ಸೀತಾಫಲದಿಂದ ಮಾಡಲಾಗುವ ಆರೋಗ್ಯಕರ ಸ್ಮೂದಿ ಬಾಯಾರಿಕೆಯನ್ನು ತಣಿಸುತ್ತದೆ. ಶುಂಠಿ, ಬಾದಾಮಿಯನ್ನು ಸೇರಿಸಿ ಮಾಡಲಾಗುವ ಸೀತಾಫಲ ಸ್ಮೂದಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಬಹಳಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಈ ನವರಾತ್ರಿ ಸಂದರ್ಭದಲ್ಲಿ ಸೀತಾಫಲದ ಸ್ಮೂದಿಯನ್ನು ನೀವು ಕೂಡಾ ತಯಾರಿಸಿ, ಸವಿದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಬೇಕಾಗುವ ಪದಾರ್ಥಗಳು: ಬಾದಾಮಿ ಹಾಲು – 1 ಕಪ್ ಸೀತಾಫಲದ ತಿರುಳು – 1 ಕಪ್ ಕೊಚ್ಚಿದ ಶುಂಠಿ – ಅರ್ಧ ಟೀಸ್ಪೂನ್ ಜೇನುತುಪ್ಪ – 1 ಟೀಸ್ಪೂನ್ ಬಾದಾಮಿ ಚೂರುಗಳು – 1 ಟೀಸ್ಪೂನ್ ಏಲಕ್ಕಿ ಪುಡಿ – 1 ಚಿಟಿಕೆ ಮಾಡುವ ವಿಧಾನ: * ಮೊದಲಿಗೆ ಬಾದಾಮಿ ಚೂರುಗಳನ್ನು ಪೂರ್ವಭಾವಿಯಾಗಿ ಕಾಯಿಸಲ್ಪಟ್ಟ ಓವನ್ನಲ್ಲಿ ಸುಮಾರು 5 ನಿಮಿಷಗಳ ಕಾಲ 150 ಡಿಗ್ರಿ ತಾಪದಲ್ಲಿ ಹುರಿದುಕೊಳ್ಳಿ. * ಒಂದು ಮಿಕ್ಸರ್ ಜಾರ್ನಲ್ಲಿ ಹುರಿದ ಬಾದಾಮಿ ಚೂರುಗಳು, ಕೊಚ್ಚಿದ ಶುಂಠಿ, ಸೀತಾಫಲ ತಿರುಳು, ಬಾದಾಮಿ ಹಾಲು, ಜೇನುತುಪ್ಪ ಮತ್ತು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ. ಅದನ್ನು…
Author: AIN Author
ಬೆಂಗಳೂರು:- ರಾಜ್ಯದ ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕರಾಗಿ ಎಸ್. ದತ್ತಾತ್ರಿ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೇಶ್ ಅಂಬೆಕಲ್ಲು, ಸಹ ಕಾರ್ಯದರ್ಶಿಯಾಗಿ ಬಿ.ಹೆಚ್. ವಿಶ್ವನಾಥ್ ನೇಮಕಗೊಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟಿ ► ದಕ್ಷಿಣ ಕನ್ನಡ- ಸತೀಶ್ ಕುಂಪಲ ► ಉಡುಪಿ- ಕಿಶೋರ್ ಕುಂದಾಪುರ ► ಮೈಸೂರು ನಗರ- ಎಲ್. ನಾಗೇಂದ್ರ ► ಮೈಸೂರು ಗ್ರಾಮಾಂತರ- ಎಲ್.ಆರ್. ಮಹದೇವಸ್ವಾಮಿ ► ಚಾಮರಾಜನಗರ- ಸಿ.ಎಸ್. ನಿರಂಜನ್ ಕುಮಾರ್ ► ಹಾಸನ- ಸಿದ್ದೇಶ್ ನಾಗೇಂದ್ರ ಮೈಸೂರು ಗ್ರಾಮಾಂತರ- ಎಲ್.ಆರ್. ಮಹದೇವಸ್ವಾಮಿ ► ಚಾಮರಾಜನಗರ- ಸಿ.ಎಸ್. ನಿರಂಜನ್ ಕುಮಾರ್ ► ಹಾಸನ- ಸಿದ್ದೇಶ್ ನಾಗೇಂದ್ರ ► ಕೊಡಗು- ರವಿ ಕಾಳಪ್ಪ ► ಚಿಕ್ಕಮಗಳೂರು- ದೇವರಾಜ ಶೆಟ್ಟಿ…
ಈ ವಾರ ಸಂಕ್ರಾಂತಿ ಹಿನ್ನೆಲೆಯಲ್ಲಿ ಬಿಗ್ ಬಾಸ್ ನೀಡಿದ ಟ್ವಿಸ್ಟ್ನಿಂದ ಸ್ಪರ್ಧಿಗಳು ಫುಲ್ ಖುಷಿಯಾಗಿದ್ದಾರೆ. ಯಾಕೆಂದರೆ ಈ ವಾರ ಯಾವುದೇ ಎಲಿಮಿನೇಷನ್ ನಡೆಯದ ಕಾರಣ, ಮನೆಯಲ್ಲಿ ಸಂತು- ಪಂತು ಎಂದು ಕರೆಸಿಕೊಳ್ಳುವ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಸೇಫ್ ಆಗಿದ್ದಾರೆ. ಈ ವಾರ ವಿನಯ್ ಗೌಡ, ತನಿಷಾ ಕುಪ್ಪಂಡ, ಕಾರ್ತಿಕ್, ವರ್ತೂರು ಸಂತೋಷ್, ತುಕಾಲಿ ಸಂತೋಷ್, ನಮ್ರತಾ ಗೌಡ ನಾಮಿನೇಟ್ ಆಗಿದ್ದರು. ಒಬ್ಬೊಬ್ಬರಾಗಿಯೇ ಎಲ್ಲರೂ ಸೇಫ್ ಆದರು. ಆದರೆ ಕೊನೆಗೆ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತು ಮಾತ್ರ ಉಳಿದುಕೊಂಡಿದ್ದರು. ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಎಲಿಮಿನೇಟ್ ಆಗುವುದು ಖಚಿತ ಎನ್ನಲಾಗಿತ್ತು. ಆದರೆ, ಇಬ್ಬರೂ ಸೇಫ್ ಆಗಿದ್ದಾರೆ. ಬಿಗ್ ಬಾಸ್ ಸ್ಪರ್ಧೆಯ ಭಾರಿ ಟಫ್ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ವರ್ತೂರು ಸಂತೋಷ್ (Varthur Santhosh) ಅವರು ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಉಳಿಯಲಿದ್ದಾರೆಂದು ಬಹುತೇಕರು ಭಾವಿಸಿದ್ದರು. ಆದರೆ, ಈ ವಾರ ಅವರೇ ಮನೆಯಿಂದ ಹೊರ ಬೀಳಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ಊಹೆ…
ಇಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕಳೆದ 2 ದಿನಗಳಿಂದ ಚಿನ್ನದ ಬೆಲೆ ಹೆಚ್ಚಾಗಿತ್ತು. ಆದರೆ ಇಂದು ಏರಿಕೆಯಾಗಿಲ್ಲವಲ್ಲ ಎಂದು ತುಸು ಸಮಾಧಾನ ಎನಿಸಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇತರ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ.. 22 ಕ್ಯಾರೆಟ್ ಚಿನ್ನದ ದರ 1 gram: ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,800 ರೂ. ಆಗಿದೆ. ನಿನ್ನೆ ಕೂಡ ಇಷ್ಟೇ ಇತ್ತು. ಮೊನ್ನೆ 5,770 ರೂ. ಇತ್ತು. 8 gram: ಇಂದಿನ 8 ಗ್ರಾಂ ಚಿನ್ನದ ಬೆಲೆ 46,400 ರೂ ಇದೆ. ಮೊನ್ನೆ 46,160 ರೂ ಇತ್ತು. 10 gram: ಹತ್ತು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 58,000 ರೂ. ನೀಡಬೇಕು. ಮೊನ್ನೆ ಇದರ ಬೆಲೆ 57,700 ರೂ ಇತ್ತು. 100 gram: ನೂರು ಗ್ರಾಂ ಚಿನ್ನಕ್ಕೆ 5,80,000 ರೂ. ಆಗಿದೆ. ಮೊನ್ನೆ 5,77,000 ರೂ. ಇತ್ತು. 24 ಕ್ಯಾರೆಟ್ ಗೋಲ್ಡ್ ದರ 1 gram:…
ಪಾಕಿಸ್ತಾನ: ಪಾಕಿಸ್ತಾನದ ಕರಾಚಿಯಲ್ಲಿರುವ ಯುಕೆ ವೀಸಾ ಕಚೇರಿಯ ಟಿವಿ ಸ್ಕ್ರೀನ್ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾಗಿದ್ದು, ಇದರಿಂದ ಕಚೇರಿಯಲ್ಲಿ ಕ್ಯೂನಲ್ಲಿ ನಿಂತಿದ್ದ ಜನತೆ ಆಘಾತಕ್ಕೊಳಗಾಗಿದ್ದಾರೆ. ಪಾಕ್ನ ಯುಕೆ ವೀಸಾ ಕಚೇರಿಯ ಅಧಿಕೃತ ಆವರಣದಲ್ಲಿರುವ ಟಿವಿ ಪರದೆಯೊಂದರಲ್ಲಿ ಇದು ಪ್ರಸಾರವಾಗಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಸಾ ಕಚೇರಿಯಲ್ಲಿ ಜನರು ತಮ್ಮ ದಾಖಲೆಗಳೊಂದಿಗೆ ಸರತಿ ಸಾಲಿನಲ್ಲಿ ನಿಂತಿರುವಾಗ ಗೆರ್ರಿಯ ವೀಸಾ ಕೇಂದ್ರ ಆಕಸ್ಮಿಕವಾಗಿ ದೊಡ್ಡ ಪರದೆಯ ಮೇಲೆ ವಯಸ್ಕರ ವಿಡಿಯೋ ಪ್ರದರ್ಶಿಸಿದೆ. ಈ ದೃಶ್ಯ ಕ್ಯಾಮರಾದಲ್ಲಿ ದಾಖಲಾಗಿದ್ದು, ದೃಶ್ಯಾವಳಿ ಇದೀಗ ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ. ಕರಾಚಿಯ ವೀಸಾ ಕಚೇರಿಯಲ್ಲಿದ್ದ ಜನರು ತಮ್ಮ ಪ್ರಯಾಣದ ಕಾರ್ಯವಿಧಾನವನ್ನು ಮಾಡಲು ಆಗಮಿಸಿದ ದೃಶ್ಯಗಳನ್ನು ವಿಡಿಯೋ ಆರಂಭದಲ್ಲಿ ತೋರಿಸುತ್ತದೆ. ಬಳಿಕ, ಸಾರ್ವಜನಿಕ ದೂರದರ್ಶನದಲ್ಲಿ ಬರುತ್ತಿರುವ ವಿಡಿಯೋವನ್ನು ಹೈಲೈಟ್ ಮಾಡಲು ಕ್ಯಾಮರಾ ಜೂಮ್ ಮಾಡಿದೆ. ಅಲ್ಲಿ ತಪ್ಪಾಗಿ ದೊಡ್ಡ ಸ್ಕ್ರೀನ್ ಮೇಲೆ ಪೋರ್ನ್ ವಿಡಿಯೋ ತೋರಿಸಿದೆ. ಮಹಿಳೆಯರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಜನರ ಸಮ್ಮುಖದಲ್ಲಿ…
ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಕನ್ಸಲ್ಟೆಂಟ್- COO ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಜನವರಿ 20, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಹಾಕಬೇಕು. ವಿದ್ಯಾರ್ಹತೆ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಬ್ಲಿಕ್ ಪಾಲಿಸಿ & ಮ್ಯಾನೇಜ್ಮೆಂಟ್/ ಎಕನಾಮಿಕ್ಸ್/ ಅಡ್ಮಿನಿಸ್ಟ್ರೇಶನ್ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 55 ವರ್ಷ ಮೀರಿರಬಾರದು. ವೇತನ: ವಾರ್ಷಿಕ ಪ್ಯಾಕೇಜ್ 25 ಲಕ್ಷ ಉದ್ಯೋಗದ ಸ್ಥಳ: ಬೆಂಗಳೂರು ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ಆಯ್ಕೆ ಪ್ರಕ್ರಿಯೆ: ಲಿಖಿತ…
ಬೆನ್ನು, ಸೊಂಟು ನೋವಿನಿಂದ ಹಿಡಿದು ದೃಷ್ಟಿ ಸಮಸ್ಯೆ ಸೇರಿದಂತೆ ಕಾಲು ಊದಿಕೊಳ್ಳುವುದು ಕೂಡ ಇದ್ರಲ್ಲಿ ಸೇರಿದೆ. ಒಂದೇ ಭಂಗಿಯಲ್ಲಿ ಗಂಟಗಟ್ಟಲ ಕುಳಿತಾಗ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಇದ್ರಿಂದ ಕಾಲು ಊದಿಕೊಳ್ಳುತ್ತದೆ. ಬರೀ ಇದೊಂದೇ ಕಾರಣಕ್ಕಲ್ಲ ಕಾಲು ಊದಿಕೊಳ್ಳಲು ಇನ್ನೂ ಅನೇಕ ಕಾರಣವಿದೆ. ತುಂಬಾ ಸಮಯ ಟ್ರಾವೆಲ್ ಮಾಡಿದ್ರೆ, ಎತ್ತರದ ಪ್ರದೇಶವನ್ನು ಹತ್ತಿದ್ರೆ ಇಲ್ಲವೆ ಸಾಕಷ್ಟು ಓಡಾಟ ಕೂಡ ಪಾದದ ಊತ ಹಾಗೂ ನೋವಿಗೆ ಕಾರಣವಾಗುತ್ತದೆ. ಈ ನೋವು ಒಮ್ಮೊಮ್ಮೆ ವಿಪರೀತವಾಗಿರುತ್ತದೆ. ಅದನ್ನು ಸಹಿಸಲು ಕಷ್ಟವೆನ್ನುವಂತಾಗುತ್ತದೆ. ಮಾರುಕಟ್ಟೆಯಲ್ಲಿ ನೋವಿಗೆ ಸಾಕಷ್ಟು ಮಾತ್ರೆಗಳಿವೆ. ಆದ್ರೆ ಈ ಮಾತ್ರೆಗಳ ಸೇವನೆಯಿಂದ ಆರೋಗ್ಯ ಸುಧಾರಿಸುವ ಬದಲು ಹದಗೆಡುವುದು ಹೆಚ್ಚು. ಹಾಗಾಗಿ ಪಾದದ ಊತ ಹಾಗೂ ನೋವಿಗೆ ಕೆಲ ಮನೆ ಮದ್ದುಗಳನ್ನು ಮಾಡಬಹುದು. ಪಾದದ ಊತಕ್ಕೆ ಮನೆ ಮದ್ದು : ಐಸ್ ಪ್ಯಾಕ್ ನಲ್ಲಿದೆ ನೋವಿಗೆ ಪರಿಹಾರ : ಕಾಲುಗಳ ಊತ ವಿಪರೀತವಾಗಿದ್ರೆ ನೀವು ಐಸ್ ಪ್ಯಾಕ್ ಕೂಡ ಬಳಸಬಹುದು. ಐಸ್ ಪ್ಯಾಕ್ಗಳನ್ನು ನೀವು ನೇರವಾಗಿ ಊದಿರುವ ಜಾಗಕ್ಕೆ ಇಡಲು ಸಾಧ್ಯವಿಲ್ಲ.…
ಸಿಎಜಿ ಅಧಿಕೃತ ಅಧಿಸೂಚನೆಯ ಮೂಲಕ ಆಡಿಟರ್, ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಭಾರತ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 25-Jan-2024 ರಂದು ಅಥವಾ ಮೊದಲು ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಸಿಎಜಿ ಹುದ್ದೆಯ ಅಧಿಸೂಚನೆ ಹೆಸರು: ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಹುದ್ದೆಗಳ ಸಂಖ್ಯೆ: 211 ಉದ್ಯೋಗ ಸ್ಥಳ: ಭಾರತ ಹುದ್ದೆಯ ಹೆಸರು: ಆಡಿಟರ್, ಕ್ಲರ್ಕ್ ವೇತನ: ರೂ.5200-20200/- ಪ್ರತಿ ತಿಂಗಳು CAG ಹುದ್ದೆಯ ವಿವರಗಳು ಲೆಕ್ಕ ಪರಿಶೋಧಕ/ಲೆಕ್ಕಗಾರ: 99 ಗುಮಾಸ್ತ/DEO: 112 CAG ನೇಮಕಾತಿ 2024 ಅರ್ಹತಾ ವಿವರಗಳು ಆಡಿಟರ್/ಅಕೌಂಟೆಂಟ್: ಪದವಿ ಕ್ಲರ್ಕ್/ಡಿಇಒ: 12ನೇ ತರಗತಿ ವಯಸ್ಸಿನ ಮಿತಿ: ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 27 ವರ್ಷಗಳನ್ನು ಹೊಂದಿರಬೇಕು ವಯೋಮಿತಿ ಸಡಿಲಿಕೆ: ಕ್ರೀಡಾಪಟು (UR) ಅಭ್ಯರ್ಥಿಗಳು:…
ಸ್ಟಾರ್ ಕಲಾವಿದರ ಪೈಕಿ ಬಾಲಿವುಡ್ನ ಹಾಟ್ ನಟಿ ಕಂಗನಾ ರಣಾವತ್ ಕೂಡ ಒಬ್ಬರು. ಕೆಲವು ದಿನಗಳ ಹಿಂದೆಯಷ್ಟೇ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡುವ ಎಂದು ಹೇಳಿದ್ದ ಕಂಗನಾ, ತಮ್ಮ ಹೇಳಿಕೆಗೆ ಪುಷ್ಟಿ ನೀಡುವಂತೆ ಅನಾಮಧೇಯ ವ್ಯಕ್ತಿಯ ಕೈಹಿಡಿದು, ಜತೆಗಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸದ್ಯ ಈ ಎಲ್ಲಾ ವದಂತಿಗಳಿಗೆ ಇದೀಗ ಒಂದೇ ಹೇಳಿಕೆಯಲ್ಲಿ ಉತ್ತರ ಕೊಟ್ಟಿದ್ದಾರೆ. ನೀವು ಫೋಟೋದಲ್ಲಿ ನೋಡಿದ ವ್ಯಕ್ತಿ ನನ್ನ ಬಾಯ್ಫ್ರೆಂಡ್ ಅಲ್ಲ! ಆತ ನನ್ನ ಹೇರ್ ಸ್ಟೈಲಿಸ್ಟ್. ನಿನ್ನೆಯಿಂದ ನನಗೆ ಹಲವಾರು ದೂರವಾಣಿ ಕರೆ ಮತ್ತು ಸಂದೇಶಗಳು ಬಂದಿವೆ. ಎಲ್ಲರೂ ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗಳನೇ ಕೇಳಿದ್ದಾರೆ. ನಾನು ಆಗಾಗ್ಗೆ ಸಲೂನ್ಗೆ ಹೋಗ್ತೀನಿ, ಇದನ್ನು ಬೇರೆ ರೀತಿ ತೋರಿಸಲಾಗುತ್ತಿದೆ. ಒಬ್ಬ ಹುಡುಗ ಮತ್ತು ಹುಡುಗಿ ಒಟ್ಟಿಗೆ ಹೊರಗೆ ಓಡಾಡಿದರೆ ಅವರು ಸಹೋದ್ಯೋಗಿಗಳು, ಸ್ನೇಹಿತರು ಆಗಿರಬಹುದು. ಅದನ್ನು ತಿಳಿಯದೆ ಅನ್ಯರ್ಥಗಳನ್ನು ಕಲ್ಪಿಸಬಾರದು’ ಎಂದು ಹೇಳಿದ್ದಾರೆ
ಮಕರ ಸಂಕ್ರಾಂತಿ,ಪೊಂಗಲ್ ಸೂರ್ಯೋದಯ: 06:53, ಸೂರ್ಯಾಸ್ತ : 05:57 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯಂ ಮಾಸ, ಶುಕ್ಲ ಪಕ್ಷ, ಉತ್ತರಾಯಣಂ, ಹೇಮಂತ ಋತು, ರಾಹು ಕಾಲ: 04:30 ನಿಂದ 06:00 ತನಕ ಯಮಗಂಡ: 12:00 ನಿಂದ 01:30 ತನಕ ಗುಳಿಕ ಕಾಲ: 03:00 ನಿಂದ 04:30 ತನಕ ಅಮೃತಕಾಲ: ರಾ 10:49 ನಿಂದ ರಾ 12:17 ತನಕ ಅಭಿಜಿತ್ ಮುಹುರ್ತ: ಮ.12:03 ನಿಂದ ಮ.12:47 ತನಕ ಮೇಷ ರಾಶಿ: ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೆ ಸಿಹಿಸುದ್ದಿ, ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ಯಶಸ್ವಿ ಕಾಣುವ ಸೌಭಾಗ್ಯ ಕೂಡಿಬಂದಿದೆ,ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭಫಲವನ್ನು ಖಚಿತವಾಗಿ ಪಡೆದುಕೊಳ್ಳುವಿರಿ. ವ್ಯಾಪಾರ ವಹಿವಾಟದಲ್ಲಿ ಗಣನೀಯ ಏರಿಕೆ. ಭೂಮಿ ಖರೀದಿ ಅಥವಾ ಭೂಮಿ ಮಾರಾಟ ಬಯಸುವರಿಗೆ ಯಶಸ್ಸು. ಮನೆ ಕಟ್ಟಡ ಸುಗಮವಾಗಲಿದೆ. ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ. ಶುಭ ಮಂಗಳ ಕಾರ್ಯ ಜರುಗುವುದು. ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಸಹೋದರ ಸಹೋದರಿಯರ ಮಧ್ಯೆ…