ನಟ ಡಾಲಿ ಧನಂಜಯ ಮದುವೆಗೆ ಗಂಟೆಗಳು ಮಾತ್ರವೇ ಭಾಕಿ ಇದೆ. ಈಗಾಗಲೇ ವಧು, ವರರ ಮನೆಯಲ್ಲಿ ಮದುವೆ ಶಾಸ್ತ್ರಗಳು ಆರಂಭಗೊಂಡಿದ್ದು ಅಭಿಮಾನಿಗಳು ಕೂಡ ನೆಚ್ಚಿನ ಜೋಡಿಯ ಮದುವೆ ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಈ ಮಧ್ಯೆ ಡಾಲಿ ಜೋಡಿಗೆ ಅಂಚೆ ಇಲಾಖೆ ವಿಶೇಷ ಉಡುಗೊರೆಯೊಂದನ್ನು ನೀಡಿದೆ. ಅಂಚೆ ಇಲಾಖೆ ನೀಡಿದ ವಿಶೇಷ ಉಡುಗೊರೆ ನೋಡಿ ದಿಲ್ ಖುಷ್ ಆದ ಡಾಲಿ ಧನಂಜಯ್ ಆ ಉಡುಗೊರೆಯನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡಾಕ್ಟರ್ ಧನ್ಯತಾ ಜೊತೆ ಡಾಲಿ ಧನಂಜಯ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ವಿಶೇಷ ಏನೆಂದರೆ, ಅವರ ಮದುವೆಯ ಆಮಂತ್ರಣ ಪತ್ರಿಕೆ ವಿನ್ಯಾಸಕ್ಕೆ ಭಾರತೀಯ ಅಂಚೆ ಇಲಾಖೆ ಕೂಡ ಫಿದಾ ಆಗಿದೆ. ಇನ್ಲ್ಯಾಂಡ್ ಲೆಟರ್ ಮಾದರಿಯಲ್ಲಿ ಸಿದ್ಧವಾದ ಆಹ್ವಾನ ಪತ್ರಿಕೆಗೆ ಅಂಚೆ ಇಲಾಖೆ ಕಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮೈಸೂರು ಅಂಚೆ ವಿಭಾಗದ ಅಧಿಕಾರಿಗಳು ಧನಂಜಯ ಅವರಿಗೆ ವಿಶೇಷವಾದ ಸ್ಟ್ಯಾಂಪ್ ಉಡುಗೊರೆ ನೀಡಿದ್ದಾರೆ. ಸ್ಟ್ಯಾಂಪ್ ನೀಡಿ ಶುಭಾಶಯ ತಿಳಿಸಲಾಗಿದೆ. ಧನಂಜಯ ಮತ್ತು ಧನ್ಯತಾ ಅವರ…
Author: Author AIN
ಇಂದಿಗೆ ಸರಿಯಾಗಿ 2019ರ ಫೆಬ್ರವರಿ 14ರಂದು ಸಂಜೆ ವೇಳೆಗೆ ಜಮ್ಮು ಮತ್ತು ಕಾಶ್ಮೀರದಿಂದ ಸಿಡಿಲಬ್ಬರದ ಸುದ್ದಿಯೊಂದು ದೇಶವಾಸಿಗಳ ಕಿವಿಗಪ್ಪಳಿಸಿತು. ಅದು ಉಗ್ರರ ಅಟ್ಟಹಾಸಕ್ಕೆ ಭಾರತೀಯ ಸೈನಿಕರನ್ನು ಪ್ರಾಣತೆತ್ತಿದ್ದರು. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ನ 20 ವರ್ಷದ ಆತ್ಮಹತ್ಯಾ ಬಾಂಬರ್ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಬೆಂಗಾವಲು ಪಡೆಗೆ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆದು 40 ಯೋಧರನ್ನು ಹತ್ಯೆಗೈದಿದ್ದನು. ವರದಿಗಳ ಪ್ರಕಾರ, ವಾಹನವನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳ ಬೆಂಗಾವಲು ಪಡೆಯಲ್ಲಿ 70 ಕ್ಕೂ ಹೆಚ್ಚು ವಾಹನಗಳು ಇದ್ದವು. ಈ ವಾಹನವನ್ನು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಓಡಿಸುತ್ತಿದ್ದರು, ನಂತರ ಅವರನ್ನು ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾಯಿತು, ಈ ವಾಹನವು ಸುಮಾರು 80 ಕಿಲೋಗ್ರಾಂಗಳಷ್ಟು ಆರ್ಡಿಎಕ್ಸ್ ಸ್ಫೋಟಕವನ್ನು ಹೊಂದಿತ್ತು, ಇದನ್ನು ಈ ಆತ್ಮಾಹುತಿ ದಾಳಿಯಲ್ಲಿ ಬಳಸಲಾಯಿತು. ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಈ ಘಟನೆ ನಡೆದಾಗ ಬೆಂಗಾವಲು ಪಡೆಯಲ್ಲಿ 2,500ಕ್ಕೂ ಹೆಚ್ಚು ಸಿಆರ್ಪಿಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ.…
ಸಮರ್ಥ ಅಭ್ಯರ್ಥಿಗಳಿಂದ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ಅರ್ಜಿಗಳನ್ನು ಆಹ್ವಾನ ಮಾಡಿದೆ. ಅಖಿಲ ಭಾರತಾದ್ಯಂತ ಈ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಫೆಬ್ರವರಿ 3 ರಿಂದ ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಕಂಪನಿಯ ಅಧಿಕೃತ ವೆಬ್ಸೈಟ್ iocl.com ಗೆ ಭೇಟಿ ನೀಡುವ ಮೂಲಕ ಫೆಬ್ರವರಿ 23 ರ ಒಳಗೆ ಅರ್ಜಿ ಸಲ್ಲಿಸಬಹುದು. ಕಂಪನಿಯು ಒಟ್ಟು 246 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ 215 ಜೂನಿಯರ್ ಆಪರೇಟರ್ ಹುದ್ದೆಗಳು, 23 ಜೂನಿಯರ್ ಅಟೆಂಡೆಂಟ್ ಹುದ್ದೆಗಳು ಮತ್ತು 8 ಜೂನಿಯರ್ ಬಿಸಿನೆಸ್ ಅಸಿಸ್ಟೆಂಟ್ ಹುದ್ದೆಗಳು ಸೇರಿವೆ. ಯಾವ ಹುದ್ದೆಗಳಿಗೆ ಯಾವ ಅರ್ಹತೆಗಳು ಬೇಕಾಗುತ್ತವೆ ಮತ್ತು ಆಯ್ಕೆ ಹೇಗೆ ಮಾಡಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಯಾವ ಹುದ್ದೆಗಳಿಗೆ ಅರ್ಹತೆಗಳೇನು? ಜೂನಿಯರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಸಂಬಂಧಿತ ವ್ಯಾಪಾರದಲ್ಲಿ ಐಟಿಐ ಪದವಿ ಹೊಂದಿರಬೇಕು. ಅದೇ ಸಮಯದಲ್ಲಿ, ಜೂನಿಯರ್ ಅಟೆಂಡೆಂಟ್ ಹುದ್ದೆಗೆ ಅರ್ಜಿದಾರರು 12 ನೇ ತರಗತಿ ಉತ್ತೀರ್ಣರಾಗಿರಬೇಕು.…
ಸೂರ್ಯೋದಯ – 6:46 AM ಸೂರ್ಯಾಸ್ತ – 6:13 PM ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಶಿಶಿರ ಋತು, ಮಾಘ ಮಾಸ, ತಿಥಿ – ಬಿದಿಗೆ ನಕ್ಷತ್ರ – ಪುಬ್ಬೆ ಯೋಗ – ಅತಿಗಂಡ ಕರಣ – ತೈತಲೆ ರಾಹು ಕಾಲ – 10:30 ದಿಂದ 12:00 ವರೆಗೆ ಯಮಗಂಡ – 03:00 ದಿಂದ 04:30 ವರೆಗೆ ಗುಳಿಕ ಕಾಲ – 07:30 ದಿಂದ 09:00 ವರೆಗೆ ಬ್ರಹ್ಮ ಮುಹೂರ್ತ – 5:10 ಬೆ.ದಿಂದ 5:58 ಬೆ.ವರೆಗೆ ಅಮೃತ ಕಾಲ – 4:24 ಸಂಜೆ.ದಿಂದ 6:08 ಸಂಜೆ.ವರೆಗೆ ಅಭಿಜಿತ್ ಮುಹುರ್ತ – 12:07 ಮ.ದಿಂದ 12:53 ಮ.ವರೆಗೆ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಹೈನುಗಾರಿಕೆ ,ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಫಾರ್ಮ್ ಹೌಸ್ ಪ್ರಾರಂಭಿಸಬಹುದು.…
ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸೂಪರ್ ಹಿಟ್ ನಮ್ಮ ಪ್ರೀತಿಯ ರಾಮು ಚಿತ್ರ ರೀರಿಲೀಸ್ ಆಗುತ್ತಿದೆ. 2003ರಲ್ಲಿ ಬಿಡುಗಡೆಯಾಗಿದ್ದ ‘ನಮ್ಮ ಪ್ರೀತಿಯ ರಾಮು’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೇಳಿಕೊಳ್ಳುವ ಹೆಸರು ಮಾಡಿರಲಿಲ್ಲ. ಆದರೆ ದರ್ಶನ್ ನಟನೆಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದರು. ಇದೀಗ ಮತ್ತೆ ಥಿಯೇಟರ್ ನಲ್ಲಿ ಬಿಡುಗಡೆ ಆಗುತ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಮರು ಬಿಡುಗಡೆಯಾಗುತ್ತಿರುವ ದರ್ಶನ್ ಅವರ ಪ್ರಥಮ ಚಿತ್ರ ಇದಾಗಿದೆ. ಸಂಜಯ್-ವಿಜಯ್ ಜೋಡಿ ನಿರ್ದೇಶಿಸಿದ್ದ ಹಾಗೂ 1999ರಲ್ಲಿ ಬಿಡುಗಡೆಯಾಗಿದ್ದ ತಮಿಳು ಚಿತ್ರ ‘ವಸಂತಿಯುಮಂ ಲಕ್ಷ್ಮಿಯುಂ ಪಿನ್ನೆ ನಿಜಾನುಂ’ ರೀಮೇಕ್ ಆಗಿದ್ದ ‘ನಮ್ಮ ಪ್ರೀತಿಯ ರಾಮು’ ಚಿತ್ರವನ್ನು ಕನ್ನಡದಲ್ಲೂ ಅದೇ ಜೋಡಿ ನಿರ್ದೇಶಿಸಿತ್ತು. ದರ್ಶನ್ ತಮ್ಮ ವೃತ್ತಿ ಜೀವನದಲ್ಲಿ ಅತ್ಯುತ್ತಮ ಅಭಿನಯ ತೋರಿದ ಚಿತ್ರ ಎಂಬ ಹಿರಿಮೆಗೆ ಈ ಚಿತ್ರ ಭಾಜನವಾದರೂ, ಗಲ್ಲಾಪೆಟ್ಟಿಯಲ್ಲಿ ಮಾತ್ರ ಮುಗ್ಗರಿಸಿತ್ತು. ಇನ್ನೂ ದರ್ಶನ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಬೇಕು ಎಂದುಕೊಂಡವರಿಗೆ ಬೇಸರವಾಗಿದೆ. ದರ್ಶನ್…
ವಾಷಿಂಗ್ಟನ್: ಕಳೆದ ವರ್ಷದ ಜೂನ್ ನಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಕ್ಕಿಬಿದ್ದಿರುವ ಅಮೆರಿಕದ ಇಬ್ಬರು ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ನಿರೀಕ್ಷೆಗಿಂತಲೂ ಮೊದಲೇ ಭೂಮಿಗೆ ವಾಪಸಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತಿಳಿಸಿದೆ. ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಶೀಘ್ರದಲ್ಲೇ ಭೂಮಿಗೆ ಮರಳಲಿದ್ದಾರೆ. ಮಾರ್ಚ್ ಮಧ್ಯದಲ್ಲಿ ಭೂಮಿಗೆ ಮರಳಬಹುದು ಎಂದು ನಾಸಾ ಅಧಿಕೃತವಾಗಿ ತಿಳಿಸಿದೆ. ಇಬ್ಬರೂ ಗಗನಯಾತ್ರಿಗಳು ಕಳೆದ 8 ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದಾರೆ. ನಾಸಾ ಮತ್ತು ಸ್ಪೇಸ್ಎಕ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಮತ್ತು ಅಲ್ಲಿಂದ ಮುಂಬರುವ ಕ್ರೂ ರೊಟೇಶನ್ ಮಿಷನ್ ಟಾರ್ಗೆಟ್ ಲಾಂಚ್ ಮತ್ತು ರಿಟರ್ನ್ ಡೇಟ್ಸ್ ವೇಗಗೊಳಿಸುತ್ತಿವೆ. ಇದು ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ನಾಸಾ ವಾಪಸ್ ಭೂಮಿಗೆ ಕರೆತರಲಿದೆ.
ವಾಷಿಂಗ್ಟನ್ ಡಿ.ಸಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಮೋದಿಯನ್ನು ಟ್ರಂಪ್ ಭೇಟಿ ಮಾಡಲಿದ್ದು, ಭೇಟಿಗೂ ಮುನ್ನ ನನ್ನ ಆತ್ಮೀಯ ಸ್ನೇಹಿತ ಎಂದು ಮೋದಿಯನ್ನು ಕರೆದಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣವಾದ ಟ್ರೂತ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ನನ್ನ ಎರಡನೇ ಅವಧಿಯ ಮೂರು ಶ್ರೇಷ್ಠ ವಾರಗಳ ಸಂದರ್ಭದಲ್ಲಿ ನನ್ನ ಅತ್ಯುತ್ತಮ ವಾರವನನ್ನು ನೋಡುತ್ತಿದ್ದೇನೆ. ಆದರಂತೆ ನನ್ನ ಆತ್ಮೀಯ ಸ್ನೇಹಿತನ್ನು ಭೇಟಿಯಾಗುತ್ತಿದ್ದೇನೆ ಎಂದಿದ್ದಾರೆ. ಎರಡು ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರನ್ನು ಇಂದು, ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾದ ತುಳಸಿ ಗಬ್ಬಾರ್ಡ್ ಅವರನ್ನು ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾದರು. ಇದೇ ವೇಳೆ ಭಾರತ-ಯುಎಸ್ಎ ಸ್ನೇಹದ ವಿವಿಧ ಅಂಶಗಳನ್ನು ಚರ್ಚಿಸಿದರು ಎನ್ನಲಾಗಿದೆ. ಇದರೊಂದಿಗೆ ನಾಳೆ ಮುಂಜಾನೆ 2.35 ಕ್ಕೆ ಇಬ್ಬರು ನಾಯಕರು ಭೇಟಿಯಾಗಲಿದ್ದಾರೆ. ನಂತರ ಬೆ. 3.40 ಕ್ಕೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಮದುವೆ ಮುನ್ನ ದಿನದ ಕಾರ್ಯಕ್ರಮಗಳು ಆರಂಭವಾಗಿದೆ. ಇದೀಗ ಧನಂಜಯ್ ಮದುವೆ ಆಮಂತ್ರಣ ಪತ್ರಿಕೆ ಮೆಚ್ಚಿ ಧನಂಜಯ್-ಧನ್ಯತಾಗೆ ಅಂಚೆ ಇಲಾಖೆ ಸ್ಪೆಷಲ್ ಉಡುಗೊರೆ ನೀಡಿದ್ದಾರೆ. ಫೆಬ್ರವರಿ 15 ಮತ್ತು 16 ರಂದು ಮೈಸೂರಿನಲ್ಲಿ ಧನಂಜಯ್ – ಧನ್ಯತಾ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಡಾಲಿ ಹಾಗೂ ಧನ್ಯತಾ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಮದುವೆಗೆ ರಾಜಕೀಯ ಗಣ್ಯರು, ಚಿತ್ರರಂಗದವರು ಸ್ನೇಹಿತರು ಸೇರಿದಂತೆ ಹಲವರು ಭಾಗವಹಿಸುವ ನಿರೀಕ್ಷೆ ಇದೆ. ಮದುವೆ ಸಂಭ್ರಮದಲ್ಲಿರುವ ಡಾಲಿ ಹಾಗೂ ಧನ್ಯತಾಗೆ ಅಂಚೆ ಇಲಾಖೆ ಸ್ಪೆಷಲ್ ಗಿಫ್ಟ್ ನೀಡಿದೆ. ಧನಂಜಯ್ – ಧನ್ಯತಾ ಮದುವೆ ಆಮಂತ್ರಣ ಪತ್ರಿಕೆ ಎಲ್ಲರ ಗಮನ ಸೆಳೆದಿತ್ತು. ಇನ್ ಲ್ಯಾಂಡ್ ಲೆಟರ್ ಮಾದರಿಯಲ್ಲಿತ್ತು. ಸಿಂಪಲ್ ಮದುವೆ ಪತ್ರಿಕೆ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ರು. ಧನಂಜಯ್ ಮದುವೆ ಆಮಂತ್ರಣಕ್ಕೆ ಭಾರತೀಯ ಅಂಚೆ ಇಲಾಖೆ ಕೂಡ ಮನಸೋತಿದೆ. ಧನಂಜಯ್-ಧನ್ಯತಾ ಮದುವೆಗೆ ವಿಶೇಷ ಸ್ಟ್ಯಾಂಪ್ ನೀಡಿ ಶುಭಾಶಯ ತಿಳಿಸಿದೆ.…
ಹುಬ್ಬಳ್ಳಿ : ಅಜ್ಜಿಯ ಮನೆಗೆ ಹೋದ ಯುವತಿ ಏಕಾಏಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ . 18 ವರ್ಷದ ಯುವತಿಯ ನಾಪತ್ತೆಯಿಂದೆ ಒಂದು ಲವ್ ಸ್ಟೋರಿ ಇದೆ ಎನ್ನಲಾಗುತ್ತಿದೆ. ಹುಬ್ಬಳ್ಳಿ ಚಾಲುಕ್ಯ ನಗರದ ದೀಪಕ್ ಹಾಗೂ ಶೀತಲ ದಂಪತಿಯ ಪುತ್ರಿ ಕರೀಷ್ಮಾ ಹುಬ್ಬಳ್ಳಿ ಮಹಿಳಾ ಪದವಿ ಕಾಲೇಜಿನಲ್ಲಿ ಓದಿತ್ತಿದ್ದಳು. ಮಹಾರಾಷ್ಟ್ರ ಕೊಲ್ಲಾಪುರದ ತನ್ನ ಅಜ್ಜಿಯ ಮನೆ ಹೋದವಳು, ಇದೇ ಜ. 3 ರಂದು ಏಕಾಏಕಿ ಕಾಣೆಯಾಗಿದ್ದು, ಅಂದಿನ ಇಂದಿನವರೆಗೂ ಪತ್ತೆಯಾಗಿಲ್ಲ ಅಂತಾ ತಂದೆ-ತಾಯಿ ಹುಡುಕುತ್ತಿದ್ದಾರೆ. https://ainlivenews.com/strike-of-village-administrative-officers-demanding-fulfillment-of-various-demands/ 18 ವರ್ಷ ಕರಿಷ್ಮಾ 50 ವರ್ಷದ ಪ್ರಕಾಶ್ ಜೊತೆಗೆ ಓಡಿಹೋಗಿರುವ ಅನುಮಾನ ಮೂಡಿದೆ. ಪ್ರಕಾಶ್ ಚಾಲುಕ್ಯ ನಗರದ ನಿವಾಸಿಯಾಗಿದ್ದು, ಈಗಾಗಲೇ ಮದುವೆಯಾಗಿ, ಎರಡು ಮಕ್ಕಳು ಸಹ ಇವೆ. ಹೀಗಿದ್ದರೂ ಕರಿಷ್ಮಾಗೆ ಅದೇನು ಮೋಡಿ ಮಾಡಿದ್ದಾನೋ ಗೊತ್ತಿಲ್ಲ. ಅವಳ ಜೊತೆಗೆ ಸಲುಗೆ ಬೆಳಸಿ, ಅವಳನ್ನು ಪುಸಲಾಯಿಸಿ ಅವಳ ಜೊತೆಗೆ ಹಗಲು ರಾತ್ರಿ ಫೋನ್ ನಲ್ಲಿ ಮಾತನಾಡುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.. https://www.youtube.com/watch?v=H6cS4XugLMI ಈ ಕುರಿತು ಕೊಲ್ಲಾಪುರ…
ಚಿತ್ರದುರ್ಗ: ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಹಿರಿಯೂರು ನಗರದ ಐತಿಹಾಸಿಕ ಶ್ರೀತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಸಂಪನ್ನಗೊಂಡಿತು. ತಾಲೂಕಿನ ಬೀರೇನಹಳ್ಳಿ ಮಜುರೆ ಕರಿಯಣ್ಣನಹಟ್ಟಿ ಗ್ರಾಮದ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ನಂತರ ದೇವಸ್ಥಾನದಲ್ಲಿದ್ದ ಶಿವಧನಸ್ಸನ್ನು ಹೊರತೆಗೆದು ಸಮೀಪದ ವೇದಾವತಿ ನದಿಗೆ ತೆಗೆದುಕೊಂಡು ಹೋಗಿ, ಅಭಿಷೇಕ ಮಾಡಿ ದೇವಾಲಯಕ್ಕೆ ತರಲಾಯಿತು. ಅನಂತರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಲ್ಲಿಗೆ, ಕಾಕಡಾ, ಕನಕಾಂಬರ, ಸೇವಂತಿಗೆ ಸೇರಿದಂತೆ ವಿವಿಧ ರೀತೀಯ ಹೂವುಗಳು ಹಾಗೂ ಬಣ್ಣಬಣ್ಣದ ಅಂಲಕೃತವಾದ ಬಟ್ಟೆಗಳಿಂದ ಸಿಂಗರಿಸಿ ಅಲಂಕಾರಗೊಂಡ ಬ್ರಹ್ಮರಥದಲ್ಲಿ ದೇವರನ್ನು ಕೂರಿಸಿದ ಬಳಿಕ ಪೂಜೆ ಸಲ್ಲಿಸಲಾಯಿತು. https://ainlivenews.com/sri-prasanna-venkataramanaswamy-brahmarathotsava-held-with-grandeur/ ನಂತರ ಭಕ್ತರ ಸಮ್ಮುಖದಲ್ಲಿ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆ ನಡೆಯಿತು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ದೇವರಿಗೆ ಪೂಜೆ ಸಲ್ಲಿಸಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ವಾದ್ಯಗಳು ಹಾಗೂ ಸಾವಿರಾರು ಭಕ್ತರ ಘೋಷಣೆಗಳೊಂದಿಗೆ…