ಬೆಂಗಳೂರು: ಮೂರು ಮಹಾನಗರ ಪಾಲಿಕೆ ಮಾಡಿದ್ರೆ, ಅಭಿವೃದ್ಧಿ ಮಾಡಬಹುದು ಎಂದು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು. https://ainlivenews.com/there-is-an-urgent-need-to-transform-the-stagnant-dalit-movement-into-flowing-water-through-in-depth-study/ ಶಿವಮೊಗ್ಗದಲ್ಲಿ ಮಾತನಾಡಿದ ಅವರು ಬೆಂಗಳೂರು ಮೂರು ಮಹಾನಗರ ಪಾಲಿಕೆ ಆಗಬೇಕು, ಕೆಲವರು ಐದು ಆಗಬೇಕು ಅಂತಿದ್ದಾರೆ, ಆದರೆ ನನ್ನ ಪ್ರಕಾರ ಬೆಂಗಳೂರು ಸೆಂಟ್ರಲ್, ಬೆಂಗಳೂರು ನಾರ್ತ್, ಬೆಂಗಳೂರು ಸೌತ್ ಆದರೆ, ಆಗ ಬೆಂಗಳೂರು ಹೆಚ್ಚು ಅಭಿವೃದ್ಧಿ ಮಾಡಬಹುದು, ಬೆಂಗಳೂರು ಎಷ್ಟು ಬೆಳೆದಿದೆ ಎಂದು ನೀವು ನೋಡಿದ್ದೀರಾ, ಒಬ್ಬ ಕಮಿಷನರ್ ಇದ್ರೆ ಸಾಕಾವುದಿಲ್ಲ, ಬಹಳ ಎತ್ತರ ಬೆಳೆದಿದೆ, ಒಂದೇ ಮೇಯರ್, ಒಂದೇ ಕಮಿಷನರ್ ಇಟ್ಟುಕೊಂಡು ಅಭಿವೃದ್ಧಿಯಾವುದಿಲ್ಲ, ಹಾಗಾಗಿ ಮೂರು ಮಹಾನಗರಪಾಲಿಕೆ ಆದರೆ ಹೆಚ್ಚು ಅಭಿವೃದ್ಧಿ ಮಾಡಬಹುದು ಎಂದರು.
Author: AIN Author
ಕೋಲಾರ – ಸಾವಿರಾರು ವರ್ಷಗಳ ಶೋಷಣೆಯನ್ನು ಹೊತ್ತಿರುವ ಸಮುದಾಯಗಳನ್ನು ಮುನ್ನಡೆಸಲು ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ವಿಷಯಾಧಾರಿತ ಹೋರಾಟಗಳ ಜೊತೆಗೆ ಜಾತಿ ಆಧಾರಿತ ಜನಗಣತಿಗೆ ಜನರನ್ನು ಅಂತಿಮ ಗೊಳಿಸಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಎನ್.ವೆಂಕಟೇಶ್ ಅಭಿಪ್ರಾಯ ಪಟ್ಟರು. ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಜನಪರ ಉತ್ಸವದಲ್ಲಿ ಆಯೋಜಿಸಿದ್ದ, ಸಮಕಾಲೀನ ಸಂದರ್ಭದಲ್ಲಿ ದಲಿತ ಸಮುದಾಯದ ಮುಂದಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ತಲ್ಲಣಗಳು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. https://ainlivenews.com/how-was-ishwara-born-you-must-know-the-exciting-story-of-shivas-incarnation/ ಅಂದು 70ರ ದಶಕದಲ್ಲಿ ತುಮಕೂರಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಾಗಾರ ದಸಂಸವನ್ನು ಸಾಂಸ್ಕೃತಿಕ ಚಳುವಳಿಯಾಗಿ ಮುಂದುವರೆಸಲು ಸಾಧ್ಯವಾಯಿತು. ಬೆಲ್ಚಿ ನಾಟಕವನ್ನು ಕಲಿತು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನ ಮಾಡಿದೆವು. ಇದು ಸಂಘಟನೆಯಲ್ಲಿ ಪ್ರೀತಿ ವಿಶ್ವಾಸ ನಂಬಿಕೆಗಳನ್ನು ತುಂಬಿತು. ಇವೆಲ್ಲವೂ ಸೈದ್ಧಾಂತಿಕ ಚೌಕಟ್ಟಿನಲ್ಲಿ ಚಳುವಳಿ ಕಟ್ಟಲು ಸಾಧ್ಯವಾಯಿತು. ದಕ್ಷಿಣ ಭಾರತದ ಶೋಷಿತ ವರ್ಗಗಳಾದ ಅಹಿಂದ ಸಮುದಾಯಗಳ ಸಾಂಸ್ಕೃತಿಕ…
ಮಹಾ ಶಿವರಾತ್ರಿಯನ್ನು ದೇಶಾದ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ ಪ್ರತಿ ಮಾಸದಲ್ಲಿ ಶಿವರಾತ್ರಿ ಇರುತ್ತದೆ, ಇದಕ್ಕೆ ಮಾಸ ಶಿವರಾತ್ರಿ ಎಂದೂ, ವರ್ಷಕ್ಕೆ ಒಮ್ಮೆ ಬರುವ ಶಿವರಾತ್ರಿಯನ್ನು ಮಹಾ ಶಿವರಾತ್ರಿ ಎನ್ನಲಾಗುತ್ತದೆ. https://ainlivenews.com/attention-women-avoid-bathing-your-head-on-this-day-as-it-may-shorten-your-husbands-lifespan/ ಪ್ರತಿ ವರ್ಷ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು (ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಬರುವ ದಿನ) ಮಹಾ ಶಿವರಾತ್ರಿ ಆಚರಣೆ ಮಾಡಲಾಗುತ್ತದೆ. ಶಿವರಾತ್ರಿ ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ. ಮುಗ್ಧತೆಯಿಂದಾಗಿ ಶಿವನನ್ನು ಭೋಲೆನಾಥ ಎಂದು ಕರೆಯಲಾಗುತ್ತದೆ ಏಕೆಂದರೆ ಅವನು ಯಾವಾಗಲೂ ತನ್ನ ಭಕ್ತರು ಕೂಗಿದಾಕ್ಷಣ ಅವರ ಮೇಲೆ ದಯೆ ತೋರುತ್ತಾನೆ. ಮತ್ತು ದುಃಖಗಳಿಂದ ಪರಿಹಾರವನ್ನು ನೀಡುತ್ತಾನೆ. ಶಿವನು ತ್ರಿಮೂರ್ತಿಗಳಲ್ಲಿ ಹಿರಿಯನು ಮತ್ತು ಬ್ರಹ್ಮಾಂಡದ ಸಮತೋಲನವನ್ನು ಕಾಪಾಡಿಕೊಳ್ಳಲು ಅವನ ಪಾತ್ರ ಪ್ರಮುಖವಾದುದು. ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮನು ಬ್ರಹ್ಮಾಂಡವನ್ನು ಸೃಷ್ಟಿಸಿದ್ದಾನೆ ಮತ್ತು ವಿಷ್ಣು ಅದನ್ನು ನಿಯಂತ್ರಿಸುತ್ತಾನೆ ಮತ್ತು ಶಿವನು ಅದನ್ನು ನಾಶಮಾಡುತ್ತಾನೆ. ಶಿವನು ನಿಷ್ಕಪಟತೆಗೆ ಹೆಸರುವಾಸಿಯಾದಾತ. ಅದೇ ರೀತಿ ಅವನ ಹೆಸರೂ ಕೋಪಕ್ಕೆ ಪ್ರಸಿದ್ಧವಾಗಿದೆ. ಮಹಾಶಿವರಾತ್ರಿಯನ್ನು ಮಾಘ ಮಾಸದ ಕೃಷ್ಣ ಪಕ್ಷದ…
ಹಿಂದೂ ಶಾಸ್ತ್ರದಲ್ಲಿ ನಾವು ಪ್ರತಿನಿತ್ಯ ಮಾಡುವ ಕೆಲಸಗಳಿಗೆ ಅದರದ್ದೇ ಆದ ನಿಯಮಗಳನ್ನು ಹೇಳಲಾಗಿದೆ. ಉದಾಹರಣೆಗೆ ಊಟದ ವಿಚಾರವಾಗಿರಬಹುದು, ಪೂಜೆಯ ನಿಯಮಗಳಾಗಿರಬಹುದು. ಅದೇ ರೀತಿ, ತಲೆ ಸ್ನಾನ ಮಾಡುವುದಕ್ಕೂ ಶಾಸ್ತ್ರಗಳಲ್ಲಿ ನಿಯಮಗಳಿವೆ. ವಿವಾಹಿತ ಮಹಿಳೆಯರು ಯಾವ ದಿನ ತಲೆ ಸ್ನಾನ ಮಾಡಬಾರದು..? ಯಾವ ದಿನ ತಲೆ ಸ್ನಾನ ಮಾಡಬೇಕು..? https://ainlivenews.com/twist-in-the-case-of-a-lineman-who-went-to-collect-an-electricity-bill-and-was-beaten-up-violently/ ಸುಮಂಗಲಿಯರು ಯಾವ ದಿನ ತಲೆ ಸ್ನಾನ ಮಾಡಬೇಕು, ಯಾವ ದಿನ ಮಾಡಬಾರದು ಎನ್ನುವುದಕ್ಕೂ ನಿಯಮವಿದೆ. ಈ ಎಲ್ಲಾ ಕಟ್ಟು ಕಟ್ಟಳೆಯನ್ನು ನಮ್ಮ ವಾಸ್ತುವಿನಲ್ಲಿ ವಿವರವಾಗಿ ಬರೆಯಲಾಗಿದೆ. ಈ ನಿಯಮಗಳನ್ನು ಅನುಸರಿಸುವುದರಿಂದ ಸುಖ, ಶಾಂತಿ, ನೆಮ್ಮದಿಯ ಬದುಕು ನಮ್ಮದಾಗುವುದು. ಮದುವೆಯಾಗದ ಹೆಣ್ಣು ಮಕ್ಕಳು ಬುಧವಾರದ ದಿನ ತಲೆ ಸ್ನಾನ ಮಾಡಬಾರದು.ಒಂದು ವೇಳೆ ಹೀಗೆ ಮಾಡಿದರೆ ಅವರ ಮದುವೆ ತಡವಾಗುತ್ತದೆಯಂತೆ. ಇನ್ನು ವಿವಾಹಿತ ಮಹಿಳೆಯರು ಮಂಗಳವಾರ, ಗುರುವಾರ ಮತ್ತು ಶನಿವಾರದಂದು ತಲೆ ಸ್ನಾನ ಮಾಡಬಾರದು.ಆ ದಿನಗಳಲ್ಲಿ ಸ್ನಾನ ಮಾಡುವುದರಿಂದ ಆರ್ಥಿಕ ಸಮಸ್ಯೆ ಎದುರಾಗಿ, ಸಾಲದ ಹೊರೆ ಕೂಡಾ ಹೆಚ್ಚುತ್ತದೆಯಂತೆ. ಸುಮಂಗಲಿಯರು ಗುರುವಾರ ತಲೆ ಸ್ನಾನ…
ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ದುಪಧಾಳ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ ವಿದ್ಯುತ್ ಬಿಲ್ ವಸೂಲಿಗೆ ಹೋದ ಹೆಸ್ಕಾಂ ಸಿಬ್ಬಂದಿಗಳ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಗ್ರಾಹಕರು ಗೂಂಡಾ ವರ್ತನೆ ತೋರಿದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಗ್ರಾಹಕರ ಈ ನಡೆ ಖಂಡಿಸಿದರು. https://ainlivenews.com/darshan-pavithra-who-stood-side-by-side-but-didnt-speak-police-pressure-them-to-testify-against-darshan/ ಆದರೆ ಈ ಬಗ್ಗೆ ಸಂಕ್ಷಿಪ್ತವಾಗಿ ವರದಿ ಬಿತ್ತರಿಸಲು ಹೋದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಲೈನ್ ಮೆನ್ ಗಳ ಮೇಲೆ ಹಲ್ಲೆ ಮಾಡೋಕೂ ಮುಂಚೆಯೇ ಹೆಸ್ಕಾಂ ಸಿಬ್ಬಂದಿಗಳೇ ಗ್ರಾಹಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆ ಬಳಿಕ ಗ್ರಾಹಕರು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ತಮ್ಮ ಮೇಲೆ ನಡೆದ ಹಲ್ಲೆಯ ವಿಡಿಯೋ ಮಾತ್ರ ವೈರಲ್ ಮಾಡಿ ತಾವು ನಡೆಸಿದ ಹಲ್ಲೆ ದೃಶ್ಯ ತೆಗೆದು ಕೇವಲ 30 ಸೆಕೆಂಡ್ ವಿಡಿಯೋ ಮಾತ್ರ ವೈರಲ್ ಮಾಡಿದ್ದಾರೆ. ಈ ಬಗ್ಗೆ ಹಲ್ಲೆಗೊಳಗಾದ ಗ್ರಾಹಕ ಕುಟುಂಬ ವಿವರವಾಗಿ ಹೇಳಿದೆ. 17,146 ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ…
ಬೆಂಗಳೂರು:- ಬ್ಯಾನ್ ಆಗುತ್ತಾ ಕರಿದ ಹಸಿರು ಬಟಾಣಿ ಎಂದು ಇದೀಗ ಜನ ಕೇಳಲು ಶುರು ಮಾಡಿದ್ದಾರೆ. ಬಟಾಣಿ.. ಬಟಾಣಿ.. ಕರಿದ ಹಸಿರು ಬಟಾಣಿ. ಅತೀ ಕಡಿಮೆ ಬೆಲೆಗೆ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ಕೂಡ ಫೇವರೇಟ್. ಆದ್ರೆ ಇದೀಗ ಬಟಾಣಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಒಳಗೊಂಡಿರುವ ಶಂಕೆ ಶುರುವಾಗಿದೆ. https://ainlivenews.com/kalaghatagi-farmer-woman-dies-after-being-electrocuted/ ಗೋಬಿ ಆಯ್ತು, ಪಾನಿಪುರಿ ಆಯ್ತು, ಕಬಾಬ್ ಆಯ್ತು.. ಕಾಟನ್ ಕ್ಯಾಂಡಿನೂ ಆಯ್ತು.. ಇದೀಗ ಬಟಾಣಿ ಸರದಿ. ಕೂರ್ಮಾ ಆಗಲಿ, ಯಾವುದೇ ತಿಂಡಿ ಮಾಡುವಾಗಲು ಬಟಾಣಿ ಬಳಸುತ್ತಾರೆ. ಬಡವರ ಫೆವರೇಟ್ ಬಟಾಣಿಗೆ ಇದೀಗ ಬ್ಯಾನ್ ಬಿಸಿ ತಟ್ಟುತ್ತಾ ಅನ್ನೋ ಪ್ರಶ್ನೆ ರಾಜ್ಯದಲ್ಲಿ ಭಾರೀ ಚರ್ಚೆಯಲ್ಲಿದೆ? ಹಾಗಿದ್ರೆ ಹೀಗೊಂದು ಪ್ರಶ್ನೆ ಮೂಡೋದಕ್ಕೆ ಕಾರಣ ಇಲ್ಲಿದೆ ನೋಡಿ. ಈ ಬಗ್ಗೆ ಹಲವು ಸುದ್ದಿಗಳೂ ಕೂಡಾ ವೈರಲ್ ಆಗುತ್ತಿದೆ. ಈ ಕರಿದ ಹಸಿರು ಬಟಾಣಿಯಲ್ಲಿ ಯತೇಚ್ಛವಾಗಿ ಕೃತಕ ಬಣ್ಣ ಬಳಕೆ ಮಾಡುವ ಗಂಭೀರ ಆರೋಪವೂ ಕೇಳಿಬರುತ್ತಿದೆ. ಈ ಸಂಬಂಧ ಸಾರ್ವಜನಿಕರು ಆಗಾಗ ತಮ್ಮ ದೂರುಗಳನ್ನು ಹೇಳ್ತಾನೆ ಇದ್ದರು.…
ಬಾದಾಮಿಯಲ್ಲಿ ವಿಟಮಿನ್ ಇ, ಆಂಟಿಆಕ್ಸಿಡೆಂಟ್ಸ್, ಆರೋಗ್ಯಕರ ಕೊಬ್ಬು ನಮ್ಮ ಚರ್ಮವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಬಾದಾಮಿ ಚರ್ಮವನ್ನು ತೇವಗೊಳಿಸಲು ಮತ್ತು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ, ಕೊಲ್ಯಾಜಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ. https://ainlivenews.com/the-war-could-end-trump-hints-that-zilenski-is-ready-to-sign-the-minerals-deal/ ಬಾದಾಮಿಯು ಕೊಬ್ಬಿನಾಮ್ಲಗಳಿಂದ ತುಂಬಿದ್ದು, ಇದು ಕೂದಲಿನ ಆರೋಗ್ಯ ಹಾಗೂ ಬಲ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಾದಾಮಿ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ, ಕೂದಲಿನ ಆರೋಗ್ಯ ಹೆಚ್ಚಾಗುವುದಲ್ಲದೆ, ಕೂದಲಿನ ಹೊಳಪು ಕೂಡ ಹೆಚ್ಚಾಗುತ್ತದೆ. ಬಾದಾಮಿಯಲ್ಲಿ ಹಲವಾರು ಬಗೆಯ ಪೋಷಕಾಂಶಗಳಿದ್ದು, ಇದರಲ್ಲಿ ಆರೋಗ್ಯಕಾರಿ ಕೊಬ್ಬು, ಪ್ರೋಟೀನ್, ನಾರಿನಾಂಶ ಮತ್ತು ಪ್ರಮುಖ ವಿಟಮಿನ್ಗಳು ಹಾಗೂ ಖನಿಜಾಂಶಗಳು ಇವೆ. ಬಾದಾಮಿಯನ್ನು ಹಾಗೆ ಸೇವನೆ ಮಾಡಬಹುದು ಅಥವಾ ಅದನ್ನು ಬಾದಾಮಿ ಹಾಲು, ಸ್ಮೂಥಿಯಾಗಿ ಕೂಡ ಬಳಸಬಹುದು. ಇದರ ಲಾಭಗಳು ಹಾಗೆ ಸಿಗುವುದು. ಆದರೆ ಕೆಲವು ಆಹಾರಗಳ ಜತೆಗೆ ಬಾದಾಮಿ ಸೇವಿಸಿದರೆ, ಆಗ ಇದು ಜೀರ್ಣಕ್ರಿಯೆಗೆ ಸಮಸ್ಯೆ ಉಂಟು ಮಾಡುವುದು. ಇದರಿಂದ ಪೋಷಕಾಂಶಗಳ ಹೀರುವಿಕೆಗೂ ಸಮಸ್ಯೆಯಾಗುವುದು ಮತ್ತು ಆರೋಗ್ಯದ ಮೇಲೆ ವ್ಯತಿರಿಕ್ತ…
ಹಲ್ಲುನೋವು ಎದುರಾಗಲು ಕೆಲವಾರು ಕಾರಣಗಳಿವೆ. ಸಾಮಾನ್ಯ ಕಾರಣಗಳೆಂದರೆ ಹಲ್ಲು ಮತ್ತು ಒಸಡುಗಳ ಸಂಧುಗಳಲ್ಲಿ ಎದುರಾಗಿರುವ ಸೋಂಕು. ಪರಿಣಾಮವಾಗಿ ಉರಿಯೂತ ಮತ್ತು ಒಸಡುಗಳಲ್ಲಿ ರಕ್ತ ಒಸರುವುದು ಕಂಡುಬರುತ್ತದೆ. https://ainlivenews.com/explosion-at-fireworks-collection-unit-three-deaths/ ಎರಡು ಹಲ್ಲುಗಳ ನಡುವಿನ ಸಂಧು ಹಾಗೂ ಹಲ್ಲು ಮತ್ತು ಒಸಡುಗಳ ಸಂಧುಗಳಲ್ಲಿ ಸಿಲುಕಿಕೊಂಡ ಆಹಾರಕಣಗಳನ್ನು ಬ್ಯಾಕ್ಟೀರಿ ಯಾಗಳು ಕೊಳೆಸುವ ಕಾರಣದಿಂದ ಈ ಭಾಗದಲ್ಲಿ ಸೋಂಕು ಎದುರಾಗುತ್ತದೆ.ಇದು ಹಲ್ಲುನೋವು ಮತ್ತು ಬಾಯಿಯ ದುರ್ವಾಸನೆಗೂ ಕಾರಣವಾಗುತ್ತದೆ. ಈ ಸೋಂಕು ಎದುರಾದಾಗ ನೀವಾಗಿ ಇದಕ್ಕೆ ಚಿಕಿತ್ಸೆ ನೀಡಲು ಯತ್ನಿಸದಿರಿ ಹಾಗೂ ಆದಷ್ಟೂ ಬೇಗನೇ ದಂತ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಉತ್ತರಾಖಂಡದ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಅನೇಕ ಬೆಲೆಬಾಳುವ ಗಿಡಮೂಲಿಕೆಗಳು ಕಂಡುಬರುತ್ತವೆ. ಹಿಪ್ಪಲಿ ಅದರಲ್ಲಿ ಒಂದು.. ಈ ಹಿಪ್ಪಲಿ ದೇಹಕ್ಕೆ ತುಂಬಾ ಆರೋಗ್ಯಕರ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ. ಇದನ್ನು ಹೆಚ್ಚಾಗಿ ಹಲ್ಲುನೋವು ಗುಣಪಡಿಸಲು ಬಳಸಲಾಗುತ್ತದೆ. ಜೊತೆಗೆ ಮಲೆನಾಡಿನ ಅನೇಕ ಮನೆಮದ್ದುಗಳಲ್ಲಿಯೂ ಬಳಸಲಾಗುತ್ತದೆ. ಇದರ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಒಸಡುಗಳು ಮತ್ತು ಹಲ್ಲುಗಳ ಮೇಲೆ ಉಜ್ಜಿದರೇ ಹಲ್ಲು ನೋವು…
ತಮಿಳುನಾಡು:- ಪಟಾಕಿ ಸಂಗ್ರಹಣಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಜರುಗಿದೆ. https://ainlivenews.com/woman-dies-in-a-single-elephant-attack/ ಮೃತರನ್ನು ಶಣ್ಮುಗಂ, ತಿರುಮಲರ್ ಮತ್ತು ಮಂಜು ಎಂದು ಗುರುತಿಸಲಾಗಿದ್ದು, ಅವರು ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಪೊಲೀಸರೊಂದಿಗೆ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆದರೆ, ಅವರು ಶವಗಳನ್ನು ಮಾತ್ರ ಹೊರತೆಗೆಯಲು ಸಾಧ್ಯವಾಯಿತು. ಪಟಾಕಿ ಘಟಕವು ದೀರ್ಘಕಾಲದವರೆಗೆ ಮಾನ್ಯ ಸರ್ಕಾರಿ ಪರವಾನಗಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಸತೀಶ್ ದೃಢಪಡಿಸಿದರು. ಸ್ಫೋಟದ ಕಾರಣವನ್ನು ಪ್ರಸ್ತುತ ತನಿಖೆ ಮಾಡಲಾಗುತ್ತಿದೆ. ಪಟಾಕಿಗಳ ಸ್ಫೋಟದ ನಂತರ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಮತ್ತು ರಕ್ಷಣಾ ಸೇವಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತವು ಈ ಪ್ರದೇಶದ ಎಲ್ಲಾ ಪಟಾಕಿ ತಯಾರಿಕೆ ಮತ್ತು ಸಂಗ್ರಹಣಾ ಘಟಕಗಳನ್ನು ಕೂಲಂಕಷವಾಗಿ ಪರಿಶೀಲಿಸಲಿದೆ ಎಂದು ಭರವಸೆ ನೀಡಿದರು.
ಕೋಲಾರ:- ಸಾಕರಸನಹಳ್ಳಿ ಗ್ರಾಮದ ಹೊರ ವಲಯದ ತೋಟದ ಮನೆ ಬಳಿ ಒಂಟಿ ಆನೆ ದಾಳಿಗೆ ರೈತ ಮಹಿಳೆಯೊಬ್ಬರು ಬಲಿಯಾದ ಘಟನೆ ಜರುಗಿದೆ. https://ainlivenews.com/gas-leak-cylinder-exploded-and-burned-to-grocery-store/ 44 ವರ್ಷದ ಮಂಜುಳ ದಾಳಿಯಿಂದ ಮೃತಪಟ್ಟ ಮಹಿಳೆ. ಸಾಕರಸನಹಳ್ಳಿ ಗ್ರಾಮದ ಹೊರ ವಲಯದ ತೋಟದ ಮನೆ ಬಳಿ ಘಟನೆ ನಡೆದಿದೆ. ಮಂಜುಳ ಮೂತ್ರ ವಿಸರ್ಜನೆಗೆಂದು ಮುಂಜಾನೆ 4 ಗಂಟೆ ಸುಮಾರಿಗೆ ಮನೆಯಿಂದ ಹೊರಹೋದ ವೇಳೆ ಒಂಟಿ ಸಲಗ ದಾಳಿ ನಡೆಸಿದೆ. ಘಟನೆಯಿಂದ ಸಾಕರಸನಹಳ್ಳಿ ಸೇರಿದಂತೆ ಕಾಡಂಚಿನ ಗ್ರಾಮಗಳ ರೈತರಲ್ಲಿ ಆತಂಕ ಮನೆಮಾಡಿದೆ.