ಮುಂಬೈ:- 97.38 ರಷ್ಟು 2ಸಾವಿರ ರೂ.ನ ಕರೆನ್ಸಿ ನೋಟುಗಳು ಡಿಸೆಂಬರ್ 29 ರವರೆಗೆ ಬ್ಯಾಂಕ್ಗಳಿಗೆ ಮರಳಿವೆ ಎಂದು ಆರ್ಬಿಐ ತಿಳಿಸಿದೆ. 2ಸಾವಿರ ರೂ.ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ನಂತರ ಶೇ.97.38 ನೋಟುಗಳನ್ನು ಡಿಸೆಂಬರ್ 29 ರವರೆಗೆ ಹಿಂತಿರುಗಿಸಲಾಗಿದೆ ಎಂದು ಆರ್ಬಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮೇ 19, 2023 ರಂದು ವಹಿವಾಟು ಮುಕ್ತಾಯದ ಸಮಯದಲ್ಲಿ ಸುಮಾರು 3.56 ಲಕ್ಷ ಕೋಟಿ ಮೌಲ್ಯದ 2000 ನೋಟುಗಳು ಚಲಾವಣೆಯಲ್ಲಿದ್ದವು. ಡಿಸೆಂಬರ್ 29ಕ್ಕೆ ಇನ್ನೂ 9,330 ಕೋಟಿ ರೂ.ಬಾಕಿ ಇದೆ. ಆದರೆ 2023 ಮೇ 19 ಲಭ್ಯವಿರುವ ಎರಡು ಸಾವಿರ ನೋಟುಗಳಲ್ಲಿ ಶೇ.97.38ರಷ್ಟು ನೋಟುಗಳು ಬ್ಯಾಂಕ್ಗಳಿಗೆ ತಲುಪಿವೆ ಎಂದು ಆರ್ಬಿಐ ತಿಳಿಸಿದೆ. 2000 ಕರೆನ್ಸಿ ನೋಟುಗಳಿಗೆ ಇನ್ನೂ ಕಾನೂನು ಮಾನ್ಯತೆ ಇದೆ ಎಂದು ಆರ್ಬಿಐ ಬಹಿರಂಗಪಡಿಸಿದೆ. ನೋಟು ಅಮಾನ್ಯೀಕರಣದ ಸಮಯದಲ್ಲಿ ಪರಿಚಯಿಸಲಾದ 2ಸಾವಿರ ರೂ.ನೋಟುಗಳನ್ನು ಬ್ಯಾಂಕ್ಗಳು 2023 ರಲ್ಲಿ ಹಿಂಪಡೆಯಲು ಪ್ರಾರಂಭಿಸಿದವು. ಕಳೆದ ವರ್ಷ ಅಕ್ಟೋಬರ್ 7ರವರೆಗೆ ಎಲ್ಲಾ ಬ್ಯಾಂಕ್ಗಳಲ್ಲಿ ಎರಡು ಸಾವಿರ ನೋಟುಗಳು ಜಮೆ…
Author: AIN Author
ದಾವಣಗೆರೆ: ಕೋರೊನಾದಲ್ಲಿ 40 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪದಲ್ಲಿ ಯಾವುದೇ ಹುರಳಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಅವ್ಯವಹಾರ ಆಗಿದ್ದರೆ ನಾನೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಆರೋಪ ಸಾಬೀತು ಮಾಡಿ. ನೀವು ಮಾಡಿರುವ ಆರೋಪಗಳ ಬಗ್ಗೆ ದಾಖಲೆ ಸಮೇತ ಚರ್ಚೆಗೆ ಬನ್ನಿ, ನಾನೂ ಬರ್ತೀನಿ ಎಂದು ಯತ್ನಾಳಗೆ ಸವಾಲು ಹಾಕಿದರು. ಇನ್ನು ವಿಜಯಪುರದಲ್ಲಿ ಪ್ರಭಾವಿ ಸಚಿವರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಸರ್ಕಾರದಲ್ಲಿ ಕೆಲಸ ಮಾಡಿಕೊಂಡು ಆರೋಪ ಮಾಡೋದು ಬಿಡಬೇಕು. https://ainlivenews.com/curry-leaves-are-good-for-cooking-and-good-for-health-this-has-many-benefits/ ಕೋವಿಡ್ ನಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ 40 ಸಾವಿರ ಕೋಟಿ ರೂ ಹಗರಣ ನಡೆದಿದೆ ಎಂದಿದ್ದಾರೆ. ಆಗ ಇವರು ಶಾಸಕರಾಗಿದ್ದರು. ನಾವು ಕೂಡ ಮಾಸ್ಕ್, ಆಕ್ಸಿಜೆನ್ ಸೇರಿ ಯಾವುದಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎಂದು ಸದನದಲ್ಲಿಯೇ ದಾಖಲೆ ತೋರಿಸಿದ್ದೇವೆ. ಯತ್ನಾಳ…
ಮುಂಬೈ: ಕೊಲೆ ಪ್ರಕರಣವೊಂದರಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು 31 ವರ್ಷಗಳ ನಂತರ ಮಹಾರಾಷ್ಟ್ರ (Maharashtra) ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದೀಪಕ್ ಭಿಸೆ (62) ಎಂದು ಗುರುತಿಸಲಾಗಿದೆ. ಪೊಲೀಸರು ಸುಮಾರು 31 ವರ್ಷಗಳಿಂದಲೂ ನಿರಂತರವಾಗಿ ಆತನಿಗಾಗಿ ಹುಡುಕಾಟ ನಡೆಸಿದ್ದರು. ಆರೋಪಿ ಬಗ್ಗೆ ವಿಚಾರಿಸಲು ಆತನ ಊರಿಗೆ ತೆರಳಿದಾಗ ಆತ ಮೃತಪಟ್ಟಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದರು. ಈಗ ದೀಪಕ್ ಪಾಲ್ಘರ್ ಜಿಲ್ಲೆಯ ನಲಸೋಪಾರಾ ಎಂಬಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಾಗಿ ಹುಟುಕಾಟ ನಡೆಸಿದ್ದ ಪೊಲೀಸರಿಗೆ ಮೊದಲು ಆತನ ಪತ್ನಿಯ ಮೊಬೈಲ್ ನಂಬರ್ ಸಿಕ್ಕಿದೆ. ಇದರಿಂದ ಆರೋಪಿಯ ಸುಳಿವು ಸಿಕ್ಕಿದೆ. https://ainlivenews.com/the-center-has-declared-a-canadian-born-criminal-as-a-terrorist/ ಆರೋಪಿ 1989 ರಲ್ಲಿ ರಾಜುಚಿಕ್ಕ ಎಂಬಾತನನ್ನು ಕೊಲೆಗೈದು ಧಮೇರ್ಂದ್ರ ಸರೋಜ್ ಎಂಬವರ ಕೊಲೆಗು ಸಹ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಆರೋಪಿ ದೀಪಕ್ನನ್ನು ಹಿಂದೆ ಬಂಧಿಸಲಾಗಿತ್ತು. ಆತ 1992 ರಲ್ಲಿ ಜಾಮೀನು ಪಡೆದ ಬಳಿಕ ವಿಚಾರಣೆಗೆ ಹಾಜರಾಗಿರಲಿಲ್ಲ. 2003 ರಲ್ಲಿ ನ್ಯಾಯಾಲಯ (Court) ಆತ…
ಭತ್ತದ ಕಣಜವೆಂದೇ ಬಿಂಬಿಸಲ್ಪಟ್ಟಿದ್ದ ಜಿಲ್ಲೆಯ ಕೃಷಿ ವಲಯವು ದಿನ ಕಳೆದಂತೆ ಬದಲಾಗುತ್ತಿದ್ದು, ಕಬ್ಬು, ಭತ್ತ, ತೆಂಗಿಗೆ ಇದ್ದ ಪ್ರಾಮುಖ್ಯತೆ ಕಡಿಮೆಯಾಗಿ ಈ ಪ್ರದೇಶವನ್ನು ಅಡಿಕೆ ಬೇಸಾಯ ಆವರಿಸುತ್ತಿದೆ ಕರಾವಳಿ, ಮಲೆನಾಡು, ಅರೆ ಮಲೆನಾಡು ಪ್ರದೇಶಕ್ಕೆ ಸೀಮಿತವಾಗಿದ್ದ ಅಡಿಕೆ ಬೇಸಾಯ ಕೃಷಿ ಪ್ರಧಾನ ಮಂಡ್ಯ ಜಿಲ್ಲೆಗೂ ಕಾಲಿಟ್ಟಿದೆ. ಕೃಷಿ ಕಾರ್ಮಿಕರ ಕೊರತೆ, ನಗರ ಪ್ರದೇಶಗಳತ್ತ ಗುಳೆ ಹೊರಟ ಯುವಕರು ಮತ್ತು ನಿರಂತರ ಬರ, ನೀರಿನ ಕೊರತೆ, ವಿಸಿ ನಾಲೆ ಸೇರಿದಂತೆ ಕೆರೆ ವ್ಯಾಪ್ತಿಯಲ್ಲಿ ಕಟ್ಟು ನೀರು ಪದ್ಧತಿ ಜಿಲ್ಲೆಯ ಕೃಷಿ ಪ್ರದೇಶದ ಬದಲಿ ಬೆಳೆ ಸ್ಥಿತಿಗೆ ಕಾರಣವೆನ್ನಲಾಗಿದೆ. ಬಹುತೇಕ ರೈತರು ಈಗಾಗಲೇ ತೆಂಗಿನ ಬೇಸಾಯದೊಟ್ಟಿಗೆ ಮಿಶ್ರ ಬೆಳೆಯಾಗಿ ಅಡಿಕೆಗೆ ಒತ್ತು ನೀಡಿದ್ದಾರೆ. ಕೆಲ ರೈತರು ಕಬ್ಬು, ಭತ್ತ, ಮತ್ತು ತೋಟಗಾರಿಕೆ ಬೆಳೆಗಳನ್ನು ಕೈಬಿಟ್ಟು ಪೂರ್ಣ ಪ್ರಮಾಣದ ಅಡಿಕೆ ನಾಟಿಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಅಧಿಕವಾಗಿ ಕಾಣಸಿಗುವ ಅಡಿಕೆ ಬೆಳೆ ಬೇಸಾಯಕ್ಕೆ ಸರಕಾರ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಹನಿ ನೀರಾವರಿ, ವಿವಿಧ ರಿಯಾಯಿತಿಗಳು, ಪ್ರೋತ್ಸಾಹಧನ…
MG ಕಾಮೆಟ್ EV. ಈ ಪರಿಸರ ಸ್ನೇಹಿ ಸೇರ್ಪಡೆಯ ವಿವರಗಳನ್ನು ಪರಿಶೀಲಿಸೋಣ. ಅಲ್ಲದೆ, ಕಾಮೆಟ್ EV ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಎದ್ದು ಕಾಣುವಂತೆ ಮಾಡುತ್ತದೆ ಎಂಬುದನ್ನು ಸಹ ಅನ್ವೇಷಿಸೋಣ. ಬಾಲಿವುಡ್ನಲ್ಲಿ ಬಹುಮುಖ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಸುನೀಲ್ ಶೆಟ್ಟಿ, MG ಕಾಮೆಟ್ EV ಯೊಂದಿಗೆ ಪರಿಸರ ಪ್ರಜ್ಞೆಯ ಪ್ರಯಾಣದತ್ತ ಹೆಜ್ಜೆ ಇಟ್ಟಿದ್ದಾರೆ. ನಟ ತನ್ನ Instagram ನಲ್ಲಿ ಸ್ನ್ಯಾಪ್ಶಾಟ್ ಅನ್ನು ಹಂಚಿಕೊಂಡಿದ್ದಾರೆ, ನಯವಾದ ಕಪ್ಪು ಎಲೆಕ್ಟ್ರಿಕ್ ಕಾರಿನೊಂದಿಗೆ ಹೆಮ್ಮೆಯಿಂದ ಪೋಸ್ ನೀಡಿದ್ದಾರೆ. ಈ ಕ್ರಮವು ಶೆಟ್ಟಿಯವರ ಸುಸ್ಥಿರತೆ ಮತ್ತು ಚಲನಶೀಲತೆಯ ಭವಿಷ್ಯವನ್ನು ಅಳವಡಿಸಿಕೊಳ್ಳುವ ಬದ್ಧತೆಯನ್ನು ತೋರಿಸುತ್ತದೆ. MG ಕಾಮೆಟ್ EV, ದೇಶದಲ್ಲಿ ಹೆಚ್ಚು ಪ್ರವೇಶಿಸಬಹುದಾದ ಎಲೆಕ್ಟ್ರಿಕ್ ವಾಹನವಾಗಿದೆ, ಮೂರು ರೂಪಾಂತರಗಳನ್ನು ನೀಡುತ್ತದೆ – ಪೇಸ್, ಪ್ಲೇ ಮತ್ತು ಪ್ಲಶ್. ಆಶ್ಚರ್ಯಕರವಾಗಿ, ಶೆಟ್ಟಿ ಅವರು MG ಮೋಟಾರ್ ಇಂಡಿಯಾದ ಮತ್ತೊಂದು ಕೊಡುಗೆಯಾದ ZS EV ಗಿಂತ ಕಾಮೆಟ್ EV ಅನ್ನು ಆರಿಸಿಕೊಂಡರು. ಕಾಮೆಟ್ EV ಯ ಕಾಂಪ್ಯಾಕ್ಟ್ ಆಯಾಮಗಳು ಇತರ ಎಲೆಕ್ಟ್ರಿಕ್ ಕಾರುಗಳಲ್ಲಿ ಅದರ…
ಸಿರಿ (Siri) ಈ ವಾರ ಬಿಗ್ ಬಾಸ್ (Bigg Boss Kannada) ಮನೆಯಿಂದ ಹೊರ ಬಂದಿದ್ದಾರೆ. ತಮ್ಮ ಜರ್ನಿ ಕುರಿತಾಗಿ ಅವರು ಮುಕ್ತವಾಗಿ ಮಾತನಾಡಿದ್ದಾರೆ. ತಾವು ಅಲ್ಲಿ ಹೇಗಿದ್ದರು, ದೊಡ್ಮನೆಯಲ್ಲಿದ್ದವರನ್ನು ಹೇಗೆ ನೋಡಿದ್ದಾರೆ, ಹಾಗೂ ಇತರರ ಕುರಿತು ಮಾತನಾಡಿದ್ದಾರೆ. ನಾನು ಡಿಪ್ಲೋಮೆಟಿಕ್ ಅಂದ್ರೆ ಒಪ್ಕೋತೀನಿ. ಯಾಕಂದರೆ ನಾನು ಇರೋದೇ ಹಾಗೆ. ಈವತ್ತು ನಾನು ಹೊರಗೆ ಬಂದಾಗ, ನನಗೋಸ್ಕರ ಮನೆಯೊಳಗೆ ಇಬ್ಬರು ಮೂವರು ಕಣ್ಣೀರು ಹಾಕ್ತಿದ್ದಾರೆ ಅಂದರೆ ಅರ್ಥ ಮಾಡ್ಕೊಳ್ಳಿ. ಹಾಗೆಯೇ ಹೊರಗೆ ನನ್ನ ಅಭಿಮಾನಿಗಳಿರಬಹುದು. ನನಗೆ ಓಟ್ ಹಾಕಿರುವವರು ಇರಬಹುದು. ಅವರ ಮನಸ್ಸನ್ನು ನಾನು ಗೆದ್ದಿದೀನಿ . ಬಿಗ್ಬಾಸ್ ಮನೆಯೊಳಗೆ ಎಲ್ಲರೂ ನನ್ನನ್ನು ಡಿಪ್ಲೋಮೆಟಿಕ್ ಅಂದಿರಬಹುದು, ಸೇಫ್ ಝೋನ್ ಅಂದಿರಬಹುದು. ಆದರೆ ನಾನು ಮನೆಯಿಂದ ಹೊರಗೆ ಬರುವಾಗ ಹಾಗೆ ಹೇಳಿದವರು ಕಣ್ಣಲ್ಲೂ ನೀರು ನೋಡ್ದೆ. ಹಾಗಾಗಿ ಅವರ ಮನಸ್ಸನ್ನೂ ನಾನು ಗೆದ್ದಿದೀನಿ ಅಂದ್ಕೊಂಡಿದೀನಿ. ಯಾರ ಮನಸ್ಸನ್ನು ನೋವಾದಾಗ, ಸಮಾಧಾನ ಮಾಡಿದೀನಲ್ಲಾ, ಅವರೆಲ್ಲರೂ ನನಗೆ ಅಕ್ಕನ ಸ್ಥಾನ ಕೊಟ್ಟಿದಾರಲ್ಲಾ. ಅದರ ಬಗ್ಗೆ ಖುಷಿಯಿದೆ.…
ಭಾರತ ವನಿತೆಯರ ತಂಡದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ವನಿತೆಯರ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮುಂಬೈನ ವಾಂಖಡೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಭಾರತ ತಂಡ ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಜೆಮಿರಾ ರಾಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿ.ಕೀ), ರಿಚಾ ಘೋಷ್, ಸ್ನೇಹ ರಾಣಾ, ಅಮಂಜೋತ್ ಕೌರ್, ರೇಣುಕಾ ಸಿಂಗ್ ಠಾಕೂರ್, ದೀಪ್ತಿ ಶರ್ಮಾ, ಶ್ರೇಯಾಂಕ ಪಾಟೀಲ್. ಆಸ್ಟ್ರೇಲಿಯಾ ತಂಡ ಹೀಲಿ, ಲಿಚ್ಫೀಲ್ಡ್, ಪೆರ್ರಿ, ಮೂನಿ, ಮೆಕ್ಗ್ರಾತ್, ಗಾರ್ಡ್ನರ್, ಸದರ್ಲ್ಯಾಂಡ್, ವೇರ್ಹ್ಯಾಮ್, ಅಲಾನಾ ಕಿಂಗ್, ಕಿಮ್ ಗಾರ್ತ್, ಬ್ರೌನ್.
ಕೌನ್ ಬನೇಗಾ ಕರೋರ್ಪತಿ ಸೀಸನ್ ಮುಗೀತಾ ಅಥವಾ ಅಮಿತಾಭ್ ಬಚ್ಚನ್ (Amitabh Bachchan) ಅವರೇ ಅಲ್ಲಿಂದ ನಿರ್ಗಮಿಸಿದ್ದಾರಾ ಗೊತ್ತಿಲ್ಲ. ಒಟ್ಟಿನಲ್ಲಿ ಅಮಿತಾಭ್ ಬಚ್ಚನ್ ಮಾಡಿದ ವಿದಾಯದ ಭಾಷಣ ಮಾತ್ರ ಸಾಕಷ್ಟು ಪ್ರಶ್ನೆಯನ್ನು ಹುಟ್ಟು ಹಾಕಿದೆ. ಬಿಬಿಎಸ್ ನ ಹಲವಾರು ಸೀಸನ್ ಗಳನ್ನು ಅಮಿತಾಭ್ ಮಾಡಿದ್ದಾರೆ. ಯಾವತ್ತೂ ಅವರು ಈ ರೀತಿಯ ವಿದಾಯ ಭಾಷಣ ಮಾಡಿಲ್ಲ. ಇದೇ ಮೊದಲ ಬಾರಿಗೆ ಮಾಡಿದ್ದರಿಂದ ಅಮಿತಾಭ್ ಇನ್ಮುಂದೆ ಕೌನ್ ಬನೇಗಾ ಕರೋರ್ ಪತಿ ಮಾಡುವುದಿಲ್ಲ ಎಂದೇ ಹೇಳಲಾಗುತ್ತಿದೆ. ಕೆಲವರು ಅವರು ಇನ್ಮುಂದೆ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದರೆ, ಇನ್ನೂ ಹಲವರು ಈ ಸೀಸನ್ ಮುಗಿದಿದೆ. ಕೊನೆಯ ಸಂಚಿಕೆಯ ಶೂಟಿಂಗ್ ಮುಗಿಸಿ, ವಿದಾಯದ ಮಾತುಗಳನ್ನು ಅಮಿತಾಭ್ ಆಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಈ ಕುರಿತಂತೆ ಯಾವುದೂ ಈವರೆಗೂ ಸ್ಪಷ್ಟತೆ ಕೊಟ್ಟಿಲ್ಲ. ನಿನ್ನೆ ನಡೆದ ಫೈನಲ್ ಎಪಿಸೋಡ್ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ವಿದ್ಯಾ ಬಾಲನ್, ಸಾರಾ ಅಲಿಖಾನ್, ಶರ್ಮಿಳಾ ಟ್ಯಾಗೋರ್ ಸೇರಿದಂತೆ ಅನೇಕರು ಸೀಸನ್ ನ ಕೊನೆಯ ಸಂಚಿಕೆಯಲ್ಲಿ…
ನಮ್ಮ ಪಟ್ಟಿಯ ಸರಣಿಯನ್ನು ಮುಂದುವರಿಸುತ್ತಾ, 2024 ರಲ್ಲಿ ಭಾರತದಲ್ಲಿ ಮುಂಬರುವ ಸೆಡಾನ್ಗಳ ವಿವರಗಳನ್ನು ನಾವು ನೋಡೋಣ. ಸೆಡಾನ್ ಒಂದು ವಿಭಾಗವಾಗಿದ್ದು, SUV ಗಳ ಅಭೂತಪೂರ್ವ ಜನಪ್ರಿಯತೆಯಿಂದ ತೀವ್ರವಾಗಿ ಪ್ರಭಾವಿತವಾಗಿದೆ. ಭಾರತದಲ್ಲಿ, ಮತ್ತು ಜಗತ್ತಿನಾದ್ಯಂತ, SUVಗಳು ಬಹಳಷ್ಟು ಪ್ರಮುಖ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸುವುದನ್ನು ನಾವು ನೋಡಿದ್ದೇವೆ. ನಮ್ಮ ಮಾರುಕಟ್ಟೆಯಲ್ಲಿ ನಿರ್ದಿಷ್ಟವಾಗಿ, ಕಾರು ತಯಾರಕರು ವ್ಯಾಪಕ ಶ್ರೇಣಿಯ ಪ್ರೇಕ್ಷಕರನ್ನು ಪ್ರವೇಶಿಸಲು ಹೊಸ SUV ವಿಭಾಗಗಳನ್ನು ರಚಿಸಿದ್ದಾರೆ. ಇದು ದೊಡ್ಡ 7-ಸೀಟ್ SUV ಅಲ್ಲದಿದ್ದರೂ ಜನರು SUV ಯ ರಸ್ತೆ ಉಪಸ್ಥಿತಿಗೆ ಆಕರ್ಷಿತರಾಗುವುದರಿಂದ ಇದು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಆದ್ದರಿಂದ, ಸೆಡಾನ್ಗಳು ವರ್ಷದಿಂದ ವರ್ಷಕ್ಕೆ ಮಾರಾಟ ಪಟ್ಟಿಯಲ್ಲಿ ಕಡಿಮೆಯಾಗುತ್ತಿವೆ. ಇನ್ನೂ, ಈ ಭಾರತದಲ್ಲಿ ಕೆಲವು ಪ್ರಮುಖ ಸೆಡಾನ್ಗಳಿವೆ. ಮುಂದೆ ಹೋಗುವಾಗ, ನಾವು ಇನ್ನೂ ಕೆಲವನ್ನು ರಸ್ತೆಗಳಲ್ಲಿ ನೋಡುತ್ತೇವೆ. ನಮ್ಮ ಪಟ್ಟಿಯ ಸರಣಿಯನ್ನು ಮುಂದುವರಿಸುತ್ತಾ, 2024 ರಲ್ಲಿ ಭಾರತದಲ್ಲಿ ಮುಂಬರುವ ಸೆಡಾನ್ಗಳ ವಿವರಗಳನ್ನು ನಾವು ನೋಡೋಣ. ಸೆಡಾನ್ ಒಂದು ವಿಭಾಗವಾಗಿದ್ದು, SUV ಗಳ ಅಭೂತಪೂರ್ವ ಜನಪ್ರಿಯತೆಯಿಂದ ತೀವ್ರವಾಗಿ ಪ್ರಭಾವಿತವಾಗಿದೆ.…
ಬೆಂಗಳೂರು: ವಿಶ್ವಕರ್ಮ ಸಮುದಾಯದ ಮೂಲಪುರುಷ ವಿಶ್ವಕರ್ಮ ಅವರ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಸಂವಿಧಾನಕ್ಕೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು (ಸೋಮವಾರ) ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ಹಾಗೂ ಜಕಣಾಚಾರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇತಿಹಾಸ ಎಲ್ಲರಿಗೂ ತಿಳಿಯಬೇಕು. ಇತಿಹಾಸ ತಿಳಿಯದವರು ಇತಿಹಾಸ ರಚಿಸಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರತಿಯೊಬ್ಬ ಚರಿತ್ರಾರ್ಹ ವ್ಯಕ್ತಿಗಳ ಅಧ್ಯಯನ ವಾಗಬೇಕು ಎಂದರು. *ರಾಜ್ಯಮಟ್ಟದ ಜಯಂತಿಗಳನ್ನು ಬೆಂಗಳೂರಿನಲ್ಲಿಯೇ ಆಚರಿಸಬೇಕು ಅಮರಾಶಿಲ್ಪಿ ಜಕಣಾಚಾರಿ ಸಂಸ್ಮರಣೆ 2019 ರಲ್ಲಿ ಪ್ರಾರಂಭವಾದರೂ ಕೋವಿಡ್ ಇದ್ದುದರಿಂದ ಆಚರಿಸಲಾಗಲಿಲ್ಲ. ಕಳೆದ ವರ್ಷ ವಿಜಯನಗರ ಜಿಲ್ಲೆಯಲ್ಲಿ ಆಚರಿಸಲಾಗಿತ್ತು ಎಂದರು. ರಾಜ್ಯಮಟ್ಟದ ಜಯಂತಿಗಳನ್ನು ಬೆಂಗಳೂರಿನಲ್ಲಿಯೇ ಆಚರಿಸಬೇಕೆಂದು ಸೂಚಿಸಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಆಚರಿಸಲಾಗುತ್ತದೆ ಎಂದರು. ಕಾಲ್ಪನಿಕ ವ್ಯಕ್ತಿ ಎನ್ನುವುದು ಸುಳ್ಳು ಜಕಣಾಚಾರಿ ಇಡೀ ರಾಜ್ಯಕ್ಕೆ ಗೊತ್ತಿರುವವರು. ಅವರ ಕಾಲ್ಪನಿಕ ವ್ಯಕ್ತಿ ಎನ್ನುವುದು ಸುಳ್ಳು. ಜಕಣಾಚಾರಿ…