Author: Author AIN

ರಾಯಚೂರು: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ. ಕಳೆದ ಜ.21ರಂದು ಸಿಂಧನೂರಿನ ಬಳಿ ನಡೆದಿದ್ದ ಅಪಘಾತದಲ್ಲಿ ಮಂತ್ರಾಲಯ ರಾಯರ ಮಠದ ಸಂಸ್ಕೃತ ವಿದ್ಯಾರ್ಥಿ ಜಯಸಿಂಹ (23) ತೀವ್ರ ಗಾಯಗೊಂಡಿದ್ದರು. https://ainlivenews.com/police-firing-on-murder-accused-in-vijayapur/ ಜಯಸಿಂಹ ತಲೆ, ಬೆನ್ನು, ಶಾಸ್ವಕೋಶ ಸೇರಿ ದೇಹದ ಹಲವೆಡೆ ತೀವ್ರ ಗಾಯಗಳಾಗಿದ್ದ ಪರಿಣಾಮ, ಕಳೆದ 23 ದಿನಗಳಿಂದಲೂ ಸಹ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. https://www.youtube.com/watch?v=H6cS4XugLMI ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಗೆ ಹೊರಟಿದ್ದ ಕ್ರೂಸರ್ ವಾಹನ ಪಲ್ಟಿಯಾಗಿ, ನಾಲ್ವರು ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿದ್ದರು. ಈ ಸಂಬಂಧ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Read More

ಬೆಂಗಳೂರು: ಆಗ್ನೇಯ ವಿಭಾಗದ ಸೆನ್ ಎಸಿಪಿ ಗೋವರ್ಧನ್ ಹಾಗೂ ಮಹಿಳಾ ಎಸಿಪಿ ವಿರುದ್ಧ ಗಂಭೀರ ಆರೋಪ ಕೇಳಿಬಂದದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೌದು ಎಸಿಪಿ ಗೋವರ್ಧನ್ ಪತ್ನಿ ತನ್ನ ಗಂಡ ಹಾಗೂ ಮತ್ತೊಬ್ಬ ಮಹಿಳಾ ಅಧಿಕಾರಿಯ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. https://ainlivenews.com/vivo-phone-to-be-launched-at-an-affordable-price-its-features-are-guaranteed-to-shock-you/ ಡಿವೈಎಸ್ಪಿ ಆಗಿ ಆಯ್ಕೆ ಆದಾಗಿನಿಂದ ಕುಟುಂಬವನ್ನು ದೂರ ಮಾಡಿದ್ದಾರೆ. ಅವರದೇ ಬ್ಯಾಚ್‌ನ ಮಹಿಳಾ ಅಧಿಕಾರಿಯ ಜೊತೆ ಸಂಬಂಧ ಹೊಂದಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಗೋವರ್ಧನ್ ಪತ್ನಿ ಅಮೃತ ದೂರು ನೀಡಿದ್ದಾರೆ. ಮಹಿಳಾ ಅಧಿಕಾರಿ ಹಾಗೂ ಗೋವರ್ಧನ್ ನಡುವಿನ ಚಾಟ್ ಸಿಕ್ಕಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

Read More

ಪ್ರತಿ ವರ್ಷ ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ. ಅಸಂಖ್ಯಾತ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ವಾಟ್ಸಾಪ್ ವ್ಯಾಪಕ ಬಳಕೆಯ ಸಮಯದಲ್ಲಿಯೂ ಸಹ, ರೇಡಿಯೋ ಅತ್ಯಂತ ಸ್ಥಿತಿಸ್ಥಾಪಕ ಮತ್ತು ದೂರಗಾಮಿ ಸಂವಹನ ಮಾಧ್ಯಮವಾಗಿ ಉಳಿದಿದೆ. ಜಾಗತಿಕ ಮಟ್ಟದಲ್ಲಿ ರೇಡಿಯೋ ವ್ಯಾಪಕವಾಗಿ ಇಂದಿಗೂ ಚಾಲ್ತಿಯಲ್ಲಿದೆ. ಇದು ಪ್ರಜಾಪ್ರಭುತ್ವದ ಪ್ರವಚನಕ್ಕೆ ವೇದಿಕೆಯನ್ನು ಒದಗಿಸುತ್ತದೆ. ಸಾರ್ವಜನಿಕರಿಗೆ ಮಾಹಿತಿಯನ್ನು ತಲುಪಿಸಲು ರೇಡಿಯೋ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಇದು ಉಚಿತ, ಪ್ರಜಾಪ್ರಭುತ್ವ ಮತ್ತು ವಿಶ್ವಾಸಾರ್ಹವಾಗಿದೆ. ಈ ಕಾರಣದಿಂದಾಗಿ, ಇದು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಇಂದು ಇಂಟರ್‌ನೆಟ್, ಟಿವಿ, ಪತ್ರಿಕೆಗಳಿದ್ದರೂ ಹೆಚ್ಚಿನ ಮಟ್ಟದ ಪ್ರೇಕ್ಷಕರನ್ನು ರೇಡಿಯೋ ಹೊಂದಿದೆ. ವಿಶ್ವ ರೇಡಿಯೋ ದಿನ: ಇತಿಹಾಸ ಯುನೆಸ್ಕೋ ಅದರ 39ನೇ ಅಧಿವೇಶನದ ಭಾಗವಾಗಿ 2011ರ ಜನರಲ್ ಕಾನ್ಫರೆನ್ಸ್ನಲ್ಲಿ ಫೆಬ್ರವರಿ 13ರನ್ನು ವಿಶ್ವ ರೇಡಿಯೋ ದಿನವನ್ನಾಗಿ ಘೋಷಿಸಿತು. ಫೆಬ್ರವರಿ 13 ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಪ್ರಸಾರ ಸೇವೆಯಾದ ಯುನೈಟೆಡ್ ನೇಷನ್ಸ್ ರೇಡಿಯೋ ಸ್ಥಾಪನೆಯ ವಾರ್ಷಿಕೋತ್ಸವದ ದಿನವಾಗಿದೆ. ಇದನ್ನು 1946ರಲ್ಲಿ ಸ್ಥಾಪಿಸಲಾಯಿತು. ಅದರ 64ನೇ…

Read More

ಅವರಿಬ್ರು  ದೂರದ ಊರಿಂದ ಬೆಂಗಳೂರಿಗೆ  ಹೊಟ್ಟೆ ಪಾಡಿಗಾಗಿ ಬಂದು  ಜೀವ್ನ ಮಾಡ್ತಿದ್ರು.  ಆಟೋ ಓಡಿಸುತ್ತಿದ್ದ ಇವರು ಒಳ್ಳೆಯ ಸ್ನೇಹಿತರು ಕೂಡ ಆಗಿದ್ದರು. ಆದರೆ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಕ್ಷುಲ್ಲಕ ಕಾರಣಕ್ಕೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಇಷ್ಟಕ್ಕೂ ಈ ಘಟನೆ ನಡೆದಿರುವುದು  ಎಲ್ಲಿ ಅಂತೀರಾ. ಈ ಸ್ಟೋರಿ ನೋಡಿ. ಹೀಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ಈತನ ಹೆಸರು ಜಗದೀಶ್ ಹೊಟ್ಟೆ ಪಾಡಿಗಾಗಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಅದ್ರೆ ಕ್ಷುಲ್ಲಕ ಕಾರಣಕ್ಕೆ ತನ್ನ ಸ್ನೇಹಿತನಿಂದಲೇ ಕೊಲೆಯಾಗಿದ್ದಾನೆ.ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ಜಗದೀಶ್ ಗೆ ಸಿದ್ದೇಶ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. https://ainlivenews.com/vivo-phone-to-be-launched-at-an-affordable-price-its-features-are-guaranteed-to-shock-you/ ಇತ್ತೀಚಿಗೆ ಇವರಿಬ್ಬರೂ ಪ್ರಾಣ ಸ್ನೇಹಿತರಂತೆ ಪ್ರತಿದಿನವೂ ಕೆಲಸ ಮುಗಿದ ಮೇಲೆ ಜೊತೆಯಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡಿ ಮನೆಗೆ ಹೋಗುತ್ತಿದ್ದರು. ಅದೇ ರೀತಿ ನೆನ್ನೆ ರಾತ್ರಿ ಸಹ ಎಣ್ಣೆ ಪಾರ್ಟಿ ಮಾಡಲು ಸಮೀಪದಲ್ಲೇ ಇದ್ದ ತಿರುಮಲ ಬಾರ್ ಗೆ ಹೋಗಿ ಕುಡಿದು…

Read More

2025 ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯು ಮಾರ್ಚ್‌ನಲ್ಲಿ ಪ್ರಾರಂಭವಾಗಲಿದೆ. ಇದರೊಂದಿಗೆ ಅಭಿಮಾನಿಗಳಲ್ಲಿ ದಿನೇ ದಿನೇ ಉತ್ಸಾಹ ಹೆಚ್ಚುತ್ತಿದೆ. ಆದಾಗ್ಯೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಋತುವಿನ ಮೊದಲು ತಮ್ಮ ಹೊಸ ನಾಯಕನನ್ನು ಘೋಷಿಸಿದೆ. ಈ ಬಾರಿ ರಜತ್ ಪಾಟಿದಾರ್ ನಾಯಕತ್ವದಲ್ಲಿ ಆರ್​ಸಿಬಿ ತಂಡ ಕಣಕ್ಕಿಳಿಯಲಿದೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫಾಫ್ ಡುಪ್ಲೆಸಿಸ್ ಮುನ್ನಡೆಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)​ ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸಲಿದ್ದಾರೆ. ಈ ಹಿಂದೆ ಆರ್​ಸಿಬಿ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ನೇಮಕವಾಗಲಿದ್ದಾರೆ ಎನ್ನಲಾಗಿತ್ತು. ಆದರೀಗ ತಂಡದ ಸಾರಥ್ಯವನ್ನು ಪಾಟಿದಾರ್​ಗೆ ವಹಿಸಲಾಗಿದೆ. https://ainlivenews.com/vivo-phone-to-be-launched-at-an-affordable-price-its-features-are-guaranteed-to-shock-you/ ರಜತ್ ಪಾಟಿದಾರ್ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯ ಪ್ರದೇಶ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ 2021 ರಿಂದ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್​ನ ಖಾಯಂ ಸದಸ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ 31 ವರ್ಷದ ಪಾಟಿದಾರ್​ಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ. ಇದಕ್ಕೂ…

Read More

ಬೆಳಗಾವಿ : ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಸ್ನೇಹಿತರ ಜೊತೆಗೆ ಮಹಾಕುಂಭಮೇಳಕ್ಕೆ ತೆರಳಿರುವ ರಮೇಶ್‌ ಜಾರಕಿಹೊಳಿ, ಪ್ರಯಾಗ್‌ರಾಜ್ ನ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. https://www.youtube.com/watch?v=n0_1u4pd3Jw ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗಾಗಿ ಒತ್ತಾಯಿಸಿ ಓಡಾಟ ನಡೆಸುತ್ತಿದ್ದು, ಇದರ ಮಧ್ಯೆಯೂ ಪ್ರಯಾಗ್‌ರಾಜ್ ಗೆ ಭೇಟಿ ನೀಡಿದ್ದು, ಪುಣ್ಯಸ್ನಾನ ಮಾಡಿದ್ದಾರೆ. ಮೊನ್ನೆಯಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಪತ್ನಿ ಸಮೇತ ಪ್ರಯಾಗ್‌ರಾಜ್ ಗೆ ಭೇಟಿ ನೀಡಿ, ಪುಣ್ಯಸ್ನಾನ ಮಾಡಿದ್ದರು.

Read More

ಗದಗ : ಕಿರು ಮತ್ತು ಸಣ್ಣ ಸಾಲ ಬಲವಂತ ಕ್ರಮಗಳ ಪ್ರತಿಬಂಧಕ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಸಿಕ್ಕಿದ್ದು, ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಕ್ಕೆ ಕಾನೂನು ಎಚ್ ಕೆ ಪಾಟೀಲ್ ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ಬಡವರ ಪರ ಜನ ಪರ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದ್ದಾರೆ. ಇಂಥಹ ಜನ ಪರ ಕಾನೂನು ಅವಶ್ಯ ಇದೆ. ಸಾಲ ವಸೂಲಿ ಕಿರುಕುಳ, ಬಡ್ಡಿ ಶೋಷಣೆ ದಂಧೆ ನಿಲ್ಲಿಸಬೇಕೆಂಬುದು ಸರ್ಕಾರದ ಪ್ರಯತ್ನ. ಸುಗ್ರೀವಾಜ್ಞೆ ಜಾರಿಗೆ ತರಲು ಚಿಂತನ ಮಂಥನ ಮಾಡಿ‌ ಜನ ಪರ ಕಾನೂನು ತರಲಾಗಿದೆ. ಸಿಎಂ ಮಾರ್ಗದರ್ಶನದ ಜೊತೆಗೆ ಮುಖ್ಯಕಾರ್ಯದರ್ಶಿಗಳು ಶ್ರಮ ಪಟ್ಟಿದ್ದಾರೆ ಅವರಿಗೆ ಅಭಿನಂದನೆಗಳು ಎಂದರು. https://ainlivenews.com/police-firing-on-murder-accused-in-vijayapur/ ರೈತರು, ಮಹಿಳೆಯರು, ಕೃಷಿ ಕಾರ್ಮಿಕರ, ಬೀದಿ ಬದ ವ್ಯಾಪಾರಿಗಳು ಹೀಗೆ ಸಮಾಜದ ದುರ್ಬಲ ವರ್ಗಕ್ಕೆ ಸಹಾಯವಾಗಲು ಸುಗ್ರೀವಾಜ್ಞೆಹೊರಡಿಸಲಾಗಿದೆ. ಅಡ ಇಟ್ಟುಕೊಳ್ಳುವುದು, ವ್ಯಕ್ತಿಗಳ ಕೂಡಿಹಾಕುವುದನ್ನ ಉಲ್ಲೇಖಿಸಿಲಾಗುದೆ. ನೂತನ ಕಾನೂನು ಜನರಿಗೆ ಕಿರುಕುಳ ಕೊಡುವವರಿಗೆ ಬಗ್ಗು ಬಡಿಯಲು ಸಹಕಾರಿಯಾಗಿದೆ. ಬಡ್ಡಿ, ಚಕ್ರಬಡ್ಡಿ ಹಾಕುವುದು, ಅವಮಾನ ಮಾಡುವುದು ಹೊಡೆಯುವು…

Read More

ಬೆಂಗಳೂರು: ಭಾರತದಲ್ಲಿನ ಪ್ರತಿಯೊಂದು ಮನೆಯಲ್ಲಿಯೂ ಸಂಪತ್ತಾಗಿ ಚಿನ್ನದ ನಾಣ್ಯ ಅಥವಾ ಆಭರಣವನ್ನು ಇಟ್ಟುಕೊಳ್ಳುತ್ತಾರೆ. ಹಣಕ್ಕಿಂತ ಹೆಚ್ಚು ಚಿನ್ನವನ್ನು ಉಳಿತಾಯವಾಗಿ ನೋಡಲಾಗುತ್ತದೆ. ‘ಸುರಕ್ಷಿತ’ ಸ್ವತ್ತು ಎಂದು ಪ್ರಶಂಸಿಸಲ್ಪಟ್ಟ ಚಿನ್ನವು ಅದರ ಬೆಲೆಗಳಲ್ಲಿ ಗಮನಾರ್ಹವಾದ ಏರಿಕೆಯನ್ನು ಕಾಣುತ್ತಲೇ ಇದೆ. ವಿಶೇಷವಾಗಿ ಹೂಡಿಕೆದಾರರು ಮತ್ತು ಹಣಕಾಸು ವಿಶ್ಲೇಷಕರ ಗಮನವನ್ನು ಸೆಳೆದಿದೆ. ವರ್ಷಗಳಲ್ಲಿ ಚಿನ್ನದ ಬೆಲೆಯು ದೊಡ್ಡ ಮಟ್ಟದಲ್ಲಿ ಏರಿಳಿತವಾಗಿದೆ. ಆರ್ಥಿಕ ಅಸ್ಥಿರತೆ, ಸಾಮಾಜಿಕ ಅಶಾಂತಿ ಅಥವಾ ಯಾವುದೇ ರೀತಿಯ ಆರ್ಥಿಕ ಅನಿಶ್ಚಿತತೆ ಉಂಟಾದಾಗ, ಅಂತಹ ಸಮಯದಲ್ಲಿ ಚಿನ್ನದ ಬೆಲೆ ಸಾಮಾನ್ಯವಾಗಿ ಏರುತ್ತದೆ. ಇಷ್ಟೇ ಅಲ್ಲ ದಿನವೂ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿಯ ದರ ಬದಲಾಗುತ್ತಿರುತ್ತದೆ. ಹಾಗಿದ್ರೆ ಇಂದು ಮಾರುಕಟ್ಟೆಯಲ್ಲಿ ಎಷ್ಟಿದೆ ಚಿನ್ನದ ಬೆಲೆ ನೋಡೋಣ. https://ainlivenews.com/vivo-phone-to-be-launched-at-an-affordable-price-its-features-are-guaranteed-to-shock-you/ ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇವತ್ತು ಮತ್ತೆ ಹೆಚ್ಚಳವಾಗಿದೆ. ಇಂದು ಗುರುವಾರ ಚಿನ್ನದ ಬೆಲೆ ಗ್ರಾಮ್​ಗೆ 40 ರೂನಷ್ಟು ಹೆಚ್ಚಾಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬಲೆ 7,980 ರೂ ಮುಟ್ಟಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 8,7000…

Read More

ಬೆಂಗಳೂರು: ಇತ್ತಿಚೇಗೆ ನಗರದಲ್ಲಿ ಪೊಲೀಸ್ರ ಮೇಲೆ ಭಯ ಇಲ್ಲ. ಅದಕ್ಕೆ ಪುಡಿ ರೌಡಿಗಳು ರೋಡ್ ರೋಡ್ ಅಲ್ಲಿ ಲಾಂಗು ಮಚ್ಚು ಹಿಡಿದು ಓಡಾಡ್ತಿದ್ದಾರೆ. ಹೀಗಂತಾ ದಿನಾ ಸುದ್ದಿ ಬರ್ತಾನೆ ಇರುತ್ತೆ. ಅದಕ್ಕೆ ಇವತ್ತು ಮತ್ತೊಂದು ಸ್ಟೋರಿ ಸೇರ್ಪಡೆಯಾಗಿದೆ. ಅಂದ  ಹಾಗೆ ಇದು ನಡೆದಿರೋದು ಬ್ಯಾಡರಹಳ್ಳಿ ಪೊಲೀಸ್ ಠಾಣವ್ಯಾಪ್ತಿಯ ಬಿಳೇಕಳ್ಳಿ ಬಳಿ. ಆ ಎರಡು ಗುಂಪಿನ ಹುಡುಗರ ಮಧ್ಯೆ ಅದಾಗ್ಲೆ ಕಿರಿಕ್ ನಡೆದಿತ್ತು. ಬಿಳೇಕಳ್ಳಿಯ ಜಯಂತ ರತ್ನಾನಗರದ ನಂದೀಶ ಎಂಬುವವನ ಮೇಲೆ ಲಾಂಗ್ ಬೀಸಿ ಹಲ್ಲೆ ನಡೆಸಿದ್ದ. ಆದ್ರೆ ಈ ನಂದೀಶ ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡೋದು ಬಿಟ್ಟು ತನ್ನ ಏರಿಯಾದ ವಿನಿ ಮತ್ತು ಚಿಕ್ಕು ಅನ್ನೋನಿಗೆ ಹೇಳಿದ್ದಾನೆ. https://ainlivenews.com/vivo-phone-to-be-launched-at-an-affordable-price-its-features-are-guaranteed-to-shock-you/ ಕಳೆದ 9 ನೇ ತಾರೀಖು ಮೂವರು ಇದೇ ಬಿಳೇಕಳ್ಳಿ ಉಲ್ಲಾಲು ರಸ್ತೆಯ ಅಪ್ಪು ಬೇಕರಿ ಬಳಿ ಮಾತುಕತೆಗೆ ಅಂತ ಹೋಗಿದ್ದಾರೆ. ಬೇಕರಿ ಬಳಿ ಧಮ್ ಹೊಡಿತಾ ಜಯಂತ್ ಮತ್ತು ಆತನ ಸ್ನೇಹಿತರು ನಿಂತಿದ್ದಾಗ, ವಿನಿ, ಚಿಕ್ಕು, ನಂದೀಶ್ ಹೋಗಿ…

Read More

ಬೆಂಗಳೂರು- ಮೈಕ್ರೋಫೈನಾನ್ಸ್ ದಬ್ಬಾಳಿಕೆ ತಡೆಗಟ್ಟುವ ಸಂಬಂಧ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಿರು ಸಾಲ ಮತ್ತು ಸಣ್ಣ ಸಾಲ ( ಒತ್ತಡ ತಂತ್ರಗಳ ನಿಷೇಧ) 2025 ಸುಗ್ರೀವಾಜ್ಞೆಯ ಕರಡಿಗೆ ಕೆಲವು ನಿಬಂಧನೆಗಳನ್ನು ವಿಧಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ. ಸಹಿ ಹಾಕಿದ್ದಾರೆ‌. ಇದರಿಂದಾಗಿ ಅಧಿಕೃತವಾಗಿ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಜಾರಿಗೊಂಡಂತೆ ಆಗಿದೆ. ಎಚ್ಚರಿಕೆ (ನಿಬಂಧನೆ) ಒಳಪಟ್ಟು ಸುಗ್ರೀವಾಜ್ಞೆಗೆ ಅನುಮೋದನೆ ನೀಡಿರುವ ರಾಜ್ಯಪಾಲರು, ಆರ್ ಬಿಐ ಅಡಿ ನೋಂದಾಯಿತ,ಸಹಕಾರಿ,ಸಣ್ಣ ಹಣಕಾಸು ಸಂಸ್ಥೆಗಳಿಗೆ ವ್ಯಾಪಾರ ವ್ಯವಹಾರಕ್ಕೆ ಯಾವುದೇ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಸಾಲ ನೀಡಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿದಾತರು ಈ ಸುಗ್ರೀವಾಜ್ಞೆಯಿಂದ ಅವರ ಸಾಲ,ಹಾಗೂ ಬಡ್ಡಿ ವಸೂಲಾತಿಗೆ ಅಡ್ಡಿಯಾಗಬಹುದು ಮತ್ತು ಕಾನೂನು ಹೋರಾಟಕ್ಕೆ ಆಸ್ಪದ ಕಲ್ಪಿಸಬಹುದು. https://ainlivenews.com/vivo-phone-to-be-launched-at-an-affordable-price-its-features-are-guaranteed-to-shock-you/ ಸಂವಿಧಾನದ ಕಲಂ 19 ಮತ್ತು 32 ರಅಡಿ ನೈಸರ್ಗಿಕ ನ್ಯಾಯ ಪಡೆಯಲು (Natural Justice) ಅವಕಾಶವಿದೆ.ಹೀಗಾಗಿ ಅವರ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗದಂತೆ‌…

Read More