಹೊಸ ಯೋಜನೆ ಹಮ್ಮಿಕೊಂಡಿವೆ! ಆ ಕುರಿತ ವಿವರ ಇಲ್ಲಿದೆ. ನೂತನ ವರ್ಷಚಾರಣೆ ಸಂಭ್ರಮಕ್ಕೆ ಬೆಂಗಳೂರು ರಂಗೇರುತ್ತಿದೆ. ಕ್ಲಬ್, ಪಬ್, ರೆಸ್ಟೋರೆಂಟ್​​​​ಗಳು ಈಗಾಗಲೇ ಜಗಮಗಿಸುತ್ತಿವೆ. ಜೊತೆಗೆ ಗ್ರಾಹಕರಿಗೆ ಬಗೆ ಬಗೆಯ ಆಫರ್ ನೀಡುತ್ತಿವೆ. ಈ ಬಾರಿ ಗ್ರಾಹಕರ ಸುರಕ್ಷತೆಗೆ ಒತ್ತು ನೀಡಲಾಗಿದ್ದು, ಆಧಾರ್  ಕಾರ್ಡ್ ಸಂಗ್ರಹಿಸಿ ಪಾಸ್ ನೀಡಿ, ಸಂಭ್ರಮಾಚರಣೆಗೆ ಅವಕಾಶ ಮಾಡಿಕೊಡುತ್ತಿದೆ. ಇದಕ್ಕೆ ಕಾರಣವಿದೆ. ಕ್ಲಬ್, ಪಬ್, ರೆಸ್ಟೋರೆಂಟ್​​​​ಗಳು ಹೊಸ ವರ್ಷದ ಪಾರ್ಟಿಗೆ ಬರುವ ಗ್ರಾಹಕರ ಆಧಾರ್ ಕಾರ್ಡ್, ಅಡ್ರೆಸ್ ಫ್ರೂಫ್ ಪಡೆದು ಪಾಸ್ ನೀಡಲಿವೆ. ಪಾರ್ಟಿಯಲ್ಲಿ ಅಮಲೇರಿಸಿಕೊಂಡು ಅಸ್ವಸ್ಥರಾಗುವ ಗ್ರಾಹಕರನ್ನು ಮನೆಗೆ ತಲುಪಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ.ತಡರಾತ್ರಿ 1 ಗಂಟೆವರೆಗೂ ನ್ಯೂ ಇಯರ್ ಸೆಲೆಬ್ರೆಷನ್​ಗೆ ಅವಕಾಶ ನೀಡಲಾಗಿದೆ. https://ainlivenews.com/lemon-juice-is-also-poisonous-if-consumed-excessively/ ಅಷ್ಟೇ ಅಲ್ಲದೇ, ಟಫ್ ರೂಲ್ಸ್ ಜಾರಿ ಮಾಡಿ ಗೈಡ್​​ಲೈನ್ಸ್ ನೀಡಿರುವ ಪೊಲೀಸರು, ರೂಲ್ಸ್ ತಪ್ಪದೇ ಫಾಲೋ ಮಾಡವಂತೆ ಕಟ್ಟುನಿಟ್ಟಿಗಿ ಸೂಚಿಸಿದ್ದಾರೆ. ಗ್ರಾಹಕರ…

Read More

ಬಿಗ್ ಬಾಸ್ ಮನೆಯಿಂದ ಸಿರಿ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಾರದ ಲೆಕ್ಕಾಚಾರದಲ್ಲಿ ಸಿರಿ (Siri) ಲಿಸ್ಟ್ ನಲ್ಲಿ ಇರಲಿಲ್ಲ. ಹಾಗಾಗಿ ಇದು ಹೇಗೆ ಸಾಧ್ಯ?ವೆಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಸಿರಿ ಈ ವಾರ ಮನೆಯಿಂದ ಆಚೆ ಬಂದಿದ್ದು ನಿಜವೆ ಆಗಿದ್ದರೆ, ಯಾವ ಆಧಾರದ ಮೇಲೆ ಮೈಕಲ್ ಸೇಫ್ ಆದರು ಎನ್ನುವುದನ್ನು ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದಾರೆ. ಕಳೆದ ವಾರವೇ ಮೈಕಲ್ ಮನೆಯಿಂದ ಆಚೆ ಬರಬೇಕಿತ್ತು. ಕಾರು ಏರಿ ಮನೆಯಿಂದ ಹೊರಟೂ ಬಿಟ್ಟಿದ್ದರು. ಆದರೆ, ಬಿಗ್ ಬಾಸ್ ಅಲ್ಲೊಂದು ಟ್ವಿಸ್ಟ್ ಕೊಟ್ಟಿದ್ದರು. ಪರಿಣಾಮ ಮೈಕಲ್ ಸೇಫ್ ಆದರು. ಆದರೆ, ಈ ಬಾರಿಯಾದರೂ ಮೈಕಲ್ ಮನೆಯಿಂದ ಹೊರ ಬರಲಿದ್ದಾರೆ ಎಂಬ ಲೆಕ್ಕಾಚಾರವಿತ್ತು. ಅದು ಸುಳ್ಳಾದಂತೆ ಕಾಣುತ್ತಿದೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮೈಕಲ್ ಉಳಿದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಅಚ್ಚರಿಗೆ ಕಾರಣವನ್ನು ಇಂದಿನ ಎಪಿಸೋಡ್ ನಲ್ಲಿ ನೋಡಬಹುದಾಗಿದೆ. ಹಾಗಂತ ಸಿರಿ ಸ್ಟ್ರಾಂಗ್ ಕಂಟೆಸ್ಟೆಂಟ್ ಏನು ಆಗಿರಲಿಲ್ಲ.…

Read More

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಸಚಿವರು ಸ್ಪರ್ಧಿಸುವ ಬಗ್ಗೆ ರಾಜ್ಯದ ನಾಯಕರು ನಿರ್ಧರಿಸುತ್ತಾರೆ ಎಂದು ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಕುರಿತಾದ ಪ್ರಶ್ನೆಗೆ ಹೀಗೆ ಉತ್ತರಿಸಿದರು. https://ainlivenews.com/lemon-juice-is-also-poisonous-if-consumed-excessively/ ರಾಜ್ಯದಲ್ಲಿ ಕೆಲವು ಸಚಿವರನ್ನು ಲೋಕಸಭೆ ಚುನಾವಣೆ ಅಖಾಡಕ್ಕೆ ಇಳಿಸಲಾಗುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, “ನೀವು ಈ ಬಗ್ಗೆ ಇಲ್ಲಿನ ನಾಯಕರನ್ನು ಕೇಳಬೇಕು. ಇಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬುದನ್ನು ರಾಜ್ಯ ಚುನಾವಣಾ             ಸಮಿತಿ ನೋಡುತ್ತದೆ,” ಎಂದರು. ರಾಜ್ಯ ಚುನಾವಣಾ ಸಮಿತಿಯ ಅಭಿಪ್ರಾಯದ ಬಳಿಕ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮುಂದಿನ ನಿರ್ಧಾರ ಆಗುತ್ತದೆ. ಯಾರು ಸ್ಪರ್ಧೆ ಮಾಡಬೇಕು, ಯಾರು ಮಾಡಬಾರದು ಎಂಬುದನ್ನು ರಾಜ್ಯ ಚುನಾವಣಾ ಸಮಿತಿ ನಿರ್ಧಾರ ಮಾಡಿದ ಬಳಿಕ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಗೆ ಬರುತ್ತದೆ. ಆಗ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ನಾವು ತೀರ್ಮಾನ ಮಾಡುತ್ತೇವೆ ಎಂದರು.

Read More

ಬೆಂಗಳೂರು: ನಾನು ವಿಶ್ವದ ದೊಡ್ಡ ಅರ್ಥಿಕ ತಜ್ಞನೋ? ಗ್ರಾಮದ ಆರ್ಥಿಕ ತಜ್ಞನೋ ಎಂಬುದು ಎಚ್‌ಡಿ ಕುಮಾರಸ್ವಾಮಿ ಅವರಿಗೆ ಏಕೆ ಬೇಕು? ಎಂದು ಸಿಎಂ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು. ಬಸವರಾಜ ರಾಯರೆಡ್ಡಿ ಅವರನ್ನು ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡುವ ಸಿದ್ದರಾಮಯ್ಯ ಅವರ ನಡೆಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದರು. ಬಸವರಾಜ ರಾಯರೆಡ್ಡಿ ಏನು ದೊಡ್ಡ ಆರ್ಥಿಕ ತಜ್ಞನೇ? ಎಂದು ಟೀಕಿಸಿದ್ದರು. https://ainlivenews.com/lemon-juice-is-also-poisonous-if-consumed-excessively/ ಇದಕ್ಕೆ ತಿರುಗೇಟು ನೀಡಿದ ರಾಯರೆಡ್ಡಿ, “ನಾನು ವಿಶ್ವದ ದೊಡ್ಡ ಅರ್ಥಿಕ ತಜ್ಞನೋ, ಗ್ರಾಮದ ಆರ್ಥಿಕ ತಜ್ಞನೋ ಅವರಿಗ್ಯಾಕೆ..? ಅವರಿಗ್ಯಾಕೆ ಬೇಕು, ನನ್ನ ಜೊತೆ ಚರ್ಚೆಗೆ ಕುಳಿತುಕೊಳ್ಳಲಿ, ನನಗೆ ಏನು ಗೊತ್ತಿದ್ಯೋ ಮಾತನಾಡುತ್ತೇನೆ, ಅವರಿಗೆ ಏನು ಗೊತ್ತಿದೆಯೋ ಅದನ್ನು ಅವರು ಮಾತಾಡಲಿ’’ ಎಂದು ಸವಾಲು ಹಾಕಿ ದರು. ಎಚ್‌ಡಿ ಅವರು ಏನು ದೊಡ್ಡ ಆರ್ಥಿಕ ತಜ್ಞರಾ? ಪ್ರತಿಯೊಬ್ಬರಿಗೂ ಅವರದ್ದೇ ಆದ ನೈಪುಣ್ಯತೆ ಇರುತ್ತದೆ. ಹಾಗೆಲ್ಲಾ ಹಗುರವಾಗಿ ಮಾತಾಡಬಾರದು ಎಂದರು.

Read More

ಬೆಂಗಳೂರು: ಅಲ್ಪಸಂಖ್ಯಾತರ ಬಡಾವಣೆಗಳ ಸುಧಾರಣೆಗೆ 11 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಪ್ಪು ಸುಲ್ತಾನ ಮಾಡಿದಂತೆಯೇ ಹಿಂದೂ-ಮುಸ್ಲಿಮರನ್ನು ಬೇರೆ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ,‌ ಒಂದೇ ವಾರದಲ್ಲಿ ಪ್ರತಿ ರೈತರಿಗೆ 2 ಸಾವಿರ ರೂ. ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ವಾಸ್ತವವಾಗಿ ಪ್ರತಿಯೊಬ್ಬರಿಗೆ 30 – 40 ಸಾವಿರ ರೂ.‌ ಕೊಡಬೇಕಿತ್ತು. ಇವರಿಗೆ ಅಷ್ಟು ಹಣ ನೀಡಲು ಕೂಡ ಯೋಗ್ಯತೆ ಇಲ್ಲ. ಬೆಳಗಾವಿ ಅಧಿವೇಶನದಲ್ಲಿ ವಿರೋಧ ಬರುತ್ತದೆಂದು 2 ಸಾವಿರ ರೂ. ಘೋಷಿಸಿದ್ದರು. https://ainlivenews.com/lemon-juice-is-also-poisonous-if-consumed-excessively/ ಅದನ್ನು ಕೊಡುವ ಯೋಗ್ಯತೆ ಇಲ್ಲದವರು ಮಾನ ಮರ್ಯಾದೆ ಇಲ್ಲದೆ 11 ಸಾವಿರ ಕೋಟಿ ರೂಪಾಯಿ ಯನ್ನು ಅಲ್ಪಸಂಖ್ಯಾತರ ಬಡಾವಣೆಗೆ ಖರ್ಚು ಮಾಡುತ್ತೇನೆ ಎಂದು ಹೇಳುತ್ತಾರೆ ಎಂದು ದೂರಿದರು. ಹಿಂದೆ ಟಿಪ್ಪು ಸುಲ್ತಾನ ಹಿಂದೂ ಮುಸ್ಲಿಮರನ್ನು ಬೇರೆ ಮಾಡಿದಂತೆ ಸಿಎಂ ಸಿದ್ದರಾಮಯ್ಯನವರು ಈಗ ಮಾಡುತ್ತಿದ್ದಾರೆ. ಮುಸ್ಲಿಮರ ಕಾಲೋನಿ ಬೇರೆ, ಹಿಂದೂಗಳ ಪ್ರದೇಶ ಬೇರೆ…

Read More

ಬೀದರ್: ಪ್ರಕೃತಿ ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಆದರೆ ಬೇಲೂರು ತಾಲೂಕು ನಂದಗೋಡನ ಹಳ್ಳಿಯಲ್ಲಿ 126ಕ್ಕೂ ಹೆಚ್ಚು ಮರಗಳನ್ನು ಅಕ್ರಮವಾಗಿ  ಕಡಿಯಲಾಗಿದೆ. ಇದರಲ್ಲಿ 50-60 ವರ್ಷದ ಬೃಹತ್ ಹಳೆಯ ಮರಗಳೂ  ಇವೆ. ಈ ರೀತಿ ಸ್ವಾರ್ಥಕ್ಕಾಗಿ ಯಾರೇ ಮರ ಕಡಿದರೂ ಅದು ಅಪರಾಧ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ವೃಕ್ಷ ಸಂರಕ್ಷಣಾ ಕಾಯಿದೆಯಡಿ ಸರ್ಕಾರಿ ಜಾಗದಲ್ಲಿಯೇ ಆಗಲೀ, ಪಟ್ಟಾ ಜಮೀನಿನಲ್ಲೇ ಆಗಲಿ ಅನುಮತಿ ಪಡೆಯದೆ ಅಕ್ರಮವಾಗಿ ಮರ ಕಡಿಯುವುದು ಅಪರಾಧ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. https://ainlivenews.com/lemon-juice-is-also-poisonous-if-consumed-excessively/ ನಾನು ಯಾರ ಹೆಸರೂ ಹೇಳಲು ಇಚ್ಛಿಸುವುದಿಲ್ಲ. ಆದರೆ, ವಿಕ್ರಂ ಸಿಂಹ ಎಂಬುವವರು ಶುಂಠಿ ಬೆಳೆಯಲು ಸದರಿ ಪ್ರಶ್ನಿತ ಜಮೀನಿನ ಕರಾರು ಮಾಡಿಕೊಂಡಿದ್ದಾರೆ. ಹೀಗಾಗಿ ಅವರನ್ನು ವಶಕ್ಕೆ ಪಡೆದು ಪ್ರಶ್ನಿಸುವುದು ಅಗತ್ಯವೆಂದು ಮನಗಂಡು ತನಿಖಾಧಿಕಾರಿಗಳು ಅವರನ್ನು ಬಂಧಿಸಿದ್ದಾರೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ತಹಶೀಲ್ದಾರ್ ಅವರು…

Read More