ವಿಕ್ರಾಂತ್ ರೋಣ ಸಿನಿಮಾದ ಬಳಿಕ ಕಿಚ್ಚ ಸುದೀಪ್ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಸಾಕಷ್ಟು ಗ್ಯಾಪ್ ಬಳಿಕ ಇದೀಗ ಮ್ಯಾಕ್ಸ್ ಸಿನಿಮಾದ ಮೂಲಕ ಬಾಕ್ಸ್ ಆಫೀಸ್ ಲೂಠಿ ಮಾಡಲು ರೆಡಿಯಾಗಿದ್ದಾರೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದು ಚಿತ್ರದಲ್ಲಿ ಕಿಚ್ಚ ಪೊಲೀಸ್ ಪಾತ್ರದಲ್ಲಿ ಕಮಾಲ್ ಮಾಡಲಿದ್ದಾರೆ. ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪಾತ್ರದ ಹೆಸರು ವಿಭಿನ್ನವಾಗಿಯೇ ಇದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಬಿಲ್ಲಾ ರಂಗ ಭಾಷಾ’ಗಾಗಿ ಸುದೀಪ್ ರೆಡಿಯಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ಮೂರು ಪಾತ್ರಗಳಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಒಂದೊಂದು ಪಾತ್ರಕ್ಕೆ ಒಂದೊಂದು ರೀತಿ ಮ್ಯಾನರಿಸಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಕಿಚ್ಚ ಅವರು ತಾವು ಬಾಸ್ ಎಂದು ಯಾರಿಗೆ ಕರೆಯುತ್ತೇನೆ ಎಂದು ಹೇಳಿಕೊಂಡಿರುವ ವಿಡಿಯೊ ಭಾರಿ ವೈರಲ್ ಆಗುತ್ತಿದೆ. ʻಗೌರಿ’ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಸಮರ್ಜಿತ್ ಲಂಕೇಶ್ ಅವರು…
Author: Author AIN
ಕಾಂಗ್ರೆಸ್ ಸರ್ಕಾರ ಕಳೆದ ಕೆಲ ತಿಂಗಳಿನಿಂದ ಮನೆ ಯಜಮಾನಿಗೆ ನೀಡುತ್ತಿದ್ದ ಗೃಹಲಕ್ಷ್ಮಿ ಹಣ ಕಳೆದ ತಿಂಗಳು ಕೊಂಚ ವಿಳಂಬವಾಗಿತ್ತು.ಚುನಾವಣೆ ನೀತಿ ಸಂಹಿತೆಯಿಂದಾಗಿ ಜೂನ್ ತಿಂಗಳ ಗೃಹಲಕ್ಷ್ಮಿ ಹಣ ನೀಡುವುದು ಕೆಲ ದಿನಗಳ ಕಾಲ ತಡವಾಗಿತ್ತು. ಇದರಿಂದ ಗೃಹಿಣಿಯರು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಆದರೆ ಕಳೆದ ತಿಂಗಳಿನ ಹಣ ಇಂದು ನಿಮ್ಮ ಖಾತೆಗೆ ಜಮೆಯಾಗಲಿದ್ದು ಈ ತಿಂಗಳ ಅಂದರೆ ಜುಲೈ ತಿಂಗಳ ಹಣ ಇದೇ 15ರೊಳಗೆ ಪಾವತಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಇನ್ನೂ ಸಾಕಷ್ಟು ಜನ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರು ಕೂಡ ಆಧಾರ ಸೀಡಿಂಗ್ ಮಾಡಿಕೊಂಡಿಲ್ಲ. ಹೀಗಾಗಿ ಅವರಿಗೆ ಹಣ ಬರುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡರೂ ಸಹಾಯಧನ ಪಾವತಿಯಾಗದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್ಗಳಲ್ಲಿ ಪರಿಹರಿಸಿಕೊಳ್ಳಬೇಕು. ಬಳಿಕ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ, ಇ-ಕೆವೈಸಿ ಅಪ್ಡೇಟ್ ಮಾಡಿಸಿ, ದೃಢೀಕರಣ ಪಡೆದು ಅವುಗಳನ್ನು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ…
ಸಿಂಗಾಪುರದಲ್ಲಿ ಕೀಟಗಳು, ಮಿಡತೆಗಳು ಮತ್ತು ರೇಷ್ಮೆ ಹುಳುಗಳು ಸೇರಿದಂತೆ ಹದಿನಾರು ಜಾತಿಯ ಕೀಟಗಳನ್ನು ಮನುಷ್ಯರ ಆಹಾರವನ್ನಾಗಿ ಬಳಸಬಹುದು ಎಂದು ಸಿಂಗಾಪುರ್ ಆಹಾರ ಸಂಸ್ಥೆ (ಎಸ್ಎಫ್ಎ) ಅನುಮೋದನೆ ನೀಡಿದೆ. . “ತಕ್ಷಣದ ಪರಿಣಾಮದೊಂದಿಗೆ, ಕಡಿಮೆ ನಿಯಂತ್ರಕ ಕಾಳಜಿ ಎಂದು ನಿರ್ಣಯಿಸಲಾದ ಜಾತಿಗಳಿಗೆ ಸೇರಿದ ಕೀಟಗಳು ಮತ್ತು ಕೀಟ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಎಸ್ಎಫ್ಎ ಅನುಮತಿಸುತ್ತದೆ” ಎಂದು ಸಂಸ್ಕರಿತ ಆಹಾರ ಮತ್ತು ಪಶು ಆಹಾರ ವ್ಯಾಪಾರಿಗಳನ್ನು ಉದ್ದೇಶಿಸಿ ಸುತ್ತೋಲೆಯಲ್ಲಿ ಸಂಸ್ಥೆ ತಿಳಿಸಿದೆ. “ಈ ಕೀಟಗಳು ಮತ್ತು ಕೀಟ ಉತ್ಪನ್ನಗಳನ್ನು ಮಾನವ ಬಳಕೆಗಾಗಿ ಅಥವಾ ಆಹಾರ-ಉತ್ಪಾದಿಸುವ ಪ್ರಾಣಿಗಳಿಗೆ ಪಶು ಆಹಾರವಾಗಿ ಬಳಸಬಹುದು. SFA ಮೊದಲು 2022 ರ ಅಂತ್ಯದಲ್ಲಿ ಕೀಟಗಳು ಮತ್ತು ಕೀಟ ಉತ್ಪನ್ನಗಳ ನಿಯಂತ್ರಣದ ಕುರಿತು ಸಾರ್ವಜನಿಕ ಸಮಾಲೋಚನೆಯನ್ನು ನಡೆಸಿತು. ಕಳೆದ ವರ್ಷ ಏಪ್ರಿಲ್ನಲ್ಲಿ, 2023 ರ ದ್ವಿತೀಯಾರ್ಧದಲ್ಲಿ 16 ಜಾತಿಯ ಕೀಟಗಳು ಬಳಕೆಗೆ ಹಸಿರು ಬೆಳಕನ್ನು ಪಡೆಯುತ್ತವೆ ಎಂದು ಸಂಸ್ಥೆ ಹೇಳಿದೆ, ಆದರೆ ನಿರ್ಧಾರವನ್ನು ತಿರಸ್ಕರಿಸಿದ್ದು ಇದೀಗ ಇವುಗಳನ್ನು ಆಹಾರವಾಗಿ ಬಳಸಬಹುದು ಎಂದಿದೆ.
ವೈದ್ಯಲೋಕದಲ್ಲಿ ನಿತ್ಯ ಹಲವು ಅಸಾಧಾರ, ಅಸಮಾನ್ಯ ಪ್ರಕರಣಗಳನ್ನು ವೈದ್ಯರು ಮಾಡುತ್ತಲೇ ಇರುತ್ತಾರೆ. ಇದೀಗ ಮತ್ತೊಂದು ಅಚ್ಚರಿಯ ಘಟನೆ ವೈದ್ಯ ಲೋಕದಲ್ಲಿ ನಡೆದಿದೆ ರೋಗಿ ಚೀನಾದ ಬೀಜಿಂಗ್ನಲ್ಲಿರು ಆಸ್ಪತ್ರೆಯಲ್ಲಿ ದಾಖಲಾದರೆ, ವೈದ್ಯ ರೋಮ್ನಲ್ಲಿ ಕುಳಿತು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಚೀನಾದ ಪೀಪಲ್ ಲಿಬರೇಶನ್ ಆರ್ಮಿ ಆಸ್ಪತ್ರೆಯ ಯುರೋಲಜಿ ವೈದ್ಯ ಝಾಂಗ್ ಕ್ಸು ಈ ಅಚ್ಚರಿ ಶಸ್ತ್ರಚಿಕಿತ್ಸೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ವೈದ್ಯರು ರೋಮ್ ಪಟ್ಟಣದಲ್ಲಿದ್ದರೆ ರೋಗಿ 8,000 ಕಿಲೋಮೀಟರ್ ದೂರದ ಬೀಜಿಂಗ್ ಆಸ್ಪತ್ರೆಯಲ್ಲಿದ್ದರು. ರೋಮ್ನಿಂದ ವೈದ್ಯ ಝಾಂಗ್ ಕ್ಸು ರೋಗಿಗೆ ಟೆಲಿಸರ್ಜರಿ ವಿಧಾನದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. 5ಜಿ ನೆಟ್ವವರ್ಕ್ ಹಾಗೂ ಆಪ್ಟಕಲ್ ಕೇಬಲ್ ನೆಟವರ್ಕ್ ಮೂಲಕ ಹೈಸ್ಪೀಡ್ ಇಂಟರ್ನೆಟ್ ಸೇವೆಯನ್ನು ಬಳಸಿಕೊಳ್ಳಲಾಗಿದೆ. ವೈದ್ಯರು ಟೆಲಿ ಸ್ಕ್ರೀನ್ ಮೂಲಕ ರೋಗಿಯ ಶಸ್ತ್ರಚಿಕಿತ್ಸೆ ಮಾಡಿದರೆ, ಇದರ ಸಂಜ್ಞೆಗಳನ್ನು ಆಸ್ಪತ್ರೆಯ್ಲಲಿ ರೋಗಿ ಮುಂದೆ ಅಳವಡಿಸಿದ್ದ ರೋಬೋಟಿಕ್ ಮಿಶನ್ ಸ್ವೀಕರಿಸಿ ಶಸ್ತ್ರಚಿಕಿತ್ಸೆ ಮಾಡಿದೆ. ರೋಬೋಟಿಕ್ ಮೂಲಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಝಾಂಗ್ ಕ್ಸು ರೋಮ್ನಿಂದ ಪ್ರಾಸೆಕ್ಟೊಮಿ ಶಸ್ತ್ರಚಿಕಿತ್ಸೆಯನ್ನು ರೋಬೋಟಿಕ್…
ದಕ್ಷಿಣ ಚಿತ್ರರಂಗದ ಖ್ಯಾತ ನಟ ಶರತ್ ಕುಮಾರ್ ಪುತ್ರಿ ಸ್ಟಾರ್ ಬ್ಯೂಟಿ ವರಲಕ್ಷ್ಮಿ ಶರತ್ಕುಮಾರ್ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿಯಾಗಿ ಹಸೆಮಣೆ ಏರಿ ಬಳಿಕ ಸಖತ್ ಗ್ರ್ಯಾಂಡ್ ಆಗಿ ರಿಸೆಪ್ಶನ್ ಮಾಡಿಕೊಂಡಿದ್ದ ಜೋಡಿ ಇದೀಗ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ. ಈ ವೇಳೆ ಪತಿಯೊಂದಿಗೆ ಸೆಲ್ಫಿ ತೆಗೆದುಕೊಂಡ ನಟಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಟಿ ವರಲಕ್ಷ್ಮಿ ಶರತ್ಕುಮಾರ್ ಪತಿ ನಿಕೊಲಾಯ್ ಸಚ್ದೇವ್ ಅವರೊಂದಿಗೆ ಹನಿಮೂನ್ ಎಂಜಾಯ್ ಮಾಡ್ತಿದ್ದಾರೆ.ಸದ್ಯ ನಟಿ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲಾ ತಾಣದಲ್ಲಿ ಸದ್ದು ಮಾಡುತ್ತಿದೆ. ನವ ದಂಪತಿಗಳಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ನಟ ಶರತ್ಕುಮಾರ್ ಅವರ ಪುತ್ರಿ ವರಲಕ್ಷ್ಮಿ ತಮಿಳು ಚಿತ್ರರಂಗದ ಜನಪ್ರಿಯ ನಟಿ. ಅವರು ಕೆಲವು ಚಿತ್ರಗಳಲ್ಲಿ ತಮ್ಮ ವಿಶೇಷ ಪಾತ್ರಕ್ಕಾಗಿ ಗಮನ ಸೆಳೆದರು. ಪೋಷಕ ನಟಿಯಾಗಿ, ಹೀರೋಯಿನ್ ಆಗಿಯೂ ಅವರು ಗಮನ ಸೆಳೆದಿದ್ದಾರೆ. ವರಲಕ್ಷ್ಮಿ ಅವರು ನಟ ವಿಶಾಲ್ ಅವರೊಂದಿಗೆ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ವರಲಕ್ಷ್ಮಿ ಅವರು ಮುಂಬೈ…
ಫ್ರಾನ್ಸ್ ಪ್ರಧಾನಿ ಗೇಬ್ರಿಯಲ್ ಅಟ್ಟಲ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಮುಂದಿನ ಉತ್ತರಾಧಿಕಾರಿಯನ್ನು ನೇಮಕ ಮಾಡುವವರೆಗೂ ತಮ್ಮ ಕರ್ತವ್ಯಗಳನ್ನು ಮುಂದುವರಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಭಾನುವಾರದ ಮತದಾನದ ಆರಂಭಿಕ ಅಂದಾಜಿನ ಪ್ರಕಾರ ಎನ್ಎಫ್ಪಿ ಬಹುತ್ವವನ್ನು ಗಳಿಸಿದೆ ಆದರೆ ಸಂಪೂರ್ಣ ಬಹುಮತದ ಕೊರತೆಯಿದೆ, ಮ್ಯಾಕ್ರನ್ ಅವರ ಆಡಳಿತ ಪಕ್ಷವು ಎರಡನೇ ಸ್ಥಾನದಲ್ಲಿದೆ ಮತ್ತು ಬಲಪಂಥೀಯ ನ್ಯಾಷನಲ್ ರ್ಯಾಲಿ ಮೂರನೇ ಸ್ಥಾನದಲ್ಲಿದೆ. ಆದಾಗ್ಯೂ, ಜುಲೈ 26 ರಂದು ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗಲಿರುವುದರಿಂದ ತಮ್ಮ ರಾಜೀನಾಮೆಯನ್ನು ತಿರಸ್ಕರಿಸಿದರೆ, “ಕರ್ತವ್ಯದ ಬೇಡಿಕೆಗಳಿರುವವರೆಗೂ” ಅಧಿಕಾರದಲ್ಲಿ ಮುಂದುವರಿಯಲು ಸಿದ್ಧ ಎಂದು ಅಟ್ಟಾಲ್ ಹೇಳಿದ್ದಾರೆ. “ಈ ಅಭಿಯಾನದ ಆರಂಭದಿಂದಲೂ, ನಾನು ಮೂರು ಅಪಾಯಗಳ ವಿರುದ್ಧ ಎಚ್ಚರಿಕೆ ನೀಡಿದ್ದೇನೆ. ಎಡಪಂಥೀಯ ಫ್ರಾನ್ಸ್ ಇನ್ಸೌಮೈಸ್ ಪಕ್ಷದ ಸಂಪೂರ್ಣ ಬಹುಮತ, ರಾಷ್ಟ್ರೀಯ ರ್ಯಾಲಿಯ ಸಂಪೂರ್ಣ ಬಹುಮತದ ಅಪಾಯ, ನಮ್ಮ ಮೌಲ್ಯಗಳು ಮತ್ತು ತತ್ವವನ್ನು ಸಾಕಾರಗೊಳಿಸುವ ಆಂದೋಲನವು ಕಣ್ಮರೆಯಾಗುವ ಅಪಾಯ” ಎಂದು ಫ್ರೆಂಚ್ ಪ್ರಧಾನಿ ತಮ್ಮ ರಾಜೀನಾಮೆ ಭಾಷಣದಲ್ಲಿ ಹೇಳಿದರು. “ಆ ಮೂರು ಅಪಾಯಗಳನ್ನು ಫ್ರೆಂಚ್ ಜನರು…
ಬಿಗ್ಬಾಸ್ ಶೋ ಸ್ಪರ್ಧಿ, ಸದಾ ತರಹೇವಾರಿ ಡ್ರಸ್ ಧರಿಸೋ ನಟಿ ಉರ್ಫಿ ಜಾವೇದ್ ನೈಟ್ ಪಾರ್ಟಿಯಲ್ಲಿ ಫುಲ್ ಟೈಟ್ ಆಗಿ ನಶೆಯಲ್ಲಿ ತೇಲಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶನಿವಾರ ರಾತ್ರಿ ಪಾರ್ಟಿ ಮುಗಿಸಿ ಹೊರಗೆ ಬರುವ ಸಂದರ್ಭದಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದ್ದು ನಟಿಯನ್ನು ಹಿಡಿಯಲು ಸ್ನೇಹಿತೆ ಕಷ್ಟಪಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪಿಂಕ್ ಶಾರ್ಟ್ ಡ್ರೆಸ್ ಧರಿಸಿರುವ ಉರ್ಫಿಗೆ ಸರಿಯಾಗಿ ಹೆಜ್ಜೆ ಇರಿಸಲು ಸಾಧ್ಯವಾಗುತ್ತಿಲ್ಲ. ಪಕ್ಕದಲ್ಲಿದ್ದ ಗೆಳತಿಯರ ಮೇಲೆ ಭಾರ ಹಾಕಿ ಉರ್ಫಿ ಕಾರ್ ವರೆಗೂ ನಡೆದುಕೊಂಡು ಬರುತ್ತಾರೆ. ಮಧ್ಯದಲ್ಲಿಯೇ ತೊದಲುತ್ತಾ ಸಾರಿ ಕೇಳಿದ್ದಾರೆ. ಕಾರ್ ಒಳಗೆ ಹೋಗಲು ಸ್ನೇಹಿತೆಯರು ಒತ್ತಾಯಿಸಿದ ಬಳಿಕ ಉರ್ಫಿ ಹೋಗಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಉರ್ಫಿ ಜಾವೇದ್ ಫುಲ್ ಟೈಟ್ ಆಗಿದ್ದಾರೆ. ವೀಕೆಂಡ್ ಪಾರ್ಟಿ ಜೋರು ಆದಂತೆ ಕಾಣಿಸುತ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದಾ ತಮ್ಮ ವಿಶೇಷ ಬಟ್ಟೆ ವಿನ್ಯಾಸದಿಂದಲೇ ಸುದ್ದಿಯಲ್ಲಿರುವ ಉರ್ಫಿ ಜಾವೇದ್, ಹಲವು ಬಾರಿ ಬಾಲಿವುಡ್ ಅಂಗಳದ ಹಿಂದಿನ ರಹಸ್ಯಗಳನ್ನು…
ಬಿಗ್ ಬಾಸ್ ವೇದಿಕೆಯಲ್ಲಿ ಪರಿಚಯವಾದಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಆದರೆ ಮದುವೆಯಾದ ನಾಲ್ಕೇ ವರ್ಷಕ್ಕೆ ಇಬ್ಬರು ವಿಚೇದನ ಪಡೆಯುವ ಮೂಲಕ ಬೇರೆ ಬೇರೆಯಾಗಿದ್ದರೆ. ಈ ಬಗ್ಗೆ ಸಾಕಷ್ಟು ಊಹಾ –ಪೋಹಗಳು ಹೊರ ಬಿದ್ದಿತ್ತು. ಬಳಿಕ ಇಬ್ಬರು ಜೊತೆಯಾಗಿ ಬಂದು ಸ್ಪಷ್ಟನೆ ನೀಡಿದ್ದರು. ಸದ್ಯ ಖಾಸಗಿ ವಾಹಿಯೊಂದರಲ್ಲಿ ಭಾಗಿಯಾಗದ್ದ ಚಂದನ್ ಶೆಟ್ಟಿ ಈ ಬಗ್ಗೆ ಮಾತನಾಡಿದ್ದಾರೆ. ತನ್ನ ಬದುಕಿಗೆ ಚೆನ್ನಾಗಿರೋ ಹುಡುಗಿ ಒಳ್ಳೆ ಹುಡುಗಿ ಸಿಗಬೇಕು ಅನ್ನೋ ಆಸೆ ಇತ್ತು. ಚೆನ್ನಾಗಿರೋರೆ ಸಿಕ್ಕಿದ್ರು ಆದ್ರೆ ಜೀವನ ಅಂದ್ರೇನೆ ಹಂಗೆ ಸಮುದ್ರದ ಅಲೆಗಳ ತರ. ಸಮುದ್ರದ ಅಲೆಗಳು ಎಂದಿಗೂ ನಿಂತಿರುವುದಿಲ್ಲ. ಯಾಕೆಂದರೆ ಅದು ಅಲೆ, ಕೆಲವೊಂದು ಬಾರಿ ದೊಡ್ಡ ಅಲೆಗಳು ಬರುತ್ತಿರುತ್ತದೆ. ಒಂದು ಬಾರಿ ಸಣ್ಣ ಅಲೆ ಬರುತ್ತದೆ. ಕೆಲವೊಮ್ಮೆ ಸುನಾಮಿಯೇ ಆಗುತ್ತದೆ. ಅದು ಯಾವಾಗ, ಹೇಗೆ ಆಗುತ್ತೆ ಎನ್ನುವುದನ್ನು ನಾವು ನಿರೀಕ್ಷಿಸಬಾರದು. ಎಲ್ಲರ ಜೀವನದಲ್ಲೂ ನೋವು ಎನ್ನುವುದು ಸರ್ವೇ ಸಾಮಾನ್ಯ. ಕೆಟ್ಟ ಘಟನೆಗಳು ನಡೆದೇ ಇರುತ್ತೆ.…
ಇತ್ತೀಚೆಗೆ ಡಿವೋರ್ಸ್ ಅನ್ನೋದು ಕಾಮನ್ ಆಗಿದೆ. ಅದರಲ್ಲೂ ಸೆಲೆಬ್ರೆಟಿಗಳು ಒಬ್ಬರ ಮೇಲೊಬ್ಬರಂತೆ ಡಿವೋರ್ಸ್ ಗೆ ಮುಂದಾಗಿದ್ದಾರೆ. ಬಿಗ್ ಬಾಸ್ ವೇದಿಕೆ ಮೂಲಕ ಒಂದಾಗಿ ಸಂಸಾರ ಆರಂಭಿಸಿದ ಕೆಲ ಜೋಡಿ ಈಗಾಗಲೇ ಡಿವೋರ್ಸ್ ಪಡೆದುಕೊಂಡಿದೆ. ಇದೀಗ ಬಿಗ್ ಬಾಸ್ 8ರ ಸ್ಪರ್ಧಿ ರೇನೆ ಧ್ಯಾನಿ ತಮ್ಮ ಮದುವೆಯನ್ನು ಸೋಶಿಯಲ್ ಮೀಡಿಯಾ ಮೂಲಕ ರಟ್ಟು ಮಾಡಿದ್ದರು. ಮದುವೆ ಸಂಭ್ರಮದ ವಿಡಿಯೋ ಹಂಚಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ತಿಳಿಸಿದ್ದರು. ಆದರೆ ಮರು ದಿನವೇ ಈ ವಿಡಿಯೋ ಡಿಲೀಟ್ ಮಾಡುವ ಮೂಲಕ ಅನುಮಾನ ಹುಟ್ಟುಹಾಕಿದ್ದಾರೆ. ಹಿಂದಿ ಬಿಗ್ಬಾಸ್ 8ರಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ರೆನೆ ಧ್ಯಾನಿ ಜುಲೈ 5ರ ರಾತ್ರಿ ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದರು. ಇನ್ಸ್ಟಾಗ್ರಾಂ ಮೂಲಕ ಮದುವೆಯ ಸಂಭ್ರಮದ ಕ್ಷಣಗಳ ವಿಡಿಯೋ ಹಂಚಿಕೊಂಡಿದ್ದರು. ಅರೇಂಜ್ ಮ್ಯಾರೇಜ್ ಇದಾಗಿದ್ದು, ಆದರೆ ಅರೇಂಜ್ ಮ್ಯಾರೇಜ್ ಲವ್ ಮ್ಯಾರೇಜ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದೇನೆ ಎಂದು ಬರೆದುಕೊಂಡಿದ್ದರು. ಪತಿಯೊಂದಿಗೆ ಕೈ ಕೈ ಹಿಡಿದು ಸಪ್ತಪದಿ ತುಳಿದ ಈ ವಿಡಿಯೋಗೆ…
ಕನ್ನಡದ ನಟಿ ಶ್ರೀಲೀಲಾ ಸದ್ಯ ಟಾಲಿವುಡ್ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರುವ ನಟಿ ಇದೀಗ ಮತ್ತೊಂದು ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಸೂಪರ್ ಸ್ಟಾರ್ ಬಾಲಯ್ಯ ಪುತ್ರನ ಸಿನಿಮಾದಲ್ಲಿ ಶ್ರೀಲೀಲಾಗೆ ನಟಿಸೋ ಚಾನ್ಸ್ ಸಿಕ್ಕಿದೆ. ತೆಲುಗಿನ ಜೊತೆ ತಮಿಳಿನಲ್ಲೂ ಶ್ರೀಲೀಲಾಗೆ ಆಫರ್ ಸಿಕ್ಕಿದೆ. ಜೊತೆಗೆ ಬಾಲಿವುಡ್ ಸಿನಿಮಾರಂಗದಲ್ಲಿ ನಟಿಸುವ ಚಾನ್ಸ್ ಕೂಡ ಗಿಟ್ಟಿಸಿಕೊಂಡಿದ್ದಾರೆ. ಇದರ ನಡುವೆ ಬಾಲಯ್ಯ ಪುತ್ರ ಮೋಕ್ಷಜ್ಞ ಬೆಳ್ಳಿಪರದೆಯಲ್ಲಿ ನಾಯಕ ನಟನಾಗಿ ಮಿಂಚಲು ವೇದಿಕೆ ಕೂಡ ಸಿದ್ಧವಾಗಿದೆ. ನಾಯಕನಾಗಿ ಪಳಗಲು ಏನೆಲ್ಲಾ ತಯಾರಿ ಬೇಕೋ ಅದನ್ನೇಲ್ಲಾ ಮಾಡಿಕೊಂಡೇ ಅಖಾಡಕ್ಕೆ ಇಳಿಯುತ್ತಿದ್ದಾರೆ. ಬಾಲಯ್ಯ ಮಗನ ಚೊಚ್ಚಲ ಚಿತ್ರಕ್ಕೆ ಪ್ರತಿಭಾನ್ವಿತ ನಟಿ ಶ್ರೀಲೀಲಾನೇ ಸೂಕ್ತ ಎಂದು ನಟಿಗೆ ಆಫರ್ ನೀಡಲಾಗಿದೆ. ಮೊದಲ ಸಿನಿಮಾವಾಗಿರುವ ಕಾರಣ, ಉತ್ತಮ ಕಥೆ ಪ್ರತಿಷ್ಟಿತ ನಿರ್ಮಾಣ ಸಂಸ್ಥೆಯಡಿ ಮೋಕ್ಷಜ್ಷ ಲಾಂಚ್ ಆಗ್ತಿದ್ದಾರೆ. ‘ಭಗವಂತ ಕೇಸರಿ’ ಸಿನಿಮಾದಲ್ಲಿ ಶ್ರೀಲೀಲಾ ಅವರು ಬಾಲಯ್ಯ ಮಗಳ ಪಾತ್ರದಲ್ಲಿ ನಟಿಸಿದ್ದರು. ಆಗಲೇ ನಟಿಗೆ ನಟನೆಯ ಮೇಲಿರುವ ಶ್ರದ್ಧೆ…