ಬೆಂಗಳೂರು:- ರಾಜ್ಯದ ಜನರೇ ಎಚ್ಚರ… ಎಚ್ಚರ… ಪ್ರಧಾನಿ ಮೋದಿ ಹೆಸರಲ್ಲಿ ಜನ್ ಧನ್ ಯೋಜನೆಯಡಿ ನಕಲಿ ಮೆಸೇಜ್ ಬರುತ್ತಿದ್ದು, ನೀವು ಈ ಮೆಸೇಜ್ ನಂಬಿ ರಿಪ್ಲೈ ಕೊಟ್ಟರೆ ನಿಮ್ಮ ಖಾತೆಗೆ ಕನ್ನ ಗ್ಯಾರಂಟಿ. ಹೌದು, ಪ್ರಧಾನಿ ಮೋದಿ ಹೆಸರಲ್ಲಿ ಜನ್ ಧನ್ ಯೋಜನೆಯಡಿ ₹4750 ರೂ ನಕಲಿ ಮೆಸೆಜ್ ಬರುತ್ತಿದ್ದು, ಸಾರ್ವಜನಿಕರ ಖಾತೆಗೆ ಕನ್ನ ಹೊಡೆಯಲು ಸೈಬರ್ ಕಳ್ಳರು ಹೊಸ ಪ್ಲ್ಯಾನ್ ರೂಪಿಸಿದ್ದಾರೆ. ಪ್ರಧಾನಿ ಮೋದಿ ಹೆಸರಿನಲ್ಲಿ ಮೊಬೈಲ್ ಗೆ ಸಂದೇಶ ಕಳುಹಿಸಿ ಚಾಲಾಕಿಗಳು ವಂಚಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಫೇಕ್ ಮೆಸೇಜ್ ಹಾವಳಿ ಹೆಚ್ಚಾಗಿದ್ದು, ಪ್ರಧಾನಿ ಮೋದಿ ಹೆಸರು ಹಾಗೂ ಫೋಟೋ ಬಳಸಿ ಫೇಕ್ ಮೆಸೇಜ್ ಕಳಿಸಲಾಗುತ್ತಿದೆ. ಎಲ್ಲರ ಖಾತೆಗೆ ಮೋದಿಯಿಂದ ₹4950 ರೂಪಾಯಿ ಬರಲಿದೆ ಅನ್ನೋ ಫೇಕ್ ಸಂದೇಶ ಕಳಿಸಲಾಗುತ್ತಿದೆ. ಈ ಹಣವನ್ನು ನಿಮ್ಮ ಅಕೌಂಟ್ಗೆ ಹಾಕಲು ಅಕೌಂಟ್ ಲಿಂಕ್ ಮಾಡಿ ಎಂದು ಖದೀಮರಿಂದ ಕರೆ ಬರುತ್ತಿದೆ. ಕರೆ ಮಾಡಿ OTP ರವಾನೆ, ಬಳಿಕ ಸಾರ್ವಜನಿಕರ ಖಾತೆಗೆ ಕನ್ನ…
Author: AIN Author
ಚಿಕ್ಕಮಗಳೂರು:- ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಬ್ಯಾಡಿಗೆರೆ ಗ್ರಾಮದ ಯುವಕರು ತಮಗೆ ಮದುವೆ ಭಾಗ್ಯ ಕರುಣಿಸೋ ಭಗವಂತ ಎಂದು ದೇವರಿಗೆ ತಮ್ಮ ಹೆಸರುಗಳನ್ನು ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ಬ್ಯಾಡಿಗೆರೆ ಗ್ರಾಮದ 30ಕ್ಕೂ ಹೆಚ್ಚು ಯುವಕರು ತಮಗೆ 35 ವರ್ಷ ದಾಟಿದರೂ ಮದುವೆಯಾಗಿಲ್ಲ ಚಿಂತೆಯಲ್ಲಿದ್ದಾರೆ. ಎಷ್ಟೇ ಹುಡುಕಾಡಿದರೂ ಹೆಣ್ಣು ಕೊಡಲು ಒಲ್ಲೆ ಎನ್ನುತ್ತಿದ್ದಾರೆ. ಕೊನೆಗೆ, ಮದುವೆ ಭಾಗ್ಯ ಕರುಣಿಸೋ ಭಗವಂತ ಎಂದು ಬ್ರಹ್ಮಚಾರಿ ಯುವಕರು ಕಾಗದದಲ್ಲಿ ತಮ್ಮ ಹೆಸರುಗಳನ್ನ ಬರೆದು ಹುಂಡಿಗೆ ಹಾಕಿದ್ದಾರೆ. ಬ್ಯಾಡಿಗೆರೆ ಗ್ರಾಮದಲ್ಲಿ ಮದುವೆ ಆಗದೆ ಉಳಿದ 30 ರಿಂದ 38 ವರ್ಷದ ಯುವಕರಿದ್ದಾರೆ. ಬ್ಯಾಡಿಗೆರೆ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ, ಶ್ರೀ ಅಜ್ಜಯ್ಯ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಜಾತ್ರಾ ಮಹೋತ್ಸವ ನಡೆಯಿತು. ಈ ವೇಳೆ ಮದುವೆ ಆಗಲೆಂದು ಜಾತ್ರೆಯಲ್ಲಿ ಹೆಸರುಗಳನ್ನ ಬರೆದು ಹುಂಡಿಗೆ ಹಾಕಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಊರಿನ ಮುಖ್ಯಸ್ಥರು ಹಾಗೂ ಪರದೇಶಪ್ಪನ ಮಠದ ಗುರುಗಳಾದ ಮಧುಕುಮಾರ್ ಶಾಸ್ತ್ರಿ ಸುಮಾರು 30ಕ್ಕೂ ಹೆಚ್ಚು ಬ್ರಹ್ಮಚಾರಿ ಯುವಕರ…
ಬೆಂಗಳೂರು:- ನಾಯಿ ವಿಚಾರಕ್ಕೆ ಖ್ಯಾತ ನಟಿ ಜೊತೆ ಕೆಲವರು ಕಿರಿಕ್ ತೆಗೆದ ಘಟನೆ ಸಂಪಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆ ಜರುಗಿದೆ. ನಾಯಿ ಬೊಗಳಿದ್ದಕ್ಕೆ ಸಿಟ್ಟಾದ ನಾಲ್ವರ ಗುಂಪು ನಟಿ ಅನಿತಾ ಭಟ್ ಜೊತೆ ಕಿರಿಕ್ ತೆಗೆದು ಜಗಳಕ್ಕೆ ನಿಂತಿದ್ದಾರೆ. ಕ್ಷಮೆಯಾಚಿಸಿ ಸಮಸ್ಯೆ ಬಗೆಹರಿಸೋಣ ಅಂತಾ ಮುಂದಾಗಿದ್ದ ನಟಿ ಮತ್ತು ಸ್ನೇಹಿತೆಗೆ ಹಿಗ್ಗಾಮುಗ್ಗಾ ಬೈದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ನಾಯಿ ವಿಚಾರಕ್ಕೆ ಜಗಳ ಜೋರಾಗಿ ಕಿಡಿಗೇಡಿಗಳು ಅನಿತಾ ಭಟ್ ಮತ್ತು ಅವರ ಸ್ನೇಹಿತೆಯನ್ನು ನಿಂದಿಸಿದ್ದಾರೆ. ಕಾರಿನಲ್ಲಿ ಕೂತಿದ್ದ ವೇಳೆ ನಟಿಯ ಕಾರಿನ ಗ್ಲಾಸ್ ಹೊಡೆಯಲು ವ್ಯಕ್ತಿಯೊಬ್ಬ ಯತ್ನಿಸಿದ್ದಾನೆ ಎಂದು ಅನಿತಾ ಭಟ್ ಆರೋಪಿಸಿದ್ದಾರೆ. ನಟಿ ಕೂಡ ಪ್ರಕರಣ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಾಲ್ಕೈದು ಮಂದಿಯ ವಿರುದ್ಧ ದೂರು ನೀಡಿದ ನಟಿ ಅನಿತಾ ಭಟ್ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ ಕನ್ನಡದಲ್ಲಿ ಸೈಕೋ, ತಿಪ್ಪಜ್ಜಿ ಸರ್ಕಲ್, ಡೇಸ್ ಆಫ್ ಬೋರಾಪುರ, ಬೆಂಗಳೂರು 69 ಸೇರಿದಂತೆ ಅನೇಕ ಸಿನಿಮಾಗಳಲ್ಲಿ…
ಬೆಂಗಳೂರು:- ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ17 ಅಭ್ಯರ್ಥಿಗಳ ಹೆಸರು ಅಂತಿಮ ಆಗಿದ್ದು, 4 ಕ್ಷೇತ್ರ ಬಾಕಿ ಇದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ 17 ಅಭ್ಯರ್ಥಿಗಳನ್ನ ಅಂತಿಮಗೊಳಿಸಲಾಗಿದೆ. ಇನ್ನು ನಾಲ್ಕು ಕ್ಷೇತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಂಗಳೂರಿಗೆ ಹೋಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂದಿದ್ದಾರೆ. ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು 5 ಹೆಣ್ಣು ಮಕ್ಕಳಿಗೆ ಟಿಕೆಟ್ ನೀಡಿದ್ದೇವೆ. ಜೊತೆಗೆ ಶೇಕಡ 50ರಷ್ಟು ಹೆಚ್ಚು ಟಿಕೆಟ್ಗಳನ್ನ ಈ ಸಲ ಯುವಕರಿಗೆ ನೀಡಿದ್ದೇವೆ. ಕೋಲಾರ ಲೋಕಸಭೆಯಲ್ಲಿ ಗೊಂದಲ ಇರುವ ವಿಚಾರ, ‘ಎರಡು ಕಡೆಯ ಬೆಂಬಲಿಗರು ಬಂದು ಭೇಟಿಯನ್ನ ಮಾಡಿದ್ದಾರೆ. ಅಂತಿಮವಾಗಿ ನಾವು ನಿರ್ಧಾರವನ್ನ ಕೈಗೊಳ್ಳುತ್ತೇವೆ ಎಂದರು. ಇದೇ ವೇಳೆ ಕುಟುಂಬ ರಾಜಕಾರಣ ಮುಂದುವರೆದಿರುವ ವಿಚಾರ, ‘ಯಡಿಯೂರಪ್ಪನವರ ಮನೆಯಲ್ಲಿ ಕುಟುಂಬ ರಾಜಕಾರಣ ಇಲ್ವಾ ಎಂದು ಪ್ರಶ್ನಿಸಿದ ಅವರು, ಈ ಬಾರಿ ಜೊತೆಗೆ ರಾಜಕೀಯವಾಗಿ ಸದೃಢ ಇರುವ ನಾಯಕರಿಗೆ ಟಿಕೆಟ್ ನೀಡಿದ್ದೇವೆ ಎಂದು ಹೇಳಿದರು.…
ಬಳ್ಳಾರಿ:-:ಲೋಕಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ ಘೋಷಣೆಯಾದ ಬೆನ್ನಲ್ಲೇ ರಾಜ್ಯದಾದ್ಯಂತ ಅಕ್ರಮವಾಗಿ ನಗದು ಸಾಗಾಟ ಮಾಡುವ ಪ್ರಕರಣಗಳು ಪತ್ತೆಯಾಗುತ್ತಿವೆ. ಬಳ್ಳಾರಿಯಿಂದ ಆಂಧ್ರದ ಅದೋನಿ ಕಡೆ ಸಾಗಿಸುತ್ತಿದ್ದ ದಾಖಲೆ ರಹಿತ 26 ಕೆಜಿ ಬೆಳ್ಳಿ, 3 ಲಕ್ಷ 55 ಸಾವಿರ ನಗದು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿಕೊಂಡಿ ಈ ಬೆಳ್ಳಿ 10ಲಕ್ಷ ಮೌಲ್ಯದ್ದು ಅಂತಾ ಅಂದಾಜಿಸಲಾಗಿದೆ. AP 21 AX 9388 ನಂಬರಿನ ಕಾರಿನಲ್ಲಿ ಸಾಗಿಸ್ತಿದ್ದಾಗ ಸೀಜ್ ಮಾಡಲಾಗಿದ್ದು, ಮೋಕಾ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ:- ಲೋಕಸಭಾ ಚುನಾವಣೆ 2024 ರ ಹಿನ್ನೆಲೆ ಕಾರ್ಯಪ್ರವೃತ್ತರಾದ ಚುನಾವಣಾ ಅಧಿಕಾರಿಗಳು, ಇಟ್ಟಗಿಹಾಳ್ ಚೆಕ್ ಪೋಸ್ಟ್ನಲ್ಲಿ 1.63 ಲಕ್ಷ ಹಣ ಸೀಜ್ ಮಾಡಿದ್ದಾರೆ. ವಶಕ್ಕೆ ಪಡೆದ ಹಣಕ್ಕೆ ಯಾವುದೇ ದಾಖಲೆ ಒದಗಿಸದ ಹಿನ್ನೆಲೆ 1.63 ಲಕ್ಷ ಹಣ ಸೀಜ್ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಇಟ್ಟಗಿಹಾಳ್ ಚೆಕ್ ಪೋಸ್ಟ್ನಲ್ಲಿ ಘಟನೆ ಜರುಗಿದೆ. ಆಭರಣ ಪ್ಯಾಪಾರಿ ಮೋಹಿನ್ ಎಂಬುವರಿಗೆ ಸೇರಿದ ಹಣ ಇದಾಗಿದೆ ಎನ್ನಲಾಗಿದೆ. ನಗದು ವಶಕ್ಕೆ ಪಡೆದು ಚುನಾವಣಾ ಅಧಿಕಾರಿಗಳಿಂದ ವಿಚಾರಣೆ ನಡೆಯುತ್ತಿದ್ದು, ಸಿರುಗುಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಬೆಂಗಳೂರು : ಆತ ಅದೊಂದು ಕಾರ್ಟ್ನಲ್ಲಿ ತನ್ನ ಪ್ರಾವಿಷನ್ ಸ್ಟೋರ್ ಗಾಗಿ ತೆಂಗಿನ ಕಾಯಿ ಆರ್ಡರ್ ಮಾಡಿದ್ದ, ಆದ್ರೆ ಆರ್ಡರ್ ತಂದ ಡೆಲಿವರಿ ಬಾಯ್ ಅದೊಂದು ಕಾರಣಕ್ಕೆ ಕಿರಿಕ್ ತೆಗೆದಿದ್ದು ಮಾತ್ರವಲ್ಲದೆ ಹುಡುಗರನ್ನು ಕರೆಸಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟಕ್ಕೂ ಆ ಅಂಗಡಿ ಮಾಲೀಕನ ಮೇಲೆ ಆ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾದರೂ ಯಾಕೇ ಅಂತೀರಾ….? ಈ ಸ್ಟೋರಿ ನೋಡಿ……. ಹೌದು ಹೀಗೆ ಕೇವಲ 30 ರೂಪಾಯಿಗೊಸ್ಕರ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ಸಿಸಿ ಕ್ಯಾಮರಾ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೆಟ್ಟದಾಸನಪುರದಲ್ಲಿ. ಹಲ್ಲೆಗೊಳಗಾದ ಇಲ್ಲಿನ ಬಾಲಾಜಿ ಪ್ರಾವಿಷನ್ ಸ್ಟೋರ್ ಮಾಲೀಕ ಲಲಿತ್ ನಿನ್ನೆ ನಿಂಜಾ ಕಾರ್ಟ್ ನಲ್ಲಿ ತೆಂಗಿನಕಾಯಿ ಈರುಳ್ಳಿ ಸೇರಿದಂತೆ ತರಕಾರಿಗಳನ್ನು ಆರ್ಡರ್ ಮಾಡಿದ್ದಾನೆ. ಆದ್ರೆ ಇಂದು ಡೆಲಿವರಿ ಬಾಯ್ ತಂದ ತೆಂಗಿನಕಾಯಿ ತೂಕದಲ್ಲಿ 700 ಗ್ರಾಂ ವ್ಯತ್ಯಾಸ ಕಂಡಿದೆ. 700 ಗ್ರಾಮ ತೆಂಗಿನಕಾಯಿಗೆ 30…
ಮಾವು ಹಲವರ ಬಾಯಲ್ಲಿ ನೀರೂರಿಸುತ್ತದೆ. ಏಕೆಂದರೆ ಮಾವು ಎಲ್ಲರಿಗೂ ಪ್ರಿಯವಾದ ಹಣ್ಣು. ಮಾವನ್ನು ಹಣ್ಣುಗಳ ರಾಜ ಎಂದೂ ಕರೆಯುತ್ತಾರೆ. ಈಗ ಮಾವಿನ ಸೀಸನ್ ಶುರುವಾಗಿದೆ. ವಿವಿಧೆಡೆ ಮಾವು ಮಾರುಕಟ್ಟೆಗೆ ಬರುತ್ತಿದೆ. ಆದರೆ, ಆರಂಭಿಕ ಅವಧಿಯಾಗಿರುವುದರಿಂದ ಮಾವಿನ ಹಣ್ಣುಗಳ ಆಗಮನ ಕಡಿಮೆಯಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೆಲೆ ಹೆಚ್ಚುತ್ತಿದೆ. ಏತನ್ಮಧ್ಯೆ, ಯಾವ ರಾಜ್ಯ ದೇಶದಲ್ಲಿ ಹೆಚ್ಚು ಮಾವಿನ ಹಣ್ಣುಗಳನ್ನು ಉತ್ಪಾದಿಸುತ್ತದೆ? ಇದರ ಬಗ್ಗೆ ನಿಮಗೆ ತಿಳಿದಿದೆಯೇ? ಮಾವು ಉತ್ಪಾದನೆಯಲ್ಲಿ ಯಾವ ರಾಜ್ಯ ಮುಂಚೂಣಿಯಲ್ಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಮಾವಿನಹಣ್ಣಿನಿಂದ ಜನರು ವಿವಿಧ ಉಪಯೋಗಗಳನ್ನು ಹೊಂದಿದ್ದಾರೆ. ಮಾವನ್ನು ಹಣ್ಣಾಗಿ ತಿನ್ನುತ್ತಾರೆ. ಈ ಹಣ್ಣಿನ ರಸದಿಂದ ವಿವಿಧ ಪಾನೀಯ ತಯಾರಿಸುತ್ತಾರೆ. ಮಾವಿನಕಾಯಿ ಚಟ್ನಿ, ಉಪ್ಪಿನಕಾಯಿ ಕೂಡ ತಯಾರಿಸಲಾಗುತ್ತದೆ. ಮಾವು ಆರೋಗ್ಯಕ್ಕೂ ಒಳ್ಳೆಯದು. ದೇಶದಲ್ಲಿ ಪ್ರತಿ ವರ್ಷ ಹೆಚ್ಚಿನ ಪ್ರಮಾಣದ ಮಾವು ಉತ್ಪಾದನೆಯಾಗುತ್ತದೆ. ಭಾರತದಿಂದ ಹಲವು ದೇಶಗಳಿಗೆ ಮಾವು ರಫ್ತಾಗುತ್ತಿದೆ. ಮಾವು ಉತ್ಪಾದನೆಯಲ್ಲಿರುವ ಅಗ್ರ ಐದು ರಾಜ್ಯಗಳು ಯಾವುವು? ಮಾವು…
ವಿಜಯಪುರ:- ಎರಡು ಲಾರಿ ಹಾಗೂ ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಮೂವರಿಗೆ ಗಂಭೀರ ಗಾಯವಾದ ಘಟನೆ ವಿಜಯಪುರ ತಾಲೂಕಿನ ಹಡಗಲಿ ಗ್ರಾಮದಲ್ಲಿ ಜರುಗಿದೆ. ಇನ್ನೂ ಮೂವರು ಗಾಯಾಳುಗಳು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಗದಗ: ಲೋಕಸಭಾ ಚುನಾವಣಾ ಕಾವು ದಿನೇ ದಿನೇ ರಂಗೇರ್ತಾ ಇದ್ದು ಹಾವೇರಿ-ಗದಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಟ್ಟದೇವರಮಠ ಅವರ ಗೆಲುವಿಗಾಗಿ ಗದಗ ನಗರದ ಕೆ ಎಚ್ ಪಾಟೀಲ್ ಸಭಾಭವನದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯನ್ನ ನಡೆಸಲಾಯಿತು. ಸಚಿವ ಎಚ್ ಕೆ ಪಾಟೀಲ್ ಮಾತನಾಡಿ ಗದಗ ಜಿಲ್ಲೆ ಶಿಸ್ತಿಗೆ ಹೆಸರಾಗಿರೋ ಜಿಲ್ಲೆ. ಆನಂದ ಗಡ್ಡದೇವರಮಠ ಅವರು ಹೇಳಿದಂತೆ ಡಿ ಆರ್ ಪಾಟೀಲ್ ಅವರು ಮಾತು ಕೊಟ್ರೆ ಅವರು ಹೇಗೆ ಇರ್ತಾರೆ ಅದೇ ಸಂಸ್ಕೃತಿ ಕಾಂಗ್ರೆಸ್ ನ ಎಲ್ಲಾ ನಾಯಕರಲ್ಲೂ ಬೆಳೆದು ಬಂದಿದೆ. ಆನಂದ ಗಡ್ಡದೇವರಮಠ ಗದುಗಿನ ಮಗ ಗದುಗಿನ ಜನತೆ, ಕಾರ್ಯಕರ್ತರು ಅವರಿಗೆ ವಿಶೇಷ ಬಲ ತುಂಬಿ ಆಶೀರ್ವಾದ ಮಾಡಿ ಅಂದ್ರು. ಸಚಿವ ಶಿವಾನಂದ ಪಾಟೀಲ್ ಮಾತನಾಡಿ ನಿಮ್ಮ ಭಾಗದ ಯುವಕ ಲೋಕಸಭಾ ಸದಸ್ಯನಾಗೋ ಅವಕಾಶ ಇದೆ ಅಂದ್ರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಜಿ ಎಸ್ ಪಾಟೀಲ್, ವಿಧಾನ…