ಕಾಟೇರ ಸಿನಿಮಾದ ಬಳಿಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಿಲನಾ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದರು. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಸೇರಿದ ಬಳಿ ಸುಮಾರು ೭ ತಿಂಗಳ ಕಾಲ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಇದೀಗ ದರ್ಶನ್ ಜಾಮೀನಿನ ಮೇಲೆ ಹೊರ ಬಂದಿದ್ದು ಮತ್ತೆ ಶೂಟಿಂಗ್ ಶುರುವಾಗಲಿದೆ. ಈ ಮಧ್ಯೆ ದಿಡೀರ್ ಎಂದು ಚಿತ್ರತಂಡ ಚಿತ್ರದ ಟೈಟಲ್ ಬದಲಾವಣೆ ಮಾಡಿದೆ. ಸದ್ಯ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳು ಚಿತ್ರೀಕರಣ ಶುರುವಾಗಬಹುದು ಎನ್ನಲಾಗ್ತಿದೆ. ಇದೆಲ್ಲದರ ನಡುವೆ ನಾಳೆ ದರ್ಶನ್ ಹುಟ್ಟುಹಬ್ಬವಿದೆ. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆ ಬರ್ತಡೇ ಸೆಲೆಬ್ರೇಷನ್ ಮಾಡೋಕೆ ದರ್ಶನ್ ಬ್ರೇಕ್ ಹಾಕಿದ್ದಾರೆ. ಈ ಮಧ್ಯೆ ಡೆವಿಲ್’ ಚಿತ್ರದ ಟೈಟಲ್ ಕೊಂಚ ಬದಲಾವಣೆ ಮಾಡಲಾಗಿದೆ. ಈ ಮೊದಲು ಚಿತ್ರಕ್ಕೆ ‘ಡೆವಿಲ್’- ದಿ ಹೀರೊ ಎನ್ನುವ ಟೈಟಲ್ ಇತ್ತು. ಈಗ ಅದನ್ನು ‘ದಿ ಡೆವಿಲ್’ ಎಂದು ಬದಲಿಸಿರುವುದು…
Author: Author AIN
ಗಸಗಸೆಯು ಸಸ್ಯದಿಂದ ಪಡೆಯುವ ಈ ಎಣ್ಣೆಬೀಜ ಬೆಳ್ಳುಳ್ಳಿ ಮತ್ತು ಸಾಸಿವೆಯ ಹೊರತಾಗಿ, ಭಾರತೀಯ ಅಡಿಗೆಮನೆಯಲ್ಲಿ ಕಂಡುಬರುವ ಸ್ಥಿರ ಮಸಾಲೆ ಪದಾರ್ಥವಾಗಿದೆ. ಇದನ್ನು ಹಿಂದಿಯಲ್ಲಿ ಖುಸ್ ಖುಸ್ ಎಂದೂ, ತಮಿಳಿನಲ್ಲಿ ಕಸಕಸ ಎಂದೂ, ತೆಲುಗಿನಲ್ಲಿ ಗಸಗಸುಲು ಎಂದೂ ಕರೆಯಲಾಗುವ, ಹೂಗಳಿಂದ ತುಂಬಿರುವ ಸಸ್ಯವಾದ ಗಸಗಸೆಯನ್ನು ಆಗ್ನೇಯ ಯೂರೋಪ್ ಮತ್ತು ಪೂರ್ವ ಹಾಗೂ ದಕ್ಷಿಣ ಏಷ್ಯಾದಾದ್ಯಂತ ಹೆಚ್ಚು ಬೆಳೆಯಲಾಗುತ್ತದೆ. ಗಸಗಸೆ ಮತ್ತು ಅದರ ಎಣ್ಣೆಯು ಮಹಿಳೆಯರ ಬಂಜೆತನ ನಿವಾರಣೆಗೆ ಪ್ರಯೋಜನಕಾರಿಯಾಗಿದೆ. ಇದು ಫಲವತ್ತತೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಗಸಗಸೆಯಲ್ಲಿರುವ ಲಿನಿನ್ ಅಂಶವು ಕಾಮೋತ್ತೇಜಕ ಗುಣ ಹೊಂದಿದ್ದು, ಇದು ಲೈಂಗಿಕಾಸಕ್ತಿಯನ್ನು ಹೆಚ್ಚಿಸಿ ಲೈಂಗಿಕ ಜೀವನವನ್ನು ಸುಧಾರಿಸುತ್ತದೆ. ಗಸಗಸೆಯಲ್ಲಿ ಮೆಗ್ನೀಷಿಯಂ ಅಂಶ ಸಮೃದ್ಧವಾಗಿದ್ದು, ಇದು ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಒತ್ತಡ ನಿವಾರಣೆಯಾಗಿ ಗುಣಮಟ್ಟದ ನಿದ್ರೆ ಮಾಡಲು ಸಹಕಾರಿಯಾಗಿದೆ. ಮಲಗುವ ಮೊದಲು ಗಸಗಸೆಯ ಟೀ ಅಥವಾ ಗಸಗಸೆಯ ಪೇಸ್ಟ್ ಅನ್ನು ಹಾಲಿನೊಂದಿಗೆ ಕುಡಿಯಬೇಕು. ಇದು ಶರೀರದ ಚಯಾಪಚಯ ಕ್ರಿಯೆ ಹೆಚ್ಚಿಸಿ, ನಿದ್ರಿಸಲು…
ಭಾರತದ ಎಲ್ಲ ಹಿಂದೂಗಳ ಮನೆಯಲ್ಲಿ ದೇವರ ಕೋಣೆಯೊಂದು ಇರ್ಲೇಬೇಕು. ದೇವರಿಗೆ ಪ್ರತ್ಯೇಕ ರೂಮಿಲ್ಲವೆಂದ್ರೂ ದೇವರ ಮೂರ್ತಿ ಮಾತ್ರ ಇದ್ದೇ ಇರುತ್ತದೆ. ಪ್ರತಿ ದಿನ ಬೆಳಿಗ್ಗೆ ದೇವರ ಪೂಜೆಯಲ್ಲಿ ಎಲ್ಲರು ಭಕ್ತಿಯಿಂದ ಮಾಡ್ತಾರೆ. ತಮ್ಮಿಷ್ಟದ ದೇವರನ್ನು ಪೀಠದಲ್ಲಿಟ್ಟು ಪೂಜೆ ಮಾಡ್ತಾರೆ. ಇನ್ನೂ ಶನಿ ದೇವನನ್ನು ಅತ್ಯಂತ ಕ್ರೂರ ದೇವತೆ ಎಂದು ಪರಿಗಣಿಸಲಾಗುತ್ತದೆ. ನ್ಯಾಯ ದೇವರು ಎಂದೂ ಶನಿಯನ್ನು ಕರೆಯಲಾಗುತ್ತದೆ. ಶನಿದೇವರು ಸೂರ್ಯದೇವ ಮತ್ತು ಅವರ ಪತ್ನಿ ಛಾಯಾರ ಮಗ. ನಾವು ಮಾಡಿದ ಕೆಲಸಕ್ಕೆ ಅನುಗುಣವಾಗಿ ಶನಿದೇವರು ಫಲವನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಅಂದ್ರೆ ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯ ಫಲ ಸಿಗುತ್ತದೆ ಮತ್ತು ಕೆಟ್ಟ ಕೆಲಸ ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆಯಿರುತ್ತದೆ. ದೇವರ ಮನೆಯಲ್ಲಿ ಲಕ್ಷ್ಮಿ, ಗಣಪತಿ, ಈಶ್ವರ, ಕೃಷ್ಣ, ಹನುಮಂತ ಹೀಗೆ ಅನೇಕ ದೇವರ ಮೂರ್ತಿ ಅಥವಾ ಫೋಟೋಗಳನ್ನಿಟ್ಟು ಜನರು ಪೂಜೆ ಮಾಡ್ತಾರೆ. ಆದರೆ ಶನಿದೇವನ ವಿಗ್ರಹ ಅಥವಾ ಫೋಟೋವನ್ನು ಇತರ ದೇವರುಗಳಂತೆ ಮನೆಯಲ್ಲಿ ಇಡುವುದಿಲ್ಲ. ಮನೆಯಲ್ಲಿ ಶನಿದೇವರ ಫೋಟೋಕ್ಕೆ…
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಜೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಸ್ಕೇಲ್ I (JMGS I) ನಲ್ಲಿ ಸ್ಥಳೀಯ ಬ್ಯಾಂಕಿಂಗ್ ಅಧಿಕಾರಿಗಳ (LBO) ನೇಮಕಾತಿಯನ್ನು ಪ್ರಕಟಿಸಿದೆ. ಹಲವಾರು ರಾಜ್ಯಗಳಲ್ಲಿ ಒಟ್ಟು 110 ಹುದ್ದೆಗಳು ಲಭ್ಯವಿದೆ. ಆಸಕ್ತ ಅಭ್ಯರ್ಥಿಗಳು ಲಭ್ಯವಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು punjabandsindbank.co.in ನಲ್ಲಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು. ಅರ್ಜಿ ಪ್ರಕ್ರಿಯೆಯು ಫೆಬ್ರವರಿ 7, 2025 ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 25, 2025 ರಂದು ಮುಕ್ತಾಯಗೊಳ್ಳುತ್ತದೆ. ನೀವು ಬಯಸಿದ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ LBO ನೇಮಕಾತಿ 2025 ರ ಬಗ್ಗೆ ಎಲ್ಲಾ ವಿವರಗಳನ್ನು ಇಲ್ಲಿ ನೇರ ಅರ್ಜಿ ಆನ್ಲೈನ್ ಲಿಂಕ್ನೊಂದಿಗೆ ಪಡೆಯಿರಿ. ಅಧಿಸೂಚನೆಯ ಪ್ರಕಾರ, ಈ ನೇಮಕಾತಿ ಅಭಿಯಾನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 20 ರಿಂದ 30 ವರ್ಷಗಳ ನಡುವೆ ಇರಬೇಕು. ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ…
ಸೂರ್ಯೋದಯ – 6:46 ಬೆ. ಸೂರ್ಯಾಸ್ತ – 6:14 ಸಂಜೆ. ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಶಿಶಿರ ಋತು, ಮಾಘ ಮಾಸ, ತಿಥಿ – ತದಿಗೆ ನಕ್ಷತ್ರ – ಉತ್ತರೆ ಯೋಗ – ಸುಕರ್ಮ ಕರಣ – ವಣಿಜ ರಾಹು ಕಾಲ – 09:00 ದಿಂದ 10:30 ವರೆಗೆ ಯಮಗಂಡ – 01:30bದಿಂದ 03:00 ವರೆಗೆ ಗುಳಿಕ ಕಾಲ – 06:00 ದಿಂದ 07:30 ವರೆಗೆ ಬ್ರಹ್ಮ ಮುಹೂರ್ತ – 5:10 ಬೆ.ದಿಂದ 5:58 ಬೆ.ವರೆಗೆ ಅಮೃತ ಕಾಲ – 5:41 ಸಂಜೆ.ದಿಂದ 7:27 ರಾ.ವರೆಗೆ ಅಭಿಜಿತ್ ಮುಹುರ್ತ – 12:07 ಮ.ದಿಂದ 12:53 ಮ.ವರೆಗೆ ಮೇಷ ರಾಶಿ: ಮಂಚ ಸೋಫಾ ಸೆಟ್ ತಯಾರಿಕಾ ಘಟಕದವರಿಗೆ ಲಾಭ ಪಡೆಯಲಿದ್ದೀರಿ, ಸಂಗಾತಿಯ ಪ್ರೇಮದ ಶಕ್ತಿಯಿಂದನಿಮ್ಮ ಕೆಲಸವನ್ನು ನೀವು ಪೂರ್ಣ ಉತ್ಸಾಹದಿಂದ ಮಾಡುತ್ತೀರಿ. ಸಂಗಾತಿಯ ಮಾರ್ಗದರ್ಶನದಲ್ಲಿ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ಸಮಯವು ಅನುಕೂಲಕರವಾಗಿರುತ್ತದೆ. ಸಂಗಾತಿಯ…
ಬಿಗ್ ಬಾಸ್ ಸೀಸನ್ 8 ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಕನ್ನಡದ ರ್ಯಾಪರ್ ಬ್ರೋ ಗೌಡ ಆಲಿಯಾಸ್ ಶಮಂತ್ ಗೌಡ, ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಧಾರವಾಹಿ ಶೂಟಿಂಗ್ ನಲ್ಲಿ ಸಖತ್ ಬ್ಯುಸಿಯಾಗಿರುವ ಶಮಂತ್ ಇದೀಗ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಾನು ಮದುವೆಯಾಗುತ್ತಿರುವ ಸುದ್ದಿಯನ್ನು ಸ್ವತಃ ಶಮಂತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ತಿಳಿಸಿದ್ದಾರೆ. ಫೆಬ್ರುವರಿ 14 ರ ವ್ಯಾಲೆಂಟೈನ್ಸ್ ಡೇ ಸಂಭ್ರಮದಂದು ಬ್ರೋ ಗೌಡ ತಮ್ಮ ಇನ್’ಸ್ಟಾಗ್ರಾಂನಲ್ಲಿ New Chapter Unlocked Of #brogram ಎಂದು ಬರೆದುಕೊಂಡು ಒಂದು ಸುಂದರವಾದ ವಿಡಿಯೋ ಹಂಚಿಕೊಂಡಿದ್ದಾರೆ. ಶಮಂತ್ ಮೇಘನಾ ಎಂಬುವವರ ಜೊತೆ ಹಸೆಮಣೆ ಏರುತ್ತಿದ್ದಾರೆ. ಇವರು ಮೇಕಪ್ ಆರ್ಟಿಸ್ಟ್ ಆಗಿದ್ದು, ಇವರಿಬ್ಬರ ಪ್ರೀತಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶಮಂತ್ ಗೌಡ, ಬ್ಲಾಕ್ ಅಂಡ್ ವೈಟ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ರೆ, ಮೇಘನಾ ವೈಟ್ ಡ್ರೆಸ್ಸಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ ಮತ್ತು ಬ್ರೋ ಗೌಡ ಹಲವಾರು…
ವಾಷಿಂಗ್ಟನ್ ಡಿಸಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಪ್ರಧಾನಿ ನರೇಂದ್ರ ಮೋದಿ ಸುಧೀರ್ಘ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ 2008ರ ಮುಂಬೈ ಸ್ಫೋಟ ಪ್ರಕರಣದ ಆರೋಪಿ ತನ್ವರ್ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲು ಅಮೆರಿಕ ಒಪ್ಪಿಗೆ ಸೂಚಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 26/11ರ ಉಗ್ರ ದಾಳಿಯ ಪ್ರಮುಖ ಆರೋಪಿ ಇದೀಗ ಅಮೆರಿಕದಲ್ಲಿ ಬಿಗಿ ಭದ್ರತೆಯ ಜೈಲಿನಲ್ಲಿದ್ದು, ಹಲವು ವರ್ಷಗಳಿಂದ ಈತನ ಗಡೀಪಾರಿಗೆ ಭಾರತ ಮನವಿ ಮಾಡಿಕೊಳ್ಳುತ್ತಾ ಬಂದಿತ್ತು. ಇದೀಗ ತನ್ವರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಟ್ರಂಪ್ ಮುಂದಾಗಿದ್ದಾರೆ. “26/11 ಮುಂಬೈ ಉಗ್ರದಾಳಿ ಪ್ರಕರಣದಲ್ಲಿ ಅರೋಪಿಯಾಗಿರುವ ಅತ್ಯಂತ ಅಪಾಯಕಾರಿ ವ್ಯಕ್ತಿಯನ್ನು ನಾವು ಭಾರತಕ್ಕೆ ಹಸ್ತಾಂತರಿಸುತ್ತಿದ್ದೇವೆ’ ಎಂದು ಟ್ರಂಪ್ ತಿಳಿಸಿದ್ದಾರೆ. ಕಳೆದ ಜನವರಿ 21ರಂದು ಅಮೆರಿಕದ ಸುಪ್ರೀಂಕೋರ್ಟ್, ತನ್ವರ್ ರಾಣಾ ಮಾಡಿಕೊಂಡಿದ್ದ ಪರಾಮರ್ಶೆ ಅರ್ಜಿಯನ್ನು ತಿರಸ್ಕರಿಸಿ, ಭಾರತಕ್ಕೆ ಆತನನ್ನು ಗಡೀಪಾರು ಮಾಡಲು ಅವಕಾಶ ಮಾಡಿಕೊಟ್ಟಿತ್ತು. “ಸುಪ್ರೀಂಕೋರ್ಟ್ನ ಇತ್ತೀಚಿನ ನಿರ್ಧಾರದ ಹಿನ್ನೆಲೆಯಲ್ಲಿ ಮತ್ತು ಅಮೆರಿಕದಲ್ಲಿ ಅನ್ವಯವಾಗುವ ಕಾನೂನುಗಳಿಗೆ ಅನುಸಾರವಾಗಿ, ರಕ್ಷಣಾ…
ಶಿವಮೊಗ್ಗ : ಮಹಿಳಾ ಅಧಿಕಾರಿ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು. ಭದ್ರಾವತಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಭಾಗಿಯಾಗಿ ಮಾತನಾಡಿದ ಅವರು, ಶಾಸಕರ ಸುಪುತ್ರ ದಕ್ಷ ಮಹಿಳಾ ಅಧಿಕಾರಿ ವಿರುದ್ಧವಾಗಿ ನಿಂದಿಸಿರುವುದು ಎಲ್ಲರೂ ಗೊತ್ತಿದೆ. ಈ ಘಟನೆಯಿಂದ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಪೊಲೀಸ್ ಇಲಾಖೆ ಜಿಲ್ಲಾಡಳಿತಕ್ಕೆ ಕೈ ಜೋಡಿಸಿ ಮನವಿ ಮಾಡುತ್ತೇನೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. https://www.youtube.com/watch?v=516HDkEmR8I ಶಾಸಕರ ಪುತ್ರರ ಆಡಿಯೋ ಅಂತಾ ಇಡೀ ಕ್ಷೇತ್ರಕ್ಕೆ ಗೊತ್ತಾಗಿದೆ.. ಪ್ರಭಾವಿ ಸಚಿವೆ ಮೇಲೆ ಮಾತನಾಡಿದ್ದಾರೆ ಎಂದು ಸಿ.ಟಿ.ರವಿ ಯವರನ್ನ ಹೇಗೆ ನಡೆಸಿಕೊಂಡ್ರು ಅನ್ನೋದು ಎಲ್ಲರಿಗೂ ಗೊತ್ತಿದೆ. ದಕ್ಷ ಮಹಿಳಾ ಅಧಿಕಾರಿ ಮೇಲೆ ಶಾಸಕ ಮಗ ಮಾತನಾಡಿರೋದು ನಾವು ಕೇಳೋಕೆ ಆಗೋಲ್ಲ. ಅಧಿಕಾರಿಯ ಮೇಲೆ ಜೆಸಿಬಿ ಹತ್ತಿಸುವ ಪ್ರಯತ್ನ ಕೂಡ ಮಾಡಿದ್ದಾರೆ. ಉಸಿರು ಗಟ್ಟುವ ವಾತಾವರಣ ಈ ಕ್ಷೇತ್ರದಲ್ಲಿ ಸೃಷ್ಟಿಯಾಗಿದೆ. ತಂದೆ ಅಧಿಕಾರವನ್ನ ಅವರ ಮಗ ಆಡಳಿತ…
ಹುಬ್ಬಳ್ಳಿ: 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ಒಂದು ಅದ್ಭುತವೇ ಸರಿ.. ಭಗೀರಥನ ತಪಸ್ಸಿನಿಂದ ಸ್ವರ್ಗದಿಂದ ಧರೆಗಿಳಿದು, ನಮ್ಮ ಭೂಮಿಯನ್ನು ಉದ್ಧರಿಸಿದ ತಾಯಿ ಗಂಗಾ ಮಾತೆ ಹೇಗೆ ತಾಯಿ ಯಮುನೆ ಮತ್ತು ತಾಯಿ ಸರಸ್ವತಿ ಯರನ್ನು ಸೇರುವ ಸಂಗಮದಲ್ಲಿ ನಿರ್ಮಲವಾಗಿ, ರಭಸದಿಂದ ಸಲಿಲವಾಗಿ ಪ್ರಯಾಗದಲ್ಲಿ ಹರಿಯುತ್ತಿದ್ದಾಳೆ. ಸನಾತನ ಸಂಸ್ಕೃತಿಯ ಏಕತೆಯ ಮಹಾಯಜ್ಞ ಕುಂಭಮೇಳದ ಅನುಭವ ಪಡೆದ ನಾನು ಧನ್ಯ ಎಂದು ಸಾಮಾನ್ಯರಂತೆ ಕುಟುಂಬ ಸಮೇತ ಪ್ರಯಾಗ್ ರಾಜ್ ನ ಕುಂಭಮೇಳದಲ್ಲಿ ಭಾಗಿಯಾದ ಶಾಸಕ ಅರವಿಂದ ಬೆಲ್ಲದ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. https://www.youtube.com/watch?v=d2g0yyUZnOo ಕೋಟ್ಯಾಂತರ ಭಕ್ತರು ಸೇರುವ ಸ್ಥಳವನ್ನು ವ್ಯವಸ್ಥಿತವಾಗಿ ಯೋಜಿಸುವುದೆಂದರೆ ಅದು ಸಾಹಸವೇ ಸರಿ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಯೋಗಿ ಜೀ ಸರ್ಕಾರವು ಕಲ್ಪಿಸಿದ ಅದ್ಭುತ ವ್ಯವಸ್ಥೆಗೆ ಅನಂತಾನಂತ ಧನ್ಯವಾದಗಳು ಎಂದು ಕೃತಜ್ಞತೆ ತಿಳಿಸಿದ್ದಾರೆ. https://www.youtube.com/watch?v=ZXAPqMR65JI ಸರಿಯಾದ ಲೈನಿಂಗ್ ಮಾಡಿರುವ ಕಸದ ಬುಟ್ಟಿಯಿಂದ ಹಿಡಿದು, ಪ್ರತಿ 800 ಮೀಟರ್ ಗೆ ಪುರುಷರಿಗೆ ನೀಲಿ ಬಣ್ಣದ ಹಾಗೂ ಮಹಿಳೆಯರಿಗೆ ಗುಲಾಬಿ…
ಹುಬ್ಬಳ್ಳಿ : ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಕಾಣೆಯಾಗಿದ್ದು, ಈ ಸಂಬಂಧ ಕುಂದಗೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://ainlivenews.com/three-killed-in-one-day-in-chikkaballapur-anxiety-among-people/ ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ಮಾನಸಿಕ ಅಸ್ವಸ್ಥನಾಗಿ ಅಲ್ಲಲ್ಲಿ ಓಡಾಡಿಕೊಂಡಿದ್ದ ಗ್ರಾಮದ ಮಲ್ಲಿಕಾರ್ಜುನಪ್ಪ ತಂದೆ ರಾಮಪ್ಪ ಮೇಟಿ ವಯಾ 55 ಈತ ಕಾಣೆಯಾಗಿದ್ದಾನೆ. ಇತನ ಚಹರೆ ಎತ್ತರ 5 ಪೂಟ 8 ಇಂಚು, ಸಾದಗಪ್ಪು ಮೈಬಣ್ಣ, ಸದೃಡವಾಗಿ ತೆಳ್ಳಗೆ ಉದ್ದನೆಯ ಮುಖ,ನೀಟಾದ ಮೂಗು,ಕಪ್ಪು ಬಿಳಿ ತಲೆಯಲ್ಲಿ ಕೂದಲು,ಇದ್ದು ಬಿಳಿ ಬಣ್ಣದ ಶರ್ಟ,ಹಾಗೂ ಬಿಳಿ ಬಣ್ಣದ ದೋತರ ಧರಿಸಿ ಹೋಗಿದಗದು ಇರುತ್ತದೆ. ಈತನ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಕುಂದಗೋಳ ಪೋಲಿಸ್ ಠಾಣೆ ಅಧಿಕಾರಗಳನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದ್ದಾರೆ. https://www.youtube.com/watch?v=mRyCSzpqAQo