ಬೆಂಗಳೂರು:- DCM ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಅಂತ್ಯ ಕಾಣಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಕಾಂಗ್ರೆಸ್ ಅಂತ್ಯ ಕಾಣಲಿದೆ. 60 ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನಾವು ಅವರನ್ನು ನಾವು ಸೋಲಿಸಿಯೇ ಸೋಲಿಸುತ್ತೇವೆ. ಎನ್ಡಿಎ ಸೋಲಿಸಿ ರಾಜ್ಯದಲ್ಲಿ 20 ಸೀಟು ಗೆಲ್ಲುತ್ತೇವೆ ಅಹಂನಿಂದ ಹೇಳುತ್ತಿದ್ದಾರೆ. 20 ಸೀಟು ಗೆಲ್ಲೋದು ಎಂದರೆ ಕನಸು ಮಾತ್ರ. ಈ ಬಾರಿ ಪ್ರಧಾನಿ ನರೇಂದ್ರ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಎಲ್ಲರ ನಿರೀಕ್ಷೆ ಮೀರಿ ಜನರು ಎನ್ ಡಿಎ ಮೈತ್ರಿಗೆ ಅಭೂತಪೂರ್ವ ತೀರ್ಪು ಕೊಡುತ್ತಾರೆ. ಎನ್ಡಿಎ ಮೈತ್ರಿಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಮೇಲೆ ಹಿಂದಿನ ಪ್ರಕರಣ ರೀ ಓಪನ್ ಮಾಡಿ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಟೀಕಾಪ್ರಹಾರ ನಡೆಸಿದ್ದಾರೆ
Author: AIN Author
ದೇಶದ ಪ್ರಮುಖ ಯುಪಿಐ ಪ್ಲಾಟ್ಫಾರ್ಮ್ ಫೋನ್ಪೇ ಶೀಘ್ರದಲ್ಲೇ ಸಾಲದ ಸೇವೆಯನ್ನು ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. ಜನವರಿ 2024ರಿಂದ ಈ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ. ಇದಕ್ಕಾಗಿ, ಕಂಪನಿಯು ಸುಮಾರು 5 ಬ್ಯಾಂಕ್ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳೊಂದಿಗೆ (ಎನ್ಬಿಎಫ್ಸಿ) ಮಾತುಕತೆಗಳನ್ನು ಬಹುತೇಕ ಅಂತಿಮಗೊಳಿಸಿದೆ. ವಾಲ್ಮಾರ್ಟ್ ಮಾಲೀಕತ್ವದ ಫೋನ್ಪೇ ವಿತರಕ ಸಂಸ್ಥೆಯಾಗಿ ಸಾಲ ವಿತರಣೆ ಮಾಡಲಿದೆ. ಇದರಿಂದ ಫೋನ್ಪೇ ಯುಪಿಐ ಅಪ್ಲಿಕೇಶನ್ ಬಳಸುವ 50 ಕೋಟಿಗೂ ಹೆಚ್ಚು ಗ್ರಾಹಕರು ಮತ್ತು 3.7 ಕೋಟಿ ಸಣ್ಣ ಮತ್ತು ದೊಡ್ಡ ಉದ್ಯಮಿಗಳಿಗೆ ಪ್ರಯೋಜನವಾಗಲಿದೆ. ಡಿಜಿಟಲ್ ಪಾವತಿ ವಲಯದಲ್ಲಿ ಬಲವಾದ ಹಿಡಿತ ಸಾಧಿಸಿರುವ ಫೋನ್ಪೇ ಈಗ ಹೊಸ ಹೊಸ ವಲಯಗಳನ್ನು ಪ್ರವೇಶಿಸಲು ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಐದು ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳು ಫೋನ್ಪೇ ಪ್ಲಾಟ್ಫಾರ್ಮ್ಗೆ ಬರಲು ಒಪ್ಪಿಕೊಂಡಿವೆ. ಶೀಘ್ರದಲ್ಲೇ ಕಂಪನಿಯು ಈ ಬಗ್ಗೆ ಘೋಷಣೆ ಮಾಡಲಿದೆ. ಸುಮಾರು 6 ತಿಂಗಳಲ್ಲಿ ಫೋನ್ಪೇನಲ್ಲಿ ಜನರಿಗೆ ಹಲವು ರೀತಿಯ ಉತ್ಪನ್ನಗಳು ಲಭ್ಯವಾಗಲಿವೆ. ಪ್ರಸ್ತುತ ಕಂಪನಿಯು ತನ್ನ ಗ್ರಾಹಕರ ಡೇಟಾಬೇಸ್ನಿಂದ ವಿವಿಧ ರೀತಿಯ ಸಾಲಗಳಿಗೆ…
ಇಬ್ಬನಿ, ಚಳಿ ಹೀರಿ ಬೆಳೆಯುವ ಹಿಂಗಾರು ಬೆಳೆಗಳು ಈ ಬಾರಿ ಎರಡೂ ಇಲ್ಲದೆ ಪರಿತಪಿಸುತ್ತಿವೆ. ನವೆಂಬರ್ ತಿಂಗಳು ಮುಗಿಯುತ್ತಿದ್ದರೂ ಇಬ್ಬನಿಯೂ ಇಲ್ಲ, ಚಳಿಯೂ ಇಲ್ಲ, ಹಾಗಾಗಿ ಕಡಲೆ ಸೇರಿ ಇನ್ನಿತರೆ ಹಿಂಗಾರು ಬೆಳೆಗಳಿಗೆ ರೋಗ ನಿರೋಧಕ ಶಕ್ತಿಯಿಲ್ಲದೆ ರೋಗಗಳು ಬಾಧಿಸುವ ಆತಂಕ ರೈತರಿಗೆ ಶುರುವಾಗಿದೆ. ವ್ಯವಸಾಯ ಪ್ರಕೃತಿಯೊಟ್ಟಿಗಿನ ಜೈವಿಕ ಕ್ರಿಯೆ ಎಂಬುದು ಇದಕ್ಕೆ ಸಾಕ್ಷಿ. ಹಿಂಗಾರಲ್ಲಿ ಚಳಿಗಾಲದ ಬೆಳೆಗಳನ್ನು ಬೆಳೆಯುವ ವಾಡಿಕೆಯಿದೆ. ಮಧ್ಯ ಕರ್ನಾಟಕದ ದಾವಣಗೆರೆ ಸೇರಿ ನೆರೆಹೊರೆಯ ಜಿಲ್ಲೆಗಳಲ್ಲಿ ಕಡಲೆ, ಅಲಸಂದೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ, ಹಾವೇರಿ, ಧಾರವಾಡ ಭಾಗದಲ್ಲಿ ಹಿಂಗಾರು ಜೋಳ ಮತ್ತು ಕುಸುಬೆ ಬೆಳೆಯಿದೆ. ಈ ಬೆಳೆಗಳಿಗೆ ಹೆಚ್ಚಿನ ಮಳೆಯ ಅಗತ್ಯವಿಲ್ಲ, ಬದಲಿಗೆ ಇವು ಇಬ್ಬನಿ ಹೀರಿ ಕಪ್ಪು ಭೂಮಿಯಲ್ಲಿ ಬೆಳೆಯುವ ಬೆಳೆಗಳು. ಆದರೀಗ ಇಬ್ಬನಿಯೇ ಇಲ್ಲದೆ ಈ ಬೆಳೆಗಳಿಗೆ ಸಮಸ್ಯೆ ಆಗಿದೆ. ಮಧ್ಯ ಕರ್ನಾಟಕದಲ್ಲಿ ಹೆಚ್ಚು ಕಡಲೆ ಬೆಳೆಯಲಾಗುತ್ತದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ ಕೆಳ ಭಾಗದಲ್ಲಿಈ ಬಾರಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ…
ಬದಲಾದ ಜೀವನಶೈಲಿಯ ಜೊತೆಗೆ, ಮಧುಮೇಹವೂ ಆನುವಂಶಿಕವಾಗಿ ಹರಡುತ್ತಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಆದಾಗ್ಯೂ, ಮಧುಮೇಹವು ಯಾವುದೇ ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಎಲ್ಲರಲ್ಲೂ ಕಂಡುಬರುತ್ತಿದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಅದು ಇತರ ಅಂಗಗಳ ಮೇಲೆ ಪರಿಣಾಮ ಬೀರಬಹುದು. ಆದಾಗ್ಯೂ, ಸಿಹಿತಿಂಡಿಗಳನ್ನು ತಿನ್ನುವುದು ರೋಗವನ್ನು ಹೆಚ್ಚಿಸುತ್ತದೆ ಎಂಬ ವಾದವು ಪ್ರಮುಖವಾಗಿದೆ. ಅಂತಹ ಸಂದರ್ಭದಲ್ಲಿ, ಸಿಹಿತಿಂಡಿಗಳಿಗೆ ಪರ್ಯಾಯವಾಗಿ ಖರ್ಜೂರವನ್ನು ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಖರ್ಜೂರವು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇವುಗಳಲ್ಲಿ ಪೋಷಕಾಂಶಗಳು, ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಎ, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಅಗತ್ಯ ಪೋಷಕಾಂಶಗಳು ಸೇರಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಸೆಲೆನಿಯಂ ಇದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ, ಖರ್ಜೂರವು ಸಿಹಿಯಾಗಿರುತ್ತದೆ ಆದರೆ ಸಕ್ಕರೆ ಕಾಯಿಲೆ ಇರುವವರು ತಿನ್ನಬಹುದು. ಇದು ಶೇಕಡಾ 43 ರಿಂದ 55 ರವರೆಗೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ. ಆದ್ದರಿಂದ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ತ್ವರಿತವಾಗಿ ಏರುವುದಿಲ್ಲ. ಸುಮಾರು 100…
ಬೆಂಗಳೂರು:- ವಿದ್ಯುತ್ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ಕ್ಕೆ ಎಸ್ಕಾಂ ಗಳು ಮನವಿ ಮಾಡಿವೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) 49 ಪೈಸೆ ದರ ಹೆಚ್ಚಿಸುವಂತೆೆ ಕೋರಿದೆ. ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ ಯಯ, , ಕಲಬುರಗಿ ವಿದ್ಯುತ್ ಸರಬರಾಜು ಕಂಪೆನಿ, ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ಕಂಪೆನಿ ಕೂಡ ದರ ಪರಿಷ್ಕರಣೆಗೆ ಮನವಿ ಮಾಡಿದೆ.
ಆಸ್ಟ್ರೀಯಾ: 42 ವರ್ಷದ ವ್ಯಕ್ತಿಯೊಬ್ಬರು ಈ ಸ್ಟೇರ್ವೇ ಟು ಹೆವನ್ ಹತ್ತಲು ಬಂದಿದ್ದರು. ಹೀಗೆ ಇದನ್ನು ಹತ್ತುವ ವೇಳೆ 90 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮೆಟ್ರೋ ನ್ಯೂಸ್ ವರದಿ ಮಾಡಿದೆ. ಇದೇನು ಸ್ವರ್ಗದ ಮೆಟ್ಟಿಲು ಸಾಯುವ ಮೊದಲೇ ಸ್ವರ್ಗನಾ ಎಂದೆಲ್ಲಾ ಯೋಚನೆ ಮಾಡ್ತಿದ್ದೀರಾ? ಇದು ಆಸ್ಟ್ರೀಯಾದ ಪ್ರವಾಸಿ ತಾಣ ಇಲ್ಲಿ ಭಾರಿ ಎತ್ತರದ ಬಂಡೆಗೆ ಕಬ್ಬಿಣದ ಮೆಟ್ಟಿಲುಗಳನ್ನು ಅಳವಡಿಸಲಾಗಿದ್ದು, ಇದಕ್ಕೆ ಸ್ಟೇರ್ವೇ ಟು ಹೆವೆನ್ ಎಂದು ಹೆಸರಿಡಲಾಗಿದೆ. ಜಗತ್ತಿನಾದ್ಯಂತ ಇರುವ ಪ್ರವಾಸಿಗರ ಸೆಳೆಯುವ ಈ ಆಸ್ಟ್ರೀಯಾದ ಸ್ಟೇರ್ವೇ ಟು ಹೆವೆನ್ಗೆ ಜಗತ್ತಿನ್ನೆಲ್ಲೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಈ ತಾಣದ ಸಾಕಷ್ಟು ವೀಡಿಯೋಗಳು ಹರಿದಾಡುತ್ತಿದ್ದು, ಸ್ಟೇರ್ವೇ ಟು ಹೆವೆನ್ ಎಂದೇ ಫೇಮಸ್ ಆಗಿದೆ. ಕಡಿದಾದ ಹಾಗೂ ಭಾರಿ ಎತ್ತರವಿರುವ ಬೆಟ್ಟಕ್ಕೆ ಅಳವಡಿಸಿದ ಏಣಿಯನ್ನು ಹತ್ತುವ ವೇಳೆ ಈತ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. https://ainlivenews.com/indias-richest-person-gautam-adani-has-overtaken-mukesh-ambani-as-indias-richest-person/ ಈತ ಕೆಳಗೆ ಬಿದ್ದ ಕೂಡಲೇ ಅಲ್ಲಿನ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿತ್ತು,…
ಬೆಂಗಳೂರು:- ಬಾರ್ನಲ್ಲಿ ಕಡ್ಲೆ ಬೀಜದ ವಿಚಾರಕ್ಕೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಬೈಲಪ್ಪನಪಾಳ್ಯ ಗ್ರಾಮದ ವಿನಾಯಕ ಬಾರ್ನಲ್ಲಿ ಘಟನೆ ನಡೆದಿದ್ದು, ಕ್ಯಾಷಿಯರ್ ಪುನೀತ್ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದಾರೆ. ಲಕ್ಕೇನಹಳ್ಳಿ ಅಂಜನಮೂರ್ತಿ ಸೇರಿ ಐವರು 10 ರೂ. ಕೊಟ್ಟು 3 ಪ್ಯಾಕೇಟ್ ಕಡ್ಲೆ ಬೀಜ ಕೇಳಿದ್ದರು. 10 ರೂ.ಗೆ ಎರಡು ಪ್ಯಾಕೇಟ್ ಬರುತ್ತೆ ಅಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಕ್ಯಾಷಿಯರ್ ಪುನೀತ್ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು:- ಬೆಂಗಳೂರಿನ ಮಸಾಜ್ ಪಾರ್ಲರ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ 44 ಮಹಿಳೆಯರ ರಕ್ಷಣೆ ಮಾಡಲಾಗಿದ್ದು, 34 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಓಲ್ಡ್ ಮದ್ರಾಸ್ ರಸ್ತೆಯ ನಿರ್ವಾಣ ಸ್ಪಾ ಮೇಲೆ ದಾಳಿ ನಡೆಸಿದ್ದು ಸುಮಾರು 4 ಗಂಟೆ ಕಾಲ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹೊರ ರಾಜ್ಯ, ವಿದೇಶದ ಯುವತಿಯರನ್ನು ಕರೆಸಿ ದಂಧೆ ನಡೆಸಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ದಾಳಿ ವೇಳೆ ಒಟ್ಟು 44 ಮಹಿಳೆಯರ ರಕ್ಷಣೆ ಮಾಡಲಾಗಿದ್ದು 34 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹೊರ ರಾಜ್ಯ, ವಿದೇಶದ ಯುವತಿಯರನ್ನು ಕರೆಸಿ ದಂಧೆ ನಡೆಸಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ದಾಳಿ ವೇಳೆ ಒಟ್ಟು 44 ಮಹಿಳೆಯರ ರಕ್ಷಣೆ ಮಾಡಲಾಗಿದ್ದು 34 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಹುಮಹಡಿ ಕಟ್ಟಡದ 1 ಮತ್ತು…
ಕೋಲ್ಕತ್ತಾ: ಕೋಲ್ಕತ್ತಾದ ಇನ್ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ನಲ್ಲಿ 10 ವರ್ಷದ ಬಾಲಕಿಯಲ್ಲಿ ‘ಚೈನೀಸ್ ನ್ಯುಮೋನಿಯಾ’ ಎಂಬ ಅಪರೂಪದ ಸೋಂಕು ಪತ್ತೆಯಾಗಿದೆ. ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ಬಾಲಕಿಯನ್ನು ಪಾರ್ಕ್ ಸರ್ಕಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ, ವೈದ್ಯರು ಬಾಲಕಿ ಅಡೆನೊವೈರಸ್ ಸೋಂಕಿಗೆ ಒಳಗಾಗಿರಬಹುದು ಎಂದು ಶಂಕಿಸಿದ್ದರು. ಆದರೆ ಸ್ವ್ಯಾಬ್ ಮಾದರಿ ಪರೀಕ್ಷೆಯು ಆಕೆ ಮೈಕೋಪ್ಲಾಸ್ಮಾ ನ್ಯುಮೋನಿಯಾದಿಂದ ಬಳಲುತ್ತಿದ್ದಾಳೆ ಎಂಬುದನ್ನು ದೃಢಪಡಿಸಿದೆ. ಬಾಲಕಿ, ದಕ್ಷಿಣ ಕೋಲ್ಕತ್ತಾದ ಬಾನ್ಸ್ದ್ರೋನಿ ನಿವಾಸಿಯಾಗಿದ್ದಾಳೆ. ಚೈನೀಸ್ ನ್ಯುಮೋನಿಯಾದಲ್ಲಿ ಬ್ಯಾಕ್ಟೀರಿಯಾಗಳು ರೋಗಿಗಳಲ್ಲಿ ತೀವ್ರವಾದ ನ್ಯುಮೋನಿಯಾಕ್ಕೆ ಕಾರಣವಾಗುತ್ತವೆ. ಇದು ಹೆಚ್ಚಿನ ಜ್ವರ, ಕೆಮ್ಮು ಮತ್ತು ಉಸಿರಾಟದ ರೋಗ ಲಕ್ಷಣವನ್ನು ತೋರಿಸುತ್ತದೆ. ಭಾರತದಲ್ಲಿ ಮೈಕೋಪ್ಲಾಸ್ಮಾ ನ್ಯುಮೋನಿಯಾ ಬ್ಯಾಕ್ಟೀರಿಯಾ-ಸೋಂಕಿತ ಪ್ರಕರಣಗಳ ಹರಡುವಿಕೆ ಹೆಚ್ಚಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ಏಮ್ಸ್-ದೆಹಲಿಯ ವೈದ್ಯರು ಕೆಲವು ವಾರಗಳ ಹಿಂದೆ ಕನಿಷ್ಠ ಏಳು ರೋಗಿಗಳಲ್ಲಿ, ಹೆಚ್ಚಾಗಿ ಮಕ್ಕಳಲ್ಲಿ ಈ ಸೋಂಕನ್ನು ಗಮನಿಸಿದ್ದಾರೆ. https://ainlivenews.com/is-looting-your-idea-of-utopia-mb-patil-hits-back-at-ct-ravis-statement/ ‘ಮೈಕೋಪ್ಲಾಸ್ಮಾ ನ್ಯುಮೋನಿಯಾ ಬ್ಯಾಕ್ಟೀರಿಯಾಗಳು ಪ್ರಾಥಮಿಕವಾಗಿ ಉಸಿರಾಟದ ಒಳಪದರಕ್ಕೆ ಹಾನಿಯನ್ನುಂಟು ಮಾಡುತ್ತವೆ.…
ಸೇಬು ಸಿಪ್ಪೆಯಿಂದ ತಯಾರಿಸಿ ಈ ಎಲ್ಲ ರೆಸಿಪಿ ಸೇಬು ಸಿಪ್ಪೆ ಮತ್ತು ದಾಲ್ಚಿನ್ನಿ ಚಹಾ : ಸೇಬು ಹಣ್ಣಿನ ಸಿಪ್ಪೆಯನ್ನು ಬಿಸಾಡುವ ಬದಲು ಟೀ ಮಾಡಿ ಕುಡಿಯಬಹುದು. ಇದಕ್ಕಾಗಿ ಮೊದಲು ಸೇಬು ಹಣ್ಣಿನ ಸಿಪ್ಪೆಯನ್ನು ತೆಗೆಯಿರಿ. ಈಗ ಬಾಣಲೆಗೆ ಸ್ವಲ್ಪ ನೀರು, ಒಂದು ಸಣ್ಣ ದಾಲ್ಚಿನ್ನಿ ಮತ್ತು ಸೇಬು ಹಣ್ಣಿನ ಸಿಪ್ಪೆಯನ್ನು ಹಾಕಿ ಕುದಿಸಿ. ತಯಾರಾದ ಚಹಾವನ್ನು ಸೋಸಿಕೊಳ್ಳಿ ಮತ್ತು ರುಚಿಗೆ ತಕ್ಕಂತೆ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ತೂಕವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಇದು ದೇಹವನ್ನು ಒಳಗಿನಿಂದ ಸ್ವಚ್ಛಗೊಳಿಸುವ ಕೆಲಸ ಮಾಡುತ್ತದೆ.ಸೇಬು ಹಣ್ಣಿನ ಸಿಪ್ಪೆ ಹಾಗೂ ದಾಲ್ಚಿನಿ ಟೀ, ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಸೇಬು ಹಣ್ಣಿನ ಸಿಪ್ಪೆಯ ಸಲಾಡ್ : ಸೇಬು ಹಣ್ಣಿನಂತೆಯೇ ಇದರ ಸಿಪ್ಪೆಯಲ್ಲಿಯೂ ಪೋಷಕಾಂಶಗಳು, ಆ್ಯಂಟಿ ಆಕ್ಸಿಡೆಂಟ್ಗಳು ಮತ್ತು ವಯಸ್ಸಾಗದಂತೆ ತಡೆಯುವ ಗುಣಗಳು ಹೇರಳವಾಗಿವೆ. ಅದಕ್ಕಾಗಿಯೇ ನೀವು ಇದನ್ನು ಸಲಾಡ್ ಆಗಿ ಸೇವಿಸಬಹುದು. ಇದಕ್ಕಾಗಿ, ಸೇಬು ಹಣ್ಣಿನ ಸಿಪ್ಪೆಗಳನ್ನು ಉದ್ದದ್ದವಾಗಿ…