ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (CEC Rajiv Kumar) ಅವರ ಭದ್ರತೆಯನ್ನು Z ಕೆಟಗರಿಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳ ತಿಳಿಸಿವೆ. ಗುಪ್ತಚರ ವರದಿಯ ಆಧಾರದ ಮೇಲೆ ಗೃಹ ಸಚಿವಾಲಯ, ಮುಖ್ಯ ಚುನಾವಣಾ ಆಯುಕ್ತರಿಗೆ Z ಕೆಟಗರಿ ಭದ್ರತೆಯನ್ನು ಒದಗಿಸಿದೆ. ರಾಜೀವ್ ಕುಮಾರ್ ಅವರ ರಕ್ಷಣೆಗೆ, ಭದ್ರತಾ ಪ್ರೋಟೋಕಾಲ್ಗಳ ಅಡಿಯಲ್ಲಿ ಸಮಗ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಆರ್ಪಿಎಫ್ ಕಮಾಂಡೋಗಳು ಸೇರಿದಂತೆ ಒಟ್ಟು 33 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರ ನಿವಾಸದಲ್ಲಿ 10 ಶಸ್ತ್ರಸಜ್ಜಿತ ಸ್ಟ್ಯಾಟಿಕ್ ಗಾರ್ಡ್ಗಳನ್ನು ಇದು ಒಳಗೊಂಡಿರುತ್ತದೆ. https://ainlivenews.com/navodaya-vidyalaya-has-huge-job-opportunities-for-puc-and-sslc-passers/ 6 ವೈಯಕ್ತಿಕ ಭದ್ರತಾ ಅಧಿಕಾರಿಗಳು (ಪಿಎಸ್ಒಗಳು) ಇಡೀ ದಿನದ ರಕ್ಷಣೆಯನ್ನು ಒದಗಿಸುತ್ತಾರೆ. 12 ಸಶಸ್ತ್ರ ಬೆಂಗಾವಲು ಕಮಾಂಡೋಗಳು ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ಹೆಚ್ಚುವರಿಯಾಗಿ, ಪ್ರತಿ ಶಿಫ್ಟ್ಗೆ ಇಬ್ಬರು ವೀಕ್ಷಕರು ಮತ್ತು ಮೂವರು ತರಬೇತಿ ಪಡೆದ ಚಾಲಕರು ಎಲ್ಲಾ ಸಮಯದಲ್ಲೂ ರಾಜೀವ್ ಕುಮಾರ್ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇರಲಿದ್ದಾರೆ.
Author: AIN Author
ಬೆಂಗಳೂರು: ಬಟ್ಟೆ ಸರಿಯಿಲ್ಲವೆಂದು ವ್ಯಕ್ತಿಯೊಬ್ಬರಿಗೆ ಮೆಟ್ರೋ ಸಿಬ್ಬಂದಿ ನಿಲ್ದಾಣದ ಒಳಗೆ ಬಿಡಲು ನಿರಾಕರಿಸಿದ ಘಟನೆ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಮೆಟ್ರೋ ಸಿಬ್ಬಂದಿ ನಡೆಗೆ ಟ್ವಿಟ್ಟರ್ ಎಕ್ಸ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಂಸದ ತೇಜಸ್ವಿ ಸೂರ್ಯಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಲಾಗಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ರೈತರೊಬ್ಬರು ಸ್ವಚ್ಛವಾದ ಬಟ್ಟೆ ಹಾಕಿಲ್ಲವೆಂದು ರಾಜಾಜಿನಗರ ಮೆಟ್ರೋದಲ್ಲಿ ಪ್ರವೇಶ ನಿರಾಕರಿಸಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಈಗ ಮತ್ತೆ ಇದೇ ರೀತಿಯ ಘಟನೆ ನಡೆದಿದ್ದು ಸಿಬ್ಬಂದಿಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಎಂಆರ್ಸಿಎಲ್ ಮುಂದಿನ ನಡೆಯ ಬಗ್ಗೆ ಪ್ರಶ್ನಿಸಲಾಗುತ್ತಿದೆ. https://ainlivenews.com/navodaya-vidyalaya-has-huge-job-opportunities-for-puc-and-sslc-passers/ ಅನ್ನದಾತನಿಗೆ ಅವಮಾನ ಮಾಡಿದ ಬಳಿಕ ಕಾರ್ಮಿಕನಿಗೆ ಕೂಡ ಮೆಟ್ರೋದಲ್ಲಿ ಅವಮಾನ ಮಾಡಿದ್ದು, ಬಟ್ಟೆ ಸರಿಯಿಲ್ಲವೆಂದು ಮೆಟ್ರೋಗೆ ಎಂಟ್ರಿ ಕೊಡಲು ಸಿಬ್ಬಂದಿ ಹಿಂದೇಟು ಹಾಕಿದ್ದಾರೆ. ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣಕ್ಕೆ ಕಾರ್ಮಿಕನೊಬ್ಬ ಬಂದಿದ್ದ, ಈ ವೇಳೆ ಶರ್ಟ್ ನಲ್ಲಿ ಗುಂಡಿ ಇಲ್ಲದ ಕಾರಣ ಕಾರ್ಮಿಕನನ್ನ ತಡೆದು ನಿಲ್ಲಿಸಿರುವ ಆರೋಪವಿದ್ದು, ಶರ್ಟ್ ನ ಗುಂಡಿಯನ್ನ…
ಬೆಂಗಳೂರು: ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಸೃಷ್ಟಿಯ ಮೊದಲ ದಿನ, ಹೊಸ ಚಿಗುರಿನೊಂದಿಗೆ ಹೊಸ ವರುಷವನ್ನು ಜನರು ಬಹಳ ಸಂತಸದಿಂದ ಬರ ಮಾಡಿಕೊಂಡರು. ಹಾಗಾದರೆ ಇವತ್ತಿನ ಯುಗಾದಿ ಹಬ್ಬದ ಆಚರಣೆ ಹೇಗಿತ್ತು ಬನ್ನಿ ನೋಡೋಣ ಹೌದು… ಹಿಂದುಗಳಿಗೆ ಯುಗಾದಿ ಹಬ್ಬವು ಬಹಳ ವಿಶೇಷವಾದ ದಿನ. ಯುಗದ ಆದಿಯ ದಿನವಾದ ಇಂದು ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ವಿಶ್ವಕ್ಕೆ ಜನವರಿ 1 ಹೊಸ ವರ್ಷವಾದರೆ ಹಿಂದುಗಳಿಗೆ ಯುಗಾದಿಯೇ ಹೊಸ ವರ್ಷ. ಪ್ರಕೃತಿಯಲ್ಲಿ ಆಗುವ ಬದಲಾವಣೆಯೇ ಈ ಹಬ್ಬಕ್ಕೆ ಸಾಕ್ಷಿಯಾಗಿದ್ದು. ವಸಂತ ಮಾಸದ ಮೊದಲ ದಿನವನ್ನು ಜನರು ಬಹಳ ಸಂತೋಷದಿಂದ ಬರಮಾಡಿಕೊಂಡರು. ಇನ್ನೂ…ಮುಂಜಾನೆಯಿಂದಲೇ ನಗರದ ದೇವಾಸ್ಥಾನಗಳಿಗೆ ಭಕ್ತರ ದಂಡೆ ಆಗಮಿಸಿತ್ತು. ಯುಗಾದಿ ಹಬ್ಬವಾದ ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕಾಡು ಮಲ್ಲಿಕಾರ್ಜುನಾ, ಹಾಗೂ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷವಾದ ಅಭಿಷೇಕ ಹಾಗೂ ವಿವಿಧ ಫಲ ಪುಷ್ಪಗಳಿಂದ ಅಲಂಕಾರ ಮಾಡಲಾಯಿತು. ಇನ್ನೂ…ಹೊಸ ವರ್ಷವಾದ ಹಿನ್ನೆಲೆ ಜನರು ಸಹ ತಮ್ಮ ಇಷ್ಟಾರ್ಥವು ಇಂದು…
ಲಕ್ನೋ: ಸಮಾಜದ ಭದ್ರತೆಗೆ ಯಾರೇ ಧಕ್ಕೆ ತಂದರೂ ಅವರ ‘ರಾಮ ನಾಮ ಸತ್ಯ’ (ಅಂತ್ಯಸಂಸ್ಕಾರ) ನಿಶ್ಚಿತ ಎಂದು ಕ್ರಿಮಿನಲ್ಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಎಚ್ಚರಿಕೆ ನೀಡಿದ್ದಾರೆ. ಅಲಿಗಢದಲ್ಲಿ ಬಿಜೆಪಿಯ (BJP) ಲೋಕಸಭಾ ಅಭ್ಯರ್ಥಿ ಸತೀಶ್ ಕುಮಾರ್ ಗೌತಮ್ ಪರ ಬೃಹತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳು ಮತ್ತು ವ್ಯಾಪಾರಸ್ಥರು ಆತಂಕವಿಲ್ಲದೆ ರಾತ್ರಿಯಲ್ಲಿ ಹೊರಗೆ ಹೋಗಬಹುದು ಎಂದು ಯಾರೂ ಯೋಚಿಸಿರಲಿಲ್ಲ. ಹೆಣ್ಣುಮಕ್ಕಳು ಮತ್ತು ಉದ್ಯಮಿಗಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುವವರಿಗೆ ನಾವು ‘ರಾಮ್ ನಾಮ್ ಸತ್ಯ’ (ಅಂತ್ಯ ವಿಧಿಗಳನ್ನು ಮಾಡಲಾಗುತ್ತದೆ) ಖಾತ್ರಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ನಾವು ಭಗವಾನ್ ರಾಮನ ಹೆಸರನ್ನು ಜಪಿಸುತ್ತಾ ನಮ್ಮ ಜೀವನವನ್ನು ನಡೆಸುತ್ತೇವೆ. ರಾಮನಿಲ್ಲದೆ ಯಾವುದೂ ಸಾಧ್ಯವಿಲ್ಲ. ಆದರೆ ಯಾರಾದರೂ ಸಮಾಜದ ಭದ್ರತೆಗೆ ಧಕ್ಕೆ ತಂದರೆ ‘ರಾಮ ನಾಮ ಸತ್ಯ’ ಕೂಡ ನಿಶ್ಚಿತ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. https://ainlivenews.com/navodaya-vidyalaya-has-huge-job-opportunities-for-puc-and-sslc-passers/ ಚುನಾವಣೆ ಕುರಿತು ಮಾತನಾಡಿದ ಅವರು, 10 ವರ್ಷಗಳ ಹಿಂದೆ ಕಂಡ ಕನಸು ಈಗ…
ಬೆಂಗಳೂರು: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ವಿರೋಧ ಪಕ್ಷಗಳಿಗೆ ಮತದಾರರ ಒಲವು ಗಳಿಸಲು ಯಾವುದೇ ವಿಷಯವಿರದ ಕಾರಣ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು. ಜನ ಕಾಂಗ್ರೆಸ್ ಪಕ್ಷವನ್ನು ಅರಿಸಿ ಶಕ್ತಿ ನೀಡಿದ್ದಾರೆ ಮತ್ತು ತಮ್ಮ ಸರ್ಕಾರ ಅವರಲ್ಲಿ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದೆ ಎಂದು ಶಿವಕುಮಾರ್ ಹೇಳಿದರು. https://ainlivenews.com/navodaya-vidyalaya-has-huge-job-opportunities-for-puc-and-sslc-passers/ . ನಿನ್ನೆ ಸಿದ್ದರಾಮಯ್ಯ ಅವರ ಱಲಿಯಲ್ಲಿ ವ್ಯಕ್ತಿಯೊಬ್ಬ ಗನ್ ಇಟ್ಟುಕೊಂಡು ಸಿಎಂ ಇದ್ದ ವಾಹನ ಹತ್ತಿದ್ದ ವಿಷಯ ಡಿಸಿಎಂಗೆ ಗೊತ್ತೇ ಇರಲಿಲ್ಲ. ಕುಮಾರಸ್ವಾಮಿಯರು ಕೇಂದ್ರದಲ್ಲಿ ಕೃಷಿ ಸಚಿವನಾಗುವ ಬಗ್ಗೆ ಹೇಳಿರುವುದನ್ನು ಗೇಲಿ ಮಾಡಿದ ಶಿವಕುಮಾರ್ ಕನಸು ಕಾಣುವುದರಲ್ಲಿ ತಪ್ಪಿಲ್ಲ ಅದರೆ, ಎನ್ ಡಿಎ ಅಧಿಕಾರಕ್ಕೆ ಬಂದರೆ ತಾನೆ ಅವರ ಕನಸು ನನಸಾಗೋದು ಎಂದರು. ರಾಜ್ಯದಲ್ಲಿ ಎರಡು ದಿನಗಳ ಮಟ್ಟಿಗೆ ಚುನಾವಣಾ ಪ್ರಚಾರಕ್ಕೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಬರಲಿದ್ದಾರೆ ಎಂದು…
ಬೆಂಗಳೂರು: 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎನ್ನುವ ಗುರಿ ನಮ್ಮ ವರಿಷ್ಠರಲ್ಲಿದೆ ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ”400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎನ್ನುವ ಗುರಿ ನಮ್ಮ ವರಿಷ್ಠರಲ್ಲಿದೆ. ಹಾಗಾಗಿ ರಾಜ್ಯದ ಎಲ್ಲ 28 ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸಿ ದೆಹಲಿಗೆ ಕರೆತರಲಿದ್ದೇನೆ ಎಂದು ಹೇಳಿದ್ದೇನೆ. ಆ ಭರವಸೆ ನನಗಿದೆ. ಅಮಿತ್ ಶಾ ಹಾಗೂ ಮೋದಿ ಅವರಿಗೂ ಇದನ್ನು ಹೇಳಿದ್ದೇನೆ. ಹಾಗಾಗಿ ಈ ಬಾರಿ ನಿಶ್ಚಿತವಾಗಿ ಎಲ್ಲ ಕ್ಷೇತ್ರ ಗೆದ್ದು ನಮ್ಮ ಕೊಡುಗೆ ಕರ್ನಾಟಕದ ಕೊಡುಗೆ ಎಂದು ಮೋದಿ ಅವರಿಗೆ 28 ಸಂಸತ್ ಸ್ಥಾನದ ಉಡುಗೊರೆ ಕೊಡಲಿದ್ದೇವೆ” ಎಂದರು. ”ದೇವರ ಆಶೀರ್ವಾದ, ಜನರ ಬೆಂಬಲ ಮೋದಿಯ ಅಲೆ ಇದೆ ಎಲ್ಲವೂ ಸಹ ನಮಗೆ ಪೂರಕವಾಗಿರಲಿದೆ, ನಮ್ಮ ಗುರಿ ತಲುಪುವಲ್ಲಿ ನಾವು ಸಫಲರಾಗುತ್ತೇನೆ. https://ainlivenews.com/navodaya-vidyalaya-has-huge-job-opportunities-for-puc-and-sslc-passers/ ಮೋದಿ ಇದೇ 14 ರಂದು ಮಂಗಳೂರು ಬೆಂಗಳೂರಿನಲ್ಲಿ ಪ್ರಚಾರ ಮಾಡುವ ಚಿಂತನೆ ಮಾಡಿದ್ದಾರೆ. ಈ ಬಗ್ಗೆ ಇನ್ನು ಅಂತಿಮವಾಗಿಲ್ಲ” ಎಂದರು.…
ರೈತರು ಎಲ್ಲ ಬಗೆಯ ಕೃಷಿಯೂ ಮಾಡುತ್ತಿದ್ದಾರೆ. ಈ ತರಕಾರಿ ಮತ್ತು ಹಣ್ಣುಗಳ ಕೃಷಿಯಿಂದ ಉತ್ತಮ ಲಾಭ ಗಳಿಸಬಹುದು ಎಂಬುದು ಅವರ ನಂಬಿಕೆ. ಅದರಲ್ಲಿ ಒಂದು ಬೀಟ್ರೂಟ್ ಕೃಷಿ. ಈ ಕೃಷಿಯಿಂದ ಪ್ರತಿ ವರ್ಷ ಲಕ್ಷಗಟ್ಟಲೆ ಲಾಭವೂ ಬರುತ್ತಿದೆ. ಬೀಟ್ರೂಟ್ ಒಂದು ತರಕಾರಿ ಬೆಳೆಯಾಗಿದ್ದು, ಇದನ್ನು ಹಣ್ಣು, ತರಕಾರಿ ಮತ್ತು ಸಲಾಡ್ ಆಗಿ ಬಳಸಲಾಗುತ್ತದೆ. ಬೀಟ್ರೂಟ್ ನಲ್ಲಿ ಕಬ್ಬಿಣವು ಹೇರಳವಾಗಿ ಕಂಡುಬರುತ್ತದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ ಮತ್ತು ರೋಗನಿರೋಧಕ ಶಕ್ತಿಯೂ ಬಲವಾಗಿರುತ್ತದೆ. ಇದರ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಬೆಳೆಸುವುದು ಅಷ್ಟೇ ಲಾಭದಾಯಕ. ಬೀಟ್ರೂಟ್ ಅನ್ನು ಆಯುರ್ವೇದ ಔಷಧವಾಗಿಯೂ ಬಳಸಲಾಗುತ್ತದೆ. ಇದು ಕ್ಯಾನ್ಸರ್’ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ. ರೈತರು ಬೇಕಿದ್ದರೆ ಇದನ್ನು ಬೇಸಾಯ ಮಾಡಿ ಕೇವಲ 3 ತಿಂಗಳಲ್ಲಿ 300 ಕ್ವಿಂಟಲ್ ವರೆಗೆ ಬೀಟ್ರೂಟ್ ಉತ್ಪಾದನೆ ಪಡೆಯಬಹುದು. ಇದಕ್ಕಾಗಿ, ಸುಧಾರಿತ ಕೃಷಿ ತಂತ್ರಗಳನ್ನು ಬಳಸುವುದು ಮುಖ್ಯ, ಇದರಿಂದ ರೈತರು ಕಡಿಮೆ ಶ್ರಮದಿಂದ ಉತ್ತಮ ಲಾಭವನ್ನು ಪಡೆಯಬಹುದು.…
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ರಾಮಲಲ್ಲಾ ಈಗ ತನ್ನ ದಿವ್ಯ ಮತ್ತು ಭವ್ಯ ರೂಪದಲ್ಲಿ ಎಲ್ಲರ ಮುಂದೆ ಕಾಣುತ್ತಿದ್ದು, ಸರ್ವರಿಗೂ ದರ್ಶನ ನೀಡುತ್ತಿದ್ದಾರೆ. ಪುರಾಣಗಳಲ್ಲಿ ವಿವರಿಸಲಾದ ಅವರ ನೋಟವನ್ನು ಆಧರಿಸಿ ಭಗವಾನ್ ರಾಮಲಲ್ಲಾ ಅವರ ಮಗುವಿನ ರೂಪವನ್ನು ಅನೇಕ ದೈವಿಕ ಆಭರಣಗಳು ಮತ್ತು ವಸ್ತಗಳಿಂದ ಅಲಂಕರಿಸಲಾಗಿದೆ. ಅಧ್ಯಾತ್ಮ ರಾಮಾಯಣ, ಶ್ರೀಮದ್ವಾಲ್ಮೀಕಿ ರಾಮಾಯಣ, ರಾಮಚರಿತಮಾನಸ್ ಮತ್ತು ಆಳವಂದರ ಸ್ತೋತ್ರಗಳ ಸಂಶೋಧನೆ ಮತ್ತು ಅಧ್ಯಯನದ ನಂತರ ಮತ್ತು ಅವುಗಳಲ್ಲಿ ವಿವರಿಸಲಾದ ಶ್ರೀರಾಮನ ಗ್ರಂಥಾಧಾರಿತ ಸೌಂದರ್ಯದ ಪ್ರಕಾರ ಈ ದೈವಿಕ ಆಭರಣಗಳನ್ನು ಮಾಡಲಾಗಿದೆ. ಅಯೋಧ್ಯೆಯ ನಿವಾಸಿ, ಖ್ಯಾತ ಬರಹಗಾರ ಯತೀಂದ್ರ ಮಿಶ್ರಾ ಅವರು ಆಭರಣಗಳ ಪರಿಕಲ್ಪನೆ ಮತ್ತು ನಿರ್ದೇಶ ಮಾಡಿದ್ದಾರೆ. ಇದರ ಆಧಾರದ ಮೇಲೆ ಅಂಕುರ್ ಆನಂದ್ ಅವರ ಸಂಸ್ಥೆ ಲಕ್ನೋದ ಹರ್ಷಹೈಮಲ್ ಶ್ಯಾಮಲಾಲ್ ಜ್ಯುವೆಲರ್ಸ್ ಈ ಆಭರಣವನ್ನು ತಯಾರಿಸಿದ್ದಾರೆ. https://ainlivenews.com/you-will-get-2-lakh-insurance-from-the-government-rs-3000-thousand-per-month/ ಬಾಲ ರಾಮನ ಚಿನ್ನಾಭರಣಗಳನ್ನು ಉತ್ತರ ಪ್ರದೇಶದ ಲಕ್ನೋದ ಇಂಟರ್ನ್ಯಾಷನಲ್ ಜೆಮೊಲಾಜಿಕಲ್ ಇನ್ಸ್ಟಿಟ್ಯೂಟ್ (IGI) ಪ್ರಮಾಣೀಕರಿಸಿದ ಹರ್ಷ್ ಹಿಮಾಲ್…
ನಿನ್ನೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಕೆಆರ್ ಪುರದಲ್ಲಿ ಪ್ರಚಾರದ ವೇಳೆ ಸಂಸದೆ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದ ಬಿಜೆಪಿ ಕಾರ್ಯಕರ್ತ ಪ್ರಕಾಶ್ ಅವರ ಅಂತ್ಯಕ್ರಿಯೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಬೈರತಿ ಬಸವರಾಜ್ ಭಾಗಿ ಅಂತಿಮ ದರ್ಶನ ಪಡೆದರು.. https://ainlivenews.com/navodaya-vidyalaya-has-huge-job-opportunities-for-puc-and-sslc-passers/ ಬಳಿಕ ಮಾತನಾಡಿದ ಶೋಭಾ ಅವರು ಮೃತ ಪ್ರಕಾಶ್ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ನಿನ್ನೆ ಬಿಜೆಪಿ ಕಾರ್ಯಕರ್ತರ ಸಭೆಗೆ ಆಗಮಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿ ಮೃತಪಟ್ಟಿದ್ದು, ಮೃತರ ಕುಟುಂಬದ ಜೊತೆ ತಾವಿರುವುದಾಗಿ ತಿಳಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು… ಕಾರ್ಯಕರ್ತನ ಮೃತದಿಂದ ಪ್ರತಿಯೊಬ್ಬರ ಮನಸ್ಸಲ್ಲಿ ಹಬ್ಬದ ವಾತಾವರಣ ಕಳೆದಿದೆ ಎಂದರು..
ನವದೆಹಲಿ: ಸಾಲ ಮಾಡಿ ಜನರಿಗೆ ಉಚಿತ ವಿದ್ಯುತ್ (Free Electricity) ನೀಡುವ ರಾಜ್ಯಗಳು ಸಾಲದ ಸುಳಿಗೆ ಸಿಲುಕಲಿವೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ (RK Singh), ಪಂಜಾಬ್ನಂತಹ ರಾಜ್ಯಗಳು ಸಾಲದ ಹಣದಲ್ಲಿ ವಿದ್ಯುತ್ ಖರೀದಿಸಿ ಜನರಿಗೆ ಉಚಿತವಾಗಿ ನೀಡುತ್ತಿವೆ. ರಾಜ್ಯ ಸರ್ಕಾರದ ಬಳಿಯೇ ಸಾಕಷ್ಟು ಹಣವಿದ್ದರೆ ಇಂತಹ ಜನಪ್ರಿಯ ಯೋಜನೆಗಳನ್ನು ಜಾರಿ ಗೊಳಿಸುವುದು ಸರಿ. ಆದರೆ, ಸಾಲ ಮಾಡಿ ವಿದ್ಯುತ್ ನೀಡಿದರೆ ಅದಕ್ಕೆ ಸರ್ಕಾರಗಳು ಬೆಲೆ ತೆರಬೇಕಾಗುತ್ತದೆ. ಏಕೆಂದರೆ ವಿದ್ಯುತ್ ತಯಾರಿಸಲು ಖರ್ಚು ತಗಲುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬೇರೆಲ್ಲಾ ಉತ್ಪನ್ನಗಳಂತೆ ವಿದ್ಯುತ್ ತಯಾರಿಸಲು ಕೂಡ ಹಣ ಬೇಕು. 2022 ರಲ್ಲಿ ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ (AAP) ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತಿ ಮನೆಗೆ 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಸೇರಿದಂತೆ ಹಲವಾರು ಜನಪರ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಪಂಜಾಬ್ನ ಎಎಪಿ ಸರ್ಕಾರದ (Punjab Government)…