ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಟೀಂ ಇಂಡಿಯಾಗೆ 322 ರನ್ಗಳ ಮುನ್ನಡೆ ಸಾಧಿಸಿದೆ. ಯಶಸ್ವಿ ಜೈಸ್ವಾಲ್ ಶತಕದ ನೆರವಿನಿಂದ ಟೀಂ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 322 ರನ್ಗಳ ಮುನ್ನಡೆ ಸಾಧಿಸಿದೆ. 3ನೇ ದಿನದಾಟದ ಅಂತ್ಯಕ್ಕೆ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದೆ. ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ 19 ರನ್ ಗಳಿಸಿ ಔಟಾದರು. ನಂತರ ಜೈಸ್ವಾಲ್ ಮತ್ತು ಶುಭಮನ್ ಗಿಲ್ (Shubman Gill) ಉತ್ತಮ ಜೊತೆಯಾಟವಾಡಿದರು ಜೈಶ್ವಾಲ್ 103 (133 ಬಾಲ್, 5 ಸಿಕ್ಸರ್, 9 ಫೋರ್) ಸಿಡಿಸಿ ಮಿಂಚಿದರು. ಆಟದ ವೇಳೆ ಬೆನ್ನು ನೋವಿನ ಸಮಸ್ಯೆಯಿಂದ ರಿಟೈರ್ಡ್ ಹರ್ಟ್ ಆಗಿ ಹೊರನಡೆದರು. ರಜತ್ ಪಾಟಿದಾರ್ ಶೂನ್ಯಕ್ಕೆ ಔಟಾದರು. ಶುಭಮನ್ ಗಿಲ್ ಅರ್ಧಶತಕ ಬಾರಿಸಿ (64) ಆಟವಾಡುತ್ತಿದ್ದಾರೆ.
Author: AIN Author
ಕೊಪ್ಪಳ:- ಗಾಲಿ ಜನಾರ್ಧನ್ ರೆಡ್ಡಿ ಅವರು ಕೊಪ್ಪಳದಲ್ಲಿ ಮಾತಾಡುವಾಗ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಗುಣಗಾನ ಮಾಡಿದರು. ಕ್ಷೇತ್ರದ ಸಲುವಾಗಿ ತಾನು ಯಾವುದೇ ಬೇಡಿಕೆ ತೆಗೆದುಕೊಂಡು ಹೋದಾಗ ಅವರಿಬ್ಬರು ಬಹಳ ಚೆನ್ನಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು. ನಿನ್ನೆ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ರೂ. 100 ಕೋಟಿ ಘೋಷಿಸಿರುವುದು ರೆಡ್ಡಿಯವಲ್ಲಿ ಸಂತಸ ಮೂಡಿದೆ. ಹನುಮ ಜನುಮ ಸ್ಥಳ ಅಂಜನಾದ್ರಿ ಒಂದು ಪುಣ್ಯಕ್ಷೇತ್ರವಾಗಿ ಮಾಡಲು ಅವರು ಸರ್ಕಾರವನ್ನು ಆಗ್ರಹಿಸಿದ್ದು ಸತ್ಯ ಮತ್ತು ಮುಖ್ಯಮಂತ್ರಿ ಅವರ ಬೇಡಿಕೆಯನ್ನು ಮನ್ನಿಸಿದ್ದಾರೆ. ಹಾಗಾಗಿ ಅವರ ಧೋರಣೆಯಲ್ಲಿ ಬದಲಾವಣೆಯೇ? ಶಿವಕುಮಾರ್ ಮತ್ತು ತನ್ನ ನಡುವೆ ಕಳೆದ ಎರಡೂವರೆ ದಶಕಗಳಿಂದ ಸ್ನೇಹವಿದೆ, ಆದರೆ ಹಾಗಂತ ತಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಅಂತ ಯಾರೂ ಭಾವಿಸಬಾರದು, ತಾನು ಬಿಜೆಪಿ ಮತ್ತು ಕಾಂಗ್ರೆಸ್-ಎರಡನ್ನೂ ಸೇರಲ್ಲ ಎಂದು ಜನಾರ್ಧನ ರೆಡ್ಡಿ ಸ್ಪಷ್ಟವಾಗಿ ಹೇಳಿದರು.
ವಿಜಯಪುರ:- ಯಡಿಯೂರಪ್ಪ ಮೊದಲು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ ಎಂದು MB ಪಾಟೀಲ್ ಹೇಳಿದ್ದಾರೆ ನಿನ್ನೆ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ಯಡಿಯೂರಪ್ಪ ಟೀಕಿಸಿರುವುದಕ್ಕೆ ಪಾಟೀಲ ಪ್ರತಿಕ್ರಿಯೆ ಕೇಳಿಸಿಕೊಳ್ಳಿ. ಹಿಂದೆ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜನರಿಗೆ 606 ಭರವಸೆಗಳನ್ನು ನೀಡಿ ಕೇವಲ 55 ಅನ್ನು ಮಾತ್ರ ಈಡೇರಿಸಿತ್ತು. ಆದರೆ 2013ರಲ್ಲಿ ಸಿದ್ದರಾಮಯ್ಯ ತಾವು ನೀಡಿದ 165 ಭರವಸೆಗಳಲ್ಲಿ 158 ಈಡೇರಿಸಿದ್ದಲ್ಲದೆ, 30 ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದರು, ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡುವ ಯಡಿಯೂರಪ್ಪ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಲಿ ಎಂದು ಪಾಟೀಲ್ ಖಾರವಾಗಿ ಟೀಕಿಸಿದರು.
ತುಮಕೂರು:- ರಾಜ್ಯಸಭೆ ಟಿಕೆಟ್ ಕೊನೆ ಹಂತಕ್ಕೆ ಬಂದು ಮಿಸ್ ಆಗಿದ್ದಕ್ಕೆ ವಸತಿ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಿಗ್ಗೆ ಎಲೆರಾಂಪುರ ಹನುಮಂತನಾಥ್ ಸ್ವಾಮೀಜಿ ಭೇಟಿಯಾಗಿದ್ದೆ, ಬಳಿಕ ಸಿದ್ದರ ಬೆಟ್ಟಕ್ಕೆ ಹೋಗಿದ್ದೆ. ನಂತರ ಸಿದ್ದಗಂಗಾ ಮಠದ ಗುರುಗಳಿಗೆ ಪೋನ್ ಮಾಡ್ದೆಡಿದ್ದೆ. ಪ್ರಸಾದಕ್ಕೆ ಮಠಕ್ಕೆ ಬನ್ನಿ ಎಂದು ಕರೆದಿದ್ದಕ್ಕೆ ಬಂದಿದ್ದೇನೆ. ತುಮಕೂರು ಜಿಲ್ಲೆಯಲ್ಲಿ ನಡೆದಾಡುವ ದೇವರು ಇದಿದ್ದು. ಹಾಗಾಗಿ ತುಮಕೂರಿ ಎಲ್ಲಾ ಮಠಗಳಿಗೆ ಭೇಟಿ ಕೊಡುತ್ತಿದ್ದೇನೆ. ಬಾಲಗಂಗಾಧರನಾಥ್ ಹಾಗೂ ಸಿದ್ದಗಂಗಾ ಶ್ರೀಗಳು ನನಗೆ ಗುರುಗಳು. ಮಠ ಮಾನ್ಯಗಳು ನನಗೇನು ಹೊಸದಲ್ಲ ಎಂದು ಸ್ಪಷ್ಟಪಡಿಸಿದರು. ನಾನು ರಾಜ್ಯಸಭೆಗೆ ಸ್ಪರ್ಧೆ ಮಾಡುತ್ತೇನೆ ಅಂದಿದ್ದು ನಿಜ. ರಾಜ್ಯಸಭೆಯಲ್ಲಿ ಎಲ್ಲವೂ ಕೊನೆ ಹಂತಕ್ಕೆ ಬಂದಿತ್ತು . ಆದರೆ, ಕೊನೆ ಕ್ಷಣದಲ್ಲಿ ಎಲ್ಲ ಬದಲಾಗಿದೆ. ಒಳ್ಳೇ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟಿದ್ದಾರೆ, ಸ್ವಾಗತ. ಪರಿಸ್ಥಿತಿ ಅವಲೋಕನ ಮಾಡಿದ್ದೇನೆ. ಲೋಕಸಭೆ ಚುನಾವಣೆಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಹೈಕಮಂಡ್ ಏನು ಹೇಳುತ್ತೆ ಅದನ್ನೇ ಹೇಳುತ್ತೇನೆ. ಹೈಕಮಂಡ್ ಟಿಕೆಟ್ ಕೊಟ್ಟರೆ ನಿಂತುಕೊಳ್ಳಬೇಕು. ಸ್ಪರ್ಧೆ ಮಾಡ್ಬೇಕು ಅಂದ್ರೆ…
ಮಂಗಳೂರು:- ಮುಂದೆಯೂ ಬಿಜೆಪಿ ಅಧಿಕಾರಕ್ಕೆ ಬಂದ್ರೆ ದೇಶದಲ್ಲಿ vಚುನಾವಣೆಯೇ ನಡೆಯಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಮ್ಮ ರಾಜ್ಯಕ್ಕೆ ದುಡ್ಡು ಎಷ್ಟು ಬರಬೇಕು ಅದು ಬರುತ್ತಿಲ್ಲ. ನಮ್ಮ ಪಾಲಿನ ಹಣ ಸಿಗುತ್ತಿಲ್ಲ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ನಮ್ಮ ಮೊದಲ ಗ್ಯಾರಂಟಿ ಎಂಎಸ್ಪಿ ಖಾತರಿ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ತರುತ್ತೇವೆ. ಮುಂದೆಯೂ ಬಿಜೆಪಿ ಅಧಿಕಾರಕ್ಕೆ ಬಂದ್ರೆ ದೇಶದಲ್ಲಿ ಚುನಾವಣೆಯೇ ನಡೆಯಲ್ಲ. ಸರ್ವಾಧಿಕಾರ ಬರುತ್ತೆ. ಮೋದಿಯನ್ನು ಶಕ್ತಿಶಾಲಿಯಾಗಿ ಮಾಡಬೇಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ. ಇವತ್ತು ಕೆಲ ಪಕ್ಷಗಳು ನಮ್ಮನ್ನು ಹೊಡೆಸಿ ಸತತವಾಗಿ ಆಳಬೇಕೆಂದು ಹೊರಟಿದ್ದಾರೆ. ಮೋದಿ ಏನಾದರೂ ಜಮೀನು ಕೊಟ್ರಾ..? ಮೋದಿ ಹೇಳಿದ ನೌಕರಿ ನಿಮಗೆ ಸಿಕ್ತಾ? ಮಂಗಳೂರಿನವರು ಬಹಳ ಬುದ್ದಿವಂತ ಜನರಿದ್ದಾರೆ. ದೇಶದ ಪ್ರಧಾನಮಂತ್ರಿ ಹೇಗೆ ಸುಳ್ಳಾಡುತ್ತಾರೆ. ನಾವು ಆರು ಗ್ಯಾರಂಟಿ ಕೊಟ್ಟಿದ್ದೇವೆ. ಇವತ್ತು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ. ಮೋದಿ ಮೋದಿ ಅಂದ್ರೆ ಹೊಟ್ಟೆ ತುಂಬುತ್ತಾ ಎಂದು ಪ್ರಶ್ನಿಸಿದರು. ಮಂಗಳೂರಿನಲ್ಲಿ…
ವಾಷಿಂಗ್ ಮಷೀನ್ನಿಂದ ಬಟ್ಟೆಗಳನ್ನು ತೊಳೆಯುವುದು ತುಂಬಾ ಸುಲಭ. ನಿಮಿಷಾರ್ಧದಲ್ಲಿ ಈ ಕೆಲಸವೂ ಆಗಿಬಿಡುತ್ತದೆ. ಆದರೆ, ನೀವು ವಾಷಿಂಗ್ ಮಷೀನ್ ಬಗ್ಗೆ ಕಾಳಜಿ ವಹಿಸದಿದ್ದರೆ ಇದು ನಿಮ್ಮ ಬಟ್ಟೆಯನ್ನೂ ಹಾಳುಮಾಡುತ್ತದೆ. ಹೌದು, ವಾಷಿಂಗ್ ಮಷೀನ್ ದೀರ್ಘಕಾಲದವರೆಗೆ ಸರಿಯಾಗಿ ಕಾರ್ಯನಿರ್ವಹಿಸಲು, ನೀವು ಅದರ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇತರ ಎಲೆಕ್ಟ್ರಾನಿಕ್ ಉಪಕರಣಗಳಂತೆ ವಾಷಿಂಗ್ ಮಷೀನ್ ಶುಚಿತ್ವವೂ ಬಹಳ ಮುಖ್ಯ ಎಂದು ಅನೇಕರಿಗೆ ತಿಳಿದಿಲ್ಲ. ಹೆಚ್ಚಿನವರು ಮಾಡುವ ತಪ್ಪೆಂದರೆ ವಾಷಿಂಗ್ ಮಷೀನ್ನಲ್ಲಿ ಬಟ್ಟೆಗಳನ್ನು ಒಗೆದ ಬಳಿಕ ಅದನ್ನು ಆಫ್ ಮಾಡಿ ಮತ್ತು ಸಂಪೂರ್ಣವಾಗಿ ಮುಚ್ಚುವುದು. ಆದರೆ ಎಂದಿಗೂ ಹೀಗೆ ಮಾಡಬೇಡಿ. ಏಕೆಂದರೆ ವಾಷಿಂಗ್ ಮಷೀನ್ನಲ್ಲಿ ಬಟ್ಟೆ ತೊಳೆದ ನಂತರ ಅದರ ಮುಚ್ಚಳವನ್ನು ಸ್ವಲ್ಪ ಹೊತ್ತು ತೆರೆದಿಡಬೇಕು. ಆದರೆ, ಇದು ಯಾಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು. ಈರೀತಿ ಮಾಡುವುದರಿಂದ ಗಾಳಿಯು ವಾಷಿಂಗ್ ಮಷೀನ್ ಒಳಗೆ ಬಂದಿಯಾಗದೆ ಹೊರಗಡೆ ಹೋಗುತ್ತದೆ. ಅಲ್ಲದೆ, ಇದರಲ್ಲಿ ಯಾವುದೇ ಬ್ಯಾಕ್ಟೀರಿಯಾ ಇದ್ದರೆ ಅದು ಹೋರಗೋಗುತ್ತದೆ. ಇದಲ್ಲದೇ ಒಮ್ಮೆ ಬಟ್ಟೆ ಒಗೆದ…
ಗ್ರೇಪ್ವೈನ್ ಕಂಪನಿಯ ಉದ್ಯೋಗಿಯೊಬ್ಬರೂ ಹೀಗೊಂದು ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಯು ಸೋಷಿಯಲ್ ಮೀಡಿಯಾ ಗಮನ ಸೆಳೆದಿದ್ದು ಮಾತ್ರವಲ್ಲದೇ, ಕಂಪನಿಯ ಸಂಸ್ಥಾಪಕ ಸೌಮಿಲ್ ತ್ರಿಪಾಠಿ ಅವರಿಗೂ ತಲುಪಿದೆ. ಅವರು ಈ ಕುರಿತು ತಮ್ಮ ಅನಿಸಿಕೆಯನ್ನು ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡಿಕೊಂಡಿದ್ದಾರೆ. ಉದ್ಯೋಗಿ ಪೋಸ್ಟ್ ಷೇರ್ ಮಾಡಿ, ಅತ್ಯುತ್ತಮ ಊಟ ಮತ್ತು ನಾಲ್ಕು ಹೊತ್ತು ಉಚಿತವಾಗಿ ಊಟ ನೀಡುವ ಕಂಪನಿಗಳಿಗೆ ಸೇರಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೇನೆ. ಗೂಗಲ್ ಸಂದರ್ಶನಕ್ಕಾಗಿ ನಾನು ತಯಾರಿ ನಡೆಸುತ್ತಿದ್ದೇನೆ. ನಾನು ಗಮನಿಸಬಹುದಾದ ಇನ್ನು ಬೇರೆ ಯಾವುದಾದರೂ ಕಂಪನಿಗಳಿವೆಯೇ ಎಂದು ಬರೆದುಕೊಂಡಿದ್ದಾರೆ. ಉದ್ಯೋಗಿಯ ಪೋಸ್ಟ್ನ ಸ್ಕ್ರೀನ್ ಶಾಟ್ ಅನ್ನು ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡಿರುವ ಗ್ರೇಪ್ವೈನ್ ಕಂಪನಿಯು ಸಂಸ್ಥಾಪಕ ಸೌಮಿಲ್ ತ್ರಿಪಾಠಿ ಅವರು, ಉಚಿತ ಊಟಕ್ಕಾಗಿ ಬೇರೆ ಕಂಪನಿ ಸೇರಲು ಮುಂದಾಗುತ್ತಿರುವ ಉದ್ಯೋಗಿಯ ಸಂಬಳ ವರ್ಷಕ್ಕೆ 43 ಲಕ್ಷ ಹಾಗೂ ನಾಲ್ಕುವರೆ ವರ್ಷ ಅನುಭವವಿದೆ ಎಂಬ ಮಾಹಿತಿಯನ್ನು ಬಹಿರಂಗ ಮಾಡಿದ್ದಾರೆ. ಅಲ್ಲದೇ, ಈ ಉದ್ಯೋಗಿಯು ಜಿಮ್ಗೆ ಹೋಗುತ್ತಿದ್ದು, ಉತ್ತಮ ಊಟಕ್ಕೆ ಆದ್ಯತೆ ನೀಡುತ್ತಾನೆ.…
ಬೆಂಗಳೂರು: ರಾಜ್ಯದಲ್ಲೂ ವಿವಿಧ ಬೇಡಿಕೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ರು. ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರೈತರು ಪರವಾಗಿಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಕೃಷಿ ಸಚಿವರ ಕಾರಿಗೆ ಹಾಗೂ ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದ್ರು. ಒಂದ್ಕಡೆ ಬೇಕೆ ಬೇಕು ನ್ಯಾಯ ಬೇಕೆಂದು ರೈತರು ಕೂಗಾಟ. ಮತ್ತೊಂದು ಕಡೆ ಕೃಷಿ ಸಚಿವ ಮುಂದೆ ರೈತ ಮಹಿಳೆ ಕಣ್ಣೀರು. ಈ ಎಲ್ಲಾ ದೃಶ್ಯಕಂಡು ಬಂದಿದ್ದು, ನಗರ ಪ್ರೀಡಂ ಪಾಕ್೯ನಲ್ಲಿ.. ಬೈಕ್ ಬೆಲೆ 60ಸಾವಿರ, ಫೈನ್ ಇರೋದು ಒಂದೂವರೆ ಲಕ್ಷ: ಪೊಲೀಸರ ಕೈಗೆ ಸಿಕ್ಕಿದ್ದೆ ರೋಚಕ! ಹೌದು ಮುಖ್ಯಮಂತ್ರಿ ನಿನ್ನೆ ಮಂಡಿಸಿದ ಬಜೆಟ್ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ತಿರಸ್ಕರಿಸಿದೆ. ರೈತರು ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ರೈತರ ಪರವಾಗಿ ಬಜೆಟ್ ಮಂಡನೆ ಮಾಡಿಲ್ಲ. ರೈತ ಸಂಘಟನೆಗಳು ಹೋಗಿ ಹಲವಾರು ಬೇಡಿಕೆಗಳನ್ನ ಮನವಿ ಕೊಟ್ರು ಮುಖ್ಯಮಂತ್ರಿಗಳು ಬಜೆಟ್ ಲನಲ್ಲಿ ಸ್ಪಂದಿಸಿಲ್ಲ ಎಂದು ನಗರದ ಪ್ರೀಡಂ ಪಾಕ್೯ನಲ್ಲಿ ವಿಭಿನ್ನ ನಾಟಕ ಮಾಡುವ ಮುಖಾಂತರ ಸರ್ಕಾರದ…
ಕಂಪ್ಲಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಬೆಂಗಳೂರಿನಲ್ಲಿ ಫೆಬ್ರವರಿ 27ರಂದು ನಡೆಯಲಿದೆ. ಈ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ವಿವಿಧ ಸಚಿವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಎಂದು ಕಂಪ್ಲಿ ನಗರ ಕರ್ನಾಟಕ ರಾಜ್ಯ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗನಗೌಡ ಅವರ ಮಾಹಿತಿ ತಿಳಿಸಿದರು ನಂತರ ಮಾತನಾಡಿದರು ನೌಕರರ ಪ್ರಮುಖ ಬೇಡಿಕೆಗಳನ್ನು ಸಮ್ಮೇಳನದಲ್ಲಿ ಪ್ರಸ್ತಾಪಿಸಲಾಗುವುದು. 7ನೇ ವೇತನ ಆಯೋಗದಿಂದ ವರದಿ ಪಡೆದು, ಶಿಫಾರಸುಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ನೌಕರರ ವೇತನದಿಂದ ಕಡಿತ ಮಾಡುತ್ತಿರುವ ಶೇ 10ರಷ್ಟು ವಂತಿಗೆಯನ್ನು ನಿಲ್ಲಿಸಲು ಆದೇಶ ಹೊರಡಿಸಬೇಕು. ನೌಕರರು ಹಾಗೂ ಅವರ ಅವಲಂಬಿತ ಕುಟುಂಬಗಳ ಸದಸ್ಯರಿಗೆ ನಗದು ರಹಿತ ಆರೋಗ್ಯ ಚಿಕಿತ್ಸೆ ‘ಕರ್ನಾಟಕ ಆರೋಗ್ಯ ಸಂಜೀವಿನ ಯೋಜನೆ’ ಅನುಷ್ಠಾನ ಮಾಡಬೇಕು. ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದು ವಿವರ ನೀಡಿದರು. ಈ ಸಂದರ್ಭದಲ್ಲಿ ಕಂಪ್ಲಿ ತಾಲೂಕು ಮಟ್ಟದ…
ಬೆಂಗಳೂರು: ಅವನೊಬ್ಬ ಹುಚ್ಚು ಪ್ರೇಮಿ ದೂರದ ಊರಿನಿಂದ ತನ್ನವಳನ್ನ ನೋಡ್ಬೇಕು ಎಂದು ಬಂದಿದ್ದ.ಪ್ರೇಮಿಗಳ ದಿನಕ್ಕೆ ಸರ್ಪ್ರೈಸ್ ಕೊಡ್ಬೇಕು ಎಂದು ಕಾತುರನಾಗಿದ್ದ. ಆದರೆ ಜನರ ದೃಷ್ಟಿಯಲ್ಲಿ ಆತ ಕಳ್ಳನಾಗಿದ್ದ. ಪೊಲೀಸರೂ ಕೂಡ ಠಾಣೆಯಲ್ಲಿ ಕರೆಸಿ ಕೂರಿಸಿದ್ರು. ಆದ್ರೆ ಅಸಲಿ ಸಂಗತಿಯೇ ಬೇರೆ ಇತ್ತು..ಆತನ ಕಥೆ ಕೇಳಿ ಪೊಲೀಸರೇ ಅಯ್ಯೋ ಅಂದುಕೊಂಡಿದ್ರು… ಮೊಬೈಲ್ ಹಿಡಿದು ಓರ್ವ ಓಡ್ತಿದ್ರೆ..ಆತನನ್ನ ಮತ್ತೋರ್ವ ಹಿಂಬಾಲಿಸಿದ್ದ..ಇವ್ರಿಬ್ರ ಓಟ ನೋಡಿ ಮಹಿಳಾ ಟ್ರಾಫಿಕ್ ಸಿಬ್ಬಂದಿ ಕೂಡ ಹಿಂಬಾಲಿಸಿದ್ರು..ಇವ್ರ ಈ ಹೈಡ್ರಾಮಾವನ್ನು ಜನ್ರೆಲ್ಲ ಕಣ್ ಕಣ್ ಬಿಟ್ಕೊಂಡು ನೋಡ್ತಿದ್ರು..ಕೊನೆಗೂ ಮೊಬೈಲ್ ಸಮೇತ ಆತ ಸಿಕ್ಕಿಬಿದ್ದಿದ್ದ..ಆ ಕ್ಷಣಕ್ಕೆ ಜನ್ರೆಲ್ಲ ಮೊಬೈಲ್ ಕಳ್ಳ ಅಂತಲೇ ಅಂದುಕೊಂಡಿದ್ರೆ ಠಾಣೆಗೆ ಕರೆಸಿ ವಿಚಾರಿಸಿದಾಗಲೇ ನೋಡಿ ಅಸಲಿ ಸಂಗತಿ ಬಯಲಾಗಿದ್ದು.. ಹೌದು ಆವತ್ತು ಫೆಬ್ರವರಿ ೧೩ ಸಂಜೆ 5 ಗಂಟೆ 9 ನಿಮಿಷ..ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾಶ್ ಫಾರ್ಮಸಿ ಜಂಕ್ಷನ್ ಬಳಿ ಯುವಕನೋರ್ವ ಮೊಬೈಲ್ ಕಸಿದು ಪರಾರಿ ಆಗ್ತಿದ್ದ.ಅಲ್ಲಿದ್ದವರೆಲ್ಲ ಕಳ್ಳ ಕಳ್ಳ ಎಂದು ಕಿರುಚ ತೊಡಗಿದ್ರು..ಅಲ್ಲೇ ಕೆಲಸದ ನಿಮಿತ್ತ…