Author: Author AIN

ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್ ನ ಹೊಸ ಮುಖ್ಯಸ್ಥರಾಗಿ ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಪವನ್ ದಾವುಲುರಿ ಅವರನ್ನು ನೇಮಿಸಲಾಗಿದೆ. ಈ ಹಿಂದೆ ಪನೋಸ್ ಪನಯ್ ಇದ್ದ ಜಾಗಕ್ಕೆ ಇದೀಗ ಪವನ್ ದಾವುಲುರಿ ಅವರನ್ನು ನೇಮಿಸಲಾಗಿದೆ. “ಕಂಪನಿಯಲ್ಲಿ 19 ವರ್ಷಗಳ ನಂತರ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ” ಎಂದು ಪನಾಯ್ ಅವರು ಟ್ವೀಟ್‌ನಲ್ಲಿ ಮೈಕ್ರೋಸಾಫ್ಟ್‌ನಿಂದ ನಿರ್ಗಮಿಸುವುದನ್ನು ದೃಢಪಡಿಸಿದರು. ಅಲೆಕ್ಸಾ ಮತ್ತು ಎಕೋ ಉತ್ಪನ್ನಗಳಿಗೆ ಜವಾಬ್ದಾರರಾಗಿರುವ ಘಟಕವನ್ನು ನಡೆಸಲು Amazon.com ನಿಂದ ಪನಾಯ್ ಅವರನ್ನು ನೇಮಿಸಿಕೊಳ್ಳುತ್ತಿದೆ ಎಂದು ಹೇಳಿತ್ತು. ಇದೀಗ ಪನಯ್ ಜಾಗಕ್ಕೆ ಪವನ್ ಎಂಟ್ರಿಕೊಟ್ಟಿದ್ದಾರೆ. ಈ ಹಿಂದೆ, ದಾವುಲುರಿ ಸರ್ಫೇಸ್ ಸಿಲಿಕಾನ್ ಕೆಲಸವನ್ನು ಮೇಲ್ವಿಚಾರಣೆ ಮಾಡಿದರೆ, ಮಿಖಾಯಿಲ್ ಪರಖಿನ್ ವಿಂಡೋಸ್ ವಿಭಾಗವನ್ನು ಮುನ್ನಡೆಸಿದರು. ಆದಾಗ್ಯೂ, “ಹೊಸ ಪಾತ್ರಗಳನ್ನು” ಅನ್ವೇಷಿಸುವ ಪರಖಿನ್ ಅವರ ಬಯಕೆಯೊಂದಿಗೆ, ಪವನ್ ದಾವುಲುರಿ ವಿಂಡೋಸ್ ಮತ್ತು ಸರ್ಫೇಸ್ ಎರಡರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಮೈಕ್ರೋಸಾಫ್ಟ್ ಅನುಭವ ಮತ್ತು ಸಾಧನಗಳ ಮುಖ್ಯಸ್ಥ ರಾಜೇಶ್ ಝಾ ಅವರ ಆಂತರಿಕ ಪತ್ರದಲ್ಲಿ, ಪರಖಿನ್ ಅವರ ನಿರ್ಗಮನವನ್ನು ಘೋಷಿಸಿದ್ದು…

Read More

ಬಾಲಿವುಡ್ ನಟಿ ತಾಪ್ಸಿ ಪನ್ನು ಇತ್ತೀಚೆಗೆ ಮದುವೆಯ ವಿಚಾರವಾಗಿ ಸಖತ್ ಸುದ್ದಿಯಾಗಿದ್ದಾರೆ. ತಾಪ್ಸಿ  ಬ್ಯಾಡ್ಮಿಂಟನ್​ ಆಟಗಾರ ಮಥಾಯಸ್​ ಬೋ ಜೊತೆ ವಿವಾಹ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಉದಯಪುರದಲ್ಲಿ ತಾಪ್ಸಿ ಮದುವೆ ಗುಟ್ಟಾಗಿ ನೆರವೇರಿದೆ ಎಂದು ಹೇಳಲಾಗುತ್ತಿದೆ.  ತಾಪ್ಸಿ ಪನ್ನು ಆಪ್ತರು ಹಂಚಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮೂಲಕ ತಾಪ್ಸಿ ಪನ್ನು ಮದುವೆ ವಿಚಾರ ರಿವೀಲ್ ಆಗಿದೆ. ತಾಪ್ಸಿ ಪನ್ನು ಅವರ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಎವಾನಿಯಾ ಪನ್ನು ಇನ್​ಸ್ಟಾಗ್ರಾಮ್​ನಲ್ಲಿ ತಾಪ್ಸಿಗೆ ಮೇಕಪ್ ಮಾಡಿದ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಅವರು ಹಂಚಿಕೊಂಡ ಫೋಟೋ ಎಲ್ಲರ ಕಣ್ಣು ಕುಕ್ಕಿತ್ತು. ಸ್ಟೇಟಸ್​ನಲ್ಲಿ ಅವರು ಬ್ಯಾಕ್ ಟು ಬ್ಯಾಕ್ ಮದುವೆ ಸಂಭ್ರಮದ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಎಲ್ಲರ ಜೊತೆಗೂಡಿ ಪೋಸ್​ ಕೊಟ್ಟ ಫೋಟೋ ವೈರಲ್ ಆಗಿದೆ. ಇದು ತಾಪ್ಸಿ ಪನ್ನು ಮದುವೆಯಲ್ಲಿ ಕ್ಲಿಕ್ಕಿಸಿದ ಫೋಟೋ ಎಂದು ಅನೇಕರು ಊಹಿಸಿದ್ದಾರೆ. ಈ ಮೊದಲು ಮದುವೆ ವಿಚಾರದ ಬಗ್ಗೆ ತಾಪ್ಸಿ ಪನ್ನು…

Read More

ಭಾರತೀಯ ಚಿತ್ರರಂಗದ ಅತ್ಯುತ್ತಮ ನಟ ಪ್ರಕಾಶ್ ರಾಜ್ ಇಂದು ಹುಟ್ಟುಹಬ್ಬದ ಲಡಾಕ್ ನಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಮ್ಮ ಅದ್ಬುತ ನಟನೆಯ ಜೊತೆಗೆ ಪ್ರಕಾಶ್​ ರಾಜ್​ ವಿವಾದಗಳಿಂದಲೂ ಭಾರೀ ಸದ್ದು ಮಾಡುತ್ತಿರುತ್ತಾರೆ. ತಮಗೆ ತಮ್ಮ ಅನಿಸಿದ್ದನ್ನು ನೇರಾ ನೇರವಾಗಿ ಹೇಳುವ ಮೂಲಕ ಪ್ರಕಾಶ್ ರಾಜ್ ಸಾಕಷ್ಟು ಭಾರಿ ವಿವಾದಕ್ಕೆ ಈಡಾಗಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಪ್ರಕಾಶ್​ ರಾಜ್​, ಹಣಕ್ಕಾಗಿಯೇ ಕೆಲವು ಸ್ಟುಪಿಡ್ ಸಿನಿಮಾ ಮಾಡಿದ್ದಾಗಿ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಫಿಲ್ಮ್ ಕಂಪಾನಿಯನ್ ಸೌತ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಕಾಶ್ ರಾಜ್​, ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನೂ ಕೂಡ ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ಸಿನಿಮಾ ಮಾಡಿದ್ರೆ ನನಗೆ ಹೆಚ್ಚು ಸಿಗುತ್ತೆ ಅಂತ ಯಾವಾಗಲಾದ್ರೂ ಯೋಚನೆ ಮಾಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್​ ರಾಜ್​, ನಾನು ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನು ಮಾಡಿದ್ದೂ ಇದೆ. ನನಗೆ ಬ್ಯಾಲೆನ್ಸ್ ಮಾಡುವ ಅಗತ್ಯವಿಲ್ಲ. ಕಮರ್ಷಿಯಲ್ ಚಿತ್ರಗಳನ್ನು ನಾನು ಹೇಟ್ ಮಾಡೋದಿಲ್ಲ. ಅವುಗಳಿಗೂ ದೊಡ್ಡ ಪ್ರೇಕ್ಷಕ…

Read More

ಇಂದು ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಹುಟ್ಟುಹಬ್ಬ. ಈ ವರ್ಷದ ಬರ್ತಡೇಯನ್ನು ಪ್ರಕಾಶ್ ರಾಜ್ ಲಡಾಕ್ ನಲ್ಲಿ ಆಚರಿಸಿಕೊಂಡಿದ್ದಾರೆ. ಅಲ್ಲದೆ ಜನ್ಮದಿನದಂದು ಒಂದೊಳ್ಳೆಯ ಕೆಲಸವನ್ನು ಮಾಡಿದ್ದಾರೆ. ವಾಂಗ್​ಚುಕ್ ಚಳವಳಿಯನ್ನು ಪ್ರಕಾಶ್ ರಾಝ್ ಬೆಂಬಲಿಸಿದ್ದಾರೆ. ಸ್ವತಃ ಚಳವಳಿ ನಡೆಯವ ಸ್ಥಳಕ್ಕೆ ತೆರಳಿರುವ ಪ್ರಕಾಶ್ ರಾಜ್, ‘ಇವರನ್ನು ಬೆಂಬಲಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇನೆ’ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ‘ಇಂದು ನನ್ನ ಬರ್ತ್​ಡೇ. ಹೀಗಾಗಿ ನಾನು ಈ ದಿನವನ್ನು ಲೇಹ್ ಲಡಾಕ್​ನಲ್ಲಿ ಕಳೆಯಲು ನಿರ್ಧರಿಸಿದೆ. ಈ ಜನ ತಮಗಾಗಿ ಹೋರಾಡುತ್ತಿಲ್ಲ. ಇಲ್ಲಿನ ಜನರು ನಮ್ಮ ದೇಶ, ನಮ್ಮ ಪರಿಸರ ಮತ್ತು ನಮ್ಮ ಭವಿಷ್ಯಕ್ಕಾಗಿ ಹೋರಾಡುತ್ತಿದ್ದಾರೆ. ಅವರ ಬೆಂಬಲಕ್ಕೆ ನಿಲ್ಲೋಣ’ ಎಂದು ವಿಡಿಯೋದಲ್ಲಿ ಹೇಳಿದ್ದು ಪ್ರಕಾಶ್ ರಾಜ್ ಶೇರ್ ಮಾಡಿರುವ ವಿಡಿಯೋದಲ್ಲಿ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ಕಂಡು ಬಂದಿದೆ. ‘ಲಡಾಖ್ ಮತ್ತು ಹಿಮಾಲಯವನ್ನು ಉಳಿಸಿ’ ಎಂಬ ವಾಂಗ್‌ಚುಕ್ ಅವರ ಉಪವಾಸ 21 ದಿನಗಳನ್ನು ತಲುಪಿದೆ. ಪ್ರತಿಭಟನೆಗೆ ರಾಜಕೀಯ ನಾಯಕರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ…

Read More

ದೊಡ್ಡ ಸರಕು ಹಡಗು ಡಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಬಾಲ್ಟಿಮೋರ್‌ನ ಅತಿ ಉದ್ದದ ಫ್ರಾನ್ಸಿಸ್ ಸ್ಕಾಟ್ ಸೇತುವೆ ಕುಸಿದು ಬಿದ್ದಿದೆ. ವರದಿಗಳ ಪ್ರಕಾರ, ಸೇತುವೆ ಕುಸಿಯುವ ಮೊದಲು ಬೆಂಕಿ ಹೊತ್ತಿಕೊಂಡಿತು ಮತ್ತು ಹಲವಾರು ವಾಹನಗಳು ಕೆಳಗಿರುವ ನೀರಿನಲ್ಲಿ ಬಿದ್ದವು ಎನ್ನಲಾಗುತ್ತಿದೆ. ಸೇತುವೆ ಕುಸಿದಾಗ ಸುಮಾರು ಏಳು ಮಂದಿ ಕಟ್ಟಡ ಕಾರ್ಮಿಕರು ಮತ್ತು ಮೂರ್ನಾಲ್ಕು ನಾಗರಿಕ ವಾಹನಗಳು ಸೇತುವೆ ಮೇಲೆ ಇದ್ದವು ಎಂದು ಹೇಳಲಾಗಿದೆ. ಘಟನೆಯ ನಂತರ ಸೇತುವೆಯನ್ನು ವಾಹನ ಸಂಚಾರಕ್ಕೆ ಬಂದ್ ಮಾಡಲಾಗಿದೆ. ಸುರಕ್ಷತಾ ಕಾರಣಗಳಿಗಾಗಿ ಅಧಿಕಾರಿಗಳು ಎರಡೂ ದಿಕ್ಕುಗಳಲ್ಲಿ ಲೇನ್‌ಗಳನ್ನು ಮುಚ್ಚಲಾಗಿದೆ. 47 ವರ್ಷಗಳಷ್ಟು ಹಳೆಯದಾದ ಸೇತುವೆ ಇದಾಗಿದೆ. ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸಾವುನೋವುಗಳ ಕುರಿತು ಯಾವುದೇ ಮಾಹಿತಿ ವರದಿಯಾಗಿಲ್ಲ. ಅಪಘಾತಕ್ಕೀಡಾದ ಹಡಗು ಡಾಲಿ ಹೆಸರಿನ ಕಂಟೈನರ್ ಹಡಗಾಗಿದ್ದು, ಬಾಲ್ಟಿಮೋರ್‌ನಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ಹೋಗುತ್ತಿತ್ತು. ರಾತ್ರಿ 1:30ರ ಸುಮಾರಿಗೆ ಹಡಗು ಸೇತುವೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಇದರ ನಂತರ ಹಡಗು ನೀರಿನಲ್ಲಿ ಮುಳುಗಿದ್ದು,…

Read More

ಸಂಗೀತ ಮಾಂತ್ರಿಕ ಇಳಯರಾಜ ಬಯೋಪಿಕ್ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಬಯೋಪಿಕ್ ನ ಫಸ್ಟ್ ಲುಕ್ ರಿಲೀಸ್ ಆಗಿದ್ದು ಇಳಯರಾಜನ ಪಾತ್ರದಲ್ಲಿ ಧನುಷ್ ಕಾಣಿಸಿಕೊಳ್ತಿದ್ದಾರೆ. ಈ ಮಧ್ಯೆ ರಜನಿಕಾಂತ್ ಬಯೋಪಿಕ್ ತೆರೆಗೆ ತರಲು ಮಾತುಕತೆ ನಡೆಸುತ್ತಿದ್ದು ರಜನಿಕಾಂತ್ ಪಾತ್ರದಲ್ಲಿ ತಾನೇ ನಟಿಸುವೆ ಎಂದು ನಟ ಧನುಷ್ ಹೇಳಿಕೊಂಡಿದ್ದಾರೆ. ಧನುಷ್ ಅವರು ರಜನೀಕಾಂತ್ ಅವರ ಅಳಿಯ ಅಷ್ಟೇ ಅಲ್ಲ, ಅಪ್ಪಟ ಅಭಿಮಾನಿಯೂ ಹೌದು. ಇದನ್ನು ಸ್ವತಃ ಧನುಷ್ ಸಾಕಷ್ಟು ಭಾರಿ ಹೇಳಿದ್ದಾರೆ. ತಾನು ಅವರ ಮಗಳನ್ನು ಮದುವೆಯಾಗಿದ್ದರೂ ಕೂಡಾ ನಾನು ಅವರ ಅಭಿಮಾನಿ ಎಂದಿದ್ದಾರೆ. ಏನೇ ಆದರೂ ಸರಿ ನಾನು ಬಯೋಪಿಕ್ ಅಂತ ಮಾಡಿದರೆ ಅದು ಒಂದು ಇಳಯರಾಜ ಅವರದ್ದು, ಇನ್ನೊಂದು ರಜನೀಕಾಂತ್ ಅವರದ್ದು ಎಂದು ಧನುಷ್ ಅವರು ಹಲವಾರು ಸಲ ಹೇಳಿದ್ದಾರೆ. ಇದರಂತೆ ಧನುಷ್ ಅವರು ರಜನಿ ಅವರ ಸಿನಿಮಾ ಮಾಡಿದರೆ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಧನುಷ್ ಅವರು ರಜನೀಕಾಂತ್ ಅವರ ಮಗಳನ್ನು ಮದುವೆಯಾಗಿದ್ದು ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಧನುಷ್ ಹಾಗೂ…

Read More

ದಿಯಾ ಸಿನಿಮಾದ ಮೂಲಕ ಖ್ಯಾತಿ ಘಳಿಸಿದ ನಟ ದೀಕ್ಷಿತ್ ಶೆಟ್ಟಿ ಸದ್ಯ ಮಲಯಾಳಂ ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಜೊತೆ ತೆರೆಹಂಚಿಕೊಂಡ ಬಳಿಕ ಮಾಲಿವುಡ್‌ನಲ್ಲೂ ದೀಕ್ಷಿತ್‌ಗೆ ಬಿಗ್ ಚಾನ್ಸ್ ಸಿಕ್ಕಿದೆ. ಈಗಾಗ್ಲೆ ಸಿನಿಮಾದ ಶೂಟಿಂಗ್‌ಗೆ ಭಾಗಿಯಾಗಿರೋ ದೀಕ್ಷಿತ್ ತಮಗೆ ಸಿಕ್ಕಿರುವ ಅವಕಾಶದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರೇಮಂ, ಚಾರ್ಲಿ, ಬೆಂಗಳೂರು ಡೇಸ್ ಸೇರಿದಂತೆ ಹಲವು ಸಿನಿಮಾಗಳನ್ನು ನೋಡಿದ್ದೇನೆ. ಸರಳ ಕಥೆಯನ್ನು ಎಷ್ಟು ಅದ್ಭುತವಾಗಿ ತೋರಿಸುತ್ತಾರೆ ಎಂದು ಅಚ್ಚರಿಪಟ್ಟಿದೆ. ಇಂದು ನಾನೇ ಮಲಯಾಳಂ ಸಿನಿಮಾಗೆ ಸಾಕ್ಷಿಯಾಗುತ್ತಿದ್ದೇನೆ. ಖಂಡಿತಾ ನಿಮ್ಮೆಲ್ಲರ ಪ್ರೀತಿ ಇಲ್ಲದೇ ಇದ್ದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಬಳಿಕ ಅಧಿಕೃತವಾಗಿ ಮಾಲಿವುಡ್‌ನ ಭಾಗವಾಗಿದ್ದೇನೆ ಎಂದು ಹೇಳಬಹುದು ಎಂದು ದೀಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಹೇಳಿದ್ದಾರೆ, ಚಾನ್ಸ್ ನೀಡಿದ ಮಲಯಾಳಂ ‘ಒಪ್ಪೀಸ್’ ಚಿತ್ರದ ನಿರ್ದೇಶಕನಿಗೆ ದೀಕ್ಷಿತ್ ಶೆಟ್ಟಿ ಧನ್ಯವಾದ ಹೇಳಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಕೇರಳದಲ್ಲಿ ಪ್ಯಾರಾ ಸೈಕಲಾಜಿಕಲ್ ಕಥಾಹಂದರ ಹೊಂದಿರುವ ‘ಒಪ್ಪೀಸ್’ ಸಿನಿಮಾದ ಮುಹೂರ್ತ ಸಮಾರಂಭ…

Read More

ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಪ್ರಮುಖ ನೌಕಾ ಸೌಲಭ್ಯಗಳ ಮೇಲೆ ಕಳೆದ ರಾತ್ರಿ ನಡೆಸಿದ ದಾಳಿಯನ್ನು ವಿಫಲಗೊಳಿಸಿದ ಪಾಕಿಸ್ತಾನದ ಭದ್ರತಾ ಪಡೆಗಳು ನಾಲ್ವರು ಬಂಡುಕೋರರನ್ನು ಕೊಂದಿದ್ದಾರೆ ಎಂದು ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯಲ್ಲಿ ಸಿದ್ದಿಕಿ ಏರ್ ಸ್ಟೇಷನ್‌ಗೆ ಯಾವುದೇ ಹಾನಿ ಉಂಟಾಗಿಲ್ಲ, ಇದನ್ನು ಕಾನೂನುಬಾಹಿರ ಪ್ರತ್ಯೇಕತಾವಾದಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಹೇಳಿಕೊಂಡಿದೆ. ಬ್ಲೇಸ್ ಡಯಾಗ್ನೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವನ್ನು ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಿಂದ ಭಯೋತ್ಪಾದಕ ಗುಂಪು ಎಂದು ಗೊತ್ತುಪಡಿಸಲಾಗಿದೆ. ಬಲೂಚಿಸ್ತಾನದ ಜಿಲ್ಲೆಯ ಟರ್ಬತ್‌ನಲ್ಲಿರುವ ನೌಕಾ ಸೌಲಭ್ಯವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ದಂಗೆಕೋರರನ್ನು ತ್ವರಿತವಾಗಿ ಗುರುತಿಸಿ ಸೇನೆ ಕೊಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪಾಕಿಸ್ತಾನ ಮಿಲಿಟರಿಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಇಲ್ಲ, ಪಾಕಿಸ್ತಾನಿ ಭದ್ರತಾ ಪಡೆಗಳು ಆಗಾಗ್ಗೆ BLA ಮತ್ತು ಇಸ್ಲಾಮಿಕ್ ಉಗ್ರಗಾಮಿಗಳಿಂದ ಗುರಿಯಾಗಿದ್ದರೂ, ಇತ್ತೀಚಿನ ದಾಳಿಯು ಪ್ರಾಂತ್ಯದ ಚೀನಾದ ಅನುದಾನಿತ ಗ್ವಾದರ್ ಬಂದರಿನ ಹೊರಗೆ ಸರ್ಕಾರಿ ಕಟ್ಟಡಕ್ಕೆ ನುಸುಳಲು ಪ್ರಯತ್ನಿಸಿದಾಗ ಭದ್ರತಾ ಪಡೆಗಳು ಎಂಟು ಬಂಡುಕೋರರನ್ನು ಕೊಂದ…

Read More

2021ರಲ್ಲಿ ನಡೆದ ಸಂಸತ್ತಿನ ಕಂಪ್ಯೂಟರ್ ಜಾಲದ ಮೇಲಿನ ದುರುದ್ದೇಶಪೂರಿತ ಸೈಬರ್ ದಾಳಿ ಹಿಂದೆ ಚೀನಾದ ಕೈವಾಡ ಇದೆ ಎಂದು ನ್ಯೂಜಿಲೆಂಡ್ ಆರೋಪಿಸಿದೆ. ನ್ಯೂಜಿಲೆಂಡ್ ಸಂಸದೀಯ ಸಲಹೆಗಾರರ ಕಚೇರಿಯ ಕಂಪ್ಯೂಟರ್ ಜಾಲದ ಮೇಲೆ ಚೀನಾ ಪ್ರಾಯೋಜಿತ ಸೈಬರ್ ದಾಳಿಯನ್ನು ಗುಪ್ತಚರ ದಳ ಪತ್ತೆ ಹಚ್ಚಿದೆ. ಈ ಕುರಿತು ಚೀನಾದ ಸರ್ಕಾರಕ್ಕೆ ನ್ಯೂಜಿಲೆಂಡ್ ದೂರು ನೀಡಿದೆ.  ಆದರೆ ನ್ಯೂಜಿಲೆಂಡ್ ಆರೋಪವನ್ನು ತಳ್ಳಿ ಹಾಕಿರುವ ಚೀನಾ, ಇದು ಆಧಾರರಹಿತ ಆರೋಪ ಎಂದಿದೆ. ಚೀನಾ ಸರ್ಕಾರದ ಪ್ರಾಯೋಜಿತ ಹ್ಯಾಕರ್‌ಗಳು ಸೈಬರ್ ದಾಳಿ ನಡೆಸುತ್ತಿದ್ದಾರೆ ಎಂದು ಬ್ರಿಟನ್ ಹಾಗೂ ಅಮೆರಿಕ ಆರೋಪಿಸಿದೆ. ಆಸ್ಟ್ರೇಲಿಯಾ ಸಹ ಇಂತಹ ದುರುದ್ದೇಶಪೂರಿತ ಚಟುವಟಿಕೆಯನ್ನು ಖಂಡಿಸಿದೆ. ಚೀನಾ ಪ್ರಾಯೋಜಿತ ಕೃತ್ಯವನ್ನು ಒಪ್ಪಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಈ ರೀತಿಯ ದಾಳಿಯನ್ನು ತಡೆಯಲು ಚೀನಾವನ್ನು ಒತ್ತಾಯಿಸುತ್ತಿದ್ದೇವೆ ಎಂದು ನ್ಯೂಜಿಲೆಂಡ್‌ನ ವಿದೇಶಾಂಗ ಸಚಿವ ವಿನ್‌ಸ್ಟನ್ ಪೀಟರ್ಸ್ ಹೇಳಿದ್ದಾರೆ.

Read More

ಬಾಲಿವುಡ್‌ನ ಸ್ಟಾರ್ ಕಪಲ್ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಮಧ್ಯೆ ಎಲ್ಲವು ಸರಿ ಇಲ್ಲ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದೆ. ಎಲ್ಲಿಯೇ ಹೋದರು ಐಶ್ವರ್ಯ ತನ್ನ ಮಗಳೊಂದಿಗೆ ಹೋಗುತ್ತಿದ್ದು ಅಭಿಷೇಕ್ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಈ ಜೋಡಿ ಒಟ್ಟಿಗೆ ಹೋಳಿ ಆಚರಿಸುವ ಮೂಲಕ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ್ದಾರೆ. ಅಭಿಷೇಕ್ ಬಚ್ಚನ್- ಐಶ್ವರ್ಯ ರೈ ಸಂಬಂಧ ಸರಿಯಲ್ಲ. ಇದೇ ಕಾರಣಕ್ಕೆ ಈ ಜೋಡಿ ಕೆಲವು ತಿಂಗಳಿನಿಂದ ಬೇರೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಹೀಗಾಗಿ ಡಿವೋರ್ಸ್ ಆಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಇದೀಗ ಈ ಜೋಡಿ ಒಟ್ಟಿಗೆ ಹೋಳಿ ಆಚರಿಸಿ ಸಂಭ್ರಮಿಸಿದ್ದಾರೆ. ಹೋಳಿ ಹಬ್ಬದ ದಿನ ಅಭಿಷೇಕ್ ದಂಪತಿ ಜೊತೆಯಾಗಿ ಆಚರಿಸಿದ್ದಾರೆ. ಹೋಳಿ ಹಬ್ಬವನ್ನು ಕುಟುಂಬದ ಜೊತೆ ಸಂಭ್ರಮದಿಂದ ಸೆಲೆಬ್ರೇಟ್ ಮಾಡಿದ್ದಾರೆ. ಈ ಮೂಲಕ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿ, ನಮ್ಮ ಸಂಸಾರ ಚೆನ್ನಾಗಿದೆ ಎಂದು ತೋರಿಸಿದ್ದಾರೆ.

Read More