ಅಮೇರಿಕಾ: ಭಾರತದ ಕೇರಳ ಮೂಲದವರಾದ ವಿವೇಕ್ ರಾಮಸ್ವಾಮಿ ಅವರ ಪೋಷಕರು ಯುನೈಟೆಡ್ ಸ್ಟೇಟ್ಸ್ನಲ್ಲಿ ನೆಲೆಸಿದ್ದಾರೆ. ಕೇರಳದ ಪಾಲಕ್ಕಾಡ್ ಮೂಲದ ವಿವೇಕ್ ರಾಮಸ್ವಾಮಿ ಅವರಿಗೆ ತಮಿಳು ಗೊತ್ತು ಎಂದು ಹೇಳಿದ್ದರು. ಉದ್ಯಮಿ ವಿವೇಕ್ ರಾಮಸ್ವಾಮಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆಗ ಮಾತನಾಡಿದ ಅವರು, ಹಿಂದೂ ಧರ್ಮದ ನಂಬಿಕೆಯೇ ಅವರನ್ನು ಈ ಪಯಣಕ್ಕೆ ತಂದಿದೆ ಎಂದಿದ್ದಾರೆ. ಮುಂದುವರಿದು ಮಾತನಾಡಿದ ಅವರು, “ನಾನು ಹಿಂದೂ, ನಾನು ಹದಿಹರೆಯದವನಾಗಿದ್ದಾಗ ನನ್ನ ನಂಬಿಕೆಯನ್ನು ತ್ಯಜಿಸಿದೆ, ಆದರೆ ನಾನು ದೃಢತೆ ಮತ್ತು ಶಕ್ತಿಯಿಂದ ಅದಕ್ಕೆ ಮರಳಿದೆ” ಎಂದು ಹೇಳಿದರು. ಹಿಂದೂಗಳು ತಮ್ಮ ಮಕ್ಕಳಿಗೆ ಧಾರ್ಮಿಕ ಜ್ಞಾನವನ್ನು ನೀಡಬೇಕು. ಹಿಂದೂ ಧರ್ಮದ ಮೂಲ ತತ್ವಗಳನ್ನು ವಿವರಿಸಿದ ವಿವೇಕ್ ರಾಮಸ್ವಾಮಿ, ನಿಜವಾದ ದೇವರು ಒಬ್ಬನೇ ಎಂದು ಹೇಳಿದರು. ವಿವೇಕ್ ರಾಮಸ್ವಾಮಿ ಹಿಂದೂ ಧರ್ಮದ ಪರವಾಗಿ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ಡಿಸೆಂಬರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿವೇಕ್ ರಾಮಸ್ವಾಮಿ, ನಾನು ಹಿಂದೂ ಮತ್ತು ತನ್ನ ಗುರುತನ್ನು ಅಡಗಿಸುವುದಿಲ್ಲ . ಅಮೆರಿಕದ ಮೂಲಕ ಕ್ರಿಶ್ಚಿಯನ್ ಧರ್ಮವನ್ನು…
Author: AIN Author
ಕಲಬುರಗಿ: ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಎಲ್ಲಾ ಸಿದ್ಧತೆ ನಡೆಯುತ್ತಿರುವ ಹೊತ್ತಿನಲ್ಲಿ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮಂದಿರದ ಜಾಗದಲ್ಲಿ 500 ವರ್ಷಗಳ ಕಾಲ ಮುಸ್ಲಿಮರು ನಮಾಜ್ ಮಾಡಿದ್ದಾರೆ ಎನ್ನುವ ಮೂಲಕ ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ. ಕಲಬುರಗಿಯಲ್ಲಿ (Kalaburagi) ಮಾತನಾಡಿದ ಅವರು, ಕಾಂಗ್ರೆಸ್ನ ಜಿ.ಬಿ ಪಂತ್ ಮುಖ್ಯಮಂತ್ರಿ ಆಗಿದ್ದಾಗ ರಾಜ್ ಕೆ ಅಂಧೇರಿಯಲ್ಲಿ ರಾಮನ ಮೂರ್ತಿ ಇಡಲಾಗಿತ್ತು. ಅವರು ಅಲ್ಲಿಂದ ಮೂರ್ತಿಯನ್ನು ತೆಗೆಯಲಿಲ್ಲ. ಆಗ ಅಲ್ಲಿನ ಕಲೆಕ್ಟರ್ ನಾಯರ್ ಸಾಬ್ ಮಸೀದಿ ಬಂದ್ ಮಾಡಿ ಪೂಜಾ ಶುರು ಮಾಡಿದ್ದರು. ಅಲ್ಲದೇ ಅಲ್ಲಿ ನಮ್ಮ ಮಸೀದಿ ಇತ್ತು, ಇರಲಿದೆ ಕೂಡ ಎಂದು ಹೇಳಿದ್ದಾರೆ. https://ainlivenews.com/see-how-many-health-benefits-drinking-buttermilk-has/ 1992 ರಲ್ಲಿ ಬಿಜೆಪಿ ಸಂಘ ಪರಿವಾರ ಸುಪ್ರೀಂಕೋರ್ಟ್ ಮುಂದೆ ಪ್ರಮಾಣ ಮಾಡಿ ಬಾಬ್ರಿ ಮಸೀದಿ ಕೆಡವಿದರು. 1989 ರಲ್ಲಿ ಪಾಲನ್ಪುರದಲ್ಲಿ ಬಿಜೆಪಿ ರೆಸ್ಯೂಲೇಷನ್ ಪಾಸ್ ಮಾಡಿತ್ತು. ವಿಶ್ವ ಹಿಂದೂ ಪರಿಷತ್ ಹುಟ್ಟಿಕೊಂಡಾಗ ರಾಮಮಂದಿರ ಇರಲಿಲ್ಲ. ಮಹಾತ್ಮಾ ಗಾಂಧಿಯವರು ಈ…
ಹೆಚ್ಚಿನ ಜನರು ಶುಂಠಿಯನ್ನು ಅದರ ಸಿಪ್ಪೆ ತೆಗೆದು ಬಳಸುತ್ತಾರೆ. ಕೆಲವರು ಶುಂಠಿಯ ಸಿಪ್ಪೆಯನ್ನು ತೆಗೆದು ಶುಂಠಿ ಚಹಾದಲ್ಲಿ ಹಾಕುತ್ತಾರೆ, ಆದರೆ ಹಾರ್ವರ್ಡ್ ವಿಶ್ವವಿದ್ಯಾನಿಲಯದ ತಜ್ಞರ ಪ್ರಕಾರ, ಈ ಅದ್ಭುತ ಗಿಡಮೂಲಿಕೆಯ ಹೆಚ್ಚುವರಿ ಪ್ರಯೋಜನಗಳನ್ನು ನೀವು ಬಯಸಿದರೆ, ನಂತರ ಸಿಪ್ಪೆಯೊಂದಿಗೆ ಇದನ್ನು ಬಳಸಿ. ಸಿಪ್ಪೆ ತೆಗೆದು ಶುಂಠಿ ಸೇವಿಸುವುದರಿಂದ ಅದರ ಸಂಪೂರ್ಣ ಲಾಭ ಸಿಗುವುದಿಲ್ಲ. ಕೆಮ್ಮಿಗೆ ಪರಿಣಾಮಕಾರಿ ಶುಂಠಿಯು ಕೆಮ್ಮನ್ನು ನಿವಾರಿಸುವಲ್ಲಿ ತುಂಬಾ ಪರಿಣಾಮಕಾರಿ. ಇದಕ್ಕೆ ಶುಂಠಿಯ ಸಿಪ್ಪೆಯನ್ನು ಸಂಗ್ರಹಿಸಿ, ಅದನ್ನು ಮೊದಲ ಬಿಸಿಲಲ್ಲಿ ಒಣಗಿಸಿ ನಂತರ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಕೆಮ್ಮು ಸಮಸ್ಯೆ ಉಂಟಾದಾಗಲೆಲ್ಲ ಶುಂಠಿ ಪುಡಿ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಬಿಸಿ ನೀರಿನಲ್ಲಿ ಸೇವಿಸಿ. ಕೆಮ್ಮುವಿಕೆಯಿಂದ ತಕ್ಷಣ ನೆಮ್ಮದಿ ಸಿಗುತ್ತದೆ. ತರಕಾರಿಯ ಸುವಾಸನೆಗಾಗಿ ಶುಂಠಿಯ ಸಿಪ್ಪೆಯನ್ನು ಬಳಸಿ ರುಚಿಕರವಾದ ತರಕಾರಿಗಳ ಅಡುಗೆ ತಯಾರಿಮಾಡಬಹುದು. ಹೂಕೋಸು, ಎಲೆಕೋಸು ಮುಂತಾದ ತರಕಾರಿಗಳನ್ನು ಹಬೆಯಲ್ಲಿ ಬೇಯಿಸಿಕೊಳ್ಳುವ ಮೊದಲು ಶುಂಠಿಯ ಸಿಪ್ಪೆಯನ್ನು ಸೇರಿಸಿಕೊಳ್ಳಬಹುದು. ತರಕಾರಿ ಜೊತೆ ಶುಂಠಿ ಸಿಪ್ಪೆ ಹಾಕುವುದರಿಂದ ತರಕಾರಿ ರುಚಿಯೊಂದಿಗೆ ಸುವಾಸನೆ ಸಹ…
ಬೇತುಲ್: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ನವಜಾತ ಮಗನನ್ನು ಕೊಂದಿರುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ. ಈ ಕೊಲೆಗೆ ಕಾರಣ ಅನೇಕರನ್ನು ಬೆಚ್ಚಿಬೀಳಿಸಿದೆ. ಕೊಲೆಗಾರನಿಗೆ ಮಗಳು ಹುಟ್ಟಬೇಕೆಂಬ ಆಸೆ ಇತ್ತು ಮತ್ತು ಆದ್ದರಿಂದ ತನ್ನ ಗಂಡು ಮಗುವನ್ನು ಕೊಂದನು. ವರದಿಗಳ ಪ್ರಕಾರ, ಬಜ್ಜರವಾಡ ಗ್ರಾಮದ ವ್ಯಕ್ತಿ ಅನಿಲ್ ಉಯಿಕೆ ಎಂಬಾತ ಕಂಠ ಪೂರ್ತಿ ಕುಡಿದುಕೊಂಡು ತನ್ನ ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಆಕೆಯ ಕೈಯಿಂದ 12 ದಿನದ ಮಗುವನ್ನು ಕಿತ್ತುಕೊಂಡಿದ್ದಾನೆ. ಮಹಿಳೆಗೆ ತೀವ್ರವಾಗಿ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ದಂಪತಿಗೆ ಈಗಾಗಲೇ 2 ಗಂಡು ಮಕ್ಕಳಿದ್ದು, ಪತ್ನಿ ಮೂರನೇ ಬಾರಿಗೆ ಗರ್ಭಿಣಿಯಾದಾಗ ಮಗಳನ್ನು ಹೊಂದುವ ನಿರೀಕ್ಷೆಯಲ್ಲಿದ್ದರು. ಆದರೆ ಪತ್ನಿ ಮೂರನೇ ಬಾರಿಗೂ ಮಗನಿಗೆ ಜನ್ಮ ನೀಡಿದಾಗ ಅವನ ನಿರೀಕ್ಷೆಗಳು ಹುಸಿಯಾದವು. ಹೀಗಾಗಿ ಕುಡಿದು ಬಂದು ಗಲಾಟೆ ಮಾಡಿ ಅವನು ತನ್ನ ಹೆಂಡತಿಯಿಂದ ಮಗುವನ್ನು ಕಸಿದುಕೊಂಡು ಅವರ ಗುಡಿಸಲಿನಲ್ಲಿ ಕೊಂದನು. ಪತ್ನಿ ಮನೆಗೆ ಮರಳಿದ ಬಳಿಕ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.…
ರಾಯಚೂರು: ಜನವರಿ 22 ರಂದು ಗುರುರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯದಲ್ಲಿ 36 ಅಡಿ ಎತ್ತರದ ಏಕಶಿಲಾ ಅಭಯರಾಮನ (Abhaya Rama) ಮೂರ್ತಿ ಅನಾವರಣ ಹಿನ್ನೆಲೆ ಇಂದು ರಾಮಮೂರ್ತಿಯನ್ನು ಕಮಲ ಪೀಠದ ಮೇಲೆ ಅನುಷ್ಠಾನ ಮಾಡಲಾಯಿತು. ಮಂತ್ರಾಲಯ (Mantralaya) ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಕಮಲಪೀಠದಲ್ಲಿ ನವಧಾನ್ಯಗಳನ್ನು ಇರಿಸಿ ಪೂಜೆ ಮಾಡಿ ಅಭಯರಾಮ ಮೂರ್ತಿಯ ಪೂರ್ವಪ್ರತಿಷ್ಠಾಪನೆ ನೆರವೇರಿಸಿದರು. 9 ಅಡಿ ಕಮಲ ಪೀಠದ ಮೇಲೆ 36 ಅಡಿ ಎತ್ತರದ ಗ್ರೇ ಗ್ರಾನೈಟ್ ಶಿಲೆಯ ಅಭಯರಾಮ ರಾಮಮೂರ್ತಿಯನ್ನು ಇರಿಸಲಾಗಿದೆ. https://ainlivenews.com/see-how-many-health-benefits-drinking-buttermilk-has/ ಜನವರಿ 22ರಂದು ಅಯೋಧ್ಯ (Ayodhya) ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆ ದಿನವೇ ಶ್ರೀಗಳು ವಿಶೇಷ ಪೂಜೆಯೊಂದಿಗೆ ಅಭಯರಾಮನ ಅನಾವರಣ ಮಾಡಲಿದ್ದಾರೆ. ಅಭಯರಾಮ ಸೇವಾ ಸಮಿತಿ ಅಡಿ ರಾಯರ ಭಕ್ತರು ಅಭಯರಾಮನ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಕಾರವಾರ: ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ರಂದು ನಡೆಯಲಿರುವ ‘ಪ್ರಾಣ ಪ್ರತಿಷ್ಠೆ’ ಸಮಾರಂಭಕ್ಕೆ ಪದ್ಮಶ್ರೀ ಪುರಸ್ಕೃತರನ್ನು ಆಹ್ವಾನಿಸಲಾಗಿದೆ. ಅಂಕೋಲಾದ ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ , ತುಳಸಿ ಗೌಡ ಅವರನ್ನು ಆಹ್ವಾನಿಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಪ್ರಾಂತ್ಯ ಪ್ರಚಾರಕರು ಆಹ್ವಾನ ಪತ್ರಿಕೆ ನೀಡಿದ್ದಾರೆ. ಹಾಲಕ್ಕಿ ಹಾಡುಗಳ ಒಡತಿ ಸುಕ್ರಜ್ಜಿ ಸುಮಾರು 5,000 ಕ್ಕೂ ಹೆಚ್ಚು ಹಾಲಕ್ಕಿ ಹಾಡುಗಳನ್ನು ಸುಕ್ರಿ ಬೊಮ್ಮಗೌಡ ಹಾಕಿದ್ದಾರೆ. ಜನಪದ ಹಾಗೂ ಸಾಮಾಜಿಕ ಸೇವಾ ಕ್ಷೇತ್ರವನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ವೃಕ್ಷಮಾತೆ ತುಳಸಿ ಗೌಡ ವೃಕ್ಷಮಾತೆ ಎಂದೇ ಹೆಸರಾಗಿರುವ ತುಳಸಿ ಗೌಡ ಸಾವಿರಾರು ಮರಗಳನ್ನು ಬೆಳೆಸುವ ಮೂಲಕ ಪರಿಸರ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜನವರಿ 22 ರಂದು ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಜರುಗಲಿದೆ. ಈ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ರಾಮಜಪ, ಶ್ರೀರಾಮ ಭಜನೆ ಮಾಡಲಾಗುತ್ತಿದೆ. ದೇಶದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಚೀನಾ: ಚೀನಾದಲ್ಲಿ ಸತತ ಎರಡನೇ ವರ್ಷವೂ ಜನಸಂಖ್ಯೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಹಾಗೆಯೇ ಮರಣ ಪ್ರಮಾಣವೂ ಹೆಚ್ಚಾಗಿದೆ. ಒಂದೆಡೆ ವಿಶ್ವದ ಹಲವು ರಾಷ್ಟ್ರಗಳು ಹೆಚ್ಚುತ್ತಿರುವ ಜನಸಂಖ್ಯೆಯಿಂದ ಆತಂಕಗೊಂಡಿದ್ದರೆ, ಇನ್ನೊಂದೆಡೆ ಚೀನಾ ದೇಶದ ಜನಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ವರದಿಗಳ ಪ್ರಕಾರ, COVID-19 ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಹೆಚ್ಚಿದ ಸಾವಿನ ಪ್ರಮಾಣ ಮತ್ತು ಕಡಿಮೆ ಜನನ ಪ್ರಮಾಣದಿಂದಾಗಿ 2023 ರಲ್ಲಿ ಚೀನಾದಲ್ಲಿ ಜನಸಂಖ್ಯೆಯು 20 ಲಕ್ಷದಷ್ಟು ಇಳಿಯಲಿದೆ. ಚೀನಾದಲ್ಲಿ ಸತತ ಎರಡನೇ ವರ್ಷ ಜನಸಂಖ್ಯೆ ಇಳಿಮುಖವಾಗಿದೆ. ಜನನ ಪ್ರಮಾಣ ಇಳಿಕೆ ಚೀನಾಕ್ಕೆ ಸವಾಲಾಗಿದೆ:ಕೋವಿಡ್ -19 ಏಕಾಏಕಿ ಸಾವಿನ ಸಂಖ್ಯೆಯಲ್ಲಿ ತೀವ್ರ ಹೆಚ್ಚಳದ ಬಗ್ಗೆ ಜನಸಂಖ್ಯಾಶಾಸ್ತ್ರಜ್ಞರು ಭಯಪಟ್ಟಿದ್ದಾರೆ. ಜನನ ಪ್ರಮಾಣ ಕಡಿಮೆಯಾಗುತ್ತಿರುವುದು ಚೀನಾಕ್ಕೆ ಆರ್ಥಿಕ ಮತ್ತು ಸಾಮಾಜಿಕ ಸವಾಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕುಸಿತ ಕಡಿಮೆಯಾಗಿದೆ:ಜನನ ಪ್ರಮಾಣ ಸತತ 7ನೇ ವರ್ಷಕ್ಕೆ ಕುಸಿದಿದೆ ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ಕಳೆದ ವರ್ಷ, ಚೀನಾದಲ್ಲಿ ಸುಮಾರು 9 ಮಿಲಿಯನ್…
ಗೂಗಲ್ ಪೇ (Google Pay) ಗುಡ್ ನ್ಯೂಸ್ ನೀಡಿದೆ. ಇನ್ನು ಮುಂದೆ ಗೂಗಲ್ ಪೇ ಮೂಲಕವು ಸಾಲ ಪಡೆಯಬಹುದು. ಎನ್ಬಿಎಫ್ಸಿಗಳು ಮತ್ತು ಡಿಜಿಟಲ್ ಲೆಂಡಿಂಗ್ ಪ್ಲಾಟ್ಫಾರ್ಮ್ಗಳು ಸುಲಭವಾಗಿ ಸಾಲವನ್ನು ಒದಗಿಸುತ್ತಿವೆ. ನೀವು ಆನ್ಲೈನ್ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದಲ್ಲದೇ ಥರ್ಡ್ ಪಾರ್ಟಿ ಆಪ್ಗಳ ಮೂಲಕವೂ ಸಾಲ ಪಡೆಯಬಹುದು. ನೀವು Google Pay ಮೂಲಕವೂ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ನೀವು Google Pay ಮೂಲಕ ಸಾಲ ಪಡೆಯಬಹುದು. ಆದರೆ ಇಲ್ಲಿ ಗೂಗಲ್ ಪೇ ನೇರ ಸಾಲ ನೀಡುವುದಿಲ್ಲ. ಹಣಕಾಸು ಕಂಪನಿಗಳು Google Pay ಜೊತೆಗೆ ಪಾಲುದಾರಿಕೆ. ಇದು ಪಾಲುದಾರಿಕೆಯಲ್ಲಿ ಸಾಲಗಳನ್ನು ನೀಡುತ್ತದೆ. ಅಂದರೆ ನೀವು Google Pay ಅಪ್ಲಿಕೇಶನ್ಗೆ ಹೋಗಿ ಅಲ್ಲಿ ಲಭ್ಯವಿರುವ ಡಿಜಿಟಲ್ ಲೆಂಡಿಂಗ್ ಪ್ಲಾಟ್ಫಾರ್ಮ್ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. Google Pay ಸಾಲಗಳಿಗೂ ಇದರೊಂದಿಗೆ ಯಾವುದೇ ಸಂಬಂಧವಿಲ್ಲ. ಮಧ್ಯವರ್ತಿ ಮಾದರಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗಮನಿಸಿ. ಸಾಲ ಪಡೆಯಲು ಬಯಸುವವರು ಮೊದಲು Google Pay ಅಪ್ಲಿಕೇಶನ್ಗೆ ಹೋಗಬೇಕು. ಅಲ್ಲಿ ನೀವು…
ಭಾರೀ ಊಟದ ನಂತರ ಅಸಿಡಿಟಿಯಿಂದಬಳಲುತ್ತಿದ್ದರೆ, ಬಿಸಿಲಿನಿಂದ ಸುಸ್ತಾಗಿ ಮನೆಗೆ ಬಂದಾಗ, ತಂಪು ಪಾನೀಯಗಳ, ಸೋಡಾ ಇತರೆ ಬಾಟಲಿಯನ್ನು ಮೊರೆ ಹೋಗುವ ಬದಲು ಮನೆಯಲ್ಲೇ ಮಜ್ಜಿಗೆ ಸೇವಿಸಿ ನೋಡಿ. ಹೌದು ಮಸಾಲೆ ಮಜ್ಜಿಗೆ, ಮೊಸರು ಕಡಿದು ಬೆಣ್ಣೆ ತಗೆದ ಕಡಿದ ಮಜ್ಜಿಗೆ, ನೀರಾಗಿರುವ ಮಜ್ಜಿಗೆ ಸೇವಿಸಿ ನಂತರ ಅದರ ಚಮತ್ಕಾರವನ್ನು ಅನುಭವಿಸಿ ನೋಡಿ. ಮೊಸರು ಮತ್ತು ಜೀರಿಗೆ, ಕರಿಬೇವಿನ ಎಲೆಗಳು, ಶುಂಠಿ ಮತ್ತು ಉಪ್ಪು, ಮಜ್ಜಿಗೆ ಮುಂತಾದ ಮಸಾಲೆಗಳಿಂದ ತಯಾರಿಸಿದ ರುಚಿಕರವಾದ, ತಂಪಾದ ಪಾನೀಯವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನೀವು ಪ್ರತಿದಿನ ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಮಸಾಲೆಯುಕ್ತ ಊಟದ ನಂತರ ಹೊಟ್ಟೆಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ: ತಂಪಾದ, ನೀರಿರುವ ಮೊಸರಿನೊಂದಿಗೆ ಅಂದರೆ ಮಜ್ಜಿಗೆಯೊಂದಿಗೆ ತಯಾರಿಸಲಾಗುತ್ತದೆ. ಈ ಪಾನೀಯವು ಹೊಟ್ಟೆಯ ಉರಿಯನ್ನು ಶಮನಗೊಳಿಸುತ್ತದೆ. ಊಟದ ಮಸಾಲೆಯಿಂದ ಉಂಟಾಗುವ ಕಿರಿಕಿರಿಯಿಂದ ಹೊಟ್ಟೆಯನ್ನು ಶಾಂತಗೊಳಿಸುತ್ತದೆ. ಮೊಸರು, ನೀರು, ಜೀರಿಗೆ, ಮೆಣಸು ಹಾಗೂ ಕರಿಬೇವು, ಉಪ್ಪು ಹಾಕಿ ಚೆನ್ನಾಗಿ…
ಸೂರ್ಯೋದಯ: 06:53, ಸೂರ್ಯಾಸ್ತ : 06:00 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯಮಾಸ, ಶುಕ್ಲ ಪಕ್ಷ, ಉತ್ತರಾಯಣ, ಹೇಮಂತ ಋತು, ರಾಹು ಕಾಲ: 04:30 ನಿಂದ 06:00 ತನಕ ಯಮಗಂಡ: 12:00 ನಿಂದ 01:30 ತನಕ ಗುಳಿಕ ಕಾಲ: 03:00 ನಿಂದ 04:30 ತನಕ ಅಮೃತಕಾಲ: ರಾ.12:34 ನಿಂದ ರಾ .2:13 ತನಕ ಅಭಿಜಿತ್ ಮುಹುರ್ತ: ಮ.12:04 ನಿಂದ ಮ.12:49 ತನಕ ಮೇಷ ರಾಶಿ: ಪಿ ಜಿ ನಿಧಾನಗತಿಯ ಆರ್ಥಿಕ ಚೇತರಿಕೆ,ಖಾನಾವಳಿ ನಡೆಸುವವರಿಗೆ ಆರ್ಥಿಕ ಚೇತರಿಕೆ,ಈ ರಾಶಿಯವರಿಗೆ ಈ ಬಾರಿ ಬಂಪರ್ ಕೊಡುಗೆ,ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೆ ಸಿಹಿಸುದ್ದಿ, ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ಯಶಸ್ವಿ ಕಾಣುವ ಸೌಭಾಗ್ಯ ಕೂಡಿಬಂದಿದೆ,ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭಫಲವನ್ನು ಖಚಿತವಾಗಿ ಪಡೆದುಕೊಳ್ಳುವಿರಿ. ವ್ಯಾಪಾರ ವಹಿವಾಟದಲ್ಲಿ ಗಣನೀಯ ಏರಿಕೆ. ಭೂಮಿ ಖರೀದಿ ಅಥವಾ ಭೂಮಿ ಮಾರಾಟ ಬಯಸುವರಿಗೆ ಯಶಸ್ಸು. ಮನೆ ಕಟ್ಟಡ ಸುಗಮವಾಗಲಿದೆ. ವಿದೇಶಕ್ಕೆ ಹೋಗುವ ಕನಸು…