Author: Author AIN

ಬೆಂಗಳೂರು: ಭಾರತದಲ್ಲಿನ ಪ್ರತಿಯೊಂದು ಮನೆಯಲ್ಲಿಯೂ ಸಂಪತ್ತಾಗಿ ಚಿನ್ನದ ನಾಣ್ಯ ಅಥವಾ ಆಭರಣವನ್ನು ಇಟ್ಟುಕೊಳ್ಳುತ್ತಾರೆ. ಹಣಕ್ಕಿಂತ ಹೆಚ್ಚು ಚಿನ್ನವನ್ನು ಉಳಿತಾಯವಾಗಿ ನೋಡಲಾಗುತ್ತದೆ. ‘ಸುರಕ್ಷಿತ’ ಸ್ವತ್ತು ಎಂದು ಪ್ರಶಂಸಿಸಲ್ಪಟ್ಟ ಚಿನ್ನವು ಅದರ ಬೆಲೆಗಳಲ್ಲಿ ಗಮನಾರ್ಹವಾದ ಏರಿಕೆಯನ್ನು ಕಾಣುತ್ತಲೇ ಇದೆ. ವಿಶೇಷವಾಗಿ ಹೂಡಿಕೆದಾರರು ಮತ್ತು ಹಣಕಾಸು ವಿಶ್ಲೇಷಕರ ಗಮನವನ್ನು ಸೆಳೆದಿದೆ. ವರ್ಷಗಳಲ್ಲಿ ಚಿನ್ನದ ಬೆಲೆಯು ದೊಡ್ಡ ಮಟ್ಟದಲ್ಲಿ ಏರಿಳಿತವಾಗಿದೆ. ಆರ್ಥಿಕ ಅಸ್ಥಿರತೆ, ಸಾಮಾಜಿಕ ಅಶಾಂತಿ ಅಥವಾ ಯಾವುದೇ ರೀತಿಯ ಆರ್ಥಿಕ ಅನಿಶ್ಚಿತತೆ ಉಂಟಾದಾಗ, ಅಂತಹ ಸಮಯದಲ್ಲಿ ಚಿನ್ನದ ಬೆಲೆ ಸಾಮಾನ್ಯವಾಗಿ ಏರುತ್ತದೆ. ಇಷ್ಟೇ ಅಲ್ಲ ದಿನವೂ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿಯ ದರ ಬದಲಾಗುತ್ತಿರುತ್ತದೆ. ಹಾಗಿದ್ರೆ ಇಂದು ಮಾರುಕಟ್ಟೆಯಲ್ಲಿ ಎಷ್ಟಿದೆ ಚಿನ್ನದ ಬೆಲೆ ನೋಡೋಣ. https://ainlivenews.com/vivo-phone-to-be-launched-at-an-affordable-price-its-features-are-guaranteed-to-shock-you/ ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇವತ್ತು ಮತ್ತೆ ಹೆಚ್ಚಳವಾಗಿದೆ. ಇಂದು ಗುರುವಾರ ಚಿನ್ನದ ಬೆಲೆ ಗ್ರಾಮ್​ಗೆ 40 ರೂನಷ್ಟು ಹೆಚ್ಚಾಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬಲೆ 7,980 ರೂ ಮುಟ್ಟಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 8,7000…

Read More

ಬೆಂಗಳೂರು: ಇತ್ತಿಚೇಗೆ ನಗರದಲ್ಲಿ ಪೊಲೀಸ್ರ ಮೇಲೆ ಭಯ ಇಲ್ಲ. ಅದಕ್ಕೆ ಪುಡಿ ರೌಡಿಗಳು ರೋಡ್ ರೋಡ್ ಅಲ್ಲಿ ಲಾಂಗು ಮಚ್ಚು ಹಿಡಿದು ಓಡಾಡ್ತಿದ್ದಾರೆ. ಹೀಗಂತಾ ದಿನಾ ಸುದ್ದಿ ಬರ್ತಾನೆ ಇರುತ್ತೆ. ಅದಕ್ಕೆ ಇವತ್ತು ಮತ್ತೊಂದು ಸ್ಟೋರಿ ಸೇರ್ಪಡೆಯಾಗಿದೆ. ಅಂದ  ಹಾಗೆ ಇದು ನಡೆದಿರೋದು ಬ್ಯಾಡರಹಳ್ಳಿ ಪೊಲೀಸ್ ಠಾಣವ್ಯಾಪ್ತಿಯ ಬಿಳೇಕಳ್ಳಿ ಬಳಿ. ಆ ಎರಡು ಗುಂಪಿನ ಹುಡುಗರ ಮಧ್ಯೆ ಅದಾಗ್ಲೆ ಕಿರಿಕ್ ನಡೆದಿತ್ತು. ಬಿಳೇಕಳ್ಳಿಯ ಜಯಂತ ರತ್ನಾನಗರದ ನಂದೀಶ ಎಂಬುವವನ ಮೇಲೆ ಲಾಂಗ್ ಬೀಸಿ ಹಲ್ಲೆ ನಡೆಸಿದ್ದ. ಆದ್ರೆ ಈ ನಂದೀಶ ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡೋದು ಬಿಟ್ಟು ತನ್ನ ಏರಿಯಾದ ವಿನಿ ಮತ್ತು ಚಿಕ್ಕು ಅನ್ನೋನಿಗೆ ಹೇಳಿದ್ದಾನೆ. https://ainlivenews.com/vivo-phone-to-be-launched-at-an-affordable-price-its-features-are-guaranteed-to-shock-you/ ಕಳೆದ 9 ನೇ ತಾರೀಖು ಮೂವರು ಇದೇ ಬಿಳೇಕಳ್ಳಿ ಉಲ್ಲಾಲು ರಸ್ತೆಯ ಅಪ್ಪು ಬೇಕರಿ ಬಳಿ ಮಾತುಕತೆಗೆ ಅಂತ ಹೋಗಿದ್ದಾರೆ. ಬೇಕರಿ ಬಳಿ ಧಮ್ ಹೊಡಿತಾ ಜಯಂತ್ ಮತ್ತು ಆತನ ಸ್ನೇಹಿತರು ನಿಂತಿದ್ದಾಗ, ವಿನಿ, ಚಿಕ್ಕು, ನಂದೀಶ್ ಹೋಗಿ…

Read More

ಬೆಂಗಳೂರು- ಮೈಕ್ರೋಫೈನಾನ್ಸ್ ದಬ್ಬಾಳಿಕೆ ತಡೆಗಟ್ಟುವ ಸಂಬಂಧ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಿರು ಸಾಲ ಮತ್ತು ಸಣ್ಣ ಸಾಲ ( ಒತ್ತಡ ತಂತ್ರಗಳ ನಿಷೇಧ) 2025 ಸುಗ್ರೀವಾಜ್ಞೆಯ ಕರಡಿಗೆ ಕೆಲವು ನಿಬಂಧನೆಗಳನ್ನು ವಿಧಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ. ಸಹಿ ಹಾಕಿದ್ದಾರೆ‌. ಇದರಿಂದಾಗಿ ಅಧಿಕೃತವಾಗಿ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಜಾರಿಗೊಂಡಂತೆ ಆಗಿದೆ. ಎಚ್ಚರಿಕೆ (ನಿಬಂಧನೆ) ಒಳಪಟ್ಟು ಸುಗ್ರೀವಾಜ್ಞೆಗೆ ಅನುಮೋದನೆ ನೀಡಿರುವ ರಾಜ್ಯಪಾಲರು, ಆರ್ ಬಿಐ ಅಡಿ ನೋಂದಾಯಿತ,ಸಹಕಾರಿ,ಸಣ್ಣ ಹಣಕಾಸು ಸಂಸ್ಥೆಗಳಿಗೆ ವ್ಯಾಪಾರ ವ್ಯವಹಾರಕ್ಕೆ ಯಾವುದೇ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಸಾಲ ನೀಡಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿದಾತರು ಈ ಸುಗ್ರೀವಾಜ್ಞೆಯಿಂದ ಅವರ ಸಾಲ,ಹಾಗೂ ಬಡ್ಡಿ ವಸೂಲಾತಿಗೆ ಅಡ್ಡಿಯಾಗಬಹುದು ಮತ್ತು ಕಾನೂನು ಹೋರಾಟಕ್ಕೆ ಆಸ್ಪದ ಕಲ್ಪಿಸಬಹುದು. https://ainlivenews.com/vivo-phone-to-be-launched-at-an-affordable-price-its-features-are-guaranteed-to-shock-you/ ಸಂವಿಧಾನದ ಕಲಂ 19 ಮತ್ತು 32 ರಅಡಿ ನೈಸರ್ಗಿಕ ನ್ಯಾಯ ಪಡೆಯಲು (Natural Justice) ಅವಕಾಶವಿದೆ.ಹೀಗಾಗಿ ಅವರ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗದಂತೆ‌…

Read More

ಬೆಳಗಾವಿ : ನಡು ರಸ್ತೆಯಲ್ಲೇ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡ ಘಟನೆ ಬೆಳಗಾವಿಯ ಕೊಲ್ಲಾಪುರ ಸರ್ಕಲ್ ನಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಸದಸ್ಯೆ ವಾಣಿಶ್ರೀಯ ಪತಿ ಬಸವರಾಜ ಸೀತಮನಿ ಎಂಬಾತ ಕೆಲ ದಿನಗಳ ಹಿಂದೆ ಪರಸ್ತ್ರೀ ಜೊತೆಗೆ ಓಡಿ ಹೋಗಿದ್ದ. https://www.youtube.com/watch?v=mRyCSzpqAQo ಮಾರಿಹಾಳ ಗ್ರಾಮದ ಮಾಸಾಬಿ ಸೈಯದ್ ಎಂಬಾಕೆ ಬಸವರಾಜ ಸೀತಮನಿ ಜೊತೆಗೆ ಓಡಿ ಹೋಗಿದ್ದು, ಈ ಬಗ್ಗೆ ವಾಣಿಶ್ರೀ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದರು. ಎರಡು ಮಕ್ಕಳನ್ನ ಬಿಟ್ಟು ಓಡಿ ಹೋಗಿದ್ದ ಈ ಜೋಡಿ,ಮತ್ತೆ ಎರಡು ತಿಂಗಳ ಬಳಿಕ ಬೆಳಗಾವಿಗೆ ವಾಪಸ್‌ ಆಗಿದ್ದು,  ಕಳೆದ ಬುಧವಾರ ರಾತ್ರಿ ವಾಣಿಶ್ರೀ ಕೈಯಲ್ಲಿ ತಗಲಾಕಿಕೊಂಡಿದ್ದಾರೆ. ಈ ವೇಳೆಮಾಸಾಬಿಯನ್ನ ಪ್ರಶ್ನೆ ಮಾಡಿದ್ದಕ್ಕೆ ವಾಣಿಶ್ರೀ ಮೇಲೆ ಪತಿ ಬಸವರಾಜ್‌ ಹಲ್ಲೆ ಮಾಡಿದ್ದಾನೆ. ಇದರಿಂದ ವಾಣಿಶ್ರೀ ಕೋಪಗೊಂಡು, ಮಾಸಾಬಿ ಜುಟ್ಟು ಹಿಡಿದುಕೊಂಡು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನಡು ರಸ್ತೆಯಲ್ಲಿ ಹೊಡೆದಾಡಿಕೊಳ್ಳುತ್ತಿದ್ದ ಇಬ್ಬರನ್ನು ಸ್ಥಳೀಯರು ಸಮಾಧಾನಪಡಿಸಿದ್ದಾರೆ.

Read More

ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಒತ್ತಡ , ಸ್ಪರ್ಧಾತ್ಮಕ ಕ್ಷೇತ್ರ, ಲವ್​ ಬ್ರೇಕಾಪ್​, ಕಾಡುತ್ತಿರುವ ಕಾಯಿಲೆಗಳು ನಮ್ಮ ಜೀವನದ ಭಾಗವಾಗಿ ಬಿಟ್ಟಿದೆ. ಇದನ್ನು ಸಹಿಸಿಕೊಳ್ಳಲಾಗದೇ ಕೆಲ ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದೀಗ ಜೆಇಇ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ 18 ವರ್ಷದ ಇಂಜಿನಿಯರ್ ವಿದ್ಯಾರ್ಥಿನಿ ಡೆತ್‌ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ಅದಿತಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದು, ಅದಿತಿ ಉತ್ತರ ಪ್ರದೇಶದ ಗೋರಖ್‌ಪುರದ ಕ್ಯಾಂಟ್ ಪೊಲೀಸ್ ಠಾಣೆಯಿರುವ ಮೊಮೆಂಟಮ್ ಕೋಚಿಂಗ್ ಸೆಂಟರ್‌ನ ವಿದ್ಯಾರ್ಥಿಯಾಗಿದ್ದಳು. 2 ವರ್ಷಗಳಿಂದ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಾ, ಸತ್ಯದೀಪ ವಿದ್ಯಾರ್ಥಿ ನಿಲಯದಲ್ಲಿದ್ದಳು. https://ainlivenews.com/vivo-phone-to-be-launched-at-an-affordable-price-its-features-are-guaranteed-to-shock-you/ ಜೆಇಇ ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ಬುಧವಾರ ಬೆಳಗ್ಗೆ ಮನೆಗೆ ಕರೆಮಾಡಿ ತಂದೆಯ ಬಳಿ ಮೊಬೈಲ್ ಫೋನ್‌ಗೆ ರಿಚಾರ್ಜ್ ಮಾಡುವಂತೆ ಹೇಳಿದ್ದಳು. ಅದೇ ಸಮಯದಲ್ಲಿ, ಅದಿತಿಯ ರೂಮ್‌ಮೇಟ್ ಹೊರಗೆ ಹೋಗಿದ್ದರು. ಹೊರಗಡೆ ಹೋಗಿದ್ದ ರೂಮ್‌ಮೇಟ್ ವಾಪಾಸಾಗಿದ್ದು, ರೂಮ್ ಬಾಗಿಲು ಬಡಿದಿದ್ದಾಳೆ. ಈ ವೇಳೆ ಅದಿತಿ ಯಾವುದೇ ಪ್ರತಿಕ್ರಿಯೆ…

Read More

ವಿಜಯಪುರ : ಸತೀಶ್‌ ರಾಠೋಡ್ ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರು ಫೈರಿಂಗ್‌ ನಡೆಸಿದ್ದಾರೆ. ಆರೋಪಿ ಸುರೇಶ್ ರಾಠೋಡ್ ಮೇಲೆ ಫೈರಿಂಗ್‌ ನಡೆಸಲಾಗಿದ್ದು, ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. https://www.youtube.com/watch?v=XTO-7zs6wEE ಕಳೆದ ಜ.28 ರಂದು ತಿಕೋಟಾ ತಾಲೂಕಿನ ಅರಕೇರಿಯ ಮಾನವರದೊಡ್ಡಿ ಬಳಿ ಕೊಲೆ ನಡೆದಿತ್ತು. ಸತೀಶ್‌ ರಾಥೋಡ್‌ ಮೇಲೆ ರಮೇಶ್‌ ಚೌವ್ಹಾಣ ಹಾಗೂ ಇತರರು ಸೇರಿದಂತೆ ಗುಂಡು ಹಾರಿಸಿ, ಬಳಿಕ ಚಾಕೂನಿಂದ ಇರಿದು ಕೊಲೆ ಮಾಡಿದ್ದರು. ಘಟನೆಯಲ್ಲಿ ರಮೇಶ ಚವ್ಹಾಣ ಸೇರಿದಂತೆ ಈಗಾಗಲೇ ಐವರ ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಸತೀಶ್ ಕೊಲೆಗೆ ಸುರೇಶ್‌ ರಾಥೋಡ್‌ ಕಂಟ್ರೀ ಪಿಸ್ತೂಲ್ ಪೂರೈಕೆ ಮಾಡಿದ್ದರು. ಮಧ್ಯಪ್ರದೇಶದಿಂದ ಕಂಟ್ರೀ ಪಿಸ್ತೂಲ್ ತಂದು ಕೊಟ್ಟಿದ್ದ ಎನ್ನಲಾಗಿದೆ. ಘಟನೆ ಬಳಿಕ ಪರಾರಿಯಾಗಿದ್ದ ಸುರೇಶ್‌ ನಗರದ ಹೊರ ಭಾಗದಲ್ಲಿ ಅಥಣಿ ರಸ್ತೆಯ ಬಳಿ ಅಡಗಿ ಕುಳಿತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿಜಯಪುರ ಗ್ರಾಮೀಣ ಪೊಲೀಸರು ಆತನ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಈ…

Read More

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ನಗರದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ನೇರವಾಗಿ ಜನಸಾಮಾನ್ಯರ ಮೇಲೆ ಪ್ರಭಾವ ಬೀರುತ್ತಿದ್ದು, ಮಧ್ಯಮ ವರ್ಗದ ಜನರು ತೊಂದರೆ ಅನುಭವಿಸುವಂತಾಗಿದೆ. ಇದೀಗ ಯಾಣಿಕರ ಹಿತ ದೃಷ್ಟಿಯಿಂದ ಅದನ್ನು ಕಡಿತ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಮೆಟ್ರೋ ಟಿಕೆಟ್ ದರ ಇಳಿಕೆ ಮಾಡುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ಸಿಎಂ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಟ್ವೀಟ್‌ನಲ್ಲಿ ಏನಿದೆ? ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ. https://ainlivenews.com/vivo-phone-to-be-launched-at-an-affordable-price-its-features-are-guaranteed-to-shock-you/ ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ…

Read More

ಸೈರಾಟ್‌ ಸಿನಿಮಾದ ಮೂಲಕ ಖ್ಯಾತಿ ಘಳಿಸಿದ ನಟಿ ರಿಂಕು ರಾಜಗುರು ಇದೀಗ ಖಾಸಗಿ ವಿಚಾರವಾಗಿ ಸುದ್ದಿಯಾಗಿದ್ದಾರೆ. ಸಂಸದ ಧನಂಜಯ್ ಮಹಾದಿಕ್ ಅವರ ಮಗನ ಜೊತೆಗಿರುವ ಫೋಟೋ ವೈರಲ್‌ ಆದ ಬೆನ್ನಲ್ಲೆ ಇದೀಗ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಕೃಷ್ಣರಾಜ್ ಮಹಾದಿಕ್ ಅವರು ರಿಂಕು ರಾಜಗುರು ಜೊತೆ ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.  ಆ ಬಳಿಕ ಇಬ್ಬರು ಡೇಟಿಂಗ್‌ ನಲ್ಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಕೊಲ್ಹಾಪುರ ಮಹಾಲಕ್ಷ್ಮಿ ದರ್ಶನ ನಂತರ ಪರಸ್ಪರ ಇಬ್ಬರು ಜೊತೆಗೆ ನಿಂತು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಇದನ್ನು ನೋಡಿದ ನೆಟ್ಟಿಗರು.. ರಿಂಕು ಮಹಾದಿಕಾ ಅವರ ಮೂರನೇ ಸೊಸೆ ಅಂತ ಕಾಮೆಂಟ್ ಮಾಡುತ್ತಿದ್ದಾರೆ. ರಿಂಕು ಮತ್ತು ಕೃಷ್ಣರಾಜ್ ಅವರ ಫೋಟೋ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಟಿ ಕುಟುಂಬವು ಮೌನ ಮುರಿದಿದೆ. ಅಲ್ಲದೆ, ಅವರಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ.. ಅಂಬಾಬಾಯಿಯ…

Read More

ಬೆಂಗಳೂರು: ಸಿಎಂ ಆಪ್ತ ಬಣ ಹಾಗೂ ದಲಿತ ನಾಯಕರ ಒತ್ತಡಕ್ಕೆ ಹೈಕಮಾಂಡ್ ಕೊನೆಗೂ ಮಣೆ ಹಾಕಿದೆ.ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಬಹುತೇಕ ಫಿಕ್ಸ್ ಆಗಿದೆ.ಖುದ್ದು ಮಲ್ಲಿಕಾರ್ಜುನ ಖರ್ಗೆಯವ್ರೇ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ.ಅಧ್ಯಕ್ಷರ ಬದಲಾವಣೆ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಲ್ಲಿ ಮಿಂಚಿನ ಚಟುವಟಿಕೆಗಳು ಶುರುವಾಗಿದೆ.. ಯೆಸ್… ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು ಅನ್ನೋ ಅಹಿಂದ ನಾಯಕರ ಕನಸು ನನಸಾಗೋ ಸಮಯ ಹತ್ತಿರವಾಗಿದೆ. ಡಿ.ಕೆ ಶಿವಕುಮಾರ್ ಅವ್ರನ್ನ ಕೆಳಗಿಳಿಸಿ ಬೇರೊಬ್ಬ ಪ್ರಭಾವಿ ನಾಯಕನಿಗೆ ಪಟ್ಟಾಭಿಷೇಕ ಮಾಡಲು ಹೈಕಮಾಂಡ್ ನಿರ್ಧಾರ ಮಾಡಿದೆ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವ್ರೇ ಸುಳಿವು ನೀಡಿದ್ದಾರೆ.. ಒಡಿಶಾದಲ್ಲಿ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದೀನಿ.ಅಲ್ಲಿ ಹಿಂದುಳಿದ ವರ್ಗದವರು ಅಧ್ಯಕ್ಷರಾಗಿದ್ದಾರೆ.ಬಾಕಿ ಉಳಿದ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಬದಲಾವಣೆ ಆಗುತ್ತೆ.ಸ್ಪೆಸಿಫಿಕ್ ಆಗಿ ಏನೂ ಹೇಳೋಕೆ ಆಗಲ್ಲ.ಆದ್ರೆ ಎಂಟು ದಿನದಲ್ಲಿ ಎಲ್ಲಾ ಬದಲಾವಣೆ ಆಗುತ್ತೆ ಅಂತಾ ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.. https://ainlivenews.com/vivo-phone-to-be-launched-at-an-affordable-price-its-features-are-guaranteed-to-shock-you/ ಎಐಸಿಸಿ ಅಧ್ಯಕ್ಷರ ಹೇಳಿಕೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ…

Read More

ಭಾರತದಲ್ಲಿ ಫೆಬ್ರವರಿ 13 ಅನ್ನು ರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಮಹಿಳಾ ದಿನವನ್ನು ಫೆಬ್ರವರಿ 13 ರಂದೇ ಆಚರಿಸಲು ಒಂದು ಕಾರಣವಿದೆ. ಅಂದು ಭಾರತದ ಪ್ರಥಮ ಮಹಿಳಾ ರಾಜ್ಯಪಾಲೆ ಸರೋಜಿನಿ ನಾಯ್ಡು ಅವರ ಜನ್ಮದಿನವೂ ಹೌದು. ಅವರು 1879 ಫೆಬ್ರವರಿ 13 ರಂದು ಜನಿಸಿ, 1949 ಮಾರ್ಚ್‌ 2 ರಂದು ನಿಧನರಾದರು. ಅವರು ಭಾರತದಲ್ಲಿ ಮಹಿಳೆಯರ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಗಳನ್ನು ಪರಿಗಣಿಸಿ ಅವರ ಜನ್ಮ ದಿನವನ್ನು ರಾಷ್ಟ್ರೀಯ ಮಹಿಳೆಯರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತೀಯ ಮಹಿಳಾ ಸಂಘ ಮತ್ತು ಅಖಿಲ ಭಾರತೀಯ ಮಹಿಳಾ ಸಮ್ಮೇಳನ ಇಂಥದ್ದೊಂದು ದಿನವನ್ನು ಮೊದಲ ಬಾರಿಗೆ ಆಚರಿಸಿದವು. ಸರೋಜಿನಿ ನಾಯ್ಡು ಅವರು ಫೆಬ್ರವರಿ 13, 1879 ರಲ್ಲಿ ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಜನಿಸಿದರು. ಇವರ ತಂದೆ ಅಗೋರೆನಾಥ್ ಚಟ್ಟೋಪಾಧ್ಯರು. ಇವರು ಪ್ರಸಿದ್ಧ ವಿಜ್ಞಾನಿ ಮತ್ತು ತತ್ವಜ್ಞಾನಿಗಳಾಗಿದ್ದರು. ತಾಯಿ ಬಂಗಾಳಿ ಕವಿಯತ್ರಿ ಬರಾಡ ಸುಂದರಿ ದೇವಿ. ಸರೋಜಿನಿ ನಾಯ್ಡು ಅವರು ತಂದೆ ತಾಯಿಯರ ಎಂಟು ಮಕ್ಕಳಲ್ಲಿ ಮೊದಲೆನೆಯವರು. ಸರೋಜಿನಿ…

Read More