ಬೆಂಗಳೂರು:- ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ .ವಿದ್ಯಾರ್ಥಿಗಳು ಫೇಲ್ ಆದರೂ, ಪಾಸ್ ಆಗಿದ್ದರೂ ಅಂತಿಮ ಪರೀಕ್ಷೆ ಮಾದರಿಯಲ್ಲಿ 3 ಬಾರಿ ಪೂರಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅನುತ್ತೀರ್ಣರಾದ ಹಾಗೂ ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದೆಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 3 ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ದ್ವಿತೀಯ ಪಿಯುಸಿಯ ಮೊದಲ ಪೂರಕ ಪರೀಕ್ಷೆ ಮಾರ್ಚ್ 1ರಿಂದ 22ವರೆಗೆ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯು ಮಾರ್ಚ್ 25 ರಿಂದ ಏಪ್ರಿಲ್ 4ರ ವರೆಗೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಅಂತಿಮ ಪರೀಕ್ಷೆ ಮಾದರಿಯಲ್ಲಿ 3 ಬಾರಿ ಪರೀಕ್ಷೆ ನಡೆಸಲಾಗುತ್ತಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 6,98,624 ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗೆ 8,96,171 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪರೀಕ್ಷೆ-1ರ ಸಂಬಂಧ ಜಿಲ್ಲಾ ಹಂತದ…
Author: AIN Author
ಧಾರವಾಡ: ಇಡೀ ರಾಜ್ಯದಲ್ಲಿ ತೀವ್ರತರವಾದ ಬರಗಾಲ ಆವರಿಸಿದೆ. ಸದ್ಯ ಬೇಸಿಗೆ ಆರಂಭವಾಗುತ್ತಿ ರುವುದರಿಂದ ರೈತರು ಮೇವಿಗಾಗಿ ಪರದಾಡುವಂತಾಗಿದೆ. ಹಿಂಗಾರು ಹಾಗೂ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಧಾರವಾಡ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮೇವು ದಾಸ್ತಾನು ಇದೆ. ಮೇವಿನ ತೊಂದರೆ ಉಂಟಾಗದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲು ಈಗ ಮುಂದಾಗಿದೆ. ಅಡಿಕೆ ಬೆಳೆಯಲ್ಲಿ ಎಲೆಚುಕ್ಕೆ ರೋಗ: ನಿರ್ವಹಣೆಗಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಇಂತಿವೆ ಈ ನಿಟ್ಟಿನಲ್ಲಿಂದು ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮದಲ್ಲಿರುವ ಸರ್ಕಾರಿ ಗೋಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಗೋಶಾಲೆಯಲ್ಲಿರುವ ಜಾನುವಾರುಗಳು ಮತ್ತು ಮೇವಿನ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಮಾದನಭಾವಿ ಗ್ರಾಮದಲ್ಲಿರುವ ಸರ್ಕಾರಿ ಗೋಶಾಲೆ 100 ಜಾನುವಾರುಗಳನ್ನು ಜೋಪಾನ ಮಾಡುವಷ್ಟು ಸಾಮರ್ಥ್ಯ ಹೊಂದಿದೆ. ಆದರೆ, ವಿಶಾಲವಾದ ಜಾಗ ಹೊಂದಿರುವ ಈ ಗೋಶಾಲೆಯಲ್ಲಿ 500ರವರೆಗೂ ಜಾನುವಾರುಗಳನ್ನು ಜೋಪಾನ ಮಾಡಬಹುದಾಗಿದೆ. ಮೇವಿನ ಕೊರತೆಯುಂಟಾದಲ್ಲಿ ಈ ಗೋಶಾಲೆ ರೈತರಿಗೆ ಅನುಕೂಲ ವಾಗಲಿದೆ. ಧಾರವಾಡ ಜಿಲ್ಲೆಯಲ್ಲಿ 12 ವಾರಕ್ಕಾಗುವಷ್ಟು…
ಮಹಿಳಾ ಪ್ರೀಮಿಯರ್ ಲೀಗ್ನ ಎರಡನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಫೆಬ್ರವರಿ 23 ರಂದು ಈ ಬಹುನಿರೀಕ್ಷಿತ ಟೂರ್ನಿಗೆ ಚಾಲನೆ ನೀಡಲಾಗಿದೆ.ಮಹಿಳಾ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಹೌದು, ಈ ಬಾರಿ ಕ್ರಿಕೆಟ್ ಪ್ರೇಮಿಗಳಿಗೆ ಡಬ್ಲ್ಯುಪಿಎಲ್ ನಿಂದ ಡಬಲ್ ಖಷಿ ಸಿಗಲಿದೆ. ಫೆಬ್ರವರಿ 23 ರಂದು ಸಂಜೆ ಅದ್ಧೂರಿ ಉದ್ಘಾಟನಾ ಸಮಾರಂಭ ಕೂಡ ನಡೆಯಲಿದೆ. ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಈ ಬಾರಿ ಡಬ್ಲ್ಯುಪಿಎಲ್ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮನೋರಂಜನೆ ನೀಡಲಿದ್ದಾರೆ. ಈ ಬಗ್ಗೆ ಮಂಡಳಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ. ಡಬ್ಲ್ಯುಪಿಎಲ್ 2024 ಪೂರ್ಣ ವೇಳಾಪಟ್ಟಿ ಹೀಗಿದೆ ಫೆಬ್ರವರಿ 23: ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್, ಬೆಂಗಳೂರು ಫೆಬ್ರವರಿ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್, ಬೆಂಗಳೂರು ಫೆಬ್ರವರಿ 25: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್, ಬೆಂಗಳೂರು ಫೆಬ್ರವರಿ 26: ಯುಪಿ ವಾರಿಯರ್ಸ್ vs ದೆಹಲಿ ಕ್ಯಾಪಿಟಲ್ಸ್, ಬೆಂಗಳೂರು…
ಇಂದಿನ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಖಾಯಿಲೆ PCOS. ಈ ಸಮಸ್ಯೆಯ ಬಗ್ಗೆ ನೀವು ಹೆಚ್ಚು ಗಮನ ವಹಿಸದೇ, ನಿರ್ಲಕ್ಷಿಸಿದರೆ, ಇದು ನಿಮ್ಮನ್ನು ಡಿಪ್ರೆಶನ್ಗೆ ಕರೆದೊಯ್ಯುತ್ತದೆ. ಹಾಗಾಗಿ ಪಿಸಿಓಎಸ್ ಇದ್ದವರು ಯಾವ 5 ಕೆಲಸ ಮಾಡಬಾರದು ಎಂಬುವುದನ್ನು ಕೆಳಗೆ ತಿಳಿಸಲಾಗಿದೆ. ಓದಿ ಮೊದಲನೇಯ ಕೆಲ ಕೆಟ್ಟ ಜೀವನಶೈಲಿ ಅನುಸರಿಸಬೇಡಿ. ಕೂತಲ್ಲೇ ಕುರುವುದು. ದೇಹವನ್ನು ದಂಡಿಸದೇ, ಸುಮ್ಮನೆ ಕುಳಿತುಕೊಳ್ಳುವುದು, ಬರೀ ಮೊಬೈಲ್ ನೋಡುವುದು. ಆಲಸ್ಯದ ಜೀವನ ಮಾಡುವುದೇ, ಕೆಟ್ಟ ಜೀವನಶೈಲಿ. ಇಂಥ ಜೀವನಶೈಲಿಯನ್ನು ಅನುಸರಿಸದೇ, ಮನೆಗೆಲಸ ಮಾಡಬೇಕು. ಅಥವಾ ವ್ಯಾಯಾಮ ಮಾಡಬೇಕು. ಹೊತ್ತಿಗೆ ಸರಿಯಾಗಿ ಆರೋಗ್ಯಕರ ಆಹಾರ ಸೇವಿಸಿ. ಊಟ ತಿಂಡಿಯ ವಿಷಯದಲ್ಲಿ ನೀವು ಎಷ್ಟು ಕಾಳಜಿ ವಹಿಸುತ್ತೀರೋ ಅಷ್ಟು ಉತ್ತಮ. ಹೊತ್ತಿಗೆ ಸರಿಯಾಗಿ ತಿಂಡಿ, ಊಟ ಮಾಡಬೇಕು. ಬೀದಿ ಬದಿ ತಿಂಡಿ, ಬೇಕರಿ ತಿನಿಸು, ಸಕ್ಕರೆ ಪದಾರ್ಥ, ಕರಿದ ಪದಾರ್ಥಗಳು, ಮಸಾಲೆಭರಿತ ಪದಾರ್ಥ, ಹೆಚ್ಚು ಮಾಂಸಾಹಾರದ ಸೇವನೆ ಮಾಡಿದ್ದಲ್ಲಿ, ಪಿಸಿಓಎಸ್ ಸಮಸ್ಯೆ ಹೆಚ್ಚಾಗುತ್ತದೆ. ಸರಿಯಾದ ಸಮಯಕ್ಕೆ ನಿದ್ರಿಸಬೇಕು. ರಾತ್ರಿ ಲೇಟಾಗಿ ಮಲಗುವುದು,…
ಬಬಲ್ ಗಮ್ ಅಥವಾ ಚಿವಿಂಗ್ ಗಮ್ ಬಹಳ ಜನರಿಗೆ ಅಚ್ಚುಮೆಚ್ಚು. ಸಾಧಾರಣವಾಗಿ ಮಕ್ಕಳು ಸಹ ಇವುಗಳನ್ನು ಹೆಚ್ಚಾಗಿ ಆಗಾಗ ಜಿಗಿಯುತ್ತಾರೆ. ಆದರೆ ಬಬ್ಬಲ್ ಗಮ್ ಕೇವಲ ಜಿಗಿದು ಮುಗಿಯುವುದಕ್ಕೆ ಮಾತ್ರ ಇರುತ್ತದೆ. ಯಾವುದೇ ಕಾರಣಕ್ಕೂ ಇದನ್ನು ನುಂಗಬಾರದು. ಕೆಲವು ಸಂಭಾವ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಹೆಚ್ಚು ಚೂಯಿಂಗ್ ಗಮ್ ಅಗಿಯುವುದು ಕೆಲವು ಅನಗತ್ಯ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ನಿಂಬೆಹಣ್ಣಿನ ಬೆನಿಫಿಟ್ ನಿಮಗೆಷ್ಟು ಗೊತ್ತು!? – ಇಲ್ಲಿದೆ ಸೀಕ್ರೇಟ್ ವಿಷಯಗಳು ! ಆದರೆ ಕೆಲವೊಮ್ಮೆ ನಮ್ಮ ಬಾಯಿಯಲ್ಲಿ ಇದು ನುಣುಚಿಕೊಂಡು ಗಂಟಲಿನೊಳಗೆ ಸೇರುತ್ತದೆ. ಆನಂತರದಲ್ಲಿ ನಮ್ಮ ಜಠರ ನಾಳದ ಮೂಲಕ ಹೊಟ್ಟೆ ಮತ್ತು ಕರುಳನ್ನು ಸೇರಿಕೊಳ್ಳುತ್ತದೆ. ಆರೋಗ್ಯ ಹದಗೆಡಲು ಇಷ್ಟೇ ಸಾಕಲ್ಲವೇ? ಅನಾರೋಗ್ಯಕರ ವಾತಾವರಣದಿಂದ ಬಳಲುವಂತೆ ಮಾಡುತ್ತದೆ. ಬಬಲ್ ಗಮ್ ಜಗಿಯುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ ನುಂಗಿದರೆ ಅಪಾಯ ಕಟ್ಟಿಟ್ಟ ಬುಟ್ಟಿ ಚೂಯಿಂಗ್ ಗಮ್ ಅನ್ನು ಹೆಚ್ಚು ಸಕ್ಕರೆ ತಿನ್ನುವುದು ಸ್ಥೂಲಕಾಯತೆ, ಇನ್ಸುಲಿನ್ ಪ್ರತಿರೋಧ ಮತ್ತು ಮಧುಮೇಹದಂತಹ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.…
ಪಡಿತರ ಪಡೆಯದ 3.47 ಲಕ್ಷಕ್ಕೂ ಅಧಿಕ ಪಡಿತರ ಕಾರ್ಡ್ದಾರರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಆರು ತಿಂಗಳಿಂದ ರೇಷನ್ ಕಾರ್ಡ್ ಪಡೆಯದವರಿಗೆ ಸರ್ಕಾರಿ ಸೌಲಭ್ಯ ಸ್ಥಗಿತಗೊಳಿಸಲು ಆಹಾರ ಇಲಾಖೆ ಮುಂದಾಗಿದೆ. ಈಗಾಗಲೇ ಆರು ತಿಂಗಳಿಂದ ರೇಷನ್ ಪಡೆಯದ ಕಾರ್ಡ್ಗಳ ಮಾಹಿತಿಯನ್ನು ಇಲಾಖೆ ವತಿಯಿಂದ ಸಂಗ್ರಹಿಸಲಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮೂಲ ದಾಖಲೆಗಳ ಮಾಹಿತಿ ಸಂಗ್ರಹಿಸಲಾಗಿತ್ತು. ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಪಡಿತರ ಚೀಟಿಯೇ ಆಧಾರವಾಗಿತ್ತು. ಇನ್ನು ಆರು ತಿಂಗಳಿಂದ ಪಡಿತರ ಏಕೆ ಪಡೆಯುತ್ತಿಲ್ಲ ಎಂದು ಗಮನಿಸಿದರೇ, ಪಡಿತರ ಚೀಟಿದಾರರ ಕುಟುಂಬ ಬೇರೆಡೆಗೆ ಸ್ಥಳಾಂತರವಾಗಿರುವುದು. ಆರೋಗ್ಯ ಸಂಬಂಧಿ ಸೌಲಭ್ಯ ಪಡೆಯಲು BPL ಕಾರ್ಡ್ ಪಡೆದಿರುವುದು, ಸದ್ಯ ಪಡಿತರ ಚೀಟಿದಾರರು ಮರಣ ಹೊಂದಿರವುದು ಮತ್ತು ಇತರೇ ಕಾರಣಗಳೇ ಆಗಿದೆ.
ಬೆಂಗಳೂರು:- ರಾಜ್ಯದ ಪ್ರತಿಯೊಂದು ಜಿಲ್ಲೆಯ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಜಮಾ ಮಾಡಲಾಗುತ್ತದೆ. ಈ ಜಿಲ್ಲೆಗೆ ಮಾತ್ರ ಸೀಮಿತ ಎನ್ನುವಂತೆ ಯಾವುದೇ ರೀತಿಯ ಹೊಸ ನಿಯಮಗಳು ಸಹ ಸರ್ಕಾರದಿಂದ ಜಾರಿಯಾಗಿಲ್ಲ ಆರನೇ ಕಂತಿನ ಹಣ ಫೆಬ್ರವರಿ ಕೊನೆಯ ವಾರದೊಳಗೆ ಎಲ್ಲಾ ಜಿಲ್ಲೆಯ ಫಲಾನುಭವಿಗಳಿಗೆ ಜಮಾ ಆಗುತ್ತದೆ. ಫೆಬ್ರವರಿ 8 2024ರಂದು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಮಾಡಿರುವುದರ ಬಗ್ಗೆ ಯಾವುದೇ ರೀತಿಯ ಸಂಶಯವಿಲ್ಲ ಹಾಗೂ ಎಲ್ಲಾ ಫಲಾನುಭವಿಗಳಿಗೆ ಹಣ ಜಮಾ ಮಾಡಲು ಕೆಲವು ದಿನಗಳು ಹಿಡಿಯುತ್ತದೆ. ಆರನೇ ಕಂತಿನ ಹಣವನ್ನು 5 ಲಕ್ಷ ಜನರಿಗೆ ಮಾತ್ರ ಜನ ಮಾಡಲಾಗಿದೆ ಇನ್ನು ಉಳಿದಂತಹ ಹಣವನ್ನು ಉಳಿದ ಫಲಾನುಭವಿಗಳಿಗೆ ಜಮಾ ಮಾಡಲಾಗುತ್ತದೆ. ಸಾಕಷ್ಟು ಜನರಿಗೆ ಗೊಂದಲದ ವಿಷಯ ಏನೆಂದರೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದರೆ ಫಲಾನುಭವಿಗಳಿಗೆ ಯಾವುದೇ ರೀತಿಯ ಮಾಹಿತಿ ಬರದೆ ಇರುವುದಾಗಿದೆ ಆದ್ದರಿಂದ ಸರಿಯಾಗಿ ಹಣ ಬಂದಿದೆಯೇ ಇಲ್ಲವೇ ಎಂಬುದು ಹಾಗೂ ಬಂದಿದ್ದರು…
ಬೀದರ್’:- ತನಿಖಾ ಸಂಸ್ಥೆಗಳನ್ನು ಮೋದಿ, ಅಮಿತ್ ಶಾ ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ಎಲ್ಲಾ ನಾಯಕರಿಗೆ ಇಡಿ, ಐಟಿ ಹಾಗೂ ಮೋದಿ ಭಯವಿದೆ. ಕಾಂಗ್ರೆಸ್ನಿಂದ ಲಾಭ ತೆಗೆದುಕೊಂಡ ಯಾರ ಬಳಿಯೂ ಧೈರ್ಯವಿಲ್ಲದೇ ಬಿಜೆಪಿಗೆ ಹೋಗುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಸಹಕಾರ ಕೊಡದೇ ಇದ್ದರೆ ಪ್ರಜಾಪ್ರಭುತ್ವ, ಸಂವಿಧಾನ ಉಳಿಯುವುದಿಲ್ಲ. ಈ ಸಂವಿಧಾನವನ್ನು ಮೋದಿ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ಉಳಿಯಬೇಕು ಎಂದರೆ ಕಾಂಗ್ರೆಸ್ಗೆ ಸಹಕಾರ ನೀಡಲೇಬೇಕು ಎಂದಿದ್ದಾರೆ. ಎಲ್ಲರಿಗೂ ಉಚಿತವಾಗಿ ನಾವು ಪಡಿತರ ಅಕ್ಕಿಯನ್ನು ಕೊಡುತ್ತಿದ್ದೇವೆ. ನೆಹರೂ ಅವರು ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿದ್ದರು. ಮೋದಿ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಸುಳ್ಳು ಹೇಳಿದ್ದಾರೆ. ರಾಮಮಂದಿರದಲ್ಲಿ ರಾಜಕೀಯ ಏಕೆ ಬಂತು? ಮೋದಿ ಜನ, ಧರ್ಮ, ಜಾತಿಯನ್ನ ಬೇರೆ ಬೇರೆ ಮಾಡಲು ನೋಡುತ್ತಾರೆ. ಈ ಬಾರಿ ಮೋದಿಯವರನ್ನು ಅಧಿಕಾರದಿಂದ ಹೊರಗೆ ಕಳಿಸಿ, ಮುಂದಿನ ಪೀಳಿಗೆಯನ್ನು ರಕ್ಷಣೆ ಮಾಡಬೇಕಿದೆ. ಎಲ್ಲಾ ಬಡವರಿಗೆ ಹೋಗುತ್ತವೆ ಎಂದು ಮೋದಿ ಎಲ್ಲಾ ನೇಮಕಾತಿಗಳನ್ನು ಬಂದ್…
ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಜನರಲ್ಲಿ ದೀರ್ಘಕಾಲದವರೆಗೆ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ ಎಂದರೆ ಅದು ಮಧುಮೇಹ. ರಕ್ತದಲ್ಲಿನ ಸಕ್ಕರೆ ಅಂಶ ಅಧಿಕವಾಗಿ ದೇಹದ ಸ್ವಾಸ್ಥ್ಯ ಏರುಪೇರಾಗು ಸ್ಥಿತಿಯೇ ಸಕ್ಕರೆ ಕಾಯಿಲೆ. ಸಕ್ಕರೆ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಎನ್ನುವುದಿಲ್ಲ. ದಿನನಿತ್ಯದ ಆಹಾರ ಪದ್ಧತಿ, ಜೀವನ ಪದ್ಧತಿಯಿಂದಲೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಮಧುಮೇಹವನ್ನು ಹತೋಟಿಗೆ ತಂದುಕೊಳ್ಳಬೇಕು. ಅದನ್ನು ತಿನ್ನಬಾರದು, ಇದನ್ನು ತಿನ್ನಬಾರದು ಎಂದು ಹೇಳಿದರೂ ಒಂದಷ್ಟು ಮನೆಯಲ್ಲೇ ತಯಾರಿಸಿದ ಆಹಾರಗಳು ಮಧುಮೇಹ ನಿಯಂತ್ರಣಕ್ಕೆ ಮನೆಮದ್ದಿನಂತೆ ಕೆಲಸ ಮಾಡುತ್ತದೆ. ಹಾಗಾದರೆ ಮಧುಮೇಹವನ್ನು ಕಟ್ಟಿಹಾಕಲು ಮನೆಯಲ್ಲಿ ಏನು ಮಾಡಬಹುದು, ಯಾವೆಲ್ಲಾ ಆಹಾರಗಳನ್ನು ಯಾವ ರೀತಿ ಸೇವನೆ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ. ಅರಿಶಿನ ಸಕ್ಕರೆ ಕಾಯಿಲೆ ಇರುವವರಿಗೆ ಅರಿಶಿನ ಬೆಸ್ಟ್ ಫ್ರೆಂಡ್ ಇದ್ದ ಹಾಗೆ. ಪ್ರತಿನಿತ್ಯ ಒಂದು ಚಮಚದಷ್ಟು ಅರಿಶಿನದ ಬಳಕೆ ಇದ್ದರೆ ಮಧುಮೇಹವನ್ನು ನಿಯಂತ್ರಿಸಬಹುದು. ಅರಿಶಿನವನ್ನು ನೀವು ಜೇನುತುಪ್ಪದೊಂದಿಗೆ ಸೇವಿಸಬಹುದು. ಅರ್ಧ ಚಮಚ ಅರಿಶಿನಕ್ಕೆ ಅರ್ಧ ಚಮಚ ಜೇನುತುಪ್ಪ ಸೇರಿಸಿ ಸೇವನೆ ಮಾಡಬಹುದು. ಅಥವಾ…
ಲಕ್ನೋ: ಇನ್ನೇನು ಕೆಲವೇ ದಿನಗಳಲ್ಲಿ 10ನೇ ತರಗತಿ ಪರೀಕ್ಷೆ (SSLC Exam) ನಡೆಯುತ್ತದೆ. ಈ ಸಮಯದಲ್ಲಿ ನಿದ್ದೆ ಬರಬಾರದೆಂದು ಶಾಲಾ ಮಕ್ಕಳು ಭಯೋತ್ಪಾದಕರು ತೆಗೆದುಕೊಳ್ಳುವಂತಹ ಮಾತ್ರೆಗಳನ್ನು ಸೇವಿಸುತ್ತಿರುವ ಆಘಾತಕಾರಿ ವಿಚಾರವೊಂದು ಬಯಲಾಗಿದೆ. ಈ ಸಂಬಂಧ ವೈದ್ಯ ಲೋಕ ಕೂಡ ಆತಂಕ ವ್ಯಕ್ತಪಡಿಸಿದ್ದು, ಇಂತಹ ಮಾತ್ರೆಗಳನ್ನು (Tablets) ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ. ಬೆಳಕಿಗೆ ಬಂದಿದ್ದು ಹೇಗೆ?: ಉತ್ತರ ಪ್ರದೇಶದ ಪ್ರಜಕ್ತಾ ಸ್ವರೂಪ್ ಎಂಬ ವಿದ್ಯಾರ್ಥಿನಿ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಹೀಗಾಗಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಈಕೆ ಏಕಾಏಕಿ ಕುಸಿದುಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಈ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ತಪಾಸಣೆ ವೇಳೆ ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ, ನರಗಳು ಊದಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ವೈದ್ಯರು ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಸದ್ಯ ವಿದ್ಯಾರ್ಥಿನಿ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. https://ainlivenews.com/do-you-know-why-you-should-not-cut-your-nails-at-night-here-is-the-real-reason/ ಇತ್ತ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾದ ಬಳಿಕ ಪೋಷಕರು ಆಕೆ…