ಸೂರ್ಯೋದಯ: 06:52, ಸೂರ್ಯಾಸ್ತ : 05:53 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗದರ್ಶಿ, ಕೃಷ್ಣ ಪಕ್ಷ, ದಕ್ಷಿಣಾಯಣ, ಹೇಮಂತ ಋತು, ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ಮ.12:42 ನಿಂದ ಮ.2:15 ತನಕ ಅಭಿಜಿತ್ ಮುಹುರ್ತ: ಮ.12:00 ನಿಂದ ಮ.12:45 ತನಕ ಮೇಷ ರಾಶಿ: ಇಂದು ಅಷ್ಟೇನೂ ಆಶಾದಾಯಕವಾಗಿರದು, ಕಷ್ಟಕ್ಕೆ ತಕ್ಕ ಪ್ರತಿಫಲ, ವ್ಯಾಪಾರದಲ್ಲಿ ಉತ್ತಮ ಆದಾಯದೊಂದಿಗೆ ಖರ್ಚು ವೆಚ್ಚಗಳು ಅಧಿಕ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಂದೇಹ, ಉದ್ಯೋಗ ಬದಲಾಯಿಸುವುದು ಸಕಾಲವಲ್ಲ, ಕಲಾವಿದರಿಗೆ ಆರ್ಥಿಕ ಸಮಸ್ಯೆ,ವ್ಯಾಪಾರ ಮಧ್ಯಮ,ಹಣದ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ. ಕೆಲವೊಮ್ಮೆ ಅಪಾಯಕಾರಿ ಪರಿಸ್ಥಿತಿ ಎದುರಿಸುವಿರಿ. ಇವರ ಹಠಾತ್ ನಿರ್ಧಾರಗಳಿಂದಾಗಿ ಎಡವಟ್ಟೇ ಹೆಚ್ಚು. ನೀವು ಆರ್ಥಿಕವಾಗಿ ಅಷ್ಟೇನೂ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವವರಲ್ಲ. ಇವರು ಕ್ಷಣಿಕ ಆಕರ್ಷಣೆಗೆ ಹೆಚ್ಚು ಒಳಗಾಗುತ್ತಾರೆ. ಹೊಸ ಬಟ್ಟೆ, ಕಾರು, ವಸ್ತುಗಳನ್ನು ಖರೀದಿಸುವಲ್ಲಿ ಬೇಗ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ,ಆದರೆ,…
Author: AIN Author
ಪೀಣ್ಯ ದಾಸರಹಳ್ಳಿ: ,ಹಾವನೂರು ಬಡಾವಣೆಯ ಸೌಂದರ್ಯ ಪಿಯು ಕಾಲೇಜ್ ಆವರಣದಲ್ಲಿ ಜೀವ ಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಚಳಿಗಾಲದ ಪ್ರಯುಕ್ತ ಬಡವರಿಗೆ ಕಂಬಳಿ ವಿತರಿಸಲಾಯಿತು. ಬಳಿಕ ಟ್ರಸ್ಟ್ ಅಧ್ಯಕ್ಷ ಜೀವನ್ ಕಿಶೋರ್ ಮಾತನಾಡಿ’ ಪ್ರತಿ ವರ್ಷ ಚಳಿಗಾಲದಲ್ಲಿ ಎಂಟನೇ ಮೈಲಿಯಿಂದ ಮೆಜೆಸ್ಟಿಕ್, ಮಾರ್ಕೆಟ್, ಎಲೆಕ್ಟ್ರಾನಿಕ್ ಸಿಟಿ ವರೆಗೂ ರಾತ್ರಿ ವೇಳೆ ನಿರಾಶ್ರಿತರು, ಅನಾಥರಿಗೆ ರಸ್ತೆ ಬದಿ ಮಲಗಿದವರಿಗೆ ಊಟ, ನೀರು, ಕಂಬಳಿ ವಿತರಿಸುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಾ ಕಡೆ ಹುಡುಕಿದರೂ 10 ರಿಂದ 15 ಜನ ಮಾತ್ರ ನಿರಾಶ್ರಿತರು ಸಿಗುತ್ತಾರೆ. ಈಗ ಅವರೆಲ್ಲ ಅನಾಥಾಶ್ರಮಗಳಿಗೆ ಸೇರಿದ್ದಾರೆ.ಅದಕ್ಕಾಗಿ ಈ ಕ್ಷೇತ್ರದ ಬಡವರನ್ನು ಗುರುತಿಸಿ ಅವರಿಗೆ ಕಂಬಳಿ ವಿತರಿಸುತಿದ್ದೇವೆ’ ಎಂದು ತಿಳಿಸಿದರು. ಭೂಮಿಕಾ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ರಾಜೇಂದ್ರ ಕೊಣ್ಣೂರ, ಮಾತನಾಡಿ’ ಟ್ರಸ್ಟ್ ನ ಎಲ್ಲಾ ಯುವಕರು ವೃತ್ತಿಯಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದು ತಮಗೆ ಬರುವ ಸಂಬಳದಲ್ಲಿ ಬಡವರ ಏಳಿಗೆಗಾಗಿ ವಿನಿಯೋಗಿಸುತ್ತಿರುವುದು ಒಳ್ಳೆಯ ಕಾರ್ಯ’ ಎಂದು ಶ್ಲಾಘನೆ ಮಾಡಿದರು.
ಧಾರವಾಡ:- ನನಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾನಂತೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನಗೆ ಟಿಕೆಟ್ ಕೊಡುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದರು. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಹೀಗಾಗಿ ಅವರಿಗೆ ಲೋಕಸಭಾ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್ನಲ್ಲಿ ಚರ್ಚೆಗಳು ನಡೆದಿವೆ ಎನ್ನುವ ಸುದ್ದಿ ಹರಿದಾಡುತ್ತಿವೆ. ಇದರ ಮಧ್ಯೆ ಇದೀಗ ಸ್ವತಃ ಜಗದೀಶ ಶೆಟ್ಟರ್ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಲೋಕಸಭೆ ತಯಾರಿ ಕುರಿತು ಕಾಂಗ್ರೆಸ್ ಸಭೆಗೂ ಮುಂಚೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆ ಕಾರ್ಯಕರ್ತರನ್ನು ಸೇರಿಸಿ ಮಾರ್ಗದರ್ಶನ ಮಾಡುವ ಸಭೆ ಇದು. ಜ. 10ಕ್ಕೆ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷರು, ಸಿಎಂ ಸಭೆ ನಡೆಸಲಿದ್ದಾರೆ. ಲೋಕಸಭೆ ಚುನಾವಣೆ ಬಗ್ಗೆ ಸಭೆಯಲ್ಲಿ ಚರ್ಚೆ ಆಗಲಿದೆ. ಟಿಕೆಟ್ ಆಕಾಂಕ್ಷಿಗಳು, ಅಭ್ಯರ್ಥಿಗಳ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆ ಆಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು:- ಕರವೇ ಅಧ್ಯಕ್ಷರ ಬಿಡುಗಡೆ ವಿಚಾರದಲ್ಲಿ ಷಡ್ಯಂತ್ರ ನಡೆಯುತ್ತಿವೆ ಎಂದು ನಾರಾಯಣಗೌಡ ಪರ ವಕೀಲ ಕುಮಾರ್ ಆರೋಪ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಕರವೇ ನಾರಾಯಣ ಗೌಡ ಬಿಡುಗಡೆಗೆ ವಿಳಂಬ ಮಾಡಲಾಗುತ್ತಿದೆ. ಬೇಲ್ ಕಾಫಿ ಸಕಾಲಕ್ಕೆ ಜೈಲು ಅಧಿಕಾರಿಗಳ ಕೈ ಸೇರಿದ್ರು ಬಿಡುಗಡೆ ಮಾಡಿಲ್ಲ ಎಂದು ಕರವೇ ನಾರಾಯಣ ಗೌಡ ಪರ ವಕೀಲ ಕುಮಾರ್ ಆರೋಪ ಮಾಡಿದ್ದಾರೆ. ನಾರಾಯಣ ಗೌಡರ ಬಿಡುಗಡೆ ವಿಚಾರದಲ್ಲಿ ಷಡ್ಯಂತ್ರ ನಡೆಯುತ್ತಿದೆ. ಜೈಲು ಅಧಿಕಾರಿಗಳು ಚರ್ಚೆ ಮಾಡುತ್ತಿದ್ದೆವೆ ಎನ್ನುತ್ತಿದ್ದಾರೆ. 6:30 ರ ಸುಮಾರಿಗೆ ಬೇಲ್ ಕಾಪಿ ಜೈಲು ಅಧಿಕಾರಿಗಳ ಕೈ ಸೇರಿದೆ. ಆದರೂ ಜೈಲು ಅಧಿಕಾರಿಗಳು ಬಿಡುಗಡೆಗೆ ಮೀನಾಮೇಷ ಎಣಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಹದಗೇಡುತ್ತದೆ ಎಂಬ ಉದ್ದೇಶವಿರಬಹುದು ರಾತ್ರಿ 10:30ವರೆಗೂ ಬಿಡುಗಡೆಗೆ ಅವಕಾಶವಿದೆ ಎಂದರು. ಇನ್ನೂ ಹಳೆಯ ಕೇಸ್ಗಳಲ್ಲಿ ಕರವೇ ನಾರಾಯಣ ಗೌಡ ಬಂಧಿಸುವ ವಿಚಾರವಾಗಿ ಮಾತನಾಡಿ, ಇಲ್ಲಿಯವರೆಗೆ ಯಾವುದೇ ಠಾಣಾ ಪೊಲೀಸರು ಬಾಡಿ ವಾರಂಟ್ ಪಡೆದಿಲ್ಲ. ಯಾವ ಆಧಾರದ ಮೇಲೆ ಗೌಡರ ಬಂಧನಕ್ಕೆ ತಯಾರಿ…
ಗದಗ:- ಯಶ್ ಕಟೌಟ್ ವೇಳೆ ವಿದ್ಯುತ್ ತಗುಲಿ ಮೂವರು ಯುವಕರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಮ್ಸ್ ಗೆ ನಟ ಯಶ್ ಭೇಟಿ ನೀಡಿದ್ದಾರೆ. ಈ ವೇಳೆ ಇಬ್ಬರು ಗಾಯಾಳುಗಳನ್ನು ಭೇಟಿ ಮಾಡಿ ನಟ ಯಶ್ ಅವರು ಧೈರ್ಯ ಹೇಳಿದ್ದಾರೆ. ಬಳಿಕ ಹುಬ್ಬಳ್ಳಿಯತ್ತ ಯಶ್ ಪ್ರಯಾಣ ಬೆಳೆಸಿದ್ದಾರೆ.
ಗದಗ:- ಕಟೌಟ್ ಹಾಕುವಾಗ ಯುವಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮೃತ ಮೂವರು ಅಭಿಮಾನಿಗಳ ಮನೆಗೆ ಯಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಯಶ್, ಯಾರು ಇದನ್ನು ಇಷ್ಟ ಪಡೊಲ್ಲಾ. ಈ ರೀತಿ ಆಗುತ್ತದೆ ಎಂದೆ ನಾನು ಸರಳವಾಗಿ ಬರ್ತಡೆ ಆಚರಿಸಲು ತಿರ್ಮಾನ ಮಾಡಿದ್ದೇ. ಈಗ ಅದನ್ನೆಲ್ಲಾ ಮಾತನಾಡುವ ಸಮಯವಲ್ಲ ಎಂದರು. ಅವರ ಕುಟುಂಬಕ್ಕೆ ಏನು ಅಗತ್ಯವೋ ಅದನ್ನು ಮಾಡ್ತೇವೆ. ಏನೇ ಪರಿಹಾರ ಕೊಟ್ಟರು ಮಗ ವಾಪಸ್ ಬರ್ತಾನಾ? ನಾನು ಇಲ್ಲಿ ಬಂದಿರುವುದು ಅವರ ತಂದೆ-ತಾಯಿಗಾಗಿ. ಕುಟುಂಬಕ್ಕೆ ಏನು ಅಗತ್ಯವೋ ಅದನ್ನು ಮಾಡ್ತೇನ. ಅಭಿಮಾನ ತೋರಿಸುವುದಾದ್ರೆ ನಿಮ್ಮ ಬದುಕಲ್ಲಿ ಖುಷಿಯಾಗಿರಿ,ನಮ್ಮ ಬಗ್ಗೆ ಯೋಚನೆ ಮಾಡಬೇಡಿ. ನೀವು ಖುಷಿಯಾಗಿರಿ ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಇದೆಲ್ಲಾ ಬಿಟ್ಟುಬಿಡಿ. ಈ ರೀತಿ ಅಭಿಮಾನ ವ್ಯಕ್ತಪಡಿಸಬೇಕೆಂದು ಯಾರು ಇಷ್ಟ ಪಡಲ್ಲ. ನನಗಂತು ಈ ಥರ ಅಭಿಮಾನ ಬೇಡವೇ ಬೇಡಾ. ಬೈಕ್ನಲ್ಲಿ ಚೇಸ್ ಮಾಡಿಕೊಂಡು ಬರುವುದು ಎಲ್ಲಾ ಬೇಡ.…
ಬೆಂಗಳೂರು:- ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜರುಗಿದೆ. ತೇಜಸ್(22) ಎಂಬಾತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತ ತೇಜಸ್ ಮಧ್ಯಾಹ್ನ ಸೋಮವಾರ 12:25ರ ಸುಮಾರಿಗೆ ಉತ್ತರಹಳ್ಳಿ ರಸ್ತೆಯಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ. ಮಂತ್ರಿ ಆಲ್ಫೈನ್ ಅಪಾರ್ಟ್ ಮೆಂಟ್ ಬಳಿ ಸಾಗುತ್ತಿದ್ದ ವೇಳೆ ಮೈಸೂರು ರಸ್ತೆ ಉತ್ತರಹಳ್ಳಿ ಮಾರ್ಗದ ಬಸ್ ಅನ್ನು ಓವರ್ ಟೇಕ್ ಮಾಡಲು ಯತ್ನಿಸಿದಾಗ ಟಚ್ ಆಗಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬಸ್ನ ಬಲ ಹಿಂಭಾಗದ ಚಕ್ರ ತೇಜಸ್ ಮೇಲೆ ಹರಿದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಕೆಂಗೇರಿ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.
ನವದೆಹಲಿ : ಲಕ್ಷದ್ವೀಪವು ನೀಲಿ ಸಮುದ್ರ, ಸುಂದರವಾದ ಕಡಲತೀರಗಳು, ಪ್ರಕಾಶಮಾನವಾದ ಹವಳದ ದಿಬ್ಬಗಳು ಮತ್ತು ದ್ವೀಪ ಜೀವನಶೈಲಿಗೆ ಹೆಸರುವಾಸಿಯಾದ 36 ಹವಳ ದ್ವೀಪಗಳ ಅದ್ಭುತ ಸಂಗ್ರಹವಾಗಿದೆ. ನೀವು ಕೂಡ ನಿಮ್ಮ ರಜಾ ದಿನಗಳನ್ನ ಕಳೆಯಲು ಸುಂದರ ಕಡಲ ತೀರಕ್ಕೆ ಹೋಗುವ ಯೋಜನೆ ಮಾಡಿದ್ರೆ, ಈ ವಿಷಯಗಳನ್ನ ತಿಳಿದಿರಲಿ. 1. ಪರವಾನಗಿಗಳನ್ನ ಪಡೆಯಿರಿ.! ಲಕ್ಷದ್ವೀಪಕ್ಕೆ ಪ್ರವೇಶಿಸಲು ನಿರ್ಬಂಧಗಳಿದ್ದು, ಭಾರತೀಯ ಪ್ರಜೆಗಳು ಸೇರಿದಂತೆ ಎಲ್ಲಾ ಸಂದರ್ಶಕರಿಗೆ ವಿಶೇಷ ಪರವಾನಗಿಗಳ ಅಗತ್ಯವಿದೆ. ಕನಿಷ್ಠ ಮೂರು ತಿಂಗಳ ಮುಂಚಿತವಾಗಿ, ಲಕ್ಷದ್ವೀಪ ಪ್ರವಾಸೋದ್ಯಮ ವೆಟ್ ಮೂಲಕ ನಿಮ್ಮ ಉದ್ದೇಶಿತ ಮಾರ್ಗ ಮತ್ತು ಆದ್ಯತೆಯ ವಸತಿಯ ಬಗ್ಗೆ ಮಾಹಿತಿ ಸೇರಿದಂತೆ ಆನ್ಸೆನ್ ಅರ್ಜಿಯನ್ನ ಸಲ್ಲಿಸಿ. 2. ನಿಮ್ಮ ಋತುವನ್ನು ಆರಿಸಿ.! ಲಕ್ಷದ್ವೀಪವು ವರ್ಷಪೂರ್ತಿ ಉತ್ತಮ ಹವಾಮಾನವನ್ನ ಹೊಂದಿರುತ್ತದೆ, ಜೂನ್’ನಿಂದ ಸೆಪ್ಟೆಂಬರ್’ವರೆಗೆ ನಡೆಯುವ ಮಾನ್ಸೂನ್ ಋತುವಿನಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಅಕ್ಟೋಬರ್’ನಿಂದ ಮಾರ್ಚ್’ವರೆಗೆ ಅತ್ಯಂತ ಜನನಿಬಿಡ ಪ್ರಯಾಣದ ಋತುವಾಗಿದ್ದು, ಸಾಕಷ್ಟು ಸೂರ್ಯನ ಬೆಳಕು ಮತ್ತು ಜಲ ಕ್ರೀಡೆಗಳಿಗೆ ಪ್ರಶಸ್ತವಾಗಿದೆ. ಡಿಸೆಂಬರ್ 10% ಕಾಲೋಚಿತ…
ಬೆಂಗಳೂರು:- ರಾಜ್ಯದಲ್ಲಿ ಕೋವಿಡ್ ಉಪಟಳ ಹೆಚ್ಚಾಗಿದ್ದು, ರಾಜ್ಯದಲ್ಲಿ ಒಟ್ಟು 1222 ಸಕ್ರಿಯ ಕೊವಿಡ್ ಪ್ರಕರಣ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ 279 ಪಾಸಿಟಿವ್ ಕೇಸ್ಗಳು ವರದಿ ಆಗಿದೆ. ಕಳೆದ 24 ಗಂಟೆಯಲ್ಲಿ 235 ಮಂದಿ ಕೋವಿಡ್ ನಿಂದಾ ಗುಣಮುಖವಾಗಿದ್ದು, ಮತ್ತೆ ಮೂರು ಮಂದಿಯನ್ನು ಬಲಿ ಪಡೆದುಕೊಂಡಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 4.38% ಕೊವಿಡ್ ಪಾಸಿಟಿವ್ ರೇಟ್ ವರದಿ ಆಗಿದೆ. ಕಳೆದ 24 ಗಂಟೆಯಲ್ಲಿ 6359 ಟೆಸ್ಟ್ಗಳನ್ನು ಮಾಡಲಾಗಿದ್ದು 5512 RTCPR ಹಾಗೂ 847 RAT ಟೆಸ್ಟ್ಗಳನ್ನ ಮಾಡಲಾಗಿದೆ ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ವರದಿ ಆಗಿದೆ. ಬೆಂಗಳೂರಿನಲ್ಲಿ ಇಲ್ಲಿಯವರೆಗೂ 593 ಸಕ್ರಿಯ ಕೇಸ್ಗಳು ವರದಿ ಆಗಿದೆ. ಒಟ್ಟು 1222 ಸಕ್ರಿಯ ಪ್ರಕರಣಗಳಲ್ಲಿ 1144 ಕೇಸ್ಗಳು ಹೋಮ್ಐಸೋಲೇಷನ್ನಲ್ಲಿ ಇರಲು ಸೂಚನೆ ನೀಡಲಾಗಿದೆ. 78 ಕೇಸ್ಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅದರಲ್ಲಿ 18 ಐಸಿಯು ನಲ್ಲಿ ಕೇಸ್ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 3 ಮಂದಿಗೆ ಐಸಿಯು ವೆಂಟಿಲೇಶನ್ ನಲ್ಲಿ ಚಿಕಿತ್ಸೆ ನೀಡಲಾಗಿದೆ.
ಗದಗ:- ಯಶ್ ಅಭಿಮಾನಿಗಳ ದುರಂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ನಟ ಯಶ್ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆ, ಎಲ್ಲಿ ನೋಡಿದ್ರೂ ಜನವೋ ಜನ ತುಂಬಿ ತುಳುಕುತ್ತಿದೆ. ರಸ್ತೆ, ಕಟ್ಟಡಗಳ ಮೇಲೆ ಜನಸ್ತೋಮ ನೆರೆದ ದೃಶ್ಯ ಸೆರೆಯಾಗಿದೆ.