ತುಮಕೂರು : ಗೃಹ ಸಚಿವರ ತೇಜೋವಧೆ ಮಾಡುವಂತೆ ಏಕವಚನದಲ್ಲಿ ಮಾತನಾಡಬಾರದು ಅಂತಾ ಸಚಿವ ಕೆ.ಎನ್ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ತುಮಕೂರಿನಲ್ಲಿ ಹಾಲಿ ಮಾಜಿಗಳ ವಾಕ್ಸಮರ ವಿಚಾರವಾಗಿ ಮಾತನಾಡಿದ ಅವರು, ಇಬ್ಬರೂ ವೈಯಕ್ತಿಕವಾಗಿ ಟೀಕೆ ಮಾಡೋದು ಭೂಷಣ ಅಲ್ಲಾ. ಸುರೇಶ್ ಗೌಡ್ರು ತಾಳ್ಮೆ ಇಟ್ಟುಕೊಳ್ಳಬೇಕು.. ಗೌರಿಶಂಕರ್ ಕೂಡಾ ಪದ ಬಳಕೆಯಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ಪದ ಬಳಿಸಬೇಕು. ಇಬ್ಬರು ಏಕವಚದಲ್ಲಿ ಮಾತನಾಡುವ ಕೆಲಸ ಮಾಡಬಾರದು. ಸುರೇಶ್ ಗೌಡ ಮೂರು ಬಾರಿ ಶಾಸಕರಾಗಿರೋರು. ಡಾ.ಜಿ.ಪರಮೇಶ್ವರ್ ಅವರು ಗೃಹಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರಿಗೆ ತೇಜೋವಧೆ ಮಾಡುವ ಹಾಗೆ ಮಾತನಾಡೋದು ಖಂಡನೀಯ. ಪರಮೇಶ್ವರ್ ಬಗ್ಗೆ ಆಡಿರೋ ಮಾತು ವಾಪಾಸ್ ಪಡೆಯಬೇಕು ಹಾಗೂ ಕ್ಷೇತ್ರದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಶೋಷಿತರ ಸಮಾವೇಶ ವಿಚಾರವಾಗಿ ಪ್ರತಿಕ್ರಿಯಿಸಿ, ನಮಗೆ ಸಿಗುವ ಹಕ್ಕು ದೊರಕಿಸಿಕೊಳ್ಳಲು ಸಂಘಟನೆ ಆಗಲು ಸಮಾವೇಶ ನಡೆಯುತ್ತೆ. 2004ರಲ್ಲಿ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು. ಆದರೆ ದೇವೇಗೌಡರು ಧರ್ಮ ಸಿಂಗ್ ಮಾಡಿದ್ರು. ಸಿದ್ದರಾಮಯ್ಯಗೂ ತಪ್ಪಿಸಿದ್ದರು.. ದೇವೇಗೌಡರ ಮುಂದಾಲೋಚನೆ ಇರುತ್ತೆ.…
Author: Author AIN
ಭಾರತೀಯ ಕ್ರಿಕೆಟ್ ಅನ್ನು ಬದಲಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೊದಲ ಅಧ್ಯಕ್ಷ ಲಲಿತ್ ಮೋದಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಪ್ರೇಮಿಗಳ ದಿನದಂದು ಅವರು ತಮ್ಮ ಹೊಸ ಪ್ರೀತಿಯನ್ನು ಜಗತ್ತಿಗೆ ಘೋಷಿಸಿದರು. ರೀಮಾ ಬೌರಿ ಎಂಬ ಮಹಿಳೆ ತನ್ನ ಜೀವನದ ಹೊಸ ಸಂಗಾತಿಯಾದಳು ಮತ್ತು ಅವರ 25 ವರ್ಷಗಳ ಸ್ನೇಹ ಪ್ರೀತಿಯಾಗಿ ಬದಲಾಯಿತು ಎಂದು ಲಲಿತ್ ಬಹಿರಂಗಪಡಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಮಿಗಳ ದಿನದ ಪೋಸ್ಟ್ ರೀಮಾ ಅವರ 25 ವರ್ಷಗಳ ಸ್ನೇಹ ಪ್ರೀತಿಗೆ ತಿರುಗಿದಾಗ, ಮೋದಿ ಅವರು ಅವರ ಜೊತೆಗಿನ ಹಲವಾರು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರಿಗೂ ಅದೇ ಆಗಲಿ ಎಂದು ನಾನು ಭಾವಿಸುತ್ತೇನೆ. ಅವರು ಅದಕ್ಕೆ #HappyValentinesDay ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ರೀಮಾ, “ನಾನು ನಿನ್ನನ್ನು ಇನ್ನೂ ಹೆಚ್ಚು ಪ್ರೀತಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ. ರೀಮಾ ಬೌರಿ ಯಾರು? ರಿಮಾ ಬೌರಿ ಲೆಬನಾನ್ ಮೂಲದ ಸ್ವತಂತ್ರ ಸಲಹೆಗಾರರಾಗಿದ್ದಾರೆ. ಅವರಿಗೆ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉತ್ತಮ ಅನುಭವವಿದೆ.…
ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ಮನ್ ಬಾಬರ್ ಅಜಮ್ ಏಕದಿನ ಕ್ರಿಕೆಟ್ನಲ್ಲಿ ಮತ್ತೊಂದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಅವರು 6000 ಏಕದಿನ ರನ್ಗಳನ್ನು ಪೂರ್ಣಗೊಳಿಸಿದ ಎರಡನೇ ಅತಿ ವೇಗದ ಆಟಗಾರರಾದರು, ದಂತಕಥೆ ಹಾಶಿಮ್ ಆಮ್ಲಾ ಅವರ ದಾಖಲೆಯನ್ನು ಸರಿಗಟ್ಟಿದರು. ಈ ದಾಖಲೆಯನ್ನು ಸಾಧಿಸಲು ಬಾಬರ್ ಕೇವಲ 123 ಇನ್ನಿಂಗ್ಸ್ಗಳನ್ನು ತೆಗೆದುಕೊಂಡರು, ಏಷ್ಯಾದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಇದಲ್ಲದೆ, ಬಾಬರ್ 136 ಇನ್ನಿಂಗ್ಸ್ಗಳಲ್ಲಿ ಈ ದಾಖಲೆಯನ್ನು ಸಾಧಿಸಿದ ವಿರಾಟ್ ಕೊಹ್ಲಿಯನ್ನೂ ಹಿಂದಿಕ್ಕಿದರು. ಕರಾಚಿಯ ನ್ಯಾಷನಲ್ ಬ್ಯಾಂಕ್ ಕ್ರೀಡಾಂಗಣದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬಾಬರ್ ಈ ಸಾಧನೆ ಮಾಡಿದರು. ಜಾಕೋಬ್ ಡಫಿ ತಮ್ಮ ಬೌಲಿಂಗ್ನಲ್ಲಿ ಅದ್ಭುತ ಕವರ್ ಡ್ರೈವ್ ಮೂಲಕ 6000 ರನ್ಗಳ ಮೈಲಿಗಲ್ಲನ್ನು ದಾಟಿದರು. ಈ ದಾಖಲೆಯನ್ನು ಸಾಧಿಸಿದರೂ, ಬಾಬರ್ ಅವರ ಫಾರ್ಮ್ ತ್ರಿಕೋನ ಸರಣಿಯಲ್ಲಿ ಕೊರತೆಯಿರುವಂತೆ ತೋರುತ್ತಿದೆ. ಅವರು ಮೂರು ಪಂದ್ಯಗಳಲ್ಲಿ ಕೇವಲ 10, 23 ಮತ್ತು 29 ರನ್ಗಳನ್ನು ಗಳಿಸಿದರು, ಇದು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ…
ಪ್ರಯಾಗ್ರಾಜ್: ಮಹಾಕುಂಭಮೇಳ ಸ್ಥಳದಲ್ಲಿ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಮೂವತ್ತು ಜನರು ಸಾವನ್ನಪ್ಪಿದ್ದು ಅತ್ಯಂತ ದುರಂತವಾಗಿತ್ತು. ಇದೀಗ ಬಸ್ಸಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 10 ಭಕ್ತರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ. ಪ್ರಯಾಗ್ರಾಜ್-ಮಿರ್ಜಾಪುರ ಹೆದ್ದಾರಿಯ ಮೇಜಾ ಪ್ರದೇಶದಲ್ಲಿ ಬೊಲೆರೊ ಕಾರು ಬಸ್ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿವೆ. 19 ಜನರು ಗಾಯಗೊಂಡಿದ್ದಾರೆ. https://ainlivenews.com/do-you-know-why-you-shouldnt-have-a-shani-idol-in-your-house-what-is-the-secret-behind-it-here-is-the-answer/ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ಸಂಗಮದಲ್ಲಿ ಸ್ನಾನ ಮಾಡಲು ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಿಂದ ಭಕ್ತರು ಪ್ರಯಾಣಿಸುತ್ತಿದ್ದರು. ಭಕ್ತರನ್ನು ಕರೆದೊಯ್ಯುತ್ತಿದ್ದ ಬೊಲೆರೊ ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯಿಂದ ಪ್ರಯಾಣಿಸುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಮತ್ತು ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವುದನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ದಲಿತ ಸಚಿವರ ಡಿಮ್ಯಾಂಡ್ ಗೆ ಕಾಂಗ್ರೆಸ್ ಹೈಕಮಾಂಡ್ ಮಂಡಿಯೂರಿದಂತೆ ಕಾಣ್ತಿದೆ..ಅವರು ಇಟ್ಟ ಎಲ್ಲಾ ಬೇಡಿಕೆಗಳಿಗೂ ಸ್ಪಂದಿಸಿದಂತಿದೆ..ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ದಲಿತ ಸಮಾವೇಶ ನಡೆಸೋಕೆ ಅನುಮತಿಯನ್ನ ನೀಡಿದೆಯಂತೆ..ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಮುಂದುವರಿಕೆಯ ಬಗ್ಗೆಯೂ ಒಲವು ತೋರಿದೆ ಎನ್ನಲಾಗ್ತಿದೆ..ಆದರೆ ಕೆಲವು ಷರತ್ತುಗಳನ್ನೂ ಹಾಕಿದೆಯಂತೆ..ಏನದು ಅಂತೀರ..ಈ ಸ್ಟೋರಿ ನೋಡಿ.. ರಾಜ್ಯ ಕಾಂಗ್ರೆಸ್ ನೊಳಗಿನ ಆಂತರಿಕ ಅಸಮಾಧಾನಗಳು ದೆಹಲಿ ವರಿಷ್ಠರ ಕಿವಿಗೆ ಬಿದ್ದಿವೆ..ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕೆ.ಎನ್.ರಾಜಣ್ಣ ಇಂಚಿಂಚೂ ಮಾಹಿತಿಯನ್ನ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ..ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯಬದಲಾವಣೆ ಮಾಡಿದ್ರೆ ಏನಾಗಲಿದೆ,ಅಹಿಂದ ಸಮುದಾಯಗಳ ಮತಬ್ಯಾಂಕ್ ಗಟ್ಟಿಗೊಳಿಸೋಕೆ ಏನುಮಾಡ್ಬೇಕು.. ಕೆಪಿಸಿಸಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನ ಯಾಕೆ ಮಾಡಬೇಕೆಂಬ ಬಗ್ಗೆ ಸುಧೀರ್ಘವಾಗಿ ವಿವರಿಸಿದ್ದಾರೆ..ದಲಿತ ಸಮಾವೇಶ ನಡೆಸೋಕೆ ಹೊರಟಿದ್ದು,ಅದನ್ನ ತಪ್ಪಾಗಿ ಅರ್ಥೈಸಿಕೊಂಡು ನಿಲ್ಲಿಸಿದ್ದರ ಬಗ್ಗೆಯೂ ಗಮನಸೆಳೆದಿದ್ದಾರೆ..ಅಲ್ಲಿಂದ ವಾಪಸ್ ಆದ್ಮೇಲೆ ಇವತ್ತು ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ..ದೆಹಲಿಯಲ್ಲಿ ವರಿಷ್ಟಾರ ಜೊತೆ ನಡೆದ ಮಾತುಕತೆಯ ಬಗ್ಗೆ ಡಿಟೇಲ್ಸ್ ಕೊಟ್ಟಿದ್ದಾರೆ..ನಿಮ್ಮ ಮುಂದುವರಿಕೆಯ ಬಗ್ಗೆಯೂ ಸಂಪೂರ್ಣ ವಿವರಣೆ ನೀಡಿದ್ದೇವೆ..ಎಲ್ಲದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಮಾಹಿತಿ ನೀಡಿದ್ದಾರೆ… https://ainlivenews.com/do-you-know-why-you-shouldnt-have-a-shani-idol-in-your-house-what-is-the-secret-behind-it-here-is-the-answer/…
ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಡಾಕ್ಟರ್ ಧನ್ಯತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಇಬ್ಬರ ಮನೆಯಲ್ಲೂ ಮದುವೆ ಸಂಭ್ರಮ ಶುರುವಾಗಿದ್ದು ಅದ್ದೂರಿಯಾಗಿ ಶಾಸ್ತ್ರಗಳು ನಡೆಯುತ್ತಿದೆ. ಧನಂಜಯ್-ಧನ್ಯತಾ ಅರಿಶಿನ ಶಾಸ್ತ್ರ ಕೂಡ ಜೋರಾಗಿ ನಡೆದಿದ್ದು ಹಲವರು ಹಳದಿ ಶಾಸ್ತ್ರದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಮೈಸೂರಿನಲ್ಲಿ ಫೆ.೧೬ರಂದು ಡಾಕ್ಟರ್ ಧನ್ಯತಾ ಅವರ ಜೊತೆ ಡಾಲಿ ಧನಂಜಯ ಮದುವೆ ನಡೆಯುತ್ತಿದೆ. ಇಂದು (ಫೆಬ್ರವರಿ 14) ಹಳದಿ ಶಾಸ್ತ್ರ ಮಾಡಲಾಗಿದೆ. ಆಪ್ತರು ಮತ್ತು ಕುಟುಂಬದವರು ಈ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಸಂಭ್ರಮದಿಂದ ನಡೆದ ಹಳದಿ ಶಾಸ್ತ್ರದಲ್ಲಿ ಡಾಲಿ ಧನಂಜಯ ಮತ್ತು ಧನ್ಯತಾ ಅವರು ಖುಷಿಯಿಂದ ಭಾಗಿ ಆಗಿದ್ದಾರೆ. ಹೊಸ ಜೋಡಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಫೋಟೋಗಳು ವೈರಲ್ ಆಗುತ್ತಿವೆ. ಚಿತ್ರರಂಗದ ಆಪ್ತರು ಧನಂಜಯ ಅವರ ಹಳದಿ ಶಾಸ್ತ್ರದಲ್ಲಿ ಭಾಗಿ ಆಗಿದ್ದಾರೆ. ಸಪ್ತಮಿ ಗೌಡ, ಕಾರ್ತಿಕ್ ಗೌಡ, ಬಿ.ಸಿ. ಪಾಟೀಲ್ ಮುಂತಾದವರು ಬಂದು ಡಾಲಿ ಧನಂಜಯ ಹಾಗೂ ಧನ್ಯತಾಗೆ ಶುಭ ಹಾರೈಸಿದ್ದಾರೆ. ಕನ್ನಡ ಚಿತ್ರರಂಗ…
ಸ್ಯಾಂಡಲ್ವುಡ್ನಟ ಡಾಲಿ ಧನಂಜಯ್ ಮದುವೆಗೆಗಂಟೆಗಳುಮಾತ್ರವೇಭಾಕಿಇದೆ. ಈಗಾಗಲೇಮದು, ವರರಮನೆಯಲ್ಲಿಮದುವೆಮುನ್ನಶಾಸ್ತ್ರಗಳುಸಂಭ್ರಮದಿಂದನಡೆಯುತ್ತಿದೆ. ಫೆ.೧೬ರಂದುಮೈಸೂರಿನಲ್ಲಿ ಈ ಜೋಡಿ ಸಪ್ತಪದಿ ತುಳಿಯುವುದಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಡಾಲಿ ಧನಂಜಯ್ ಮದುವೆಗೆ ಆಪ್ತರು, ಸ್ನೇಹಿತರು, ಸಿನಿಮಾ ರಂಗದವರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಪರಭಾಷೆಯ ಕಲಾವಿದರು ಧನಂಜಯ್ ಮದುವೆಯಲ್ಲಿ ಭಾಗವಹಿಸಲಿದ್ದಾರೆ. ಈ ಮಧ್ಯೆ ವಿಶ್ವದ ಜನಪ್ರಿಯ ರಂಗಭೂಮಿ ನಿರ್ದೇಶಕ ಈಗಾಗಲೇ ಬೆಂಗಳೂರಿಗೆ ಬಂದಿಳಿದಿದ್ದಾರೆ. ಡಾಲಿ ಮದುವೆಗೆ ಜರ್ಮನಿಯಿಂದ ಜನಪ್ರಿಯ ರಂಗಭೂಮಿ ನಿರ್ದೇಶಕ ಕ್ರಿಸ್ಟೆನ್ ಸ್ಟುಕೆಲ್ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇವರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಿ ಬರಮಾಡಿಕೊಳ್ಳಲಾಗಿದೆ. ಧನಂಜಯ್ ಗೆಳೆಯ ಹಾಗೂ ನಟ ಪೂರ್ಣಚಂದ್ರ ಮೈಸೂರು ಜರ್ಮನಿಯಿಂದ ಬಂದ ನಿರ್ದೇಶಕರಿಗೆ ಸ್ವಾಗತ ಕೋರಿದ್ದಾರೆ. ಜರ್ಮನಿಯ ಒಬೆರಮ್ಮೆರ್ಗೌ ಮೂಲದ ಕ್ರಿಸ್ಟೆನ್ ಸ್ಟುಕೆಲ್ ಅಂತರಾಷ್ಟ್ರೀಯ ಮಟ್ಟದ ರಂಗಭೂಮಿ ನಿರ್ದೇಶಕ. 1961ರಲ್ಲಿ ಜನಿಸಿದ ಕ್ರಿಸ್ಟೆನ್ ಸ್ಟುಕೆಲ್ 81ರಲ್ಲಿ ತಮ್ಮದೇ ಸ್ವಂತ ಡ್ರಾಮ ಗ್ರೂಪ್ ಅನ್ನು ಕಟ್ಟುತ್ತಾರೆ. ಇದಾದ ಕೇವಲ ಆರು ವರ್ಷಗಳಲ್ಲೇ ‘ಒಬೆರಮ್ಮೆರ್ಗೌ ಪ್ಯಾಷನ್ ಪ್ಲೇ’ ನಿರ್ದೇಶಕರಾಗಿದ್ದರು. 1981ರಿಂದ ಇಲ್ಲಿವರೆಗೂ ನಿರಂತರವಾಗಿ…
ಕಾಟೇರ ಸಿನಿಮಾದ ಬಳಿಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಿಲನಾ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದರು. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಸೇರಿದ ಬಳಿ ಸುಮಾರು ೭ ತಿಂಗಳ ಕಾಲ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಇದೀಗ ದರ್ಶನ್ ಜಾಮೀನಿನ ಮೇಲೆ ಹೊರ ಬಂದಿದ್ದು ಮತ್ತೆ ಶೂಟಿಂಗ್ ಶುರುವಾಗಲಿದೆ. ಈ ಮಧ್ಯೆ ದಿಡೀರ್ ಎಂದು ಚಿತ್ರತಂಡ ಚಿತ್ರದ ಟೈಟಲ್ ಬದಲಾವಣೆ ಮಾಡಿದೆ. ಸದ್ಯ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳು ಚಿತ್ರೀಕರಣ ಶುರುವಾಗಬಹುದು ಎನ್ನಲಾಗ್ತಿದೆ. ಇದೆಲ್ಲದರ ನಡುವೆ ನಾಳೆ ದರ್ಶನ್ ಹುಟ್ಟುಹಬ್ಬವಿದೆ. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆ ಬರ್ತಡೇ ಸೆಲೆಬ್ರೇಷನ್ ಮಾಡೋಕೆ ದರ್ಶನ್ ಬ್ರೇಕ್ ಹಾಕಿದ್ದಾರೆ. ಈ ಮಧ್ಯೆ ಡೆವಿಲ್’ ಚಿತ್ರದ ಟೈಟಲ್ ಕೊಂಚ ಬದಲಾವಣೆ ಮಾಡಲಾಗಿದೆ. ಈ ಮೊದಲು ಚಿತ್ರಕ್ಕೆ ‘ಡೆವಿಲ್’- ದಿ ಹೀರೊ ಎನ್ನುವ ಟೈಟಲ್ ಇತ್ತು. ಈಗ ಅದನ್ನು ‘ದಿ ಡೆವಿಲ್’ ಎಂದು ಬದಲಿಸಿರುವುದು…
ಗಸಗಸೆಯು ಸಸ್ಯದಿಂದ ಪಡೆಯುವ ಈ ಎಣ್ಣೆಬೀಜ ಬೆಳ್ಳುಳ್ಳಿ ಮತ್ತು ಸಾಸಿವೆಯ ಹೊರತಾಗಿ, ಭಾರತೀಯ ಅಡಿಗೆಮನೆಯಲ್ಲಿ ಕಂಡುಬರುವ ಸ್ಥಿರ ಮಸಾಲೆ ಪದಾರ್ಥವಾಗಿದೆ. ಇದನ್ನು ಹಿಂದಿಯಲ್ಲಿ ಖುಸ್ ಖುಸ್ ಎಂದೂ, ತಮಿಳಿನಲ್ಲಿ ಕಸಕಸ ಎಂದೂ, ತೆಲುಗಿನಲ್ಲಿ ಗಸಗಸುಲು ಎಂದೂ ಕರೆಯಲಾಗುವ, ಹೂಗಳಿಂದ ತುಂಬಿರುವ ಸಸ್ಯವಾದ ಗಸಗಸೆಯನ್ನು ಆಗ್ನೇಯ ಯೂರೋಪ್ ಮತ್ತು ಪೂರ್ವ ಹಾಗೂ ದಕ್ಷಿಣ ಏಷ್ಯಾದಾದ್ಯಂತ ಹೆಚ್ಚು ಬೆಳೆಯಲಾಗುತ್ತದೆ. ಗಸಗಸೆ ಮತ್ತು ಅದರ ಎಣ್ಣೆಯು ಮಹಿಳೆಯರ ಬಂಜೆತನ ನಿವಾರಣೆಗೆ ಪ್ರಯೋಜನಕಾರಿಯಾಗಿದೆ. ಇದು ಫಲವತ್ತತೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಗಸಗಸೆಯಲ್ಲಿರುವ ಲಿನಿನ್ ಅಂಶವು ಕಾಮೋತ್ತೇಜಕ ಗುಣ ಹೊಂದಿದ್ದು, ಇದು ಲೈಂಗಿಕಾಸಕ್ತಿಯನ್ನು ಹೆಚ್ಚಿಸಿ ಲೈಂಗಿಕ ಜೀವನವನ್ನು ಸುಧಾರಿಸುತ್ತದೆ. ಗಸಗಸೆಯಲ್ಲಿ ಮೆಗ್ನೀಷಿಯಂ ಅಂಶ ಸಮೃದ್ಧವಾಗಿದ್ದು, ಇದು ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಒತ್ತಡ ನಿವಾರಣೆಯಾಗಿ ಗುಣಮಟ್ಟದ ನಿದ್ರೆ ಮಾಡಲು ಸಹಕಾರಿಯಾಗಿದೆ. ಮಲಗುವ ಮೊದಲು ಗಸಗಸೆಯ ಟೀ ಅಥವಾ ಗಸಗಸೆಯ ಪೇಸ್ಟ್ ಅನ್ನು ಹಾಲಿನೊಂದಿಗೆ ಕುಡಿಯಬೇಕು. ಇದು ಶರೀರದ ಚಯಾಪಚಯ ಕ್ರಿಯೆ ಹೆಚ್ಚಿಸಿ, ನಿದ್ರಿಸಲು…
ಭಾರತದ ಎಲ್ಲ ಹಿಂದೂಗಳ ಮನೆಯಲ್ಲಿ ದೇವರ ಕೋಣೆಯೊಂದು ಇರ್ಲೇಬೇಕು. ದೇವರಿಗೆ ಪ್ರತ್ಯೇಕ ರೂಮಿಲ್ಲವೆಂದ್ರೂ ದೇವರ ಮೂರ್ತಿ ಮಾತ್ರ ಇದ್ದೇ ಇರುತ್ತದೆ. ಪ್ರತಿ ದಿನ ಬೆಳಿಗ್ಗೆ ದೇವರ ಪೂಜೆಯಲ್ಲಿ ಎಲ್ಲರು ಭಕ್ತಿಯಿಂದ ಮಾಡ್ತಾರೆ. ತಮ್ಮಿಷ್ಟದ ದೇವರನ್ನು ಪೀಠದಲ್ಲಿಟ್ಟು ಪೂಜೆ ಮಾಡ್ತಾರೆ. ಇನ್ನೂ ಶನಿ ದೇವನನ್ನು ಅತ್ಯಂತ ಕ್ರೂರ ದೇವತೆ ಎಂದು ಪರಿಗಣಿಸಲಾಗುತ್ತದೆ. ನ್ಯಾಯ ದೇವರು ಎಂದೂ ಶನಿಯನ್ನು ಕರೆಯಲಾಗುತ್ತದೆ. ಶನಿದೇವರು ಸೂರ್ಯದೇವ ಮತ್ತು ಅವರ ಪತ್ನಿ ಛಾಯಾರ ಮಗ. ನಾವು ಮಾಡಿದ ಕೆಲಸಕ್ಕೆ ಅನುಗುಣವಾಗಿ ಶನಿದೇವರು ಫಲವನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಅಂದ್ರೆ ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯ ಫಲ ಸಿಗುತ್ತದೆ ಮತ್ತು ಕೆಟ್ಟ ಕೆಲಸ ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆಯಿರುತ್ತದೆ. ದೇವರ ಮನೆಯಲ್ಲಿ ಲಕ್ಷ್ಮಿ, ಗಣಪತಿ, ಈಶ್ವರ, ಕೃಷ್ಣ, ಹನುಮಂತ ಹೀಗೆ ಅನೇಕ ದೇವರ ಮೂರ್ತಿ ಅಥವಾ ಫೋಟೋಗಳನ್ನಿಟ್ಟು ಜನರು ಪೂಜೆ ಮಾಡ್ತಾರೆ. ಆದರೆ ಶನಿದೇವನ ವಿಗ್ರಹ ಅಥವಾ ಫೋಟೋವನ್ನು ಇತರ ದೇವರುಗಳಂತೆ ಮನೆಯಲ್ಲಿ ಇಡುವುದಿಲ್ಲ. ಮನೆಯಲ್ಲಿ ಶನಿದೇವರ ಫೋಟೋಕ್ಕೆ…