ಹೊಸದಿಲ್ಲಿ: ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮಹಿಳೆ ಶೆಹಝಾದಿ ಎಂಬ ಮಹಿಳೆಯನ್ನು ಅಬುಧಾಬಿಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಮಾಡಲಾಗಿದೆ. ಮಗುವೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಅಬುಧಾಬಿ ನ್ಯಾಯಾಲಯ 33 ವರ್ಷದ ಶೆಹಝಾದಿಗೆ ಈ ಘೋರವಾದ ಶಿಕ್ಷೆಯನ್ನು ನೀಡಿದೆ. ಶೆಹಝಾದಿಯನ್ನು 24 ಗಂಟೆಯೊಳಗಡೆ ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿದೆ ಮತ್ತು ವಿಷಯವು ಪರಿಗಣನೆಯಲ್ಲಿದೆ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ. ದುಬೈಯ ಅಲ್ ವತ್ಬಾ ಜೈಲಿನಲ್ಲಿರುವ ಖೈದಿ ಶಹಝಾದಿ ತನ್ನ ತಂದೆಗೆ ದೂರವಾಣಿ ಕರೆ ಮಾಡಿ, ಅಬ್ಬೂ.. ಇದು ನನ್ನ ಕೊನೆಯ ಕರೆ. ಈಗ ನನ್ನನ್ನು ಬೇರೆ ಕೋಣೆಗೆ ಸ್ಥಳಾಂತರಿಸಲಾಗಿದೆ. ನಾನು ನಿಮಗೆ ಮತ್ತೆ ಕರೆ ಮಾಡಲು ಸಾಧ್ಯವಾಗದೆ ಇರಬಹುದು ಎಂದು ತನಗೆ ಮರಣದಂಡನೆ ಶಿಕ್ಷೆ ವಿಧಿಸಿರುವ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದಾರೆ. ಇದರ ಜೊತೆಗೆ ಶಹಝಾದಿ ತನ್ನ ಕುಟುಂಬಕ್ಕೆ ಸಾಂತ್ವನವನ್ನು ಹೇಳಿದ್ದಾರೆ. ಶಹಝಾದಿಯ ಕರೆಯ ಬಳಿಕ ಅವರ ಕುಟುಂಬವು ಕಣ್ಣೀರಿನಲ್ಲಿದೆ. ತಂದೆ ಶಬ್ಬೀರ್ ಖಾನ್…
Author: Author AIN
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಮಸ್ಕ್ ತಮ್ಮ ಹೆಸರು ಬದಲಾಯಿಸಿಕೊಳ್ಳಲು ಭರ್ಜರಿ ಆಫರ್ ನೀಡಿದ್ದು ಇದನ್ನು ಕೇಳಿ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ. ಈ ಬಾರಿ ಮಸ್ಕ್ ವಿಕಿಪೀಡಿಯಾ ಬಗ್ಗೆ ಮಾತನಾಡಿದ್ದಾರೆ. ವಿಕಿಪೀಡಿಯಾ ಅನ್ನೋದು ಎಲ್ಲರಿಗೂ ಉಚಿತವಾಗಿ ಮಾಹಿತಿ ನೀಡುವ ವೆಬ್ಸೈಟ್. ಆದ್ರೆ ಮಸ್ಕ್ ವಿಕಿಪೀಡಿಯಾವನ್ನು ಟೀಕಿಸಿದ್ದಾರೆ. ಅಷ್ಟೇ ಅಲ್ಲ, ವಿಕಿಪೀಡಿಯಾ ತನ್ನ ಹೆಸರನ್ನ ಬದಲಾಯಿಸಿದರೆ 8,600 ಕೋಟಿ ರೂಪಾಯಿ ಕೊಡ್ತೀನಿ ಅಂತ ಹೇಳಿದ್ದಾರೆ. ವಿಕಿಪೀಡಿಯಾ ಹೆಸರನ್ನ ಬದಲಿಸೋಕೆ ಮಸ್ಕ್ 8,600 ಕೋಟಿ ರೂಪಾಯಿ ಕೊಡೋಕೆ ಮುಂದೆ ಬಂದಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಇದಕ್ಕೆ ಸಂಬಂಧಿಸಿದಂತೆ ಒಬ್ಬರು “ಇದು ಇನ್ನೂ ವ್ಯಾಲಿಡ್ ಆಫರ್ ಆಗಿದೆಯಾ?” ಅಂತ ಮಸ್ಕ್ ಅವರನ್ನ ಕೇಳಿದರು. ಅದಕ್ಕೆ ಮಸ್ಕ್ “ಹೌದು, ಆಫರ್ ಇನ್ನೂ ಇದೆ. ಬನ್ನಿ, ಹೆಸರನ್ನು ಬದಲಾಯಿಸಿ” ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ಮಸ್ಕ್ ವಿಕಿಪೀಡಿಯಾವನ್ನ ‘ಡಿಕಿಪೀಡಿಯಾ’ ಎಂದು ಬದಲಾಯಿಸಬೇಕೆಂದು ಹೇಳಿದ್ದರು.…
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರರನ್ನು ಬದಲಿಸಬೇಕು ಎಂದು ಸಮರ ಸಾರಿ, ಭಿನ್ನಮತೀಯರ ಗುಂಪು ಕಟ್ಕೊಂಡು ದೆಹಲಿ ಯಾತ್ರೆ ಮಾಡಿದ್ದ ಯತ್ನಾಳ್ಗೆ ಹೈಕಮಾಂಡ್ ಶಾಕ್ ಕೊಟ್ಟಿತ್ತು. ಕೇಂದ್ರ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿ 72 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿತ್ತು. https://ainlivenews.com/do-you-know-how-to-detect-fake-numbers-on-whatsapp-here-is-the-complete-information/ ಇದೀಗ ಕೇಂದ್ರ ಶಿಸ್ತು ಸಮಿತಿ ನೋಟಿಸ್ಗೆ ಯತ್ನಾಳ್ 9 ಪುಟಗಳ ಉತ್ತರ ನೀಡಿದ್ದಾರೆ. ಇ-ಮೇಲ್ ಮೂಲಕ ಉತ್ತರ ನೀಡಿದ್ದಾರೆ. ಇದರೊಂದಿಗೆ, ನೋಟಿಸ್ ದೊರೆತ 72 ಗಂಟೆಗಳ ಒಳಗಾಗಿಯೇ ಅವರು ಉತ್ತರ ನೀಡಿದಂತಾಗಿದೆ. ಶಿಸ್ತು ಸಮಿತಿಯ ನೋಟಿಸ್ಗೆ ಉತ್ತರ ನೀಡುವುದಕ್ಕೆ ಏನೂ ಇಲ್ಲ ಎಂದು ಯತ್ನಾಳ್ ಕೆಲವು ದಿನಗಳ ಹಿಂದೆ ಹೇಳಿದ್ದರು. ಯತ್ನಾಳ್ ನೀಡಿದ ಉತ್ತರವೇನು? ಬಿಜೆಪಿ ಕೇಂದ್ರ ಶಿಸ್ತು ಸಮಿತಿಗೆ ಯತ್ನಾಳ್ ನೀಡಿರುವ ಉತ್ತರವೇನು ಎಂಬುದರ ವಿವರ ಸದ್ಯ ಬಹಿರಂಗವಾಗಿಲ್ಲ. ಆದಾಗ್ಯೂ, ವಿಜಯೇಂದ್ರ ವಿರುದ್ಧ ದೂರುಗಳ ಸರಮಾಲೆಯನ್ನೇ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ರಾಜಕೀಯ ಮಾಡುತ್ತಿದೆ. ನಾನು ಯಾವುದೇ ಬಣ ರಾಜಕೀಯ…
ಮೊದಲ ಸಿನಿಮಾದಲ್ಲೇ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟ ನಾಗ ಶೌರ್ಯ. ರಾತ್ರೋ ರಾತ್ರಿ ಸ್ಟಾರ್ ಆಗಿ ಮಿಂಚಿದ ನಾಗಶೌರ್ಯ ಇತ್ತೀಚೆಗೆ ಸಖತ್ ಸೈಲೆಂಟ್ ಆಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಸಿನಿಮಾಗಳು ಸೋಲುತ್ತಿದ್ದರಿಂದ ಇದೀಗ ಸಿನಿಮಾಗೆ ಬ್ರೇಕ್ ತೆಗೆದುಕೊಂಡು ಮದುವೆ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೋಲಿನ ಕಾರಣದಿಂದಾಗಿ ನಾಗಶೌರ್ಯ ಸೈಲೆಂಟ್ ಆಗಿದ್ದಾರೆ. ಹೇಗಾದರು ಮಾಡಿ ಹಿಟ್ ಸಿನಿಮಾ ಮಾಡಬೇಕು ಎಂದು ಸಖತ್ ವರ್ಕೌಟ್ ಮಾಡ್ತಿದ್ದಾರೆ. ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ರೆ ಸಿನಿಮಾಗಳು ಮಾತ್ರ ಮಕಾಡೆ ಮಲಗುತ್ತಿವೆ. ಇದೀಗ ನಾಗಶೌರ್ಯ ತಮ್ಮ ಖಾಸಗಿ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ನಾಗ ಶೌರ್ಯ ಅವರ ತಾಯಿ ಉಷಾ ಖಾಸಗಿ ಚಾನೆಲ್ ಒಂದರಲ್ಲಿ ನಡೆಸಲಾದ ಸಂದರ್ಶನದಲ್ಲಿ ತಮ್ಮ ಮಗನ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ. ಮದುವೆ ತನಕ ನಿಮ್ ಜೊತೆ ಇರ್ತೀನಿ, ಆಮೇಲೆ ದೂರ ಹೋಗುತ್ತೀನಿ ಎಂದು ಶೌರ್ಯ ಹೇಳಿದ್ದನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಈ ವಿಚಾರ ಇದೀಗ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ನಾಗಶೌರ್ಯ ಅವರ ತಾಯಿ ಉಷಾ ಅವರು…
ಬೆಳಗಾವಿ: ನಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯ ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಬಣಗಳು ಇಲ್ಲ. ಪ್ರತಿಷ್ಠೆ ಇದೆ. ಬಿಜೆಪಿಯಲ್ಲಿ ಪ್ರತಿಷ್ಠೆ ಹಾಗೂ ಬಣ ಜೊತೆಗೆ ದೊಡ್ಡ ಬಿರುಕು ಮೂಡಿದೆ. ನಮ್ಮಲ್ಲಿ ಎಲ್ಲ ಶಾಸಕರು, ಕಾರ್ಯಕರ್ತರು ಎಲ್ಲರೂ ಸರಿಯಾಗಿ ಆರೋಗ್ಯಕರವಾಗಿದ್ದೇವೆ. ನಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯ ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ ಎಂದರು. https://ainlivenews.com/be-careful-there-are-foods-that-weaken-the-immune-system/ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾವಾಗ ಮಾಡಬೇಕೆಂದು ಅವಾಗ ಮಾಡುತ್ತಾರೆ ಎಂದರು.ಪ್ರಕಾಶ್ ಹುಕ್ಕೇರಿ ಹಿರಿಯರಿದ್ದಾರೆ. ಅವರಿಗೆ ಸಿಎಂ ಸ್ಥಾನ ಸಿಗಬೇಕಿತ್ತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾಮರ್ಥ್ಯ ಬಹಳಷ್ಟು ಜನರಿಗೆ ಇರುತ್ತದೆ. ಸಿಎಂ ಆಗುವುದು ಒಬ್ಬರೇ ತಾನೆ ಎಂದರು.
ಬೋಸ್ಟನ್: ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ನೀತಿಗಳ ವಿರುದ್ಧ ಅಮೆರಿಕದ ಕೆಲವೆಡೆ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ‘ಫ್ರೆಸಿಡೆಂಟ್ಸ್ ‘ದಿನವಾದ ನಿನ್ನೆ ಬೋಸ್ಟನ್ ಸೇರಿದಂತೆ ಕೆಲವಡೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಡೊನಾಲ್ಡ್ ಟ್ರಂಪ್ ಹಾಗೂ ಎಲೋನ್ ಮಸ್ಕ್ ಅವರ ಜನ ವಿರೋಧಿ ನೀತಿಗಳನ್ನು ಖಂಡಿಸಿ ಭೀದಿಗಿಳಿದು ಹೋರಾಟ ನಡೆಸಿದ್ದಾರೆ. ಅಧ್ಯಕ್ಷರ ದಿನದಂದು ರಾಜರಿಲ್ಲ” ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಫೆಡರಲ್ ವಲಸೆ ಜಾರಿ ಮಸೂದೆ ವಿರೋಧಿಸಿ ಅರಿಜೋನಾ ಸ್ಟೇಟ್ ಹೌಸ್ ಗೆ ನುಗ್ಗಲು ಪ್ರಯತ್ನಿಸಿದರು. ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದಲ್ಲಿ ನೂರಾರು ಪ್ರತಿಭಟನಾಕಾರರು “ನನ್ನ ಅಧ್ಯಕ್ಷರ ದಿನವಲ್ಲ” ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಸಹಸ್ತಾರು ಜನರು ಸೇರಿ ‘No Kings’ ಥೀಮ್ ಅಡಿ ಪ್ರತಿಭಟನೆ ಆಯೋಜಿಸಿದ್ದರು. ಎರಡು ವಾರಗಳಲ್ಲಿ ಅಮೆರಿಕದಾದ್ಯಂತ ನಡೆದ ಅತ್ಯಂತ ಎರಡನೇ ದೊಡ್ಡ ಪ್ರತಿಭಟನೆ ಇದಾಗಿದೆ. ಈ ಹಿಂದೆ ಫೆಬ್ರವರಿ 5 ರಂದು ಇದೇ ರೀತಿಯ ಬೃಹತ್ ಪ್ರತಿಭಟನೆ ನಡೆದಿತ್ತು. ಎರಡೂ ಪ್ರತಿಭಟನೆಗಳಲ್ಲಿ…
ಹೊಂಬಾಳೆ ಫಿಲ್ಮ್ಸ್ನ ಆಕ್ಷನ್-ಪ್ಯಾಕ್ಡ್ ಬ್ಲಾಕ್ಬಸ್ಟರ್ “ಸಲಾರ್; ಸೀಸ್ಫೈರ್” ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. 366 ದಿನಗಳಿಂದ ಜಿಯೋ ಹಾಟ್ಸ್ಟಾರ್ನಲ್ಲಿ (ಹಿಂದೆ ಡಿಸ್ನಿ+ ಹಾಟ್ಸ್ಟಾರ್) ಈ ಸಿನಿಮಾ ಟ್ರೆಂಡಿಂಗ್ನಲ್ಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ನಟಿಸಿದ್ದಾರೆ. ಹೈ-ಆಕ್ಟೇನ್ ಆಕ್ಷನ್ ಸೀಕ್ವೆನ್ಸ್ಗಳಿಂದಲೇ ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿದ್ದ ಈ ಸಿನಿಮಾ, ಜಿಯೋಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಿ ಭಾನುವಾರಕ್ಕೆ ಸರಿಯಾಗಿ ಒಂದು ವರ್ಷವಾಗಿದೆ. ಅಂದಿನಿಂದಲೂ ಸ್ಟ್ರೀಮಿಂಗ್ ವೇದಿಕೆಯಲ್ಲಿ ಸಲಾರ್ ಸಿನಿಮಾ ತನ್ನ ಪ್ರಾಬಲ್ಯ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. ಜತೆಗೆ ಸಲಾರ್ ಚಿತ್ರದ ಆಯ್ದ ಕಟ್ಟಾ 366 ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನೂ ನೀಡಿದೆ ಹೊಂಬಾಳೆ ಫಿಲಂಸ್. ಈ ಬಗ್ಗೆ ಪೋಸ್ಟ್ ಹಂಚಿಕೊಂಡ ಹೊಂಬಾಳೆ ಫಿಲಂಸ್, “#ಸಲಾರ್ ಬಿರುಗಾಳಿ ಮುಂದುವರೆದಿದೆ.. ಒಂದು ವರ್ಷದ ನಂತರವೂ @JioHotstarನಲ್ಲಿ ಬೆಂಕಿ ಇನ್ನೂ ಉರಿಯುತ್ತಿದೆ.. ಮುಂದಿನ ಅಧ್ಯಾಯ ತೆರೆದುಕೊಳ್ಳುವವರೆಗೆ… ಸಲಾರ್ ಚೈತನ್ಯವನ್ನು ಜೀವಂತವಾಗಿರಿಸಿಕೊಳ್ಳಿ! ಎಂದಿದೆ. ಇದರ ಜತೆಗೆ ನಟ…
ಟಾಲಿವುಡ್ ನಟ ಮಂಚು ಮನೋಜ್ ಇತ್ತೀಚೆಗೆ ತಮ್ಮ ಖಾಸಗಿ ವಿಚಾರವಾಗಿಯೇ ಹೆಚ್ಚು ಹೆಚ್ಚು ಸುದ್ದಿಯಾಗ್ತಿದ್ದಾರೆ. ಇದೀಗ ಮಂಚು ಮನೋಜ್ ಅವರನ್ನು ತಿರುಪತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಿರುಪತಿಯಲ್ಲಿ ಸೋಮವಾರ (ಫೆಬ್ರವರಿ 17) ರಾತ್ರಿ ಅವರನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆಗಿದೆ. ಈಗ ಮಂಚು ಮನೋಜ್ ಅವರು ಬಾಕರಪೇಟ್ ಪೊಲೀಸರ ವಶದಲ್ಲಿ ಇದ್ದಾರೆ. ಆದರೆ ಅವರನ್ನು ಪೋಲಿಸರು ಕರೆದುಕೊಂಡು ಹೋಗಲು ಕಾರಣ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಪೊಲೀಸರ ಜೊತೆ ಮಂಚು ಮನೋಜ್ ಮಾತನಾಡುತ್ತಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಂಚು ಮನೋಜ್ ಮತ್ತು ಅವರ ಪತ್ನಿ ಭುಮಾ ಮೌನಿಕಾ ಅವರು ತಿರುಪತಿಗೆ ತೆರಳಿದ್ದರು. ಅಲ್ಲಿನ ಚಂದ್ರಗಿರಿಯಲ್ಲಿ ನಡೆದ ಜಲ್ಲಿಕಟ್ಟು ಆಚರಣೆಯಲ್ಲಿ ಅವರು ಪಾಲ್ಗೊಂಡರು. ಆ ಸಮಾರಂಭಕ್ಕೆ ಮಂಚು ಮನೋಜ್ ಅವರು ಮುಖ್ಯ ಅತಿಥಿ ಆಗಿದ್ದರು. ಟಿಡಿಪಿ ಮತ್ತು ಜನಸೇನಾ ಪಕ್ಷದ ಬೆಂಬಲಿಗರಿಂದ ಮಂಚು ಮನೋಜ್ ಅವರಿಗೆ ಸ್ವಾಗತ ಕೋರಲಾಗಿತ್ತು. ಆದರೆ ನಂತರ ಅವರನ್ನು…
ವಿಜಯಪುರ: ಜಿಲ್ಲೆಯ ಭೀಮಾತೀರದಲ್ಲಿ ನಡೆದ್ದಂತ ಬಾಗಪ್ಪ ಹರಿಜನ ಹತ್ಯೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ್ನು ಬಂಧಿಸಲಾಗಿತ್ತು. ಇದೀಗ ಆರೋಪಿಗಳಾದ ಪ್ರಕಾಶ್ ಅಲಿಯಾಸ್ ಪಿಂಟ್ಯಾ, ರಾಹುಲ್ ತಳಕೇರಿ, ಮಣಿಕಂಠ ಬೆನಕೊಪ್ಪ ಮತ್ತು ಸುದೀಪ್ ಕಾಂಬಳೆಯನ್ನು ಪೊಲೀಸರು ಇವತ್ತು ನಗರದ ಎರೆಡನೇ ಹೆಚ್ಚುವರಿ ಮತ್ತು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. https://ainlivenews.com/be-careful-there-are-foods-that-weaken-the-immune-system/ ನ್ಯಾಯಾಲಯವು ಆರೋಪಿಗಳನ್ನು 14-ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಭೀಮಾ ತೀರದ ಹಂತಕರಲ್ಲಿ ಒಬ್ಬನೆಂಬ ಕುಖ್ಯಾತಿಯ ಚಂದಪ್ಪ ಹರಿಜನ್ ಫೆಬ್ರುವರಿ 11 ರಂದು ವಿಜಯಪುರದ ಮದೀನಾ ನಗರದಲ್ಲಿ ಹತ್ಯೆಗೀಡಾಗಿದ್ದ.
ನವದೆಹಲಿ: ಸರ್ಕಾರದ ಡ್ರೋನ್ ನೀತಿಯನ್ನು ಟೀಕಿಸುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವೀಡಿಯೊದಲ್ಲಿ ಚೀನಾ ನಿರ್ಮಿತ ಡ್ರೋನ್ ಅನ್ನು ಪ್ರದರ್ಶಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಹೌದು ಇದೇ ಫೆ.15ರಂದು ರಾಹುಲ್ ಗಾಂಧಿ ಡಿಜೆಐ ಡ್ರೋನ್ ಹಾರಿಸಿದ್ದರು. ಈ ವಿಡಿಯೋವನ್ನ ತಮ್ಮ ಎಕ್ಸ್ ಖಾತೆಯಲ್ಲೂ ಹಂಚಿಕೊಂಡಿದ್ದರು. ಅಲ್ಲದೇ ನಮ್ಮ ಪ್ರತಿಸ್ಪರ್ಧಿಗಳು ಹೊಸ ಹೊಸ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಡ್ರೋನ್ಗಳನ್ನು ಹೆಚ್ಚಾಗಿ ಬಳಸುತ್ತಿರುವುದನ್ನು ನಾವು ಕಾಣಬಹುದು. ಆದ್ರೆ ದುರದೃಷ್ಟವಶಾತ್ ಪ್ರಧಾನಿ ಮೋದಿ (Narendra Modi) ಸರ್ಕಾರ, ಇಂತಹ ಡ್ರೋನ್ ಬಳಕೆಯ ಲಾಭ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಪ್ರಧಾನಿ ಮೋದಿ ಇನ್ನೂ ಟೆಲಿಪ್ರಾಮ್ಟರ್ ಭಾಷಣ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಕುಟುಕಿದ್ದಾರೆ. https://ainlivenews.com/be-careful-there-are-foods-that-weaken-the-immune-system/ ಡ್ರೋನ್ ಉದ್ಯಮವು ಒದಗಿಸಿದ ಅವಕಾಶವನ್ನು ಪ್ರಧಾನಿ ಮೋದಿ ಗ್ರಹಿಸಲು ವಿಫಲರಾಗಿದ್ದಾರೆ. ಭಾರತಕ್ಕೆ ಬಲವಾದ ಉತ್ಪಾದನಾ ವ್ಯವಸ್ಥೆ ಬೇಕೇ ಹೊರತು ಖಾಲಿ ಪದಗಳಲ್ಲ ಎಂದು ಸಹ ವಿಡಿಯೋದಲ್ಲಿ ಹೇಳಿದ್ದರು. ಅದ್ರೆ ರಾಗಾ ಅವರು ವೀಡಿಯೋನಲ್ಲಿ ತೋರಿಸಿದ್ದ ಚೀನಿ ಡ್ರೋನ್ ವಿವಾದಕ್ಕೆ ಕಾರಣವಾಗಿದೆ.…