ಚಾಮರಾಜನಗರ: ರೈತನ ಜಮೀನಿಗೆ ನುಗ್ಗಿ ಚಿರತೆಯೊಂದು ನಾಯಿ ಮೇಲೆ ದಾಳಿ ಮಾಡಿ ಕೊಂದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಪುರ ಗ್ರಾಮದಲ್ಲಿ ನಡೆದಿದೆ. ಹೆಗ್ಗವಾಡಿಪುರ ಗ್ರಾಮದ ರೈತ ಮೂರ್ತಿ ಎಂಬುವವರ ಸಾಕು ನಾಯಿಯಾಗಿದ್ದು, ತಡ ರಾತ್ರಿ ನಾಯಿಯನ್ನು ಕೊಂದಾಕಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಬಂದು ಪರೀಶೀಲನೆ ನಡೆಸಿದ್ದಾರೆ. ಕೂಡಲೆ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ ಮಾಡಿದ್ದಾರೆ.
Author: AIN Author
ಬೆಂಗಳೂರು: ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ರೋಹನ್ ಬೋಪಣ್ಣ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ರೋಹನ್ ಬೋಪಣ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದರು ಇಂದು ಅಭಿನಂದಿಸಿ 50 ಲಕ್ಷ ರೂ.ಗಳ ಬಹುಮಾನ ಘೋಷಿಸಿದರು ಸಚಿವರಾದ ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಗೂ ರೋಹನ್ ಬೋಪಣ್ಣ ಅವರ ಕುಟುಂಬದವರು ಉಪಸ್ಥಿತರಿದ್ದರು.
ಗದಗ: ನಗರದ ಜಗದ್ಗುರು ತೋಂಟದಾರ್ಯ ಮಠದ ಆವರಣದಲ್ಲಿ ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ಮಹಿಳಾ ಸಮಿತಿಯಿಂದ ಪಂಚಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು. ಸಮಾರಂಭದ ನಂತರ ಮಾತನಾಡಿದ ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ಮಹಿಳಾ ಸಮಿತಿಯ ರಾಜ್ಯ ಅಧ್ಯಕ್ಷೆ ಡಾ. ಆರ್ ಈರಮ್ಮ ಅವರು ಸಮಾಜ ಕಲ್ಯಾಣ ಇಲಾಖೆ ಸವಿವ ಎಚ್ ಸಿ ಮಹದೇವಪ್ಪ ಅವರಿಗೆ, ಲೋಕಸಭಾ ಟಿಕೇಟ್ ಹಂಚಿಕೆ ಹುನ್ನಾರ ನಡೀತಿದ್ದು ಸಿಎಂ ಸಿಧ್ಧರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ ಅದನ್ನ ತಪ್ಪಿಸಬೇಕು ಅಂತಾ ಮನವಿ ಮಾಡಿದ್ರು. ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಎಚ್ ಸಿ ಮಹದೇವಪ್ಪ ಅವರು ದೀನ ದಲಿತರ ಪರ ಹಗಲಿರುಳು ದುಡೀತಿದ್ದಾರೆ ಅಂತಹ ಸಚಿವರನ್ನ ನಾವು ಬಿಟ್ಟು ಕೊಡಲ್ಲ ಅಂತಾ ಮನವಿ ಮಾಡ್ತೇನೆ ಅಂದ್ರು.
ಕಲಬುರಗಿ: ನದಿಗೆ ಹಾರಿ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ..ಶಹಬಾದ್ ಸಮೀಪದ ಕಾಗಿಣಾ ನದಿಯಲ್ಲಿ ಘಟನೆ ನಡೆದಿದ್ದು ಸಾವಿಗೆ ಶರಣಾದವರನ್ನ ತಾಯಿ ಸುಮಲತಾ ಮಗಳು ವರ್ಷಾ ಅಂತ ಗುರುತಿಸಲಾಗಿದೆ. ಮೃತರು ಕಲಬುರಗಿಯ ಎಂಬಿ ನಗರ ನಿವಾಸಿಗಳಾಗಿದ್ದು ನಿನ್ನೆ ಸಂಜೆ ಮನೆ ಬಿಟ್ಟಾದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ..
ಬೆಂಗಳೂರು: ನಗರದ ಅತೀ ದೊಡ್ಡ ಮಾಲ್ ಆಗಿರುವ ಲೂಲು ಮಾಲ್ ನಲ್ಲಿ ಫ್ಲವರ್ ಫೆಸ್ಟ್ ಆರಂಭಗೊಂಡಿದ್ದು ಬಗೆ ಬಗೆ ಹೂವುಗಳು ಜನರ ಕಣ್ಮನ ಸೆಳೆಯುತ್ತಿವೆ. ಲೂಲು ಮಾಲ್ ನಲ್ಲಿ ಅರಳಿದ ತರಾವರಿ ಹೂಗಳಾಗಿದ್ದು ಉಚಿತ ಪುಷ್ಪ ಪ್ರದರ್ಶನ ನಡೆಯುತ್ತಿದ್ದು ಫೇ. 18 ರವರೆಗೆ ಫ್ಲವರ್ ಫೆಸ್ಟ್ ನಡೆಯಲಿದೆ. ಲುಲು ಮಾಲ್ ನಲ್ಲಿ ವೆರೈಟಿ ಎಸ್ಯೋಟಿಕ್ ಮತ್ತು ಅಪರೂಪ ಜಾತಿಗಳ ಹೂಗಳ ಪ್ರದರ್ಶನ ಆರ್ಕಿಡ್ಸ್ ಸ್ಪೀಸೀಸ್, ಜಪಾನೀಸ್ ರೆಡ್ ಮೇಪಲ್, ಬ್ರೊಮೆಲಿಯಾಡ್ಸ್, ಸ್ಪ್ಯಾನಿಷ್ ಮೊಸ್, ಮಾಸ್ಟರ್ ಆಲ್ಬಾ, ಆ್ಯಂಟ್ ನೆಸ್ಟ್… ಪ್ರದರ್ಶನದಲ್ಲಿ ಮಣ್ಣಿನ ವಸ್ತುಗಳು, ಆಂಟಿಕ್ ಗೊಂಬೆಗಳು, ವೆರೈಟ್ ವೆರೈಟ್ ಸ್ಟಾಲ್ಸ್ ತರಾವರಿ ಹೂಗಳ ಜೊತೆಗೆ ಫಿಶ್ ಅಕ್ವೇರಿಯಂ ಪ್ರದರ್ಶನದ ಅಟ್ರಾಕ್ಷನ್…!
ಧಾರವಾಡ: ಸಂಸದರ ಕ್ರೀಡಾ ಮಹೋತ್ಸವದ ಅಂಗವಾಗಿ ಧಾರವಾಡ ಗ್ರಾಮೀಣ ಕ್ಷೇತ್ರದ ನರೇಂದ್ರ ಗ್ರಾಮದಲ್ಲಿ ಫೆ.20 ಹಾಗೂ 21 ರಂದು ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ ಎಂದು ಮಾಜಿ ಶಾಸಕ ಅಮೃತ ದೇಸಾಯಿ ಹೇಳಿದರು. ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಗ್ರಾಮದ ಕುಂಭಾಪುರ ಕೆರೆ ಹತ್ತಿರ ಇರುವ ತಿರ್ಲಾಪುರ ಅವರ ಜಾಗದಲ್ಲಿ ಈ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳು ನಡೆಯಲಿವೆ. ಮ್ಯಾಟ್ ಮೇಲೆ ಕಬ್ಬಡಿ ಆಡಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಅನೇಕ ಕಡೆಗಳಲ್ಲಿ ಕಬಡ್ಡಿ ಪಂದ್ಯಾವಳಿಗಳು ನಡೆದಿವೆ. ಈಗ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಲಿವೆ ಎಂದರು. https://ainlivenews.com/in-this-scheme-just-264-rs-deposit-rs-5000-every-month-get-a-pension/ ಪಂದ್ಯಾವಳಿಯಲ್ಲಿ ಗೆದ್ದ ಮೊದಲ ತಂಡಕ್ಕೆ 40 ಸಾವಿರ, ದ್ವಿತೀಯ ಬಹುಮಾನ 20 ಸಾವಿರ, ತೃತೀಯ ಹಾಗೂ ಚತುರ್ಥವಾಗಿ ತಲಾ 10 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದರು. ಪಂದ್ಯಾವಳಿಯಲ್ಲಿ ಭಾಗವಹಿಸುವ ಇಚ್ಛಿಸುವ ತಂಡಗಳು ವಾಟ್ಸಪ್ ಸಂಖ್ಯೆ 8050224333 ಕ್ಕೆ ಸಂಪರ್ಕಿಸಬಹುದು. ಕಾರ್ಯಕ್ರಮದ ಮೊದಲು ಸಂಜೆ 7ಕ್ಕೆ ಸಂಗೀತ…
ಕೋಲಾರ : ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಬೂತ್ ಮಟ್ಟದ ಏಜೆಂಟರ್ ಸಭೆ ನಡೆಯುತ್ತಿದ್ದು ಈ ವೇಳೆ ಮಾರಾಮಾರಿ ನಡೆದಿದ್ದು ಕೆಪಿಸಿಸಿ ಕಾರ್ಯದರ್ಶಿ ರಮೇಶ್ ಮತ್ತು ರಾಜಕುಮಾರ್ ಸಮ್ಮುಖದಲ್ಲಿ ನಗರದ ಡಿಸಿಸಿ ಬ್ಯಾಂಕ್ ಪಕ್ಕದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಪರಸ್ಪರ ಬಡಿದಾಟ ಹೊಡೆದಾಟ ನಡೆದಿದೆ. ನಗರದ ಡಿಸಿಸಿ ಬ್ಯಾಂಕ್ ಪಕ್ಕದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾರಾಮಾರಿ ನಡೆದಿದ್ದು ಕೆಪಿಸಿಸಿ ಕಾರ್ಯದರ್ಶಿ ರಮೇಶ್ ಮತ್ತು ರಾಜಕುಮಾರ್ ಸಮ್ಮುಖದಲ್ಲಿ ಪರಸ್ಪರ ಬಡಿದಾಟ ನಡೆದಿದ್ದು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ ಮೇಲೆ ಏಕಾಏಕಿ ದಾಳಿ ನಡೆದಿದೆ. ಬ್ಯಾನರ್ ನಲ್ಲಿ ಶಾಸಕ ಕೊತ್ತೂರು ಮಂಜುನಾಥ್, ರಮೇಶ್ ಕುಮಾರ್ , ನಸೀರ್ ಅಹ್ಮದ್ ಫೋಟೊ ಇಲ್ಲದ ಹಿನ್ನಲೆಯಲ್ಲಿ ಗದ್ದಲ ಎದ್ದಿದ್ದು ಸಭೆಯಿಂದ ಹೊರ ನಡೆದ ಮುನಿಯಪ್ಪ ಬೆಂಬಲಿಗ ಕಾರ್ಯಾಧ್ಯಕ್ಷ ಊರುಬಾಗಲು ಶ್ರೀನಿವಾಸ.
ಬೆಂಗಳೂರು: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾವಿರಾರು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ರಚನೆಗೂ ಮುನ್ನ ನೀಡಿದ 6 ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಎರಡು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ಯೆಯರ ಸಂಘದಿಂದ ಪ್ರತಿಭಟನೆ ನಡೆಸುತ್ತಿದ್ದು ಇವತ್ತಿನಿಂದ ಎರಡು ದಿನಗಳ ಕಾಲ ಅಹೋರಾತ್ರಿ ಧರಣಿಗೆ ಸಿದ್ಧತೆ ನಗರದ ಫ್ರೀಡ್ಂ ಪಾರ್ಕ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿರೋ ಆಶಾ ಕಾರ್ಯಕರ್ತರು ಆಶಾ ಪ್ರೋತ್ಸಾಹ ಧನ ಪಾವತಿ, RCH ಪೊರ್ಟಲ್ನಿಂದ ಡೀಲಿಂಕ್ ಮಾಸಿಕ ಕನಿಷ್ಟ ವೇತನ 15 ಸಾವಿರ ನಿಗಧಿ ಮಾಡುವಂತೆ ಹಾಗೂ ಇನ್ನೀತರ ಬೇಡಿಕೆಗಳಿಗೆ ಒತ್ತಾಯಿಸಿ ನಡೆಯುತ್ತಿರುವ ಧರಣಿ ಇಲ್ಲಿದೆ ಬೇಡಿಕೆಗಳು ಪ್ರೋತ್ಸಾಹಧನಕ್ಕೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಆಗುತ್ತಿರುವ ವಂಚನೆ ತಡೆಯಲು ಆರ್.ಸಿ.ಎಚ್. ಪೋರ್ಟಲ್ ಅನ್ನು ವೇತನ ಪಾವತಿ ಪ್ರಕ್ರಿಯೆಯಿಂದ ಬೇರ್ಪಡಿಸಬೇಕು. ಮೊಬೈಲ್ ಬಳಕೆ ಬಾರದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಮೊಬೈಲ್ ಬಳಸಿ ದತ್ತಾಂಶ ಸಂಗ್ರಹಿಸುವವರಿಗೆ ಪ್ರೋತ್ಸಾಹಧನ ಒದಗಿಸಬೇಕು. ಆರ್.ಸಿ.ಎಚ್. ಪೋರ್ಟಲ್ನಲ್ಲಿನ…
ನವದೆಹಲಿ: ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿಯಾಗಬೇಕು, ಸ್ವಾಮಿನಾಥನ್ ವರದಿ ಜಾರಿಯಾಗಬೇಕು, ರೈತರಿಗೆ ಪಿಂಚಣಿ ಸೌಲಭ್ಯ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ರೈತರು (Farmers) ದೆಹಲಿಯಲ್ಲಿ ಮತ್ತೊಮ್ಮೆ ಐತಿಹಾಸಿಕ ಪ್ರತಿಭಟನೆ ನಡೆಸಲು ತಿರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.13 (ಇಂದು) ʻದೆಹಲಿ ಚಲೋʼಗೆ (Delhi Chalo) ಪಂಜಾಬ್ ಮತ್ತು ಹರಿಯಾಣ ರೈತರು ʻದೆಹಲಿ ಚಲೋʼಗೆ ಕರೆ ನೀಡಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್, ಹರಿಯಾಣ, ಉತ್ತರಪ್ರದೇಶದಿಂದಲೂ ರೈತರು ದೆಹಲಿಗೆ ಪ್ರವೇಶಿಸಲಿದ್ದಾರೆ. ಕರ್ನಾಟಕದಿಂದಲೂ ರೈತ ಮುಖಂಡ ಕುರುಬೂರು ಶಾಂತಕುಮಾರ್ ಭಾಗಿಯಾಗಲಿದ್ದಾರೆ. ಈ ರೈತ ಹೋರಾಟದಲ್ಲಿ ಸುಮಾರು 200 ಸಂಘಟನೆಗಳಿಂದ 25,000 ರೈತರು ಪಾಲ್ಗೊಳ್ಳುವ ಸಾಧ್ಯತೆಗಳಿವೆ. https://ainlivenews.com/in-this-scheme-just-264-rs-deposit-rs-5000-every-month-get-a-pension/ ಅಧಿಕ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವುದರಿಂದ ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಪೊಲೀಸರು (Delhi Police) ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಜೊತೆಗೆ ರಾಜಧಾನಿಯಲ್ಲಿ ಎಲ್ಲಾ ರೀತಿಯ ರ್ಯಾಲಿ, ಮೆರವಣಿಗೆ, ರಸ್ತೆ ಮಾರ್ಗಗಳನ್ನ ನಿರ್ಬಂಧಿಸಲಾಗಿದೆ. ಟ್ಯಾಕ್ಟರ್ಗಳಲ್ಲಿ ಜನರನ್ನು ತುಂಬಿಕೊಂಡು ಹೋಗುವುದಕ್ಕೂ ನಿಷೇಧ ಹೇರಲಾಗಿದೆ. ಮಾರ್ಚ್ 12ರ ವರೆಗೂ ಈ…
ಬೆಂಗಳೂರು: ತನಿಖೆಯ ನೆಪವೊಡ್ಡಿ ಬಿಲ್ ಪಾವತಿ ವಿಳಂಬಕ್ಕೆ ಗುತ್ತಿಗೆದಾರರ ಆಕ್ಷೇಪ ಹೈಕೋರ್ಟಿನಲ್ಲಿ ನಿಕ್ಷೇಶ್ ಇಸ್ಟ್ರಾ ಪ್ರಾಜೆಕ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯುತ್ತದೆ. ನ್ಯಾ.ನಾಗಮೋಹನ್ದಾಸ್ ಆಯೋಗದಲ್ಲಿ ವಿಚಾರಣಾ ಪ್ರಕ್ರಿಯೆ ಆರಂಭಿಸಿಲ್ಲ ಜನವರಿ 3ರಂದು ಸಮಿತಿಗೆ 45 ಕಾಮಗಾರಿಗಳ ದಾಖಲೆ ನೀಡಲಾಗಿದೆ ಗುತ್ತಿಗೆಯ ಶೇ.75ರಷ್ಟು ಹಣವನ್ನು ಗುತ್ತಿಗೆದಾರರಿಗೆ ನೀಡಲಾಗಿದೆ ಸುಕನ್ಯಾ ಸಮೃದ್ಧಿ ಯೋಜನೆ ಹೊಂದಿದ್ದೀರಾ: ಹಾಗಿದ್ರೆ ಈ ಕೆಲಸ ಮಾಡಲೇಬೇಕು, ಇಲ್ಲದಿದ್ರೆ ಖಾತೆ ನಿಷ್ಕ್ರೀಯ ಹೈಕೋರ್ಟಿಗೆ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೇಳಿಕೆ ಸರ್ಕಾರದ ವಿಳಂಬ ನೀತಿಗೆ ನ್ಯಾ.ಎಂ.ನಾಗಪ್ರಸನ್ನ ಅಸಮಾಧಾನ ಆಯೋಗದ ವಿಚಾರಣೆ ಪೂರ್ಣಗೊಳಿಸಲು 45 ಸಾಕಾಗುವುದಿಲ್ಲವೇ? ಫೆಬ್ರವರಿ 6ರೊಳಗೆ ಆಯೋಗ ವಿಚಾರಣೆ ಪೂರ್ಣಗೊಳಿಸಬೇಕಿತ್ತು ಆಯೋಗಕ್ಕೆ ದಾಖಲೆ ಒದಗಿಸಲು ಅಧಿಕಾರಿಗಳು ತಡ ಮಾಡಿದ್ದೇಕೆ? ಬಿಬಿಎಂಪಿ ಮುಖ್ಯ ಇಂಜಿನಿಯರ್ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ಕೆಲಸ ಮಾಡದ ಅಧಿಕಾರಿಗಳನ್ನು ಬದಲಾಯಿಸಿ- ಹೈಕೋರ್ಟ್ ಕಾಮಗಾರಿ ಮಾಡದೇ ಬಿಲ್ ಕೇಳಿದ್ದರೆ ತನಿಖೆ ನಡೆಸಿ ಕ್ರಮಕೈಗೊಳ್ಳಿ ಆದ್ರೆ ವಿಚಾರಣೆ ನಡೆಸದೇ ಬಿಲ್ ಬಾಕಿಯಿಟ್ಟರೆ ಹೇಗೆಂದು ಪ್ರಶ್ನೆ ರಾಜ್ಯ…