ತುಮಕೂರು:- ಹಾಸನ ಎಸ್ಪಿ ಅವರ ತಾಯಿ ಸಂಚರಿಸುತಿದ್ದ ಕಾರು ಹಿಟ್ ಆ್ಯಂಡ್ ರನ್ ಆಯ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದೀಗ ಘಟನೆ ಸಂಬಂಧ ದೂರು ಪ್ರತಿದೂರು ದಾಖಲಾಗಿದೆ. ಹೌದು, ಹಾಸನ ಎಸ್ಪಿ ಅವರ ತಾಯಿ ಪ್ರಯಾಣಿಸುತಿದ್ದ ಕಾರು!? ಪಾದಾಚಾರಿಗೆ ಗುದಿತ್ತಾ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ತಾಯಿ, ಇಲ್ಲ…ನಾವು ಅಪಘಾತ ಮಾಡಿಲ್ಲ.. ಗಾಯಾಳುವಿನ ರಕ್ಷಣೆಗೆ ಬಂದಿದ್ವಿ… ರಕ್ಷಣೆಗೆ ಬಂದ ನಮ್ಮ ಮೇಲೆಯೇ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ ಎಂದಿದ್ದಾರೆ. ಈ ಕುಣಿಗಲ್ ಪಟ್ಟಣದ ಬಿದನಗೆರೆ ಗ್ರಾಮದ ಬಳಿ ಘಟನೆ ಜರುಗಿದೆ. ಪಾದಾಚಾರಿ ಕುಮಾರ್ ಎನ್ನುವವರಿಗೆ ಕಾರು ಗುದ್ದಿದ ಆರೋಪ ಕೇಳಿ ಬಂದಿದೆ. ಅಪಘಾತ ನಡೆದ ಬಳಿಕ ಎಸ್ಕೇಪ್ ಆಗಲು ಪ್ರಯತ್ನಿದ್ದಾಗ ಊರಿನವರು ಅಡ್ಡಹಾಕಿ ತಡೆದ ಆರೋಪ ಕೇಳಿ ಬಂದಿದ್ದು, ಕಾರು ಅಡ್ಡಹಾಕಿದ ಪರಿಣಾಮ ಪರಸ್ಪರ ಎರಡೂ ಕಡೆಯವರ ನಡುವೆ ಗಲಾಟೆ ಶುರುವಾಗಿದೆ.. ಅಪಘಾತದಲ್ಲಿ ಗಾಯಗೊಂಡ ಕುಮಾರ್ ಸೇರಿದಂತೆ ಚಂದ್ರಪ್ಪ, ನಾಗಣ್ಣ ಒಟ್ಟು ನಾಲ್ಕು ಮಂದಿ ಮೇಲೆ ಕೊಲೆ…
Author: AIN Author
ಕಾಮಿಡಿ ಕಿಂಗ್ ಚಿಕ್ಕಣ್ಣ ಹೀರೋ ಆಗಿ ಬಣ್ಣ ಹಚ್ಚಿರುವ ಮೊದಲ ಸಿನಿಮಾ ಉಪಾಧ್ಯಕ್ಷ. ಉಮಾಪತಿ ನಿರ್ಮಾಣದ ಈ ಚಿತ್ರಕ್ಕೆ ಅನಿಲ್ ಕುಮಾರ್ ಸಾರಥಿ. ಅಧ್ಯಕ್ಷನಾಗಿ ಶರಣ್ ಹವಾಳಿ ಇಟ್ಟಾಗಿದೆ. ಈಗ ಉಪಾಧ್ಯಕ್ಷನ ಚಿಕ್ಕಣ್ಣ ಹಂಗಾಮ ಶುರು ಮಾಡುವ ಶುಭ ಘಳಿಗೆ ಹತ್ತಿರ ಬಂದಿದೆ. ಜನವರಿ 26, ದೇಶಾದ್ಯಂತ ಗಣರಾಜ್ಯೋತ್ಸವ..ಈ ಸಂಭ್ರಮದ ಉಪಾಧ್ಯಕ್ಷ ಬೆಳ್ಳಿತೆರೆಯಲ್ಲಿ ದರ್ಬಾರ್ ಶುರು ಮಾಡ್ತಿದ್ದಾರೆ. ಇನ್ನೇನೂ ಚಿತ್ರ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಉಪಾಧ್ಯಕ್ಷ ಬಳಗ ಪ್ರಚಾರ ಪಡಸಾಲೆಗಿಳಿದಿದೆ. ಉಪಾಧ್ಯಕ್ಷ ಸಿನಿಮಾದ ನಯಾ ಟೀಸರ್ ಹೊರಬಿದ್ದಿದೆ. ಬಾ ಬಾ ನಾನ್ ರೆಡಿ ಅನ್ನುತ್ತಾ ಚಿಕ್ಕಣ್ಣ ರಾಜ್ಯಾದ್ಯಂತ ಮೆರವಣಿಗೆ ಹೊರಡಲು ಸಿದ್ಧರಾಗಿದ್ದಾರೆ. ಉಪಾಧ್ಯಕ್ಷರಿಗೆ ಅಧ್ಯಕ್ಷರು ಸಾಥ್ ಕೊಟ್ಟಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಚಿಕ್ಕಣ್ಣನಿಗೆ ಜೋಡಿಯಾಗಿ ಕಿರುತೆರೆ ಸುಂದ್ರಿ ಮಲೈಕಾ ನಟಿಸಿದ್ದು, ಈ ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ಅಧ್ಯಕ್ಷ ಚಿತ್ರದಲ್ಲಿದ್ದ ಕರಿಸುಬ್ಬು, ರವಿಶಂಕರ್, ಕೀರ್ತಿರಾಜ್ ಇಲ್ಲಿಯೂ ಕಂಟಿನ್ಯೂ ಆಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಉಪಾಧ್ಯಕ್ಷನ ಲವ್ ನಂಬರ್…
ನನ್ನ ಸೆಲೆಬ್ರೆಟೀಸ್ ಪ್ರೀತಿ ಆಸ್ಕರ್ಗಿಂತ ಜಾಸ್ತಿ ಎಂದು ಅಭಿಮಾನಿಗಳ ಪ್ರೀತಿಯನ್ನು ನಟ ದರ್ಶನ್ ಹಾಡಿ ಹೊಗಳಿದರು. ಕಾಟೇರ ಸಕ್ಸಸ್ ಸಂಭ್ರಮದಲ್ಲಿ ಮಾತನಾಡಿದ ಅವರು, ನನ್ನ ಸೆಲೆಬ್ರೆಟೀಸ್ ಹಾಗೂ ಕರ್ನಾಟಕದ ಜನತೆ ಕಾಟೇರ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರೆಸುತ್ತಿದ್ದಾರೆ. ಅವರ ಈ ಪ್ರೀತಿ ನನಗೆ ಆಸ್ಕರ್ ಪ್ರಶಸ್ತಿಗಿಂತ ಜಾಸ್ತಿ ಎಂದು ಹೊಗಳಿದರು. ನಾನು ಒಬ್ಬ ಕಲಾವಿದ ಸರ್.. ನನಗೆ ಅವಾರ್ಡ್ ಗಿವಾರ್ಡ್ ಗೊತ್ತಿಲ್ಲ. ನ್ಯಾಷಿನಲ್ ಅವಾರ್ಡ್ ಪಡೆಯಬೇಕು ಅಂತ ಸಿನಿಮಾ ಮಾಡುತ್ತಿಲ್ಲ. ನಿರ್ದೇಶಕರು ಒಂದು ಪಾತ್ರದ ಬಗ್ಗೆ ಕನಸು ಕಂಡಿರುತ್ತಾನೆ. ಅವರ ನಿರೀಕ್ಷೆ ಹಾಗೂ ಬೇಡಿಕೆಗೆ ತಕ್ಕಂತೆ ನಾನು ನಟಿಸುತ್ತೇನೆ ಎನ್ನುವ ಮೂಲಕ ಪ್ರಶಸ್ತಿಗೋಸ್ಕರ ನಾನು ಸಿನಿಮಾ ಮಾಡಲ್ಲ ಎಂದು ಪುನರುಚ್ಚರಿಸಿದರು. ಕಥೆ ಕೇಳುವಾಗ ಅಭಿನಯಕ್ಕೆ ತುಂಬಾ ಜಾಗ ಇದೆ ಅನಿಸ್ತು. ಖುಷಿ ಆಗುತ್ತದೆ. ನಾನು ಸಿನಿಮಾ ಮಾಡುವಾಗ ಮೂರು ರೀತಿ ಯೋಚನೆ ಮಾಡುತ್ತೇನೆ. ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು. ಕನ್ನಡ ಭಾಷೆಗೆ ಅವಮಾನವಾಗುವಂತೆ ಇರಬಾರದು. ಅನ್ನದಾತರಿಗೆ ನಷ್ಟ ಆಗಬಾರದು ಎಂದು ಕಾಟೇರ…
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತಷ್ಟು ಉಲ್ಭಣಗೊಂಡಿದೆ. ರಾಜ್ಯದಲ್ಲಿ ಒಟ್ಟು 1,000 ಸಕ್ರಿಯ ಕೊವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ 229 ಪಾಸಿಟಿವ್ ಕೇಸ್ಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಶೇಖಡ 6.49ರಷ್ಟು ಕೊವಿಡ್ ಪಾಸಿಟಿವ್ ರೇಟ್ ವರದಿಯಾಗಿದೆ. https://ainlivenews.com/do-you-know-how-much-the-drink-drive-case-is-for-those-who-have-postponed-driving-for-the-new-year/ ಕಳೆದ 24 ಗಂಟೆಯಲ್ಲಿ 3,527 ಟೆಸ್ಟ್ಗಳನ್ನು ಮಾಡಲಾಗಿದ್ದು, 2,972 RTCPR ಹಾಗೂ 555 RAT ಟೆಸ್ಟ್ಗಳನ್ನ ಮಾಡಲಾಗಿದೆ. ಬೆಂಗಳೂರಿನಲ್ಲೇ ಅತಿಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 517 ಕೇಸ್ ಬೆಂಗಳೂರಿನಲ್ಲಿ ಇಲ್ಲಿಯವರೆಗೂ 517 ಕೇಸ್ಗಳು ವರದಿಯಾಗಿವೆ. ಒಟ್ಟು 1000 ಸಕ್ರಿಯ ಪ್ರಕರಣಗಳಲ್ಲಿ 943 ಕೇಸ್ಗಳಲ್ಲಿ ಹೋಮ್ ಐಸೋಲೇಷನ್ನಲ್ಲಿ ಇರಲು ಸೂಚನೆ ನೀಡಲಾಗಿದೆ. 57 ಕೇಸ್ಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ ಐಸಿಯುನಲ್ಲಿ 22 ಕೇಸ್ಗಳಿಗೆ ಚಿಕಿತ್ಸೆ ನೀಡಲಾಗಿದೆ.
ಬೆಂಗಳೂರು: ಹೊಸ ವರ್ಷದ ಮೊದಲ ದಿನವೇ ಬಿಎಂಟಿಸಿಗೆ 4 ಕೋಟಿ 37 ಲಕ್ಷದ 70 ಸಾವಿರ ಆದಾಯ ಬಂದಿದೆ. ವರ್ಷದ ಮೊದಲ ದಿನವಾದ ಸೋಮವಾರ ಬಿಎಂಟಿಸಿಯಲ್ಲಿ 27 ಲಕ್ಷದ 9 ಸಾವಿರದ 659 ಮಂದಿ ಪ್ರಯಾಣಿಕರು ಸಂಚರಿಸಿದ್ದಾರೆ. ಹೊಸ ವರ್ಷದ ಆಚರಣೆಯಲ್ಲಿ ಭಾಗಿಯಾಗಿದ್ದವರಿಗೆ ಬಿಎಂಟಿಸಿ ಹೆಚ್ಚುವರಿ ಬಸ್ ಓಡಿಸಿತ್ತು. ನ್ಯೂ ಇಯರ್ ವೆಲ್ಕಮ್ಗೆ ಬೆಂಗಳೂರಿನ ವಿವಿಧೆಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರಯಾಣಿಕರ ಅನುಕೂಲಕ್ಕೆ ಮಧ್ಯರಾತ್ರಿ 2 ಗಂಟೆವರೆಗೂ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆ ಇತ್ತು. https://ainlivenews.com/a-woman-jumped-onto-the-metro-track-to-pick-up-a-fallen-mobile-phone/ ನಗರದ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಇಂದಿರಾನಗರ, ಕೋರಮಂಗಲ, ಶಾಂತಿನಗರ, ಯಲಹಂಕ ಸೇರಿ ಹಲವು ನಿಲ್ದಾಣದಿಂದ ಬಸ್ ಸೇವೆಯನ್ನು ಬಿಎಂಟಿಸಿ ಕಲ್ಪಿಸಿತ್ತು. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಬಸ್ಗಳ ಸೇವೆ ನಿಯೋಜಿಸಿದ ಪರಿಣಾಮ ಬಿಎಂಟಿಸಿ ಒಂದೇ ದಿನದಲ್ಲಿ4.37 ಕೋಟಿ ರೂ.ಆದಾಯಗಳಿಸಿದೆ.
ಬಳ್ಳಾರಿ:- ನ್ಯಾಯ ಬೆಲೆ ಅಂಗಡಿ ಮಾಲೀಕರಿಂದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಯನ್ನು ಜನವರಿ 16 ರಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಇಂದಿನ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ನ್ಯಾಯಬೆಲೆ ಅಂಗಡಿ ಮಾಲೀಕರು ಸಂಘದ ರಾಜ್ಯ ಕಾರ್ಯದರ್ಶಿಗಳಾದ ಮೀನಳ್ಳಿ ತಾಯಣ್ಣ ಅವರು ತಿಳಿಸಿದ್ದಾರೆ. ನ್ಯಾಯಬೆಲೆ ಅಂಗಡಿಗಳ ಮಾಲೀಕರಿಂದ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬೃಹತ್ ಪ್ರತಿಭಟನೆಯನ್ನು ಮಾಡಲಾಗುವುದು. ಮುಖ್ಯವಾಗಿ ಕರ್ನಾಟಕದಲ್ಲಿ ಈಗಿರುವ ಡೀಲರ್ಗಳ ಕಮೀಷನ್ ಪ್ರತಿ ಕ್ವಿಂಟಲ್ 124 ರೂ.ಇದೆ.ಆದರೆ ಆದೇ ಪಕ್ಕದ ರಾಜ್ಯಗಳಾದ ಆಂಧ್ರ ಪದ್ರೇಶ, ಗೋವಾ,ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಡೀಲರ್ ಕಮೀಷನ್ ಸುಮಾರು 320 ರೂ.ಗಳಿಗಿಂತ ಹೆಚ್ಚಿದೆ. ಆದರೆ ನಮ್ಮ ಕರ್ನಾಟಕದಲ್ಲಿ ಬಹಳ ಕಡಿಮೆ ಇದೆ, ಅಷ್ಟೇ ಅಲ್ಲದೇ ಈ ಕಮಿಷನ್ ಸಹ ಪ್ರತಿ ತಿಂಗಳು ಬರುತ್ತಿಲ್ಲ.ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಜೀವನ ನಡೆಸುವ ದುಸ್ಥಿತಿಯಲ್ಲಿ ಡೀಲರ್ಸ್ ಗಳ ಪರಿಸ್ಥಿತಿ ಇದೆ.ಹೀಗೆ ಇನ್ನು ಹತ್ತು ಹಲವು ಸಮಸ್ಯೆಗಳಿಂದ ಡೀಲರ್ಸ್ ಗಳು ಬಳಲುತ್ತಿದ್ದಾರೆ.ಈ ಎಲ್ಲಾ ವಿಷಯದ ಕುರಿತು…
ಕೆಆರ್ ಪುರ:- ನಗರದ ಹೊರವಲಯದ ಕೆ.ಆರ್ ಪುರ ಕ್ಷೇತ್ರದ ಗೆದ್ದಲಹಳ್ಳಿಯಲ್ಲಿರುವ ಪ್ರೇಸ್ಟೀಜ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು. ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿಗಳ ಸಂರಕ್ಷಣೆ, ಹಸಿರು ಯೋಜನೆ , ಆಹಾರ ಪದ್ದತಿ, ಆಧುನಿಕ ಮನುಷ್ಯರ ಜೀವನ ಶೈಲಿ, ಯಂತ್ರಗಳ ಬಳಕೆ, ಸೋಲಾರ್ ವಿದ್ಯುತ್ ತಯಾರಿಕೆ, ಬಯೋ ಗ್ಯಾಸ್ ನಿರ್ವಹಣೆ, ಹನಿ ನೀರಾವರಿ ಬಳಕೆ, ಟೆರೇಸ್ ಗಾರ್ಡನ್, ಟ್ರಾಫಿಕ್ ಸಿಗ್ನಲ್ ನಿರ್ವಹಣೆ, ನೀರಿನ ಮರುಬಳಕೆ ಇನ್ನೂ ಮುಂತಾದ ಮಾದರಿಗಳನ್ನು ತಯಾರಿಸಿ ಅವುಗಳ ಬಗ್ಗೆ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ಮಕ್ಕಳೇ ತಯಾರಿಸಿದ ವಿಜ್ಞಾನ ವಸ್ತು ಪ್ರದರ್ಶನವನ್ನ ಉದ್ಘಾಟನೆ ಮಾಡಿ ಮಾತನಾಡಿದ ಪ್ರೇಸ್ಟೀಜ್ ಇಂಟರ್ ನ್ಯಾಶನಲ್ ಶಾಲೆ ಸಂಸ್ಥಾಪಕ ಆಂಜಿನಪ್ಪನವರು, ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಪಠ್ಯದ ಜತೆಗೆ ಕೃಷಿ, ವಿಜ್ಞಾನದಂಥ ಚಟುವಟಿಕೆಗಳಲ್ಲಿ ತೊಡಗಿಸಿ,…
ಬೆಂಗಳೂರು:- ನಗರದ ಹೊರವಲಯ ನೆಲಮಂಗಲ ತಾಲ್ಲೂಕಿಗೆ 8ತಿಂಗಳ ಹಿಂದೆ ವರ್ಗಾವಣೆಯಾಗಿ ಬಂದಿದ್ದ ತಹಸೀಲ್ದಾರ್ ಅರುಂಧತಿ ಅವರು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಹಾಗೂ ತಾಲ್ಲೂಕು ಆಡಳಿತ ಜನರಿಂದ ರೈತರಿಂದ ದೂರ ಉಳಿದಿರುವ ಬಗ್ಗೆ ಜನರಿಗೆ ಕೆಲಸ ಮಾಡದಿರುವುದು , ಲಂಚದ ಆರೋಪ, ಅರ್ಜಿಗಳಿಗೆ ಸ್ಪಂದನೆ ನೀಡದಿರುವುದು, ಮಾಹಿತಿ ನೀಡದೇ ನಿರ್ಲಕ್ಷ್ಯ ಸೇರಿದಂತೆ ಅನೇಕ ಆರೋಪಗಳು ಕೇಳಿ ಬಂದು ಹಲವು ರೈತಪರ ಸಂಘಟನೆಗಳ ಆಕ್ರೋಶಕ್ಕೆ ತಹಸೀಲ್ದಾರ್ ಅರುಂಧತಿ ಗುರಿಯಾಗಿದ್ರು. ಇನ್ನೂ ತಹಸೀಲ್ದಾರ್ ಅರುಂಧತಿ ವಿರುದ್ಧ ರೈತ ಸಂಘಟನೆಗಳು ಪ್ರತಿಭಟನೆ ಕೂಡ ಮಾಡಿದ್ರು ಈ ಬಗ್ಗೆ ನೆಲಮಂಗಲ ಶಾಸಕ ಎನ್ ಶ್ರೀನಿವಾಸ್ ರವರು ರಾಜ್ಯ ಸರ್ಕಾರದ ಗಮನಸೆಳೆದಿದ್ದು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಕಂದಾಯ ಇಲಾಖೆ ನೆಲಮಂಗಲ ತಹಸೀಲ್ದಾರ್ ಅರುಂಧತಿಯವರನ್ನು ಅಮಾನತ್ತು ಗೊಳಿಸಿ BMRDA ಗ್ರೇಡ್ 2 ತಹಸೀಲ್ದಾರ್ ಅಮೃತ್ ಆತ್ರೆಶ್ ರವರನ್ನು ನೆಲಮಂಗಲ ತಹಸೀಲ್ದಾರ್ ಆಗಿ ನೇಮಕಗೊಳಿಸಿ ಆದೇಶ ಮಾಡಿದೆ. ಇನ್ನೂ ನೆಲಮಂಗಲ ತಹಸೀಲ್ದಾರ್ ಅರುಂಧತಿ ಅಮಾನತ್ತು ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು…
ಬಿಗ್ ಬಾಸ್ ಮನೆಯ ಆಟ ಇದೀಗ 85 ದಿನಗಳನ್ನ ಪೂರೈಸಿದೆ. ಈ ವಾರಾಂತ್ಯದ ಎಪಿಸೋಡ್ನಲ್ಲಿ ಯಾರು ಟಾಪ್ 3ರಲ್ಲಿ ಇರುತ್ತಾರೆ ಎಂದು ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡಿದ್ದರು. ಆಗ ಮೈಕಲ್ (Michael Ajay) ಅವರು ಟಾಪ್ 3ರಲ್ಲಿ ಸಂಗೀತಾ ಇರುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದರು. ಈ ವೇಳೆ, ಈ ಸೀಸನ್ನಲ್ಲಿ ಹೆಣ್ಣು ಮಕ್ಕಳನ್ನು ಫುಶ್ ಮಾಡಲಾಗ್ತಿದೆ ಎಂಬ ಅಭಿಪ್ರಾಯವನ್ನು ಮೈಕಲ್ ಅಜಯ್ ಹೊರಹಾಕಿದ್ದರು. ಇದಕ್ಕೆ ಸುದೀಪ್ (Sudeep) ಕ್ಲ್ಯಾರಿಟಿ ನೀಡಿದ್ದಾರೆ. ಕಿಚ್ಚನ ಮುಂದೆಯೇ ಹೆಣ್ಣು ಮಕ್ಕಳನ್ನು (Female Contestants) ಫುಶ್ ಮಾಡಲಾಗುತ್ತಿದೆ ಎಂದು ಮೈಕಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಿಯಾಲಿಟಿ ಶೋಗೆ ಬೇಕಾದ ಗುಣ ಸಂಗೀತಾ ಅವರಿಗೆ ಇದೆ. ಸಂಗೀತಾ ತುಂಬ ಜೋರಾದ ಧ್ವನಿಯಿದ್ದು, ಅಭಿಪ್ರಾಯವನ್ನು ಹೇಳುತ್ತಾರೆ. ಕೆಲವೊಂದು ಮೂಮೆಂಟ್ಸ್ಗಳನ್ನ ಸೃಷ್ಟಿ ಮಾಡುತ್ತಾಳೆ. ಅದು ಅದೃಷ್ಟವೇ? ಅಥವಾ ಪ್ರತಿಭೆಯೇ ಎಂದು ನನಗೆ ಗೊತ್ತಿಲ್ಲ. ತುಕಾಲಿ ಸಂತು ಹೇಳಿದ ಪ್ರಕಾರ, ಈ ಸೀಸನ್ನಲ್ಲಿ ಹೆಚ್ಚು ಒತ್ತು ಮಹಿಳೆಯರಿಗಿದೆ ಅಂತ ಅನಿಸುತ್ತದೆ ಎಂದು ಮೈಕಲ್…
ಕೊಪ್ಪಳ:- ನಾವು ದ್ವೇಷದ ರಾಜಕಾರಣ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ನ್ಯಾಯಾಲಯದ ನಿರ್ದೇಶನದ ಅನ್ವಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಮ್ಮ ಸರ್ಕಾರ ನಿರಪರಾಧಿಗಳನ್ನು ಬಂಧಿಸುವ ಕೆಲಸ ಯಾವತ್ತೂ ಮಾಡುವುದಿಲ್ಲ ಎಂದು ಹೇಳಿದರು. ರಾಮಮಂದಿರ ಉದ್ಘಾಟನೆ ದಿನ ಸರ್ಕಾರಿ ರಜೆಗೆ ಬಿಜೆಪಿ ಆಗ್ರಹ ಮಾಡುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ರಜೆ ಬಗ್ಗೆ ನನಗೆ ಗೊತ್ತಿಲ್ಲ. ಕೇಂದ್ರ ಸರ್ಕಾರ ಕಾರ್ಯಕ್ರಮ ಮಾಡ್ತಿರೋದು ಕೇಂದ್ರವೇ ರಜೆ ನೀಡಲಿ ಎಂದು ಹೇಳಿದರು. ರಾಮ ಭಕ್ತರಿಗೆ ಮಾತ್ರ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಎನ್ನುವ ಕೆಲ ಅರ್ಚಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಯಾರಿಗೆ ಆಹ್ವಾನ ಕೊಟ್ಟಿದ್ದಾರೊ, ಯಾರಿಗೆ ಬಿಟ್ಟಿದ್ದಾರೊ ನನಗೆ ಗೊತ್ತಿಲ್ಲ. ಅಯೋಧ್ಯೆಗೆ ಯಾರು ಹೋಗುತ್ತಾರೊ ಹೋಗಲಿ, ಯಾರು ಬಿಡುತ್ತಾರೊ ಬಿಡಲಿ ಎಂದರು.