Author: AIN Author

ಪೀಣ್ಯ ದಾಸರಹಳ್ಳಿ‌ : ಬೆಂಗಳೂರು ಉತ್ತರ ತಾಲ್ಲೂಕಿನ ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪುಷ್ಪಲತಾ ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ಪದ್ಮಾವತಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ. ಡಾ.ಬಿ ಆರ್ ರವಿಕುಮಾರ್ ಸಹಾಯಕ ನಿರ್ದೇಶಕರು ಪಶುಪಾಲನಾ ಇಲಾಖೆ ಘೋಷಣೆ ಮಾಡಿದರು. ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಸಿಎಂ ಎ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಪುಷ್ಪಲತಾ ಮಂಜುನಾಥ ಅವಿರೋಧ ಆಯ್ಕೆಯಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಸುನಿತಾ ಮತ್ತು ಪದ್ಮಾವತಿ ನಾಮಪತ್ರ ಸಲ್ಲಿಸಿದ್ದರು. ಸಾಮಾನ್ಯ ಸಭೆ ಕರೆದು ನಾಮಪತ್ರ ಪರಿಶೀಲನೆ ಮಾಡಲಾಯಿತು. ಆಲೂರು ಗ್ರಾಮ ಪಂಚಾಯಿತಿಯ 27 ಸದಸ್ಯರು ಸಭೆಗೆ ಹಾಜರಿದ್ದರು. ಯಾರೂ ನಾಮಪತ್ರ ವಾಪಸ್‌ ಪಡೆಯದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಇದ್ದುದರಿಂದ ಪುಷ್ಪಲತಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಸಿದ್ದರಿಂದ ಗುಪ್ತ ಮತದಾನ ನಡೆಸಲಾಯಿತು. ಗುಪ್ತ ಮತದಾನದಲ್ಲಿ ಪದ್ಮಾವತಿ16 ಮತಗಳು ಪ್ರತಿ ಸ್ಪರ್ಧಿ 11 ಮತ ಪಡೆದರು. ಹೆಚ್ಚು ಮತ ಪಡೆದ ಪದ್ಮಾವತಿ ಅವರನ್ನು ಉಪಾಧ್ಯಕ್ಷರು ಎಂದು…

Read More

ಬೆಂಗಳೂರು : ಕಾಂಗ್ರೆಸ್‌ʼನವರು  ಜಾಹೀರಾತು‌ ನೀಡುತ್ತಿರುವುದರಿಂದ ಮಾಧ್ಯಮಗಳ ಸಹಕಾರ ಸಿಗುತ್ತಿದೆ ಎಂದು ತಿಳಿದುಕೊಂಡಿದ್ದಾರೆ ಹಾಗಾಗಿ  ಭ್ರಷ್ಟಾಚಾರದಲ್ಲಿ ‌ನಾವೇ ನಂಬರ್‌ 1 ಅಂತ‌ ಜಾಹೀರಾತು ಕೊಡಿ ಎಂದು ಕಾಂಗ್ರೆಸ್​ ನಾಯಕರಿಗೆ ಸಿ.ಟಿ. ರವಿ ಕುಟುಕಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಾಹೀರಾತು‌ ನೀಡುತ್ತಿರುವುದರಿಂದ ಮಾಧ್ಯಮಗಳ ಸಹಕಾರ ಸಿಗುತ್ತಿದೆ. ಐದನೇ‌ ಗ್ಯಾರಂಟಿ ಯುವನಿಧಿ‌ ಕೊಡುತ್ತಿದ್ದೀರಿ ಅಷ್ಟೇ ಎಂದು ಹೇಳಿದ್ದಾರೆ. ಯುವನಿಧಿ ಎಲ್ಲಾ ನಿರುದ್ಯೋಗಿಗಳಿಗಲ್ಲ. ನುಡಿದಂತೆ‌ ನಡೆದಿದ್ದೇವೆ ಅನ್ನೋದು‌ ಈಡೇರಿಲ್ಲ. ಸ್ಟಾಂಪ್‌ ಡ್ಯೂಟಿ,‌ ಅಬಕಾರಿ ತೆರಿಗೆ,‌ ಪೆಟ್ರೋಲ್‌, ಡೀಸೆಲ್‌ ಮೇಲೆ ಏರಿಕೆಯಾಗಿದೆ. ಇನ್ನು ವಿದ್ಯುತ್ ಬಿಲ್‌ ಏರಿಕೆ‌ ಮಾಡಿದ್ದು 7ನೇ ಗ್ಯಾರಂಟಿ ಎಂದು ಚಾಟಿ ಬೀಸಿದ್ದಾರೆ. ನೀವು‌ ಜಾತಿ ಜಾತಿ‌ಗಳ ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದೀರಿ. ‌ಇದು 9ನೇ‌ ಗ್ಯಾರಂಟಿಯಾಗಿದೆ. ಮಾಲೂರು ಶಾಸಕ‌ ಹರಾಜು‌ ಹಾಕಿ‌ 30 ಲಕ್ಷಕ್ಕೆ ಹುದ್ದೆ ಮಾರಿದ್ದಾರೆ‌, ಇದು 10ನೇ ಗ್ಯಾರಂಟಿ. ವರ್ಗಾವಣೆ ಭಾಗ್ಯ 11ನೇ ಗ್ಯಾರಂಟಿ ಎಂದು ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.

Read More

ನವದೆಹಲಿ:- ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಡಿ ರೂಪ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಿತು. ಈ ವೇಳೆ, ಡಿ ರೂಪಾ ಅವರು ಕ್ಷಮೆ ಕೇಳಲೇಬೇಕು ಎಂದು ರೋಹಿಣಿ ಸಿಂಧೂರಿ ಅವರು ಪಟ್ಟು ಹಿಡಿದರು. ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ವಿರುದ್ಧ ಮಾಡಲಾಗಿರುವ ಎಲ್ಲ ಅವಹೇಳನಕಾರಿ ಪೋಸ್ಟ್‌ಗಳನ್ನು ತೆಗೆದು ಹಾಕಬೇಕು. ಇದರಿಂದ ನನ್ನ ಕುಟುಂಬಕ್ಕೆ ಘಾಸಿಯಾಗಿದೆ. ಹಾಗಾಗಿ, ಡಿ ರೂಪಾ ಅವರು ಕ್ಷಮೆಯಾಚಿಸಬೇಕು ಎಂದು ರೋಹಿಣಿ ಸಿಂಧೂರಿ ಪರ ವಕೀಲರು ವಾದ ಮಂಡಿಸಿದ್ದಾರೆ ರೋಹಿಣಿ ಅವರ ವಾದವನ್ನು ತಿರಸ್ಕರಿಸಿದ ಡಿ. ರೂಪಾ ಪರ ವಕೀಲರು, ರೋಹಿಣಿ ಸಿಂಧೂರಿ ಅವರು ರೂಪಾ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ನ್ಯಾಯಾಲಯದ ಗಮನಕ್ಕೆ ತಂದರು. ಡಿ. ರೂಪಾ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೋಹಿಣಿ ಪರ ವಕೀಲರು, ಹೌದು, ಬುದ್ಧಿ ಭ್ರಮಣೆಯಾದವರು ಈ ರೀತಿ ಪೋಸ್ಟ್ ಮಾಡುತ್ತಾರೆಂದು ಹೇಳಿದ್ದೇನೆ. ಹೊರತು ಅವರಿಗೆ ಬುದ್ಧಿ…

Read More

ಬೆಂಗಳೂರು: ನಮ್ಮ ಮೆಟ್ರೋ ಬೆಂಗಳೂರು ನಗರ ಜೀವನಾಡಿ. ನಿತ್ಯ ಲಕ್ಷಾಂತ ಮಂದಿ ಮೆಟ್ರೋ ಹತ್ತಿ ಒಂದು ಕಡೆಯಿಂದ ಮತ್ತೊಂದು ಕಡೆ ‘ಹೋಗ್ತಾರೆ. ಆದ್ರೆ ಇತ್ತೀಚಿಗೆ ಇದೇ ಮೆಟ್ರೋದಲ್ಲಿ ಬ್ಯಾಕ್ ಟು ಬ್ಯಾಕ್ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ಪ್ರಕರಣ ಹೆಚ್ಚಾಗ್ತಿದೆ.ಇದ್ರಿಂದ ಮೆಟ್ರೋ ಹತ್ತೋಕೆ ಮಹಿಳಾ ಪ್ರಯಾಣಿಕರು ಎದುರುತ್ತಿದ್ದಾರೆ. ಆದ್ರೆ ಮಹಿಳಾ ಪ್ರಯಾಣಿಕರಿಗೆ ಸೇಫ್ಟಿ ನೀಡಲು ಇದೀಗ ಮತ್ತೊಂದು ಬೋಗಿಯನ್ನ ಮಹಿಳೆಯರಿಗೆ ಮೀಸಲಿಡಲು ಬಿಎಂಆರ್ಸಿಲ್ ಚಿಂತಿಸಿದೆ. ಬೆಂಗಳೂರು ನಗರದಲ್ಲಿ ಸಂಚಾರ ದಟ್ಟನೆ ನಿಯಂತ್ರಣಕ್ಕೆ ರಾಮಬಾಣವಾಗಿ ಬಂದಿದ್ದೇ ನಮ್ಮ ಮೆಟ್ರೋ. ಮೆಟ್ರೋ ಶುರುವಾದ ಬಳಿಕ ಲಕ್ಷಾಂತರ ಮಂದಿ ಸೇಫ್ ಅಂತ ಮೆಟ್ರೋ ರೈಲು ಹತ್ತಿ ನಗರದಲ್ಲಡೆ ಸುತ್ತಾಡ್ತಾರೆ. ಬಿಎಂಟಿಸಿ ಬಸ್ ಸೇಫ್ ಅಲ್ಲ ಅಂತ ಅದೆಷ್ಟೋ ಜನ ಮೆಟ್ರೋ ಹತ್ತುತ್ತಿದ್ದಾರೆ. ಆದ್ರೆ ಇತ್ತೀಚಿಗೆ ಮೆಟ್ರೋ ಹತ್ತಿ ಓಡಾಟ ನಡೆಸಲು ಮಹಿಳಾ ಪ್ರಯಾಣಿಕರು ಎದುರುತ್ತಿದ್ದಾರೆ. ಕಾರಣ ಮೆಟ್ರೋದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಕೇಸ್.. ಹೌದು ಇತ್ತೀಚಿನ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ…

Read More

ನಾಗಮಂಗಲ ಜ 12;ರಾಜ್ಯದಲ್ಲಿ ಈ ವರ್ಷ ಈಗಾಗಲೇ 7 ಲಕ್ಷ ಕೃಷಿಕರಿಗೆ 475 ಕೋಟಿ ರೂ ಬೆಳೆ ವೆಮೆ ಪರಿಹಾರ ಒದಗಿಸಲಾಗಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿಯಲ್ಲಿ ಏರ್ಪಡಿಸಿರುವ ಶ್ರೀ ಶ್ರಿ ಶ್ರೀ ಡಾ. ಬಾಲ ಗಂಗಾಧರ ನಾಥ ಸ್ವಾಮೀಜಿಯವರ 79ನೇ ಜಯಂತೋತ್ಸವ, 11ನೇ ಸಂಸ್ಮರಣಾ ಸಮಾರಂಭ ಹಾಗೂ ಕೃಷಿ ಮೇಳ ಮತ್ತು ರೈತ ಸಂಗಮ ಕಾರ್ಯಕ್ರಮಗಳನ್ನು ಅವರು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಶೇ 2% ಅಂದರೆ ಸುಮಾರು 20 ಲಕ್ಷ ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ. ಈ ವರ್ಷ ಬರ ಪರಿಸ್ಥಿತಿ ಹೆಚ್ಚಿರುವ ಕಾರಣ ಇನ್ನೂ 1000 ಕೋಟಿ ರೂ ವಿಮೆ ಹಣ ರೈತರಿಗೆ ನೇರವಾಗಿ ವರ್ಗಾವಣೆಯಾಗಲಿದೆ ಎಂದರು. ಕೃಷಿಕರು ಸದೃಢವಾಗಬೇಕು ಆಗ ಮಾತ್ರ ದೇಶದ ಸಂಪೂರ್ಣ ಏಳಿಗೆ ಸಾಧ್ಯ ಎಂದ ಸಚಿವರು ಸಾಂಪ್ರದಾಯಿಕ ಕೃಷಿ ಪದ್ದತಿ ಜೊತೆಗೆ ಯಾಂತ್ರೀಕರಣ, ನವ ಸಂಶೋಧನೆಗಳ ಫಲವೂ ರೈತಗೆ ಸುಲಭವಾಗಿ ತಲುಪಬೇಕು .ಕೃಷಿ…

Read More

ಬೆಂಗಳೂರು: ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು  ರಾಮಮಂದಿರ ಸಿದ್ಧತೆ ನಡುವೆ 400% ವಿಮಾನ ದರ ಏರಿಕೆ ಮಾಡಲಾಗಿದೆ. ಬೇಡಿಕೆಗೆ ಅನುಗುಣವಾಗಿ ವಿಮಾನದ ಟಿಕೆಟ್ ದರ ಹೆಚ್ಚಳ ಮಾಡಿದ್ದು  ವಿಮಾನಯಾನ ಸಂಸ್ಥೆಗಳು ಬೇಡಿಕೆಗೆ ಅನುಗುಣವಾಗಿ ದರ ಶೇ.400ರಷ್ಟು ಬೆಂಗಳೂರು-ಅಯೋಧ್ಯೆ ದರ ನಾಗಾಲೋಟ ಕಳೆದ 10 ದಿನದಲ್ಲಿ ₹6,000 ಇದ್ದ ಟಿಕೆಟ್ ದರ ಈಗ ₹21,500 ವಿಮಾನ ದರ 400% ಏರಿಕೆ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್‌ ದರ ₹6,000 ಇತ್ತು ಜ.19ಕ್ಕೆ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದ ಟಿಕೆಟ್ ₹21,500 ಜ.20ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನ ಟೇಕ್​ ಆಫ್​ ಜನವರಿ 20 ರಂದು ಹೊರಡಲಿರುವ ವಿಮಾನದ ಟಿಕೆಟ್‌ ದರ ₹29,700 ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮ.1ಕ್ಕೆ ವಿಮಾನ ಹೊರಡಲಿದೆ ಮಾಮೂಲಿ ದಿನಕ್ಕೆ ಹೋಲಿಸಿದರೆ ಟಿಕೆಟ್‌ ದರದಲ್ಲಿ ಶೇ.395% ಏರಿಕೆ ಜ.20ಕ್ಕೂ ಮುನ್ನ ಅಯೋಧ್ಯೆಗೆ ತೆರಳುವ ವಿಮಾನಗಳ ಟಿಕೆಟ್‌ ಸೋಲ್ಡ್​ ಕೆಲವೇ ಟಿಕೆಟ್‌ಗಳು ಲಭ್ಯವಿದ್ದರೂ ಕೂಡ ಬೆಲೆ ಕೈಗೆಟುಕದಂತಾದ ದರ ವಾರಾಂತ್ಯದಲ್ಲೇ ಅಯೋಧ್ಯೆಯ…

Read More

ಬೆಂಗಳೂರು: ಹಾವೇರಿಯಲ್ಲಿ  ನಡೆದ ನೈತಿಕ ಪೊಲೀಸ್‍ಗಿರಿ ಪ್ರಕರಣದಲ್ಲಿ ಕೆಲವರ ಬಂಧನವಾಗಿದೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ನೈತಿಕ ಪೊಲೀಸ್‍ಗಿರಿ ವಿಚಾರವಾಗಿ ಸಂತ್ರಸ್ತೆಯಿಂದ ಗ್ಯಾಂಗ್ ರೇಪ್ ಆರೋಪ ವಿಚಾರವಾಗಿ ಮಾತನಾಡಿ,  ಈ ವೇಳೆ ಅವರು ಹಾವೇರಿ ಕೇಸ್ ತನಿಖೆ ನಡೆಯುತ್ತಿದೆ. ಮೊದಲು ಆಕೆ ಗ್ಯಾಂಗ್ ರೇಪ್ ಎಂದು ದೂರು ಕೊಟ್ಟಿರಲಿಲ್ಲ. ನಂತರ ಆಕೆ ರೇಪ್ ಎಂದು ದೂರು ಕೊಟ್ಟಿದ್ದಾರೆ. ಈಗಾಗಲೇ ಪ್ರಕರಣದಲ್ಲಿ  ಹಲವರ ಬಂಧನ ಅಗಿದೆ. ಈ ಬಗ್ಗೆ ತನಿಖೆ ನಡೆಯಲಿದೆ. ತನಿಖೆ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡೋ ಕೆಲಸ ಮಾಡುವುದಿಲ್ಲ. ಈ ಪ್ರಕರಣವನ್ನು ಲೈಟ್ ಆಗಿ ತೆಗೆದುಕೊಂಡು ಬಿ ರಿಪೋರ್ಟ್ ಹಾಕೋಕು ಬಿಡುವುದಿಲ್ಲ. ರೇಪ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯಲಿದೆ. ಅಲ್ಲದೇ ಟೆಸ್ಟ್ ಮಾಡುವುದು ಸೇರಿದಂತೆ ಹಲವು ಪ್ರಕ್ರಿಯೆ ಇದೆ. ತನಿಖೆ ಬಳಿಕ…

Read More

ಬೆಂಗಳೂರು: ಜನವರಿ 22 ನಂತರ ನಾನು ಕೂಡ ಅಯೋಧ್ಯೆಗೆ (Ayodhya Ram Mandir) ಹೋಗುತ್ತೇನೆ. ನಮ್ಮ ಕಾರ್ಯಕರ್ತರು ಕೂಡ ದೇವಸ್ಥಾನಕ್ಕೆ ಹೋಗ್ತಾರೆ. ಬಿಜೆಪಿಯ (BJP) ರಾಜಕೀಯ ವಿರೋಧ ಹೊರತು ರಾಮನ ವಿರೋಧಿಗಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಶ್ರೀರಾಮನಚಂದ್ರನ ವಿರೋಧಿಗಳಲ್ಲ. ನಾವು ಬಿಜೆಪಿ (BJP) ರಾಜಕಾರಣಕ್ಕೆ ಮಾತ್ರ ವಿರೋಧ. ಶ್ರೀರಾಮನ ಭಕ್ತರು ನಾವು. ಆದರೆ ಇವರು ಶ್ರೀರಾಮನ ರಾಜಕೀಯ ಮಾಡಲು ಹೋಗುತ್ತಿದ್ದಾರೆ. ಅದರ ವಿರುದ್ಧವೇ ಹೊರತು ಶ್ರೀರಾಮನ ವಿರೋಧ ಮಾಡುತ್ತಿಲ್ಲ ಎಂದರು. ಐದನೇ ಗ್ಯಾರೆಂಟಿ ಯೋಜನೆಯನ್ನು ಜಾರಗೊಳಿಸುತ್ತಿದ್ದೇವೆ. ಮತಕ್ಕಾಗಿ ಮಾಡಿದ ಕಾರ್ಯಕ್ರಮ ಇದಲ್ಲ. ಯುವಜನರ ಅನುಕೂಲಕ್ಕಾಗಿ ಮಾಡಿದ ಕಾರ್ಯಕ್ರಮ. ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ 5ನೇ ಗ್ಯಾರಂಟಿ ಯೋಜನೆ ಜಾರಿ ತಂದಿದ್ದೇವೆ. ಕುಮಾರಸ್ವಾಮಿಯೆಂದರೆ ಸುಳ್ಳು, ಸುಳ್ಳೆಂದರೆ ಕುಮಾರಸ್ವಾಮಿ. ಅವರ ಬಗ್ಗೆ ಹೆಚ್ಚು ಮಾತಾನಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

Read More

ಚಾಮರಾಜನಗರ:- ಕಳೆದ ಒಂದು ವಾರದಿಂದ ಪೈಪ್ ಒಡೆದು ಕುಡಿಯುವ ನೀರು ಪೋಲಾಗ್ತಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಜರುಗಿದೆ. ಮಳವಳ್ಳಿ ಗೇಟ್ ಸಮೀಪ ಪೈಪ್ ಲೈನ್ ಒಡೆದು ನೀರು ಪೋಲಾಗ್ತಿದೆ. ಇತ್ತ ಗುಂಡ್ಲುಪೇಟೆ ಪಟ್ಟಣದಲ್ಲಿ ಒಂದು ವಾರದಿಂದ ಕಬಿನಿ ನೀರಿಲ್ಲದೆ ದಿನನಿತ್ಯ ನೀರಿಗಾಗಿ ಜನರು ಪರದಾಟ ನಡೆಸುತ್ತಿದ್ದಾರೆ. ಇತ್ತ ಕುಡಿಯುವ ನೀರು ಪೋಲಾಗ್ತಿದೆ. ನೀರಿನ ಬವಣೆ ಉಂಟಾಗಿದ್ರು ನಿರ್ಲಕ್ಷ್ಯ ತೋರುತ್ತಿರುವ ಪುರಸಭಾ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ರಸ್ತೆ ಬದಿಯಲ್ಲಿ ಗುಂಡ್ಲುಪೇಟೆಗೆ ಸರಬರಾಜಾಗ ಬೇಕಿದ್ದ ನೀರು ಹರಿದು ಹೋಗುತ್ತಿದೆ. ಮಳವಳ್ಳಿ ಗ್ರಾಮದ ರೈತ ಶಿವಕುಮಾರ್ ಎಂಬುವರ ಜಮೀನಿಗೂ ನೀರು ನುಗ್ತಿದೆ. ನೀರು ಜಮೀನಿಗೆ ನುಗ್ಗೋದ್ರಿಂದ ಈರುಳ್ಳಿ ಬೆಳೆ ನಾಶ ಆಗುತ್ತೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಮಳವಳ್ಳಿ ಗ್ರಾಮದ ರೈತ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

Read More

“ಜಾಲಿಡೇಸ್” ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ “31 DAYS” ಚಿತ್ರದ ಫಸ್ಟ್ ಲುಕ್ ಇತ್ತೀಚಿಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಅನಾವರಣವಾಯಿತು. “31 DAYS” ಚಿತ್ರಕ್ಕೆ “ಹೈ ವೋಲ್ಟೇಜ್ ಲವ್ ಸ್ಟೋರಿ” ಎಂಬ ಅಡಿಬರಹವಿದೆ. ಇದೊಂದು ಪ್ರೇಮ ಕಥಾನಕವಾಗಿದ್ದು, ಚಿತ್ರಸಂತೆಗೆ ಆಗಮಿಸಿದ್ದ 46 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿರುವ ದಂಪತಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು ವಿಶೇಷ. ಶೀರ್ಷಿಕೆಯನ್ನು ಯುವ ಪ್ರೇಮಿಗಳು ಬಿಡುಗಡೆ ಮಾಡಿದರು. ಅಲ್ಲಿ ನೆರದಿದ್ದ ಸಹಸ್ರಾರು ಕಲಾಸಕ್ತರು “31 DAYS” ಚಿತ್ರದ ವಿನೂತನ ಫಸ್ಟ್ ಲುಕ್ ಗೆ ಫಿದಾ ಆದರು. “ನಾನು ಸಹ ಚಿತ್ರಕಲಾ ಪರಿಷತ್ ನ ವಿದ್ಯಾರ್ಥಿಯಾಗಿದ್ದು, ಚಿತ್ರಸಂತೆಯಲ್ಲಿ ನಮ್ಮ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಬಿಡುಗಡೆಯಾಗಿದ್ದು ಖುಷಿಯಾಗಿದೆ ಎನ್ನುತ್ತಾರೆ ನಾಯಕ ನಿರಂಜನ್ ಶೆಟ್ಟಿ. Nstar ಬ್ಯಾನರ್ ನಲ್ಲಿ ನಾಗವೇಣಿ. N. ಶೆಟ್ಟಿ ಅವರು ನಿರ್ಮಿಸುತ್ತಿರುವ “31DAYS” ಚಿತ್ರವನ್ನು ರಾಜ ರವಿಕುಮಾರ್ ನಿರ್ದೇಶಿಸುತ್ತಿದ್ದಾರೆ. “31 DAYS” ಚಿತ್ರದ ಚಿತ್ರೀಕರಣ ಮುಕ್ತಾಯ…

Read More