ಶಿವಮೊಗ್ಗ: ರಾಜ್ಯ ಸರ್ಕಾರವು 60 ಲಕ್ಷ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲು ನಿರ್ಧರಿಸಿದೆ ಆದ್ದರಿಂದ ನಾಳೆಯಿಂದ ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ವಿತರಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು 60 ಲಕ್ಷ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲು ನಿರ್ಧರಿಸಿದೆ. https://ainlivenews.com/here-is-a-super-home-remedy-to-keep-sugar-disease-under-control/ ಇದೇ ತಿಂಗಳು 22 ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಈ ಸರ್ಕಾರವನ್ನು ರಾಜ್ಯದ ಹೆಣ್ಣು ಮಕ್ಕಳು ಎತ್ತಿದ್ದಾರೆ. ಅದನ್ನು ಮುಂದೆ ತೆಗೆದುಕೊಂಡು ಹೋಗುವ ಕೆಲಸವನ್ನು ನೀವು ಮಾಡಬೇಕು. ಶಿವಮೊಗ್ಗ ಜಿಲ್ಲೆಗೆ 100 ಹೊಸ KSRTC ಬಸ್ ಕೇಳಿದ್ದೆ. ಸದ್ಯಕ್ಕೆ 10 ಬಸ್ ಬಂದಿದೆ. ಫೆ.24 ರಂದು ನಡೆಯುವ ಗ್ಯಾರಂಟಿ ಸಮಾವೇಶದಲ್ಲಿ ಬಸ್ ಉದ್ಘಾಟಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
Author: AIN Author
ಕಲಬುರಗಿ: ಈ ಲೋಕ ಸಮರದಲ್ಲಿ ಕಾಂಗ್ರೆಸ್ ನೆಲ ಕಚ್ಚಲಿದ್ದು ರಾಜ್ಯದಲ್ಲಿ 28 ದೇಶದಲ್ಲಿ 400 ಸೀಟ್ ನಾವು ಗೆಲ್ತೇವೆ ಅಂತ ಬಿಜೆಪಿಯ ಮಾಜಿ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಹೇಳಿದ್ದಾರೆ.. ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತ ಈ ಮಾತು ಹೇಳಿದ್ರು..ಜನ ಮೋದಿಯವರ ಪರ ಇದ್ದಾರೆ.ಮೋದಿಯವರ ಅಭಿವೃದ್ಧಿ ಕೆಲಸ ಜನ ಮೆಚ್ಚಿದ್ದಾರೆ ಹೀಗಾಗಿ BJP 300 NDA 400 ದಾಟೋದು ನಿಶ್ಚಿತ ಅಂತ ಭವಿಷ್ಯ ನುಡಿದ್ರು..
ಬೆಂಗಳೂರು: ವಾಹನ ಸವಾರರೇ ಗಮನಿಸಿ. ಆ್ಯಂಬುಲೆನ್ಸ್ಗೆ ದಾರಿ ಬಿಡದೆ ಅಡ್ಡಾದಿಡ್ಡಿ ಗಾಡಿ ಓಡಿಸಿದ್ರೆ ಇನ್ಮುಂದೆ ದಂಡ ಬೀಳಲಿದೆ. ಇದು ಗುರುಗ್ರಾಮ ಟ್ರಾಫಿಕ್ ಪೊಲೀಸರು ಕೈಗೊಂಡ ನಿಯಮವಾಗಿದ್ದು, ಇನ್ನುಮುಂದೆ ಯಾವುದೇ ತುರ್ತು ವಾಹನಗಳಿಗೆ ದಾರಿ ಕೊಡದೇ ಅಡ್ಡಾದಿಡ್ಡಿ ಗಾಡಿ ಓಡಿಸಿದರೆ ಅಂಥವರು 10 ಸಾವಿರ ರೂ. ದಂಡ ಕಟ್ಟಲು ಸಿದ್ಧರಾಗಿ. ಗುರುಗ್ರಾಮ ಸಂಚಾರ ಪೊಲೀಸ್ ವಲಯದ ಅಧಿಕಾರಿಗಳು ಘಟನೆಯನ್ನು ವಿಡಿಯೋ ರೆಕಾರ್ಡ್ ಮಾಡಲಿದ್ದಾರೆ ಎಂದು ಡಿಸಿಪಿ (ಸಂಚಾರ) ವೀರೇಂದ್ರ ವಿಜ್ ಹೇಳಿದ್ದಾರೆ. ತುರ್ತು ಸೇವೆಗಳ ವಾಹನಗಳಿಗೆ ದಾರಿ ಮಾಡಿಕೊಡದ ಅಪರಾಧಿಗಳು ಯಾವುದೇ ವಿಳಂಬವಿಲ್ಲದೆ ಆನ್ಲೈನ್ ಚಲನ್ ಪಡೆಯುತ್ತಾರೆ. ಘಟನೆಯ ವಿಡಿಯೋ ರೆಕಾರ್ಡಿಂಗ್ ಜೊತೆಗೆ ಚಲನ್ಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 194 ಇ ಅಡಿಯಲ್ಲಿ ಅಪರಾಧಕ್ಕೆ ಚಲನ್ ಮೊತ್ತ 10,000 ರೂ. ಗಂಭೀರ ಸ್ಥಿತಿಯಲ್ಲಿ ಆಂಬ್ಯುಲೆನ್ಸ್ನಲ್ಲಿ ವಿವಿಧ ಆಸ್ಪತ್ರೆಗಳಿಗೆ ಹೋಗುವ ಜನರನ್ನು ಉಳಿಸಲು ಇದು ಸಹಾಯ ಮಾಡುತ್ತದೆ. ಗುರುಗ್ರಾಮ ಸಂಚಾರ ಪೊಲೀಸರು ಈಗಾಗಲೇ ವಿವಿಧ ಆಸ್ಪತ್ರೆಗಳಿಗೆ ಅಂಗಾಂಗಗಳನ್ನು…
ಬೆಂಗಳೂರು: ಸಿಲಿಕಾನ್ ಸಿಟಿಗೆ ಡ್ರಗ್ ಸರಬರಾಜು ಮಾಡ್ತಿದ್ದ ಆರೋಪಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರಿಂದ ಡ್ರಗ್ ಪೆಡ್ಲರ್ ಬಂಧನ ಮಾಡಲಾಗಿದೆ. ಮೂರು ವರ್ಷಗಳಿಂದ ಸತತವಾಗಿ ಬೆಂಗಳೂರಿಗೆ ಡ್ರಗ್ ಸರಬರಾಜು ಮಾಡ್ತಿದ್ದ ಪೆಡ್ಲರ್ ಆಂಧ್ರ, ಕೇರಳದ ಕಡೆಯಿಂದ ಬೆಂಗಳೂರಿಗೆ ಮಾದಕ ವಸ್ತು ಸರಬರಾಜು ಚೂಯಿಂಗ್ ಗಮ್ ತಿನ್ನುವ ಅಭ್ಯಾಸವಿದೆಯೇ: ಈಗಲೇ ಬಿಟ್ಟುಬಿಡಿ ಇಲ್ಲದಿದ್ರೆ ಅಪಾಯ ಗ್ಯಾರಂಟಿ! ಅಮೀರ್ ಖಾನ್ (35)ಬಂಧಿತ ಡ್ರಗ್ ಪೆಡ್ಲರ್ ಆಗಿದ್ದು ಬೆಂಗಳೂರು ಮೂಲದವನೇ ಆಗಿರೋ ಪೆಡ್ಲರ್ ಈ ಹಿಂದೆ ಹಲವು ಠಾಣಾ ವ್ಯಾಪ್ತಿ ಅಶೋಕನಗರ, ಪರಪ್ಪನ ಅಗ್ರಹಾರ, ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಮಾಡಿಲಾಗಿದೆ. ಖಚಿತ ಮಾಹಿತಿ ಆಧರಿಸಿ ಆರೋಪಿಯ ಬಂಧನ ಸದ್ಯ ಆರೋಪಿಯನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸ್ತಿರೋ ಪೊಲೀಸರು ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಬೆಂಗಳೂರು : ಕೊಳಚೆ ನೀರಿನಲ್ಲಿ ಸಿಲುಕಿ ಇಡೀ ರಾತ್ರಿ ರೋದಿಸಿದ್ದ ಹಸುವಿನ ರಕ್ಷಣೆ ಮಾಡಿ, ಅಗ್ನಿಶಾಮಕ ಸಿಬ್ಬಂದಿ ಹಸುವಿನ ಪ್ರಾಣ ಉಳಿಸಿ ಮಾನವೀಯತೆ ಮೆರೆದಿರುವ ಘಟನೆ ಬೆಂಗಳೂರಿನ ದೊಡ್ಡನಾಗಮಂಗಲದ ಕೆರೆಯಲ್ಲಿ ನಡೆದಿದೆ. ನಿನ್ನೆ ಸಂಜೆ ಮೇಯಲು ಬಂದ ಹಸು ದೊಡ್ಡ ನಾಗಮಂಗಲ ಕೆರೆಗೆ ಬಿದ್ದಿದೆ. ಮತ್ತೆ ಹೊರಬರಲಾಗದೆ ಇಡೀ ರಾತ್ರಿ ನೀರಿನಲ್ಲೇ ರೋದಿಸಿತ್ತು. ಹಸುವಿನ ತಲೆ ಬಿಟ್ಟರೆ ಸಂಪೂರ್ಣ ದೇಹ ಕೊಳಚೆ ನೀರಿನಲ್ಲಿ ಮುಳುಗಿಹೋಗಿತ್ತು. ಬೆಳಗಾಗುತ್ತಿದ್ದಂತೆ ಹಸುವಿನ ರೋದನೆ ಕಂಡು ಸ್ಥಳೀಯರು ಹೊರತೆಗೆಯಲು ಯತ್ನಿಸಿದ್ದಾರೆ. ಆದ್ರೆ ಕೊಳಚೆ ನೀರಿನಲ್ಲಿ ಹೆಚ್ಚು ಹೂಳಿದ್ದ ಕಾರಣ ಸ್ಥಳೀಯರಿಂದ ಸಾಧ್ಯವಾಗಲಿಲ್ಲ. ಈ ವೇಳೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಸುಮಾರು ಎರೆಡು ಘಂಟೆ ಕಾರ್ಯಾಚರಣೆ ಮಾಡಿ ಹಸುವಿನ ರಕ್ಷಿಸಿದ್ದಾರೆ. ಸಿಟಿ ಅಗ್ನಿಶಾಮಕ ದಳ ಕಾರ್ಯಾಚರಣೆಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಬೈ: ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 300 ಮಂದಿಯನ್ನು ರಸ್ತೆಯಲ್ಲೇ ಸಾಲಾಗಿ ಮಲಗಿಸಿ ಡ್ರಿಪ್ಸ್ ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಲೋನಾರ್ನ ಸೋಮಥಾನ ಗ್ರಾಮದಲ್ಲಿ ಒಂದು ವಾರದಿಂದ ʼಹರಿಣಂ ಸಪ್ತಾಹʼ ಎಂಬ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಅಂತೆಯೇ ಕಾರ್ಯಕ್ರಮದ ಕೊನೆಯ ದಿನವಾದ ಮಂಗಳವಾರ ರಾತ್ರಿ ಪ್ರಸಾದ ವಿತರಣೆ ಮಾಡಲಾಗಿತ್ತು. https://ainlivenews.com/here-is-a-super-home-remedy-to-keep-sugar-disease-under-control/ ಹೀಗೆ ಪ್ರಸಾದ ಸೇವಿಸಿದ ಬಳಿಕ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 300 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡರು. ಸೋಮಠಾಣಾ ಮತ್ತು ಖಾಪರಖೇಡ್ ಗ್ರಾಮಗಳ ಭಕ್ತರು ರಾತ್ರಿ 10 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಪ್ರಸಾದವನ್ನು ಸೇವಿಸಿದ ನಂತರ ಅವರು ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ ಆರಂಭವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಸ್ತೆಯಲ್ಲೇ ಚಿಕಿತ್ಸೆ ಯಾಕೆ..?: ಅಸ್ವಸ್ಥರಾದವರನ್ನು ಬೀಬಿ ಗ್ರಾಮದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಬೆಡ್ಗಳ ಕೊರತೆಯಿಂದಾಗಿ ಬಹುತೇಕ ರೋಗಿಗಳು ಆಸ್ಪತ್ರೆಯ ಹೊರಭಾಗದ ರಸ್ತೆಯಲ್ಲೇ ಚಿಕಿತ್ಸೆ ಪಡೆಯಬೇಕಾಯಿತು. ಮರಗಳಿಗೆ ಕೊಕ್ಕೆ ಹಾಕಿದ್ದ ಹಗ್ಗಗಳ ಮೇಲೆ ಡ್ರಿಪ್ಸ್ ಬಾಟ್ಲಿಗಳನ್ನು ಅಳವಡಿಸಲಾಗಿತ್ತು.…
ಬೆಂಗಳೂರು: ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಕೊಡಿಸುವ ಆಸೆ ತೋರಿಸಿ ಲಕ್ಷಾಂತರ ರೂ. ವಂಚಿಸಿರುವ ಆರೋಪದ ಮೇಲೆ ದಂಪತಿಯನ್ನು ಪೋಲಿಸರು (Police) ಬಂಧಿಸಿದ್ದಾರೆ. ಚೂಯಿಂಗ್ ಗಮ್ ತಿನ್ನುವ ಅಭ್ಯಾಸವಿದೆಯೇ: ಈಗಲೇ ಬಿಟ್ಟುಬಿಡಿ ಇಲ್ಲದಿದ್ರೆ ಅಪಾಯ ಗ್ಯಾರಂಟಿ! ಬಂಧಿತ ದಂಪತಿಯನ್ನು ಪ್ರಕಾಶ್ ಹಾಗೂ ಮಧು ಎಂದು ಗರುತಿಸಲಾಗಿದೆ. ನಮಗೆ ದೊಡ್ಡ ದೊಡ್ಡ ವ್ಯಕ್ತಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು ಪರಿಚಯವಿದ್ದಾರೆ. ಅವರ ಕಡೆಯಿಂದ ಖಾಲಿ ಇರುವ ಹುದ್ದೆಗಳನ್ನು ಕೊಡಿಸುತ್ತೇವೆ ಎಂದು ಯುವಕರಿಂದ ದಂಪತಿ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿದ್ದರು. ಬಳಿಕ ಕೆಲಸವನ್ನೂ ಕೊಡಿಸದೇ, ಹಣವನ್ನೂ ವಾಪಸ್ ಕೊಡದೆ ಜನರನ್ನು ವಂಚಿಸುತ್ತಿದ್ದರು ವಾಹನ ಸವಾರರೇ ಇಲ್ಲಿ ಕೇಳಿ – ಆ್ಯಂಬುಲೆನ್ಸ್ಗೆ ದಾರಿ ಬಿಡದೆ ಅಡ್ಡಾದಿಡ್ಡಿ ಗಾಡಿ ಓಡಿಸಿದ್ರೆ ಬೀಳುತ್ತೆ ದಂಡ! 6 ಲಕ್ಷ ರೂ. ವಂಚಿಸಿದ್ದಾರೆ ಎಂದು ದಂಪತಿ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿತ್ತು. ಇದೀಗ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಕಂಪನಿ ಷೇರುಗಳನ್ನು ನೀಡುವ ಹೆಸರಲ್ಲಿ ವಂಚನೆ ಮಾಡುತ್ತಿರುವ ಖತರ್ನಾಕ್ ಜಾಲವೊಂದು ಈಗ ಬೆಳಕಿಗೆ ಬಂದಿದ್ದು ಬೆಂಗಳೂರಿನ ಖ್ಯಾತ ಉದ್ಯಮಿ ಹರಿಪಾಲ್ ಸಿಂಗ್ ಉಬೇರಾಯ್ ರಿಗೆ ವಂಚನೆ ಮಾಡಲಾಗಿದೆ. ಬರೋಬ್ಬರಿ 6 ಕೋಟಿ 1 ಲಕ್ಷಕ್ಕೂ ಅಧಿಕ ಹಣ ವಂಚಿಸಿರೋ ಆರೋಪ ಕೇಳಿ ಬಂದಿದ್ದು ಹರಿಪಾಲ್ ಸಿಂಗ್ ಉಬೇರಾಯ್ ರಿಂದ ಬೆಂಗಳೂರು ಸೈಬರ್ ಕ್ರೈಂ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಾಹನ ಸವಾರರೇ ಇಲ್ಲಿ ಕೇಳಿ – ಆ್ಯಂಬುಲೆನ್ಸ್ಗೆ ದಾರಿ ಬಿಡದೆ ಅಡ್ಡಾದಿಡ್ಡಿ ಗಾಡಿ ಓಡಿಸಿದ್ರೆ ಬೀಳುತ್ತೆ ದಂಡ! ಹರಿಪಾಲ್ ಸಿಂಗ್ ರಿಗೆ ಫೇಸ್ಬುಕ್ ನಲ್ಲಿ ಗೋಲ್ಡ್ಸ್ ಮೆನ್ ಸಾಚಸ್ ಈಕ್ವಿಟಿ ಅಸೆಟ್ ಮ್ಯಾನೆಜ್ಮೆಂಟ್ ಗ್ರೂಪ್ 109 ಹಾಗೂ ಸ್ಕೈರಿಮ್ ಕ್ಯಾಪಿಟಲ್ ಇಮಿಲಿ ಕುನಾಲ್ ಕಂಪನಿಗಳ ಪರಿಚಯವಾಗಿತ್ತು ಎರಡು ಕಂಪನಿಗಳ ವಿವಿಧ ಷೇರು ಹಾಗೂ ಐಪಿಒ ಗಳನ್ನ ಹರಿಪಾಲ್ ಸಿಂಗ್ ರಿಗೆ ನೀಡಿದ್ದರು ಇದಕ್ಕೆ ಪ್ರತಿಯಾಗಿ 2023 ಡಿಸೆಂಬರ್ 26 ರಿಂದ ಫೆಬ್ರವರಿ 08 2024 ರವರೆಗೆ 6 ಕೋಟಿ 1…
ಕೋಲಾರ: ಕಡ್ಡಾಯವಾಗಿ ಕನ್ನಡ ನಾಮಫಲ ಅಳವಡಿಸಲು ಒತ್ತಾಯಿಸಿ ಕೋಲಾರದಲ್ಲಿ ಕರವೇ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು, ಟಿ.ಎನಾರಾಯಣಗೌಡ ಸ್ಥಾಪಿತ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಕನ್ನಡ ನಾಮಫಲಕ ಅಳವಡಿಸಲು ಜಾಗೃತಿ ಮೂಡಿಸುವುದರ ಜೊತೆಗೆ ಎಚ್ಚರಿಕೆಯನ್ನು ನೀಡಿದರು, ಕೋಲಾರ ನಗರದ ಗಾಂಧಿವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು, ಸರ್ಕಾರದ ನಿಯಮಾನುಸಾರ ಶೇ.೬೦ ರಷ್ಟು ಕನ್ನಡ ಬಾಷೆಯನ್ನು ಬಳಸಬೇಕು ಎಂಧು ಈಗಾಗಲೇ ರಾಜ್ಯ ಸರ್ಕಾರ ಸುಗ್ರೀವಾಜ್ಙೆ ನಮಾಡಿದೆ ಹಾಗಾಗಿ ಕಡ್ಡಾಯವಾಗ ಕನ್ನಡ ನಾಮಫಲ ಅಳವಡಿಸಬೇಕು ಎಂದು ಒತ್ತಾಯಿಸಿದರಲ್ಲದೆ, ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು, ಕಡ್ಡಯಾ ನಾಫಲಕ ಜಾರಿಯಾಗಬೇಕು, ಟಿ.ನಾರಯಣಗೌಡರ ನಾಯಕತ್ವದ ಹೋರಾಟ ಪ್ರತಿಭಲವಾಗಿ ಶೇ೬೦ ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ಸುಗ್ರಿವಾಜ್ಙೆ ಹೊರಡಿಸಿದೆ. ನಿಯಮಾನುಸಾರ ಡಿಸೆಂಬರ್ ತಿಂಗಳಲ್ಲಿ ನಡೆದ ಹೋರಾವು ಕ್ರಾಂತಿ ರೂಪಕ್ಕೆ ಹೋದಾಗ ಆಗ್ಲ ನಾಮಫಲಕ ಕಿತ್ತೆಸೆದಿದ್ದರು, ಟಿ.ಎ ನಾರಾಯಣಗೌಡ…
ಗದಗ: ಆದೇಶಕ್ಕೆ ಪೂರ್ವದಲ್ಲಿಯೇ 144 ಸೆಕ್ಷನ್ ಜಾರಿ ಮಾಡಿದ ಪೊಲೀಸ್ ಇಲಾಖೆ ಸಂಪೂರ್ಣ ಮಾರಾಟವಾಗಿದೆ ಎಂದು ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀ ಆರೋಪ ಮಾಡಿದರು. ಸ್ಥಳೀಯ ಫಕೀರೇಶ್ವರ ಮಠದಲ್ಲಿ ಸುದ್ದಿಗೋಷ್ಠಿ ಅಯೋಜಿಸಿ ಮಾತನಾಡಿದ ಅವರು, ಮಠದ ಭಕ್ತರನ್ನು ಒಳಗೆ ಬಿಡದೆ ಪೊಲೀಸ್ ಸರ್ಪಗಾವಲು ಇಟ್ಟಿದ್ದು, ಅವರಿಗೆ ರಾತ್ರೋ ರಾತ್ರಿ ನೋಟಿಸ್ ನೀಡಿದ್ದು ನೋವಿನ ಸಂಗತಿ. ನಮ್ಮ ಇತಿಹಾಸದಲ್ಲಿ ಶಾಂತಿ ಕದಡುವ ಹೋರಾಟ ಮಾಡಿಲ್ಲ. ನಾವು ಹೋರಾಟ ಕೈಗೊಂಡಿದ್ದು ಗದಗದಲ್ಲಿ 144 ಸೆಕ್ಷನ್ ಜಾರಿ ಮಾಡುವುದನ್ನು ಬಿಟ್ಟು ಶಿರಹಟ್ಟಿಯಲ್ಲಿ ಮಾಡಿದ್ದು ಅಕ್ಷಮ್ಯ. ಈ ಮೂಲಕ ಇಲಾಖೆ ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡದೆ ಮಲತಾಯಿ ಧೋರಣೆ ಅನುಸರಿದೆ ಎಂದು ಹರಿಹಾಯ್ದರು. ಭಾವೈಕ್ಯತೆ ಅರ್ಹರಿರುವವರು ಮಾತ್ರ ಆ ಪದ ಬಳಕೆ ಮಾಡಬೇಕೆಂಬುದು ನಮ್ಮ ತಾತ್ವಿಕ ವಿಚಾರ. ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಒಂದು ತಜ್ಞರ ಸಮಿತಿ ರಚನೆ ಮಾಡಿ ಎರಡು ಮಠದ ಪರಂಪರೆ ಹಾಗೂ ಶ್ರೀಗಳ ಸಮಗ್ರ ಅಧ್ಯಯನ ಮಾಡಬೇಕಿತ್ತು. ಯಾವುದೋ ಪ್ರಭಾವಕ್ಕೆ…