ಸೊನ್ನೆ ಸುತ್ತುವುದರಲ್ಲಿ ಹಿಟ್ಮ್ಯಾನ್ಗೆ ಅಗ್ರಸ್ಥಾನ ಸಿಗಲೇಬೇಕು. ಇಂಡಿಯನ್ ಪ್ರೀಮಿಯರ್ ಲೀಗ್ ನ 17 ನೇ ಸೀಸನ್ ನಲ್ಲಿ ಆಡಿರುವ ಎರಡು ಪಂದ್ಯದಲ್ಲಿ ಸೋಲನ್ನು ಅನುಭವಿಸಿರುವ ಮುಂಬೈ ಇಂಡಿಯನ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲೂ ಹಿನ್ನಡೆ ಅನುಭವಿಸಿದೆ. https://ainlivenews.com/positive-response-about-the-guarantee-see-the-intelligence-report-cm-siddu-khush/#google_vignette ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡಕ್ಕೆ ವೇಗಿ ಟ್ರೆಂಟ್ ಬೌಲ್ಟ್ ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು. ಮೊದಲ ಓವರ್ನಲ್ಲೇ ನಾಯಕ ರೋಹಿತ್ ಶರ್ಮಾ ಹಾಗೂ ನಮನ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು ಆ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಬಂದ ಡೆವಾಲ್ಡ್ ಬ್ರೆವಿಸ್ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಮುಂಬೈನ ಟಾಪ್ ಮೂವರು ಬ್ಯಾಟರ್ಗಳು ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಇದರಲ್ಲಿ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಸೊನ್ನೆಗೆ ಔಟಾಗುವ ಮೂಲಕ ಐಪಿಎಲ್ನಲ್ಲಿ ಬೇಡದ ದಾಖಲೆಯೊಂದನ್ನು ಬರೆದಿದ್ದಾರೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ತಾವು ಎದುರಿಸಿದ…
Author: AIN Author
ಬೆಂಗಳೂರು:- 2024 ರ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ಇನ್ನಿತರ ಪಕ್ಷಗಳು ಸಕಲ ತಯಾರಿ ಮಾಡಿಕೊಂಡಿದೆ. ಇನ್ನೂ ಅಭ್ಯರ್ಥಿಗಳ ಆಯ್ಕೆಯ ನಂತರ ರಾಜ್ಯದಲ್ಲಿ ಒಂದು ಸುತ್ತಿನ ಗುಪ್ತಚರ ವರದಿ ತರಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರ ಮುಖದಲ್ಲಿ ಮುಗುಳ್ನಗೆ ಮೂಡಿದೆ ಎನ್ನಲಾಗಿದೆ. https://ainlivenews.com/shocking-news-for-oil-lovers-the-price-of-alcohol-has-increased-again/#google_vignette ಒಂದು ತಿಂಗಳ ಹಿಂದೆ ಲೋಕಸಭೆ ಚುನಾವಣೆಗೆ (Lok Sabha Election 2024) ಪಕ್ಷದ ಅಭ್ಯರ್ಥಿಗಳ ಆಯ್ಕೆ ಮಾಡುವ ಮುನ್ನ ಮತದಾರರ ಒಲವಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಗುಪ್ತಚರ ವರದಿ ತರಿಸಿಕೊಂಡಿದ್ದರು. ಹೈಕಮಾಂಡ್ ಟಾಸ್ಕ್ ಕೊಟ್ಟ ಹಿನ್ನೆಲೆಯಲ್ಲಿ ಸರ್ವೇ ಮೊರೆ ಹೋದ ಸಿಎಂ ಸಿದ್ದರಾಮಯ್ಯ, ಅಭ್ಯರ್ಥಿ ಆಯ್ಕೆಗೂ ಮೊದಲು ಒಂದು ಸರ್ವೇ ಮಾಡಿಸಿದ್ದರು. ಸ್ಥಾನಗಳಿಕೆ ಎರಡಂಕಿ ದಾಟುವುದು ಡೌಟ್ ಅಂತ ರಿಪೋರ್ಟ್ ಸಿಕ್ಕಿತ್ತು. ಇದರಿಂದ ಸಿಎಂ ಸೇರಿದಂತೆ ಕೆಪಿಸಿಸಿ ಆಘಾತಗೊಂಡಿತ್ತು. 28 ಲೋಕಸಭಾ ಕ್ಷೇತ್ರ ಚುನಾವಣಾ ಕಾವು ಏರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಆಲರ್ಟ್ ಆಗಿದ್ದು, ಅಭ್ಯರ್ಥಿ ಆಯ್ಕೆ ಮುಗಿದ ಬಳಿಕ ಇನ್ನೊಂದು…
ನವದೆಹಲಿ:- ಇಂದಿನಿಂದ ದೇಶಾದ್ಯಂತ ಮದ್ಯ ಬೆಲೆಯಲ್ಲಿ ಏರಿಕೆಯಾಗಿದ್ದು, ಈ ಮೂಲಕ ಮದ್ಯ ಪ್ರಿಯರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಇಂದಿನಿಂದ ಹೊಸ ಅಬಕಾರಿ ನೀತಿ ಜಾರಿಗೆ ತಂದಿದೆ. https://ainlivenews.com/are-there-so-many-problems-if-you-eat-a-banana-on-an-empty-stomach/ ಉತ್ತರ ಪ್ರದೇಶ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶಗಳು ಮದ್ಯದ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಮದ್ಯ ಗುತ್ತಿಗೆದಾರರಿಗೂ ಅಧಿಸೂಚನೆ ಕಳುಹಿಸಲಾಗಿದೆ. ಹೊಸ ದರಗಳು ಇಂದಿನಿಂದಲೇ ಅನ್ವಯವಾಗುತ್ತವೆ. ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೂಡ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ. ಹೊಸ ಅಬಕಾರಿ ನೀತಿ 2023-24 ಅನ್ನು ಜನವರಿ 29 ರಂದು ಅಂಗೀಕರಿಸಲಾಯಿತು. ಮೋದಿ ಕ್ಯಾಬಿನೆಟ್ ಇದನ್ನು ಅನುಮೋದಿಸಿತು. ಹೊಸ ಅಬಕಾರಿ ನೀತಿಯ ಪ್ರಕಾರ, ದೇಶದಲ್ಲಿ ಮದ್ಯದ ಪರವಾನಗಿ ಶುಲ್ಕವನ್ನು ಶೇಕಡಾ 10 ರಷ್ಟು ಹೆಚ್ಚಿಸಲಾಗಿದೆ. ಉತ್ತೇಜಕ ದರವನ್ನು ಸಹ ಹೆಚ್ಚಿಸಲಾಗಿದೆ. ಈ ಕಾರಣದಿಂದಾಗಿ, ಇಂದಿನಿಂದ ದೇಶದಲ್ಲಿ ಆಲ್ಕೋಹಾಲ್ ಮತ್ತು ಬಿಯರ್ ದುಬಾರಿಯಾಗಿದೆ. ಹೊಸ ಅಬಕಾರಿ ನೀತಿಯಡಿ, ಮುಂದಿನ ಹಣಕಾಸು ವರ್ಷದಲ್ಲಿ ಸುಮಾರು 45 ಸಾವಿರ ರೂಪಾಯಿಗಳನ್ನು ಗಳಿಸುವ ಗುರಿಯನ್ನು ಕೇಂದ್ರ ಸರ್ಕಾರ…
ಬೆಳಗಿನ ಉಪಾಹಾರವು ದಿನದ ಎಲ್ಲಾ ಊಟಗಳಲ್ಲಿ ಪ್ರಮುಖವಾಗಿದೆ. ಅದಕ್ಕಾಗಿಯೇ ನೀವು ಭಾರೀ ಉಪಹಾರವನ್ನು ಸೇವಿಸಬೇಕು ಎಂದು ಹೇಳಲಾಗುತ್ತದೆ. ಆದರೆ ಕೆಲವರು ಜಿಮ್ಗೆ ಹೋಗುವ ಮೊದಲು ತಾಲೀಮು ಪೂರ್ವ ಊಟವಾಗಿ ಅಥವಾ ತರಾತುರಿಯಲ್ಲಿ ಬಾಳೆಹಣ್ಣು ತಿನ್ನಲು ಬಯಸುತ್ತಾರೆ. https://ainlivenews.com/we-are-annoyed-by-kannadigas-traditions-rangoli-case-cry-neha/ ನೀವು ಕೂಡ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಬಾಳೆಹಣ್ಣಿನ ಸೇವನೆಯು ದೇಹಕ್ಕೆ ಪ್ರಯೋಜನಕಾರಿಯಾಗಿದ್ದರೂ, ಅದನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ, ಬಾಳೆಹಣ್ಣು ಕರುಳಿನ ಚಲನೆ ಮತ್ತು ಹೆಚ್ಚಿನದನ್ನು ಅಡ್ಡಿಪಡಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು ಎಂದು ತಿಳಿಯಿರಿ 1. ಮೆಗ್ನೀಸಿಯಮ್ ಅಂಶವನ್ನು ಹೆಚ್ಚಿಸುತ್ತದೆ ಬಾಳೆಹಣ್ಣು ಮೆಗ್ನೀಸಿಯಮ್ನ ಉತ್ತಮ ಮೂಲವಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ಮೆಗ್ನೀಸಿಯಮ್ ಪ್ರಮಾಣವನ್ನು ಹೆಚ್ಚಿಸಬಹುದು. ಇದನ್ನು ದೀರ್ಘಕಾಲದವರೆಗೆ ಮಾಡುವುದರಿಂದ ನಿಮ್ಮ ಹೃದಯಕ್ಕೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದನ್ನು ತಪ್ಪಿಸಬೇಕು. 2. ಪೊಟ್ಯಾಸಿಯಮ್ ಸೇವನೆಯನ್ನು…
ಬೆಂಗಳೂರು:-ಕನ್ನಡಿಗರ ಸಂಪ್ರದಾಯದಿಂದ ನಮಗೆ ಕಿರಿಕಿರಿ ಆಗಿದೆ ಎಂದು ರಂಗೋಲಿ ಕೇಸ್ ನ ನೇಹಾ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಉತ್ತರ ಭಾರತೀಯರಿಗೆ ಬೆಂಗಳೂರಲ್ಲಿ ಸುರಕ್ಷಿತವಾಗಿ, ನೆಮ್ಮದಿಯಾಗಿ ಬದುಕುವ ಹಕ್ಕಿಲ್ಲವೇ..? ಎಂದು ಯುವತಿ ನೇಹಾ ಪ್ರಶ್ನೆ ಹಾಕಿದ್ದಾಳೆ. https://ainlivenews.com/henceforth-there-are-no-petrol-and-diesel-vehicles-in-india/ ಅಷ್ಟಕ್ಕೂ ಈ ನೇಹಾ ಯಾರು ಅಂದುಕೊಂಡ್ರಾ!? ಬೇರೆ ಯಾರು ಅಲ್ಲ ಬೆಂಗಳೂರಿನ ಬೊಮ್ಮನಹಳ್ಳಿ ಅಪಾರ್ಟ್ಮೆಂಟ್ನಲ್ಲಿ ಮನೆಯ ಮುಂದಿನ ರಂಗೋಲಿ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಕೇಸ್ ನ ಆರೋಪಿತ ಸ್ಥಾನದಲ್ಲಿ ಇರುವ ನೇಹಾ. ಎಸ್ ಬೊಮ್ಮನಹಳ್ಳಿಯ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಅಕ್ಕ-ಪಕ್ಕದ ಮನೆಯವರ ಜಗಳ ಬೀದಿ ರಂಪವಾಗಿದ್ದೂ ಅಲ್ಲದೇ, ಪೊಲೀಸ್ ಠಾಣೆ ಮೆಟ್ಟಿಲೇರಿ ಈಗ ಜಗಜ್ಜಾಹೀರಾಗಿದೆ. ಈ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಕನ್ನಡಿಗರ ಕುಟುಂಬಕ್ಕೆ ಹಿಂದೂ ಸಂಪ್ರದಾಯದಂತೆ ಮನೆ ಮುಂದೆ ರಂಗೋಲಿ ಹಾಕುವುದು, ತುಳಸಿ ಗಿಡ ಇಡುವುದು, ಬಾಗಿಲಿಗೆ ಬಳ್ಳಿ ಹಬ್ಬಿಸುವುದು, ಮನೆಯ ಮುಂದೆ ಚಪ್ಪಲಿ ಸ್ಟ್ಯಾಂಡ್ ಮತ್ತು ಶೂ ರ್ಯಾಕ್ ಇಡುವುದು ಅಭ್ಯಾಸವಿದೆ. ಇದು ಅವರ ಸಂಪ್ರದಾಯವಂತೆ. ಆದರೆ, ಇವರ ಮನೆಯ ಪಕ್ಕದಲ್ಲಿದ್ದ ಫ್ಲ್ಯಾಟ್…
ನವದೆಹಲಿ:- ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ಭಾರತವನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಇದೀಗ ಎದ್ದಿದ್ದು, ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ. https://ainlivenews.com/the-governor-must-abide-by-the-constitution-supreme-justice-nagaratna/ “ಶೇ.100 ರಷ್ಟು ಇದು ಕಷ್ಟ, ಆದರೆ ಅಸಾಧ್ಯದ ಕೆಲಸವಲ್ಲ ಎಂಬುದು ನನ್ನ ಅಭಿಪ್ರಾಯ” ಎಂದು ಸಚಿವರು ಹೇಳಿದ್ದಾರೆ. ಇಂಧನ ಆಮದು ಮಾಡಿಕೊಳ್ಳಲು ಭಾರತ 16 ಲಕ್ಷ ಕೋಟಿ ರೂ. ವೆಚ್ಚ ಮಾಡುತ್ತದೆ. ಈ ಹಣವನ್ನು ರೈತರ ಜೀವನ ಸುಧಾರಣೆಗೆ ಬಳಸಲಾಗುವುದು, ಹಳ್ಳಿಗಳು ಅಭಿವೃದ್ಧಿ ಹೊಂದುತ್ತವೆ ಮತ್ತು ಯುವಕರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಸಚಿವರು ಹೇಳಿದ್ದಾರೆ. ಆದಾಗ್ಯೂ, ಈ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಗಡ್ಕರಿ ಯಾವುದೇ ಟೈಮ್ಲೈನ್ ಅನ್ನು ನೀಡಿಲ್ಲ, ಇದನ್ನು ಗ್ರೀನ್ ಎನರ್ಜಿ ಪ್ರತಿಪಾದಕರು ಕೂಡ ಅತ್ಯಂತ ಕಷ್ಟಕರವೆಂದು ಪರಿಗಣಿಸುತ್ತಾರೆ. ಹೈಬ್ರಿಡ್ ವಾಹನಗಳ (Hybrid Vehicles) ಮೇಲಿನ ಜಿಎಸ್ಟಿಯನ್ನು ಶೇಕಡಾ 5 ಕ್ಕೆ ಮತ್ತು ಫ್ಲೆಕ್ಸ್ ಎಂಜಿನ್ಗಳ ಮೇಲಿನ ಜಿಎಸ್ಟಿಯನ್ನು (GST On Hybrid…
ತೆಲಂಗಾಣ:-ರಾಜ್ಯಪಾಲರು ಸಂವಿಧಾನಕ್ಕೆ ಬದ್ಧರಿರಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾ. ನಾಗರತ್ನಾ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನೋಟ್ ಬ್ಯಾನ್ ಕುರಿತು ಮತ್ತೊಮ್ಮೆ ಪ್ರಶ್ನೆ ಎತ್ತಿದ್ದಾರೆ. https://ainlivenews.com/working-non-partisan-to-make-pm-modi-pm-again/ ನವೆಂಬರ್ ೮, ೨೦೧೬ ರಲ್ಲಿ ನೋಟ್ ಬ್ಯಾನ್ ನಿರ್ಣಯ ತೆಗೆದುಕೊಂಡಾಗ, ನಿತ್ಯೋಪಯೋಗಿಗಾಗಿ ನೋಟುಗಳನ್ನು ಬದಲಾಯಿಸಿ ಕೊಳ್ಳುವ ಕಾರ್ಮಿಕರ ಸ್ಥಿತಿ ಏನಾಗಿರಬೇಕು ಇದರ ಕಲ್ಪನೆ ಮಾಡಿ ! ಅದರ ನಂತರ ಶೇಖಡ ೯೮ ರಷ್ಟು ಹಣ ಹಿಂತಿರುಗಿ ಬಂತು, ಹಾಗಾದರೆ ಕಪ್ಪು ಹಣ ಉಚ್ಚಾಟನೆ ಎಲ್ಲಿ ಆಯಿತು ? ಕಳೆದ ವರ್ಷ ಜನವರಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ೫ ನ್ಯಾಯಾಧೀಶರ ವಿಭಾಗೀಯಪೀಠದಿಂದ ನೋಟ್ ಬ್ಯಾನ್ ನ ನಿರ್ಣಯ ೪ ವಿರುದ್ಧ ೧ ಹೀಗೆ ಕಾನೂನು ರೀತಿ ಇದೆ ಎಂದು ನಿಶ್ಚಯಿಸಿದ್ದರು. ಈ ವಿಭಾಗೀಯಪೀಠದ ಸದಸ್ಯ ಆಗಿರುವ ನ್ಯಾಯಮೂರ್ತಿ ನಾಗರತ್ನ ಇವರು ನೋಟ್ ಬ್ಯಾನ್ಅನ್ನು ಸಂವಿದಾನದ ವಿರುದ್ಧವಾಗಿದೆ ಎಂದು ಹೇಳಿದ್ದರು. ಈ ಸಮಯದಲ್ಲಿ ರಾಜ್ಯಗಳು ಮತ್ತು ರಾಜ್ಯಪಾಲರು ಇವರಲ್ಲಿನ ವಿವಾದದ ನಂತರ ಕೂಡ ನ್ಯಾಯಮೂರ್ತಿ ನಾಗರತ್ನ ಇವರು ಕಳವಳ…
ಬೆಂಗಳೂರು :- ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಪಕ್ಷಾತೀತವಾಗಿ ಕೆಲಸ ಮಾಡಲಾಗುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜೆಡಿಎಸ್ ಸಮನ್ವಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಸಭೆ ನಿರಂತರವಾಗಿ ಸಾಗುತ್ತಿದೆ. ಮೂರನೆ ಬಾರಿಗೆ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಮಾಡಲು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದೇವೆ. ಚಿಕ್ಕಬಳ್ಳಾಪುರ ಮತ್ತು ರಾಮನಗರ ಸಮಗ್ರ ಅಭಿವೃದ್ಧಿ ಮಾಡಿದ್ದೆ ಕುಮಾರಸ್ವಾಮಿಯವರು.. https://ainlivenews.com/bommayi-campaigned-in-rona-assembly-constituency/ ದೊಡ್ಡಬಳ್ಳಾಪುರದಲ್ಲಿ ದೇವೆಗೌಡ,ಕುಮಾರಸ್ವಾಮಿಯ ಅಭಿಮಾನಿಗಳು ಇದ್ದಾರೆ. ಡಾ.ಕೆ ಸುಧಾಕರ್ ಗೆಲುವಿಗೆ ಬಿಜೆಪಿ – ಜೆಡಿಎಸ್ ಕಾರ್ಯಕರ್ತರು ಶ್ರಮದಿಂದ ಸಾಧ್ಯ ಎಂದರು. ಚಿಕ್ಕಬಳ್ಳಾಪುರ ಜೆಡಿಎಸ್ ಮಾಜಿ ಶಾಸಕ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ಬಚ್ಚೆಗೌಡರ ನಮ್ಮ ಪಕ್ಷದ ಹಿರಿಯರು ಅವರ ಬಳಿ ನಮ್ಮ ತಂದೆ ಹಾಗೂ ನಾನು ಮಾತನಾಡಿದ್ದೆ. ಅವರ ತೀರ್ಮಾನದ ಬಗ್ಗೆ ನಾನು ಏನು ಮಾತನಾಡಲ್ಲ ದೊಡ್ಡಬಳ್ಳಾಪುರದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಗದಗ:- 2024 ರ ಲೋಕಸಭಾ ಚುನಾವಣೆ ಪ್ರಯುಕ್ತ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. https://ainlivenews.com/code-of-conduct-officials-checked-the-cms-car-in-mysore/ ಅದರಂತೆ ರೋಣ ವಿಧಾನಸಭಾ ಮತಕ್ಷೇತ್ರದಲ್ಲಿ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಚಾರ ಕೈಗೊಂಡಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕು, ಗಜೇಂದ್ರಗಡ ತಾಲೂಕಿನ ಹಲವು ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದು, ಕುಂಟೋಜಿ, ನಿಡಗುಂದಿ ಹಾಳಕೇರಿ, ಮಾರನಬಸರಿ ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ನಡೆಸಿ ಗಮನ ಸೆಳೆದಿದ್ದಾರೆ. ಅಬ್ಬಿಗೇರಿ, ಕೊಟುಮಚಗಿ, ತಿಮ್ಮಾಪುರ, ಹರ್ಲಾಪುರ, ಕಣಗಿನಹಾಳದಲ್ಲಿ ಮತಬೇಟೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಮಾಜಿ ಸಿಎಂ ಬೊಮ್ಮಾಯಿ ಮತಕೇಳಿದ್ದಾರೆ. ನಿಮ್ಮ ಮತಗಳ ಮೂಲಕ ನರೇಂದ್ರ ಮೋದಿಗೆ ಕೃತಜ್ಞತೆ ಸಲ್ಲಿಸಿ ಅಂತ ಮನವಿ ಮಾಡಿದ್ದಾರೆ. ಕೋವಿಡ್ ಟೈಮಲ್ಲಿ ದೇಶದ ಜನರ ಜೀವ ರಕ್ಷಣೆ ಮಾಡಿದ ಮೋದಿಗೆ ಕೃತಜ್ಞತೆ ಸಲ್ಲಿಸಿ ಅಂತ ಮನವಿ ಮಾಡಿದ್ದು, ಮಾಜಿ ಶಾಸಕ ಕಳಕಪ್ಪ ಬಂಡಿ ಸೇರಿದಂತೆ ಹಲವು ಕಾರ್ಯಕರ್ತರು ಸಾತ್ ಕೊಟ್ಟಿದ್ದಾರೆ.
ಮೈಸೂರು:- ಮೈಸೂರು-ಟಿ.ನರಸೀಪುರ ರಸ್ತೆಯ ಚಿಕ್ಕಹಳ್ಳಿ ಚೆಕ್ಪೋಸ್ಟ್ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ತೆರಳುತ್ತಿದ್ದ ಕಾರನ್ನು ನಿಲ್ಲಿಸಿ, ಅಧಿಕಾರಿಗಳು ಕಾರಿನಲ್ಲಿದ್ದ ಸೂಟಕೇಸ್, ಬ್ಯಾಗ್, ಡ್ಯಾಷ್ ಬೋರ್ಡ್ ಸೇರಿ ಎಲ್ಲಾ ಕಡೆಗಳಲ್ಲೂ ತಪಾಸಣೆ ನಡೆಸಿದ್ದಾರೆ. https://ainlivenews.com/swar-chandru-who-owns-crores-of-rupees-does-not-have-his-own-car/ ಟಿ.ನರಸೀಪುರದಲ್ಲಿ ಕಾರ್ಯಕ್ರಮ ಮುಗಿಸಿ ತೆರಳುವಾಗ ತಪಾಸಣೆ ಮಾಡಲಾಗಿದೆ. ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಚಾಲ್ತಿಯಲ್ಲಿರುವ ಕಾರಣ, ಸಿದ್ದರಾಮಯ್ಯ ಅವರ ಕಾರನ್ನು ಬಿಡದೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.