Author: AIN Author

ಬೆಂಗಳೂರು: ಹಾವೇರಿಯ ನಡೆದ ನೈತಿಕ ಪೊಲೀಸ್‌ಗಿರಿ ಬಗ್ಗೆ ರಾಜ್ಯ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್‌ಗಿರಿ ನಡೆದಾಗ ಜೋರಾಗಿ ಮಾತನಾಡುತ್ತಿದ್ದರು. ಈಗ ಹಾವೇರಿ ಪ್ರಕರಣದ ಕುರಿತು ಸಿಎಂ ಮಾತನಾಡುತ್ತಿಲ್ಲ. ಲೈಂಗಿಕ ದೌರ್ಜನ್ಯಕ್ಕೆ (Sexual Assault) ಒಳಗಾದವಳು ಅಲ್ಪಸಂಖ್ಯಾತ ಮಹಿಳೆ ಅವಳಿಗೂ ರಕ್ಷಣೆ ನೀಡದೇ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ. https://ainlivenews.com/if-you-have-a-gmail-account-and-are-not-using-it-you-must-read-this-story/ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುವತಿ ಮೇಲೆ ಗ್ಯಾಂಗ್ ರೇಪ್ ಆಗಿದೆ. ಆರಂಭದಲ್ಲಿ ಪೊಲೀಸರು ಅದನ್ನು ತಳ್ಳಿ ಹಾಕುವ ಪ್ರಯತ್ನ ‌ನಡೆಸಿದರು. ಆರೋಪಿಗಳಿಗೆ ಜಾಮೀನು ಸಿಗುವಂತಹ ಪ್ರಕರಣ ದಾಖಲಿಸಿದರು. ಯುವತಿ ಧೈರ್ಯವಾಗಿ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿದ್ದಾಳೆ, ಇದರಿಂದ ಪ್ರಕರಣ ಗಂಭೀರವಾಗಿದೆ. ಮತ್ತೊಂದು ಬಾರಿ ಯುವತಿಯ ಮೆಡಿಕೆಲ್ ಟೆಸ್ಟ್ ಆಗಬೇಕು. ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಚಾಂಪಿಯನ್. ಇಲ್ಲಿ ಅಲ್ಪಸಂಖ್ಯಾತ ಯುವತಿಯ ಮೇಲೆ ಅತ್ಯಾಚಾರವಾಗಿದೆ. ಆ ಯುವತಿಯ ರಕ್ಷಣೆಗೂ ಮುಂದಾಗುತ್ತಿಲ್ಲ ಎಂದು ದೂರಿದ್ದಾರೆ.

Read More

ಬೆಂಗಳೂರು: ನಮ್ಮ ಮೆಟ್ರೋ ಬೆಂಗಳೂರು ನಗರ ಜೀವನಾಡಿ. ನಿತ್ಯ ಲಕ್ಷಾಂತ ಮಂದಿ ಮೆಟ್ರೋ ಹತ್ತಿ ಒಂದು ಕಡೆಯಿಂದ ಮತ್ತೊಂದು ಕಡೆ ‘ಹೋಗ್ತಾರೆ. ಆದ್ರೆ ಇತ್ತೀಚಿಗೆ ಇದೇ ಮೆಟ್ರೋದಲ್ಲಿ  ಬ್ಯಾಕ್ ಟು ಬ್ಯಾಕ್ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ಪ್ರಕರಣ ಹೆಚ್ಚಾಗ್ತಿದೆ.ಇದ್ರಿಂದ ಮೆಟ್ರೋ ಹತ್ತೋಕೆ ಮಹಿಳಾ ಪ್ರಯಾಣಿಕರು ಎದುರುತ್ತಿದ್ದಾರೆ. ಆದ್ರೆ ಮಹಿಳಾ ಪ್ರಯಾಣಿಕರಿಗೆ ಸೇಫ್ಟಿ ನೀಡಲು ಇದೀಗ ಮತ್ತೊಂದು ಬೋಗಿಯನ್ನ ಮಹಿಳೆಯರಿಗೆ ಮೀಸಲಿಡಲು ಬಿಎಂಆರ್ಸಿಲ್ ಚಿಂತಿಸಿದೆ. ಬೆಂಗಳೂರು ನಗರದಲ್ಲಿ ಸಂಚಾರ ದಟ್ಟನೆ ನಿಯಂತ್ರಣಕ್ಕೆ ರಾಮಬಾಣವಾಗಿ ಬಂದಿದ್ದೇ ನಮ್ಮ ಮೆಟ್ರೋ. ಮೆಟ್ರೋ ಶುರುವಾದ ಬಳಿಕ ಲಕ್ಷಾಂತರ ಮಂದಿ ಸೇಫ್  ಅಂತ ಮೆಟ್ರೋ ರೈಲು ಹತ್ತಿ ನಗರದಲ್ಲಡೆ ಸುತ್ತಾಡ್ತಾರೆ. ಬಿಎಂಟಿಸಿ ಬಸ್ ಸೇಫ್ ಅಲ್ಲ ಅಂತ ಅದೆಷ್ಟೋ ಜನ ಮೆಟ್ರೋ ಹತ್ತುತ್ತಿದ್ದಾರೆ. ಆದ್ರೆ ಇತ್ತೀಚಿಗೆ ಮೆಟ್ರೋ ಹತ್ತಿ ಓಡಾಟ ನಡೆಸಲು ಮಹಿಳಾ ಪ್ರಯಾಣಿಕರು ಎದುರುತ್ತಿದ್ದಾರೆ. ಕಾರಣ ಮೆಟ್ರೋದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಕೇಸ್.. https://ainlivenews.com/if-you-have-a-gmail-account-and-are-not-using-it-you-must-read-this-story/ ಹೌದು ಇತ್ತೀಚಿನ ದಿನಗಳಲ್ಲಿ  ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಲೈಂಗಿಕ…

Read More

ಬೆಂಗಳೂರು: ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ದೊಡ್ಡ ಹೋರಾಟ ನಡೆಯುತ್ತಿದೆ. ಬೆಂಗಳೂರಿನ ಉದ್ದಿಮೆದಾರರು ಕಡ್ಡಾಯ ನಾಮಫಲಕ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಇತ್ತ ಬಿಬಿಎಂಪಿ ನೋಟಿಸ್ ನೀಡ್ತಾ ಇದೆ. ಜನವರಿ 15 ರ ಒಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಕೆಗೆ ಎಚ್ಚರಿಕೆ ಇದೆ. ನಾಮಫಲಕ ಬದಲಾವಣೆ ಮಾಡದಿದ್ದರೆ ಕಾನೂನು ಕ್ರಮ. ಎಷ್ಟು ನೋಟಿಸ್ ನೀಡಿದ್ದಾರೆ ಅನ್ನೋದರ ವರದಿ ಇಲ್ಲಿದೆ ನೋಡಿ. ಬೆಂಗಳೂರಿನಲ್ಲಿ ದೇಶ ವಿದೇಶಿ ಉದ್ದಿಮಿಗಳು ವ್ಯಾಪಾರ ವಹಿವಾಟು ಮಾಡ್ತಿದ್ದಾರೆ. ಅವರ್ಯಾರು ಸಮರ್ಪವಾಗಿ ಕಡ್ಡಾಯ ಕನ್ನಡ ರೂಲ್ಸ್ ಫಾಲೋ ಮಾಡ್ತಿಲ್ಲ. ನಾಮಫಕದಲ್ಲಿ ಶೇ 60 ರಷ್ಟು ಕನ್ನಡ ಬಳಿಸಿ ಅಂತ ಎಷ್ಟೇ ಹೇಳಿದ್ರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಯಾವಾಗ ಕನ್ನಡ ಪರ ಸಂಘನೆಗಗಳು ಇಂಗ್ಲಿಷ್  ವ್ಯಾಮೋಹದ ವಿರುದ್ದ ಸಿಡಿದಿದ್ರೂ ಆಗ ಇಡೀ ಸರ್ಕಾರ ಹಾಗೂ ಬಿಬಿಎಂಪಿ ಎಚ್ಚುತ್ತುಕೊಳ್ತು. ಬ್ಯಾಕ್ ಟು ಬ್ಯಾಕ್ ಸಭೆ ನಡೆಸಿ ಕನ್ನಡ ಕಡ್ಡಾಯ ಆದೇಶ ಮಾಡ್ತು, ಆದ್ರೆ ಇದೀಗ ಕನ್ನಡ ಕಡ್ಡಾಯ ರೂಲ್ಸ್ ಕಟ್ಟುನಿಟ್ಟಿಗಾಗಿ ಅನುಷ್ಠಾನ ಮಾಡಲು ಪಾಲಿಕೆ ಪಣತೊಟ್ಟಿದೆ. ಹೌದು.. ಕನ್ನಡ…

Read More

ರಾಯಚೂರು : ಜಾಹಿರಾತು ಕೊಟ್ಟ ತಕ್ಷಣ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿದೆ ಅಂತ ಅಲ್ಲಾ. ಅಭಿವೃದ್ಧಿ, ಬರಗಾಲ ವಿಚಾರದಲ್ಲಿ  ಕಾಂಗ್ರೆಸ್‌ನವರು ಈಗಾಗಲೇ ಆತಂಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.  ರಾಯಚೂರಿನ ದೇವದುರ್ಗದ ತಿಂಥಿಣಿ ಬ್ರಿಡ್ಜ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಧ್ಯಮದೊಂದಿಗೆ ಮಾತನಾಡಿ, ಕಾಂಗ್ರೇಸ್ ಪಕ್ಷ ಜಾಹಿರಾತು ಕೊಟ್ಟ ತಕ್ಷಣ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿದೆ ಅಂತ ಅಲ್ಲಾ. ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ. ಜನರು ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್‌ನವರು ಈಗಾಗಲೇ ಆತಂಕದಲ್ಲಿದ್ದಾರೆ. ಬಿಜೆಪಿ ಹಾಗೂ ನರೇಂದ್ರ ಮೋದಿ ಪರವಾದ ಅಲೆ ರಾಜ್ಯ ಹಾಗೂ ದೇಶದಲ್ಲಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರು ಗೊಂದಲದಲ್ಲಿದ್ದಾರೆ. ಒಂದು ಕಡೆ ಮೂರು ಜನ ಡಿಸಿಎಂ ಮಾಡಬೇಕು ಅಂತ ಧ್ವನಿ ಎತ್ತುತ್ತಾರೆ, ಮತ್ತೊಂದು ಕಡೆ ರಾಮಮಂದಿರ ವಿಚಾರದಲ್ಲಿ ಕಾಂಗ್ರಸ್ ಪಕ್ಷ ಹಾಗೂ ನಾಯಕರ ನಡವಳಿಕೆ ಹೇಗಿದೆ ಅಂದ್ರೆ. ಎಲ್ಲೊ ಒಂದು ಕಡೆ ಬರೀ ಅಲ್ಪಸಂಖ್ಯಾತರ ತುಷ್ಟಿಕರಣ ಮುಂದುವರೆಸಿಕೊಂಡು ಹೊರಟಿದ್ದಾರೆ. ಎಲ್ಲವನ್ನೂ ಜನ ಮತದಾರರು ಗಮನಿಸುತಿದ್ದಾರೆ.…

Read More

ಮೊದಲ ಬಾರಿಗೆ ಬಿಗ್ ಬಾಸ್ ಇನ್ನೂ ಎರಡು ವಾರಗಳ ಕಾಲ ಇರುವಾಗಲೇ ನೇರವಾಗಿ ಫಿನಾಲೆ ವೇದಿಕೆಗೆ ಒಬ್ಬ ಕಂಟೆಸ್ಟೆಂಟ್ ಹೋಗುವಂತಹ ಅವಕಾಶವನ್ನು ನೀಡಿದ್ದಾರೆ. ಅದಕ್ಕಾಗಿಯೇ ಟಿಕೆಟ್ ಟು ಫಿನಾಲೆ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ನಲ್ಲಿ ಬಹುತೇಕರು ವೈಯಕ್ತಿಕವಾಗಿ ಆಡಬೇಕಾಗಿದ್ದರಿಂದ ಪ್ರತಿ ಟಾಸ್ಕ್ ಕೂಡ ರೋಚಕವಾಗಿದ್ದವು. ವಾರ ಪೂರ್ತಿ ನಡೆದ ಟಿಕೆಟ್ ಟು ಟಾಸ್ಕ್‌ನಲ್ಲಿ ಪ್ರತಿ ನಾಲ್ವರು ಆಡಬೇಕಿತ್ತು. ಸರದಿ ಬಂದಾಗ ಪ್ರತಿ ಆಟಗಾರ ಕೂಡ ತನ್ನೊಂದಿಗೆ ಆಡಲು ಮೂವರು ಎದುರಾಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಹೀಗೆ ಎಂಟು ರೌಂಡ್ಸ್‌ನಲ್ಲಿ ಆಟ ನಡೆದಿತ್ತು. ಎಂಟು ಸ್ಪರ್ಧಿಗಳಿಗೂ ಅಂಕಗಳನ್ನು ನೀಡಲಾಗಿತ್ತು. ಹೆಚ್ಚು ಯಾರು ಅಂಕ ಪಡೆಯುತ್ತಾರೋ ಅವರೇ ಫಿನಾಲೆಯ ಟಿಕೆಟ್ ಪಡೆಯುತ್ತಾರೆ ಎನ್ನುವುದು ಬಿಗ್ ಬಾಸ್ ನಿಯಮವಾಗಿತ್ತು. ಇಂದು ಬೆಳಗ್ಗೆ ವಾಹಿನಿಯು ಪ್ರೋಮೋವೊಂದನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಪ್ರತಾಪ್ ಅವರೇ ಟಾಪ್ ಎಂದು ತೋರಿಸಲಾಗಿದೆ. ಜೊತೆಗೆ ಆಟದಿಂದ ಸಂಗೀತಾ (Sangeetha) ಅವರನ್ನು ಪ್ರತಾಪ್ ಹೊರಗಿಟ್ಟ ಕಾರಣದಿಂದಾಗಿ ಸಂಗೀತಾ ಫಿನಾಲೆಗೆ ಬರುವುದಿಲ್ಲ ಎನ್ನುವಂತೆ ಬಿಂಬಿಸಲಾಗಿದೆ. ಆದರೆ,…

Read More

ರಾಯಚೂರು : ಎಲ್ಲದರಲ್ಲೂ ಚಿಲ್ಲರೆ ರಾಜಕಾರಣ ಮಾಡುವುದು, ಜನರನ್ನು ತಪ್ಪುದಾರಿಗೆ ಎಳೆಯುವುದು ಆಗುವುದಿಲ್ಲ ಸಿದ್ದರಾಮಯ್ಯನವರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದೇವದುರ್ಗದಲ್ಲಿ  ಹೇಳಿದರು. ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಸಚಿವರು ಗಣರಾಜ್ಯೋತ್ಸವಕ್ಕೆ ರಾಜ್ಯದ ಟ್ಯಾಬ್ಲೋ ನಿರಾಕರಿಸಿರುವ ವಿಚಾರ ಮಾತನಾಡುತ್ತಾ, ಪ್ರತೀವರ್ಷ ಎಲ್ಲಾ ರಾಜ್ಯಗಳಿಗೆ ಕೊಡುವುದಿಲ್ಲ, ಒಂದು ಬಿಟ್ಟು ಒಂದು ಕೊಡುವುದು ಪದ್ದತಿ, ಸಿದ್ದರಾಮಯ್ಯ ಅವರಿಗೆ 2006 ರಲ್ಲಿ ಕನ್ನಡದ ಸ್ವಾಭಿಮಾನ ನೆನಪಾಗಿರಲಿಲ್ವಾ. 2006ರ ಜನವರಿಯಲ್ಲಿ  ಅವರದೇ ಸರ್ಕಾರವಿತ್ತು, ಸಮ್ಮಿಶ್ರ ಸರ್ಕಾರವಿತ್ತು. 14 ವರ್ಷದಲ್ಲಿ 10 ಬಾರಿ ಅತಿಹೆಚ್ಚು ಅವಕಾಶ ಸಿಕ್ಕಿದೆ, ಅಂದ್ರೆ ನಾವೇ ಹೆಚ್ಚು ಬಾರಿ ಅವಕಾಶ ಕೊಟ್ಟಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗಲೇ ಅವಕಾಶ ಸಿಕ್ಕಿದೆ.  2006, 2007,2009,2010 ರಲ್ಲಿ ಯಾರ ಸರ್ಕಾರವಿತ್ತು ಯಾಕೆ ಅವಕಾಶ ಸಿಕ್ಕಿರಲಿಲ್ಲ. ಸಿದ್ದರಾಮಯ್ಯನವರು ಪತ್ರ ಬರೆದಿದ್ದರಲ್ಲಾ 2014 ರಲ್ಲಿ ನಮ್ಮ ಸರ್ಕಾವಿತ್ತು ತಪ್ಪು ಮಾಡಿದ್ದೇವೆ ಅಂತ ಪತ್ರ ಬರೆಯಿರಿ ನೋಡೋಣ. https://ainlivenews.com/if-you-have-a-gmail-account-and-are-not-using-it-you-must-read-this-story/ ಈ ವಿಚಾರದಲ್ಲಿ ಚಿಲ್ಲರೆ ರಾಜಕಾರಣ ಮಾಡುವುದು ಸರಿಯಲ್ಲ. ಅದಕ್ಕೊಂದು…

Read More

ಮೈಸೂರು: ಖಂಡಿತ ನಾನು ನ್ಯಾಷನಲ್ ಲೀಡರ್ ಅಲ್ಲ, ಬಡ ಕುಟುಂಬದಿಂದ ಬಂದವನು ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಖಂಡಿತ ನಾನು ನ್ಯಾಷನಲ್ ಲೀಡರ್ ಅಲ್ಲ, ಬಡ ಕುಟುಂಬದಿಂದ ಬಂದವನು. ಸಾಮಾನ್ಯ ಕುಟುಂಬದಿಂದ ಬಂದು ಬರವಣಿಗೆ ಮೂಲಕ ಮುಂದೆ ಬಂದೆ. https://ainlivenews.com/accused-of-late-night-partying-actors-present-at-police-station-video/ ಅಪ್ಪ ಸಿಎಂ ಆಗಿದ್ರೆ ತನ್ನ ಲ್ಯಾಬ್ ಗೆ ಗುತ್ತಿಗೆ ಪಡೆಯೋರು ನ್ಯಾಷನಲ್ ಲೀಡರ್, ಅಪ್ಪನ ವರುಣ ಬಿಡಿಸಿ ಬಾದಾಮಿ ಕ್ಷೇತ್ರಕ್ಕೆ ಓಡಿಸುವವರು ನ್ಯಾಷನಲ್ ಲೀಡರ್, ತಾನು ಹೇಳಿದ ವರ್ಗಾವಣೆ ಲಿಸ್ಟ್ ಗೆ ಸಹಿ ಮಾಡಿ ಅನ್ನೋದು ನ್ಯಾಷನಲ್ ಲೀಡರ್, ಮೈಸೂರು ಭಾಗದ ನಿಜವಾದ ನ್ಯಾಷನಲ್ ಲೀಡರ್ ಯತೀಂದ್ರ ಸಿದ್ದರಾಮಯ್ಯ ಎಂದು ಯತೀಂದ್ರ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.  

Read More

ಬೆಂಗಳೂರು:  ಕೋವಿಡ್ ಪಾಸಿಟಿವ್ ಇರುವವರ ಸಂಪರ್ಕದಲ್ಲಿದ್ದ ಹೈ ರಿಸ್ಕ್ ರೋಗಲಕ್ಷಣ ಹೊಂದಿರುವವರಿಗೆ, ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸಲು ಕ್ಯಾಬಿನೆಟ್ ಉಪ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ದೇಶದಲ್ಲಿಯೇ ಕರ್ನಾಟಕದಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ಗಳನ್ನ ನಡೆಸಲಾಗ್ತಿದೆ ಎಂದರು. https://ainlivenews.com/accused-of-late-night-partying-actors-present-at-police-station-video/ ಕೋವಿಡ್  ಇಳಿಮುಖ ಕಾಣುವ ವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟಿಂಗ್ ಮುಂದುವರಿಸುವುದಾಗಿ ಹೇಳಿದರು. ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚು ಬರುತ್ತೆ ಎನ್ನುವ ಕಾರಣಕ್ಕೆ ಟೆಸ್ಟಿಂಗ್ ಕಡಿಮೆ ಮಾಡಿ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನ ಮುಚ್ವಿಡುವ ಕೆಲಸವನ್ನ ಸರ್ಕಾರ ಮಾಡುವುದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿಯೇ ಟೆಸ್ಟಿಂಗ್ ನಡೆಸಿ, ಅಗತ್ಯ ಚಿಕಿತ್ಸೆ ಕೊಡುವುದು ಮುಖ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Read More

ಪೊಲೀಸರ ವಿಚಾರಣೆ ಎದುರಿಸಿದ ಮಾತನಾಡಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕಾಟೇರ ಸಿನಿಮಾ ಯಶಸ್ಸು ಹಿನ್ನೆಲೆಯಲ್ಲಿ ಜನವರಿ 3ರಂದು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಊಟ ಮಾಡಿಕೊಂಡು ಸ್ಥಳದಿಂದ ನಿರ್ಗಮಿಸಿದ್ದೇವೆ. ಊಟ ಮಾಡುವುದು ಪೂರ್ವ ನಿರ್ಧರಿತವಾಗಿರಲಿಲ್ಲ. ಊಟ ಮಾಡೋದು ತಡವಾಯಿತು.  ಈ ವೇಳೆ ಯಾರಿಗೂ ತೊಂದರೆ ಕೊಟ್ಟಿಲ್ಲ ಎಂದ್ರು. ಇನ್ನು ಕಾಟೇರ ಸಿನಿಮಾ ಯಶಸ್ಸು ತಡೆಯಲಾರದೆ ದರ್ಶನ್ ನನ್ನ ಟಾರ್ಗೆಟ್ ಮಾಡಿಕೊಳ್ಳಲಾಗುತ್ತಿದೆ. ವಿನಾಕಾರಣ ಅವರ ಹೆಸರು ತಳುಕು ಹಾಕುತ್ತಿದ್ದಾರೆ.ಇದನ್ನೆಲ್ಲಾ ಯಾರು ಮಾಡುತ್ತರಂದು ಗೊತ್ತಿಲ್ಲ ಆದ್ರೆ ದಯವಿಟ್ಟು ಇಲ್ಲಿಗೆ ನಿಲ್ಲಿಸಿ ಎಂದು ಅಸಮಧಾನ ವ್ಯಕ್ತಪಡಿಸಿದ್ರು. ಇನ್ನು ದರ್ಶನ್ ಹಾಗು ನಟರು ಪೊಲೀಸ್ ಠಾಣೆಗೆ ಬರ್ತಾರೆ ಎಂದು ಗೊತ್ತಾಗಿದ್ರಿಂದ . ಠಾಣೆ ಬಳಿ ಸಾವಿರಾರು ಜನ ಅಭಿಮಾನಿಗಳು ಜಮಾಯಿಸಿ ದರ್ಶನ್ ಗೆ ಜೈಕಾರ ಹಾಕಿದ್ರು. ಇನ್ನು ಪ್ರಕರಣದ ಬಗ್ಗೆ ಏನೂ ಮಾತನಾಡದ ದರ್ಶನ್ ಚಿಕ್ಕಣ ಅವರ ಚಿತ್ರ ಬರ್ತಿದೆ ಸಪೋರ್ಟ್ ಮಾಡಿ ಎಂದಷ್ಟೇ ಹೇಳಿದ್ರು. ಒಟ್ಟಿನಲ್ಲಿ ದರ್ಶನ್ ಗೆ ಸಕ್ಸಸ್ ನ ಹಿಂದೆ…

Read More

ಬೆಂಗಳೂರು: ಕಾಟೇರ ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ನಟ‌ ದರ್ಶನ್ ಪೋಲೀಸ್ ಸ್ಟೇಷನ್ ಮೆಟ್ಟಿಲೇರೋ ಸ್ಥಿತಿ ಬಂದಿದೆ. ಜೆಟ್ ಲಾಗ್ ಪಬ್  ನಲ್ಲಿ ಅವಧಿ ಮೀರಿ‌ ಪಾರ್ಟಿ ಮಾಡಿದ್ದ ಕಾಟೇರ ಟೀಂ ಕಾನೂನು ಉಲಂಘನೆ ಮಾಡಿದ್ರು.‌ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇವತ್ತು ಏನೆಲ್ಲಾ ಬೆಳವಣಿಗೆ ಆಯ್ತು ಪೊಲೀಸ್ ಠಾಣೆಗೆ ಯಾರೆಲ್ಲ ಬಂದಿದ್ರು ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ತೋರಿಸ್ತೀವಿ ನೋಡಿ. ಅದ್ಯಾಕೋ ಏನೋ ದರ್ಶನ್ಗೆ  ಒಂದು ಯಶಸ್ಸು ಸಿಗುತ್ತಿದ್ದಂತೆ ಮತ್ತೊಂದು ಕಾಂಟ್ರವರ್ಸಿಯಲ್ಲಿ ತಗಲಾಕಿಕೊಳ್ತಾನೆ ಇರ್ತಾರೆ. ಎಲ್ಲಾ ಸಮಸ್ಯೆಗಳು ಬಗೆಹರಿದು ಕಾಟೇರ ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ಯಡವಟ್ಟು ಮಾಡಿಕೊಂಡ ದರ್ಶನ್ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರುವ ಸ್ಥಿತಿ ಬಂದ್ಬಿಡ್ತು. ಜನವರಿ 3 ರಂದು ಕಾಟೇರ ಸಕ್ಸಸ್ ಮೀಟ್ ಆದ ಮೇಲೆ ಜೆಟ್ ಲಾಗ್ ಪಬ್ ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ್ದಕ್ಕೆ ಸುಬ್ರಮಣ್ಯನಗರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ರು. ಪಬ್ ಮಾಲೀಕರ ಮೇಲೆ ಎಫ್ ಐ ಆರ್ ಹಾಕಿದ್ದ ಪೊಲೀಸರು ಅಂದು ಅವಧಿ ಮೀರಿದ ಪಾರ್ಟಿಯಲ್ಲಿ ಭಾಗವಹಿಸಿದ್ದ   ದರ್ಶನ್…

Read More