ಬೆಂಗಳೂರು:- ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಸ್ಪಷ್ಟಪಡಿಸಿದರು. https://ainlivenews.com/lorry-collides-with-by-vijayendra-friends-car-driver-escape/ ಬೇಸಿಗೆಯಲ್ಲಿ 19,000 ಮೆಗಾ ವ್ಯಾಟ್ನಷ್ಟು ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಇಂಧನ ಇಲಾಖೆ ಸಿದ್ಧವಾಗಿದ್ದು, ಯಾವುದೇ ಸಂದರ್ಭದಲ್ಲೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದರು. ಬೇಸಿಗೆಯಲ್ಲಿ ರೈತರ ಕೃಷಿ ಪಂಪ್ ಸೆಟ್ಗಳಿಗೆ ದಿನ 7 ಗಂಟೆ ಮತ್ತು ಇತರ ಉದ್ದೇಶಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಸುವ ವಾಗ್ಧಾನವನ್ನು ಈಡೇರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಬೇಡಿಕೆ ಇರುವಷ್ಟು ವಿದ್ಯುತ್ ಲಭ್ಯವಿದೆ. ಸ್ಥಳೀಯವಾಗಿ ತಾಂತ್ರಿಕ ಕಾರಣಗಳಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಬಹುದೇ ಹೊರತು ಲೋಡ್ ಶೆಡ್ಡಿಂಗ್ ಮಾಡುವ ಸಂದರ್ಭ ಉದ್ಭವವಾಗುವುದಿಲ್ಲ. ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ ಎಂದರೆ ರಾಜ್ಯವು ಅಭಿವೃದ್ಧಿ ಪಥದಲ್ಲಿ ಮುಂದುವರಿಯುತ್ತಿದೆ. ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ಅರ್ಥ ಎಂದು ತಿಳಿಸಿದರು.
Author: AIN Author
ಚಿಕ್ಕಮಗಳೂರು:- ಚಿಕ್ಕಮಗಳೂರು ತಾಲೂಕಿನ ಲಿಕ್ಯಾ ಕ್ರಾಸ್ ಬಳಿ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ಸ್ನೇಹಿತರ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜರುಗಿದೆ. https://ainlivenews.com/is-this-wrong-when-you-drink-tea-so-know-this/ ಕಡೂರು ತಾಲೂಕಿನ ಬೀರೂರಿನ ಹರೀಶ್ ಅವರಿಗೆ ಸೇರಿದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಚಿಕ್ಕಮಗಳೂರಿಗೆ ಆಗಮಿಸಿದ್ದ ವಿಜಯೇಂದ ಅವರನನ್ನು ಮಾತನಾಡಿಸಲು ಸ್ನೇಹಿತ ಹರೀಶ್ ಬಂದಿದ್ದರು. ಮಾತನಾಡಿಸಿ ವಾಪಸ್ ಬೀರೂರಿಗೆ ವಿಜಯೇಂದ್ರ ಕಾರಿನ ಹಿಂದೆ ಹೋಗುವಾಗ ಅಪಘಾತ ಸಂಭವಿಸಿದೆ. ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು, ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಟೀ… ಚಹಾ… ಚಾಯ್… ಹೀಗೆ ಇದನ್ನು ನಾನಾ ಹೆಸರಿನಿಂದ ಕರೆಯಲಾಗುತ್ತದೆ. ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯುವ ಚಹಾ ಎಂದರೆ ತುಂಬಾ ಜನರಿಗೆ ಇಷ್ಟ. ಬೆಳಿಗ್ಗೆ ಎದ್ದ ಕೂಡಲೇ, ಊಟ, ತಿಂಡಿ ತಿಂದ ಕೂಡಲೇ ಟೀ ಕುಡಿಯುವ ಅಭ್ಯಾಸ ತುಂಬಾ ಜನರಿಗುತ್ತದೆ. ಅದರಲ್ಲೂ ಕೆಲಸ ಮಾಡುವಾಗ ಆಗಾಗ ಟೀ ಕುಡಿಯುತ್ತಾರೆ. ಟೀ ಕುಡಿಯುವುದರಿಂದ ಸಾಕಷ್ಟು ಲಾಭಗಳಿವೆ. ಇನ್ನೂ ಅನೇಕ ಜನ ಬೆಳಗಿನ ಚಹಾ ಕುಡಿಯುವ ಮೊದಲು ನೀರು ಕುಡಿಯುತ್ತಾರೆ. ಈಗ ಇದರ ಹಿಂದೆ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಕಾರಣಗಳಿವೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಚಹಾದಲ್ಲಿ ಕೆಫೀನ್ ಮತ್ತು ಟ್ಯಾನಿನ್ ನಂತಹ ಅಂಶಗಳು ಕಂಡುಬರುತ್ತವೆ, ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಆಸಿಡಿಟಿ ಅಥವಾ ಅಜೀರ್ಣ ಉಂಟಾಗುತ್ತದೆ. ಚಹಾ ಕುಡಿಯುವ ಮೊದಲು ನೀರು ಕುಡಿಯುವುದರಿಂದ ಹೊಟ್ಟೆಯ ಒಳಪದರವನ್ನು ರಕ್ಷಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ರಾತ್ರಿಯಿಡೀ ನಿದ್ದೆ ಮಾಡುವಾಗ ದೇಹವು ನೀರನ್ನು…
ಹಾವು.. ಹೆಸರು ಕೇಳ್ತಿದ್ದಂತೆ ಅನೇಕರು ಬೆಚ್ಚಿ ಬೀಳ್ತಾರೆ. ಕನಸಿನಲ್ಲಿ ಹಾವು ಕಂಡ್ರು ಭಯವಾಗುತ್ತದೆ. ಭಾರತದಲ್ಲಿ ನಾನಾ ಬಗೆಯ ಹಾವುಗಳಿವೆ. ಹಾವು ಕಡಿತದಿಂದ ಹೆಚ್ಚು ಜನರು ಸಾಯುವ ವಿಶ್ವದ ಏಕೈಕ ದೇಶ ಭಾರತ ಅಂದ್ರೆ ನೀವು ನಂಬ್ಲೇಬೇಕು. ವಿಶ್ವಾದ್ಯಂತ ಪ್ರತಿ ವರ್ಷ ಹಾವು ಕಡಿತದಿಂದ ಸಾವನ್ನಪ್ಪುವ ಜನರಲ್ಲಿ ಅರ್ಧದಷ್ಟು ಸಾವು ಭಾರತ ದಲ್ಲಾಗುತ್ತದೆ. https://ainlivenews.com/be-careful-before-getting-a-lease-in-bengaluru-there-are-many-people-who-cheat-but-people-are-still-people/ ಹಾವು ಕಡಿದ್ರೂ ಅನೇಕರ ಪ್ರಾಣವನ್ನು ಉಳಿಸಬಹುದು. ಆದ್ರೆ ಅನೇಕರು ಹಾವು ಕಾಣುತ್ತಿದ್ದಂತೆ ಅರೆಜೀವವಾಗಿರ್ತಾರೆ. ಹಾವು ಕಡಿಯುತ್ತಿದ್ದಂತೆ ಹೃದಯಾಘಾತಕ್ಕೊಳಗಾಗ್ತಾರೆ. ಹಾವು ಕಚ್ಚಿದ ತಕ್ಷಣ ಚಿಕಿತ್ಸೆ ಸಿಕ್ಕಿದಲ್ಲಿ ಬದುಕುವ ಛಾನ್ಸ್ ಹೆಚ್ಚಿರುತ್ತದೆ ಹಾವು ಕಡಿತಗಳು ಭಯಪಡುವಂತದ್ದಲ್ಲ. ಅದರ ಬದಲಾಗಿ ಈ ಪ್ರಥಮ ಚಿಕಿತ್ಸೆ ಸಲಹೆಗಳನ್ನು ಪಾಲಿಸಿ: ಮೊದಲು ದೇಹದ ಕಚ್ಚಿದ ಭಾಗದ ಸುತ್ತಲೂ ಬಿಗಿಯಾಗಿರುವ ವಸ್ತುಗಳಿದ್ದರೆ ಅದನ್ನು ತೆಗೆದುಹಾಕಿ ಏಕೆಂದರೆ ಇವುಗಳಿಂದ ಉಂಟಾದ ಊತದಿಂದ ಹಾನಿಯಾಗುತ್ತದೆ.ಗಾಯಾಳುಗಳಿಗೆ ಧೈರ್ಯ ತುಂಬಿ. ಎಲ್ಲಾ ಹಾವು ಕಡಿತಗಳು ವಿಷಕಾರಿಯಲ್ಲ ಒಂದುವೇಳೆ ವಿಷಕಾರಿ ಹಾವಿನ ಕಡಿತದ ನಂತರವೂ ಚಿಕಿತ್ಸೆಯ ಮೂಲಕ ಬದುಕಿಸಬಹುದು. ಸಾಮಾನ್ಯ ಪ್ರಥಮ ಚಿಕಿತ್ಸಾ…
ಬೆಂಗಳೂರು:- ನೀವು ಕೂಡ ಬೆಂಗಳೂರಿನಲ್ಲಿ ಲೀಸ್ ಗೆ ಮನೆ ಹುಡುಕ್ತಿದ್ದೀರಾ!? ಹಾಗಿದ್ರೆ ಈ ಸ್ಟೋರಿ ಮೊದಲು ಓದಿ. ಬೆಂಗಳೂರಿನಲ್ಲಿ ಮನೆ ಬಾಡಿಗೆ ಹಾಗೂ ಲೀಸ್ಗೆ ಮನೆ ಪಡೆಯುವ ಮನ್ನ ನೂರು ಬಾರಿ ಯೋಚನೆ ಮಾಡಬೇಕು. ಯಾಕೆಂದರೆ ಸ್ವಲ್ಪ ಮೈ ಮರೆತರೂ ಕೂಡ ಲಕ್ಷ ಲಕ್ಷ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಮನೆ ಮಾಲೀಕನ ಬಳಿ ಬಾಡಿಗೆಗೆ ಬಂದಿರುವುದಾಗಿ ಹೇಳಿ ಬಾಡಿಗೆದಾರರ ಬಳಿ ಮನೆ ಲೀಸ್ ನೀಡುವುದಾಗಿ ಹಣ ದೋಚಿದ ಮಧ್ಯವರ್ತಿಗಳ ಜಾಲ ಪತ್ತೆಯಾಗಿದೆ. https://ainlivenews.com/how-to-send-a-photo-without-saving-the-number-follow-this-trick/ ಮನೆ ಮಾಲೀಕನ ಬಳಿ ಬಾಡಿಗೆ ಎಂದು ಹೇಳಿ ಬಾಡಿಗೆದಾರರ ಬಳಿ ಲೀಸ್ಗೆ ಹಣ ಪಡೆದು ವಂಚನೆ ಎಸಗಿದ ಪ್ರಕರಣಗಳು ಈಗ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಒಬ್ಬನನ್ನು ಬಂಧಿಸಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ. ಆರೋಪಿಯಾದ ಖಲೀಲ್ ಷರೀಫ್ ಬಂಧನವಾಗಿದ್ದರೆ ಸೈಯದ್ ಅಹಮದ್ ಪರಾರಿಯಾಗಿದ್ದಾನೆ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾದ ಬೆನ್ನಲ್ಲೇ ಸುಮಾರು 50ಕ್ಕೂ ಹೆಚ್ಚು ಮಂದಿ ಈಗ ಸಿಸಿಬಿ ಆಗಮಿಸಿ ತಮಗೂ ವಂಚನೆಯಾಗಿದೆ ಎಂದು…
ತನ್ನ ಬಳಕೆದಾರರಿಗೆ ಕಾಲಕ್ಕೆ ತಕ್ಕಂತೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುವ ವಾಟ್ಸ್ಆ್ಯಪ್ ಮುಂದಿನ ದಿನಗಳಲ್ಲಿ ಸಾಲು ಸಾಲು ಹೊಸ ಫೀಚರ್ಗಳು ಬರಲು ಕ್ಯೂ ನಿಂತಿದೆ. ಇದಕ್ಕೆ ಪ್ರಮುಖವಾಗಿ ವಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವುದು ಕಾರಣ. https://ainlivenews.com/who-will-listen-to-the-farmers-grievances-the-price-of-coconut-has-skyrocketed-and-the-price-of-copra-has-plummeted/ ವಾಟ್ಸಾಪ್ನಲ್ಲಿ ಇಲ್ಲಿಯವರೆಗೆ ಫೋಟೋ, ವಿಡಿಯೋ, ಇತರ ಮಾಹಿತಿನ ಕೇವಲ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಇರೋರಿಗೆ ಮಾತ್ರ ಕಳಿಸೋಕೆ ಆಗುತ್ತಿತ್ತು. ಒಂದು ವೇಳೆ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಇಲ್ದೇ ಇರೋರಿಗೆ ಕಳಿಸಬೇಕು ಅಂದ್ರೆ ಕಡ್ಡಾಯವಾಗಿ ಅವರ ನಂಬರ್ ಸೇವ್ ಮಾಡ್ಕೋಬೇಕಿತ್ತು. ಆಮೇಲೆ ಮಾತ್ರ ಆ ನಂಬರ್ಗೆ ವಾಟ್ಸಾಪ್ ಓಪನ್ ಆಗುತ್ತಿತ್ತು. ಆದರೆ ನಂಬರ್ ಸೇವ್ ಮಾಡದೆಯೂ ಫೋಟೋ, ವಿಡಿಯೋ, ಸಂದೇಶ ಕಳುಹಿಸಲು ಸಾಧ್ಯವಿದೆ. ಸರಳ ವಿಧಾನದ ಮೂಲಕ ಈ ರೀತಿ ಸಂದೇಶ ಕಳುಹಿಸಬಹುದು. ಸಾಮಾನ್ಯವಾಗಿ ಯಾವುದಾದರೂ ಮಾಹಿತಿನ ಬೇರೆಯವರಿಗೆ ಶೇರ್ ಮಾಡೋಕೆ ಅಂತ ಸ್ಪೆಷಲ್ ಆಪ್ಸ್ ಇದಾವೆ. ಅಥವಾ ಶೇರ್ ಆಪ್ಷನ್ ಉಪಯೋಗಿಸಿ ಫೋಟೋ, ವಿಡಿಯೋ ಕಳಿಸ್ತೀವಿ ಅಲ್ವಾ.. ಅದೇ ರೀತಿ ಯಾವುದಾದರೂ ಜೆರಾಕ್ಸ್ ಅಂಗಡಿಗೆ ಹೋದಾಗ ವಾಟ್ಸಾಪ್ನಲ್ಲಿ…
ಬೆಂಗಳೂರು:- ಬೇಸಿಗೆ ಬಂದರೆ ಸಾಕು ಎಳನೀರಿನ ಬೆಲೆ ಗಗನಕ್ಕೆ ಏರುತ್ತದೆ. ಆದರೆ, ಈ ಚಳಿಗಾಲದಲ್ಲೂ ಎಳನೀರಿನ ಬೆಲೆ ಅಧಿಕವಾಗಿದೆ. ಒಂದು ಎಳನೀರಿನ ಕಾಯಿಗೆ 40 ರಿಂದ 60 ರೂಪಾಯಿ ಇದೆ. ದಿಢೀರನೆ ಬೆಲೆ ಏರಿಕೆಯಿಂದ ಜನರು ಕಂಗಾಲ ಆಗಿದ್ದಾರೆ. ತೆಂಗಿನಕಾಯಿ ದರ ಗಗನಮುಖಿಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. https://ainlivenews.com/how-much-interest-will-you-get-per-year-if-you-deposit-rs-5-lakh-in-fd-in-bank-of-baroda/ ಏನ್ ಗುರು, ತೆಂಗಿನ ಕಾಯಿಗೆ ಇನ್ನಿಲ್ಲದ ಡಿಮಾಂಡ್ ಬಂದಿದೆ. ಎಷ್ಟು ಬೇಕಾದರೂ ದುಡ್ಡು ಕೊಡುತ್ತೇವೆ ಎಂದರೂ ಒಳ್ಳೆ ಕಾಯಿ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಒಂದು ಸಾಧಾರಣ ತೆಂಗಿನ ಕಾಯಿಗೆ 50 ರೂಪಾಯಿ ಇದೆ. ಹಣ ಕೊಡುತ್ತೇನೆಂದರೂ ಕಾಯಿ ಇಲ್ಲದಂತಹ ಪರಿಸ್ಥಿತಿ ಬಂದಿದ್ದಾರೂ ಏಕೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಮಡಿಕೇರಿ, ಕೊಡಗು ಭಾಗಗಳಲ್ಲಿ ಪ್ರತಿ ಮನೆಯಲ್ಲಿ ತೆಂಗಿನಕಾಯಿ ಇಲ್ಲದೇ ಅಡಿಗೆ ಮಾಡೋದೇ ಇಲ್ಲ. ಆ ಭಾಗದ ಜನರಿಗೆ ತೆಂಗಿನಕಾಯಿ ಒಂದು ಸಮಸ್ಯೆಯಾಗಿದೆ. ಉತ್ತಮ ತೆಂಗಿನ ಕಾಯಿಗಳು ಮಾರುಕಟ್ಟೆಯಲ್ಲಿಲ್ಲ. 400-500 ಗ್ರಾಂ ತೂಗುವ ತೆಂಗಿನ ಕಾಯಿ ಮಂಗಮಾಯವಾಗಿದೆ. ಈಗ ಒಂದು ಕೆಜಿಗೆ ಮೂರು,…
ಸುರಕ್ಷಿತ ಹೂಡಿಕೆ ಅಂದ್ರೆ ಮೊದಲು ನೆನಪಿಗೆ ಬರುವುದೇ ಸ್ಥಿರ ಠೇವಣಿ. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ಗಳ ಈ ಯುಗದಲ್ಲೂ ಸ್ಥಿರ ಠೇವಣಿಗಳಿಗೆ ಇನ್ನೂ ಡಿಮ್ಯಾಂಡ್ ಕಡಿಮೆಯಾಗಿಲ್ಲ. ಅದರಲ್ಲೂ ಈಗಿನ ಈ ಅನಿಶ್ಚಿತತೆಯ ಸಮಯದಲ್ಲಿ ಜನರು ಹೆಚ್ಚು ಹೆಚ್ಚು ಸ್ಥಿರ ಠೇವಣಿಗಳತ್ತ ಮುಖ ಮಾಡುತ್ತಿದ್ದಾರೆ. https://ainlivenews.com/big-shock-for-kumaraswamy-supreme-court-dismisses-petition-in-denotification-case/ ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ಸ್ವಲ್ಪ ಏರುಪೇರಾಗಿದೆ. ಕಳೆದ ಎರಡು ಮೂರು ತಿಂಗಳುಗಳಿಂದ ಸೆನ್ಸೆಕ್ಸ್, ನಿಫ್ಟಿ ಎಲ್ಲಾ ಕೆಳಗೆ ಬೀಳ್ತಾನೇ ಇದೆ. ಹೂಡಿಕೆದಾರರು ಹಣ ಹಾಕೋಕೆ ಹೆದರಿಕೊಳ್ಳುತ್ತಿದ್ದಾರೆ. ಎಲ್ಲರ ಮನಸ್ಸಿನಲ್ಲೂ ಒಂದೇ ಪ್ರಶ್ನೆ – ಮಾರುಕಟ್ಟೆ ಯಾವಾಗ ಸರಿ ಹೋಗುತ್ತೆ? ನಾವು ಹಾಕಿರುವ ಹಣ ವಾಪಸ್ ಸಿಗುತ್ತಾ? ಲಾಭ ಬರುತ್ತಾ? ಈ ಚಿಂತೆ ಎಲ್ಲರನ್ನೂ ಕಾಡ್ತಿದೆ ನಿಜ ಹೇಳಬೇಕೆಂದರೆ, ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಸಾಮಾನ್ಯ. ಒಮ್ಮೊಮ್ಮೆ ಲಾಭ ಬರುತ್ತೆ, ಒಮ್ಮೊಮ್ಮೆ ನಷ್ಟನೂ ಆಗುತ್ತೆ. ಆದರೆ ಈ ರಿಸ್ಕ್ ಎಲ್ಲರಿಗೂ ತೆಗೆದುಕೊಳ್ಳೋಕೆ ಆಗಲ್ಲ. ಅಂದರೆ ಹಣ ಹಾಕಿದರೆ ಅದು ಸೇಫ್ ಆಗಿರಬೇಕು, ನಷ್ಟ ಆಗಬಾರದು ಅನ್ನೋ ಭರವಸೆ…
ಬೆಂಗಳೂರು:- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಸುಪ್ರೀಂ ಬಿಗ್ ಶಾಕ್ ಕೊಟ್ಟಿದ್ದು, ಡಿನೋಟಿಫಿಕೇಷನ್ ಪ್ರಕರಣದಲ್ಲಿ ಅರ್ಜಿ ವಜಾ ಮಾಡಿದೆ. ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಜಮೀನು ಡಿನೋಟಿಷಿಕೇಷನ್ ಸಂಬಂಧ ಕುಮಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಸಿದ್ದು, ಇದನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ, ಇದೀಗ ಸುಪ್ರೀಂಕೋರ್ಟ್ ಎಚ್ಡಿಕೆ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. https://ainlivenews.com/sun-rays-touch-the-shivalinga-lakhs-of-devotees-are-waiting-to-witness-the-miracle/ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬನಶಂಕರಿ ಬಳಿಯ ಹಲಗೆವಡೇರಹಳ್ಳಿ ಸರ್ವೆ ನಂ. 128, 137 ರಲ್ಲಿನ 2 ಎಕರೆ 24 ಗುಂಟೆ ಜಮೀನನ್ನು ಕಾನೂನುಬಾಹಿರವಾಗಿ ಡಿ ನೋಟಿಫಿಕೇಷನ್ ಮಾಡಿದ ಆರೋಪ ಕೇಳಿಬಂದಿತ್ತು. ಈ ಕುರಿತ ದಾಖಲೆಗಳ ಸಮೇತ ಮಹದೇವಸ್ವಾಮಿ 2012ರಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಕುಮಾರಸ್ವಾಮಿ ಜೊತೆಗೆ ಪದ್ಮಾ, ಶ್ರೀದೇವಿ, ಚೇತನ್ಕುಮಾರ್, ಕೆ.ಬಿ ಶಾಂತಮ್ಮ, ಎಸ್. ರೇಖಾ ಚಂದ್ರು, ಯೋಗ ಮೂರ್ತಿ, ಬಿ.ನರಸಿಂಹುಲು ನಾಯ್ಡು, ಆರ್. ಬಾಲಕೃಷ್ಣ, ಟಿ. ಮುರುಳಿಧರ್, ಜಿ. ಮಲ್ಲಿಕಾರ್ಜುನ, ಇ.ಎ ಯೋಗೇಂದ್ರನಾಥ, ಪಿ.ಜಗದೀಶ, ಡಿ.ಎಸ್ ದೀಪಕ್,…
ಮಂಡ್ಯ:- ಮಂಡ್ಯದ ಕೆರಗೋಡಿನಲ್ಲಿ ಮಹಾ ಶಿವರಾತ್ರಿಯಂದು ಶಿವಲಿಂಗದ ಮೇಲೆ ಸೂರ್ಯ ರಷ್ಮಿ ಸ್ಪರ್ಷವಾಗಲಿದೆ. ಈ ದೃಶ್ಯ ಕಣ್ತುಂಬಿಕೊಳ್ಳೋಕೆ ಅಂತ ಲಕ್ಷಾಂತರ ಭಕ್ತರು ಕಾತುರರಾಗಿ ಕಾಯ್ತಿದ್ದಾರೆ. ಇದ್ರ ಜೊತೆಗೆ ಈ ಬಾರಿ ಕ್ಷೇತ್ರದಲ್ಲಿ ಪಂಚಲಿಂಗೋತ್ಸವ ಕಾರ್ಯಕ್ರಮ ಕೂಡ ಆಯೋಜನೆಯಾಗಿದ್ದು, ಪಂಚಲಿಂಗ ಸನ್ನಿದಿ ಜಾಗರಣೆಗೆ ಸಿದ್ದವಾಗಿದೆ. https://ainlivenews.com/bangalore-can-be-developed-if-three-municipal-corporations-are-formed/ ಹೌದು., ನಾಳೆ ನಾಡಿನಾದ್ಯಂತ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂತ ಸಂಭ್ರಮಕ್ಕೆ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮ ಕೂಡ ಸಜ್ಜಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಪುರಾತನ ದೇವಾಲಯವಾದ ಪಂಚಲಿಂಗೇಶ್ವರ ಸನ್ನಿದಿಯಲ್ಲಿ ಶಿವಲಿಂಗದ ಮೇಲೆ ಸೂರ್ಯ ರಷ್ಮಿ ಸ್ಪರ್ಷವಾಗಲಿದೆ. ಇನ್ನು ಮತ್ತೊಂದು ಕಡೆ ದೇವಸ್ಥಾನದ ಆವರಣದಲ್ಲಿ ಎರಡನೇ ವರ್ಷದ ಪಂಚಲಿಂಗೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ನ ಹೆಸ್ರಾಂತ ನಟ, ನಟಿಯರು ಸೇರಿದಂತೆ ಗಾಯಕರು ಬಾಗಿಯಾಗಲಿದ್ದು, ಮನರಂಜನೆಯ ಸುಗ್ಗಿ ನೀಡಲಿದ್ದಾರೆ. ಅಷ್ಟೇ ಅಲ್ಲದೆ ಕಾಶಿಯ ಗಂಗಾರತಿ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆಯಲಿದ್ದು, ಭಕ್ತರ ಜಾಗರಣೆಗೆ ಅನೂಕೂಲ ಮಾಡಿದ್ದಾರೆ. ಇದರ…