Author: Author AIN

ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿಯ ಮದುವೆ ಸಂಭ್ರಮ ಜೋರಾಗಿದೆ. ಮುಖೇಶ್ ತವರಾದ ಜಾಯ್ ನಗರದಲ್ಲಿ ಅದ್ದೂರಿಯಾಗಿ ಪ್ರೀವೆಡ್ಡಿಂಗ್ ಕಾರ್ಯಕ್ರಮಗಳು ನಡೆದಿದ್ದು ದೇಶ, ವಿದೇಶದಿಂದ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಮಗ-ಸೊಸೆಗಾಗಿ ನೀತಾ ಅಂಬಾನಿ ಡ್ಯಾನ್ಸ್ ಮಾಡಿದ್ದು ನೀತಾ ಡ್ಯಾನ್ಸ್ ಅಲ್ಲಿದ್ದವರೆಲ್ಲಾ ಸಖತ್ ಮೆಚ್ಚುಗೆ ಸೂಚಿಸಿದ್ದಾರೆ. ಮಗ ಹಾಗೂ ಸೊಸೆಯ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಪ್ರಾರ್ಥಿಸಿ ಮಾತೆ ಅಂಬೆಗಾಗಿ ಮಾಡುವ ವಿಶ್ವಾಂಭರಿ ಸ್ತುತಿಯ ಡ್ಯಾನ್ಸ್ ಮಾಡಿದ್ದಾರೆ. ನೀತಾ ಅಂಬಾನಿ ಅವರ ನೃತ್ಯ, ಅಭಿನಯ ಅದ್ಭುತವಾಗಿ ಮೂಡಿ ಬಂದಿದ್ದು ಎಲ್ಲರ ಮೆಚ್ಚುಗೆ ಘಳಿಸಿದ್ದಾರೆ. ಮುಖೇಶ್ ಅವರ ಪತ್ನಿ ನೀತಾ ಅಂಬಾನಿ ಶಾಸ್ತ್ರೀಯ ನೃತ್ಯಗಾರರೊಂದಿಗೆ ವಿಶ್ವಂಭರಿ ಸ್ತುತಿಯಲ್ಲಿ ಪ್ರದರ್ಶನ ನೀಡಿರುವುದು ನೋಡುಗರಿಗೆ ಖುಷಿ ಕೊಟ್ಟಿದೆ. ಈ ಸಂದರ್ಭದಲ್ಲಿ, ನೀತಾ ಅಂಬಾನಿ ಕೆಂಪು ಕಲರ್ ಸೀರೆಯಲ್ಲಿ ಹೈಲೆಟ್ ಆಗಿದ್ದಾರೆ. ನೀತಾ ಅಂಬಾನಿ ಅವರ ಈ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅನಂತ್ ಮತ್ತು…

Read More

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಪುತ್ರಿ ಆರಾಧ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಚಿಕ್ಕ ಹುಡುಗಿ ಆದಾಗಿನಿಂದ ನಿಮ್ಮ ಕಣ್ಣ ಮುಂದೆಯೇ ಬೆಳೆದಳೆನೋ ಅನ್ನೋ ಅಷ್ಟರ ಮಟ್ಟಿಗೆ ಆರಾಧ್ಯ ಎಲ್ಲರಿಗೂ ಬಗ್ಗೆ ಎಲ್ಲರಿಗೂ. ಐಶ್ವರ್ಯಾ ಹೋದಲ್ಲಿ ಬಂದಲ್ಲೆಲ್ಲಾ ಅಮ್ಮನ ಜೊತೆ ಕಾಣಿಸಿಕೊಳ್ಳುತ್ತಿದ್ದ ಆರಾಧ್ಯ ಇದೀಗ ಯಾರು ನಂಬಲು ಸಾಧ್ಯವಾಗದಷ್ಟು ಮಟ್ಟಿಗೆ ಬದಲಾಗಿದ್ದಾಳೆ. ಆರಾಧ್ಯಳ ಹೊಸ ಲುಕ್ ನೋಡಿ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಹೌದು. ಆರಾಧ್ಯ ರೈ ಬಚ್ಚನ್ ಹೊಸ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇತ್ತೀಚೆಗೆ ಮುಖೇಶ್ ಅಂಬಾನಿ ಮಗ ಅನಂತ್ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಅಭಿಷೇಕ್ ಬಚ್ಚನ್- ಐಶ್ವರ್ಯ ರೈ ಜೊತೆ ಮಗಳು ಆರಾಧ್ಯ ಕೂಡ ಆಗಮಿಸಿದ್ದರು. ಸದಾ ಹಣೆಯ ಮೇಲೆ ಕೂದಲು ಇಳಿಸಿ ಇರುತ್ತಿದ್ದ ಆರಾಧ್ಯ ಈಗ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.‌  12 ವರ್ಷದ ಆರಾಧ್ಯ ಬೇಬಿ ಪಿಂಕ್ ಡ್ರೆಸ್‌ನಲ್ಲಿ ಮತ್ತಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕೂದಲನ್ನು ಇಳಿ ಬಿಟ್ಟು ಅಮ್ಮನ ಜೊತೆ ಆರಾಧ್ಯ ಹೆಜ್ಜೆ…

Read More

ನಟಿ ಸಮಂತಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಆರೋಗ್ಯದ ಸಮಸ್ಯೆಯಿಂದ ಸಿನಿಮಾದ ಕೆಲಸಗಳಿಂದ ಕೊಂಚ ಮಟ್ಟಿಗೆ ದೂರವಿದ್ದ ನಟಿ ಇದೀಗ ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ಬ್ಯುಸಿಯಾಗಲು ನಿರ್ಧರಿಸಿದ್ದಾರೆ. ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾಗೆ ಸಮಂತಾ ನಾಯಕಿ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಪದ್ಮಾವತಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಿರುಚಾನೂರಿನ ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ತೆರಳಿದ್ದ ನಟಿ ವಿಐಪಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ದೇವಿಗೆ ವಿಷೇಶ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಸಮಂತಾರನ್ನು ನೋಡಿದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಇತ್ತೀಚೆಗಷ್ಟೇ ಮತ್ತೆ ಸಿನಿಮಾಗೆ ಬರೋದಾಗಿ ನಟಿ ತಿಳಿಸಿದ್ದರು. ಸಮಂತಾ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಕೂಡ ಸದ್ದು ಮಾಡುತ್ತಿದೆ. ಸಿನಿಮಾ ಶೂಟಿಂಗ್ ಶುರುವಾಗುವ ಮುನ್ನ ದೇವರ ಸನ್ನಿಧಿಗೆ ನಟಿ ಭೇಟಿ ನೀಡಿದ್ದಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಸಮಂತಾ ವೃತ್ತಿ ಜೀವನದತ್ತ ಹೆಚ್ಚು ಫೋಕಸ್ ಮಾಡುತ್ತಿದ್ದಾರೆ. ಆರೋಗ್ಯ…

Read More

2021ರ ಜನವರಿ 1ರಂದು ವಾಷಿಂಗ್ಟನ್ ನ ಕ್ಯಾಪಿಟಲ್ ಹಿಲ್ಸ್ ನಲ್ಲಿ ನಡೆದ ಗಲಭೆಯ ಹಿನ್ನೆಲೆಯಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಕೊಲರಾಡೊದಲ್ಲಿ ಅಧ್ಯಕ್ಷೀಯ ಪ್ರಾಥಮಿಕ ಚುನಾವಣೆಯಿಂದ ಅನರ್ಹಗೊಳಿಸುವ ನ್ಯಾಯಾಂಗದ ನಿರ್ಧಾರವನ್ನು ಅಮೆರಿಕದ ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ಟ್ರಂಪ್‍ಗೆ ಮಹತ್ವದ ಗೆಲುವು ಸಿಕ್ಕಿದೆ. ಬೆಂಬಲಿಗರಿಗೆ ಕ್ಯಾಪಿಟಲ್ ಹಿಲ್ಸ್ ಮೇಲೆ ದಾಳಿ ನಡೆಸಲು ಟ್ರಂಪ್ ಪ್ರಚೋದನೆ ನೀಡಿದ್ದರು. ಈ ಗಲಭೆಗೆ ಟ್ರಂಪ್‍ರನ್ನು ಹೊಣೆಯಾಗಿಸಿ ಅವರನ್ನು ಕೊಲರಾಡೊದ ಪ್ರಾಥಮಿಕ ಚುನಾವಣೆಯಿಂದ ಹೊರಗಿಡುವ ನಿರ್ಧಾರವನ್ನು ಡಿಸೆಂಬರ್ 19ರಂದು ಕೊಲರಾಡೊದ ಉನ್ನತ ನ್ಯಾಯಾಲಯ ಪ್ರಕಟಿಸಿತ್ತು. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಟ್ರಂಪ್ ಸುಪ್ರೀಂಕೋರ್ಟ್‍ ಮೊರೆಹೋಗಿದ್ದರು. ಇಲಿನಾಯಿಸ್, ಮೈಯ್ನ್ ಹಾಗೂ ಇತರ ಕೆಲವು ರಾಜ್ಯಗಳೂ ಟ್ರಂಪ್ ವಿರುದ್ಧ ಕ್ರಮ ಕೈಗೊಂಡಿದ್ದರೂ, ಟ್ರಂಪ್‍ ಮೇಲ್ಮನವಿಯ ಬಗ್ಗೆ ಸುಪ್ರೀಂಕೋರ್ಟ್ ನೀಡುವ ಆದೇಶವನ್ನು ಪರಿಶೀಲಿಸಿದ ಬಳಿಕ ಅದನ್ನು ಜಾರಿಗೊಳಿಸಲು ತೀರ್ಮಾನಿಸಿದ್ದವು. ಇದೀಗ ಸುಪ್ರೀಂಕೋರ್ಟ್ ಟ್ರಂಪ್ ಪರವಾಗಿ ಆದೇಶ ನೀಡಿರುವುದರಿಂದ ಇಂದು ನಡೆಯಲಿರುವ ಪ್ರಮುಖ ಪ್ರಾಥಮಿಕ ಚುನಾವಣೆಗೂ ಮುನ್ನ ಟ್ರಂಪ್‍ಗೆ ಮಹತ್ವದ ಮುನ್ನಡೆ ದೊರಕಿದಂತಾಗಿದೆ.

Read More

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಿದ್ಧತೆ ಬಿರುಸುಗೊಂಡಿದೆ. ಭಾರತೀಯ ಸಂಜಾತೆ, ರಿಪಬ್ಲಿಕನ್‌ ಪಕ್ಷದ ನಾಯಕಿ ನಿಕ್ಕಿ ಹ್ಯಾಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ವಾಷಿಂಗ್ಟನ್‌ ಡಿಸಿಯಲ್ಲಿ ಜಯ ಗಳಿಸಿದ್ದಾರೆ. ಹ್ಯಾಲೆಗೆ 1274 ಮತಗಳು ದೊರೆತರೆ, ಟ್ರಂಪ್‌ಗೆ ಕೇವಲ 676 ಮತ ದೊರೆತಿದೆ. ಭಾನುವಾರ ರಾತ್ರಿ ಹ್ಯಾಲಿಯನ್ನು ವಿಜೇತ ಎಂದು ಘೋಷಿಸಿದ ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಈ ವಿಜಯವು GOP ಮತದಾನ ಸ್ಪರ್ಧೆಗಳಲ್ಲಿ ಟ್ರಂಪ್ ಅವರ ಸತತ ಗೆಲುವುಗಳನ್ನು ಕ್ಷಣಮಾತ್ರದಲ್ಲಿ ನಿಲ್ಲಿಸಿದೆ. ಇದು ಹ್ಯಾಲೆ ಅವರ  2024 ರ ಅಭಿಯಾನದ ಮೊದಲ ವಿಜಯವಾಗಿದೆ.

Read More

ಮಾರಿಷಸ್​ನಲ್ಲಿ ಶಿವರಾತ್ರಿಗೂ ಮುನ್ನ ನಡೆದ ಪೂಜೆಯ ವೇಳೆ ಅಗ್ನಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ದೇವರ ವಿಗ್ರಹವು ವಿದ್ಯುತ್ ತಂತಿಗೆ ಸ್ಪರ್ಶಿಸಿದಾಗ ಬೆಂಕಿ ಕಾಣಿಸಿಕೊಂಡಿತ್ತು. ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಆಫ್ರಿಕಾದ ಮಾರಿಷಸ್‌ನ ಹಿಂದೂ ಸಮುದಾಯವು ಪವಿತ್ರವೆಂದು ಪರಿಗಣಿಸುವ ಮಾರ್ಚ್ 8 ರಂದು ಶಿವರಾತ್ರಿ ಹಬ್ಬಕ್ಕೆ ಮುಂಚಿತವಾಗಿ ಯಾತ್ರಿಕರು ಗ್ರ್ಯಾಂಡ್ ಬೇಸಿನ್ ಸರೋವರಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದರು. ಮಹಾಶಿವರಾತ್ರಿಯನ್ನು ಫಾಲ್ಗುಣ ಮಾಸದಲ್ಲಿ ಆಚರಿಸಲಾಗುತ್ತದೆ. ಈ ವರ್ಷ, ಮಹಾಶಿವರಾತ್ರಿ ಶುಕ್ರವಾರ, ಮಾರ್ಚ್ 8 ರಂದು ಬರುತ್ತದೆ. ಈ ವರ್ಷ ಮಹಾಶಿವರಾತ್ರಿಯಂದು ಅನೇಕ ಮಂಗಳಕರ ಯೋಗಗಳು (ಶ್ಯೋದಗ್) ಸಂಭವಿಸಲಿವೆ. ಶ್ರಾವಣ ನಕ್ಷತ್ರದಲ್ಲಿ ಮಹಾಶಿವರಾತ್ರಿ ಬರುತ್ತಿದ್ದು, ಈ ದಿನ ಸರ್ವಾರ್ಥ ಸಿದ್ಧಿ ಯೋಗ, ಶಿವಯೋಗ, ಸಿದ್ಧಯೋಗವೂ ಸಿದ್ಧವಾಗುತ್ತಿದೆ. ಈ ಮಂಗಳಕರ ಸಂಯೋಜನೆಗಳು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಉತ್ತಮ ಪರಿಣಾಮ ಬೀರಲಿದೆ.

Read More

ಸರ್ಕಾರ ಸಂಸ್ಥೆಗಳಲ್ಲಿ ನಮ್ಮ ದೂರು ಕೇಳೋರೆ ಇಲ್ಲ. ಯಾವುದೇ ಕಂಪ್ಲೇಟ್ ನೀಡಿದ್ರು ಸರಿಯಾದ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳೋದಿಲ್ಲ ಎಂಬ ನೋವು ನಿಮ್ಮಲಿದೆಯಾ? ಹಾಗಾದ್ರೆ ಇನ್ಮುಂದೆ ನೀವು ನೇರವಾಗಿ ಪ್ರಧಾನಿ ಮೋದಿಗೆ ಕಂಪ್ಲೇಟ್ ಮಾಡಬಹುದು. ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ನಿಮ್ಮ ದೂರನ್ನು ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸಬಹುದು. ನೀವು ಪ್ರಧಾನಿ ಕಚೇರಿಗೆ ದೂರು ನೀಡಿದರೆ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಪ್ರಧಾನ ಮಂತ್ರಿಗಳ ಕಚೇರಿಗೆ ದೂರು ಸಲ್ಲಿಸಲು ವೆಬ್‌ಸೈಟ್ ಅನ್ನು ಒದಗಿಸಲಾಗಿದೆ. https://www.pmindia.gov.in/hi. ಈ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ದೂರನ್ನು ನೀವು ನೋಂದಾಯಿಸಬಹುದು, ಇದಕ್ಕಾಗಿ ನೀವು ಪ್ರಧಾನ ಮಂತ್ರಿಯೊಂದಿಗೆ ಸಂವಹನ ನಡೆಸಲು ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಬಳಿಕ ನೀವು ಪ್ರಧಾನಿಗೆ ಬರೆಯುವ ಆಯ್ಕೆಯನ್ನು ಪಡೆಯುತ್ತೀರಿ. ನಂತರ, CPGRAMS ಪುಟವು ನಿಮ್ಮ ಮುಂದೆ ತೆರೆಯುತ್ತದೆ, ಅಲ್ಲಿ ದೂರು ದಾಖಲಾಗುತ್ತದೆ ಮತ್ತು ದೂರು ಸಲ್ಲಿಸಿದ ನಂತರ, ನೋಂದಣಿ ಸಂಖ್ಯೆಯನ್ನು ರಚಿಸಲಾಗುತ್ತದೆ. ದೂರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಅವಕಾಶವಿದೆ. ಇದರಲ್ಲಿ ನಿಮ್ಮ ವೈಯಕ್ತಿಕ…

Read More

ತೆಲುಗು ಚಿತ್ರರಂಗದ ಸ್ಟಾರ್ ನಟಿ ತಮನ್ನಾ ಭಾಟಿಯಾ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 19 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ನಟಿಗೆ ಸಾಕಷ್ಟು ಮಂದಿ ಶುಭ ಹಾರೈಸಿದ್ದಾರೆ. ಈ ಶುಭ ಹಾರೈಕೆಗೆ ಪ್ರತಿಕ್ರಿಯಿಸಿರುವ ತಮನ್ನಾ ಇದಿನ್ನೂ ಆರಂಭ ನನ್ನ ಕ್ಯೂಟೀಸ್​’ ಎಂದು ಬರೆದುಕೊಂಡಿದ್ದಾರೆ. 2005ರಲ್ಲಿ ‘ಚಾಂದ್​ ಸ ರೋಷನ್​ ಚೆಹ್ರಾ’ ಚಿತ್ರದ ಮೂಲಕ ತಮನ್ನಾ ಭಾಟಿಯಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಬಳಿಕ ಅವರಿಗೆ ತೆಲುಗು ಮತ್ತು ತಮಿಳಿನಿಂದ ಆಫರ್​ಗಳು ಬರಲು ಆರಂಭಿಸಿದವು. ಟಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ತಮನ್ನಾ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2023ರಲ್ಲಿ ತಮನ್ನಾ ಭಾಟಿಯಾ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ‘ಜೈಲರ್​’ ಸಿನಿಮಾದಲ್ಲಿ ಅಭಿನಯಿಸಿದರು. ಆ ಸಿನಿಮಾದಲ್ಲಿ ತಮನ್ನಾ ಡ್ಯಾನ್ಸ್​ ಮಾಡಿದ ‘ಕಾವಾಲಾ..’ ಸಾಂಗ್​ ಸಖತ್​ ಟ್ರೆಂಡ್​ ಸೃಷ್ಟಿ ಮಾಡಿತು. ಸದ್ಯ ತಮನ್ನಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದು ಚಿತ್ರರಂಗದಲ್ಲಿ ನಟಿ ಸಖತ್ ಬ್ಯುಸಿಯಾಗಿದ್ದಾರೆ. 34 ವರ್ಷದ…

Read More

ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ಬಗ್ಗೆ ವಿಜಯ್ ಅಧಿಕೃತ ಹೇಳಿಕೆ ನೀಡಿದ್ದು ಸಿನಿಮಾಗಳಿಂದ ದೂರವಿರಲು ನಿರ್ಧರಿಸಿದ್ದಾರೆ. ತಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯ ಅಖಾಡಕ್ಕೆ ಇಳಿಯಲಿರುವ ವಿಜಯ್ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿ ಕೊಡ್ತಿದ್ದಾರೆ. ಸದ್ಯ ವಿಜಯ್ ನಟನೆಯ ಕೊನೆಯ ಚಿತ್ರಕ್ಕೆ ಸಮಂತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ‘ಲಿಯೋ’ ಚಿತ್ರದ ಬಳಿಕ ವಿಜಯ್ 68ನೇ ಚಿತ್ರಕ್ಕೆ ವೆಂಕಟ್ ಪ್ರಭು ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ನಲ್ಲಿ ವಿಜಯ್ ಬ್ಯುಸಿಯಾಗಿದ್ದು ಇದೀಗ ವಿಜಯ್ ನಟನೆಯ ಕೊನೆಯ ಚಿತ್ರದ ಬಗ್ಗೆ ಚರ್ಚೆ ಆಗುತ್ತಿದೆ. 69ನೇ ಸಿನಿಮಾ ವಿಜಯ್ ನಟಿಸಲಿರುವ ಕೊನೆಯ ಪ್ರಾಜೆಕ್ಟ್ ಎನ್ನಲಾಗುತ್ತಿದೆ.  ವಿಜಯ್ ಕೊನೆಯ ಸಿನಿಮಾವನ್ನು ಅಟ್ಲೀ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಇಬ್ಬರ ಕಾಂಬಿನೇಷನ್ ನಲ್ಲಿ ಮೆರ್ಸಲ್, ಬಿಗಿಲ್, ಹಾಗೂ ತೇರಿ, ಚಿತ್ರಗಳು ಮೂಡಿ ಬಂದಿತ್ತು. ಈಗ ಮತ್ತೆ ಈ ಜೋಡಿ ಒಂದಾಗಲು ನಿರ್ಧರಿಸಿದೆ. ವಿಜಯ್ 69ನೇ ಚಿತ್ರಕ್ಕೆ ಸಮಂತಾ ನಾಯಕಿಯಾಗಿ…

Read More

ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಯಾಗಬೇಕೆಂದು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಒತ್ತಾಯಿಸಿದ್ದಾರೆ. ಸುಮಾರು ಒಂದು ವಾರದಲ್ಲಿ ಪ್ರಾರಂಭವಾಗುವ ಮುಸ್ಲಿಂ ಉಪವಾಸ ತಿಂಗಳಾದ ರಂಜಾನ್ಗೆ ಮುಂಚಿತವಾಗಿ ಕದನ ವಿರಾಮವನ್ನು ಘೋಷಿಸಲು ಅಮೇರಿಕಾ ಅಧ್ಯಕ್ಷ ಒತ್ತಡ ಹೇರಿದ ನಂತರ ಹ್ಯಾರಿಸ್ ಕೂಡ ಕದರ ವಿರಾಮ ಜಾರಿಯಾಗಬೇಕೆಂದು ಆಗ್ರಹಿಸಿದ್ದಾರೆ. ಫೆಲೆಸ್ತೀನ್ ಭೂಪ್ರದೇಶದಲ್ಲಿ ಭಾರಿ ಹೋರಾಟ ನಡೆಯುತ್ತಿರುವ ಕಾರಣ ಪ್ರಮುಖ ಮಿತ್ರ ಇಸ್ರೇಲ್ ಮೇಲೆ ಕಮಲಾ ಹ್ಯಾರಿಸ್ ಒತ್ತಡವನ್ನು ಹೆಚ್ಚಿಸಿದ್ದಾರೆ. ಐದು ತಿಂಗಳ ಯುದ್ಧವನ್ನು ಸ್ಥಗಿತಗೊಳಿಸುವ ಪ್ರಸ್ತಾಪದ ಬಗ್ಗೆ ಇತ್ತೀಚಿನ ಸುತ್ತಿನ ಮಾತುಕತೆಗಾಗಿ ಯುನೈಟೆಡ್ ಸ್ಟೇಟ್ಸ್, ಕತಾರ್ ಮತ್ತು ಹಮಾಸ್ ರಾಯಭಾರಿಗಳು ಕೈರೋದಲ್ಲಿದ್ದರು. ಅಮೆರಿಕದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಇಸ್ರೇಲ್ ಈ ಷರತ್ತುಗಳನ್ನು ವ್ಯಾಪಕವಾಗಿ ಒಪ್ಪಿಕೊಂಡಿದೆ, ಇದು ಸಹಾಯ ವಿತರಣೆಯನ್ನು ಹೆಚ್ಚಿಸುತ್ತದೆ ಮತ್ತು ಪ್ಯಾಲೆಸ್ಟೈನ್ ಕೈದಿಗಳಿಗೆ ಒತ್ತೆಯಾಳುಗಳ ವಿನಿಮಯವನ್ನು ನೋಡುತ್ತದೆ. ಹಾನಿಗೊಳಗಾದ ಪ್ರದೇಶದಿಂದ ಇಸ್ರೇಲಿ ಪಡೆಗಳು ಸಂಪೂರ್ಣವಾಗಿ ಹಿಂದೆ ಸರಿಯಬೇಕು ಎಂದು ಹಮಾಸ್ ಒತ್ತಾಯಿಸುವುದು ಸೇರಿದಂತೆ ಹಲವಾರು ಅಂಶಗಳು ಉಳಿದಿವೆ ಎಂದು ವರದಿಯಾಗಿದೆ.

Read More