Author: Author AIN

ಹುಬ್ಬಳ್ಳಿ; ಶಿಶಿರ ಋತುವಿನ ಪ್ರಮುಖ ಬೆಳೆಯಾದ ಕಡಲೆ ಕೊಯ್ಲು ಹೋಬಳಿಯ ವ್ಯಾಪ್ತಿಯಲ್ಲಿ ಆರಂಭವಾಗಿದೆ. ಆದರೆ ನಿರೀಕ್ಷಿತ ಪ್ರಮಾಣದಷ್ಟು ಇಳುವರಿ ಇಲ್ಲ. ಒಕ್ಕಣೆ ಸಮಯದಲ್ಲಿ ಧಾರಣೆಯು ತೀವ್ರ ಗತಿಯಲ್ಲಿ ಕುಸಿಯುತ್ತಿರುವುದು ರೈತರನ್ನು ಇನ್ನಷ್ಟ ಆತಂಕಕ್ಕೆ ದೂಡಿದೆ. ಪ್ರತಿ ಎಕರೆಗೆ ಬಿತ್ತನೆ ಬೀಜಕ್ಕೆ ₹2000. ಔಷಧಿ, ಗೊಬ್ಬರಕ್ಕೆ ₹8000. ಕೊಯ್ಲು ಹಾಗೂ ಯಂತ್ರದ ಮೂಲಕ ಕಡಲೆ ಬೇರ್ಪಡಿಸುವಿಕೆಗೆ ₹5000. ಉಳುಮೆಗೆ ₹2,000. ಒಟ್ಟಾರೆ ಪ್ರತಿ ಎಕರೆ ಕಡಲೆ ಬೆಳೆ ಬೆಳೆಯಲು ಅಂದಾಜು ₹15,000 ರಿಂದ ₹20,000 ಖರ್ಚು ತಗುಲುತ್ತದೆ. ಆದರೆ ಹಾಕಿದ ಬಂಡವಾಳವೂ ವಾಪಸ್ ಬರದಿದ್ದರೆ ಹೇಗೆ ಎಂದು ರೈತರು ಚಿಂತಿತರಾಗಿದ್ದಾರೆ. https://ainlivenews.com/to-get-rid-of-your-debt-problem-just-do-this-one-thing-with-mango-leaves/ ‘ನವೆಂಬರ್ ಆರಂಭದಲ್ಲಿ ಕಡಲೆ ಬಿತ್ತನೆ ಮಾಡಿದ್ದೆ. ಮೊದಲ ತಿಂಗಳು ಜೋರು ಮಳೆ ಬಿದ್ದ ಪರಿಣಾಮ ಬೆಳೆಗೆ ಹಾನಿಯಾಗಿದ್ದರಿಂದ ಇಳುವರಿ ಕುಸಿಯಿತು’ ಎನ್ನುತ್ತಾರೆ ಅನ್ನದಾತರು. ಎಕರೆಗೆ ಐದರಿಂದ ಏಳು ಕ್ವಿಂಟಲ್ ಇಳುವರಿ ಸಿಗುವ ನಿರೀಕ್ಷೆಯಿದೆ. ಆದರೆ ಕ್ವಿಂಟಲ್‌ಗೆ ಆರಂಭದಲ್ಲಿ ₹8,000 ಇದ್ದ ಧಾರಣೆ ಈಗ ₹5,500 ರಿಂದ ₹6,000ಕ್ಕೆ ಕುಸಿದಿದೆ. ಬೆಲೆ…

Read More

ಸ್ಯಾಂಡಲ್‌ವುಡ್‌ ಹಿರಿಯ ನಟಿ ಉಮಾಶ್ರೀ ಸಿನಿಮಾಗೆ ಬರುವ ಮುಂಚೆ ಸಾಕಷ್ಟು ಕಷ್ಟಗಳನು ಅನುಭವಿಸಿದ್ದಾರೆ. ರಂಗಭೂಮಿಯ ಕಲಾವಿದೆಯಾಗಿ ನಟನೆ ಆರಂಭಿಸಿದ ಉಮಾಶ್ರೀ ಬಣ್ಣದ ಲೋಕದ ಪಯಣ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಸದ್ಯ ಸಾಕಷ್ಟು ಖ್ಯಾತಿ ಘಳಿಸಿರುವ ನಟಿ ಸಾಯೋಕಾಗಿಯೇ ಕುಡಿಯೋದನ್ನ ಕಲಿತೆ ಎಂದು ಹೇಳಿದ್ದಾರೆ.  ಇಬ್ಬರು ಮಕ್ಕಳನ್ನ ಅಮ್ಮನ ಮನೆಯಲ್ಲಿ ಬಿಟ್ಟು, 50 ರೂಪಾಯಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಉಮಾಶ್ರೀ ಬದುಕಿ ಕೆಟ್ಟ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ. ಉಮಾಶ್ರೀ ಅವರು ತಮ್ಮ ಬದುಕಿನ ಈ ಸತ್ಯಗಳನ್ನ ಮುಕ್ತವಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕುಡಿತ ಕಲಿತರೆ ಜೀವ ಹೋಗುತ್ತದೆ ಅನ್ನುವ ನಂಬಿಕೆ ಉಮಾಶ್ರೀ ಅವರಲ್ಲಿ ಹುಟ್ಟಿಕೊಂಡಿತ್ತಂತೆ. ಕುಡಿದು ಕುಡಿದು ಸತ್ತು ಹೋದ್ರಾಯಿತು ಎಂದು ನಿರ್ಧರಿಸಿಯೇ ಬಿಟ್ಟಿದ್ದರಂತೆ. ಸಾಯೋಕಾಗಿ ಆ ದಿನಗಳಲ್ಲಿ ಕುಡಿಯೋದನ್ನ ಕಲಿತುಕೊಂಡರಂತೆ. ಅಂದುಕೊಂಡ ಜೀವನ ಸಿಗದ ಕಾರಣ ಯಾಕೆ ಬದುಕ ಬೇಕು ಎಂದು ಜಿಗುಪ್ಸೆ ಬಂದಿತ್ತು. ಮಕ್ಕಳಿಗಾಗಿಯೇ ಜೀವನ ನಡೆಸಬೇಕು ಅನ್ನೊದು ಒಂದೆಡೆ ಆದರೆ. ಕಷ್ಟದ ಸರಮಾಲೆಗೂ ಇನ್ನೊಂದೆಡೆ. ಒಂದು ದಿನ ಅಮ್ಮನ ಮನಗೆ ಉಮಾಶ್ರೀ ಅವರು…

Read More

ಬೀದರ್‌ : ಕುಂಭಮೇಳಕ್ಕೆ ತೆರಳಿದ್ದ ಬೀದರ್‌ನ ಆರು ಜನ ವಾರಾಣಸಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆ ಪೌರಾಡಳಿತ ಸಚಿವ ರಹೀಂ ಖಾನ್‌ ನಗರದ ಲಾಡಗೇರಿಗೆ ತೆರಳಿ ಮೃತರ ಕುಟುಂಬದವರನ್ನು  ಭೇಟಿಯಾಗಿ ಸಾಂತ್ವನ ಹೇಳಿದರು. ಮೃತರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದ ಸಚಿವ ರಹೀಂ ಖಾನ್‌ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ಮುಂದಾದಾಗ ಕುಟುಂಬಸ್ಥರ ದುಃಖದ ಕಟ್ಟೆ ಒಡೆಯಿತು. ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರು ಹಾಕಿದಾಗ, ಸಚಿವರು ಅವರನ್ನು ಸಮಾಧಾನ ಪಡಿಸಿದರು. https://ainlivenews.com/tragedy-on-the-way-to-the-maha-kumbh-mela-7-kannada-people-die-in-a-horrific-accident/ ಇದೇ ವೇಳೆ ಮಾತನಾಡಿದ ಸಚಿವ ರಹೀಂಖಾನ್‌ ಅವರು, ಮೃತರ ಶರೀರಗಳನ್ನು ವಾರಾಣಸಿಯಿಂದ ತರಲು ಸರ್ಕಾರ ವ್ಯವಸ್ಥೆ ಮಾಡಿದೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದರು. ಇನ್ನು ಅಪಘಾತದಲ್ಲಿ ಮೃತಪಟ್ಟ ಆರು ಜನರ ಶರೀರಗಳನ್ನು ಮೂರು ಆಂಬುಲೆನ್ಸ್‌ಗಳಲ್ಲಿ ನಗರಕ್ಕೆ ತರಲಾಗುತ್ತಿದೆ. ಗಾಯಗೊಂಡ 7 ಜನರು ವಾರಾಣಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಲಖನೌ ವಿಮಾನ ಕೋಮಾ ಸ್ಥಿತಿಯಲ್ಲಿರುವ ಭಗವಂತ…

Read More

ಬೆಳಗಾವಿ : ಕನ್ನಡ ಮಾತಾಡು ಎಂದಿದ್ದಕ್ಕೆ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ತನಿಖೆ ನಡೆಯುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಇಂದು ಬೆಳಗಾವಿಯ ಬಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಹಲ್ಲೆಗೊಳಗಾದ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಆರೋಗ್ಯ ವಿಚಾರಿಸಿದರು, ಬಳಿಕ ಘಟನೆ ಕುರಿತು ಕಂಡಕ್ಟರ್ ಕಡೆಯಿಂದ ಮಾಹಿತಿ ಪಡೆದರು. ಈ ವೇಳೆ ಕಂಡಕ್ಟರ್‌ ಮಹಾದೇವಪ್ಪ ಸಚಿವರ ಮುಂದೆ ಘಟನೆ ನೆನೆದು ಕಣ್ಣೀರಿಟ್ಟರು. ಬಳಿಕ ಮಾತನಾಡಿದ ಅವರು, ಕಂಡಕ್ಟರ್ ಆರೋಗ್ಯ ಸ್ಥಿರವಾಗಿದೆ ಎರಡು ದಿನದಲ್ಲಿ ಮನೆಗೆ ಕಳುಹಿಸುತ್ತಾರೆ. ನಮ್ಮ ಎಂಡಿಯವರು ಪ್ರತಿದಿನ ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಗಲಾಟೆಯಾದ ಮೇಲೆ ಕೇಸ್ ಕೊಟ್ಟಿದ್ದಕ್ಕೆ ಗಾಬರಿಯಾಗಿದ್ದಾರೆ. ಏನೇ ಕೇಸ್ ಮಾಡಲಿ ತನಿಖೆ ಮಾಡುತ್ತಾರೆ ಎಂದ ರೆಡ್ಡಿ. ಆ ಬಸ್ ನಲ್ಲಿ ಅಂದು 90 ಜನ ಇದ್ರೂ. 1 ಲಕ್ಷ 72 ಸಾವಿರ ಕರ್ನಾಟಕದಲ್ಲಿ ಟ್ರಿಪ್ಸ್ ಇರುತ್ತೆ. ಈ ರೀತಿ ದೂರು 65 ವರ್ಷದಲ್ಲಿ ಕೇಸ್ ಆಗಿಲ್ಲ. ಉದ್ದೇಶಪೂರ್ವಕವಾಗಿ…

Read More

ಕಳೆದ ಕೆಲ ದಿನಗಳಿಂದ ಖ್ಯಾತ ಗಾಯಕ ಉದಿತ್‌ ನಾರಾಯಣ್‌ ಹೆಚ್ಚು ಹೆಚ್ಚು ಸುದ್ದಿಯಾಗ್ತಿದ್ದಾರೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಮಹಿಳೆಯರಿಗೆ ಮುತ್ತು ನೀಡುವ ಮೂಲಕ ಸುದ್ದಿಯಾಗಿದ್ದು ಸಾಕಷ್ಟು ಟೀಕೆಗೂ ಗುರಿಯಾಗಿದ್ದಾರೆ. ಈ ಮಧ್ಯೆ ಅವರ ಮೇಲೆ ಉದಿತ್‌ ನಾರಾಯಣ್‌ ಅವರ ಮೊದಲ ಪತ್ನಿ ರಂಜನಾ ಝಾ ಕೇಸ್ ದಾಖಲಿಸಿದ್ದಾರೆ. ಉದಿತ್ ನಾರಾಯಣ್ ತಮ್ಮ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಅವರ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ರಂಜನಾ ಆರೋಪಿಸಿದ್ದಾರೆ. ಶುಕ್ರವಾರ (ಫೆಬ್ರವರಿ 21) ಉದಿತ್ ನಾರಾಯಣ್ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಅವರು ತಮ್ಮ ನಿರ್ಧಾರದಲ್ಲಿ ದೃಢವಾಗಿ ನಿಂತಿದ್ದು, ಯಾವುದೇ ಇತ್ಯರ್ಥಕ್ಕೆ ಸಿದ್ಧರಿಲ್ಲ ಎಂದಿದ್ದಾರೆ. ‘ರಂಜನಾ ಅವರು ನನ್ನಿಂದ ಹಣವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ’ ಎಂದು ಉದಿತ್ ನಾರಾಯಣ್ ಅವರು ಕೋರ್ಟ್​​ನಲ್ಲಿ ಹೇಳಿದ್ದಾರೆ. ಈ ಮೊದಲು ಬಿಹಾರದ ಮಹಿಳಾ ಕಮಿಷನ್​ನಲ್ಲಿ ಕೇಸ್ ದಾಖಲಾಗಿತ್ತು. ಆ ಸಂದರ್ಭದಲ್ಲಿ ಪ್ರಕರಣ ಇತ್ಯರ್ಥ ಆಗಿತ್ತು. ಈ ಮೊದಲು ರಂಜನಾ ಅವರಿಗೆ ಉದಿತ್ ತಿಂಗಳಿಗೆ 15 ಸಾವಿರ ರೂಪಾಯಿ ನೀಡುತ್ತಿದ್ದರು. 2021ರಲ್ಲಿ…

Read More

ಬೆಳಗಾವಿ : ಕನ್ನಡ ಮಾತಾಡಿ ಎಂದಿದ್ದಕ್ಕೆ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿದ ಪ್ರಕರಣ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಗಳಿಗೆ ಮಸಿ ಉದ್ಧವ ಠಾಕ್ರೆ ಬಣದ ಶಿವಸೇನೆ ಪುಂಡರು ಮಸಿ ಬಳಿದಿದ್ದು, ಅಲ್ಲದೇ ಬಸ್‌ ಚಾಲಕರಿಗೆ ಬೆದರಿಕೆ ಹಾಕಿದ್ದಾರೆ. ಮಹಾರಾಷ್ಟ್ರದ ಪುಣೆ ನಗರದ ಸ್ವಾರಗೇಟ್ ಬಳಿ ಪುಂಡಾಟಿಕೆ ವಿಡಿಯೋ ವೈರಲ್ ಆಗುತ್ತಿದೆ. ಫೆ.22 ರಂದು ರಾತ್ರಿ ಶಿವಸೇನೆ ಪುಂಡರು ನಡು ರಸ್ತೆಯಲ್ಲಿ ಬಲವಂತವಾಗಿ ಬಸ್ ನಿಲ್ಲಿಸಿ ಗೂಂಡಾಗಿರಿ ತೋರಿದ್ದಾರೆ. ವಾಯುವ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಸೇರಿದ್ದ ಪುಣೆ ಸಿಂದಗಿ ಬಸ್, ಮುಂಬೈ ಇಳಕಲ್ ಬಸ್ ಗೆ ಕಪ್ಪು ಮಸಿ ಬಳಿದಿದ್ದಾರೆ. ಬಸ್ ಮೇಲಿದ್ದ ಕನ್ನಡ ಅಕ್ಷರಗಳಿಗೆ, ನಂಬರ್ ಪ್ಲೇಟ್ ಗೆ ಕಪ್ಪು ಮಸಿ ಬಳಿದು, ಧಿಕ್ಕಾರ ಚಿನ್ಹೆ ಹಾಕಿ ಪುಂಡಾಟ ಮೆರೆದಿದ್ದಾರೆ. https://ainlivenews.com/case-against-mes-leader-for-speaking-against-kannadigas/ ಶಿವಸೇನೆ ಪುಂಡರ ಮುಂದೆ ಕರ್ನಾಟಕ ಬಸ್‌ ಡ್ರೈವರ್‌ ಗಳು ಕೇಳಿಕೊಂಡರೂ ಸಹ ಮುಂಬೈ ಇಳಕಲ್ ಬಸ್ ಡ್ರೈವರ್ ಗೆ ಮರಾಠಿ ಬರುತ್ತಾ…

Read More

ಬೆಂಗಳೂರು: ಚಿನ್ನ ಮಾಡಿಸಿಕೊಳ್ಳಬೇಕು ಎಂದಾದರೆ ಬೆಲೆ ಇಳಿಕೆಯಾಗುವುದು ಮುಖ್ಯವಾಗಿದೆ. ಆದರೂ ಒಮ್ಮೊಮ್ಮೆ ಪರಿಸ್ಥಿತಿಗೆ ಕಟ್ಟುಬಿದ್ದು ಬೆಲೆ ಏರಿಕೆಯ ಸಮಯದಲ್ಲೇ ಸಾಕಷ್ಟು ಗ್ರಾಹಕರು ಚಿನ್ನ ಖರೀದಿಸುತ್ತಾರೆ. ಬೆಲೆ ತಗ್ಗಿದರೆ ನಮಗೊಂದಿಷ್ಟು ಲಾಭವಿತ್ತೆಂದು ಸಾಕಷ್ಟು ಜನ ಈ ಸಮಯದಲ್ಲಿ ಭಾವಿಸುತ್ತಾರೆ. ಚಿನ್ನದ ಮಾರುಕಟ್ಟೆಯೇ ಹಾಗೆ ಬೆಲೆ ಯಾವಾಗ ಏರುತ್ತದೆ? ಯಾವಾಗ ಇಳಿಯುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಚಿನ್ನ ಖರೀದಿಗೂ ಮುನ್ನ ಇಂದಿನ ರೇಟ್ ಹೇಗಿದೆ ಎಂಬುದನ್ನು ತಿಳ್ಕೊಳ್ಳೋಣ https://ainlivenews.com/to-get-rid-of-your-debt-problem-just-do-this-one-thing-with-mango-leaves/ ಈ ವಾರದಲ್ಲಿ ಹೆಚ್ಚಿನ ದಿನ ಚಿನ್ನದ ಬೆಲೆ ಹೆಚ್ಚಳಗೊಂಡಂತಾಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,045 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 8,777 ರೂಗೆ ಏರಿದೆ. 18 ಕ್ಯಾರಟ್ ಆಭರಣ ಚಿನ್ನದ ಬೆಲೆ 6,582 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಕಳೆದ ಕೆಲ ವಾರಗಳಿಂದ ಬೆಳ್ಳಿ ಬೆಲೆ ಹೆಚ್ಚು ಸ್ಥಿರವಾಗಿದೆ. https://youtu.be/J5GblXRDxDM?si=rN4-w-i_qbVykwfC ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 80,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ…

Read More

ಬೆಳಗಾವಿ : ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಮರಾಠಿ ಯುವಕರ ಗೂಂಡಾಗಿರಿ ಪ್ರಕರಣ ವಿಚಾರವಾಗಿ ಮಾತಾಡುತ್ತ ಕನ್ನಡಿಗರ ವಿರುದ್ದ ನಾಲಿಗೆ ಹರಿಬಿಟ್ಟಿದ್ದ ಎಂಇಎಸ್‌ ಮುಖಂಡನ ವಿರುದ್ದ ಇದೀಗ ಕೇಸ್‌ ದಾಖಲಾಗಿದೆ.   ಕಂಡಕ್ಟರ್ ಗೆ ನೀಚ, ಕನ್ನಡ ಪರ ಹೋರಾಟಗಾರರಿಗೆ ನಾಲಾಯಕ ಎಂದಿದ್ದ‌ ಎಂಇಎಸ್ ಮುಖಂಡ ಶುಭಂ‌ ಶಳಕೆಗೆ ಬಿಸಿ ಮುಟ್ಟಿಸಿರುವ ಪೊಲೀಸರು, ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಲಿಸಿಕೊಂಡಿದ್ದಾರೆ. ಪ್ರಚೋದನಕಾರಿ ಹೇಳಿಕೆ ವಿಡಿಯೋ ಬಿಡುಗಡೆ ಮಾಡುವ ಕನ್ನಡ ಮರಾಠಿ ಭಾಷಾ ಬಾಂಧವ್ಯ ಹಾಳು ಮಾಡಲು ಯತ್ನಿಸಿದ ಆರೋಪದಡಿ ಬಿಎನ್ಎಸ್ ಕಾಯ್ದೆಯಡಿ 192,  352, 353 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ. https://ainlivenews.com/protest-on-the-karnataka-maharashtra-border-kolhapur-bus-stop/ ಕರ್ನಾಟಕದಲ್ಲಿ ಕಂಡಕ್ಟರ್‌ ಹಲ್ಲೆ ಖಂಡಿಸಿ ಹೋರಾಟ ನಡೆಸಿದ್ದ ಕನ್ನಡ ಪರ ಸಂಘಟನೆ ಕಾರ್ಯಕರ್ತರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಎಂಇಎಸ್ ಮುಖಂಡ ಶುಭಂ ಶಳಕೆ, “ಕನ್ನಡ ಪರ ಹೋರಾಟಗಾರರು ನಾಲಾಯಕರು. ನಿರ್ವಾಹಕ ಬಾಲಕಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಅದಕ್ಕೆ ಪೊಲೀಸರು ಪೋಕ್ಸೋ ಕೇಸ್ ಹಾಕಿದ್ದಾರೆ. ಇಂತಹ ನೀಚ, ನಾಲಾಯಕ ನಿರ್ವಾಹಕ…

Read More

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈ-ವೋಲ್ಟೇಜ್ ಹೋರಾಟವು ಭಾರತೀಯ ಅಭಿಮಾನಿಗಳು ನಿರೀಕ್ಷಿಸಿದ ಏಕಪಕ್ಷೀಯ ರೀತಿಯಲ್ಲಿ ಕೊನೆಗೊಂಡಿತು. ಭಾನುವಾರ (ಫೆಬ್ರವರಿ 23) ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ರೋಹಿತ್ ತಂಡ ಪಾಕಿಸ್ತಾನವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅದ್ಭುತ ಶತಕದೊಂದಿಗೆ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದರು. ಈ ಪಂದ್ಯದ ನಂತರ, ನೆಟಿಜನ್‌ಗಳು ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ ಅವರನ್ನು ಒಂದುಗೂಡಿಸುತ್ತಿದ್ದಾರೆ. ಮಹಾ ಕುಂಭಮೇಳಕ್ಕೆ ಹೆಸರುವಾಸಿಯಾದ ಈ ಬಾಬಾ, ಪಂದ್ಯಕ್ಕೂ ಮುನ್ನ ನೀಡಿದ ಸಂದರ್ಶನದಲ್ಲಿ ಭಾರತ vs ಪಾಕಿಸ್ತಾನ ಪಂದ್ಯದ ಬಗ್ಗೆ ಭವಿಷ್ಯ ನುಡಿದಿದ್ದರು. ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಸೋಲುತ್ತದೆ ಮತ್ತು ವಿರಾಟ್ ಕೊಹ್ಲಿ ವಿಫಲರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. https://ainlivenews.com/to-get-rid-of-your-debt-problem-just-do-this-one-thing-with-mango-leaves/ ಆದರೆ ಕೆಲವೇ ಗಂಟೆಗಳಲ್ಲಿ ಬಾಬಾರವರ ಭವಿಷ್ಯವಾಣಿ ಸ್ಪಷ್ಟವಾಯಿತು. ಬಾಬಾ ನಿರೀಕ್ಷೆಗೆ ವಿರುದ್ಧವಾಗಿ, ಟೀಮ್ ಇಂಡಿಯಾ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಕೂಡ ಅದ್ಭುತ ಶತಕ ಗಳಿಸಿದರು.…

Read More

ರಾಯಚೂರು : ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅವರು ಕುಟುಂಬ ಸಮೇತ ಇಂದು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳವರ ದರ್ಶನ ಪಡೆದರು. ನಂತರ ಹಿ.ಶ್ರೀ.ಸ್ವಾಮಿಗಳು ಶಿವಣ್ಣ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಅನುಗ್ರಹ ಫಲಮಂತ್ರಾಕ್ಷತೆ, ಶೇಷವಸ್ತ್ರ, ಸ್ಮರಣಿಕೆ ನೀಡಿ ಆಶೀರ್ವದಿಸಿದರು. https://www.youtube.com/watch?v=gQB1lmhX2Dw ಭೇಟಿಯ ಸಂದರ್ಭದಲ್ಲಿ, ಡಾ. ಶಿವರಾಜಕುಮಾರ್ ಅವರು ತಮ್ಮ ತಂದೆ ಡಾ. ರಾಜ್‌ಕುಮಾರ್ ಅವರೊಂದಿಗೆ ಚಲನಚಿತ್ರದ ಚಿತ್ರೀಕರಣದ ಸಮಯದಲ್ಲಿ ಶ್ರೀ ಮಠದಲ್ಲಿ ಉಳಿದುಕೊಂಡಿದ್ದ ನೆನಪುಗಳನ್ನು ಪ್ರೀತಿಯಿಂದ ನೆನಪಿಸಿಕೊಂಡರು. ಶ್ರೀಮಠವು ತಮ್ಮ ಎರಡನೇ ಮನೆಯಂತೆ ಭಾಸವಾಗುತ್ತಿದೆ ಎಂದು ಹೇಳಿದರು. ಅಮೇರಿಕಾದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಶಿವಣ್ಣ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅಮೇರಿಕಾದಿಂದ ಬಳಿಕ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಇದೀಗ ಮಂತ್ರಾಲಯದಲ್ಲಿ ರಾಯರ ಆಶೀರ್ವಾದ ಪಡೆದರು. ಅಮೇರಿಕಾಗೆ ತೆರಳುವ ಮುನ್ನ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿ, ಕುಟುಂಬ ಸಮೇತ ಮುಡಿ ಕೊಟ್ಟಿದ್ದರು.

Read More