Author: Author AIN

ಹುಬ್ಬಳ್ಳಿ : ನಗರದ ಶ್ರೀ ಸಿದ್ಧಾರೂಢ ಮಠದಲ್ಲಿ ಸಹ ಆಡಳಿತ ಮಂಡಳಿ ಮತ್ತು ಭಕ್ತರ ನಡುವೆ ವಾಗ್ವಾದ ನಡೆದಿದೆ.  ನಾಡಿನ ಹೆಸರಾಂತ ಸರ್ವ ಧರ್ಮಗಳ ಸಮನ್ವಯದ ಮಠವಾದ ಸದ್ಗುರು ಶ್ರೀ ಸಿದ್ದಾರೂಢಸ್ವಾಮಿ ಮಠ ಟ್ರಸ್ಟ್ ಕಮಿಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಗುರು ಎಂಬ ಸರ್ವೋಚ್ಛ ಮತ್ತು ಪರಮಪವಿತ್ರ ನಾಮದ ಬದಲಾವಣೆಗೆ ಅಸಮಾಧಾನ ವ್ಯಕ್ತಪಡಿಸಲಾಗಿದೆ. “ಜಗದ್ಗುರು” ಎಂಬುವ ಜಾತಿ ಸೂಚಿಕ ಮತ್ತು ಸಂಕುಚಿತ ಪದಬಳಕೆ ಸಲ್ಲದು, ಮಠದಲ್ಲಿ ಸರಿಯಾದ ಕಾರ್ಯ ನಡೆಯುತ್ತಾ ಇಲ್ಲ, ಬೇಕಾಬಿಟ್ಟಿಯಾಗಿ ಆಡಳಿತ ಮಂಡಳಿ ನಡೆದುಕೊಳ್ಳತಾ ಇದೆ ಎಂಬ ಆರೋಪ ಕೇಳಿ ಬಂದಿದೆ.  ಭಕ್ತರ ಪರವಾಗಿ ಹೋರಾಟಗಾರ ಗುರುನಾಥ ಉಳ್ಳಿಕಾಶಿ, ವೈದ್ಯ ಸೇರಿದಂತೆ ಹಲವರ ಆರೋಪ ವ್ಯಕ್ತಪಡಿಸಿದ್ದಾರೆ. https://www.youtube.com/watch?v=ykrwcXwJseo ಇನ್ನು  ರಾಷ್ಟ್ರಮಟ್ಟದಲ್ಲಿ ಭಕ್ತವೃಂದವನ್ನು ಹೊಂದಿರುವಂತಹ ಜಾತಿ, ಧರ್ಮವನ್ನು ಮೀರಿ ಧಾರ್ಮಿಕ ಕಾರ್ಯ ನಡೆಯುತ್ತಾ ಇದೆ. ನೇರ ಉಭಯ ಶ್ರೀಗಳ ಗದ್ದುಗೆ ಸ್ಪರ್ಶ ದರ್ಶನ ನೀಡುವ ಏಕೈಕ ಮಠ ಎಂಬುವ ಖ್ಯಾತಿ ಪಡೆದಿರುವ ಮಠ ಸದ್ಗುರು ಶ್ರೀ…

Read More

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಹುಲಿಯೊಂದರ ಕಳೆಬರಹ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಬ್ಲಿಗೊಳ್ಳ ಜಲಾಶಯದ ಹಿನ್ನೀರಿನಲ್ಲಿ ಗಂಡು ಹುಲಿ ಶವ ಪತ್ತೆಯಾಗಿದೆ. https://www.youtube.com/watch?v=ykrwcXwJseo ಅಂಬ್ಲಿಗೊಳ್ಳವಲಯ ವ್ಯಾಪ್ತಿಯ ಆನಂದಪುರ ಹೋಬಳಿ ಬೈರಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿರುವ ಹಿನ್ನೀರಿನಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದೆ. ಹುಲಿಯು 8 ರಿಂದ 10 ವರ್ಷ ವಯಸ್ಸಿನದ್ದು ಎಂದು ಅಂದಾಜಿಸಲಾಗಿದೆ. ಹಿನ್ನೀರಿನಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಕಳೇಬರ ಪತ್ತೆಯಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಗಳು, ಗೌತಮಪುರ ಗ್ರಾಮ ಪಂಚಾಯಿತಿ ಸದಸ್ಯರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. https://ainlivenews.com/house-raid-case-of-moneylenders-the-money-seized-by-the-police-was-not-money-laundering/ ಹುಲಿಯ ಸಾವಿನ ನಿಖರ ಕಾರಣ ತಿಳಿಯಲು ಹುಲಿಯ ಮೃತ ದೇಹದ ಸ್ಯಾಂಪಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಮೃತ ದೇಹವನ್ನು ನಿಯಮಾನುಸಾರ ದಹಿಸಲಾಯಿತು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Read More

ಬೆಂಗಳೂರು: ಮಾಜಿ ಸಚಿವ ವರ್ತೂರು ಸಂತೋಷ್ ಹೆಸರಲ್ಲಿ ಶ್ವೇತಾಗೌಡಳಿಂದ ನವರತ್ನ ಜ್ಯುವೆಲ್ಲರಿ ಮಾಲೀಕರಿಗೆ ವಂಚನೆ ಸಂಬಂಧ ಕೊನೆಗೂ ಶ್ವೇತಾ ವಂಚಿಸಿ ಬಚ್ಚಿಟ್ಟಿದ್ದ 2 ಕೆಜಿ 100 ಗ್ರಾಂ ಕೆ.ಜಿ ಚಿನ್ನಾಭರಣ ಸುಳಿವು ಸಿಕ್ಕಿದೆ. ಐಶ್ವರ್ಯ ಗೌಡಳ ವಂಚನೆ ಪ್ರಕರಣ ಸದ್ದು ಮಾಡೋಕು ಮೊದಲೇ ಶ್ವೇತಾಗೌಡಳ ವಂಚನೆ ಪ್ರಕರಣ ಸದ್ದು ಮಾಡಿತ್ತು. ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಕೆಜಿಗಟ್ಟಲೆ ಚಿನ್ನಾಭರಣ ವಂಚಿಸಿ ಅರೆಸ್ಟ್ ಕೂಡ ಮಾಡಲಾಗಿತ್ತು. ಆರೋಪಿತೆ ಶ್ವೇತಾಗೌಡ ಅರೆಸ್ಟ್ ಆದ್ರೂ ಚಿನ್ನದ ಮೂಲ ಗೊತ್ತಾಗಿರಲಿಲ್ಲ. ಬಾಗಲಗುಂಟೆಯಿಂದ ರಾಜಸ್ಥಾನಕ್ಕೆ‌ ಹೋಗಿ ಹುಡುಕಾಡಿದ್ರೂ ಬಚ್ಚಿಟ್ಟಿದ್ದ ಚಿನ್ನಾಭರಣದ ಸುಳಿವು ಸಿಕ್ಕಿರಲಿಲ್ಲ. ಆ ಬಳಿಕ ಜೋಧಪುರದಲ್ಲಿ ಮೋಹನ್ ಲಾಲ್​ ಬಂಧಿಸಿದ ಕರೆತಂದಾಗಚಿನ್ನಾ ಯಾರ ಬಳಿಯಿದೆ ಎಂಬ ಮಾಹಿತಿ ಬಯಲಾಗಿದೆ. https://ainlivenews.com/do-you-know-what-are-the-health-benefits-of-wearing-silver-anklets/ ನವರತ್ನ ಜ್ಯುವೆಲ್ಲರಿ ಮಾಲೀಕರಿಗೆ 2 ಕೆಜಿ 945 ಗ್ರಾಂ ಚಿನ್ನಾಭರಣ ವಂಚಿಸಿದ್ದ ಶ್ವೇತಗೌಡಳನ್ನ ಹಾಗೂ ವರ್ತೂರು ಪ್ರಕಾಶ್ ರನ್ನ ತನಿಖಾಧಿಕಾರಿ ಎಸಿಪಿ ಗೀತಾ ವಿಚಾರಣೆ ನಡೆಸಿದ್ರು. ಅಲ್ಲದೇ ಪ್ರಕರಣದಲ್ಲಿ ಶ್ವೇತಗೌಡ ಸೇರಿ ಚೆನ್ನರಾಮ್ ಹಾಗೂ…

Read More

ಗದಗ : ಬಡ್ಡಿ ದಂಧೆಕೋರರ ಮನೆ ಮೇಲೆ ದಾಳಿ ವೇಳೆ 26 ಲಕ್ಷ ರೂಪಾಯಿ ಹಣ ಸೀಜ್ ಮಾಡಿದ್ದ ಪ್ರಕರಣದಲ್ಲಿ ಇದೀಗ ಟ್ವಿಸ್ಟ್‌ ಸಿಕ್ಕಿದೆ. ದಾಳಿ ವೇಳೆ ಪೊಲೀಸರು ಜಪ್ತಿ ಮಾಡಿದ ಹಣ ಬಡ್ಡಿದಂಧೆಯದ್ದಲ್ಲ, ಆ ಹಣ ಮಗುವಿನ ಲಿವರ್‌ ಚಿಕಿತ್ಸೆಗೆ ತಂದು ಇಟ್ಟ ಹಣ ಎಂದು ಮನೆಯವರು ಹೇಳುತ್ತಿದ್ದಾರೆ. ಇತ್ತ ಮಗನ ಚಿಕಿತ್ಸೆಗೆ ಹೊಂದಿಸಿದ್ದ ಹಣ ಸೀಜ್‌ ಆಗಿದ್ದಕ್ಕೆ ಮನನೊಂದು  ಬಡ್ಡಿದಂಧೇಕೋರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಂಗಮೇಶ ದೊಡ್ಡಣ್ಣವರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. https://ainlivenews.com/the-teacher-died-while-teaching/ ಗದಗ ನಗರದ ಕಾಶಿವಿಶ್ವನಾಥ ಕಾಲೋನಿಯ ಮನೆಯಲ್ಲಿ ಆತ್ಮಹತ್ಯೆ ಗೆ ಯತ್ನಿಸಿದ್ದಾರೆ. ಕೂಡಲೇ ಅಲ್ಲಿದ್ದವರು ಅವರನ್ನು ರಕ್ಷಣೆ ಮಾಡಿ ಗದಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಎಸ್ ಡಿ ಎಂ ಆಸ್ಪತ್ರೆಗೆ ರವಾನಿಸಲಾಗಿದೆ.  ಬೆನ್ನು ಮೂಳೆ ಕಟ್ ಆಗಿರೋ ಸಾಧ್ಯತೆ ಇದ್ದು, ಸಂಗಮೇಶ್ ಸ್ಥಿತಿ ಚಿಂತಾಜನಕವಾಗಿದೆ. ಸೀಜ್ ಮಾಡಿರೋ ಹಣ ಬಡ್ಡಿ ದಂಧೆಯದ್ದಲ್ಲ, ಮಗನ…

Read More

ವಾಷಿಂಗ್ಟನ್ : ಭಾರತ ಬಳಿ ಸಾಕಷ್ಟು ಹಣ ಇರುವಾಗ , ನಾವೇಕೆ ಭಾರತಕ್ಕೆ 21 ಮಿಲಿಯನ್ ಡಾಲರ್‌ ಗಳನ್ನು ನೀಡಬೇಕು? ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಶ್ನೆ ಮಾಡಿದ್ದಾರೆ ಫ್ಲೋರಿಡಾದಲ್ಲಿರುವ ತನ್ನ ನಿವಾಸ ಮಾರ್-ಎ-ಲಾಗೊದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಭಾರತಕ್ಕೆ 21 ಮಿಲಿಯನ್ ಡಾಲರ್‌ಗಳನ್ನು ಏಕೆ ನೀಡುತ್ತಿದ್ದೇವೆ? ಅವರ ಬಳಿ ಹೆಚ್ಚು ಹಣವಿದೆ. ವಿಶ್ವದಲ್ಲಿ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತ ಒಂದು. ಅವರ ಸುಂಕಗಳು ತುಂಬಾ ಹೆಚ್ಚಿರುವುದರಿಂದ ನಮ್ಮ ವಸ್ತುಗಳು ಅಲ್ಲಿಗೆ ಹೋಗುವುದು ಕಷ್ಟ ಎಂದು ಹೇಳಿದ್ದಾರೆ. ಭಾರತ ಮತ್ತು ಅವರ ಪ್ರಧಾನಿಯ ಬಗ್ಗೆ ನನಗೆ ತುಂಬಾ ಗೌರವವಿದೆ. ಆದರೆ ಮತದಾನಕ್ಕೆ 21 ಮಿಲಿಯನ್ ಡಾಲರ್‌ಗಳನ್ನು ನೀಡಬೇಕೇ?”,ಎಂದು ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ. ಭಾರತದಲ್ಲಿ ಮತದಾನಕ್ಕಾಗಿ ಗೊತ್ತುಪಡಿಸಿದ 21 ಮಿಲಿಯನ್ ಡಾಲರ್ ನಿಧಿಯನ್ನು ರದ್ದುಗೊಳಿಸುವ ಸರ್ಕಾರಿ ದಕ್ಷತೆ ಇಲಾಖೆ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದು, ಬೆಳೆಯುತ್ತಿರುವ ಆರ್ಥಿಕತೆ ಮತ್ತು ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಭಾರತಕ್ಕೆ…

Read More

ಬೆಂಗಳೂರು: ಅತ್ತೆ ಸೊಸೆಯ ನಡುವಿನ ಜಗಳ ಸಾಮಾನ್ಯ.  ಅಡುಗೆ, ಮನೆಕೆಲಸ, ವರದಕ್ಷಿಣೆ ಇತ್ಯಾದಿ ಕಾರಣಗಳಿಗೆ ಅತ್ತೆ ಮತ್ತು ಸೊಸೆಯ ಮಧ್ಯೆ ಜಗಳಗಳು ಏರ್ಪಡುತ್ತವೆ. ಈ ವಿಚಾರಗಳ ಕಾಣದಿಂದ ಸೊಸೆಯಂದಿರು ತಮ್ಮ ಅತ್ತೆಯ ವಿರುದ್ಧ ದೂರು ನೀಡಲು ಪೋಲಿಸ್ ಠಾಣೆಯ ಮೆಟ್ಟಿಲೇರಿದ ಹಲವು ಘಟನೆಗಳನ್ನು ನಾವು ನೋಡಿರುತ್ತೇವೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಅತ್ತೆಯನ್ನು ಸಾಯಿಸಲು ಮಾತ್ರೆ ಹೇಳಿ ಎಂದು ಸೊಸೆ ವೈದ್ಯರಿಗೆ ವಾಟ್ಸಾಪ್​​ ಸಂದೇಶ ಕಳುಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಿಳೆಯ ಸಂದೇಶ ಕಂಡು ವೈದ್ಯರು ಅಚ್ಚರಿಗೊಂಡಿದ್ದಾರೆ. ಬೆಂಗಳೂರು ಮೂಲದ ವೈದ್ಯರಾದ ಡಾ. ಸುನಿಲ್​ ಕುಮಾರ್​ ಅವರಿಗೆ ಇನ್​​ಸ್ಟಾಗ್ರಾಮ್​ನಲ್ಲಿ ಓರ್ವ ಮಹಿಳೆ ಪರಿಚಯವಾಗಿದ್ದಾಳೆ. ಮಹಿಳೆ ಇನ್​ಸ್ಟಾಗ್ರಾಮ್​ ಮೂಲಕ ಡಾ. ಸುನಿಲ್​ ಕುಮಾರ್​ರ ದೂರವಾಣಿ ಸಂಖ್ಯೆ ಪಡೆದಿದ್ದಾಳೆ. ನಂತರ, ಸೋಮವಾರ ರಂದು ಮಹಿಳೆ, ಡಾ. ಸುನಿಲ್​ ಕುಮಾರಿಗೆ ವಾಟ್ಸಾಪ್​ನಲ್ಲಿ ಸಂದೇಶ ಕಳುಹಿಸಿದ್ದಾಳೆ. https://ainlivenews.com/do-you-know-what-are-the-health-benefits-of-wearing-silver-anklets/ ನಮ್ಮ ಅತ್ತೆಗೆ ವಯಸ್ಸಾಗಿದೆ, ತುಂಬಾ ಹಿಂಸೆ ಕೊಡ್ತಾರೆ. ಏನಾದ್ರೂ ಹೇಳ್ತಿರಾ ಹೇಗೆ ಸಾಯಿಸೋದು ಅಂತ. ಟ್ಯಾಬ್ಲೆಟ್‌ ಒಂದು..ಎರಡು…

Read More

ಯುಕ್ರೇನ್ ವಿರುದ್ಧದ ಯುದ್ಧವನ್ನು ಕೊನೆಗಾಣಿಸುವ ಕುರಿತು ಸೌದಿ ಅರೇಬಿಯಾದಲ್ಲಿ ನಡೆದ ರಷ್ಯಾ- ಅಮೆರಿಕಾದ ಉನ್ನತಮಟ್ಟದ ಸಭೆ ಅಂತ್ಯಗೊಂಡಿದೆ. ಸಭೆಯಲ್ಲಿ ಟ್ರಂಪ್ ನೇತೃತ್ವದಲ್ಲಿ ಅಮೆರಿಕದ ವಿದೇಶಾಂಗ ನೀತಿಯಲ್ಲಿ ಆಗಿರುವ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸಿದೆ. ಈ ಸಭೆಯಲ್ಲಿ ಯುಕ್ರೇನ್ ಅಧಿಕಾರಿಗಳು ಭಾಗಿಯಾಗಿರಲಿಲ್ಲ. ಈ ವಾರದ ಮಾತುಕತೆಯಲ್ಲಿ ಕೈವ್ ಭಾಗವಹಿಸದಿದ್ದರೆ, ಆ ಸಭೆಯ ಯಾವುದೇ ಫಲಿತಾಂಶವನ್ನು ತಮ್ಮ ದೇಶ ಸ್ವೀಕರಿಸುವುದಿಲ್ಲ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಯುರೋಪಿಯನ್ ಮಿತ್ರರಾಷ್ಟ್ರಗಳು ಸಹ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಕಳವಳವನ್ನು ಅವರು ವ್ಯಕ್ತಪಡಿಸಿದ್ದಾರೆ. ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಭೆಗೆ ದಾರಿ ಮಾಡಿಕೊಡುವುದೂ ಸಹ ಈ ಸಭೆಯ ಉದ್ದೇಶವಾಗಿತ್ತು. ಮಾತುಕತೆ ಮುಗಿದ ನಂತರ, ಪುಟಿನ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಯೂರಿ ಉಷಾಕೋವ್ ರಷ್ಯಾದ ಚಾನೆಲ್ ಒನ್‌ಗೆ ಮಾಹಿತಿ ನೀಡಿದ್ದು, ಟ್ರಂಪ್- ಪುಟಿನ್ ಸಭೆಗೆ ಇನ್ನೂ ದಿನಾಂಕ ನಿಗದಿಪಡಿಸಲಾಗಿಲ್ಲ ಆದರೆ ಮುಂದಿನ ವಾರ ಅದು ನಡೆಯುವುದು “ಅಸಂಭವ” ಎಂದು ಹೇಳಿದ್ದಾರೆ. ಮಾತುಕತೆಗಳು ಪ್ರಾಥಮಿಕವಾಗಿ “ಯುಎಸ್-ರಷ್ಯಾದ…

Read More

ರಾಜ್ಯ ಕಾಂಗ್ರೆಸ್ ನಲ್ಲಿನ ಬಣ ಬಡಿದಾಟ‌ ನಿಲ್ಲೋ‌ ಲಕ್ಷಣಗಳು ಕಾಣ್ತಿಲ್ಲ.ಒಂದ್ಕಂಡೆ ಸಿಎಂ ಬಣ ಡಿಕೆ ವಿರುದ್ದ ಚಾರ್ಜ್ ಮಾಡ್ತಿದ್ರೆ,ಮತ್ತೊದ್ಕಡೆ ಡಿಸಿಎಂ ಬಣ ಕೌಂಟರ್‌ಮೇಲೆ ಕೌಂಟರ್ ಕೊಡ್ತಿದೆ.ಈ ಬಣ ಬಡಿದಾಟಕ್ಕೆ ಕಡಿವಾಣ ಹಾಕಬೇಕಿದ್ದ ಎಐಸಿಸಿ ಅಧ್ಯಕ್ಷರೇ ಕುರ್ಚಿ ಕಿತ್ತಾಟಕ್ಕೆ ಹೈರಾಣಾಗಿದ್ದಾರೆ‌‌.ಮತ್ತೊಂದು ಕಡೆ ರಾಜಣ್ಣಸತೀಶ್ ಜಾರಕಿಹೊಳಿ ಬಳಿಕ ಪರಮೇಶ್ವರ್ ಇದೀಗ ದೆಹಲಿ ಟೂರ್ ತೆರಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ,ಪವರ್ ಶೇರಿಂಗ್,ದಲಿತ ಸಮಾವೇಶ ಎಲ್ಲವೂ ರಾಜ್ಯಕಾಂಗ್ರೆಸ್ ನಲ್ಲಿ ಜ್ವಾಲಾಮುಖಿಯಾಗಿ ಸ್ಫೋಟಿಸಿವೆ.ನಾಯಕರ ಬಹಿರಂಗ ಬಣಬಡಿದಾಟ ದಿನೇ ದಿನೇ ಹೆಚ್ಚಾಗ್ತಿದೆ.ಸಿಎಂ ಬಣದ ನಾಯಕರು ಡಿಕೆಶಿ ವಿರುದ್ಧ ಚಾರ್ಜ್ ಮಾಡಿದ್ರೆ,ಅತ್ತ ಡಿಸಿಎಂ ಬಣದ ನಾಯಕರು ಬಹಿರಂಗ ವಾಗ್ದಾಳಿಗಿಳಿದಿದ್ದಾರೆ.ನಿನ್ನೆಯಷ್ಠೇ ಡಿಸಿಎಂ‌ ಡಿಕೆ ವಿರುದ್ದ ಸಚಿವ ಕೆ‌ ಎನ್ ರಾಜಣ್ಣ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ರು.ಇಂದು ಡಿಕೆ ಬಣದ ನಾಯಕರು ಅದಕ್ಕೆ ಕೌಂಟರ್ ಮೇಲೆ ಕೌಂಟರ್ ಕೊಟ್ಟಿದ್ದಾರೆ.ಡಿಕೆಶಿ ಮೇಲೆ ರಾಜಣ್ಣಗೆ ಪ್ರೀತಿ,ಅದೆಷ್ಟು ಬಡಿಯುತ್ತಾರೋ ಬಡಿಯಲಿ,ಬಡಿದಷ್ಟೂ ತಾನೇಕಲ್ಲು ಶಿಲೆಯಾಗೋದು ಅಂತ ಮಾಜಿ ಸಂಸದ ಡಿ.ಕೆ.ಸುರೇಶ್ ಟಾಂಗ್ ಕೊಟ್ಟಿದ್ದಾರೆ. https://ainlivenews.com/do-you-know-what-are-the-health-benefits-of-wearing-silver-anklets/ ಸಚಿವ ಕೆ.ಎನ್.ರಾಜಣ್ಣ ಸ್ಟೇಟ್ ಮೆಂಟ್ ನಿಂದಾಗಿ…

Read More

ಬೆಂಗಳೂರು: “ಡಿ.ಕೆ. ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ ಎಂಬ ಭಾವನೆ ಎಲ್ಲರಿಗೂ ಇದೆ. ಹೀಗಾಗಿ ಎಲ್ಲರೂ ಮಾತನಾಡುತ್ತಿದ್ದಾರೆ. ಬಂಡೆ ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ಶಿವಕುಮಾರ್ ಅವರು ಆಗಾಗ್ಗೆ ಹೇಳುತ್ತಿರುತ್ತಾರೆ. ಕಲ್ಲಿಗೆ ಪೆಟ್ಟು ಬಿದ್ದಾಗಲೇ ಶಿಲೆಯಾಗಿ ಮಾರ್ಪಾಡಾಗುತ್ತದೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ನಾಲ್ಕೈದು ಸಚಿವರು ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಕೇಳಿದಾಗ, “ಅದೆಲ್ಲಾ ಗೊತ್ತಿಲ್ಲಾ. ಎಲ್ಲರೂ ಸೇರಿ ಒಳ್ಳೆಯದನ್ನು ಬಯಸುತ್ತಿದ್ದು ಒಳ್ಳೆಯದೇ ಆಗುತ್ತದೆ. ಯಾರಿಗಾದರೂ ಒಳ್ಳೆಯದಾಗಬೇಕಾದರೆ ಹತ್ತಾರು ಜನರ ಪೆಟ್ಟು ಬೀಳಬೇಕು. ಅದನ್ನು ನಾವು ತಪ್ಪಾಗಿ ತಿಳಿಯಬಾರದು, ಅದನ್ನು ಪ್ರಸಾದವಾಗಿ ಸ್ವೀಕರಿಸಬೇಕು” ಎಂದು ತಿಳಿಸಿದರು. ಪ್ರಸಾದ ಹೆಚ್ಚಾಗಿ ಸ್ವೀಕರಿಸಿದರೆ ಹೊಟ್ಟೆ ನೋವು ಬರುವುದಿಲ್ಲವೇ ಎಂದು ಮಾರ್ಮಿಕವಾಗಿ ಕೇಳಿದ ಪ್ರಶ್ನೆಗೆ, “ನಮಗೆ ಆ ರೀತಿ ಬರುವುದಿಲ್ಲ. ನಾವು ಹಳ್ಳಿಯಲ್ಲಿ ಬೆಳೆದಿದ್ದೇವೆ” ಎಂದು ಮಾರ್ಮಿಕವಾಗಿಯೇ ಉತ್ತರಿಸಿದರು. ಆಗಿದ್ದರೆ ಶಿಲೆಯಾಗಿ ಹೊರಹೊಮ್ಮುವರೆ ಎಂದು…

Read More

ಬೀದರ್‌ : ಮಹಾರಾಷ್ಟ್ರದ ಲಾತುರ & ಉದಗಿರ್‌ನಲ್ಲಿ ಹಕ್ಕಿ ಜ್ವರ ಮತ್ತು ಕೋಳಿ ಶೀತ ಜ್ವರ ಕಾಣಿಸಿಕೊಂಡ ಹಿನ್ನೆಲೆ ಬೀದರ್‌ ಜಿಲ್ಲೆಯ ಚೆಕ್ ಪೋಸ್ಟ್ ನಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. https://www.youtube.com/watch?v=ykrwcXwJseo ಮಹಾರಾಷ್ಟ್ರ ದಿಂದ ಬೀದರ ಜಿಲ್ಲೆಗೆ ಕೋಳಿ ಉತ್ಪನ್ನ ಸಾಗಾಣಿಕೆ ನಿರ್ಭಂದ ಮಾಡಲಾಗಿದೆ.  ಕೋಳಿ ಮಾಂಸ, ಕೋಳಿ ಮೊಟ್ಟೆ ಅಥವಾ ಕೋಳಿಗಳಿಗೆ ಹಾಕುವ ಆಹಾರ ಜಿಲ್ಲೆಗೆ ಮಹಾರಾಷ್ಟ್ರದಿಂದ ಬಾರದಂತೆ ನಿಷೇಧ ಗಡಿ ಚೆಕ್ ಪೋಸ್ಟ್ ನಲ್ಲಿ ಕಟೆಚ್ಚರವಹಿಸಲಾಗಿದೆ. https://ainlivenews.com/the-teacher-died-while-teaching/ ಬೀದರ ಜಿಲ್ಲೆಯ ಗಡಿ ತಾಲೂಕುಗಳಲ್ಲಿ ಹೈ ಅಲರ್ಟ್‌ ಘೋಷಿಸಿದ್ದು, ಪಶುಸಂಗೋಪನೆ ಇಲಾಖೆ ಸಿಬ್ಬಂದಿ ಚೆಕ್ ಪೋಸ್ಟ್ ಸ್ಥಾಪಿಸಿ ತಪಾಸಣೆ ನಡೆಸಲಾಗುತ್ತಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಂತೆ ಇರುವ  ಬಸವಕಲ್ಯಾಣ ತಾಲೂಕು, ಔರಾದ ತಾಲೂಕು, ಭಾಲ್ಕಿ ತಾಲೂಕು, ಕಮಲನಗರ ತಾಲೂಕು ಗಡಿಯಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ನರಸಪ್ಪಾ‌ ಮಾಹಿತಿ ನೀಡಿದ್ದಾರೆ.

Read More