Author: AIN Author

ಮುಂಬೈ:- ಹೆಂಡತಿಗೆ ಕುಕ್ಕಿಂಗ್ ಬರಲ್ಲ ಎಂದು ಆಪಾದಿಸುವುದು ಕ್ರೌರ್ಯ ಅಲ್ಲ ಎಂದು ಇಲ್ಲಿನ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮಹಿಳೆ ಅಡುಗೆ ಬರಲ್ಲ ಎಂದು ಆಕೆಯ ಗಂಡ ಅಥವಾ ಸಂಬಂಧಿಕರು ಹೇಳುವುದನ್ನು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಸಾಂಗ್ಲಿ ನಿವಾಸಿಯಾಗಿರುವ ಅರ್ಜಿದಾರರ ದೂರನ್ನು ಪರಿಶೀಲಿಸುವಾಗ ಮುಂಬೈ ಹೈಕೋರ್ಟ್ ಈ ರೀತಿ ತಿಳಿಸಿತು. ಮಹಿಳೆಯೊಬ್ಬರು, ಗಂಡನ ಸಂಬಂಧಿಕರು ಅಡುಗೆ ಕೆಲಸ ಬರುವುದಿಲ್ಲವೆಂದು ಹೀಯಾಳಿಸುತ್ತಾರೆಂದು ದೂರು ಸಲ್ಲಿಸಿದ್ದರು. ಆದ್ರೆ ಪೀಠವು ಈ ವಿಷಯವನ್ನು ಕ್ರೌರ್ಯವೆಂದು ಪರಿಗಣಿಸಲಾಗುವುದಿಲ್ಲವೆಂದು ಹೇಳಿ ಅರ್ಜಿಯನ್ನು ರದ್ದುಗೊಳಿಸಿತು. ತನ್ನ ಸೋದರ ಮಾವ ಸೇರಿದಂತೆ ಅತ್ತೆಯಂದಿರು ತನಗೆ ಅಡುಗೆ ಗೊತ್ತಿಲ್ಲ, ಪೋಷಕರು ತನಗೆ ಏನನ್ನೂ ಕಲಿಸಿಲ್ಲ ಎಂದು ಹೀಯಾಳಿಸಿ ಅವಮಾನಿಸುತ್ತಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಅಡಿಯಲ್ಲಿ ಘಟನೆಯನ್ನು ‘ಕ್ರೌರ್ಯ’ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್‌ ಹೇಳಿದೆ.

Read More

ಇಂಫಾಲ:- ಜನರನ್ನು ಪ್ರಚೋದಿಸಲು ಬಿಜೆಪಿಯವರು ಧರ್ಮವನ್ನು ಬೆರೆಸುತ್ತಾರೆ ಎಂದು AICC ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿ, ಬಹುಶಃ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಮಣಿಪುರವು ಭಾರತದ ಭಾಗವಾಗಿರಲಿಲ್ಲ ಎಂದರು. ನಾನು 2004 ರಿಂದ ರಾಜಕೀಯದಲ್ಲಿದ್ದೇನೆ ಮತ್ತು ನಾನು ಮೊದಲ ಬಾರಿಗೆ ಭಾರತದಲ್ಲಿ ಸಂಪೂರ್ಣ ಆಡಳಿತದ ಮೂಲಸೌಕರ್ಯ ಕುಸಿದಿರುವ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಜೂನ್ 29 ರ ನಂತರ, ಮಣಿಪುರವು ಮಣಿಪುರವಾಗಿರಲಿಲ್ಲ, ಅದು ವಿಭಜನೆಯಾಯಿತು ಮತ್ತು ಎಲ್ಲೆಡೆ ದ್ವೇಷ ಹರಡಿತು”ಎಂದರು. “ಲಕ್ಷಗಟ್ಟಲೆ ಜನರು ನಷ್ಟವನ್ನು ಅನುಭವಿಸಿದರು, ಆದರೆ ಪ್ರಧಾನಿ ನಿಮ್ಮ ಕಣ್ಣೀರು ಒರೆಸಲು, ನಿಮ್ಮ ಕೈ ಹಿಡಿಯಲು ಅಥವಾ ನಿಮ್ಮನ್ನು ಅಪ್ಪಿಕೊಳ್ಳಲು ಇಲ್ಲಿಗೆ ಬಂದಿಲ್ಲ. ಬಹುಶಃ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಮಣಿಪುರ ಭಾರತದ ಭಾಗವಲ್ಲ. ನಿಮ್ಮ ನೋವು ಅವರ ನೋವಲ್ಲ” ಎಂದರು.ನಾನು 2004 ರಿಂದ ರಾಜಕೀಯದಲ್ಲಿದ್ದೇನೆ ಮತ್ತು ನಾನು ಮೊದಲ ಬಾರಿಗೆ ಭಾರತದಲ್ಲಿ ಸಂಪೂರ್ಣ ಆಡಳಿತದ ಮೂಲಸೌಕರ್ಯ ಕುಸಿದಿರುವ ಸ್ಥಳಕ್ಕೆ ಭೇಟಿ…

Read More

ನ್ಯೂಯಾರ್ಕ್:- ಅಮೇರಿಕಾದ ಖ್ಯಾತ ಉದ್ಯಮಿಯೋರ್ವರು ಹಸುಗಳಿಗೆ ಬಿಯರ್ ಕುಡಿಸಿದ್ದಾರೆ. ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ಹಸುಗಳಿಗೆ ಬಿಯರ್​ ಕುಡಿಸುತ್ತಿರುವ ಇನ್​ಸ್ಟಾಗ್ರಾಂ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಈ ಸಂಗತಿ ಪೀಪಲ್​ ಫಾರ್​ ದಿ ಎಥಿಕಲ್​ ಟ್ರೀಟ್​ಮೆಂಟ್​ ಆಫ್​ ಅನಿಮಲ್ಸ್​ ಸಂಘಟನೆಯ ಗಮನಕ್ಕೂ ಬಂದಿದ್ದು, ಜುಕರ್​ಬರ್ಗ್​ ವಿರುದ್ಧ ವಾಗ್ದಾಳಿ ನಡೆಸಿದೆ. ಅಮೆರಿಕದ ಕೌಲೋವಾ ರಾಂಚ್ ಏರಿಯಾದಲ್ಲಿ ಜಾನುವಾರುಗಳನ್ನು ಸಾಕುತ್ತಿರುವ ಕುರಿತು ಇತ್ತೀಚೆಗಷ್ಟೇ ಜುಕರ್​ಬರ್ಗ್​ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡಿದ್ದರು. ಹಸುಗಳಿಗೆ ಮಕಾಡಾಮಿಯಾ ಬೀಜಗಳು ಮತ್ತು ಬಿಯರ್​ ಕುಡಿಸುತ್ತಿರುವ ದೃಶ್ಯಗಳಿದ್ದವು. ಈ ಫೋಟೋಗಳು ತಮ್ಮ ಗಮನಕ್ಕೆ ಬರುತ್ತಿದ್ದಂತೆ ಜುಕರ್​ ಬರ್ಗ್​ ನಡೆಯನ್ನು PETA ಖಂಡಿಸಿದೆ. ಪ್ರಾಣಿಗಳಿಗೆ ಉತ್ಪಾದಕವಲ್ಲದ ಊಟವನ್ನು ನೀಡುತ್ತಿರುವುದನ್ನು ಟೀಕಿಸಿದೆ. ಟೆಕ್ನಾಲಜಿಗೆ ಮಾತ್ರ ನೀವು ಸೀಮಿತರಾಗಿ, ಪ್ರಾಣಿಗಳನ್ನು ಒಳಗೊಂಡಿರುವ ಯಾವುದೇ ಪ್ರಾಜೆಕ್ಟ್​ನಲ್ಲಿ ನಿಮ್ಮ ತೊಡಗಿಸಕೊಳ್ಳಬೇಡಿ ಎಂದು ಜುಕರ್​ಬರ್ಗ್​ಗೆ PETA ಕೇಳಿದೆ. ಪ್ರಾಣಿಗಳನ್ನು ಕೊಲ್ಲುವ ಈ ಪ್ರಾಜೆಕ್ಟ್​, ನಮ್ಮ ಗ್ರಹ ಮತ್ತು ನಿಮ್ಮ ಮಕ್ಕಳಿಗೆ ಆಘಾತಕಾರಿಯಾಗಿದೆ ಎಂದು PETA ಕಳವಳ ವ್ಯಕ್ತಪಡಿಸಿದೆ.

Read More

ರಾಗಿ ಎಲ್ಲರಿಗೂ ಅಭ್ಯಾಸ ಇರುವುದಿಲ್ಲ ಎಂಬುದು ನಿಜ. ಆದರೆ ಚಳಿಗಾಲದ ದಿನಗಳಲ್ಲಿ ಈ ಅಭ್ಯಾಸ ರೂಢಿಸಿಕೊಂಡರೆ ಲಾಭವಿದೆ ಎನ್ನುತ್ತಾರೆ ಆಹಾರ ತಜ್ಞರು. ಏನದು? ಚಳಿಗಾಲದಲ್ಲಿ ನಾವು ಪರಂಪರಾಗತವಾಗಿ ಸೇವಿಸುವ ಆಹಾರಗಳನ್ನು ಗಮನಿಸಿ. ಹೆಚ್ಚಿನವು ದೇಹವನ್ನು ಬೆಚ್ಚಗೆ ಇಡುವಂಥವು; ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂಥವು; ಮೂಳೆ ಗಟ್ಟಿ ಮಾಡುವಂಥ ಕ್ಯಾಲ್ಶಿಯಂ ಇರುವಂಥವು- ಇಂಥ ಆಹಾರಗಳೇ ಹೆಚ್ಚು. ರಾಗಿಯೂ ದೇಹಧರ್ಮಕ್ಕೆ ಅನುಸಾರವಾಗಿ ಶರೀರವನ್ನು ಬೆಚ್ಚಗೆ ಇರಿಸುತ್ತದೆ. ಹೊರಗಿನ ಚಳಿಗೆ ಅನುಸಾರವಾಗಿ ದೇಹದ ತಾಪಮಾನವನ್ನು ಹೆಚ್ಚಿಸುತ್ತದೆ. ಚಳಿಗಾಲ ಬರುತ್ತಿದ್ದಂತೆ ಕೆಲವೊಮ್ಮೆ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಸಮಸ್ಯೆಯಾಗಬಹುದು. ಚಳಿಗಾಲಕ್ಕೂ ಮಧುಮೇಹಕ್ಕೂ ನೇರ ನಂಟು ಇಲ್ಲದಿದ್ದರೂ, ಅನ್ಯ ಕಾರಣಗಳಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿಯಮಿತವಾಗಿ ರಾಗಿ ಸೇವನೆ ಇದಕ್ಕೆ ನೆರವು ನೀಡುತ್ತದೆ. ಇದರಲ್ಲಿರುವ ಗ್ಲೈಸೆಮಿಕ್‌ ಸೂಚಿ ಕಡಿಮೆ. ಹಾಗಾಗಿ ಇದನ್ನು ತಿಂದ ತಕ್ಷಣ ರಕ್ತದಲ್ಲಿ ಸಕ್ಕರೆಯಂಶ ಧಿಡೀರ್‌ ಏರಿಳಿತ ಆಗುವುದಿಲ್ಲ. ಇದರಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ಹಲವು ರೀತಿಯಲ್ಲಿ ದೇಹವನ್ನು ಗಟ್ಟಿ ಮಾಡುತ್ತವೆ. ಹಲವು ರೀತಿಯ ಜೀವಸತ್ವಗಳಿದ್ದು, ಚರ್ಮ ಮತ್ತು…

Read More

ಸಮಾನ್ಯವಾಗಿ ಕೆಲವರಿಗೆ ಹಗಲಿನಲ್ಲಿಯೂ ನಿದ್ರೆ ಬರುತ್ತದೆ. ಅವರಿಗೆ ಇದರಿಂದ ಯಾವುದೇ ಕೆಲಸ ಮಾಡಲು ಉತ್ಸಾಹ ಇರುವುದಿಲ್ಲ. ಹಾಗಾಗಿ ಈ ನಿದ್ರೆಯ ಮಂಪರನ್ನು ನಿವಾರಿಸಲು ಈ ಆಹಾರವನ್ನು ಸೇವಿಸಬೇಡಿ. ಹೆಚ್ಚಿನ ಸಕ್ಕರೆ ಆಹಾರವನ್ನು ಸೇವಿಸಬೇಡಿ. ಇದರಿಂದ ಶಕ್ತಿ ತ್ವರಿತವಾಗಿ ಸಿಗುತ್ತದೆ ಆದರೆ ತಕ್ಷಣ ಕಣ್ಮರೆಯಾಗುತ್ತದೆ. ಇದರಿಂದ ನಿಮಗೆ ನಿದ್ರೆಯ ಮಂಪರು ಹೆಚ್ಚಾಗುತ್ತದೆ. ಸಂಸ್ಕರಿಸಿದ ಬ್ರೆಡ್ ಮತ್ತು ಧಾನ್ಯಗಳನ್ನು ಸೇವಿಸಬೇಡಿ. ಇದರಲ್ಲಿ ನಾರಿನಾಂಶ ಕಡಿಮೆ ಇರುತ್ತದೆ. ಇದು ದೇಹಕ್ಕೆ ಶಕ್ತಿಯನ್ನು ಕೊಡುವುದಿಲ್ಲ. ಇದರಿಂದ ನಿಮಗೆ ಆಯಾಸವಾಗಿ ನಿದ್ರೆಗೆ ಜಾರುತ್ತೀರಿ. ಅಧಿಕ ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸಬೇಡಿ. ಇದನ್ನು ಜೀರ್ಣಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. ಇದರಿಂದ ದೇಹ ದಣಿಯುತ್ತದೆ. ಇದರಿಂದ ನಿಮಗೆ ನಿದ್ರೆ ಬರುತ್ತದೆ. ಹಾಗೇ ಎನರ್ಜಿ ಡ್ರಿಂಕ್ ಗಳನ್ನು ಕುಡಿಯಬೇಡಿ. ಇವು ತ್ವರಿತ ಶಕ್ತಿಯನ್ನು ಒದಗಿಸಿ ನಂತರ ನೀವು ಆಯಾಸಗೊಳ್ಳುವಂತೆ ಮಾಡುತ್ತದೆ. ಇದರಿಂದ ನಿಮಗೆ ನಿದ್ರೆ ಬರುತ್ತದೆ.

Read More

ಕೆಎಲ್ ರಾಹುಲ್ ಅವರನ್ನು ಟೆಸ್ಟ್ ಕೀಪರ್ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಎರಡು ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲದೆ ವಿಕೆಟ್ ಕೀಪಿಂಗ್ ನಲ್ಲಿಯೂ ಕೆಎಲ್ ರಾಹುಲ್ ಅವರು ತಮ್ಮ ಕೌಶಲದಿಂದ ಮಿಂಚಿದ್ದರು. ಆದರೆ ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಾಹುಲ್ ವಿಕೆಟ್ ಕೀಪಿಂಗ್ ನಡೆಸುವುದಿಲ್ಲ. ಅವರು ಸ್ಪೆಷಲಿಸ್ಟ್ ಬ್ಯಾಟರ್ ಆಗಿ ತಂಡದಲ್ಲಿ ಆಡಲಿದ್ದಾರೆ ಎನ್ನಲಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಮತ್ತು ತಂಡದ ಮ್ಯಾನೇಜ್ ಮೆಂಟ್ ಮುಂಬರುವ ಸರಣಿಯಲ್ಲಿ ತಜ್ಞ ವಿಕೆಟ್-ಕೀಪರ್ ಕೆಎಸ್ ಭರತ್ ಅವರತ್ತ ಎದುರು ನೋಡುತ್ತಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಕೆಎಸ್ ಭರತ್ ಮತ್ತು ಧ್ರುವ್ ಜುರೆಲ್ ಅವರನ್ನು ವಿಕೆಟ್-ಕೀಪರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಜುರೆಲ್ ಅವರು ಇದೇ ಮೊದಲ ಬಾರಿಗೆ ಟೆಸ್ಟ್ ಕರೆ ಪಡೆದಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಸ್ಪಿನ್ ಸ್ನೇಹಿ ತವರು…

Read More

ನವದೆಹಲಿ: ರಾಮಮಂದಿರದಲ್ಲಿರುವ (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆಗೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದೆ. ವಿರಾಟ್ ಕೊಹ್ಲಿಯ (Virat Kohli) ಬಳಿಕ ಇದೀಗ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಅವರಿಗೂ ಅಯೋಧ್ಯೆಯ (Ayodhya) ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದ ಉಸ್ತುವಾರಿಯನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನೋಡಿಕೊಳ್ಳುತ್ತಿದೆ. ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಕೇವಲ 9 ದಿನಗಳು ಉಳಿದಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ವಿಶೇಷ ಅತಿಥಿಗಳಿಗೆ ಉಡುಗೊರೆಗಳನ್ನು ಒಳಗೊಂಡಂತೆ ಅವರಿಗೆ ಬೇಕಾದ ಸಕಲ ವ್ಯವಸ್ಥೆಯನ್ನು ಟ್ರಸ್ಟ್ ಮಾಡುತ್ತಿದೆ. https://ainlivenews.com/all-the-problems-in-your-family-are-solved-with-salt/ ವಿಶೇಷ ಅತಿಥಿಗಳಿಗೆ ನೀಡಲಾಗುವ ಉಡುಗೊರೆಗಳು ದೇವಾಲಯದ ಶಂಕುಸ್ಥಾಪನೆಯ ಸಮಯದಲ್ಲಿ ತೆಗೆದ ಮಣ್ಣನ್ನು (ರಾಮ್‌ರಾಜ್) ಒಳಗೊಂಡಿದೆ. ಅಲ್ಲದೇ ಕಾರ್ಯಕ್ರಮದ ಅಂಗವಾಗಿ ಸಮಾರಂಭದ ದಿನದಂದು ಅತಿಥಿಗಳಿಗೆ ವಿಶೇಷವಾಗಿ ದೇಶಿ ತುಪ್ಪದಿಂದ ತಯಾರಿಸಲಾಗುವ ಮೋತಿಚೂರು ಲಡ್ಡನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ.

Read More

ಬೆಂಗಳೂರು: ರಾಜ್ಯದಲ್ಲಿ ರಾಮ ಮಂದಿರದ ರಾಜಕೀಯ ವಾಕ್ಸಮರದ ಕಾವು ಜೋರಾಗ್ತಿದೆ, ಸಂಸದ ಅನಂತ್ ಕುಮಾರ್ ಹೆಗಡೆ ಸಿಎಂ ಸಿದ್ದರಾಮಯ್ಯ ವಿರುದ್ಧ ಆಡಿದ್ದ ಮಾತು ವಿವಾದದ ಕಿಡಿ ಹೊತ್ತಿಸಿದೆ. ಹೆಗಡೆ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕೆರಳಿ ಕೆಂಡವಾಗಿದ್ದು ವಾಗ್ದಾಳಿ ನಡೆಸ್ತಿದ್ದಾರೆ. ಮಾಜಿ ಸಚಿವ ಈಶ್ವರಪ್ಪ ಮಾತ್ರ ಹೆಗಡೆ‌ ಬೆಂಬಲಕ್ಕೆ ನಿಂತಿದ್ರೆ ಇನ್ನುಳಿದ ಕೇಸರಿ ನಾಯಕರು ನೋ ರಿಯಾಕ್ಷನ್ ಅಂತಿದ್ದಾರೆ. ಈ ಮಧ್ಯೆ ಬಿಜೆಪಿ ನಾಯಕರು‌ ಮೋದಿ ಕೊಟ್ಟ ದೇವಸ್ಥಾನ ಸ್ವಚ್ಛತಾ ಅಭಿಯಾನದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.. ರಾಜ್ಯದಲ್ಲಿ ರಾಮ ಮಂದಿರ ಉದ್ಘಾಟನಾ ರಾಜಕೀಯದ ಕಾವು ಅದ್ಯಾಕೊ ತಣ್ಣಗಾಗುವಂತೆ ಕಾಣ್ತಿಲ್ಲ, ನೆನ್ನೆ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಸಿಎಂ ಸಿದ್ದರಾಮಯ್ಯರ ವಿರುದ್ಧ ಮಾತನಾಡಿ ಹೊತ್ತಿಸಿದ ವಿವಾದದ ಕಾವು ಜೋರಾಗ್ತಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟ ದೇವಸ್ಥಾನ ಸ್ವಚ್ಚತಾ ಅಭಿಯಾನದಲ್ಲಿ ಬಿಜೆಪಿ ನಾಯಕರು ಬ್ಯುಸಿಯಾಗಿದ್ದು ವಿಪಕ್ಷ ನಾಯಕ ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ‌ ಸೇರಿದಂತೆ ಸಂಸದರು, ಶಾಸಕರು ಸೇರದಂತೆ ಕೇಸರಿ ನಾಯಕರು ತಮ್ಮ ಕ್ಷೇತ್ರದಲ್ಲಿ…

Read More

ನೀವು ಇಲ್ಲಿಯವರೆಗೆ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಸ್ಮಾರ್ಟ್​ಫೋನ್​ಗಳನ್ನು ಬಳಸಿರಬಹುದು ಅಥವಾ ನೋಡಿರಬಹುದು. ಆದರೆ, ನೀವು ಬೆರಳಿನ ಗಾತ್ರದ ಫೋನ್ ಬಳಸಿದ್ದೀರಾ? ಅಥವಾ ಎಲ್ಲಾದರು ನೋಡಿದ್ದೀರಾ?. ನಾವಿಲ್ಲ ಅತಿ ಚಿಕ್ಕ ಗಾತ್ರದ ಕೆಲವು ಫೋನ್‌ಗಳ ಬಗ್ಗೆ ಹೇಳುತ್ತೇವೆ. ಅಚ್ಚರಿ ವಿಷಯವೆಂದರೆ ಈ ಫೋನ್ ಕೇವಲ ಆಟಿಕೆ ಅಲ್ಲ, ಇದರ ಮೂಲಕ ಕರೆಗಳನ್ನು ಮಾಡಬಹುದು ಮತ್ತು ಸ್ವೀಕರಿಸಬಹುದು. ಈ ಫೋನ್‌ನಲ್ಲಿ ನೀವು ಮಾಮೂಲಿ ಫೋನ್‌ನಲ್ಲಿರುವ ಎಲ್ಲಾ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತೀರಿ. ಮಾರುಕಟ್ಟೆಯಲ್ಲಿ ತಮ್ಮ ಚಿಕ್ಕ ಫೋನ್‌ಗಳನ್ನು ಬಿಡುಗಡೆ ಮಾಡಿರುವ ಹಲವು ಬ್ರಾಂಡ್‌ಗಳು ಇವೆ. ಈ ಬೆರಳು ಗಾತ್ರದ ಫೋನ್‌ಗಳು ನಿಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬಲ್ಲವು. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ನೀವು ಈ ಫೋನ್‌ಗಳನ್ನು ರಿಯಾಯಿತಿಯೊಂದಿಗೆ ಖರೀದಿಸಬಹುದು. ಈ ಸಿಂಗಲ್ ಸಿಮ್ ಫೋನ್‌ನಲ್ಲಿ ನೀವು 0.66 ಇಂಚಿನ ಡಿಸ್​ಪ್ಲೇಯನ್ನು ಪಡೆಯುತ್ತೀರಿ. ಒಬ್ಬರು ಬ್ಲೂಟೂತ್ ಸಂಪರ್ಕ ವೈಶಿಷ್ಟ್ಯ ಮತ್ತು ವೈರ್‌ಲೆಸ್ ಎಫ್‌ಎಂ ಅನ್ನು ಸಹ ಆನಂದಿಸಬಹುದು. ನೀವು ಅಮೆಜಾನ್​ನಲ್ಲಿ 300mah ಬ್ಯಾಟರಿ ಹೊಂದಿರುವ ಈ ಫೋನ್…

Read More

ಬೆಂಗಳೂರು: ರಾಮಮಂದಿರದ ಬಗ್ಗೆ ಒಳ್ಳೆಯ ಮಾತನಾಡದಿದ್ದರೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗುವ ಭಯ ಎಂದು ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ. ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಹೇಳಿದರೆ ಮಾತ್ರ ರಾಮ ಮಂದಿರಕ್ಕೆ ಹೋಗುತ್ತೇವೆ ಎಂಬ ಗೃಹ ಸಚಿವ ಪರಮೇಶ್ವರ್‌ ಹೇಳಿಕೆಗೆ ರಾಮಮಂದಿರದ ಬಗ್ಗೆ ಒಳ್ಳೆಯ ಮಾತನಾಡದಿದ್ದರೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗುವ ಭಯ ಎಂದು ವ್ಯಂಗ್ಯವಾಡಿದ್ದಾರೆ. https://ainlivenews.com/all-the-problems-in-your-family-are-solved-with-salt/ ರಾಮಮಂದಿರದ ಬಗ್ಗೆ ಒಳ್ಳೆಯ ಮಾತಾಡಿದರೆ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಕುರ್ಚಿಗೆ ಕುತ್ತು ಬರುವ ಭಯ. ಒಟ್ಟಿನಲ್ಲಿ ಎಡಬಿಡಂಗಿ ಕಾಂಗ್ರೆಸ್‌ ನಾಯಕರ ಪಾಡು ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ ಎಂದು ಕಾಲೆಳೆದಿದ್ದಾರೆ.

Read More