Author: Author AIN

ಎಲೋನ್ ಮಸ್ಕ್ ನೇತೃತ್ವದ ಸರ್ಕಾರಿ ದಕ್ಷತೆ ಇಲಾಖೆ ಅಂತಾರಾಷ್ಟ್ರೀಯ ಬಜೆಟ್‌ನಲ್ಲಿ ವ್ಯಾಪಕ ಬದಲಾವಣೆ ತಂದಿದೆ. ಇದರ ಭಾಗವಾಗಿ ವಿದೇಶಿ ನೆರವು ನಿಧಿಯನ್ನು 723 ಮಿಲಿಯನ್ ಡಾಲರ್ ಕಡಿತಗೊಳಿಸಲು ನಿರ್ಧರಿಸಿದ್ದು ಈ ನಿರ್ಧಾರದ ಅಡಿಯಲ್ಲಿ, ಭಾರತ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವಾರು ದೇಶಗಳಿಗೆ ಹಂಚಿಕೆ ಮಾಡಲಾಗುತ್ತಿದ್ದ ಹಣವನ್ನು ನಿಲ್ಲಿಸಲಾಗಿದೆ. ಭಾರತದಲ್ಲಿ ಮತದಾರರ ಜಾಗೃತಿ ಹೆಚ್ಚಿಸಲು ಉದ್ದೇಶಿಸಲಾದ ಹಣವನ್ನು ರದ್ದುಗೊಳಿಸುವ DOGE ನಿರ್ಧಾರಕ್ಕೆ ಬಿಜೆಪಿ ನಾಯಕ ಅಮಿತ್ ಮಾಳವೀಯ ಪ್ರತಿಕ್ರಿಯಿಸಿದ್ದಾರೆ. Xನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತದಲ್ಲಿ ಮತದಾರರ ಮತದಾನಕ್ಕೆ ಮಿಲಿಯನ್ ಡಾಲರ್ ಹಣ ಬಳಸಿರುವುದು ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಹೊರಗಿನ ಹಸ್ತಕ್ಷೇಪವಾಗಿರುವುದು ಸ್ಪಷ್ಟವಾಗಿದೆ. ಇದರಿಂದ ಯಾರು ಲಾಭ ಪಡೆಯುತ್ತಿದ್ದರು? ಖಂಡಿತವಾಗಿಯೂ ಆಡಳಿತ ಪಕ್ಷವಲ್ಲ! ಎಂದು ಬರೆದಿದ್ದಾರೆ. ಭಾರತದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು 21 ಮಿಲಿಯನ್ ಡಾಲರ್, ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ತಿತ್ವವನ್ನು ಬಲಪಡಿಸಲು 29 ಮಿಲಿಯನ್ ಡಾಲರ್, ಮೊಜಾಂಬಿಕ್‌ನಲ್ಲಿ ಸ್ವಯಂಪ್ರೇರಿತ ಪುರುಷ ಸುನ್ನತಿ ಕಾರ್ಯಕ್ರಮಕ್ಕೆ 10 ಮಿಲಿಯನ್ ಡಾಲರ್ ಮತ್ತು ನೇಪಾಳದಲ್ಲಿ “ಹಣಕಾಸು ಒಕ್ಕೂಟ”…

Read More

ತುಮಕೂರು: ಕರ್ನಾಟಕದಲ್ಲಿ ಮತ್ತೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿ, ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕುಣಿಗಲ್ ತಾಲೂಕಿನ ಕಂಪ್ಲಾಪುರ ಗ್ರಾಮದಲ್ಲಿ ನಡೆದಿದೆ. ಬಾದಾಮಿ ತಾಲೂಕಿನ ಗುಳೇದಗುಡ್ಡ ಮೂಲದ  ಮಹಿಳೆ ಕಸ್ತೂರಿ (43) ಸಾವನ್ನಪ್ಪಿದ ದುರ್ಧೈವಿಯಾಗಿದ್ದು, ಬಸವರಾಜು, ಶಾಂತಮ್ಮ, ವಿಶ್ವನಾಥ್, ಪಾವನಿಗೆ ಗಂಭೀರ ಗಾಯಗಳಾಗಿವೆ. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ ಮೈಸೂರಿಗೆ ತೆರಳುತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. ಇನ್ನೂ ಗಾಯಾಳುಗಳಿಗೆ ಕುಣಿಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More

ಬೆಂಗಳೂರು: ಪ್ರೀತಿ ಮತ್ತು ಪ್ರಣಯ ಸನ್ನೆಗಳಿಂದ ತುಂಬಿದ ವಾರದ ನಂತರ, ಆಂಟಿ-ವ್ಯಾಲೆಂಟೈನ್ಸ್ ವೀಕ್ ಬಂದಿದೆ. ಫೆಬ್ರವರಿ 15 ರಂದು ಸ್ಲ್ಯಾಪ್ ಡೇಯೊಂದಿಗೆ ಪ್ರಾರಂಭವಾಗಿ ಫೆಬ್ರವರಿ 21 ರಂದು ಬ್ರೇಕ್-ಅಪ್ ಡೇಯೊಂದಿಗೆ ಮುಕ್ತಾಯಗೊಳ್ಳುವ ಈ ವಾರ, ಪ್ರೇಮಿಗಳ ನಂತರದ ಭಾವನೆಗಳ ಬಗ್ಗೆ ಒಂದು ತಮಾಷೆಯ ನೋಟವನ್ನು ನೀಡುತ್ತದೆ. ಈ ದಿನಗಳಲ್ಲಿ, ಫೆಬ್ರವರಿ 17 ರಂದು ಆಚರಿಸಲಾಗುವ ಸುಗಂಧ ದ್ರವ್ಯ ದಿನವು ಸುಗಂಧ ಮತ್ತು ಅದರ ಮೋಡಿಮಾಡುವ ಶಕ್ತಿಯ ಆಚರಣೆಯಾಗಿ ಎದ್ದು ಕಾಣುತ್ತದೆ. ಐಷಾರಾಮಿ ಪರಿಮಳಗಳಲ್ಲಿ ಪಾಲ್ಗೊಳ್ಳಲು, ನಿಮ್ಮನ್ನು ಮುದ್ದಿಸಲು ಮತ್ತು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುವ ಹೊಸ ಸುಗಂಧಗಳನ್ನು ಅನ್ವೇಷಿಸಲು ಇದು ಸೂಕ್ತ ಸಂದರ್ಭವಾಗಿದೆ. https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ ಸುಗಂಧ ದ್ರವ್ಯ ದಿನದ ಮೂಲವು ಅಸ್ಪಷ್ಟ ಮತ್ತು ದಾಖಲೆರಹಿತವಾಗಿಯೇ ಉಳಿದಿದೆ, ಆದರೆ ಇದನ್ನು ನವೀಕರಣ ಮತ್ತು ಸ್ವ-ಆರೈಕೆಯ ದಿನವೆಂದು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ, ಜನರು ತಮ್ಮ ಸಹಿ ಪರಿಮಳಗಳನ್ನು ಸ್ವೀಕರಿಸುತ್ತಾರೆ, ಹೊಸ ಆರಂಭಕ್ಕೆ ಹೆಜ್ಜೆ ಹಾಕುವಾಗ ತಾಜಾತನದ ಸ್ಪರ್ಶವನ್ನು ಚಿಮ್ಮಿಸುತ್ತಾರೆ. ಅದು ಗರಿಗರಿಯಾದ, ಮರದ ಪರಿಮಳವಾಗಿರಲಿ,…

Read More

ಜಗತ್ತಿನ ಶ್ರೀಮಂತ ವ್ಯಕ್ತಿ, ಟ್ವಿಟ್ಟರ್‌ ಸಂಸ್ಥೆ ಮಾಲಿಕ ಎಲಾನ್ ಮಸ್ಕ್​ ನನಗೆ ಹಲವಾರು ದೇಶದಲ್ಲಿ ಹಲವಾರು ಜೈವಿಕ ಮಕ್ಕಳು ಇದ್ದಾರೆ ಅಂತ ಹೇಳಿಕೊಂಡಿದ್ದಾರೆ. ವಿರ್ಯದಾನದ ಮೂಲಕ ನಾನು ಹಲವು ಮಕ್ಕಳಿಗೆ ಜನ್ಮ ನೀಡಿದ್ದೇನೆ ಎಂದು ಸ್ವತಃ ಮಸ್ಕ್‌ ಹೇಳಿದ್ದರು. ಈಗ ಖ್ಯಾತ ಇನ್ಫ್ಲೂಯೆನ್ಸರ್ ಹಾಗೂ ಅಂಕಣಕಾರ್ತಿ ಆಶ್ಲೇಯ್​ ಎಸ್​​ಟಿ ಕ್ಲೇರ್​, ನಾನು ಎಲಾನ್​ ಮಸ್ಕ್​ನ 13ನೇ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ನಾನು ಇತ್ತೀಚೆಗೆ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದೇನೆ. ಅದರ ತಂದೆ ಎಲಾನ್ ಮಸ್ಕ್. ನಾನು ಎಲಾನ್​ ಮಸ್ಕ್​ನ 13ನೇ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಹೇಳುವ ಮೂಲಕ ಖ್ಯಾತ ಇನ್ಫ್ಲೂಯೆನ್ಸರ್ ಹಾಗೂ ಅಂಕಣಕಾರ್ತಿ ಆಶ್ಲೇಯ್​ ಎಸ್​​ಟಿ ಕ್ಲೇರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಇದೀಗ ಈ ಬಗ್ಗೆ ಎಲಾನ್‌ ಮಾಸ್ಕ್‌ ಸ್ಪಷ್ಟನೆ ನೀಡಿದ್ದಾರೆ. ಆಶ್ಲೇಐ ಕ್ಲೇಸ್‌ ಪೋಸ್ಟ್ ಗೆ ಎಲಾನ್‌ ಮಸ್ಕ್‌ ವಾವ್ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಐದು ತಿಂಗಳ…

Read More

ಬೆಂಗಳೂರು: ಚಿನ್ನ ಮಾಡಿಸಿಕೊಳ್ಳಬೇಕು ಎಂದಾದರೆ ಬೆಲೆ ಇಳಿಕೆಯಾಗುವುದು ಮುಖ್ಯವಾಗಿದೆ. ಆದರೂ ಒಮ್ಮೊಮ್ಮೆ ಪರಿಸ್ಥಿತಿಗೆ ಕಟ್ಟುಬಿದ್ದು ಬೆಲೆ ಏರಿಕೆಯ ಸಮಯದಲ್ಲೇ ಸಾಕಷ್ಟು ಗ್ರಾಹಕರು ಚಿನ್ನ ಖರೀದಿಸುತ್ತಾರೆ. ಬೆಲೆ ತಗ್ಗಿದರೆ ನಮಗೊಂದಿಷ್ಟು ಲಾಭವಿತ್ತೆಂದು ಸಾಕಷ್ಟು ಜನ ಈ ಸಮಯದಲ್ಲಿ ಭಾವಿಸುತ್ತಾರೆ. ಚಿನ್ನದ ಮಾರುಕಟ್ಟೆಯೇ ಹಾಗೆ ಬೆಲೆ ಯಾವಾಗ ಏರುತ್ತದೆ? ಯಾವಾಗ ಇಳಿಯುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಚಿನ್ನ ಖರೀದಿಗೂ ಮುನ್ನ ಇಂದಿನ ರೇಟ್ ಹೇಗಿದೆ ಎಂಬುದನ್ನು ತಿಳ್ಕೊಳ್ಳೋಣ https://ainlivenews.com/do-you-want-wealth-to-come-looking-for-you-then-you-shouldnt-buy-a-broom-these-days/ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಗ್ರಾಮ್​ಗೆ 50 ರೂನಷ್ಟು ಏರಿಕೆ ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 55 ರೂನಷ್ಟು ಹೆಚ್ಚಳವಾಗಿ, 8,662 ರೂ ಮುಟ್ಟಿದೆ. ವಿದೇಶಗಳಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ. ಬೆಳ್ಳಿ ಬೆಲೆಯ ಯಥಾಸ್ಥಿತಿ ಇಂದೂ ಕೂಡ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 79,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 86,620 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ…

Read More

ಸಾಫ್ಟ್ ಪೋರ್ನ್ ಸಿನಿಮಾದಲ್ಲಿ ಭಾರತೀಯ ಸೈನಿಕನ ಪಾತ್ರ ಬಳಸಿದ್ದಕ್ಕಾಗಿ ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ತೀವ್ರ ಆಕ್ರೋಶ ಭುಗಿಲೆದ್ದಿದೆ. ಈ ಬೆನ್ನಲ್ಲೇ ಭಾರತೀಯ ಸೈನಿಕರಿಗೆ ಅಪಮಾನ ಎಸಗಿದ್ದಾರೆ ಎಂಬ ಆರೋಪದ ಮೇಲೆ ಏಕ್ತಾ ಕಪೂರ್ ವಿರುದ್ಧ ದೂರು ದಾಖಲಾಗಿದೆ. ಕಿರುತೆರೆಯ ಕಿಂಗ್ ಮೇಕರ್ ಎಂದೇ ಖ್ಯಾತಿ ಘಳಿಸಿರುವ ಏಕ್ತಾ ಕಪೂರ್‌ ಹಲವಾರು ಟಿವಿ ಧಾರಾವಾಹಿಗಳ ನಿರ್ಮಾಪಕಿಯೂ ಹೌದು. ಆಲ್ಟ್ ಬಾಲಾಜಿ ಹೆಸರಿನ ಒಟಿಟಿಯನ್ನೂ ಸಹ ನಡೆಸುತ್ತಿದ್ದಾರೆ. ಆಲ್ಟ್‌ ಬಾಲಾಜಿ ಒಟಿಟಿಯಲ್ಲಿ ಸಾಫ್ಟ್ ಪಾರ್ನ್ ರೀತಿಯ ವೆಬ್ ಸರಣಿ, ಸಿನಿಮಾಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ರೀತಿಯ ವೆಬ್ ಸೀರೀಸ್ ನಲ್ಲಿ ಸೈನಿಕನ ಪಾತ್ರವನ್ನು ಬಳಸಿಕೊಂಡು ಸಮವಸ್ತ್ರದಲ್ಲಿದ್ದಾಗಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ದೃಶ್ಯವನ್ನು ಚಿತ್ರೀಕರಿಸಲಾಗಿತ್ತು. ಸೈನಿಕನಿಗೆ ಅವಮಾನ ಮಾಡಲಾಗಿದೆ ಎಂದು ಯೂಟ್ಯೂಬರ್ ವಿಕಾಸ್ ಪಾಠಕ್ (ಹಿಂದೂಸ್ತಾನಿ ಬಾವ್) ಪೊಲೀಸ್ ಠಾಣೆಗೆ ಏಕ್ತಾ ಕಪೂರ್ ವಿರುದ್ಧ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಎಫ್​ಐಆರ್ ರಿಜಿಸ್ಟರ್‌ ಮಾಡಿಕೊಂಡಿದ್ದರು. ಆದರೆ ವಿಚಾರಣೆ ನಡೆಸಿರಲಿಲ್ಲ. ಇದೀಗ ನ್ಯಾಯಾಲಯ ಮಧ್ಯಪ್ರವೇಶ…

Read More

ಸ್ಯಾಂಡಲ್‌ ವುಡ್‌ ಸ್ಟಾರ್‌ ನಟ ಡಾಲಿ ಧನಂಜಯ್‌ ಡಾಕ್ಟರ್‌ ಧನ್ಯತಾ ಜೊತೆ ಮೈಸೂರಿನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಾಲಿ ಮದುವೆಯನ್ನು ಹಲವರು ಹೊಗಳುತ್ತಿದ್ದರೆ ಇನ್ನೂ ಕೆಲವರು ಲೇವಡಿ ಮಾಡಿದ್ದಾರೆ.  ‘‘ಬುದ್ಧ, ಬಸವ ಅಂದುಕೊಂಡಿದ್ದ ಡಾಲಿ, ಸಾಂಪ್ರದಾಯಿಕ ಆಚರಣೆಗಳ ಮೂಲಕ ಮದುವೆ ಆಗಿದ್ದಾರೆ. ಅಷ್ಟೆಲ್ಲ ಮಾತನಾಡುತ್ತಿದ್ದ ಧನಂಜಯ ಯಾಕೆ ಮಂತ್ರ ಮಾಂಗಲ್ಯ ಆಗಿಲ್ಲ? ಯಾಕೆ ಸಾಂಪ್ರದಾಯದ ಮೊರೆ ಹೋಗಿದ್ದು..’’ ಅನ್ನೋ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಇದೀಗ ಮದುವೆಗಾಗಿ ಆಚರಿಸಿದ ಸಂಪ್ರದಾಯದ ಬಗ್ಗೆ ಧನಂಜಯ್‌ ಮಾತನಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಧನಂಜಯ.. ಹಿರಿಯರಿಗೆ ಕೆಲವು ನಂಬಿಕೆಗಳಿಂದ ಖುಷಿ ಸಿಗುತ್ತೆ ಅಂತಾದರೆ ಅದನ್ನು ಪಾಲಿಸುವುದು ತಪ್ಪು ಅಂತಾ ನನಗೆ ಅನಿಸಿಲ್ಲ. ಎಲ್ಲದಕ್ಕೂ ಉತ್ತರ ಕೊಡಲು ಬರಲ್ಲ. ಆದರೆ ಆಸ್ತಿಕತೆ ಮತ್ತು ನಾಸ್ತಿಕತೆ ಬಗ್ಗೆ ಮಾತನಾಡುತ್ತೇನೆ. ಕಾಯುವಂತಹ ನಂಬಿಕೆಗಳು ಬೇರೆ. ಮೂಢನಂಬಿಕೆಗಳು ಬೇರೆ. ಆಚರಣೆ ಅಂತಾ ಬಂದಾಗ ನಮ್ಮ ಸಮಾಜದಲ್ಲಿ ತುಂಬಾ ತರಹದ ಆಚರಣೆಗಳಿವೆ. ಉದಾಹರಣೆಗೆ ನಮ್ಮ ಚಿಕ್ಕಪ್ಪ ಮದುವೆ ಸಂದರ್ಭದಲ್ಲಿ ಕೊಂಡ…

Read More

ಮೈಸೂರು: ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ಅವರ ಹೆಸರಿನಲ್ಲಿ ಮೈಸೂರಿನ ಅನ್ವೇಷಣಾ ಸೇವಾ ಟ್ರಸ್ಟ್ ಕೊಡಮಾಡುವ “ಧ್ವನಿ ಕೊಟ್ಟ ಧಣಿ” ರಾಜ್ಯ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ ಅಧ್ಯಕ್ಷರು ಹಾಗೂ ಸಂಶೋಧಕರಾದ ಮಾಲತೇಶ್ ಅರಸ್ ಅವರಿಗೆ ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ಅವರು ಪ್ರದಾನ ಮಾಡಿದರು. ಮೈಸೂರು ನಗರ‌ದ ಜೆ. ಎಲ್. ಬಿ ರಸ್ತೆಯ ದಿ ಇನ್ಸಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಫೆಬ್ರವರಿ 16 ರ ಭಾನುವಾರ ನಡೆದ ಅದ್ದೂರಿ ಸಮಾರಂಭದಲ್ಲಿ ನಾಡಿನ ಆರು ಜನ ಸಾಧಕರಾದ ಮೈಸೂರಿನ ಹಿರಿಯ ಪತ್ರಕರ್ತ, ಚಿಂತಕ ಟಿ. ಗುರುರಾಜ್, ಸಂಘಟಕ, ಹೋರಾಟಗಾರ ರಮೇಶ್ ಸುರ್ವೆ, ಅಖಿಲಭಾರತ ಅಂಚೆ ನೌಕರರ ಸಂಘ ಅಧ್ಯಕ್ಷರಾದ ಎನ್.ಕೃಷ್ಣ, ಹಾಸನ ಜಿಲ್ಲೆಯ ಖ್ಯಾತ ಯೋಗ ಶಿಕ್ಷಕಿ ಪ್ರೇಮಾ ಮಂಜುನಾಥ್, ಚಿತ್ರದುರ್ಗದ ವಕೀಲರು ಹಾಗೂ ಸಂಶೋಧಕ ಮಾಲತೇಶ್ ಅರಸ್, ಚಿಂತಕ ಹಿರೇನಲ್ಲೂರು ಶಿವು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಖಿಲ ಭಾರತ…

Read More

ನಟ ಡಾಲಿ ಧನಂಜಯ್‌ ಹಾಗೂ ಧನ್ಯತಾ ಮೈಸೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಾಲಿ ಹಾಗೂ ಧನ್ಯತಾ ಮದುವೆಗೆ ಸಿನಿಮಾ ರಂಗದವರು, ಅಭಿಮಾನಿಗಳು, ಸ್ನೇಹಿತರು, ರಾಜಕೀಯ ಗಣ್ಯರು ಸೇರಿದಂತೆ ಹಲವರು ಭಾಗಿಯಾಗಿ ಶುಭ ಹಾರೈಸಿದ್ದಾರೆ. ಡಾಲಿ ಆಪ್ತ ಗೆಳೆಯ ನಟ ವಸಿಷ್ಠ ಸಿಂಹ ಕೂಡ ಮದುವೆ ಸಮಾರಂಭಕ್ಕೆ ಆಗಮಿಸಿ ನವದಂಪತಿಗೆ ವಿಶ್‌ ಮಾಡಿದ್ದಾರೆ. ಈ ವೇಳೆ ಸ್ನೇಹಿತನಿಗೆ ಸ್ಪೆಷಲ್‌ ಗಿಫ್ಟ್‌ ನೀಡಿದ್ದಾರೆ. ಪ್ರಾಣ ಸ್ನೇಹಿತನ ಮದುವೆಗೆ ಆಗಮಿಸಿದ ವಸಿಷ್ಠ ಸಿಂಹ ಮೊದಲು ದಂಪತಿಗೆ ವಿಶ್‌ ಮಾಡಿದ್ದಾರೆ. ಬಳಿಕ ಗೋಲ್ಡ್‌ ಚೈನ್‌ ಅನ್ನು ಡಾಲಿ ಕತ್ತಿಗೆಗೆ ಹಾಕಿ ಪ್ರೀತಿಯ ಮುತ್ತು ನೀಡಿ ವಿಶ್‌ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. “ಟಗರು” ಸಿನಿಮಾದಲ್ಲಿ ಧನಂಜಯ್‌ ಹಾಗೂ ವಸಿಷ್ಠ ಸಿಂಹ ನೆಗೆಟಿವ್‌ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಧನಂಜಯ್‌ ಪಾತ್ರದ ಹೆಸರು ಡಾಲಿ ಹಾಗೂ ವಸಿಷ್ಠ ಪಾತ್ರದ ಹೆಸರು ಚಿಟ್ಟೆ ಎಂದಿತ್ತು. ಈ ಸಿನಿಮಾದಲ್ಲಿ ಇಬ್ಬರೂ ಪ್ರಾಣ ಸ್ನೇಹಿತರ ಪಾತ್ರದಲ್ಲಿ ಕಾಣಿಸಿಕೊಂಡಿದ್ರು.…

Read More

ರೀಲ್ಸ್‌ ಮೂಲಕ ಖ್ಯಾತಿ ಘಳಿಸಿ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗು ಸದ್ಯ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಬ್ಯುಸಿಯಾಗಿರುಗ ಬ್ರೋ ಗೌಡ ಅಲಿಯಾಸ್‌ ಶಮಂತ್ ಗೌಡ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿರುವ ಮೇಘನಾ ಎಂಬಾಕೆಯನ್ನು ಶಂಮತ್ ಗೌಡ ಮದುವೆಯಾಗುತ್ತಿದ್ದು ಇತ್ತೀಚೆಗೆ ಸಿಂಪಲ್‌ ಅಗಿ ಉಂಗುರು ಬದಲಾಯಿಸಿಕೊಂಡಿದ್ದಾರೆ. ಶಮಂತ್‌ ಹಾಗೂ ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಇವರಿಬ್ಬರೂ ಜೊತೆಯಾಗಿ ರೀಲ್ಸ್ ಕೂಡಾ ಮಾಡುವ ಮೂಲಕ ಗಮನ ಸೆಳೆದಿದ್ದರು. ಪ್ರೇಮಿಗಳ ದಿನದಂದು ಇವರಿಬ್ಬರು ಪ್ರೀತಿಗೆ ಸಂಬಂಧಿಸಿದ ಸ್ಪೆಷಲ್ ವಿಡಿಯೋ ಒಂನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಶಮಂತ್‌ ಗೌಡ ಪ್ರೀತಿಸಿದ ಹುಡುಗಿಯ ಜೊತೆಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟ ಶಮಂತ್ ತನ್ನ ಗೆಳತಿ ಮೇಘನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ನಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ತಿರುವ ಶಮಂತ್ ಗೌಡ ಕಿರುತೆರೆಯಿಂದ ಬೆಳ್ಳಿ ತೆರೆಗೆ ಕಾಲಿಡೋಕೆ ಸಜ್ಜಾಗಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಹೊಸ…

Read More