Author: AIN Author

ಚಾಂಪಿಯನ್ಸ್ ಫೈನಲ್ ಪಂದ್ಯವು ಭಾನುವಾರ ನ್ಯೂಝಿಲೆಂಡ್ ಹಾಗೂ ಭಾರತದ ನಡುವೆ ನಡೆಯಲಿದ್ದು, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಸತತ ಎರಡನೇ ಐಸಿಸಿ ಟ್ರೋಫಿಯ ಮೇಲೆ ಕಣ್ಣಿಟ್ಟಿದೆ. https://ainlivenews.com/fire-at-plywood-factory-firefighters-who-went-to-extinguish-the-fire-also-caught-fire/ ಟೀಂ ಇಂಡಿಯಾಕ್ಕೆ ನ್ಯೂಜಿಲೆಂಡ್ ತಂಡವನ್ನು ಸೋಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯ ಮೂಲದ ಆಟಗಾರನೊಬ್ಬನಿದ್ದು, ಫೈನಲ್‌ನಲ್ಲಿ ಆತ ಟೀಂ ಇಂಡಿಯಾಕ್ಕೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಬಹುದು. ಈ ಆಟಗಾರ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಕಳೆದ ಪಂದ್ಯದಲ್ಲಿ ಗೆಲುವಿನ ಶತಕ ಕೂಡ ಬಾರಿಸಿದ್ದಾನೆ. ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಅತಿದೊಡ್ಡ ಬೆದರಿಕೆ ನ್ಯೂಜಿಲೆಂಡ್‌ನ ಯುವ ಆಟಗಾರ ರಚಿನ್ ರವೀಂದ್ರ. ರಚಿನ್ ರವೀಂದ್ರ ಮೂಲತಃ ಭಾರತೀಯ. ಅದರಲ್ಲೂ ನಮ್ಮ ಬೆಂಗಳೂರಿನ ಹುಡುಗ. ವಾಸ್ತವವಾಗಿ, ರಚಿನ್ ರವೀಂದ್ರ ನವೆಂಬರ್ 18, 1999 ರಂದು ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್ ನಗರದಲ್ಲಿ ಜನಿಸಿದರು. ಆದರೆ ಅವರ ಪೋಷಕರು ಬೆಂಗಳೂರಿನವರು. ರಚಿನ್ ಜನಿಸುವ ಮೊದಲೇ ಅವರು ನ್ಯೂಜಿಲೆಂಡ್‌ನಲ್ಲಿ ನೆಲೆಸಿದರು. ಅವರ ತಂದೆ ವೃತ್ತಿಯಲ್ಲಿ ಸಾಫ್ಟ್‌ವೇರ್. ರಚಿನ್ ರವೀಂದ್ರ ಪ್ರಸ್ತುತ ವಿಶ್ವದ…

Read More

ಹಾಸನ:- ಹಾಸನದ ಹೊಳೆನರಸೀಪುರ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಫ್ಲೈವುಡ್ ಕಾರ್ಖಾನೆಗೆ ತಗುಲಿದ್ದ ಬೆಂಕಿ ನಂದಿಸಲು ಬಂದ ಅಗ್ನಿಶಾಮಕದಳದ ವಾಹನಕ್ಕೆ ಬೆಂಕಿ ತಗುಲಿ ಮೂವರು ಸಿಬ್ಬಂದಿ ಗಾಯಗೊಂಡ ಘಟನೆ ಜರುಗಿದೆ. https://ainlivenews.com/good-news-for-fans-of-mohakatare-ramya-big-update-about-the-actress-comeback/ ಘಟನೆಯಲ್ಲಿ ಸೋಮಶೇಖರ್, ಚಾಲಕ ಜನಾರ್ದನ್ ಹಾಗೂ ವಿಷ್ಣು ಎಂಬವರಿಗೆ ಸುಟ್ಟ ಗಾಯಗಳಾಗಿವೆ. ನಗರದ ಹಮೀದ್ ಎಂಬವರಿಗೆ ಸೇರಿದ ಫ್ಲೈವುಡ್ ಫ್ಯಾಕ್ಟರಿಯಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು, ಇಡೀ ಫ್ಲೈವುಡ್ ಪ್ಯಾಕ್ಟರಿಗೆ ವ್ಯಾಪಿಸಿದೆ. ಪರಿಣಾಮ ಮರದ ದಿಮ್ಮಿಗಳು, ಫ್ಲೈವುಡ್‍ಗಳು ಹೊತ್ತಿ ಉರಿದಿವೆ. ಸ್ಥಳಕ್ಕೆ ಅಗ್ನಿಶಾಮಕದಳದ ವಾಹನ ಹಾಗೂ ಮಿನಿ ವಾಹನದ ಮೂಲಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಈ ವೇಳೆ ಮಿನಿ ವಾಹನಕ್ಕೂ ಬೆಂಕಿ ತಗುಲಿದೆ. ಬೆಂಕಿ ಹತೋಟಿಗೆ ಬಾರದ ಹಿನ್ನೆಲೆ ಚನ್ನರಾಯಪಟ್ಟಣದಿಂದ ಮತ್ತೊಂದು ಅಗ್ನಿಶಾಮಕ ವಾಹನ ತರಿಸಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ

Read More

ನಟಿ ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸದ್ಯದಲ್ಲೇ ಸಿನಿಮಾದಲ್ಲಿ ನಟಿಸೋದಾಗಿ ರಮ್ಯಾ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. https://ainlivenews.com/instructions-to-take-necessary-steps-to-control-bird-flu-in-bbmp-area/ ಫಿಲ್ಮ್ ಫಿಸ್ಟಿವಲ್ ಸಂವಾದದಲ್ಲಿ ಭಾಗಿಯಾಗಿದ್ದ ರಮ್ಯಾ ಅವರು ಸಿನಿಮಾ ಕಮ್ ಬ್ಯಾಕ್ ರಿಯಾಕ್ಟ್ ಮಾಡಿದ್ದಾರೆ. ಈಗಾಗಲೇ 4 ಸ್ಕ್ರಿಪ್ಟ್ ಕೇಳಿದ್ದೇನೆ. ಬಹುಶಃ ಅದರಲ್ಲಿ ಒಂದು ಸಿನಿಮಾದಲ್ಲಿ ನಾನು ನಟಿಸುತ್ತೇನೆ ಎಂದಿದ್ದಾರೆ. ಇದೇ ವೇಳೆ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ತಾವ್ಯಾಕೆ ನಟಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇದು ಒಟಿಟಿಗಾಗಿಯೇ ಎಂದು ಮಾಡಿದ ಸಿನಿಮಾವಾಗಿತ್ತು. ನನ್ನ ಅಭಿಮಾನಿಗಳ ಮುಂದೆ ಬರುವಾಗ ಬೆಳ್ಳಿಪರದೆಯಲ್ಲೇ ಕಾಣಿಸಿಕೊಳ್ಳಬೇಕೆಂದಿತ್ತು ಎಂದು ರಮ್ಯಾ ಹೇಳಿದ್ದಾರೆ.

Read More

ಬೆಂಗಳೂರು: ಮಾ. 06: ಬಿಬಿಎಂಪಿ‌ ವ್ಯಾಪ್ತಿಯಲ್ಲಿ ಹಕ್ಕಿಜ್ವರ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸೂರಳ್ಕರ್ ವಿಕಾಸ್ ಕಿಶೋರ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. https://ainlivenews.com/tipper-collides-with-rapido-bike-a-womans-death/ ನಗರದಲ್ಲಿ ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬೇರೆ-ಬೇರೆ ಜಿಲ್ಲೆಗಳಲ್ಲಿ ಹಕ್ಕಿಜ್ವರ ಪ್ರಕರಣಗಳು ವರದಿಯಾಗುತ್ತಿರುವುದರಿಂದ, ಪಾಲಿಕೆ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಎಲ್ಲಾ ವಲಯಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಯಿತು. ಹಕ್ಕಿಜ್ವರ ಅಥವಾ ಕೋಳಿ ಶೀತ ಜ್ವರ ಹೆಚ್5ಎನ್1 ವೈರಸ್‌ನಿಂದ ಹರಡುವ ರೋಗವಾಗಿದ್ದು, ಇದು ಟರ್ಕಿ ಕೋಳಿ, ಗಿಣಿ ಕೋಳಿ, ಬಾತು ಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ಖಾಯಿಲೆಯಾಗಿದೆ. ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡಲಿದ್ದು, ಕೆಲವೊಮ್ಮೆ ರೋಗ ಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಾಲಿಕೆಯ 8 ವಲಯಗಳಲ್ಲಿ‌ ಬರುವ ಎಲ್ಲಾ ವಾರ್ಡ್ ಗಳಲ್ಲಿಯೂ ಹಕ್ಕಿಜ್ವರ ನಿಯಂತ್ರಣ…

Read More

ಆನೇಕಲ್:- ಹೊಸೂರು ಮುಖ್ಯ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರ್ಯಾಪಿಡೋ ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ಕೆಳಗೆ ಬಿದ್ದಿದ್ದಾರೆ. https://ainlivenews.com/ind-vs-nz-champions-trophy-final-fight-on-sunday-who-will-win-if-the-match-is-cancelled/ ಘಟನೆಯಲ್ಲಿ ಹಿಂಬದಿ ಬೈಕ್ ಸವಾರಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ರ್ಯಾಪಿಡೋ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಕಮ್ಮಸಂದ್ರ ನಿವಾಸಿ ಮಂಜುಳಾ(35) ಸ್ಥಳದಲ್ಲಿಯೇ ಸಾವನ್ನಪ್ಪಿದೆ. ರ್ಯಾಪಿಡೋ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಮೃತಳು ಹೆಬ್ಬಗೋಡಿ ಠಾಣೆ ವ್ಯಾಪ್ತಿಯ ಕಮ್ಮಸಂದ್ರ ನಿವಾಸಿ. ಡಿಕ್ಕಿ ಹೊಡೆದ ಟಿಪ್ಪರ್ ಲಾರಿ ನಿಲ್ಲಿಸದೇ ಪರಾರಿ ಆಗಿದ್ದಾರೆ. ಸಿನಿಮಾ ಶೈಲಿಯಲ್ಲಿ ವಾಹನ ಸವಾರರು ಟಿಪ್ಪರ್ ಅಡ್ಡಗಟ್ಟಿದ್ದಾರೆ. ಎಲೆಕ್ಟ್ರಾನಿಕ್ಸ್ ಸಿಟಿ ವೀರಸಂದ್ರ ಸಿಗ್ನಲ್ ಬಳಿ ವಾಹನ ಸವಾರರು, ಲಾರಿ ತಡೆದಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಭಾನುವಾರ ಪರಸ್ಪರ ಮುಖಾಮುಖಿಯಾಗಲಿವೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳ ನಡುವಿನ ಎರಡನೇ ಹಣಾಹಣಿ ಇದಾಗಿದೆ. ಇದಕ್ಕೂ ಮೊದಲು, ಈ ಎರಡೂ ತಂಡಗಳ ನಡುವೆ ಗುಂಪು ಹಂತದ ಕೊನೆಯ ಪಂದ್ಯವೂ ನಡೆದಿತ್ತು, ಅದರಲ್ಲಿ ಭಾರತ ಗೆದ್ದಿತ್ತು. ಆದಾಗ್ಯೂ, ಈ ಪಂದ್ಯದಲ್ಲಿ ಎರಡೂ ತಂಡಗಳ ಮೇಲೆ ಗೆಲ್ಲಲೇಬೇಕಾದ ಒತ್ತಡವಿದೆ. ಆದರೆ ಇದರ ಹೊರತಾಗಿಯೂ ನಾನಾ ಕಾರಣಗಳಿಂದ ಪಂದ್ಯ ರದ್ದಾದರೆ ಯಾವ ತಂಡ ಚಾಂಪಿಯನ್ ಆಗುತ್ತದೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ. https://ainlivenews.com/law-and-order-situation-in-bengaluru-is-good-parameshwara/ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದುವರೆಗೆ 3 ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಆದರೆ ನಾಕೌಟ್ ಪಂದ್ಯಗಳಿಗಾಗಿಯೇ ಐಸಿಸಿ ಕೆಲವು ವಿಭಿನ್ನ ನಿಯಮಗಳನ್ನು ರೂಪಿಸಿದೆ. ಈ ಬಾರಿ ಐಸಿಸಿ ಎರಡೂ ಸೆಮಿಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿಪಡಿಸಿತ್ತು. ಅದರಂತೆ ಫೈನಲ್ ಪಂದ್ಯಕ್ಕೂ ಮೀಸಲು ದಿನವಿದೆ. ಅಂದರೆ ಈ ಪಂದ್ಯ ಮಾರ್ಚ್ 9 ರಂದು ಪೂರ್ಣಗೊಳ್ಳದಿದ್ದರೆ, ಪಂದ್ಯವನ್ನು ಮಾರ್ಚ್ 10…

Read More

ಬೆಂಗಳೂರು:- ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ. https://ainlivenews.com/mix-this-into-the-idli-batter-to-prevent-it-from-going-sour-it-wont-hurt-even-if-its-been-a-week/ ಈ ಸಂಬಂಧ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದಾಗಿನಿಂದ ಕೊಲೆಗಳ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಉತ್ತಮವಾಗಿದೆ ಎಂದು ಬೆನ್ನು ತಟ್ಟಿಕೊಂಡರು. ಬೆಂಗಳೂರಿನಲ್ಲಿ ವೀಲ್ಹಿಂಗ್ ಮಾಡುವ ಪುಂಡರ ಮೇಲೆ ಕೇಸ್ ಹಾಕಲಾಗಿದೆ. 2023ರಲ್ಲಿ 242 ಕೇಸ್ ದಾಖಲು ಮಾಡಿದ್ದು, 207 ಜನರ ಬಂಧನ ಮಾಡಲಾಗಿದೆ. 2024ರಲ್ಲಿ 532 ಕೇಸ್ ದಾಖಲು ಮಾಡಿದ್ದು, 479 ಜನರ ಬಂಧನ ಮಾಡಲಾಗಿದೆ. 2025ರಲ್ಲಿ 114 ಕೇಸ್ ದಾಖಲು ಆಗಿದ್ದು, 102 ಜನರ ಬಂಧನ ಮಾಡಲಾಗಿದೆ ಎಂದು ತಿಳಿಸಿದರು. ಇತ್ತೀಚೆಗೆ ಎಎಸ್‌ಐಗಳಿಗೆ ಗನ್ ಕೊಡುವ ಕೆಲಸ ಮಾಡ್ತಿದ್ದೇವೆ. 24 ಗಂಟೆ ಬೀಟ್ ವ್ಯವಸ್ಥೆ ಮಾಡ್ತಿದ್ದೇವೆ. ಕಾನೂನು ಸುವ್ಯವಸ್ಥೆ ಹಾಳು ಮಾಡುವವರಿಗೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಲಂಡನ್ ಮಾದರಿಯಲ್ಲಿ ಪೊಲೀಸ್ ವ್ಯವಸ್ಥೆ ಮಾಡಿದ್ದೇವೆ. ಇದಕ್ಕಾಗಿ ವಿಶೇಷ ಕಂಟ್ರೋಲ್ ರೂಂ ಮಾಡಲಾಗಿದೆ. ಕಂಟ್ರೋಲ್ ರೂಂಗೆ ಕರೆ ಮಾಡಿದ 9 ನಿಮಿಷಗಳಲ್ಲಿ…

Read More

ಇಡ್ಲಿ ಅಂದ್ರೆ ನೆನಪಾಗುವುದೇ ದಕ್ಷಿಣ ಭಾರತೀಯನ್ನರು. ವಾರಾಂತ್ಯ ಬಂತೆಂದರೆ ಮನೆಯಲ್ಲಿ ಬಹುತೇಕರು ಒಂದು ವಾರದ ಮಟ್ಟಿಗೆ ಆಗುವಷ್ಟು ಇಡ್ಲಿ, ದೋಸೆ ಹಿಟ್ಟು ರುಬ್ಬಿಕೊಂಡು ಫ್ರಿಡ್ಜ್​​ನಲ್ಲಿ ಇಡುತ್ತಾರೆ. ಅದರ ನಂತರ, ತಮಗೆ ಯಾವಾಗ ಬೇಕೋ ಆಗ ಅಂದ್ರೆ, ಬೆಳಗ್ಗೆ ಮತ್ತು ರಾತ್ರಿ ವೇಳೆಯಲ್ಲಿ ಇಡ್ಲಿ ಮತ್ತು ದೋಸೆಯನ್ನು ಸಿದ್ಧಪಡಿಸುತ್ತಾರೆ. ಆದರೆ, ವಾರದ ಕೊನೆಯ ಮೂರು ದಿನಗಳ ನಂತರ, ಕೆಲವೊಮ್ಮೆ ಹಿಟ್ಟು ಹುಳಿಯಾಗುತ್ತದೆ. ಅನೇಕರು ಅದನ್ನು ಎಸೆಯುತ್ತಾರೆ. ಆದರೆ, ಕೆಲವು ಸಲಹೆಗಳನ್ನು ಅನುಸರಿಸುವುದರಿಂದ, ಆ ಹಿಟ್ಟಿನ ಹುಳಿಯನ್ನು ಕಡಿಮೆ ಮಾಡಬಹುದು. ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಮನೆ-ಹೋಟೆಲ್‌ಗಳಲ್ಲಿ ಇದು ತುಂಬಾನೇ ಫೇಮಸ್‌. ಹೀಗಾಗಿ ಬೆಳಗ್ಗೆಯೇ ಬಹುತೇಕ ಮನೆಗಳಲ್ಲಿ ಇಡ್ಲಿ, ದೋಸೆಯನ್ನು ಜನ ಹೆಚ್ಚಾಗಿ ತಿಂಡಿಯನ್ನಾಗಿ ಮಾಡಿ ಸೇವಿಸುತ್ತಾರೆ. https://ainlivenews.com/drinking-water-is-hot-water-good-for-drinking-is-filtered-water-good-heres-the-best-answer/ ಹೌದು, ದಕ್ಷಿಣ ಭಾರತದ ಸಾಂಪ್ರದಾಯಿಕ ಆಹಾರದಲ್ಲಿ ಇಡ್ಲಿ ತುಂಬಾ ಪ್ರಸಿದ್ಧಿ ಪಡೆದಿರುವ ತಿಂಡಿ. ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡಿನಲ್ಲಿ ಇಡ್ಲಿಯನ್ನು ಹಲವು ರೀತಿಯಲ್ಲಿ ಮಾಡಲಾಗುತ್ತದೆ. ಅಕ್ಕಿ ಇಡ್ಲಿ, ರವೆ ಇಡ್ಲಿ, ಮಲ್ಲಿಗೆ ಇಡ್ಲಿ,…

Read More

ನಾವೆಲ್ಲರೂ ನೀರಿನ ಮಹತ್ವದ ಕುರಿತು ಶಾಲೆಯಲ್ಲಿ ಅನೇಕ ಪ್ರಬಂಧಗಳನ್ನು ಬರೆದಿದ್ದೇವೆ. ಆದರೆ ಇಂದಿನ ಕಾಲದಲ್ಲಿ ಜಲಮಾಲಿನ್ಯ ವಿಪರೀತವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ನೀರನ್ನು ಹೇಗೆ ಬಳಸುತ್ತೇವೆ ಎಂಬುದು ಕೂಡ ಬಹಳ ಮುಖ್ಯ. ನೀರಿನ ಶುದ್ಧತೆಗೆ ವಿಶೇಷ ಗಮನ ನೀಡಬೇಕು. https://ainlivenews.com/america-will-impose-counter-tariffs-on-india-from-april-2nd/ ಈಗ ನಾವು ಆಧುನಿಕರಾಗುತ್ತಿದ್ದೇವೆ, ಆದ್ದರಿಂದ ಈ ನೀರಿನ ಅಂಶವು ಸ್ವಲ್ಪ ಹೆಚ್ಚು ಆಧುನಿಕವಾಗಿರಬೇಕು. ಕಾಯಿಸಿದ ನೀರಿ ಮತ್ತು ಫಿಲ್ಟರ್ ಮಾಡಿದ ನೀರಿನಲ್ಲಿ ಯಾವ ನೀರು ಆರೋಗ್ಯಕ್ಕೆ ಉತ್ತಮವಾಗಿದೆ. ಬೇಸಿಗೆ ಆರಂಭವಾಗುತ್ತಿದೆ ಕುಡಿಯೋ ನೀರಿಗೂ ನಿಧಾನಕ್ಕೆ ಹಾಹಾಕಾರ ಶುರುವಾಗುತ್ತಿದೆ. ಈ ವೇಳೆ ಯಾವ ನೀರು ಕುಡಿಯಬೇಕು ಎಂಬ ಗೊಂದಲವೂ ಜನರನ್ನು ಕಾಡುತ್ತಿದೆ. ತಣ್ಣನೆ ನೀರು ಕುಡಿಯಬೇಕಾ? ಬಿಸಿ ಮಾಡಿ, ಕಾದಾರಿದ ನೀರಾ ಅಥವಾ ಫಿಲ್ಟರ್ ಮಾಡಿದ ನೀರಾ? ಯಾವ ನೀರು ಹೆಚ್ಚು ಶುದ್ಧವಾಗಿದೆ? ಪೌಷ್ಟಿಕಾಂಶದ ಮೌಲ್ಯದ ದೃಷ್ಟಿಯಿಂದ ಯಾವ ನೀರು ಕುಡಿಯಲು ಉತ್ತಮ? ಎಂಬ ಗೊಂದಲ ಜನರನ್ನು ಕಾಡುತ್ತಿದೆ. ಇದಕ್ಕೆ ಉತ್ತರ ನೀಡುವ ಪ್ರಯತ್ನ ಈ ಲೇಖನದಲ್ಲಿದೆ.. H2O.. ಎಂದರೆ…

Read More

ಬೆಂಗಳೂರು:- ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಎಸ್ಕಾಂ ವ್ಯಾಪ್ತಿಯಲ್ಲೂ ಈ ಸ್ಮಾರ್ಟ್​ ಮೀಟರ್​ ಜಾರಿಗೊಳಿಸಲಾಗುತ್ತದೆ. ಸದ್ಯ ಚಾಲ್ತಿಯಲ್ಲಿರುವ ಸ್ಟಾಟಿಕ್ ಮೀಟರ್​ಗಳಿಗೂ ಹೊಸ ಸ್ಮಾರ್ಟ್​ ಮೀಟರ್​ಗಳ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸ್ಮಾರ್ಟ್​ ಮೀಟರ್ ದರ ಶೇ.400ರಿಂದ 800ರಷ್ಟು ಏರಿಕೆಯಾಗಿದ್ದು, ಹೊಸ ಸಂಪರ್ಕಕ್ಕೆ ಸ್ಮಾರ್ಟ್​ ಮೀಟರ್​ ಕಡ್ಡಾಯವಾಗಿದೆ. https://ainlivenews.com/a-young-man-who-was-living-together-with-a-young-woman-committed-suicide/ ಎಲ್ ಟಿ ಸಿಂಗಲ್ ಫೇಸ್ 2 ಸ್ಟಾಟಿಕ್​​ ಮೀಟರ್​​​ ದರ 980 ರೂಪಾಯಿ ಇದ್ದು, ಸ್ಮಾರ್ಟ್​​ ಮೀಟರ್​​ ದರ 4,800 ರೂ. ಇದೆ. ಎಲ್ ಟಿ 3 ಫೇಸ್ 4 ಸ್ಟಾಟಿಕ್​​ ಮೀಟರ್ 2,430 ರೂಪಾಯಿ ಇದ್ರೆ, ಸ್ಮಾರ್ಟ್​​ ಮೀಟರ್​​ ದರ 8,500 ರೂ. ಆಗಿದೆ. ಇನ್ನು ಎಲ್ ಟಿ 3 ಫೇಸ್ CT ಆಪರೇಟೆಡ್ 3450 ರಿಂದ 10,900 ರೂಪಾಯಿ ಆಗಿದೆ. ಇನ್ನು ಈ ಸ್ಮಾರ್ಟ್​ ಮೀಟರ್ ನಿರ್ವಹಣೆ ಬಗ್ಗೆ ಬೆಸ್ಕಾಂ ಮಾರ್ಗಸೂಚಿ ಹೊರಡಿಸಿದ್ದು, ಪ್ರಿಪೇಯ್ಡ್ ಗ್ರಾಹಕರು ಕನಿಷ್ಠ 100 ರೂ ಅಥವಾ…

Read More