ಬೆಂಗಳೂರು: ಬೆಂಗಳೂರಿನಲ್ಲಿ ಸೈಟ್ ಪಡೆದು, ಮನೆ ಕಟ್ಟಿಸಿಕೊಳ್ಳಬೇಕು ಅನ್ನೋದು ಬಹುತೇಕರ ಕನಸು.ಅದರಲ್ಲೂ ಬಿಡಿಎ ಸೈಟ್ಗಾಗಿ ತುಂಬಾನೇ ಕಸರತ್ತು ಮಾಡ್ತಾರೆ.ಆದ್ರೆ ಹಲವು ದಶಕದಿಂದ ನಿವೇಶನಕ್ಕಾಗಿ ಕಾಯುತ್ತಿರೋ ಮಂದಿಗೆ ಗುಡ್ ನ್ಯೂಸ್ ನೀಡಿದೆ.ಹೌದು ಕೆಂಪೇಗೌಡ ಬಡಾವಣೆ ಬಳಿಕ ಮತ್ತೆ ಮಹಾತ್ವಾಕಾಂಕ್ಷಿ ಕಾರಂತ ಬಡಾವಣೆಯಲ್ಲಿ ಸೈಟು ಹಂಚಿಕೆಗೆ ಬಿಡಿಎ ಮುಂದಾಗಿದೆ. ಇದೇ ತಿಂಗಳು 25 ರಿಂದ ಸೈಟ್ ಪಡೆಯೋಕೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಬಿಡಿಎ ಸೈಟ್ ಅಂದರೆ ಜನ ನಾ ಮುಂದು ತಾ ಮುಂದು ಅಂತ ಬರುತ್ತಾರೆ.ಕೆಂಪೇಗೌಡ ಲೇಔಟ್ ಬಳಿಕ ಇಲ್ಲಿಯವರಿಗೆ ಸೈಟ್ ಹಂಚಿಕೆ ಬಿಡಿಎ ಮಾಡಿರಲಿಲ್ಲ.ಆದ್ರೆ ಇದೀಗ ಬಹುನಿರೀಕ್ಷಿತ ಶಿವರಾಮ ಕಾರಂತ ಬಡಾವಣೆಯಲ್ಲಿ ಮೊದಲ ಹಂತದಲ್ಲಿ ಸಾರ್ವಜನಿಕರಿಗೆ ನಿವೇಶನಗಳನ್ನುಹಂಚಿಕೆಮಾಡಲು ಸಿದ್ದತೆ ನಡೆಸಿದೆ.3546 ಎಕರೆ ಜಾಗದಲ್ಲಿ ಲೇಔಟ್ ನಿರ್ಮಾಣ ಗೊಂಡಿದ್ದು,ಮೂಲಭೌತ ಸೌಕರ್ಯ ಕಲ್ಪಿಸೋ ಕಾರ್ಯ ನಡೆಯುತ್ತಿದೆ.ಈ ವೇಳೆ ಭೂಮಿ ಕೊಟ್ಟ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸೈಟ್ ಹಂಚಿಕೆಗೆ ಬಿಡಿಎ ನೀಡಿದೆ. https://ainlivenews.com/ginger-peel-can-be-easily-peeled-by-simple-tricks/ ಹೌದು.. ಸುಮಾರು ಒಂದೂವರೆ ದಶಕದ ಹಿಂದೆ ಅಂದರೆ 2008 ರಲ್ಲಿ ಡಾ.ಶಿವರಾಮ…
Author: AIN Author
ಅಸ್ಸಾಂ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಆಲ್ರೌಂಡರ್ ರಿಯಾನ್ ಪರಾಗ್ ಅವರು ಒಂದಲ್ಲ ಒಂದು ದಿನ ಭಾರತ ತಂಡಕ್ಕೆ ಆಯ್ಕೆಯಾಗುತ್ತೇನೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ದೇವದರ್ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ಗಳು ಹಾಗೂ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ. ನಂತರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಸತತ 7 ಅರ್ಧಶತಕಗಳನ್ನು ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು. “ನಾನು ನಮ್ಮ ತಂಡದ ಆಟಗಾರರಿಗೆ ಸ್ಪಷ್ಟವಾಗಿ ಒಂದು ವಿಷಯವನ್ನು ತಿಳಿಸಿದ್ದೇನೆ. ಕಳೆದ 5 ಅಥವಾ 10 ವರ್ಷಗಳಿಂದ ಅಸ್ಸಾ ತಂಡ ಯಾವ ಹಾದಿಯಲ್ಲಿ ಆಡಿತ್ತು ಅದನ್ನು ನೀವು ನನ್ನ ನಾಯಕತ್ವದಲ್ಲಿ ಮುಂದುವರಿಸಬಾರದು. ಆಟಗಾರನಾಗಿ ನನ್ನ ಕೆಲಸ ಏನೆಂದರೆ, ರನ್ ಗಳಿಸುವುದು ಹಾಗೂ ತಂಡವನ್ನು ಗೆಲ್ಲಿಸುವುದು,” ಎಂದು ಅಸ್ಸಾಂ ನಾಯಕ ಹೇಳಿದ್ದಾರೆ. ಇದಕ್ಕೆ ನಾನು ಅಂಟಿಕೊಂಡಿದ್ದೇನೆ. ಆದರೆ, ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಅಥವಾ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ನನ್ನದೇ ಒಂದು ನಿರ್ದಿಷ್ಟ ಗುರಿ ಇಲ್ಲ,” ಎಂದು ಯುವ ಬ್ಯಾಟ್ಸ್ಮನ್…
ಬೆಂಗಳೂರು: ನಿರ್ಲಕ್ಷ್ಯ ಇರಬೇಕು ಇಷ್ಟೋದಾ ಈಗಾ..ಜನ ಬ್ಯಾಕ್ ಟು ಬ್ಯಾಕ್ ಬೀದಿಪಾಲಾದ್ರೂ ಎಚ್ಚೆತ್ತುಕೊಂಡಿಲ್ಲ ಅಂದ್ರೆ ಹೇಗೆ,ಹೌದು ಬೆಂಗಳೂರು ನಗರದಲ್ಲಿ ಬೆಸ್ಕಾಂ ಅದಿಕಾರಿಗಳ ನಿರ್ಲಕ್ಷ್ಯ ದಿನೇ ದಿನೇ ಜಾಸ್ತಿಯಾದ್ರೂ ಹೇಳೊರಿಲ್ಲ ಕೇಳೊರಿಲ್ಲ ಅನ್ನೋ ಪರಿಸ್ಥಿತಿ ಇದೆ..ನಗರದೆಲ್ಲಡೆ ಯಮ ಅವತಾರ ತಾಳಿರುವ ಬೆಸ್ಕಾಂ ತಂತಿಗಳು ಪದೇ ಪದೇ ಮುಗ್ಧ ಜೀವಗಳನ್ನು ಬಲಿ ಪಡೆಯುತ್ತಲೇ ಇವೆ. ಕಾಡುಗೋಡಿಯಲ್ಲಿ ಗರ್ಭಿಣಿ ತಾಯಿ ಮತ್ತು 9 ತಿಂಗಳ ಕಂದಮ್ಮನನ್ನು ಬಲಿ ಪಡೆದ್ರೂ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ . ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಹೇಗಿದೆ ಅಂತ ತೋರಿಸುತ್ತೇವೆ ನೋಡಿ ಸರ್ಕಾರೀ ಇಲಾಖೆಗಳು ಜನರನ್ನ ರಕ್ಷಿಸುವ ಕೆಲಸ ಮಾಡಬೇಕು. ಆದ್ರೆ ಬೆಂಗಳೂರು ನಗರದಲ್ಲಿ ವಿವಿಧ ಇಲಾಖೆಗಳು ಜನರ ಜೀವ ತೆಗೆಯುವ ಕೆಲಸ ಮಾಡ್ತಿವೆ. ಒಂದು ಕಡೆ ಬಿಬಿಎಂಪಿ ನಿರ್ಲಕ್ಷ್ಯದಿಂದ ಜನರ ಗುಂಡಿಗಳಿಂದ ಸಾವನ್ನಪುತ್ತಿದ್ರೆ ಮತ್ತೊಂದೆಡೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾದಿಬೀದಿಯಲ್ಲಿ ಜನ ಸಾವನ್ನುಪ್ಪುತ್ತಿದ್ದಾರೆ. ಕಳೆದ ತಿಂಗಳು ಕಾಡುಗೋಡಿ ಬಳಿ ತಾಯಿ- ಮಗು ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ್ರು. ಬಳಿಕ ನಗರದಲ್ಲಿ ಡೇಂಜರ್ ಸ್ಪಾಟ್…
ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಹವಾಮಾನ ಹಾಗು ಮಣ್ಣಿನ ಗುಣ ಒಂದೇ ಆಗಿರುವುದರಿಂದ ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಲು ಕಾರಣವಾಗಿದೆ.. ಮಾನ್ಯ ಶರದ್ ಪವಾರ್ ರವರು ನಾಲ್ಕು ಬಾರಿ ಮಹಾರಾಷ್ಟ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು, ಕೇಂದ್ರದಲ್ಲಿ ರಕ್ಷಣಾ ಮಂತ್ರಿ ಮತ್ತು ಕೃಷಿ ಮಂತ್ರಿಯಂತಹ ಹುದ್ದೆಗಳನ್ನು ನಿರ್ವಹಣೆ ಮಾಡಿದ ಮಹಾನೀಯರು. ಅಲ್ಲದೇ ಅತೀದೊಡ್ಡ ಕ್ರೀಡಾ ಸಂಸ್ಥೆ ಬಿ.ಸಿ.ಸಿ.ಐ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಸದ್ದು ಮಾಡಿದವರು… ಮಹಾರಾಷ್ಟ್ರದ ಬಾರಮತಿಯ ಕೃಷಿ ವಿಜ್ಞಾನ ಕೇಂದ್ರಲ್ಲಿ ಆಯೋಜಿಸಿದ್ದ 2024 ಮೆಗಾ ಕೃಷಿ ಎಕ್ಸ್ಪೋ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಯವರು, ಶರದ್ ಪವಾರ್ ರವರು ಕೇಂದ್ರ ಕೃಷಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಲಾಖೆ ಹಾಗೂ ರೈತಪರ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ ಮಹಾತ್ಮರು. ಇವರು ಕೇಂದ್ರದ ಕೃಷಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇಶಾದ್ಯಂತ 700 ಕ್ಕೂ ಹೆಚ್ಚು ಕೃಷಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಿ ಅದರ ಅಭಿವೃದ್ಧಿಗೆ ಕಾರಣರಾದವರು.. ಇವರ ಅವಧಿಯಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ…
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟವು ಇದೀಗ ಲೈವ್ ಆಗಿದ್ದು, ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಆಳವಾದ ರಿಯಾಯಿತಿಗಳನ್ನು ನೀಡುತ್ತದೆ. ಜನವರಿ 13 ರಂದು ಎಲ್ಲಾ ಗ್ರಾಹಕರಿಗೆ ಮಾರಾಟ ಪ್ರಾರಂಭವಾಯಿತು ಮತ್ತು ಇದೀಗ ಜನವರಿ 19 ರವರೆಗೆ ಅಂದ್ರೆ ಇಂದಿನ ದಿನದವರೆಗೆ ವಿಸ್ತರಿಸಲಾಗಿದೆ. ಎರಡು ದಿನಗಳು ಹೋಗಲು, ನಿಮ್ಮ ಇಚ್ಛೆಯ ಪಟ್ಟಿಯಿಂದ ಉತ್ಪನ್ನಗಳನ್ನು ತೆಗೆದುಕೊಳ್ಳಲು ಇದು ನಿಮಗೆ ಪರಿಪೂರ್ಣ ಅವಕಾಶವಾಗಿದೆ. ಅಮೆಜಾನ್ ಮಾರಾಟವು ಸ್ಮಾರ್ಟ್ಫೋನ್ಗಳು, ಟ್ಯಾಬ್ಲೆಟ್ಗಳು, ಸ್ಮಾರ್ಟ್ವಾಚ್ಗಳು, ದೊಡ್ಡ ಎಲೆಕ್ಟ್ರಿಕಲ್ ಉಪಕರಣಗಳು, ಲ್ಯಾಪ್ಟಾಪ್ಗಳು, ಅಮೆಜಾನ್ ಸಾಧನಗಳು ಮತ್ತು ವಿವಿಧ ಉತ್ಪನ್ನ ವರ್ಗಗಳಲ್ಲಿ ಇತರ ವಸ್ತುಗಳ ಮೇಲೆ ಲಾಭದಾಯಕ ವ್ಯವಹಾರಗಳನ್ನು ತರುತ್ತದೆ. ನಾವು ರೂ. ಅಡಿಯಲ್ಲಿ ಸ್ಮಾರ್ಟ್ ಟಿವಿಗಳಲ್ಲಿ ಉತ್ತಮ ಡೀಲ್ಗಳನ್ನು ಕವರ್ ಮಾಡಿದ್ದೇವೆ. 30,000. ಇಲ್ಲಿ, ನಾವು ರೂ. ಅಡಿಯಲ್ಲಿ ಉತ್ತಮ ಸ್ಮಾರ್ಟ್ ಟಿವಿ ಡೀಲ್ಗಳನ್ನು ನೋಡೋಣ. 20,000. ಅಲ್ಲದೆ, ಸೌಂಡ್ಬಾರ್ಗಳಲ್ಲಿ ರೂ. ಅಡಿಯಲ್ಲಿ ಉತ್ತಮ ಡೀಲ್ಗಳಿಗಾಗಿ ನಮ್ಮ ಆಯ್ಕೆಗಳನ್ನು ಪರಿಶೀಲಿಸಿ. ನಿಮ್ಮ ಸ್ಮಾರ್ಟ್ ಟಿವಿಯೊಂದಿಗೆ ಜೋಡಿಸಲು 10,000. ಆಸಕ್ತ ಶಾಪರ್ಗಳು…
ದೇಹದ ತೂಕ ಇಳಿಸಿಕೊಳ್ಳಲು ನೀವು ಹಲವಾರು ರೀತಿಯ ವ್ಯಾಯಾಮಗಳು ಹಾಗೂ ಆಹಾರ ಕ್ರಮಗಳನ್ನು ಅನುಸರಿಸಿಕೊಂಡು ಹೋಗಿರಬಹುದು. ಆದರೆ ಕೆಲವೊಂದು ಜ್ಯೂಸ್ ಕುಡಿದರೂ ಅದರಿಂದ ದೇಹದ ತೂಕ ಇಳಿಸಿ ಫಿಟ್ ಆಗಿ ಇರಬಹುದು. ಸಂಪೂರ್ಣವಾಗಿ ಕೇವಲ ದ್ರವಾಹಾರ ಸೇವನೆ ಮಾಡಬೇಕು ಎಂದು ನಾವಿಲ್ಲಿ ಹೇಳುತ್ತಿಲ್ಲ. ಆದರೆ ತಾಜಾ ಜ್ಯೂಸ್ ಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ಖಂಡಿತವಾಗಿಯೂ ನಿಮಗೆ ತೂಕ ಇಳಿಸಲು ತುಂಬಾ ಸಹಕಾರಿ ಆಗಿರಲಿದೆ. ಜ್ಯೂಸ್ ಕುಡಿದರೆ ಅದರಿಂದ ಹೆಚ್ಚಿನ ಪ್ರಮಾಣ ಖನಿಜಾಂಶಗಳು, ವಿಟಮಿನ್ ಗಳು ಮತ್ತು ಆಂಟಿಆಕ್ಸಿಡೆಂಟ್ ಗಳು ದೇಹಕ್ಕೆ ಲಭ್ಯವಾಗುವುದು. ಇದು ಚಯಾಪಚಯ ಕ್ರಿಯೆಗೆ ವೇಗ ನೀಡುವ ಕಾರಣದಿಂದಾಗಿ ಅದು ಕ್ಯಾಲರಿ ದಹಿಸಲು ನೆರವಾಗುವುದು. ತೂಕ ಇಳಿಸಿಕೊಳ್ಳುವ ಜ್ಯೂಸ್ ಜ್ಯೂಸ್ ಬಳಸಿಕೊಂಡರೆ ಆಗ ಖಂಡಿತವಾಗಿಯೂ ತೂಕ ಇಳಿಸಬಹುದು ಮತ್ತು ಇದರಿಂದ ಇನ್ನು ಹಲವಾರು ರೀತಿಯ ಆರೋಗ್ಯ ಲಾಭಗಳು ಕೂಡ ಇದೆ. ನೀವಿಲ್ಲಿ ಆರೋಗ್ಯಕಾರಿ ಆಹಾರ ಕ್ರಮ ಪಾಲಿಸಿಕೊಂಡು ಹೋಗುವುದು ಅತೀ ಅಗತ್ಯವಾಗಿರುವುದು. ಯಾವ ಜ್ಯೂಸ್ ಕುಡಿದರೆ ತೂಕ…
ನವದೆಹಲಿ: ವಾಹನಗಳಲ್ಲಿ ಅಳವಡಿಕೆ ಮಾಡಿರುವ ಫಾಸ್ಟ್ ಟ್ಯಾಗ್ ಸಂಬಂಧ ಹೊಸ ಅಪ್ಡೇಟ್ ಒಂದು ಹೊರ ಬಿದ್ದಿದೆ. ಎಲ್ಲ ರೀತಿಯ ಫಾಸ್ಟ್ ಟ್ಯಾಗ್ಗಳ ಕೆವೈಸಿ (KYC) ಆಗಿರಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ. ಜನವರಿ 31ರ ಒಳಗೆ ಫಾಸ್ಟ್ ಟ್ಯಾಗ್ಗಳ ಕೆವೈಸಿ ಪೂರ್ಣಗೊಳಿಸಲು ಡೆಡ್ ಲೈನ್ ನೀಡಲಾಗಿದೆ. ಒಂದು ವೇಳೆ ಜನವರಿ 31ರ ಒಳಗೆ ನಿಮ್ಮ ವಾಹನದ ಫಾಸ್ಟ್ ಟ್ಯಾಗ್ನ ಕೆವೈಸಿ ಪೂರ್ಣಗೊಳಿಸದೇ ಇದ್ದರೆ ಅಂಥಾ ಫಾಸ್ಟ್ ಟ್ಯಾಗ್ಗಳನ್ನು ರದ್ದು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವೇಳೆ ನಿಮ್ಮ ವಾಹನದ ಫಾಸ್ಟ್ ಟ್ಯಾಗ್ನ ಕೆವೈಸಿ ಮಾಡಿಸದೆ ಅದು ಜನವರಿ 31ರ ಬಳಿಕ ರದ್ದಾದರೆ ಟೋಲ್ ಬೂತ್ಗಳಲ್ಲಿ ಶುಲ್ಕ ಪಾವತಿ ಮಾಡುವಾಗ ತೊಂದರೆ ಎದುರಾಗಲಿದೆ. ಕೆವೈಸಿ ಆಗಿದೆಯೋ? ಇಲ್ಲವೋ? ಪರಿಶೀಲನೆ ಹೇಗೆ? ವಾಹನ ಚಾಲಕರು, ಫಾಸ್ಟ್ ಟ್ಯಾಗ್ ಗ್ರಾಹಕರು ಸಂಬಂಧಪಟ್ಟ ಬ್ಯಾಂಕ್ ಸಂಪರ್ಕಿಸಿ ತಮ್ಮ ಪಾಸ್ಟ್ ಟ್ಯಾಗ್ನ ಕೆವೈಸಿ ಮಾಡಿಸಬಹುದು. ಇಲ್ಲವಾದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್ ಬೂತ್ಗಳಲ್ಲೂ ಈ ಕುರಿತು…
ಹಲವು ಬಾರಿ ಹೊಟ್ಟೆ ಉಬ್ಬರದಿಂದ ಏನನ್ನೂ ತಿನ್ನಲು ಅನಿಸುವುದಿಲ್ಲ, ಆದರೆ ಕೆಲವು ಆಹಾರಗಳಿವೆ, ಇವುಗಳನ್ನ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ದಿನನಿತ್ಯದ ಆಹಾರದಲ್ಲಿ ನೀವು ಈ ಆಹಾರಗಳನ್ನ ಸೇರಿಸಿ. ಎದೆಯುರಿ, ಅಥವಾ ಆಸಿಡ್ ರಿಫ್ಲಕ್ಸ್, ವಾಕರಿಕೆ, ಹೊಟ್ಟೆ ಉಬ್ಬರ, ಅನಿಲ, ಬೆಲ್ಚಿಂಗ್, ಕೆಲವೊಮ್ಮೆ ಕಹಿ ಅಥವಾ ಕೆಟ್ಟ ರುಚಿಯ ದ್ರವ ಅಥವಾ ಆಹಾರವನ್ನು ರುಚಿಸುವುದು, ಫಾರ್ಟಿಂಗ್ , ಕೆಟ್ಟ ವಾಸನೆ ಅಥವಾ ಹುಳಿ ತೇಗು, ಬಿಕ್ಕಳಿಕೆ ಅಥವಾ ಕೆಮ್ಮು ಮೊದಲಾದ ಸಮಸ್ಯೆಗಳು ಕಾಡುತ್ತವೆ. ಮೊಸರನ್ನ ಮೊಸರನ್ನ ಹೊಟ್ಟೆಯ ನಿರ್ಜಲೀಕರಣಕ್ಕೆ ಅತ್ಯುತ್ತಮ ಆಹಾರ. ಅಕ್ಕಿ ಜೀರ್ಣಿಸಿಕೊಳ್ಳಲು ಸುಲಭ ಮತ್ತು ಇದರಲ್ಲಿರುವ ಫೈಬರ್ ಅಂಶವು ಸಡಿಲವಾದ ಚಲನೆಯನ್ನು ನಿಯಂತ್ರಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಅದು ನಿವಾರಿಸುತ್ತದೆ, ಅಕ್ಕಿಯನ್ನು ದೀರ್ಘಕಾಲ ಬೇಯಿಸಿ ಮತ್ತು ಮೊಸರಿನೊಂದಿಗೆ ಬೆರೆಸಿ ತಿನ್ನಿರಿ. ಕಪ್ಪು ಉಪ್ಪು ಮತ್ತು ಹುರಿದ ಜೀರಿಗೆಯನ್ನು ಕೂಡ ಸೇರಿಸಬಹುದು. ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಲು ಸೂಕ್ತ ಆಹಾರವೆಂದು ಪರಿಗಣಿಸಲಾಗಿದೆ. ಮೊಸರು…
ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಒಳಮೀಸಲಾತಿ ಜಾರಿಗೆ ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರ ಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ತೀ್ಮಾನ ತೆಗದುಕೊಂಡಿದೆ.ಈ ಮೂಲಕ ಒಳ ಮೀಸಲಾತಿ ವಿಚಾರದ ಚೆಂಡನ್ನ ಕೇಂದ್ರದ ಅಂಗಳಕ್ಕೆ ಕಾಂಗ್ರೆಸ್ ಸರ್ಕಾರ ಎಸೆದಿದೆ. ದಲಿತ ಸಮುದಾಯಗಳ ದಶಕಗಳ ಬೇಡಿಕೆ ಈಡೇರಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ನ್ಯಾಯಮೂರ್ತಿ ಸದಾಶಿವ ಆಯೋಗದಂತೆ ಒಳ ಮೀಸಲಾತಿ ವಿಚಾರದ ಬಗ್ಗೆ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಬಿಸಿಬಿಸಿ ಚರ್ಚೆಯಾಯ್ತು.. ಅಂತಿಮವಾಗಿ ಸಂವಿಧಾನದ ಅನುಚ್ಚೇದ 341ಕ್ಕೆ ತಿದ್ದುಪಡಿ ತರಲು ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧಾರವಾಯ್ತು. ಭೋವಿ, ಬಂಜಾರ, ಕೊರಮ, ಕೊರಚ ಜಾತಿಗಳು ಪರಿಶಿಷ್ಟ ಜಾತಿಪಟ್ಟಿಯಲ್ಲಿದ್ದು, ಅವುಗಳನ್ನ ಹಾಗೆಯೇ ಮುಂದುವರೆಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸಯ ಮಾಡಲು ಸಂಪುಟ ಅನುಮೋಧನೆ ನೀಡಿದೆ. https://ainlivenews.com/ginger-peel-can-be-easily-peeled-by-simple-tricks/ ಇನ್ನು ೨೦೧೧ ಜನಸಂಖ್ಯೆ ಆಧಾರದ ಮೇಲೆ ನ್ಯಾ. ನಾಗಮೋಹನ್ ದಾಸ್ ವರದಿ ನೀಡಲಾಗಿತ್ತು. ಸಂವಿಧಾನದ ಆರ್ಟಿಕಲ್ ೩೪೧ ಕ್ಕೆ ಖಂಡ ಮೂರನ್ನ ಸೇರಿಸದೇ ಹೋದರೆ ಒಳ…
ಧಾರವಾಡ : ಜನೆವರಿ 22 ರಂದು ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಪೂಜೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಣೆ ಮಾಡಿರುವುದನ್ನು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಸ್ವಾಗತಿಸಿದ್ದಾರೆ.ನಗರದಲ್ಲಿ ಮಾದ್ಯಮದವರ ಜತೆ ಮಾತನಾಡಿದ ಅವರು, https://ainlivenews.com/ginger-peel-can-be-easily-peeled-by-simple-tricks/ ಕೇಂದ್ರ ಸರ್ಕಾರ, ಎಲ್ಲ ಇಲಾಖೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ನೌಕರರಿಗೆ ಅರ್ಧ ದಿನ ರಜೆ ನೀಡಿದ್ದು, ದೇಶದ ಭವ್ಯ ಶ್ರೀ ರಾಮ ಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಪೂಜೆಯನ್ನು ಅವರು ಸಹ ಕಣ್ತುಂಬಿಕೊಳ್ಳಲು ಅನುಕೂಲ ಆಗಲಿದೆ ಎಂದು ತಿಳಿಸಿದರು.