ಬಳ್ಳಾರಿ:- ಇತ್ತೀಚಿನ ದಿನಗಳಲ್ಲಿ ಪ್ರೀತಿ,ಪ್ರೇಮ ಎನ್ನುವುದು ಈಗೀನ ಯುವ ಜನರೇಷನ್’ಗೆ ಸಾಮಾನ್ಯವಾಗಿದೆ. ಆದರೆ ಗಣಿಜಿಲ್ಲೆ ಬಳ್ಳಾರಿಯಲ್ಲಿ ಪೋಷಕರ ವಿರೋಧದ ನಡುವೆಯೂ ಇಬ್ಬರು ಪ್ರೇಮಿಗಳು ಕಾರಿನಲ್ಲಿ ಸಿನಿಮೀಯ ಮಾದರಿಯಲ್ಲಿ ಮದುವೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಷ್ಟಕ್ಕೂ ಈ ಲವ್ ಬರ್ಡ್ಸ್ ಪ್ರೇಮ ಕಥೆ ಏನ್ ಅಂತೀರಾ, ನೀವೇ ನೋಡಿ… ಆಗಾಗೆ ತೆಕ್ಕಲಕೋಟೆಯ ಸೋದರ ಮಾವನ ಮನೆಗೆ ರಜೆ ದಿನಗಳಲ್ಲಿ ಬರುತ್ತಿದ್ದಾ ಅಮೃತ, ಮಾವನ ಮನೆಯಲ್ಲಿ ಹಲವಾರು ದಿನಗಳು ಇರುತ್ತಿದ್ದಳು. 2017 ರಲ್ಲಿ ಯಾವುದೋ ಕಾರ್ಯಕ್ರಮದಲ್ಲಿ ಅಧ್ಯಾವಾಗ ಶಿವಪ್ರಸಾದ್ ಎನ್ನು ಯುವಕ ಆ ಹುಡಿಗಿಯನ್ನು ನೋಡಿದ್ದಾನೋ, ಆಗ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಆಗಾ ಪ್ರಾರಂಭವಾದ ಪ್ರೀತಿ ಮುಂದುವರೆದು ಮದುವೆ ಮಾಡಿಕೊಳ್ಳವ ಹಂತಕ್ಕೆ ಬಂದು ತಲುಪಿದೆ. ಈ ಕುರಿತು ಇಬ್ಬರ ಮನೆಯಲ್ಲಿ ವಿಷಯ ಗೊತ್ತಾದ ಕೂಡಲೇ ಅಮೃತಳನ್ನು ಅವಳ ಸ್ವಂತ ಊರಾದ ಕೊಪ್ಪಳ ನಗರದ ಭಾಗ್ಯನಗರಕ್ಕೆ ಕಳಿಸಿದ್ದಾರೆ. ಈ ಬೆಳವಣಿಗೆಯಿಂದ ಧೃತಿಗೆಟ್ಟ ಇಬ್ಬರು ಪ್ರೇಮಿಗಳು ಮನೆಯಿಂದ ಹೊರ ಬಂದು ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಸಿನಿಮೀಯಾ ಮಾದರಿಯಲ್ಲಿ…
Author: AIN Author
ಗದಗ:- ಮೂರ್ನಾಲ್ಕು ದಿವಸಗಳಿಂದ ಪಹಣಿ ಪತ್ರ ವಿತರಣೆಯಾಗದ ಹಿನ್ನೆಲೆ, ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ ಘಟನೆ ಶಿರಹಟ್ಟಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಜರುಗಿದೆ. ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಅಂತ ಆರೋಪ ಮಾಡಿದ್ದಾರೆ. ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿ ಸ್ಥಳದಲ್ಲಿ ಇರುವದಿಲ್ಲ. ದಿನನಿತ್ಯ ಕೆಲಸ ಕಾರ್ಯ ಬಿಟ್ಟು ಕಚೇರಿಗೆ ಅಲೆದಾಟ ನಡೆಸುವದಾಗಿದೆ. ತಾಂತ್ರಿಕ ಸಮಸ್ಯೆ ಇದೆ ಎಂದು ಹೇಳಿ ಅಧಿಕಾರಿವರ್ಗ ಜಾರಿಗೊಳ್ಳುತ್ತಿದೆ ಎಂದು ಅಧಿಕಾರಿಗಳನ್ನ ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ.
ಚಾಮರಾಜನಗರ:-ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಪ್ರಸಿದ್ದ ದೇವಾಲಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರತಿನಿತ್ಯ ಒಂಟಿ ಸಲಗ ದೇವರ ದರ್ಶನ ಪಡೆಯುತ್ತಿದೆ. ಕರ್ನಾಟಕದ ಊಟಿ ಎಂದೇ ಖ್ಯಾತಿ ಪಡೆದಿರುವ ಹಿಮವದ್ ಗೋಪಾಲಸ್ವಾಮಿಬೆಟ್ಟದಲ್ಲಿ 4 ವರ್ಷದಿಂದ ಒಂಟಿ ಸಲಗ ಪ್ರತಿನಿತ್ಯ ಕಾಣಿಸಿಕೊಂಡಿದೆ. ಭಾರಿ ಗಾತ್ರದ ಕೊಂಬನ್ನು ಒಂದಿರುವ ಕಾಡಾನೆ ಇದೀಗ ಗೋಪಾಲಸ್ಚಾಮಿ ಭಕ್ತ ಎಂದೇ ಖ್ಯಾತಿ ಪಡೆದಿದೆ. ಸಂಜೆ 4 ಗಂಟೆಯಾದರೆ ಸಾಕು ದೇವಲಯಕ್ಕೆ ಆಗಮಿಸಿ ದೇವಾಲಯದ ಸುತ್ತ ಸಂಜೆ ಹಾಗೂ ಮುಂಜಾನೆ ಪ್ರದಕ್ಷಿಣೆ ಹಾಕುತ್ತದೆ. ಒಂಟಿ ಸಲಗ ನೋಡಲು ಭಕ್ತರು ಓಡೋಡಿ ಬಂದಿದ್ದಾರೆ. ಸೆಲ್ಪಿ ಕ್ಲಿಕ್ಕಿಸಿ ಒಂಟಿ ಸಲಗದೊಂದಿಗೆ ಪ್ರವಾಸಿಗರು ಫೋಸ್ ನೀಡಿದ್ದಾರೆ. ಸುರಕ್ಷತೆ ಮುಖ್ಯ ಎಂಬುದು ಭಕ್ತರು ಆಗ್ರಹಿಸಿದ್ದಾರೆ.
ಚಾಮರಾಜನಗರ:- ಕೇರಳದ ಯುವಕರಿಂದ ಬಾಲಕಿ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ. ಕಾರಿನ ಬಳಿ ಬಿಕ್ಷೆ ಬೇಡಲು ಬಂದ ಅಪ್ರಾಪ್ತ ಹುಡುಗಿಯ ಅಪಹರಣ ಮಾಡಿ ರಾಜ್ಯದ ಗಡಿಯನ್ನು ದಾಟಿ ಎಸ್ಕೇಪ್ ಆಗುವಾಗ ಕಾರು ಚಾಲಕನ ಅಚಾತುರ್ಯದಿಂದ ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಪಘಾತದ ವಿಚಾರಕ್ಕೆ ಯುವಕರನ್ನು ತರಾಟೆಗೆ ತೆಗೆದುಕೊಂಡಾಗ ಕಾರಿನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಬಾಯಿಗೆ ಬಟ್ಟೆ ತುರುಕಿ ಕೂಡಿ ಹಾಕಿರುವುದು ಕಂಡುಬಂದಿದೆ. ಕೂಡಲೇ, ಗ್ರಾಮದ ಯುವಕರು ಹಾಗೂ ಹಿರಿಯರುಯ ಸೇರಿಕೊಂಡು ಯುವಕರನ್ನು ಕೆಳಗಿಳಿಸಿ ಆ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಅಪಹರಣ ಮಾಡುತ್ತಿದ್ದವರಿಗೆ ಗೂಸಾ ಕೊಟ್ಟಿದ್ದಾರೆ. ಇನ್ನು ಕಾರಿನೊಳಗೆ ಒದ್ದಾಡುತ್ತಾ ನರಳುತ್ತಿದ್ದ ಬಾಲಕಿಯನ್ನು ರಕ್ಷಣೆ ಮಾಡಿ ವಿಚಾರಿಸಿದಾಗ ತಾನು ಕೊಳ್ಳೇಗಾಲ ಬಸ್ ನಿಲ್ದಾಣದ ಬಳಿ ಭಿಕ್ಷೆ ಬೇಡುವಾಗ ಕಾರಿನ ಬಳಿ ಭಿಕ್ಷೆ ಬೇಡಲು ಹೋಗಿದ್ದೆ. ಆಗ, ಇವರು ತನ್ನನ್ನು ಕಾರಿನೊಳಗೆ ಎಳೆದುಕೊಂಡು ಬಾಯಿಗೆ ಬಟ್ಟೆ ತುರುಕಿ ಕರೆದೊಯ್ಯುತ್ತಿದ್ದಾರೆ. ನನ್ನನ್ನು ತರಕ್ಷಣೆ ಮಾಡಿ ಎಂದು ಕೇಳಿಕೊಂಡು ಕಣ್ಣೀರಿಟ್ಟಿದ್ದಾಳೆ.…
ವಿಜಯಪುರ:- ಹೆಸರಲ್ಲಿ ರಾಮ ಅಂತಿದ್ದರೆ ಸಾಲದು ಗುಣ ಇರಬೇಕಲ್ಲವೆ!? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿ ಮುಖಂಡ ಸಿಟಿ ರವಿ ನೀಡಿರುವ ಹೇಳಿಕೆ ವಿಚಾರವಾಗಿ ಸಚಿವ ಎಂಬಿ ಪಾಟೀಲ್ ಅವರು ತಿರುಗೇಟು ನೀಡಿದ್ದಾರೆ ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಎರಡನೇ ಬಾರಿ ಸಿಎಂ ಆಗಿದ್ದಾರೆ. ಜನ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಸಿಟಿ ರವಿ ಅವರನ್ನು ಮನೆಗೆ ಕಳುಹಿಸಿದ್ದಾರೆ. ಜನಪರ ಯೋಜನೆ ಕೊಟ್ಟಿದ್ದಾರೆ, ನುಡಿದಂತೆ ನಡೆದಿದ್ದಾರೆ. ಇನ್ನು ಏನು ಬೇಕಂತೆ ಎಂದು ಪ್ರಶ್ನಿಸಿದರು. ಸಿಟಿ ರವಿ ಐದು ವರ್ಷ ಸರ್ಕಾರ ಇತ್ತು. ಏನೂ ಮಾಡಲಿಲ್ಲ. ಬದಲಾಗಿ ಬಜೆಟ್ ಗಿಂತ ಹೆಚ್ಚು ಖರ್ಚು ಮಾಡಿ ಲಕ್ಷಾಂತರ ಕೋಟಿ ಹೊರೆಯಿಟ್ಟು ದಿವಾಳಿ ಎಬ್ಬಿಸಿದ್ದರು. ಬಜೆಟ್ ಕಿಂತ ಎಲ್ಲಾ ಇಲಾಖೆಗಳಲ್ಲಿ 10 ಸಾವಿರ 20 ಸಾವಿರ ಕೋಟಿ ಹೆಚ್ಚಿಗೆ ಖರ್ಚು ಮಾಡಿದ್ದಾರೆ. ಎಲ್ಲ ವ್ಯವಸ್ಥೆ ಹದಗೆಡಿಸಿದ್ದಾರೆ. ಇವರು ರಾಮರಾಜ್ಯ ಮಾಡೋಕೆ ಹೋಗ್ತಾರಾ!? ಎಂದರು. ಇದೇ ರಾಮರಾಜ್ಯದ ಕಲ್ಪನೆಯೇ? ಹಿಗ್ಗಾಮುಗ್ಗಾ. ಲೂಟಿ ಹೊಡೆಯೋದು…
ದಾವಣಗೆರೆ:- ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿವಾಧಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಮ್ಮ ದೇಶ ಹಿಂದು ರಾಷ್ಟ್ರ ಆಗಬಾರದು. ಹಿಂದು ರಾಷ್ಟ್ರವಾದರೆ ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಜಾತ್ಯಾತೀತತೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಇದು ನಾನು ಹೇಳಿದ್ದಲ್ಲ, ಇದನ್ನು ಅಂಬೇಡ್ಕರ್ ಅವರೇ ಹೇಳಿದ್ದಾರೆ ಎಂದರು ನಮ್ಮ ದೇಶ ಹಿಂದು ರಾಷ್ಟ್ರವಾದರೆ ದೇಶಕ್ಕೆ ತೊಂದರೆ. ನಮ್ಮ ದೇಶವು, ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದ ರೀತಿ ಆಗುತ್ತೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಧರ್ಮದ ಹೆಸರಲ್ಲಿ ಸರ್ವಾಧಿಕಾರ ಮಾಡಿ ದಿವಾಳಿಯಾಗಿವೆ. ನಮ್ಮ ದೇಶ ಜಾತ್ಯಾತೀತವಾದ ದೇಶವಾಗಿದ್ದು, ಅದನ್ನು ಬಿಟ್ಟು ಧರ್ಮದ ಹಿಂದೆ ಹೋದರೆ ಅಭಿವೃದ್ಧಿ ಆಗುವುದಿಲ್ಲ’’ ಎಂದು ಹೇಳಿದ್ದಾರೆ. ಇವತ್ತು ಜಾತ್ಯಾತೀತ ತತ್ವಕ್ಕೆ ಅಪಾಯ ಬಂದಿದೆ. ಬಿಜೆಪಿ ಹಾಗೂ ಮಾತೃ ಸಂಸ್ಥೆ ಆರ್ ಎಸ್ ಎಸ್ ಅಪಾಯ ಶುರುವಾಗಿದೆ. ಬಿಜೆಪಿಯ ಅಂಗ ಸಂಘಟನೆಗಳು ಹಿಂದು ದೇಶ ಮಾಡೋಕೆ ಹೊರಟಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟರೆ ನಮ್ಮ ದೇಶ ಕೂಡ…
ಕಂಪ್ಲಿ.ಜ.03: ಪಟ್ಟಣದಿಂದ ಬಳ್ಳಾರಿಗೆ ತೆರಳುವ ಬಸ್ ಗಳ ವ್ಯವಸ್ಥೆ ಇಲ್ಲದೇ ನಿತ್ಯ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ, ಈ ಕುರಿತು ಶಾಸಕರು ಸಂಬಂಧ ಪಟ್ಟಂತಹ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲವೆಂದು ಕಾನೂನು ವಿದ್ಯಾರ್ಥಿಗಳಾದ ಶಾಂತ್ ಕುಮಾರ್, ಗುರು ಅಸಮಧಾನ ವ್ಯಕ್ತ ಪಡಿಸಿದರು. ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ಬೆ.9 ಗಂಟೆಯಾದರೂ ನಿಲ್ದಾಣಾಧಿಕಾರಿಗಳ ಕಚೇರಿಯನ್ನು ಮುಚ್ಚಲಾಗಿತ್ತು, ಈ ಕುರಿತು ಅಧಿಕಾರಿಗಳ ನಿರ್ಲಕ್ಷ್ಯೆವನ್ನು ಖಂಡಿಸಿ ಮಾತನಾಡಿದ ಅವರು ಪಟ್ಟಣದಿಂದ ಬಳ್ಳಾರಿಗೆ ಬೆ.6 ಗಂಟೆ ಹಾಗೂ 6:30ಕ್ಕೆ ಸೇರಿ ಒಟ್ಟು ಎರೆಡು ಬಸ್ ಗಳು ತೆರಳುತ್ತವೆ. ಇದಾದ ಬಳಿಕ 8:30ರವರೆಗೆ ಬಸ್ ನ ವ್ಯವಸ್ಥೆ ಇಲ್ಲ. ಇನ್ನು ಪಟ್ಟಣ, ದೇವಸಮುದ್ರ, ಮೆಟ್ರಿ, ದೇವಲಾಪುರ, ಹಳೇ ದರೋಜಿ, ಹೊಸ ದರೋಜಿ, ತಿಮ್ಮಲಾಪುರ ಗ್ರಾಮಗಳ ಸೇರಿ ನಿತ್ಯ 150 ರಿಂದ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಳ್ಳಾರಿಗೆ ತೆರಳುತ್ತಾರೆ. ಇರುವಂತಹ ಎರೆಡು ಬಸ್ ಗಳು ನಿತ್ಯ ಜನಸಂಗುಳಿಯಿಂದ ತುಂಬಿಕೊಂಡಿರುತ್ತವೆ. ಇದರ ಮಧ್ಯೆಯೂ ತರಗತಿಗಳು ತಪ್ಪುತ್ತವೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು…
ರಾಯಬಾಗ:- ರಾಮ ಜನ್ಮಭೂಮಿ ಹೋರಾಟ ಕಾರ್ಯಕರ್ತನ ಬಂಧನ ಹಿನ್ನೆಲೆ, ಗಣಿನಾಡು ಬಳ್ಳಾರಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಬಳ್ಳಾರಿಯ ರಾಯಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರೊಟೇಸ್ಟ್ ನಡೆಸಲಾಗಿದ್ದು, ಬಂಧನ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಲಾಗಿದ್ದು, ಹಿಂದೂ ವಿರೋಧಿ ಸರ್ಕಾರ, ಸಿಎಂ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.
ರಾಯಬಾಗ:- ರಾಮ ಜನ್ಮಭೂಮಿ ಹೋರಾಟ ಕಾರ್ಯಕರ್ತನ ಬಂಧನ ಹಿನ್ನೆಲೆ, ಗಣಿನಾಡು ಬಳ್ಳಾರಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಬಳ್ಳಾರಿಯ ರಾಯಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರೊಟೇಸ್ಟ್ ನಡೆಸಲಾಗಿದ್ದು, ಬಂಧನ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಲಾಗಿದ್ದು, ಹಿಂದೂ ವಿರೋಧಿ ಸರ್ಕಾರ, ಸಿಎಂ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.
ಗದಗ:- ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಬಿಡುಗಡೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ. ನಗರದ ಮುಳಗುಂದ ನಾಕಾದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆದಿದ್ದು, ರಾಜ್ಯ ಸರ್ಕಾರದ ವಿರುಧ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಬೇಶರತ್ ನಾರಾಯಣಗೌಡರನ್ನ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಗೆ ಮನವಿ ಸಲ್ಲಿಕೆ ಮಾಡಲಾಗಿದೆ.