ಬೆಂಗಳೂರು: ಸಿಟಿಐ ಮತ್ತು ಪಿಎಸ್ಐ ಪರೀಕ್ಷಾ ಅಕ್ರಮ ವಿಚಾರ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪಿಎಸ್ಐ ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಬ್ಇನ್ಸ್ಪೆಕ್ಟರ್ ಓರ್ವರನ್ನು ಸಿಸಿಬಿ ವಶಕ್ಕೆ ಪಡೆದಿದೆ, ಪಿ ಎಸ್ ಐ ಲಿಂಗಯ್ಯ ಅವರು ಗುಪ್ತದಳದಲ್ಲಿದ್ದಾರೆ ನಾವು ಎಚ್ಚರಿಕೆ ವಹಿಸಬೇಕು ಅದಕ್ಕೆ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲೇ ಹಾಕಿದ್ದೆವೆ ಈ ಮದ್ಯೆ ಗುಪ್ತದಳದವರು ಮಾಹಿತಿ ಕಲೆಹಾಕ್ತಿದ್ದಾರೆ ಮಾಹಿತಿ ಪಡೆಯುವಾಗ ಈ ಆಡಿಯೋ ಬೆಳಕಿಗೆ ಬಂದಿದೆ ಎಂದರು. ನಾನು ಇಂಟಲಿಜೆನ್ಸ್ ಮಾಹಿತಿ ಕಲೆ ಹಾಕಲು ಪೇಕ್ ಆಡಿಯೋ ಮಾಡಿದ್ದೆ ಅಂತ ಹೇಳಿಕೆ ಕೊಟ್ಟಿದ್ದೆ ಅಂತ ಹೇಳಿದ್ದಾನೆ ಅದನ್ನ ಸಿಸಿಬಿ ವಿಚಾರಣೆ ಮಾಡ್ತಿದೆ ಇದು ನಿಜವಾ ಅಲ್ಲವಾ ಎಂಬೋದನ್ನ ವಿಚಾರಣೆ ಆಗ್ತಿದೆ ಎಲ್ಲಾ ರೀತಿಯ ಮುಂಜಾಗ್ರತೆ ತಗೆದುಕೊಂಡು ಪರೀಕ್ಷೆ ಮಾಡಬೇಕು ಅಂತ ಮಾಡಿದ್ದೆವೆ ಮೂರು ವರ್ಷ ಆಯ್ತು. ಇದುವರೆಗೆ ನೇಮಕಾತಿ ಮಾಡಲು ಆಗಿಲ್ಲ ಅಂದ್ರೆ ಸಿಸ್ಟಮ್ ನಡೆಯಲ್ಲ ಸಿಸಿಬಿ ತನಿಖೆ ಮಾಡ್ತಿದ್ದು,ಅಕ್ರಮ ಆಗಿದ್ರೆ…
Author: AIN Author
ಮೊಳಕಾಲ್ಮೂರು: ಬೆಳ್ಳಂಬೆಳಗ್ಗೆ ವ್ಯಕ್ತಿಯೋರ್ವನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬೊಮ್ಮಲಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವರಾಜ (45) ಚಿರತೆ ದಾಳಿಗೆ ಸಿಲುಕಿ ಪ್ರಾಣಪಾಯದಿಂದ ಪಾರಾಗಿರುವ ವ್ಯಕ್ತಿ. ಇಂದು ಬೆಳಗ್ಗೆ ಗ್ರಾಮದ ಬಯಲು ಪ್ರದೇಶದಲ್ಲಿ ಬಹಿರ್ದೆಸೆಗೆ ಹೋಗಿದ್ದ ವೇಳೆ, ಗ್ರಾಮದ ಸ್ಮಶಾನದ ಬಳಿ ಅಡಗಿ ಕುಳಿತಿದ್ದ ಚಿರತೆ ಏಕಾಏಕಿ ಈ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ. ಕೂಡಲೇ, ಬಸವರಾಜ ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣಪಾಯದಿಂದ ಪಾರಾಗಿದ್ದಾನೆ. ಚಿರತೆ ದಾಳಿಯಿಂದ ಹೊಟ್ಟೆಯ ಭಾಗದಲ್ಲಿ ತೀವ್ರ ಸ್ವರೂಪದ ಗಂಭೀರ ಗಾಯಗಳಾಗಿದ್ದು, ಮೊಳಕಾಲ್ಮೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೊಳಕಾಲ್ಮೂರು ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲ್ಲೂಕಿನಲ್ಲಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ, ಗುಡ್ಡಗಾಡಿನ ಅಕ್ಕಪಕ್ಕದ ಗ್ರಾಮಗಳಿಗೆ ಕಾಡುಪ್ರಾಣಿಗಳು ಆಹಾರ ಹುಡುಕಿಕೊಂಡು ಬಂದು ಮನುಷ್ಯರ ಹಾಗೂ ಇತರೆ…
ಬೆಂಗಳೂರು : ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಜನವರಿ 22ರಂದು ರಾಜ್ಯ ಕಾಂಗ್ರೆಸ್ ಸರ್ಕಾರ ರಜೆ ಘೋಷಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ. ಕೋಟ್ಯಂತರ ಭಾರತೀಯರ ದಶಕಗಳ ಕಾಲದ ಕನಸು ಜನವರಿ 22 ರಂದು ನನಸಾಗುತ್ತಿದೆ. ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರರು ವಿರಾಜಮಾನವಾಗಲಿದ್ದಾರೆ. ಇತಿಹಾಸದ ಪುಟದಲ್ಲಿ ದಾಖಲಾಗುವ ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜ್ಯದೆಲ್ಲೆಡೆ ರಜೆ ಘೋಷಿಸಬೇಕು ಎಂದು ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಗೊಂದಲದಲ್ಲಿದೆ. ದೇಶದಲ್ಲಿ ರಾಮ ಜಪ ನಡೆಯುತ್ತಿದ್ದರೆ ಕಾಂಗ್ರೆಸ್ ಈ ವಾತಾವರಣವನ್ನು ಕಲುಷಿತಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಆಹ್ವಾನವನ್ನು ಕಾಂಗ್ರೆಸ್ ಪಕ್ಷ ತಿರಸ್ಕರಿಸುವ ಮೂಲಕ ಅಸಂಖ್ಯಾತ ರಾಮಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಬಿ.ವೈ. ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದ ಬಸ್ ನಿಲ್ದಾಣದ ಬಳಿ ಅಳವಡಿಸಿದ್ದ ರಾಮನ ಫ್ಲೆಕ್ಸ್ ಅನ್ನು ಕಿಡಿಗೇಡಿಗಳು ಹರಿದಿರುವುದಕ್ಕೆ ಬಿಜೆಪಿ ಕಿಡಿಕಾರಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಗುಲಾಮರು ಮತ್ತು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರುಗಳ ಬ್ರದರ್ಸ್ ಶಾಂತಿಯನ್ನು ಕದಡಿ ರಾಮ ಭಕ್ತರನ್ನು ಪದೇ ಪದೆ ಕೆಣುಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಪೊಲೀಸರು ಚಿಕ್ಕಬಳ್ಳಾಪುರದಲ್ಲಿ ಶಾಂತಿ ಸಭೆ ನಡೆಸಿದ ದಿನವೇ ಕಿಡಿಗೇಡಿಗಳು ಇಂಥ ನೀಚ ಕೃತ್ಯ ವೆಸಗಿದ್ದಾರೆ. ಇದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ. ಕೋಲಾರದಲ್ಲಿ ಫ್ಲೆಕ್ಸ್ ಹರಿದ ಪ್ರಕರಣ ಮಾಸುವ ಮುನ್ನವೇ ಈ ಘಟನೆ ನಡೆದಿದೆ ಎಂದು ಛೇಡಿಸಿದೆ. ಗೋಧ್ರಾ ಘಟನೆಗೆ ಮುನ್ನುಡಿ ಇಟ್ಟಂತಿದೆ ಕಾಂಗ್ರೆಸ್ ಸರ್ಕಾರ ಈ ಮೂಲಕ ರಾಜ್ಯದಲ್ಲಿ ಗೋಧ್ರಾದಂತಹ ಘಟನೆಗೆ ಮುನ್ನುಡಿ ಇಟ್ಟಂತಿದೆ. ಇನ್ನು ಮುಂದೆ ಇಂತಹ ಯಾವುದೇ ಘಟನೆ ಅಥವಾ ಹಿಂದೂಗಳ ಭಾವನೆಗೆ ದಕ್ಕೆ ತರುವ ಕೃತ್ಯಗಳು ನಡೆದರೆ, ಕಾಂಗ್ರೆಸ್ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಬಿಜೆಪಿ ಎಚ್ಚರಿಕೆಯ ಸಂದೇಶ…
ಬೆಂಗಳೂರು: ಸಂಸದ ಅನಂತಕುಮಾರ್ ಹೆಗಡೆ ವಿರುದ್ದ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ. ಅವನಿಗೆ ಸಂಸ್ಕೃತಿ ಇಲ್ಲವೆಂದು ಏಕವಚನದಲ್ಲೇ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚನೆಂದ ಹೇಳಿದ ಅವರು, ಅನಂತಕುಮಾರ್ ಹೆಗಡೆ ಬಗ್ಗೆ ಮಾತಾಡಲು ನನಗೆ ಹುಚ್ಚು ಹಿಡಿದಿಲ್ಲ ಜನರಿಗೆ ದ್ರೋಹ ಮಾಡಿದ ಮೊದಲ ವ್ಯಕ್ತಿ ಅನಂತಕುಮಾರ್ ಹೆಗಡೆ 4 ವರ್ಷ ಕುಳಿತುಕೊಂಡು ಜನರ ವಿಶ್ವಾಸಕ್ಕೆ ಮೋಸ ಮಾಡಿದ್ದಾರೆ ಎಂದು ಕಿಡಿ ಕಾರಿದರು. ಬಿಜೆಪಿ ಅವನಿಗೆ ಟಿಕೆಟ್ ಕೊಡಲಿ, ಜನ ಬದಲಾವಣೆ ಮಾಡ್ತಾರೆ ಚುನಾವಣೆಯಲ್ಲಿ ನಾನು ಕೂಡಾ ಸೋತಿದ್ದೇನೆ ಆದ್ರೆ ಮಾನ ಮರ್ಯಾದೆ ಬಿಟ್ಟು ಈ ರೀತಿ ಮಾಡುವುದಿಲ್ಲ ಆತ ತಲೆಕೆಟ್ಟಿರುವ ವ್ಯಕ್ತಿ, ಮಾನ ಮರ್ಯಾದೆ ಇಲ್ಲದಿರುವ ವ್ಯಕ್ತಿ ಪ್ರಜಾಪ್ರಭುತ್ವದ ಬಗ್ಗೆ ವಿರೋಧ ಮಾಡಿದವರಿಗೆ ಧಿಕ್ಕಾರ ಹಾಕಬೇಕು ಎಂದು ಸಂಸದ ಹೆಗಡೆ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು
ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಟೆಗೆ ಕ್ಷಣ ಗಣನೆ ಶುರುವಾಗಿದೆ. ಮಂಗಳೂರಿನ ಕದ್ರಿ ಮಠದ ಪಕ್ಕ ರಾಮ ಧಾರೆ, ಲಕ್ಣಣ ದಾರೆ ಹಾಗೂ ಸೀತಾ ಬಾವಿ ಇರುವ ಐತಿಹಾಸಿಕ ಸ್ಥಳಗಳಿವೆ. ಕದ್ರಿ ಯೋಗೀಶ್ವರ ಮಠದ ಗುಡ್ಡದ ಬುಡದಲ್ಲಿ ವರ್ಷದ 365 ದಿನವೂ ನಿರಂತರ ಹರಿಯುವ ಶ್ರೀರಾಮನ ಹೆಸರಿನ ನೀರಧಾರೆಯಿದ್ದು, ರಾಮ – ಲಕ್ಷ್ಮಣ ತೀರ್ಥ ಎಂದು ಕರೆಯಲಾಗುತ್ತದೆ. ನೀರದಾರೆ ಉಗಮದ ಮೇಲೆ ರಾಮ ಲಕ್ಷ್ಮಣ ಹನುಮಂತನ ವಿಗ್ರಹವಿದ್ದು, ನಿತ್ಯ ಪೂಜೆಯೂ ನಡೆಯುತ್ತದೆ. ಬೇಸಿಗೆಯ ವೇಳೆ ನೀರಧಾರೆ ಕೊಂಚ ಸಪುರವಾಗುತ್ತದೆ ವಿನಃ ಇಲ್ಲಿ ನೀರಿನ ಒರತೆ ಬತ್ತಿರುವ ಇತಿಹಾಸವೇ ಇಲ್ಲ. ಇದೇ ನೀರನ್ನು ಇಲ್ಲಿನವರು ದೈನಂದಿನ ಬಳಕೆಗೆ ಬಳಸುತ್ತಾರೆ. ಪಕ್ಕದಲ್ಲಿಯೇ ಸೀತಾಬಾವಿಯಿದ್ದು, ಸೀತಾಪಹರಣದ ವೇಳೆ ರಾವಣನ ಪುಷ್ಪಕವಿಮಾನದಲ್ಲಿದ್ದ ಸೀತೆಯ ಅಶ್ರುಧಾರೆ ಭೂಮಿಗೆ ಬಿದ್ದು ಈ ಬಾವಿ ಸೃಷ್ಟಿಯಾಗಿದೆ ಎಂಬ ಸ್ಥಳಪುರಾಣವೂ ಪ್ರಚಲಿತದಲ್ಲಿದೆ.
ಬೆಂಗಳೂರು: ಗಂಡ ಕಾಣೆಯಾಗಿದ್ದಾನೆಂದು ಒಬ್ಬಳು ಹೆಂಡತಿ ಹಾಗು ಹೆಂಡತಿ ಕಾಣೆಯಾಗಿದ್ದಾಳೆಂದು ಒಬ್ಬ ಗಂಡ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸುಮೈಯಾ ಬಾನು ಗಂಡ ಬೇಕು ಎಂದು ದೂರು ನೀಡಿದ ಹೆಂಡತಿ, ವಸೀಂ ಸುಮೈಯಾ ಗಂಡ. ಇನ್ನು ಮತ್ತೊಂದು ಪ್ರಕರಣದಲ್ಲಿ ಪರಾರಿಯಾಗಿರುವ ಹೆಂಡತಿ ದಲ್ಷಾದ್ ಳನ್ನು ಹುಡುಕಿಕೊಡುವಂತೆ ಪತಿ ನಯೀಂ ದೂರು ನೀಡಿದ ಪತಿ. ಕಳೆದ ಏಳು ವರ್ಷಗಳ ಹಿಂದೆ ಸುಮೈಯಾ ಬಾನು ಮತ್ತು ವಾಸಿಂ ಇಬ್ಬರು ಮದುವೆಯಾಗಿದ್ದರು ಇವರ ಮದುವೆಗೆ ಸಾಕ್ಷಿಯಾಗಿ ಒಂದು ಹೆಣ್ಣು ಮಗು ಕೂಡ ಇದೆ. ಆದರೇಮ ಇತ್ತೀಚೆಗೆ ಸುಮೈಯಾ ಬಾನು ಪತಿ ವಸೀಂ ಮತ್ತು ದಿಲ್ ಷಾದ್ ಎಂಬಾಕೆಯ ನಡುವೆ ಪ್ರೀತಿಸುತ್ತಿದ್ದರು ಕಳೆದ ತಿಂಗಳು ವಸೀಂ ಹಾಗು ದಿಲ್ಷಾದ್ ಇಬ್ಬರು ಒಂದೇ ಹೋಟೆಲ್ ನಲ್ಲಿ ಇದ್ದರು. ವಿಚಾರ ತಿಳಿದ ವಸೀಂ ಪತ್ನಿ ಸುಮಯಾ ಮತ್ತು ಕುಟುಂಬಸ್ಥರು ಇಬ್ಬರನ್ನು ಹೋಟೆಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದು ದೊಡ್ಡರಾದ್ದಾಂತವೇ ಆಗಿತ್ತು. ಬಳಿಕ ಇಬ್ಬರಿಗೂ ಬುದ್ದಿವಾದ…
ಚಿಕ್ಕಮಗಳೂರು : ರಾಮಮಂದಿರ ಉದ್ಘಾಟನೆ ದಿನ ಯಾರೂ ಶಾಲೆಗೆ ರಜೆ ಹಾಕಂಗಿಲ್ಲ ಸೋಮವಾರ ಶಾಲೆಗೆ ರಜೆ ಹಾಕಿದ್ರೆ 1000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಮಕ್ಕಳಿಗೆ ಎಚ್ಚರಿಕೆ ನೀಡಿದ ಶಾಲಾ ಆಡಳಿತ ಮಂಡಳಿ ಚಿಕ್ಕಮಗಳೂರು ನಗರದ ಸೆಂಟ್ ಜೋಸೆಫ್ ಶಾಲೆಯಲ್ಲಿ ಮಕ್ಕಳಿಗೆ ಎಚ್ಚರಿಕೆ ನೀಡಿದ್ದು ರಾಮ ಮಂದಿರ ಉದ್ಘಾಟನೆ ದಿನ ರಜೆ ಹಾಕಿದ್ರೆ 1000 ದಂಡ ಅಂದಿದಕ್ಕೆ ಸೆಂಟ್ ಜೋಸೆಫ್ ಶಾಲೆ ವಿರುದ್ಧ ಬಜರಂಗದಳ, ವಿ.ಎಚ್.ಪಿ. ಆಕ್ರೋಶ ವ್ಯಕ್ತಪಡಿಸಿದೆ. ಶಾಲೆ ಮುಂದೆ ಜಮಾವಣೆಗೊಂಡ ಭಜರಂಗದಳ, ವಿ.ಎಚ್.ಪಿ. ಕಾರ್ಯಕರ್ತರು ರಾಮಮಂದಿರ ಉದ್ಘಾಟನೆ ನೋಡಲು ಆಸೆ ಇರೋ ಮಕ್ಕಳು ಶಾಲೆಗೆ ರಜೆ ಹಾಕಿ, ಲೈವ್ ನೋಡಿ ಜಿಲ್ಲೆಯ ಯಾವುದೇ ಶಾಲೆಯ ಯಾವುದೇ ಮಕ್ಕಳಿಗೆ ದಂಡ ಹಾಕಿದ್ರೆ ಚೆನ್ನಾಗಿರಲ್ಲ, ವಿ.ಎಚ್.ಪಿ. ಎಚ್ಚರಿಕೆ ಇಡೀ ಜಿಲ್ಲೆಯ ಶಾಲಾ ಮಕ್ಕಳ ಬೆನ್ನಿಗೆ ನಿಂತ ಭಜರಂಗದಳ, ವಿ.ಎಚ್.ಪಿ. ಸೆಂಟ್ ಜೋಸೆಫ್ ಶಾಲೆಗೆ ಎಎಸ್ಪಿ ಕೃಷ್ಣಮೂರ್ತಿ ಭೇಟಿ ಶಾಲೆಯ ಮುಂದೆ ಜಮಾಯಿಸಿರೋ ಭಜರಂಗದಳ, ವಿ.ಎಚ್.ಪಿ. ಕಾರ್ಯಕರ್ತರು, ಪೊಲೀಸರು ಚಿಕ್ಕಮಗಳೂರು ನಗರದ ಸೆಂಟ್…
ಕಲಬುರಗಿ: 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಅಚ್ಚರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯ ದೊಡ್ಡಪ್ಪನ ಮಗನೇ ಕೃತ್ಯ ಎಸಗಿರುವುದಾಗಿ ಬಯಲಾಗಿದೆ. ಅಲ್ಲದೇ ಪ್ರಕರಣ ಸಂಬಂಧ ಆರೋಪಿ ಅಣ್ಣನನ್ನು ಕೂಡ ಆಳಂದ ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ ವಿದ್ಯಾರ್ಥಿನಿ ಕಲಬುರಗಿ ಜಿಲ್ಲೆಯಲ್ಲಿರುವ ವಸತಿ ಶಾಲೆಯೊಂದರಲ್ಲಿ ಓದುತ್ತಿದ್ದಳು. ಶಾಲೆಗೆ ರಜೆ ಇದ್ದಾಗೆಲ್ಲ ಆಕೆ ಮನೆಗೆ ಬರುತ್ತಿದ್ದಳು. ಹೀಗೆ ಬಂದಾಗ ಸಹೋದರ ಆಕೆಯನ್ನು ಬಳಸಿಕೊಳ್ಳುತ್ತಿದ್ದನು. ರಾತ್ರಿ ಹೊತ್ತು ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಆತ ತಂಗಿ ಎನ್ನುವುದನ್ನೂ ನೋಡದೇ ರೇಪ್ ಮಾಡುತ್ತಿದ್ದ. ಹೀಗೆ ಕಳೆದ ಮಾರ್ಚ್ ನಿಂದ ವಿದ್ಯಾರ್ಥಿನಿ ಹಲವು ಬಾರಿ ತನ್ನ ಅಣ್ಣನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. ಅಲ್ಲದೇ ಈ ವಿಚಾರವನ್ನು ಬಾಯಿಬಿಟ್ಟರೆ ಕೊಲೆ ಮಾಡುವ ಬೆದರಿಕೆಯನ್ನು ಕೂಡ ಹಾಕಿದ್ದನು. ಹೀಗಾಗಿ ಆಕೆ ಅತ್ಯಾಚಾರ ವಿಚಾರವನ್ನು ಮುಚ್ಚಿಟ್ಟಿದ್ದಳು. ವಿದ್ಯಾರ್ಥಿನಿ ದಪ್ಪ ಇರೋದ್ರಿಂದ ಕುಟುಂಬಸ್ಥರು ಕೂಡ ಆಕೆಯ ದೇಹದಲ್ಲಿ ಆಗುತ್ತಿರುವ ಬದಲಾವಣೆಯನ್ನು ಕಂಡು…
ಹುಬ್ಬಳ್ಳಿ : ಇಂದು ಅದರಗುಂಚಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2024ರ ಅಂಗವಾಗಿ ರಸ್ತೆ ಸುರಕ್ಷತೆ ಜಾಗೃತಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಮಾತನಾಡಿ, ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಸಂಚಾರ ನಿಯಮಗಳು, ಹೆಲ್ಮೇಟ್ ಹಾಗೂ ಸೀಟ್ ಬೆಲ್ಟ್ ಧರಿಸುವುದು, ಸಂಚಾರಿ ಸಂಜ್ಞೆಗಳು, ಜೀಬ್ರಾ ಕ್ರಾಸಿಂಗ್ ಹಾಗೂ ವೃತ್ತಗಳಲ್ಲಿ ಅಳವಡಿಸಲಾಗಿರುವ ಸಂಚಾರಿ ಸೂಚನಾ ದೀಪಗಳ ಕುರಿತಂತೆ ಅರಿವು ಇರಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಗುರುರಾಜ ದಾಶ್ಯಾಳ, ಶಿಕ್ಷಕರಾದ ಬಸವರಾಜ ಹೊಸಮನಿ, ಸಾರಿಗೆ ಇಲಾಖೆಯ ವಿನಾಯಕ ನಾಯಕ, ಕೀರ್ತಿ ಹುಕ್ಕೇರಿ, ಅಬ್ದುಲ್ ಸಲಾಂ, ಶಂಕರ ಕಲಾಲ ಸೇರಿದಂತೆ ವಿದ್ಯಾರ್ಥಿಗಳು, ಇತರರು ಉಪಸ್ಥಿತರಿದ್ದರು.